ನಾಟಕಕಾರ ಗೊರೂರು ಅನಂತರಾಜು ಅವರಿಗೆ ಬೆಂಗಳೂರು ಗೆಜ್ಜೆ ಹೆಜ್ಜೆ ರಂಗತಂಡದಿಂದ ರಂಗ ಪುರಸ್ಕಾರ

ಬೆಂಗಳೂರಿನ ಚಲನಚಿತ್ರ ಹಾಸ್ಯನಟರು ಮೈಸೂರು ರಮಾನಂದ್ ಸಾರಥ್ಯದ ಹೆಜ್ಜೆ ಗೆಜ್ಜೆ ರಂಗ ತಂಡದ 50ನೇ ವರ್ಷದ ಪಾದಾರ್ಪಣೆಯ ಸಂಭ್ರಮ ನಡೆಯಿತು.

ಹಾಗೂ, ಆಶಾನಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ನಾಟಕ ಕೃತಿ ಲೋಕಾರ್ಪಣಿ, ರಂಗ ಸಂಗೀತ, ನಾಟಕ ಪ್ರದರ್ಶನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ಹಾಸನದ ಸಾಹಿತಿಗಳು, ನಾಟಕಕಾರರು ಶ್ರೀ ಗೊರೂರು ಅನಂತರಾಜುರವರ ಕಲಾ ಸೇವೆ ಸಾಂಸ್ಕೃತಿಕ ಸಂಘಟನೆ, ನಾಟಕ, ಸಾಹಿತ್ಯ ಸೇವೆ ಗುರುತಿಸಿ ರಂಗ ಪುರಸ್ಕಾರವನ್ನು ಹೆಜ್ಜೆ ಗೆಜ್ಜೆ ತಂಡದ ಸಂಸ್ಥಾಪಕ ಅಧ್ಯಕ್ಷರು ಮತ್ತು ಚಲನಚಿತ್ರ ನಟರು ಶ್ರೀ ಮೈಸೂರು ರಮಾನಂದ್ ಅವರು ನೀಡಿ ಸನ್ಮಾನಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ರಂಗಭೂಮಿ ನಟರು, ಗಾಯಕರು, ನೃತ್ಯ ಚಿತ್ರ ಕಲಾವಿದರು ಪ್ರತಿಭ್ವಾನಿತ ಕಲಾವಿದರನ್ನು ಸಂದರ್ಶಿಸಿ ಪತ್ರಿಕೆಗಳ ಮೂಲಕ ಜನತೆಗೆ ಪರಿಚಯಿಸುವ ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಲೇಖಕರು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಗೌರವ ಅಧ್ಯಕ್ಷರು ಶ್ರೀ ಗೊರೂರು ಅನಂತರಾಜು.

ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಸಮಾಜಕ್ಕೆ ಇನ್ನೂ ಹೆಚ್ಚಿನದಾಗಿ ದೊರೆಯಲೆಂದು ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಶ್ರೀ ಮಧು ನಾಯ್ಕ್ ಲಂಬಾಣಿಯವರು ಅಭಿನಂದಿಸಿದ್ದಾರೆ.

ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಜಿನಿಯರ್ ದಿನಾಚರಣೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದೇ ದಿನಾಚರಣೆಯ ಮೂಲ ಉದ್ದೇಶ… ನೇತ್ರಾಜ ಗುರುವಿನ ಮಠ.

ಗಂಗಾವತಿ: ಭಾರತ ರತ್ನ ಸಿವಿಲ್ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಸಪ್ಟೆಂಬರ್ 15ರಂದು ಆಚರಿಸಲಾಗುತ್ತಿದೆ.

ಇದರ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಸಂಶೋಧನೆ ಬೆಳೆಸುವುದು ಎಂದು ಮಹಾನ್ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ನೇತ್ರಾಜ ಗುರುವಿನ ಮಠ ಹೇಳಿದರು.

ಅವರು ಶಾಲೆಯಲ್ಲಿ ಇಂಜಿನಿಯರ್ಸ್ ಡೇ ಆಚರಣೆ ಪ್ರಯುಕ್ತ ಸರ್ ಎಂ ವಿಶ್ವೇಶ್ವರಯ್ಯ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡುತ್ತಾ ಭಾರತವು ವೈಜ್ಞಾನಿಕ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಡುವುದರ ಮೂಲಕ ಸಾಧನೆಯ ಹಾದಿಯಲ್ಲಿದೆ ಎಂಬುದಕ್ಕೆ ಇತ್ತೀಚಿನ ಉಡಾವಣೆಗಳು ಸಾಕ್ಷಿಯಾಗಿದೆ.

