ಶಂಕರೇಗೌಡ ತುಂಬಕೆರೆಯವರ “ಕೃಷ್ಣಸಾಗರ ಮತ್ತು ಇತರ ಕವನಗಳು” ಗೊರೂರು ಅನಂತರಾಜು, ಹಾಸನ

ಶ್ರೀ ಶಂಕರೇಗೌಡ ತುಂಬಕೆರೆಯವರ ಕೖಷ್ಣಸಾಗರ ಮತ್ತು ಇತರ ಕವನಗಳು ಎಂಬುದು ಇವರ ನಾಲ್ಕನೇ ಕೃತಿ. ಈ ಕೃತಿಯಲ್ಲಿ ಶ್ರೀ ಸ್ವಾಮಿ ರಾಮಕೃಷ್ಣ ಪರಮಹಂಸರನ್ನು ವಿಧವಿಧವಾಗಿ ನಿವೇದಿಸಿಕೊಳ್ಳುವ ಕವಿತೆಗಳೇ ಹೆಚ್ಚಾಗಿವೆ.

ಪ್ರಕೃತಿ ಕವಿತೆ, ತಾಯಿ ದೇವತೆ, ಜ್ಞಾನ ದೇವತೆ ಮತ್ತು ಪರಮಾತ್ಮನಲ್ಲಿ ಒಳ್ಳೆಯ ದಾರಿ ತೋರಿಸುವಂತಹ ಬೇಡುವ ಸಲಹುವ ಪ್ರಾರ್ಥಿಸುವ ಪದ್ಯಗಳು ಇವೆ. ಇವಲ್ಲದೆ ಪ್ರೇಮ ಗೀತೆಗಳು, ಸ್ವಾಮಿ ವಿವೇಕಾನಂದರ ಕುರಿತು ಬರೆದಿರುವ ಕವನಗಳು ಇವೆ.

ಮಂಡ್ಯ ಜಿಲ್ಲೆಯ ಶಂಕರೇಗೌಡ ತುಂಬಕೆರೆಯವರು ಫೋನಿನ ಮಾತಿನಲ್ಲಿ ತಮ್ಮ ಪರಿಚಯ ಹೇಳಿಕೊಳ್ಳುತ್ತಾ ಇವರ ಮೂರು ಕೃತಿಗಳು ಈಗಾಗಲೇ ಪ್ರಕಟವಾಗಿರುವುದು ತಿಳಿಯಿತು. ಅವುಗಳ ವಿಚಾರದ ಮಾಹಿತಿ ವ್ಯಾಟ್ಸಪ್ ಮಾಡಿದರು.

ಚಿಂತನ ಸೌರಭ ಇದು ಲೇಖಕರ ಚಿಂತನೆಗಳ ಬರಹ. ಒಂದು ವಿಷಯವನ್ನು ಈ ಆಧುನಿಕ ಸಂದರ್ಭದಲ್ಲಿ ವಾಸ್ತವ ದೃಷ್ಟಿಕೋನದಿಂದ ಹೇಗೆ ಅವಲೋಕಿಸಬಹುದು ಎಂಬುದನ್ನು ಗಮನವಿರಿಸಿ ಆದಷ್ಟು ಚಿಕ್ಕದಾಗಿ ಸರಳವಾಗಿ ಏನು ಹೇಳಬೇಕು ಅದನ್ನಷ್ಟೇ ಹೇಳಿ ಅರ್ಥೈಸಿದ್ದಾರೆ.

ಇವರ ಇನ್ನೊಂದು ಕೃತಿ ಹನಿಗವನ ಸೌರಭ. ಇದು ನನಗೆ ಇಷ್ಟವಾದ ಪ್ರಕಾರ. ಇದರಲ್ಲಿ 500 ಚುಟುಕುಗಳಿವೆ. ಹತ್ತು ಹಲವು ವಿಷಯಗಳನ್ನು ನಾಲ್ಕು ಸಾಲುಗಳ ಚುಟುಕುಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಇವರ ಮತ್ತೊಂದು ಸಂಕಲನ ಆಧುನಿಕ ವಚನ ಸೌರಭ. ಇದು 400 ವಚನಗಳನ್ನು ಒಳಗೊಂಡಿದೆ. ವರ್ತಮಾನದ ಸಮಾಜದಲ್ಲಿ ಘಟಿಸುವ ಘಟನೆಗಳಿಗೆ 5 ಸಾಲಿನ ವಚನ ಓದುಗರನ್ನು ಎಚ್ಚರಿಸುತ್ತದೆ.

