ಲಿಟಲ್ ಹಾರ್ಟ್ಸ್‌ ಸ್ಕೂಲ್‌ ವಿದ್ಯಾರ್ಥಿ ಚದುರಂಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಗಂಗಾವತಿ ತಾಲೂಕಾ ಮಟ್ಟದ ೧೪ ವರ್ಷದೊಳಗಿನ ಬಾಲಕರ ಚದುರಂಗ ಸ್ಪರ್ಧೆಯನ್ನು ಆಯೋಸಿದೆ.

ಲಿಟಲ್‌ ಹಾರ್ಟ್ಸ್‌ ಸ್ಕೂಲ್ನ ವಿದ್ಯಾರ್ಥಿ ಪ್ರಣವ್‌ ಆಶ್ರೀತ ಪ್ರಥಮ ಸ್ಥಾನ ಗಳಿಸಿದ್ದಾನೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಗೌರವ ತಂದಿದ್ದಾನೆ.

ವಿದ್ಯಾರ್ಥಿಯ ಈ ಸಾಧನೆಯನ್ನು ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯೋಪಾಧ್ಯಾಯಿನಿ ಪ್ರಿಯಾಕುಮಾರಿ ಮತ್ತು ಇತರೆ ಶಿಕ್ಷಕರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ ಭವ್ಯ ರಥೋತ್ಸವ….

ಗಂಗಾವತಿಯ 12 ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಲಿಯುಗದ ಕಾಮಧೇನು ಕಲ್ಪವೃಕ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರ 354ನೆಯ ಆರಾಧನಾ ಮಹೋತ್ಸವದ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಮಂಗಳವಾರದಂದು ಜರುಗಿತು.

ಶ್ರೀಮಠದ ಆವರಣದಿಂದ ಹೊರಟ ರಥೋತ್ಸವ ಶ್ರೀ ನಗರೇಶ್ವರ ದೇವಸ್ಥಾನದವರೆಗೆ ಆಗಮಿಸಿ ಮರಳಿತು.

ಈ ಸಂದರ್ಭದಲ್ಲಿ ರಾಜಮಾರ್ಗ ಉದ್ದಕ್ಕೂ ಭಕ್ತರು ಉತ್ತತ್ತಿ, ನಾಣ್ಯಗಳನ್ನು ಸಮರ್ಪಿಸಿ ಆರತಿಯನ್ನು ಬೆಳಗಿ ತಮ್ಮ ಭಕ್ತಿ ಭಾವವನ್ನು ವ್ಯಕ್ತಪಡಿಸಿದರು.

ರಥೋತ್ಸವದ ರಾಜಮಾರ್ಗದ ಉದ್ದಕ್ಕೂ ವೇದ ಮಂತ್ರ ಘೋಷ, ಭಜನೆ, ನೃತ್ಯ ಗಳಿಂದ ಜನರಲ್ಲಿ ಭಕ್ತಿಭಾವ ಮೂಡಿಸುವಲ್ಲಿ ಸಫಲತೆಗೊಂಡಿತು.

ಬಂಜಾರ ಕೋವಲ್ ರಾಜ್ಯಮಟ್ಟದ ಗಾಯನ ಸ್ಪರ್ಧೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ವತಿಯಿಂದ ಬಂಜಾರ ಕೋವಲ್ ರಾಜ್ಯಮಟ್ಟದ ಗಾಯನ ಸ್ಪರ್ಧೆ-01 ಭಾನುವಾರ (10-8-2025) ರಂದು ನಡೆಯಿತು.

ಈ ಸ್ಪರ್ಧೆಯಲ್ಲಿ ಬಂಜಾರ ಗಾಯಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಗಾಯನ ಕೌಶಲ್ಯವನ್ನು ಪ್ರದರ್ಶಿಸಿದರು.