ಭೂಗೋಳ, ಖಗೋಳ, ಸೂರ್ಯ-ಚಂದ್ರ, ಹಗಲು-ರಾತ್ರಿ, ಗ್ರಹಣ ಮತ್ತಿತರ ವಿಷಯಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ನೇತ್ರಾಜ ಗುರುವಿನ ಮಠ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಗೊತ್ತಿದ್ದ ವಿಷಯದಿಂದ ಗೊತ್ತಿಲ್ಲದ ವಿಷಯಗಳ ಕಡೆಗೆ ಸಾಗುವುದೇ ದಿನಾಚರಣೆಯ ಮೂಲ ಉದ್ದೇಶ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ ವಿಶ್ವದ ವಿಸ್ಮಯಗಳನ್ನು ಗುರುಗಳ ಮಾರ್ಗದರ್ಶನದಲ್ಲಿ ಕಳಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮಾದರಿಯ ವಸ್ತು ಪ್ರದರ್ಶನವನ್ನು ಪ್ರದರ್ಶಿಸಿದರು.. ಶಾಲಾ ಶಿಕ್ಷಕರಾದ ಚಂಪಾರಾಣಿ ಕು ಮುದಿನಿ ಸಹನಾ, ಪೂರ್ಣಿಮಾ, ಗೌಶಿಯ ಶಿಕ್ಷಕರು ಸೇರಿದಂತೆ ಪಾಲಕರುಗಳಾದ ಸುನಿಲ್ ವೈದ್ಯ, ವೆಂಕಟೇಶ, ಲತಾ, ಅಪಾರ ಪಾಲಕರು ಪಾಲ್ಗೊಂಡಿದ್ದರು.

ಜಂಗಮರ ಕಲ್ಗುಡಿ ಹಾಗೂ ಮರಳಿ ಗ್ರಾಮಗಳಲ್ಲಿ ಯಶಸ್ವಿಯಾಗಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಪೂರ್ವಭಾವಿ ಸಭೆ

ಗಂಗಾವತಿ: ಶನಿವಾರ ಸಾಯಂಕಾಲ ಕಲ್ಗುಡಿ ಗ್ರಾಮದ ಬೆಟ್ಟದ ಲಿಂಗೇಶ್ವರ ದೇವಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಮುಖಂಡರಾದ ಪ್ರಸಾದ್ ಅವರು ಮಾತನಾಡಿ ತುಂಗಭದ್ರಾ ನದಿಯ ಋಣದಲ್ಲಿ ನಾವಿದ್ದೇವೆ, ಆ ಪಾದಯಾತ್ರೆಯಲ್ಲಿ ಎಲ್ಲಾ ಯುವಕರು, ರೈತರು ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಮರಳಿ ಗ್ರಾಮದ ಬೊಳೋಡಿ ಬಸವೇಶ್ವರ ಸಮುದಾಯ ಭವನದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಸಭೆಯಲ್ಲಿ ಪಾಲ್ಗೊಂಡ ಮುಖಂಡರಾದ ರಮೇಶ್ ಕುಲಕರ್ಣಿ ತಿಳಿಸಿದರು.

ಉಭಯ ಸಭೆಗಳಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮತಿಯ ಪ್ರಮುಖರಾದ ಶ್ರೀ ಜಗನ್ನಾಥ ಅಲ್ಲಂಪಲ್ಲಿ, ಮಹಮ್ಮದ್ ರಫಿ, ಡಾ|| ಶಿವಕುಮಾರ್ ಮಾಲಿಪಾಟೀಲ್, ಅರ್ಜುನ್, ಶರಣಬಸವರಾಜ ರೆಡ್ಡಿ, ಯಮನೂರಪ್ಪ ನಾಯಕ್, ಧನಂಜಯ ಉಪ್ಪಾರ, ಗಾದಿಲಿಂಗಪ್ಪ, ವೆಂಕೋಬ ಮೇಲಕ್ರಿ, ನಿರುಪಾದೆಪ್ಪ, ಶರಣಪ್ಪ ಡಿ., ವಿರೇಶಪ್ಪ ಲಕೋಟಿ, ಯಮನೂರಪ್ಪ ನಾಯಕ, ಮನ್ಸೂರ್ ಬೆಗ್, ಮೌಲಾಹುಸೇನ್, ದ್ಯಾಮಣ್ಣ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳ ಸಾಧನೆ.

ಗಂಗಾವತಿ: ಸೆಪ್ಟೆಂಬರ್-೧೧ ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಈ ಸ್ಪರ್ಧೆಯಲ್ಲಿ ಗಂಗಾವತಿ ತಾಲೂಕಿನ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನಮಠ ಸಂತಸ ವ್ಯಕ್ತಪಡಿಸಿದರು.

ಕರಾಟೆ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಶಿವರಾಜ್-೩೫ ಕೆ.ಜಿ ವಿಭಾಗದಲ್ಲಿ ಪ್ರಥಮ ಮತ್ತು ಬಾಲಕಿಯರ ಪ್ರೌಢ ವಿಭಾಗದಲ್ಲಿ ಮೀನಾಕ್ಷಿ -೩೬ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಬಾಲಕರ ಪ್ರೌಢ ವಿಭಾಗದಲ್ಲಿ ಮಹೇಶ್-೩೫ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹಿರೇಬೆಣಕಲ್‌ನ ಸ.ಹಿ.ಪ್ರಾ ಶಾಲೆ ಖೋ-ಖೋ ತಂಡ ವಿಭಾಗ ಮಟ್ಟಕ್ಕೆ ಆಯ್ಕೆ.

ಗಂಗಾವತಿ: ಸೆಪ್ಟೆಂಬರ್-೧೧ ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯಿತು.

ಅದರಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಖೋ-ಖೋ ತಂಡವು ಪ್ರಥಮ ಸ್ಥಾನ ಪಡೆಯುವುದರೊಂದಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ವಿಜೇತರಾದ ಈ ತಂಡದ ವಿದ್ಯಾರ್ಥಿಗಳಿಗೆ ಹಿರೇಬೆಣಕಲ್ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾರೈಸಿದರು.

ಸರ್ವ ಸದಸ್ಯರು ಗ್ರಾಮದ ಶಿಕ್ಷಣ ಪ್ರೇಮಿಗಳು, ಕ್ರೀಡಾಭಿಮಾನಿಗಳು ಹಾಗೂ ನಾಗನಕಲ್ ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಅತ್ಯಂತ ಸಡಗರ ಸಂಭ್ರಮದಿದ ಅಭಿನಂದಿಸಿ, ಮುಂದಿನ ಕಲಬುರ್ಗಿ ವಿಭಾಗ ಮಟ್ಟದಲ್ಲೂ ಉತ್ತಮ ಸಾಧನೆ ಮಾಡಲೆಂದು ತಂಡಕ್ಕೆ ಹಾರೈಸಿದರು.

ಗಂಗಾವತಿಯಲ್ಲಿ ಹಾನಗಲ್ಲ ಶಿವಯೋಗಿಗಳ ಜಯಂತ್ಯೋತ್ಸವ ಆಚರಣೆಗೆ ಸಂತಸ: ಶರಣಬಸವ ದೇವರು

ಗಂಗಾವತಿ ನಗರದಲ್ಲಿ ಸೆ.೧೦ ರಿಂದ ೨೦ ರವರೆಗೆ ಹಾನಗಲ್ ಕುಮಾರ ಶಿವಯೋಗಿಗಳ ೧೫೮ನೇ ಜಯಂತ್ಯೋತ್ಸವ ಕಾರ್ಯಕ್ರಮ ಆಯೋಜಿಸಿತು.

ಅದಕ್ಕೆ ನಗರದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆಯ ಸಂಸ್ಥಾಪಕ ಗುರುಗಳಾದ ಶ್ರೀ ಶರಣಬಸವ ದೇವರು ಸಂತಸ ವ್ಯಕ್ತಪಡಿಸಿದರು.

ಹಾನಗಲ್ಲ ಶಿವಯೋಗಿಗಳ ಜಯಂತ್ಯೋತ್ಸವದ ಯಶಸ್ವಿಗೆ ಸರ್ವರೂ ಸನ್ನದ್ಧರಾಗಬೇಕೆಂದು ಕರೆ ನೀಡಿದ್ದಾರೆ.

ಅವರು ಜನರಲ್ಲಿ ದುಶ್ಚಟಗಳನ್ನು ದೂರಗೊಳಿಸಿ, ಅರಿವು ಮೂಡಿಸಲು ನಾಡಿನ ನೂರಾರು ಪೂಜ್ಯರು ಆಗಮಿಸುತ್ತಿರುವುದು ನಮ್ಮ ತಾಲೂಕಿಗೆ ಸಂದ ಭಾಗ್ಯವಾಗಿದೆ.

ಹೀಗಾಗಿ ಈ ಹತ್ತು ದಿನಗಳ ಕಾಲ ನಡೆಯುವ ಪಾದಯಾತ್ರೆ ಮತ್ತಿತರ ಕಾರ್ಯಕ್ರಮಗಳಲ್ಲಿ ಎಲ್ಲರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಶಿವಯೋಗಿ ಮಂದಿರವನ್ನು ಸ್ಥಾಪಿಸಿ ವಿಭೂತಿ ತಯಾರಿಸುವ ಸಂಸ್ಥೆ ಕಟ್ಟಿ ಗೋವುಗಳ ರಕ್ಷಣೆ ಮಾಡುವುದರ ಜೊತೆಗೆ ನಾಡಿನ ಸಮಸ್ತ ಜನರಲ್ಲಿ ಸಂಸ್ಕಾರ, ಆಧ್ಯಾತ್ಮ, ಸಂಗೀತ, ಸಂಸ್ಕೃತ ಪಾಂಡಿತ್ಯವನ್ನು ನೀಡುವ ದೊಡ್ಡ ಸಂಸ್ಥೆಯನ್ನು ಕಟ್ಟಿ ಸಮಾಜ ಪರಿವರ್ತನೆ ರೂವಾರಿಗಳಾಗಿರುವ ಪೂಜ್ಯ ಕುಮಾರ ಮಹಾಶಿವಯೋಗಿಗಳ ಜಯಂತಿ ಕಾರ್ಯಕ್ರಮವನ್ನು ಗಂಗಾವತಿಯಲ್ಲಿ ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.

ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಪೂಜ್ಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶರಣಬಸವ ದೇವರು ತಿಳಿಸಿದರು.