ಗೀತಾಂಜಲಿಗೊಂದು ಭಾವಥಾ೯ಂಜಲಿ ಇದು ಡಾ. ಕೆ. ಗೌರಮ್ಮ ಮತ್ತು ಶಂಕರೇಗೌಡ ತುಂಬಕೆರೆ ಇವರು ಆರ್. ಎಲ್.ಜಿ ಅವರು ಇಂಗ್ಲಿಷ್ ನಿಂದ ಅನುವಾದಿಸಿರುವ ವರಕವಿ ರವೀಂದ್ರರ ಗೀತಾಂಜಲಿ ಕೃತಿಯಿಂದ ಪ್ರಭಾವಿತರಾಗಿ ಅದರ ಎಲ್ಲಾ 103 ಕವನಗಳನ್ನು ಅಮೂಲಾಗ್ರವಾಗಿ ಓದಿ ನಂತರ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಭಾವಾರ್ಥವನ್ನು ಬರೆದಿದ್ದಾರೆ.

ಮಂಡ್ಯದ ಅಭಿನವ ಭಾರತಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನಂತರ ಅಲ್ಲಿನ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ 2018 ರಲ್ಲಿ ನಿವೃತ್ತರಾಗಿ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ.

ಇವರಿಗೆ 2012ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಕಥಾ ವಿಮರ್ಶೆ ನಗೆ ಹನಿಗಳು ಚಿತ್ರ ಕವನಗಳು ಪದರಂಗ ಪದಬಂಧ ರಚನೆ ಮುಂತಾದವು ಇವರ ಹವ್ಯಾಸ.

ಇವರ ಕಷ್ಟಸಾಗರ ಮತ್ತು ಇತರ ಕವನಗಳು ಸಂಕಲದಲ್ಲಿ 100 ವೈವಿಧ್ಯಪೂರ್ಣ ಕವಿತೆಗಳಿವೆ. ಪ್ರದಾನವಾಗಿ ಭಕ್ತಿ ಗೀತೆಗಳು ಮಾಧವನ ಕುರಿತ ಪದ್ಯಗಳು ಸರಳ ಬಾಷೆಯಲ್ಲಿ ರಾಗ ತಾಳ ಅನುಸಾರ ರೂಪುಗೊಂಡು ಗಾಯಕರು ವೇದಿಕೆಗಳಲ್ಲಿ ರಾಗ ಹಾಕಿ ಹಾಡಬಹುದಾಗಿದೆ.

ಇನನೇನಮ್ಮ ನಮ್ಮ ಮಾಧವನು
ಮನವನ್ನು ತಣಿಸುವ ಮೋಹನನು
ಸದ್ದುಗದ್ದಲವಿಲ್ಲದೆ ಬಂದಿರುವನು
ನಮ್ಮೊಡನಾಡಲು ಇಲ್ಲಿಯೇ ಇರುವನು

ಶಿಶು ಕಾವ್ಯವಾಗಿಯು ಮನಸೆಳೆವ ಕೆಲವು ಗೀತೆಗಳು ಈ ಕೃತಿಯಲ್ಲಿ ಸಾಕಷ್ಟಿವೆ.

ಮಗುವೆ ಬಿರಿವ ತುಟಿಯ
ನಾನು ನಿನ್ನ ನೋಡಿದಾಗ
ಎನ್ನ ಮನವು ಹರ್ಷದಿ
ಮುದಗೊಳ್ಳುವುದು ಆಗ

ಪ್ರಕೃತಿ ಕಾವ್ಯಗಳು ಪರಿಸರ ಕಾಳಜಿ ಪರಿಸರ ಪ್ರೇಮ ಈ ಕೆಳಗಿನ ಕವಿತೆಯಲ್ಲಿ ಅಭಿವ್ಯಕ್ತವಾಗಿದೆ.