ಕವಿತಾಬಾಯಿ ವೈ ಭದ್ರಾವತಿ, ವಾಲ್ಯನಾಯ್ಕ ಎಲ್ ವಿಜಯನಗರ, ಪ್ರಕಾಶ ಲಕ್ಷ್ಮಣ ವಿಜಯನಗರ, ಹನುಮಂತನಾಯ್ಕ ಸಿ ದಾವಣಗೆರೆ, ಹನುಮಂತನಾಯ್ಕ ಚವ್ಹಾಣ್, ರಮೇಶ್ .ಎಸ್ ಲಮಾಣಿ, ಪ್ರೇಮಾ ಸಂತೋಷ ರಾಠೋಡ್, ಗಣೇಶ್ ಎಲ್ ವಿಜಯನಗರ, ಭಾಗ್ಯ .ಎಸ್. ಶಿವಮೊಗ್ಗ, ಕು. ಟಿ. ದೀಪಾ ವಿಜಯನಗರ, ತಿಮ್ಮನಾಯ್ಕ.ಎಲ್ ವಿಜಯನಗರ, ಶೈಲಜಾ ಕೆ. ವಿ. ಜೈಪುರ

ಈ ಸ್ಪರ್ಧೆ ನಿರಂತರವಾಗಿ 15 ವಾರಗಳವರೆಗೆ ನಡೆಯಲಿದ್ದು, ಬಂಜಾರ ಜನಾಂಗದ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿವಿಧ ಹಾಡುಗಳನ್ನು ಹಾಡಲಾಗುತ್ತದೆ.

ಉತ್ತಮ ಗಾಯಕರನ್ನು ಆಯ್ಕೆ ಮಾಡಿ, ಅವರಿಗೆ ಬಂಜಾರ ಕೋವಲ್ 2026 ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿಯ ಸಂಸ್ಥಾಪಕ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ ನಗರದ ಕನ್ನಡ ಜಾಗೃತಿ ಭವನದಲ್ಲಿ ನೂಲಹುಣ್ಣಿಮೆ ಪ್ರಯುಕ್ತ ಶಿವಾನುಗೋಷ್ಠಿ ಕಾರ್ಯಕ್ರಮ
ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಶಾಲೆ ಹತ್ತಿರವಿರುವ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್-೧೨, ಮಂಳವಾರ, ನೂಲಹುಣ್ಣಿಮೆ ಪ್ರಯುಕ್ತ ೧೧ನೇ ಶಿವಾನುಭವ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ (ರಿ), ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಹಾಗೂ ಕನ್ನಡ ಜಾಗೃತಿ ಸಮಿತಿ ಗಂಗಾವತಿ ಇವರುಗಳ ಸಹಯೋಗದಲ್ಲಿ ಆಯೋಜಿಸಿದೆ.
ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಗಂಗಾವತಿ ಕಲ್ಮಠದ ಮ.ನಿ.ಪ್ರ ಶ್ರೀ ಡಾ. ಕೊಟ್ಟೂರು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಹೆಬ್ಬಾಳ ಬೃಹನ್ಮಠದ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಮಾನವಿಯ ಮುಕ್ತಾಗುಚ್ಛ ಬೃಹನ್ಮಠ ಕಲ್ಮಠದ ಶ್ರೀ ಷ.ಬ್ರ. ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಹ ಉಪಸ್ಥಿತರಿರುತ್ತಾರೆ.
ಬಳಗಾನೂರು ಶ್ರೀ ಮರಿಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ. ಸಿದ್ಧಬಸವ ಮಹಾಸ್ವಾಮಿಗಳು ಕೂಡ ಈ ಸಂದರ್ಭದಲ್ಲಿ ವಹಿಸಲಿದ್ದರೆ.
ಗೋಷ್ಠಿಯಲ್ಲಿ ಉಪನ್ಯಾಸವನ್ನು ಇಟಗಿ ಚಿಕ್ಕಮ್ಯಾಗೇರಿ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ೧೦೮ ಡಾ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ನೀಡಲಿದ್ದಾರೆ.
ಈ ಕಾರ್ಯಕ್ರಮವು ಸುಳೇಕಲ್ ಬೃಹನ್ಮಠದ ಪ.ಪೂ ಶ್ರೀ ಭುವನೇಶ್ವರಯ್ಯ ತಾತನವರು ಮತ್ತು ಅರಳಹಳ್ಳಿ ಬೃಹನ್ಮಠದ ಪ.ಪೂ ಶ್ರೀ ಗವಿಸಿದ್ದಯ್ಯ ತಾತನವರು ಹಾಗೂ ಪ.ಪೂ ಶ್ರೀ ಶರಣಬಸವ ದೇವರು ನೇತೃತ್ವದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಗಾಲಿ ಜನಾರ್ಧನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಭಾಗವಹಿಸಲಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡ ಮತ್ತು ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿಯವರೂ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಕಳಕನಗೌಡ ಪೊಲೀಸ್ ಪಾಟೀಲ್ ಹಾಗೂ ಗಂಗಾವತಿ ತಾಲೂಕ ಅಧ್ಯಕ್ಷ ಗಿರೇಗೌಡ ಹೊಸಕೇರಾ ಕೂಡ ಭಾಗವಹಿಸಲಿದ್ದಾರೆ.
ಬಿ.ಜೆ.ಪಿ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಸಿದ್ರಾಮಯ್ಯಸ್ವಾಮಿ, ಸಂಗಮೇಶ ಸುಗ್ರೀವ, ಅಂತರಾಷ್ಟ್ರೀಯ ಹಾಸ್ಯ ಕಲಾವಿದ ಬೀಚಿ ಗಂಗಾವತಿ ಪ್ರಾಣೇಶ ಕೂಡ ಹಾಜರಾಗಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಶಿವಕುಮಾರ ಮಾಲಿಪಾಟೀಲ್ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸಾಹಿತಿಗಳು, ಕವಿಗಳು ಹಾಗೂ ಮಹಿಳೆಯರು ಭಾಗವಹಿಸಲು ಕೋರಲಾಗಿದೆ.
ಬಸವ ಸಂಸ್ಕೃತಿ ಅಭಿಯಾನಕ್ಕೆ ಪೂರ್ವಭಾವಿ ಸಭೆ ಆಯೋಜನೆ.