ಸಮಾಜಸೇವಕ ಪಿ. ನವೀನ್ ಕುಮಾರ್ ರವರ ೩೨ನೇ ವರ್ಷದ ಜನ್ಮದಿನ ಅರ್ಥಪೂರ್ಣವಾಗಿ ಆಚರಣೆ

ಪಿ.ನವೀನ್ ಕುಮಾರ್ ಬಳ್ಳಾರಿಯವರು ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಪಂಪಾಸರೋವರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಅವರು ತಮ್ಮ ೩೨ನೇ ಜನ್ಮದಿನವನ್ನು ಗಂಗಾವತಿಯ ಲಯನ್ಸ್ ಚಾರಿಟೇಬಲ್ ಟ್ರಸ್ಟ್ನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿಅನ್ನ ಸಂತರ್ಪಣೆ ಮಾಡಿ ಆಚರಿಸಿಕೊಂಡರು.

ಕೇಕ್ ಕತ್ತರಿಸುವುದರ ಮೂಲಕ ಹಾಗೂ ಪಂಪಾ ಸರೋವರದಲ್ಲಿರುವ ಎಲ್ಲಾ ಆಟೋ ಚಾಲಕರಿಗೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡುವ ಮೂಲಕ ಸರಳತೆಯಿಂದ ಆಚರಿಸಿಕೊಂಡರು.

ಅನ್ನಸಂತರ್ಪಣೆ ಮಾಡಿ ಮಾತನಾಡಿದ ಅವರು ಬುದ್ಧಿಮಾಂದ್ಯ ಶಾಲೆಯಲ್ಲಿ ೩೨ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದು ತುಂಬಾ ಸಂತೋಷವಾಗಿದೆ.

ಪಂಪಾ ಸರೋವರದ ಶ್ರೀ ವಿಜಯಲಕ್ಷ್ಮಿ ಅಮ್ಮನವರ ಆಶೀರ್ವಾದದಿಂದ ಕಿಷ್ಕಿಂದಾ ಭಾಗದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಗೆಳೆಯರ ಬಳಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲು ನಿರ್ದರಿಸಿತು.

ಮುಂದಿನ ದಿನಗಳಲ್ಲಿ ಕಾರ್ಯಯೋಜನೆಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.

ಗೆಳೆಯರ ಬಳಗದ ಪ್ರಮುಖರಾದ ಹನುಮನಹಳ್ಳಿ ಬಾಲು, ರಾಘು ಪಂಪಾಸರೋವರ, ಜವಳಿ ಮಂಜುನಾಥ್, ಚಂದ್ರು, ವೀರೇಶ ಆನೆಗುಂದಿ ಹಾಗೂ ಬಸವನಗೌಡ ಹಿರೇಬೆಣಕಲ್ ಸೇರಿದಂತೆ ನೂರಾರು ಸಂಖ್ಯೆಯ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ ಗೊರೂರು ಅನಂತರಾಜು, ಹಾಸನ.

ಹಾಸನ ತಾಲ್ಲೂಕು ಮುಟ್ಟನಹಳ್ಳಿಯ ಲೇಖಕರಾದ ತ್ಯಾಗರಾಜ್ ಮತ್ತು ತಂಡ ಪ್ರಸಿದ್ಧ ಚಾರಣಕ್ಕೆ ಹೆಸರು ವಾಸಿಯಾದ ಪುಷ್ಪಗಿರಿ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಬಂದ ಸಾಹಸ ಕಥನವನ್ನು ಸ್ವಾರಸ್ಯಕರವಾಗಿ ಮಿನಿ ಕಾದಂಬರಿ ಸ್ವರೂಪದಲ್ಲಿ ಓದಿಸಿಕೊಂಡು ಹೋಗುವಂತೆ ಬಣ್ಣಿಸಿದ್ದಾರೆ.

ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ.

ಇಂತಹ ಚಾರಣದ ಅನುಭವವನ್ನು ಬರಹಕ್ಕಿಳಿಸುವುದು ಒಂದು ಕೌಶಲ್ಯವೆ ಸರಿ. ಆಧುನಿಕತೆ, ಲೋಕಜ್ಞಾನ ಬೆಳೆದಂತೆ ಬರಹವೂ ಕೂಡ ಹೊಸತು ಕಂಡುಕೊಳ್ಳುತ್ತಿದೆ.

ನಾವು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳನ್ನು ಓದುವಾಗ ಮಲೆನಾಡಿನ ಜನಜೀವನ ಹಾಗೂ ಪರಿಸರದಲ್ಲಿ ತೆರೆದುಕೊಂಡಂತೆ ಇಲ್ಲಿಯ ಚಾರಣದಲ್ಲಿ ದಟ್ಟ ಅರಣ್ಯ ಪರಿಸರ ಪಿಕ್ನಿಕ್ ಕಥನದಲ್ಲಿ ರೂಪುಗೊಳ್ಳುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ದೇವಸ್ಥಾನಗಳು, ಪ್ರವಾಸಿ ತಾಣಗಳು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅನುಭವವನ್ನು ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಬರೆಯುತ್ತಿರುತ್ತೇನೆ.

ಆಗುಂಬೆ ಎಸ್.ನಟರಾಜ್‌ರಂತಹ ಲೇಖಕರು ಬರೆದ ತಮ್ಮ ಪ್ರವಾಸಾನುಭವವನ್ನು ಜೊತೆಗೆ ಆ ಸ್ಥಳದ ಐತಿಹಾಸಿಕ ಹಿನ್ನೋಟದ ಜೊತೆಗೆ ಸುಧೀರ್ಘವಾಗಿ ಬರೆದ ಪುಸ್ತಕಗಳನ್ನು ಓದುತ್ತಿದ್ದೇನೆ.

