ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.
ವಿಷ್ಣುವಿನ ದಶಾವತಾರದಲ್ಲಿ ಒಂದಾದ ಶ್ರೀ ಕೃಷ್ಣ ಪರಮಾತ್ಮ ಸತ್ಯಧರ್ಮನ್ಯಾಯ ಸಂದೇಶದ ಪ್ರತೀಕವಾಗಿ ಕಂಗೊಳಿಸುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯನಿ ಸವಿತಾ ನೇತ್ರಾಜ್ ಗುರುವಿನಮಠ ಹೇಳಿದರು.
ಅವರು ಶಾಲೆಯಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಮಧ್ಯೆ ಜರುಗಿದ ಯುದ್ಧದಲ್ಲಿ ಶ್ರೀ ಕೃಷ್ಣನು ಧರ್ಮದ ಪರವಾಗಿ ಪಾಂಡವರಿಗೆ ಜಯಶಾಲಿ ಆಗುವಂತೆ ಹರಿಸಿದನು.
ಜೊತೆಗೆ ಅಧರ್ಮದಿಂದ ಕೂಡಿದ್ದ ಕೌರವರು ಸೋಲಲು ಶ್ರೀ ಕೃಷ್ಣನೇ ಕಾರಣರಾಗಿದ್ದು, ಅವರ ತತ್ವ ಸಿದ್ಧಾಂತಗಳನ್ನು ಬಾಲ್ಯದಲ್ಲಿ ಮಕ್ಕಳು ಅಳವಡಿಸಿಕೊಳ್ಳಬೇಕೆಂಬುವ ಉದ್ದೇಶದಿಂದ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲಂಕಾರಗೊಳಿಸಿದ ತೊಟ್ಟಿಲಿಗೆ ಪೂಜಿ ಸಲ್ಲಿಸಿ ಶ್ರೀ ಕೃಷ್ಣ ಜಯಂತೋತ್ಸವ ಆಚರಿಸುವುದರ ಜೊತೆಗೆ ವೇಷಧಾರಿ ಶ್ರೀ ಕೃಷ್ಣ ಹಾಗೂ ರಾಧೆಯ ಬಾಲ್ಯ ತುಂಟತನ ಮೊಸರು ಗಡಿಗೆ ಆಟ ಬೆಣ್ಣೆ ಕದಿಯೋ ರೂಪಕಗಳನ್ನು ನೆರವೇರಿಸಿ, ಸೋದರ ಮೂಲಕ ಅರ್ಥಪೂರ್ಣ ಆಚರಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮಹಾನ್ ಕಿಡ್ಸ್ ಶಾಲೆಯ ಮುಖ್ಯಸ್ಥರಾದ ನೇತ್ರಾಜ್ ಗುರುವಿನ ಮಠ, ಶಾಲೆಯ ಸಿಬ್ಬಂದಿ ವರ್ಗದವರಾದ ಪೂರ್ಣಿಮಾ, ಕುಮುದಿನಿ, ನಾಗರತ್ನ, ಲತಾಶ್ರೀ, ರೇಷ್ಮಾ, ಶಿಲ್ಪ, ವೈಷ್ಣವಿ, ಸುಮಾ, ಜ್ಯೋತಿ, ಮಂಜುನಾಥ, ಪಾಲಕರಾದ ಭೀಮರಾಯ, ಅಂತರಾಷ್ಟ್ರೀಯ ಕಲಾವಿದ ಭೀಮರಾಯ ವಕೀಲರು, ಜಾನವಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾಹಿತಿಗಾಗಿ:
ನೇತ್ರಾಜ್ ಗುರುವಿನಮಠ
ಅಧ್ಯಕ್ಷರು, ಮಹಾನ್ ಕಿಡ್ಸ್ ಸ್ಕೂಲ್, ಗಂಗಾವತಿ.
ಮೊ.ನಂ: ೯೯೮೬೧೬೭೩೬೭