ಗಂಗಾವತಿ: ನಗರದ ಹಿರಿಯ ನ್ಯಾಯವಾದಿ, ವೀರಶೈವ ಸಮಾಜದ ಮುಖಂಡ ಸೋಮನಾಥ ಪಟ್ಟಣಶೆಟ್ಟಿ ಅವರಿಗೆ ಜೀ ಕನ್ನಡ ನ್ಯೂಜ್ ಅವರಿಂದ ವೀರ ಕನ್ನಡಿಗ ಅವಾರ್ಡ್ ಪ್ರದಾನ ಮಾಡಲಾಗಿದೆ. ಕನ್ನಡ ನಾಡು ನುಡಿ ಏಳ್ಗೆಗೆ ಶ್ರಮಿಸುತ್ತಿರುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ರಾಜ್ಯದ ವಿವಿಧ ಜಿಲ್ಲೆಗಳಿಂದ ಗುರುತಿಸಿರುವ ಜೀ ಕನ್ನಡ ನ್ಯೂಜ್ ಅವರು ಪ್ರತಿ ವರ್ಷ ಈ ಅವಾರ್ಡ್ ನೀಡಲಾಗಿದೆ.
ಪ್ರಸಕ್ತ ೨೦೨೫ನೇ ಸಾಲಿನ ಈ ಅವಾರ್ಡ್ ಗೆ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನ್ಯಾಯವಾದಿ ಪಟ್ಟಣಶೆಟ್ಟಿ ಅವರಿಗೆ ನೀಡಲಾಗಿದೆ. ಕಳೆದ ೪೦ ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿರುವ ಸೋಮನಾಥ ಪಟ್ಟಣಶೆಟ್ಟಿ ಅವರು ಗಂಗಾವತಿಯ ಹಿರಿಯ ನ್ಯಾಯವಾದಿಯಾಗಿ, ವಿವಿಧ ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವಕೀಲ ವೃತ್ತಿಯ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ವಕೀಲ ವೃತ್ತಿಗೆ ಮಾದರಿಯಾಗಿದ್ದಾರೆ. ಬಡವರಿಗೆ ಸರಕಾರಿ ಯೋಜನೆಗಳು ನೇರವಾಗಿ ತಲುಪಬೇಕು. ರಸ್ತೆ ಸುಧಾರಣೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಬೇಕೆಂಬ ಕಳಕಳಿ ಹೊಂದಿದ್ದಾರೆ. ಅವರ ಸೇವಾ ಮನೋಭಾವನೆ ಮತ್ತು ಕನ್ನಡದ ಕಳಕಳಿಯನ್ನು ಗುರುತಿಸಿ ಜೀ ನ್ಯೂಜ್ ಅವರು ಈ ಅವಾರ್ಡ್ ನೀಡಿದ್ದಾರೆ.
ಡಿ.೪ ರಂದು ಬೆಂಗಳೂರಿನ ಲಲಿತ್ ಅಶೋಕ ಹೊಟೇಲ್ನಲ್ಲಿ ಸಂಜೆ ೫.೦೦ ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಸಚಿವರಾದ ಹೆಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಸೇರಿದಂತೆ ಬಿಜೆಪಿಯ ಚಲುವಾದಿ ನಾರಾಯಣಸ್ವಾಮಿ ಅವರ ಅಮೃತ ಹಸ್ತದಿಂದ ಈ ಅವಾರ್ಡ್ ನೀಡಿ ಅಭಿನಂದಿಸಲಾಗಿದೆ ಎಂದು ಜೀ ಕನ್ನಡ ನ್ಯೂಜ್ ನ ಸಂಪಾದಕ ರವಿ.ಎಸ್ ಅವರು ತಿಳಿಸಿದರು.
ಹಿರಿಯ ನಟಿಯಾದ ತಾರಾ ಅವರು ಮಾತನಾಡಿ, ಝೀ ಕನ್ನಡ ನ್ಯೂಸ್ ಅವರು ನಾಡಿನ ವಿವಿಧ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ವಿಶೇಷವಾದ ವೀರ ಕನ್ನಡಿಗ ಅವಾರ್ಡ್ ಪಡೆದ ಹಿರಿಯ ನ್ಯಾಯವಾದಿ ಸೋಮನಾಥ ಎಸ್ ಪಟ್ಟಣಶೆಟ್ಟಿ ಅವರಿಗೆ ಗಂಗಾವತಿಯ ಮುಖಂಡರು, ಸಾರ್ವಜನಿಕರು ಶುಭ ಹಾರೈಸಿದ್ದಾರೆ. https://aratt.ai/@vishwaroopa_news_blog