ಯೂ ಟ್ಯೂಬ್‌ನಂತಹ ದೃಶ್ಯ ಮಾಧ್ಯಮಗಳಲ್ಲಿ ಕ್ಯಾಮರ, ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿ ಪ್ರಸಿದ್ಧ ತಾಣಗಳನ್ನು ಕಣ್ಣಮುಂದೆಯೇ ಕಟ್ಟಿಕೊಡುವುದನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇನೆ.

ಈ ದಿಸೆಯಲ್ಲಿ ಚಾರಣ ಹೊರಟ ಲೇಖಕರು ತ್ಯಾಗರಾಜ್ ಮತ್ತು ಆರು ಮಂದಿಯ ತಂಡ ಮಂಜಿನ ದಾರಿಯಲ್ಲಿ ಬೆಟ್ಟ ಹತ್ತಿ ಇಳಿದು ಬಂದ ಚಾರಣದ ಸಾಹಸ ಕಥೆ ಸಹಜ ಬರವಣಿಗೆಯಲ್ಲಿ ನಿರೂಪಿತವಾಗಿದೆ.

ಹಾಗೆಯೇ ತಮ್ಮ ಪ್ರತಿ ಹೆಜ್ಜೆಯನ್ನು ದಾಖಲಿಸುತ್ತಾ ಸಾಗುವ ಚಾರಣದ ಅನುಭವ ಲೇಖಕರ ಬರಹ ಶೈಲಿಯಿಂದ ಓದುಗರಿಗೂ ಬೋರಾಗದೆ ಓದಿಸಿಕೊಂಡು ಹೋಗುತ್ತದೆ.

ಎಲ್ಲೋ ನಾವೇ ಆ ಪಯಣದಲ್ಲಿ ಭಾಗಿಯಾದಂತೆ ಕಣ್ಮುಂದೆ ದೃಶ್ಯ ಗೋಚರಿಸುತ್ತದೆ.

ಕಡೆಯಲ್ಲಿ ಒಂದು ನಿತ್ಯ ಹರಿದ್ವರ್ಣದ ಕಾಡಿನ ಪಯಣವು ಹಚ್ಚ ಹಸಿರಾಗಿ ಮನದಲ್ಲಿ ಉಳಿದುಬಿಡುತ್ತದೆ.

ಲೇಖಕರ ಮೊದಲ ಕಂತಾದ ಈ ಪುಸ್ತಕ ೪೪ ಪುಟಗಳ ವಿಸ್ತಾರದಲ್ಲಿ ಹರಡಿಕೊಂಡಿದೆ ಹಾಗೂ ಚಾರಣದ ಸರಣಿಗಳು ಭಾಗ-೧ ಎಂದೇ ಹೆಸರಿಡಲಾಗಿದೆ.

ಅಲ್ಲದೆ ಇನ್ನು ಮುಂದೆಯೂ ಸಹ ಲೇಖಕರು ಹೊಸ ಹೊಸ ಪ್ರದೇಶಗಳಿಗೆ ಚಾರಣ ಮಾಡಿದ ಅನುಭವ ದಾಖಲಿಸಿ ಕೃತಿ ರೂಪದಲ್ಲಿ ಪ್ರಕಟಿಸುವ ಇಂಗಿತ ಅಭಿವ್ಯಕವಾಗಿದೆ.

ಲೇಖಕರು ಹಲವಾರು ಸಾಹಸ ಚಾರಣಗಳನ್ನು ಮಾಡಿರುವ ಅನುಭವ ದಟ್ಟವಾದಂತಿದೆ. ಈ ಲೇಖನವು ಮುಂದೆ ಈ ಪ್ರದೇಶದಲ್ಲಿ ಚಾರಣ ಮಾಡುವ ಸಾಹಸಿಗರಿಗೆ ಮಾರ್ಗದರ್ಶಿ ಗೈಡ್ ಆಗುವುದು ನಿಶ್ಚಿತ.

ಪ್ರಸ್ತುತ ಈ ಕೃತಿಯ ಪುಷ್ಪಗಿರಿ ಬೆಟ್ಟಕ್ಕೆ ಚಾರಣ ಮಾಡುವವರಿಗೆ ಉಪಯುಕ್ತವಾಗಿದೆ. ಹಾಗೆಯೇ ಒಮ್ಮೆ ಓದಿಸಿಕೊಳ್ಳುವ ಸದಭಿರುಚಿಯ ಕೃತಿಯಾಗಿದೆ.