ಆಹಾ ಏನು ಚೆಲುವು
ಎಂಥ ಸೊಬಗು ಈ ಬುವಿಯಲ್ಲಿ
ಯಾರು ಇದನು ರೂಪಿಸಿದರು?
ಸಗ್ಗದ ಸಿರಿ ತಂದು ಮಾಡಿದರು!

ಜೀವನದಿ ಕಾವೇರಿ ಅದರ ದಡದಲ್ಲಿ ನೆಲೆಸಿರುವ ಜನರ ಬದುಕಿನ
ಜೀವಸೆಲೆ ಎಂಬುದು ಇವರ ಈ ಕೆಳಗಿನ ಕವಿತೆಯಲ್ಲಿ ವ್ಯಕ್ತವಾಗಿದೆ.

ಕಾವೇರಿ ನೀ ಹರಿಯುತಾ
ಈ ಬುವಿಯ ತಣಿಸಿದೆ
ಬಹುಮಂದಿಗೆ ನೆಲೆ ನೀಡಿ
ಇಲ್ಲಿ ಪಾವನ ಎನಿಸಿದೆ

ಭಗವಾನ್ ಶ್ರೀ ರಾಮಕೃಷ್ಣರು ಅಮೃತಪುತ್ರ ಶ್ರೀ ಸ್ವಾಮಿ ವಿವೇಕಾನಂದ ಈ ಮಹನೀಯರ ವ್ಯಕ್ತಿ ಚಿತ್ರಣ, ಅವರ ಜೀವನ ಗಾಥೆಯು ಈ ಕೆಳಗಿನ ಸರಳ ಪದ್ಯಗಳ ರಚನೆಯಲ್ಲಿ ಇಷ್ಟವಾಗುತ್ತದೆ.

ಭಾರತ ಜನನಿಯ ಅಮೃತ ಪುತ್ರ
ನೀನೇ ಈ ದೇಶದ ಉಜ್ವಲ ನೇತ್ರ
( ಸ್ವಾಮಿ ವಿವೇಕಾನಂದ)

ದಕ್ಷಿಣೇಶ್ವರ ತಟಾಕದಲ್ಲಿ ಸಿದ್ಧಿ ಪಡೆದು
ಧೀರ ಶಿಷ್ಯ ವಿವೇಕರ ಪರಿಚಯಿಸಿದೆ
(ರಾಮಕೃಷ್ಣರು)

ಈ ಪದ್ಯಗಳು ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ. ಗೂಢಾರ್ಥ ಅಥವಾ ಭಾವಾರ್ಥ ಬೇರೆ ಹೇಳಬೇಕಾಗಿಲ್ಲ.

ಇದನ್ನು ಸ್ವತಃ ಕವಿಗಳೇ ದೂರವಾಣಿಯಲ್ಲಿ ತಿಳಿಸಿ ಪುಸ್ತಕವನ್ನು ಕಳಿಸಿದರು..ನನ್ನ ಕಾವ್ಯ ಪದ್ಯ ಸರಳ ಭಾಷೆಯಲ್ಲಿದ್ದು ಜನಸಾಮಾನ್ಯರಿಗೆ ತಲುಪಬೇಕೆಂಬುದೇ ತನ್ನ ಆಶಯವೆಂದರು.

ನಿನ್ನೊಳಗೆ ಹರಿಯುವ
ರಸದಾರಿಗೆ ರೂಪು ಕೊಡು
ಅದನ್ನು ರಾಡಿ ಮಾಡದೆ
ನಿರ್ಮಲವಾಗಿರಿಸಲು ಮನವ ಮಾಡು

ಕೃತಿಯ ಪ್ರಕಾಶಕರಾದ ಹನ್ಯಾಳು ಗೋವಿಂದಗೌಡರ ಮೂಲಕ ಪರಿಚಯವಾದ ಲೇಖಕರು ಮುನ್ನುಡಿ ಬಯಸಿ ಈ ಮೊದಲು ಹಸ್ತಪ್ರತಿ ಕಳಿಸಿದ್ದರು. ಈಗ ಕೃತಿ ಹೊರಬಂದಿದೆ. ಕೃತಿಯ ನೂರನೇ ಕವನ ವಂದನೆ. ಅದು ಹೀಗಿದೆ.