ಲಿಂಗಾಯತ್ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಹಾಗೂ ರಾಷ್ಟ್ರೀಯ ಬಸವದಳ ಸೇರಿ ಸಭೆಯಲ್ಲಿ ಪಾಲ್ಗೊಂಡವು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ಕ, ಕದಳಿ ವೇದಿಕೆ, ಅಕ್ಕಮಹಾದೇವಿ ಮಹಿಳಾ ಮಂಡಳಿ ಸದಸ್ಯರೂ ಸಹ ಹಾಜರಿದ್ದರು.

ಕೊಪ್ಪಳ ಸರ್ವ ಬಸವಪರ ಸಂಘಟನೆಗಳ ಸಂಯೋಗದೊಂದಿಗೆ ಪೂರ್ವಭಾವಿ ಸಭೆಯನ್ನು ಕೊಪ್ಪಳದ ಶಾಂತವೇದ ಕಲ್ಯಾಣ ಮಂಟಪದಲ್ಲಿ ಸಭೆ ಸಂಜೆ 6 ಗಂಟೆಗೆ ನಡೆಸಲಾಯಿತು.

ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಎಲ್ಲಾ ಪದಾಧಿಕಾರಿಗಳು ಹಾಗೂ ಬಸವಭಕ್ತರು ಬಂದು ಆಗಮಿಸಿ , ತಮ್ಮ ಸಲಹೆ ಸೂಚನೆಳನ್ನು ನೀಡಿದ್ದಾರೆ.

ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಭಾಲ್ಕಿ ಹಿರೇಮಠದ ಶ್ರೀ ಪೂಜ್ಯ ಗುರುಬಸವ ಪಟ್ಟದ್ ದೇವರು ವಹಿಸಿದರು.

ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ ರೂಪರೇಷೆ ಕುರಿತು ಚರ್ಚೆ ನಡೆಯಿತು. ಎಲ್ಲಾ ಬಸವಭಕ್ತರಿಂದ ಅಮೂಲ್ಯ ಸಲಹೆಗಳು ಬಂದವು.