ಜಿಲ್ಲಾ ಮಟ್ಟದ ಚೆಸ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

ಗಂಗಾವತಿ: ಸೆಪ್ಟೆಂಬರ್-೦೧ ರಂದು ಜಿಲ್ಲಾ ಕ್ರೀಡಾಂಗಣ ಕೊಪ್ಪಳ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆ, ಶೆಟಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಈ ಸ್ಪರ್ಧೆಯಲ್ಲಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಪ್ರಾಥಮಿಕ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಸಮೀಕ್ಷಾ, ಶಿವರಾಜ್ ಮತ್ತು ಬಾಲಕಿಯರ ಪ್ರೌಢ ವಿಭಾಗದಲ್ಲಿ ಸೃಜನಾ ಪ್ರಥಮ ಸ್ಥಾನ ಪಡೆದು, ಮುಂದೆ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅದೇರೀತಿ ನಿವೇದ, ರಾಮ್ ಸೂರ್ಯ, ವೈಭವ್, ಶಿವಕುಮಾರ್, ಧನುಷ್ ಬಾಲಕರ ಪ್ರಾಥಮಿಕ ವಿಭಾಗದ ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ನಾಳೆಗಳು ನಮ್ಮದೆನಿಸಿವೆ ಭರವಸೆಯ.. ತಾಯಿ ಮತ್ತು ಅವಳಿ ಮಕ್ಕಳ ಕಲಾಪರಿಚಯ – ಗೊರೂರು ಅನಂತರಾಜು, ಹಾಸನ.

ನಾಳೆಗಳು ನಮ್ಮದೆನಿಸಿವೆ ಭರವಸೆಯ ನಾಳೆಗಳು ನಮ್ಮದೆನಿಸಿವೆ ಎಂಬ ಒಂದು ಸೊಗಸಾದ ಹಾಡಿಗೆ ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಕಲ್ಲುರೋಡ ಗ್ರಾಮದ ಮಹಾನಂದ ಮಠಪತಿ ಮೇಡಂ ತಮ್ಮ ಕಲೆಗಾರಿಕೆ ಪೋಟೋಗಳನ್ನು ಅಳವಡಿಸಿ ಒಂದು ವಿಡಿಯೋ ಮಾಡಿದೆ.

ಅದನ್ನು ಹೂವಿನಹಡಗಲಿಯ ಕತೆಗಾರ ಮಧುನಾಯ್ಕ್ ಲಂಬಾಣಿ ಗ್ರೂಪ್‌ನಲ್ಲಿ ಹಾಕಿದ್ದರು.

ಅನಂತರಾಜ್ ಸರ್, ಚಿಕ್ಕಮಗಳೂರಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಬರಹಗಾರರ ಸಂಘ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಕಾರದಲ್ಲಿ ಇತ್ತೀಚಿಗೆ ನಡೆಸಿತ್ತಲ್ಲಾ ರಾಜ್ಯಮಟ್ಟದ ಗಾಯನ ಸ್ಫರ್ಧೆ ಇಲ್ಲಿ ಭಾಗವಹಿಸಿದ್ದ ಗಾಯಕಿ ಮಹಾನಂದ ಮಠಪತಿ ಮಗಳು ನೃತ್ಯಗಾರ್ತಿ ಅಭಿಶ್ರೀ ಇವರ ಕಲಾ ಪರಿಚಯ ಮಾಡಿ ಎಂದು ಕೊಂಚವೆ ಮಾಹಿತಿ ಕಳಿಸಿದ್ದರು.

ಅಲ್ಲಿ ತೀರ್ಪುಗಾರನಾಗಿ ಭಾಗವಹಿಸಿದ್ದ ನಾನು, ಮೇಡಂ ರ ಹಾಡನ್ನು ಆಗ ಕೇಳಿದ್ದೆನು, ಆದರೆ ಪರಿಚಯ ಇರಲಿಲ್ಲ. ಮೇಡಂ ನಂಬರ್ ಪಡೆದು ಮಾತನಾಡುತ್ತಾ ಅವರು ತಮ್ಮ ಕಲಾ ಪರಿಚಯ ಹೇಳಿಕೊಂಡರು.

ನಾನು ಶಾಲಾ ದಿನಗಳಲ್ಲಿ ಭರತನಾಟ್ಯ ,ಶ್ಲೋಕ, ವಚನ ಗಾಯನ, ಭಾವಗೀತೆ, ಜಾನಪದ ಗೀತೆ, ಭಕ್ತಿ ಗೀತೆ.. ಹೀಗೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿದ್ದೆನು.

ನಾನು ಹತ್ತನೇ ತರಗತಿ ಮುಗಿಸಿದ ನಂತರ ನನಗೆ ೧೭ ವರ್ಷಕ್ಕೆ ನಮ್ಮ ಸಂಬಂಧಿಕರಲ್ಲಿ ಮದುವೆ ಮಾಡಿಕೊಡಲಾಯಿತು.

ನನಗೆ ಏಳು ವರ್ಷಗಳ ಬಳಿಕ ಎರಡು ಅವಳಿ ಮಕ್ಕಳು ಹುಟ್ಟಿದರು. ಮಕ್ಕಳು ಹುಟ್ಟಿದ ಒಂದು ವರ್ಷಕ್ಕೆ ನನ್ನ ಪತಿಯನ್ನು ಕಳೆದುಕೊಂಡೆನು. ನಂತರ ನಾನು ಮತ್ತೆ ಶಿಕ್ಷಣ ಮುಂದುವರಿಸಿದೆನು.