ದೇವಾಧಿದೇವ ನಿನ್ನಂತರಂಗದ
ಒಳಿತೆಲ್ಲವೂ ನಿನ್ನದೇ ಕೃಪೆ
ಈ ಕೃಪೆಗಾಗಿ ನಿನಗೆನ್ನ ವಂದನೆ

ಗೊರೂರು ಅನಂತರಾಜು, ಹಾಸನ.
9449462879
29ನೇ ವಾರ್ಡ್, 3ನೇ ಕ್ರಾಸ್,
ಶ್ರೀ ಶನಿಶ್ವರ ದೇವಸ್ಥಾನ ರಸ್ತೆ,
ಹಾಸನ.

ದಕ್ಷಿಣ ಭಾರತದ ಗ್ರಾಹಕ ಹಕ್ಕುಗಳ ಸಮನ್ವಯ ಸಮಿತಿ (ಸಿ.ಸಿ.ಸಿ) ಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಧನರಾಜ ಈ. ಆಯ್ಕೆ.

ಗಂಗಾವತಿ: ಕಂಜ್ಯೂಮರ್ ಕಾನ್‌ಫೆಡರೇಷನ್ ಆಫ್ ಇಂಡಿಯಾ (ಸಿ.ಸಿ.ಐ) ದ ಅಂಗಸಂಸ್ಥೆಯಾದ ಗ್ರಾಹಕರ ಸಮನ್ವಯ ಸಮಿತಿ (ಸಿ.ಸಿ.ಸಿ), ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ.

ಇದು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಗೋವಾ ರಾಜ್ಯಗಳ ೫೬ ಗ್ರಾಹಕರ ಸಮಿತಿಗಳನ್ನು ಒಳಗೊಂಡಿದೆ.

ಈ ಸಮಿತಿಯ ಕರ್ನಾಟಕ ರಾಜ್ಯ ಘಟಕದ ಚೇರ್ಮನ್ ಆಗಿ ಶಿಕ್ಷಣ ತಜ್ಞ, ಸಾಮಾಜಿಕ ಹೋರಾಟಗಾರ ೩೭೧(ಜೆ) ಸಮಿತಿಯ ಸಂಚಾಲಕ ಧನರಾಜ್ ಈ ರವರು ನಾಮನಿರ್ದೇಶನ ಗೊಂಡಿದ್ದಾರೆ.

ಈ ತೀರ್ಮಾನವನ್ನು ಜುಲೈ -೩೦ ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಭೆಯನ್ನು ಸಿ.ಸಿ.ಐ ಅಧ್ಯಕ್ಷರಾದ ಡಾ. ಅನಂತ ಶರ್ಮಾರವರ ನೇತೃತ್ವದಲ್ಲಿ ನಡೆಸಲಾಯಿತು ಹಾಗೂ ಸಿ.ಸಿ.ಸಿ ಯ ಚೇರ್ಮನ್ ಎಸ್. ಚಕ್ರಪಾಣಿಯವರು ಘೋಷಣೆ ಮಾಡಿದ್ದಾರೆ.

ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಯ ರಚನೆ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕದ ಹೊಣೆಯನ್ನು ನೂತನ ಚೇರ್ಮನ್‌ರಾದ ಧನರಾಜ್ ಈ ರವರಿಗೆ ವಹಿಸಲಾಯಿತು.

ಸಿ.ಸಿ.ಸಿ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಗ್ರಾಹಕರ ಹಕ್ಕುಗಳ ಜಾಗೃತಿ, ಆಹಾರ ಕಲಬೆರಕೆ, ವಿರುದ್ಧ ಕಾನೂನಾತ್ಮಕ ಹೋರಾಟ ಹಾಗೂ ನೆರವು ಒದಗಿಸುತ್ತಿದೆ.