ಕೊಪ್ಪಳ ಜಿಲ್ಲಾ ಘಟಕವು ಬೇರೆ ಬೇರೆ ಸಮಿತಿಗಳನ್ನು ರಚಿಸಿತು. ಗಂಗಾವತಿಯಿಂದ ಬಸವಭಕ್ತರು ಶ್ರೀ ಪರಮಪೂಜ್ಯ ಗುರುಬಸವ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕೊಪ್ಪಳದ ಹಿರಿಯರಾದ ವೀರೇಶ್ ಬಳ್ಳಳ್ಳಿ, ಕೆ. ಶರಣಪ್ಪ ವಕೀಲರು, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಜಿ. ನಾಗರಾಜ್, ಚನ್ನಬಸವ ಕೊಟಗಿ, ಏ.ಕೆ. ಮಹೇಶ್ ಕುಮಾರ್, ಪತ್ರಪ್ಪ, ನಿಜಲಿಂಗಪ್ಪ ಮೆಣಸಗಿ, ತಿಪ್ಪಣ್ಣ ಸಿದ್ದಣ್ಣ, ಪಂಪಣ್ಣ ಮತ್ತು ಅನೇಕರು ಭಾಗವಹಿಸಿದರು.

ಆಗಸ್ಟ್ 10 ರಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೆಯ ಆರಾಧನಾ ಮಹೋತ್ಸವ… ಗುರುರಾಜ್ ಆಚಾರ.

ಗಂಗಾವತಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 10ರಿಂದ ಮೂರು ದಿನಗಳ ಕಾಲ ಆರಾಧನಾ ಮಹೋತ್ಸವ ಜರುಗಲಿದೆ.

ಈ ಮಹೋತ್ಸವವು ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354ನೇ ಆರಾಧನೆಗೆ ಸಮರ್ಪಿತವಾಗಿದೆ.

ಶ್ರೀಮಠದ ವ್ಯವಸ್ಥಾಪಕ ಸಾಮವೇದಿ ಗುರುರಾಜ ಆಚಾರ್ ಹಾಗೂ ಪ್ರಧಾನ ಅರ್ಚಕ ಭೀಮಸೇನ್ ಆಚಾರ್ ಮಾಧ್ಯಮದೊಂದಿಗೆ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು.

ಅವರು ಮಂತ್ರಾಲಯದ ಪೀಠಾಧಿಕಾರಿಗಳಾದ ಶ್ರೀ ಶುಭೋದಯ ಶ್ರೀ ಸುಬುಧ್ಯೇಂದ್ರ ತೀರ್ಥ ಶ್ರೀ ಪಾದಂಗಳವರ ಅಜ್ಞಾನುಸಾರವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮೋತ್ಸವ ಜರುಗಲಿದೆ.

ಮಹೋತ್ಸವದ ಅವಧಿಯಲ್ಲಿ ಪ್ರತಿದಿನ ಅಷ್ಟೋತ್ತರ ಶತನಾಮಾವಳಿ ಪಾರಾಯಣ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ. ಭಜನೆ, ಅಲಂಕಾರ ಹಾಗೂ ಬ್ರಾಹ್ಮಣರ ಸೇವೆ ಜರುಗಲಿದೆ.

ಆರಾಧನೆಯ ಮುಖ್ಯ ದಿನವಾದ ಆಗಸ್ಟ್ 11 ರಂದು ಮಧ್ಯರಾದನೆ ನಡೆಯಲಿದ್ದು, ಆಗಸ್ಟ್‌ 12 ರಂದು ಉತ್ತರಾಧನೆ ನಡೆಯಲಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳವರ ಸರ್ವಲಾಂಕೃತ ಭವ್ಯ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಹಾಗೂ ವಿವಿಧ ಭಜನಾ ಮಂಡಳಿ ಅವರಿಂದ ಜರುಗಲಿದೆ.