ಪಿಯುಸಿ, ಬಿಎ ಎಕ್ಸಾಮ್ ಬರೆದೆನು. ಲಾಕ್ಡೌನ್ ಟೈಮ್ ನಲ್ಲಿ ಮನೆಯಲ್ಲೇ ಭರತನಾಟ್ಯ ಹರ‍್ಮೋನಿಯಂ ಎರಡು ಮಕ್ಕಳಿಗೆ ಫೋನಲ್ಲಿ ನೋಡುತ್ತಾ ಕಲಿಸುತ್ತಿದ್ದೆನು. ನಾವು ಗುರುಗಳ ಹತ್ತಿರ ಕಲಿಬೇಕು ಅಂದ್ರೆ ನಮಗೆ ಯಾವುದೇ ರೀತಿ ಅನುಕೂಲ ಇರಲಿಲ್ಲ.

೨೦೧೬ ರಿಂದ ೨೦೨೪ ರವರೆಗೆ ಶಾಲಾ ಸಂಗೀತ ಶಿಕ್ಷಕಿಯಾಗಿ ಸೇವೆ ಮಾಡುತ್ತಿದ್ದೆ. ನನಗೆ ಭರತನಾಟ್ಯ ಮತ್ತು ಸಂಗೀತ ಅಂದರೆ ತುಂಬಾ ಆಸಕ್ತಿ ಇದೆ.

ನನಗೆ ತಿಳಿದಿದ್ದು ಮಕ್ಕಳಿಗೆ ಕಲಿಸುತ್ತಿದ್ದೇನೆ. ಇದಕ್ಕೆ ನನ್ನ ತಂದೆ-ತಾಯಿ, ಅತ್ತೆ ಸ್ನೇಹ ಬಳಗ ಸಹಾಯ ಮಾಡಿ ಪ್ರೋತ್ಸಾಹಿಸಿದ್ದಾರೆ.

ಪ್ರತಿ ತಿಂಗಳು ನಮ್ಮ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಅಂದರೆ ಬಸವಣ್ಣನವರ ಕುರಿತು ಸಾಮಾಜಿಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಚಿಂತನ ಕಾರ್ಯಕ್ರಮ ನಮ್ಮ ಮನೆಯವರು ಇದ್ದಾಗ ಮಾಡುತ್ತಿದ್ದರು.

ಅದನ್ನು ಹಾಗೆ ಬಿಡುವುದು ಬೇಡ ಎಂದು ನಾನು ನನ್ನ ಜನ್ಮ ದಿನದಂದು ಈ ಕಾರ್ಯಕ್ರಮ ಮಾಡಿ ನನ್ನಂತೆಯೇ ಕಲಾಕ್ಷೇತ್ರದ ಸಾಧಕರನ್ನು ಸನ್ಮಾನಿಸಿರುವೆ.

ನಾನು ಮಾಡಿರುವಂತಹ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿತ್ತು ಅಂತ ಹೇಳಿದ್ದಾರೆ ಎಲ್ಲರು. ಊರಿನಲ್ಲಿ ಯಾವುದೇ ಒಂದು ಕರ್ಯಾಕ್ರಮ ಇರಲಿ ಆ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆಯುತ್ತಿದ್ದರು.

ರಾಯಚೂರಿನ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೩ನೇ ಶ್ರೀರಾಯರ ಆರಾಧನೆಯ ಕಾರ್ಯಕ್ರಮ ನಡೆಯುತಿತ್ತು.

ಇದರ ಅಂಗವಾಗಿ ಮಂತ್ರಾಲಯದ ರಾಘವೇಂದ್ರಸ್ವಾಮಿಗಳವರ ಮಠ ಹಾಗೂ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮಠದ ಮುಂಭಾಗ ರಾಜ ಬೀದಿಯಲ್ಲಿ ದೇಶ-ವಿದೇಶದ ೩೫೦ ನೃತ್ಯಗಾರರು ಏಕಕಾಲಕ್ಕೆ ನಾಮ ರಾಮಾಯಣಂ ನೃತ್ಯ ಪ್ರದರ್ಶಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ೨೦೨೪ರಲ್ಲಿ ಆಗಿದೆ.

ಜಪಾನ್, ಜರ್ಮನಿ, ಇಂಡೋನೇಷಿಯಾ ದೇಶ ಸೇರಿದಂತೆ ಭಾರತ ದೇಶದ ಹಲವಾರು ರಾಜ್ಯದಿಂದ ಕಲಾವಿದರು ಆಗಮಿಸಿದ್ದರು.

ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ ಈ ನೃತ್ಯೋತ್ಸವ ಸಂಭ್ರಮ ರಾಯರ ಪಾದದಲ್ಲಿ ಸಮರ್ಪಣೆ ಮಾಡಿತು.

ಅದರಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಮುಖ್ಯಸ್ಥ ಅರವಿಂದಸಿಂಗ್, ಪ್ರಧಾನ ಕಾರ್ಯದರ್ಶಿ ಮತ್ತು ನೃತ್ಯಗಾರ್ತಿ ಸ್ವಾತಿ ಪಿ. ಭಾರದ್ವಾಜ್ ಅವರನ್ನು ಮರೆಯುವಂತಿಲ್ಲ.

ಈ ತಂಡದಲ್ಲಿ ತಾಯಿ ಮಹಾನಂದ ಮಠಪತಿ ಮತ್ತು ಮಗಳು ಅಭಿಶ್ರೀ ಇದ್ದು ಸರ್ಟಿಫಿಕೇಟ್ ಪಡೆದಿದ್ದಾರೆ.