ಇದರಡಿಯಲ್ಲಿ ೫೬ ಪ್ರಮುಖ ಗ್ರಾಹಕ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. “ಸಂಕೀರ್ಣವಾದ ಇಂದಿನ ಕಾರ್ಪೋರೇಟ್ ಯುಗದಲ್ಲಿ ಗ್ರಾಹಕರು ಎದುರಿಸುತ್ತಿರುವ ವಂಚನೆಗಳು ಇನ್ನೂ ಸಂಕೀರ್ಣವಾಗಿದ್ದು, ಇಷ್ಟೊಂದು ಅಗಾಧವಾದ ಕ್ಷೇತ್ರದ ನಿರ್ವಹಣೆಗೆ ನಾನು ಯೋಗ್ಯನೆಂದು ಭಾವಿಸಿ, ನನಗೆ ಈ ಜವಾಬ್ದಾರಿಯನ್ನು ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಈ ಹೊಣೆಗಾರಿಕೆಗೆ ಪೂರ್ಣನ್ಯಾಯ ಒದಗಿಸುವ ದೃಢನಂಬಿಕೆಯಿದ್ದು, ಈಗಾಗಲೇ ೨೭೦೦ ಜನ ನ್ಯಾಯ ಹಾಗೂ ಆರೋಗ್ಯ ಕ್ಷೇತ್ರದ ತಜ್ಞ ಸದಸ್ಯರನ್ನು ಒಳಗೊಂಡ ಸಿ.ಸಿ.ಸಿ ಯ ಸಹಕಾರ ಈ ನಿಟ್ಟಿನಲ್ಲಿ ಪಡೆಯುವೆ” ಎಂದು ರಾಜ್ಯಾಧ್ಯಕ್ಷ ಧನರಾಜ್ ಈ. ಈ ಮೂಲಕ ತಿಳಿಸಿದರು.