ಸಕಲ ಭಕ್ತಾದಿಗಳು ಭಾಗವಹಿಸಿ ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಜರುಗಲಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಸಾಮವೇದಿ ಗುರುರಾಜ ಆಚಾರ್ ಹಾಗೂ ಪ್ರಧಾನ ಅರ್ಚಕ ಭೀಮಸೇನ್ ಆಚಾರ್ ಹೇಳಿದರು.

ಅವರು ಶ್ರೀಮಠದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಮಂತ್ರಾಲಯದ ಪೀಠಾಧಿಕಾರಿಗಳಾದ ಶ್ರೀ ಶುಭೋದಯ ಶ್ರೀ.ಸುಬು ಧ್ಯೇoದ್ರ ತೀರ್ಥ ಶ್ರೀ ಪಾದಂಗಳವರ ಅಜ್ಞಾನುಸಾರವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮೋತ್ಸವ ಜರುಗಲಿದ್ದು.

ದಿನಂಪ್ರತಿ ಅಷ್ಟೋತ್ತರ ಶತನಾಮಾವಳಿಯೊಂದಿಗೆ ರಾಯರ ಬೃಂದಾವನಕ್ಕೆ ಕ್ಷೀರಾಭಿಷೇಕ ಪಂಚಾಮೃತ ಅಭಿಷೇಕ, ಭಜನೆ ಅಲಂಕಾರ ಬ್ರಾಹ್ಮಣರ ಸೇವೆ ಜರುಗಲಿದೆ.

ದಿನಾಂಕ 11 ಸೋಮವಾರ ಮಧ್ಯರಾಧನೆ, ದಿನಾಂಕ 12 ಮಂಗಳವಾರ ಉತ್ತರಾಧನೆ, ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರ ಸರ್ವಲಾಂಕೃತ ಭವ್ಯ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಹಾಗೂ ವಿವಿಧ ಭಜನಾ ಮಂಡಳಿ ಅವರಿಂದ ಜರುಗಲಿದ್ದು ಸಕಲ ಭಕ್ತಾದಿಗಳು ಭಾಗವಹಿಸಿ ಶ್ರೀ ರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

೨೦೨೪-೨೫ನೇ ಸಾಲಿನ ವಿಜಯಪುರ ಮಹಿಳಾ ವಿಶ್ವಾವಿದ್ಯಾಲಯದ ಫಲಿತಾಂಶದಲ್ಲಿ ಗಂಗಾವತಿಯ ಸಂಕಲ್ಪ ಪ್ರ.ದ.ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಮೋಘ ಸಾಧನೆ

ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ೨೦೨೪-೨೫ನೇ ಸಾಲಿನ ಬಿ.ಎ ಮತ್ತು ಬಿಕಾಂ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಲಾಗಿದೆ.

ಗಂಗಾವತಿಯ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ.

ಬಿ.ಎ ಪದವಿಯಲ್ಲಿ ಒಟ್ಟು ೭೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.

ನೇಹಾ ತಂದೆ ಯಮನೂರ್‌ ಸಾಬ ಶೇ ೯೩.೩೮%, ರೇವತಿ ತಂದೆ ಜಯಣ್ಣ ಹೆಬ್ಬಾಳ್ ಶೇ ೯೩.೭%, ತಿರುಮಲ ತಂದೆ ಪಾಮಣ್ಣ ಪೂಜಾರಿ ಶೇ ೯೨.೯೨%, ಚೈತ್ರ ತಂದೆ ಲಕ್ಷ್ಮೀಪತಿ ಶೇ ೯೨.೭೬% ಫಲಿತಾಂಶ ಪಡೆದಿದ್ದಾರೆ.

ಅದೇ ರೀತಿ ಬಿಕಾಂ ಪದವಿಯಲ್ಲಿ ಒಟ್ಟು ೬೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿ ಗಳಿಸಿದ್ದಾರೆ.