ಇವರ ದೊಡ್ಡ ಮಗಳು ಅನುಶ್ರೀ ಹರ‍್ಮೋನಿಯಂ ಮತ್ತು ಪಿಯಾನ ಕಲಿಯುತ್ತಿದ್ದಾಳೆ. ವಚನ ಗಾಯನ, ಹರ‍್ಮೋನಿಯಂ ಜೊತೆ ಫೋನಲ್ಲಿ ನೋಡಿ ಕಲಿಸುತ್ತಿದ್ದೇನೆ ಎಂದರು.

ನಾನು ಕಲರ್ಸ್ ಕನ್ನಡ ದಲ್ಲಿ ಅಡಿಶನ್ ಕೊಟ್ಟಿದ್ದೇನೆ ಹಾಡು ಕರ್ನಾಟಕ ಹಾಗೆ ಜೀ ಕನ್ನಡದಲ್ಲಿ ಸರಿಗಮಪದಲ್ಲಿ ಭಾಗವಹಿಸಿದ್ದೇನೆ.

೨೦೨೪ರಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಎರಡು ಮಕ್ಕಳ ಜೊತೆ ನಾನು ಕೂಡ ಡಾನ್ಸ್ ಮಾಡಿದ್ದೇನೆ.

ಅದರಲ್ಲಿ ನನ್ನ ಚಿಕ್ಕ ಮಗಳು ಅಭಿಶ್ರೀಗೆ ನೀನು ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀಯಾ ಅಂತ ಹೇಳಿ ಪವರ್ ಸ್ಟಾರ್ ಶೀಲ್ಡು ಕೊಟ್ಟಿದ್ದರು.

೧೧ ವರ್ಷದ ಅಭಿಶ್ರೀ ೨೭ ರಾಜ್ಯಮಟ್ಟದ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಈಕೆ ಕೂಡ ನೃತ್ಯ ಕ್ಷೇತ್ರದ ಚಿಗುರು ಪ್ರತಿಭೆ.

ಶ್ರೀ ವೀರೇಂದ್ರಪಾಟೀಲ್ ಪಬ್ಲಿಕ್ ಸ್ಕೂಲ್ ಚಿಂಚೋಳಿಯಲ್ಲಿ ೫ ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅವಳಿ ಸಹೋದರಿಯರು ಓದಿನಲ್ಲಿ ಮುಂದಿರುವರು.

ನೃತ್ಯ ಪ್ರತಿಭೆ ಅಭಿಶ್ರೀ ಇಲ್ಲಿಯವರೆಗೆ ಪಡೆದ ಪ್ರಶಸ್ತಿಗಳು ಕನ್ನಡದ ಚಿನ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ ಸನ್ಮಾನ, ತಾಲೂಕು ಬಸವ ಕೇಂದ್ರ ಸನ್ಮಾನ, ಡ್ಯಾನ್ಸ್ ಫಾರ್ ಇಂಡಿಯಾ ಬೆಂಗಳೂರು, ಟ್ಯಾಲೆಂನ್ಟ್ ಸ್ಟಾರ್ ಅವಾರ್ಡ್ ಬೀದರ್, ಸ್ವಾಮಿ ವಿವೇಕಾನಂದ ಶಾಲೆಯಿಂದ ಸನ್ಮಾನ, ಶ್ರೀ ಹಾಲಪ್ಪಯ್ಯ ವಿರಕ್ತ ಮಠ ಸೇಡಂ ಸನ್ಮಾನ, ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೀಗೆ ಮಗಳ ಸಾಧನೆ ಹಂಚಿಕೊಂಡರು.

೨೦೨೧ರಲ್ಲಿ ಮಹಾನಂದ ಮಠಮತಿ ಅವರು ಚಿಂಚೊಳ್ಳಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ಇವರು ಪ್ರತಿ ಭಾನುವಾರ ನಡೆಸುತ್ತಿರುವ ವಿವಿಧ ಹಾಡುಗಳ ಸ್ಪರ್ಧೆಯಲ್ಲಿ ನಾನು ಹಾಡುತ್ತಿರುವುದು ನನಗೆ ಇನ್ನಷ್ಟು ಹೊಸ ಹಾಡು ಕಲಿಯುವುದಕ್ಕೆ ಅನುಕೂಲವಾಗಿದೆ.

ನಾನು ಪ್ರತಿ ವಾರ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿ ಚಿಕ್ಕಮಗಳೂರುನಲ್ಲಿ ರಾಜ್ಯಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ಪಡೆದಿದ್ದೇನೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹೀಗೆ ಕಾರ್ಯಕ್ರಮ ಮಾಡುತ್ತಿರುವುದರಿಂದ ಮರೀಚಿಕೆಯಾಗಿ ಉಳಿದುಕೊಂಡಿರುವ ನನ್ನಂತಹ ಕೆಲ ಕಲಾವಿದರು ಹೊರ ತರಲು ಕಾರಣರಾಗಿರುವ ರಾಜ್ಯಧ್ಯಕ್ಷ ಮಧುನಾಯ್ಕ ಲಂಬಾಣಿ ಸರ್ ಗೆ ನನ್ನ ನಮನಗಳು ಎಂದು ಮಾತು ಮುಗಿಸಿದರು.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