ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ವತಿಯಿಂದ ಬಂಜಾರ ಕೋವಲ್ ರಾಜ್ಯಮಟ್ಟದ ಗಾಯನ ಸ್ಪರ್ಧೆ-01 ಭಾನುವಾರ (10-8-2025) ರಂದು ನಡೆಯಿತು.
ಈ ಸ್ಪರ್ಧೆಯಲ್ಲಿ ಬಂಜಾರ ಗಾಯಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಗಾಯನ ಕೌಶಲ್ಯವನ್ನು ಪ್ರದರ್ಶಿಸಿದರು.
ಕವಿತಾಬಾಯಿ ವೈ ಭದ್ರಾವತಿ, ವಾಲ್ಯನಾಯ್ಕ ಎಲ್ ವಿಜಯನಗರ, ಪ್ರಕಾಶ ಲಕ್ಷ್ಮಣ ವಿಜಯನಗರ, ಹನುಮಂತನಾಯ್ಕ ಸಿ ದಾವಣಗೆರೆ, ಹನುಮಂತನಾಯ್ಕ ಚವ್ಹಾಣ್, ರಮೇಶ್ .ಎಸ್ ಲಮಾಣಿ, ಪ್ರೇಮಾ ಸಂತೋಷ ರಾಠೋಡ್, ಗಣೇಶ್ ಎಲ್ ವಿಜಯನಗರ, ಭಾಗ್ಯ .ಎಸ್. ಶಿವಮೊಗ್ಗ, ಕು. ಟಿ. ದೀಪಾ ವಿಜಯನಗರ, ತಿಮ್ಮನಾಯ್ಕ.ಎಲ್ ವಿಜಯನಗರ, ಶೈಲಜಾ ಕೆ. ವಿ. ಜೈಪುರ
ಈ ಸ್ಪರ್ಧೆ ನಿರಂತರವಾಗಿ 15 ವಾರಗಳವರೆಗೆ ನಡೆಯಲಿದ್ದು, ಬಂಜಾರ ಜನಾಂಗದ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿವಿಧ ಹಾಡುಗಳನ್ನು ಹಾಡಲಾಗುತ್ತದೆ.
ಉತ್ತಮ ಗಾಯಕರನ್ನು ಆಯ್ಕೆ ಮಾಡಿ, ಅವರಿಗೆ ಬಂಜಾರ ಕೋವಲ್ 2026 ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿಯ ಸಂಸ್ಥಾಪಕ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.