ಪೂರ್ಣಿಮಾ ತಂದೆ ಶೇಖರಪ್ಪ ಮಡಿವಾಳ್ ಶೇ ೯೭.೦೭%, ಸಾಕ್ಷಿಪ್ರಿಯ ತಂದೆ ಮಂಜುನಾಥ್ ಶೆಟ್ಟಿ ಶಹಪುರ್ ಶೇ ೯೭.೦೭%, ಯಾಮಿನಿ ತಂದೆ ಪಿ ಕೃಷ್ಣ ಶೇ ೯೬.೩೧% ಹಾಗೂ ಅನಂತಲಕ್ಷ್ಮಿ ತಂದೆ ಆನಂತ್ಲ್ಯಾಕ್ಷ್ಮಿ ದೊಡ್ಡಮಲ್ಲಪ್ಪ ಶೇ ೯೫.೮೪% ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆಯುವುದರ ಮೂಲಕ ವಿದ್ಯಾರ್ಥಿನಿಯರು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೇಮಂತರಾಜ ಜಿ. ಕಲ್ಮಂಗಿ, ಕಾರ್ಯಾಧ್ಯಕ್ಷರಾದ ನಾಗರಾಜ ಎಸ್ ಗುತ್ತೇದಾರ, ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿ, ಕಾರ್ಯದರ್ಶಿಗಳಾದ ಬಸವರಾಜ ಎಲ್ ಕೇಸರಹಟ್ಟಿ, ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಸಿಂಗನಾಳ, ನಿರ್ದೇಶಕರಾದ ಡಾ. ಅಮಿತ್ ಕುಮಾರ್ ರೆಡ್ಡಿ ಹಾಗೂ ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ಹಾಗೂ ಮಹಾವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯು ವಿಶೇಷವಾಗಿ ಪ್ರೋತ್ಸಾಹಿಸಿದ ಪಾಲಕರಿಗೆ ಹಾಗೂ ಉತ್ತಮ ಬೋಧನೆ ಮಾಡಿ ವಿದ್ಯಾರ್ಥಿನಿಯರ ಸಾಧನೆಗೆ ಕಾರಣರಾದ ಉಪನ್ಯಾಸಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದೆ.

ಮಾಹಿತಿಗಾಗಿ
ಬಸಪ್ಪ ಶಿರಿಗೇರಿ
ಪ್ರಾಚಾರ್ಯರು,
ಸಂಕಲ್ಪ ಪ್ರಥಮ ದರ್ಜೆ ಮಹಾವಿದ್ಯಾಲಯ ಗಂಗಾವತಿ.
ಅeಟಟ: ೯೦೧೯೧೯೮೦೬೭

ಗಂಡುಗಲಿ ಕುಮಾರರಾಮನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಜನಮಾನಸದಲ್ಲಿ ಬೇರೂರಿವೆ: ಸೋಮನಾಥ ಎಸ್. ಹೆಬ್ಬಡದ

ಗಂಗಾವತಿ: ಇಂದು ಜುಲೈ-೯ ಶನಿವಾರ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗಂಡುಗಲಿ ಕುಮಾರರಾಮನ ಜಯಂತಿಯನ್ನು ಆಚರಿಸಲಾಯಿತು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿಯ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು .

ಜಯಂತಿಯ ಅಂಗವಾಗಿ, ಶ್ರೀ ಸೋಮನಾಥ ಎಸ್. ಹೆಬ್ಬಡದ ಅವರು ಗಂಡುಗಲಿ ಕುಮಾರರಾಮನ ಇತಿಹಾಸ ಹಾಗೂ ಅವನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಮನೋಭಾವ ಕುರಿತು ಉಪನ್ಯಾಸ ನೀಡಿದರು.

ಅವರು ಕುಮಾರರಾಮನ ತ್ಯಾಗ ಬಲಿದಾನದ ಬಗ್ಗೆ ಹಾಗೂ ಸದ್ಗುಣಗಳ ಕಾರಣದಿಂದ ಇಂದಿಗೂ ಜನಮಾನಸದಲ್ಲಿ ಬೇರೂರಿದ್ದು, ಇಂದಿಗೂ ಆತನನ್ನು ಪೂಜಿಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಾಂತ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಅಶೋಕ್ ರಾಯಕರ್, ಇತಿಹಾಸವನ್ನು ತಿರುಚುವ ಅಪಾಯದ ಬಗ್ಗೆ ಎಚ್ಚರಿಸಿದರು.