ದಕ್ಷಿಣ ಭಾರತದ ಗ್ರಾಹಕ ಹಕ್ಕುಗಳ ಸಮನ್ವಯ ಸಮಿತಿ (ಸಿ.ಸಿ.ಸಿ) ಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಧನರಾಜ.ಈ ಆಯ್ಕೆ.
ಗಂಗಾವತಿ: ಕಂಜ್ಯೂಮರ್ ಕಾನ್‌ಫೆಡರೇಷನ್ ಆಫ್ ಇಂಡಿಯಾ (ಸಿ.ಸಿ.ಐ) ದ ಅಂಗಸಂಸ್ಥೆಯಾದ ಗ್ರಾಹಕರ ಸಮನ್ವಯ ಸಮಿತಿ (ಸಿ.ಸಿ.ಸಿ), ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ.
ಇದು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಗೋವಾ ರಾಜ್ಯಗಳ ೫೬ ಗ್ರಾಹಕರ ಸಮಿತಿಗಳನ್ನು ಒಳಗೊಂಡಿದೆ.
ಈ  ಸಮಿತಿಯ ಕರ್ನಾಟಕ ರಾಜ್ಯ ಘಟಕದ ಚೇರ್ಮನ್ ಆಗಿ ಶಿಕ್ಷಣ ತಜ್ಞ, ಸಾಮಾಜಿಕ ಹೋರಾಟಗಾರ ೩೭೧(ಜೆ) ಸಮಿತಿಯ ಸಂಚಾಲಕ ಧನರಾಜ್ ಈ ರವರು ನಾಮನಿರ್ದೇಶನ ಗೊಂಡಿದ್ದಾರೆ.
ಈ ತೀರ್ಮಾನವನ್ನು ಜುಲೈ -೩೦ ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯನ್ನು ಸಿ.ಸಿ.ಐ ಅಧ್ಯಕ್ಷರಾದ ಡಾ. ಅನಂತ ಶರ್ಮಾರವರ ನೇತೃತ್ವದಲ್ಲಿ ನಡೆಸಲಾಯಿತು ಹಾಗೂ ಸಿ.ಸಿ.ಸಿ ಯ ಚೇರ್ಮನ್ ಎಸ್. ಚಕ್ರಪಾಣಿಯವರು ಘೋಷಣೆ ಮಾಡಿದ್ದಾರೆ.
ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಯ ರಚನೆ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕದ ಹೊಣೆಯನ್ನು ನೂತನ ಚೇರ್ಮನ್‌ರಾದ ಧನರಾಜ್ ಈ ರವರಿಗೆ ವಹಿಸಲಾಯಿತು.
ಸಿ.ಸಿ.ಸಿ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಗ್ರಾಹಕರ ಹಕ್ಕುಗಳ ಜಾಗೃತಿ ಮತ್ತು ರಕ್ಷಣೆ, ಆಹಾರ ಕಲಬೆರಕೆ, ದಾರಿತಪ್ಪಿಸುವ ಜಾಹೀರಾತುಗಳ ಕುರಿತ ಜಾಗೃತಿ, ಕಾನೂನು ಹೋರಾಟ ನೆರವು, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತ ಜಾಗೃತಿಯಂತಹ ಕಾನೂನಾತ್ಮಕ ಹೋರಾಟ ಹಾಗೂ ನೆರವು ಒದಗಿಸುತ್ತಿದೆ.
ಇದರಡಿಯಲ್ಲಿ ೫೬ ಪ್ರಮುಖ ಗ್ರಾಹಕ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. “ಸಂಕೀರ್ಣವಾದ ಇಂದಿನ ಕಾರ್ಪೋರೇಟ್ ಯುಗದಲ್ಲಿ ಗ್ರಾಹಕರು ಎದುರಿಸುತ್ತಿರುವ ವಂಚನೆಗಳು ಇನ್ನೂ ಸಂಕೀರ್ಣವಾಗಿದ್ದು, ಇಷ್ಟೊಂದು ಅಗಾಧವಾದ ಕ್ಷೇತ್ರದ ನಿರ್ವಹಣೆಗೆ ನಾನು ಯೋಗ್ಯನೆಂದು ಭಾವಿಸಿ, ನನಗೆ ಈ ಜವಾಬ್ದಾರಿಯನ್ನು ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಈ ಹೊಣೆಗಾರಿಕೆಗೆ ಪೂರ್ಣನ್ಯಾಯ ಒದಗಿಸುವ ದೃಢನಂಬಿಕೆಯಿದ್ದು, ಈಗಾಗಲೇ ೨೭೦೦ ಜನ ನ್ಯಾಯ ಹಾಗೂ ಆರೋಗ್ಯ ಕ್ಷೇತ್ರದ ತಜ್ಞ ಸದಸ್ಯರನ್ನು ಒಳಗೊಂಡ ಸಿ.ಸಿ.ಸಿ ಯ ಸಹಕಾರ ಈ ನಿಟ್ಟಿನಲ್ಲಿ ಪಡೆಯುವೆ” ಎಂದು ರಾಜ್ಯಾಧ್ಯಕ್ಷ ಧನರಾಜ್ ಈ. ಈ ಮೂಲಕ ತಿಳಿಸಿದರು.
ಸರ್, ನನ್ನ ಕ್ಸಾನ್ಸರ್ ನೋವಲ್ಲಿ ಸ್ವಾಂತನ ನೀಡಿದ್ದು ನನ್ನ ಹಾಡು. ನಾನು ಸ್ನೇಹ ತೀರ್ಥಹಳ್ಳಿ

ಸಾರ್, ನಮಸ್ಕಾರ. ನನ್ನ ಹೆಸರು ಸ್ನೇಹ, ಊರು ತೀರ್ಥಹಳ್ಳಿ. ನನಗೆ ಸಂಗೀತವೇ ಉಸಿರು, ಕನಸು, ಜೀವನದ ಭಾಗವಾಗಿದೆ. ನಾಲ್ಕನೇ ತರಗತಿಯಿಂದಲೇ ವೇದಿಕೆ ಮೇಲೆ ಹಾಡುತ್ತಿದ್ದೆ.