ಮೈಸೂರಿನ ಕನ್ನಂಬಾಡಿ ಕಟ್ಟೆಯ ಇತಿಹಾಸವನ್ನು ತಪ್ಪಾಗಿ ಜನರಿಗೆ ತಿಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬುದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಡಾ|| ಮಾನಸ ಡಿ.ಎ. ಅವರು, ವಿದ್ಯಾರ್ಥಿಗಳಿಗೆ ಹೋರಾಟಗಾರರ ಜೀವನ ಚರಿತ್ರೆ ಪರಿಚಯಿಸುವ ಪರಿಷತ್ತಿನ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದರು.

ಅವರು ಈ ಕಾರ್ಯಕ್ರಮಗಳು ಯುವಕರಲ್ಲಿ ದೇಶಭಕ್ತಿ ಮತ್ತು ಸಂಸ್ಕೃತಿ ಅರಿವು ಬೆಳೆಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯಂಕಪ್ಪ ಕಟ್ಟಿಮಣಿ, ರಾಜೇಶ್ ನಾಯಕ್ ದೊರೆ ಮತ್ತು ಹರನಾಯಕ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅವರು ಗಂಡುಗಲಿ ಕುಮಾರರಾಮನ ಹೋರಾಟ ಇಂದಿನ ಪೀಳಿಗೆಗೆ ಪ್ರೇರಣೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷ ಎನ್. ಜಡೆಪ್ಪ ಮೆಟ್ರಿ, ಯುವಕರು ದುಶ್ಚಟಗಳಿಂದ ದೂರವಿದ್ದು ದೇಶದ ಗರಿಮೆ ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತರಾಗಬೇಕು ಎಂದು ಕರೆ ನೀಡಿದರು.

ಅವರು ಸಾಹಿತ್ಯ ಮತ್ತು ಸಂಸ್ಕೃತಿ ರಕ್ಷಣೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕುಮಾರಿ ಸೌಮ್ಯ ನಿರ್ವಹಿಸಿದರು, ಶ್ರೀ ಮಹದೇವ್ ಮೋಟಿ ಅವರು ಕಾರ್ಗಿಲ್ ಯೋಧರಿಗೆ ನಮನ ಸಲ್ಲಿಸುವ ದೇಶಭಕ್ತಿ ಗೀತೆ ಹಾಡಿದರು.

ಸ್ವಾಗತವನ್ನು ಯಲ್ಲಪ್ಪ ಕಲಾಲ್ ಮಾಡಿದರು. ವಂದನಾರ್ಪಣೆಯನ್ನು ಬಳ್ಳಾರಿ ವಿಭಾಗಿಯ ಸಂಯೋಜಕರಾದ ಶ್ರೀಧರ್. ಟಿ ಸಲ್ಲಿಸಿ ಶಾಂತಿ ಮಂತ್ರ ಪಠಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಪ್ರಕಾಶ್ ಪಾಟೀಲ್, ಶಿವನಗೌಡ ತೆಗ್ಗಿ, ಶ್ರವಣಕುಮಾರ ರಾಯಕರ್, ಉಪನ್ಯಾಸಕರಾದ ಬಾಳಪ್ಪ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಂಕರ ಮಠದಲ್ಲಿ ನೂತನ ಉಪಕರ್ಮ ಹಾಗೂ ಜನಿವಾರ ಧಾರಣೆ.

ಗಂಗಾವತಿ: ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ, ನೂತನ ಉಪಕರ್ಮ ಹಾಗೂ ಜನಿವಾರಧಾರಣೆ ಧಾರ್ಮಿಕವಾಗಿ ನೆರವೇರಿತು.

ಈ ಸಂದರ್ಭದಲ್ಲಿ ಉಪನಯನಗೊಂಡ ಎರಡು ಮಕ್ಕಳಿಗೆ ಉಪಕರ್ಮ ಹಾಗೂ ಸಮಾಜ ಬಾಂಧವರ ಜನಿವಾರಧಾರಣೆ ವಿಧಿಗಳನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ನೆರವೇರಿಸಿದರು.

ವೇದಮೂರ್ತಿ ಮಹೇಶ್ ಭಟ್ ಜೋಶಿ ಅವರು, ಸನಾತನ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಗಳು ಹಿಂದಿನ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದ್ದವು ಎಂದು ಹೇಳಿದರು.

ಉಪನಯನಗೊಂಡ ವಟುಗಳಿಗೆ ಶಿಕ್ಷಣ ಕಲಿಯುವ ಅವಕಾಶ ದೊರಕುತ್ತಿದ್ದ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಅವರು ಉಲ್ಲೇಖಿಸಿದರು.

ಅವರು ಜನಿವಾರಧಾರಣೆ ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಅಗತ್ಯವಾದ ಆಚರಣೆ ಎಂದು ವಿವರಿಸಿದರು.

ಧಾರ್ಮಿಕ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸನಾತನ ಧರ್ಮದ ರಕ್ಷಣೆಗೆ ನಾವು ಕೈಜೋಡಿಸಬಹುದು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪಕರ್ಮ ಹೋಮ, ಗಾಯತ್ರಿ ಮಂತ್ರ ಪಾರಾಯಣ ಮತ್ತು ಇತರೆ ಪೂಜಾ ಕಾರ್ಯಕ್ರಮಗಳು ಶನಿವಾರ ಬೆಳಿಗ್ಗೆ ನೆರವೇರಿಸಲಾಯಿತು.

ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ ಕರ್. ಸುರೇಶ್. ಅನಿಲ್ ಅಳವಂಡಿ. . . ಶೇಷಗಿರಿ ಗಡಾದ್. ಇತರರು ಪಾಲ್ಗೊಂಡಿದ್ದರು

ವರದಿ : ಸುದರ್ಶನ ವೈದ್ಯ

ಫೋಟೊ : ಶ್ರೀನಿವಾಸ ಕರಮುಡಿ

ಎಲ್ಲಾ ಉದ್ಯಾನವನಗಳಲ್ಲಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು: ಡಾ|| ಶಿವಕುಮಾರ ಮಾಲಿಪಾಟೀಲ್

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ ಸಹಯೋಗದೊಂದಿಗೆ ಜುಲೈ-೮ ಶುಕ್ರವಾರ ನಗರದ ನೆಹರುಪಾರ್ಕ್ನಲ್ಲಿ ವನಮಹೋತ್ಸವ ಆಚರಿಸಲಾಯಿತು.

ಖ್ಯಾತ ವೈದ್ಯರಾದ ಲಯನ್ ಡಾ|| ದೇವರಾಜ ಅವರು ಗಿಡ ನೆಡುವುದರ ಮುಖಾಂತರ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್‌ರವರು ನಗರದ ಎಲ್ಲಾ ಗಾರ್ಡನ್‌ಗಳನ್ನು ಸಾರ್ವಜನಿಕರು ವಾಯುವಿಹಾರಕ್ಕೆ ಬಳಸಬೇಕು.

ಸಾರ್ವಜನಿಕರು ಗಾರ್ಡನ್‌ಗಳ ಸ್ವಚ್ಛತೆ ಕಾಪಾಡಿ ಪರಿಸರ ಉಳಿಸಿಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಖಜಾಂಚಿಯಾದ ಲ. ಶಿವಪ್ಪ ಗಾಳಿ, ಲ. ನಾಗರಾಜ ಗುತ್ತೇದಾರ, ಲ. ಸುರೇಶ ಸಂಕನೂರು, ಲ. ಗುರುಪ್ರಸಾದ, ಬಸವರಾಜ ಮ್ಯಾಗಳಮನಿ, ಪ್ರಹ್ಲಾದ ಕುಲಕರ್ಣಿ, ಚಿದಾನಂದ ಕೀರ್ತಿ ಹಾಗೂ ಸಂಕಲ್ಪ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

VISHWAROOPA NEWS BLOG

Infinite

Skip to content ↓