ಪಿಯುಸಿವರೆಗೂ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಗಳಿಸುತ್ತಿದ್ದೆ. ಮದುವೆಯ ನಂತರ ಬೇರೆ ಊರಿಗೆ ಹೋಗಬೇಕಾಯಿತು. ಅಲ್ಲಿ ನನ್ನನ್ನು ಗುರುತಿಸುವವರಿಗೆ ಸ್ವಲ್ಪ ಸಮಯ ಬೇಕಾಯಿತು.

ಒಮ್ಮೆ ಮನಸ್ಸು ಮಾಡಿ ಒಂದು ಸ್ಪರ್ಧೆಗೆ ಹೋದೆ. ಅಲ್ಲಿ ಭಾವಗೀತೆ ಹಾಗೂ ಜನಪದ ಗೀತೆ ಸ್ಪರ್ಧೆ ಇತ್ತು. 125 ಜನ ಸ್ಪರ್ಧಿಗಳು ಇದ್ದರು. ಎಲ್ಲರೂ ಚೆನ್ನಾಗಿ ಹಾಡಿದರು. ನಾನು “ಈ ಆಗಸ ಇದ್ದಾರೆ…” ಎಂಬ ಭಾವಗೀತೆ ಹಾಡಿದೆ.

ಅದಕ್ಕೆ ನನಗೆ ಪ್ರಥಮ ಸ್ಥಾನ ಲಭಿಸಿತು. ಅದಾಗಿನಿಂದ ಸ್ಥಳೀಯವಾಗಿ ನಾನು ಹಾಡುವ ಅವಕಾಶಗಳು ಹೆಚ್ಚಾದವು.

ಭಜನೆ ಕಾರ್ಯಕ್ರಮಗಳು, ಪ್ರಾರ್ಥನೆ ಹಾಡುಗಳು ಎಲ್ಲ ಕಡೆ ಕರೆ ಬರುತ್ತಿತ್ತು. ಅದರೊಡನೆ ನನ್ನ ಪ್ರಯಾಣ ಮುಂದುವರಿದಿತು.

ಸ್ನೇಹಿತರು ಕರೋಕೆ ಬಗ್ಗೆ ತಿಳಿಸಿದರು. ಮ್ಯೂಸಿಕ್ ಗೊತ್ತಿದ್ದರಿಂದ ಕರೋಕೆ ಹಾಸುಹೊಕ್ಕಾಗಲಿಲ್ಲ. ಮೊದಲಿಗೆ “ಈ ಹಸಿರು ಸಿರಿಯಲಿ ನವಿಲೆ…” ಹಾಡನ್ನು ಗೈದಿದ್ದೆ. ಈ ಹಾಡು ಜನಪ್ರಿಯವಾಯಿತು, ಇಂದಿಗೂ ನಾನು ಅದನ್ನು ಹಾಡುತ್ತೇನೆ.

ಇದು ನನ್ನ ಸಂಗೀತ ಪಯಣದ ಮತ್ತೊಂದು ಅಧ್ಯಾಯವಾಯಿತು. ಗಂಡ, ಎರಡು ಮಕ್ಕಳು ಸೇರಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ಒಂದು ದಿನ ಹಠಾತ್‌ ನನ್ನ ಜೀವನದಲ್ಲಿ ಬದಲಾವಣೆವಾಯಿತು.

ನನಗೆ ಕ್ಯಾನ್ಸರ್ ಎಂದು ಪತ್ತೆಯಾಯಿತು. 38 ವರ್ಷದ ವಯಸ್ಸು, ಚಿಕ್ಕ ಮಕ್ಕಳ ಜೊತೆ ಈ ಸುದ್ದಿ ಕೇಳಿ ಭಯವೂ, ತಲೆಕೆಡಿಸಿಕೊಳ್ಲುವಂತ ಪರಿಸ್ಥಿತಿಯೂ ಉಂಟಾಯಿತು. ಜ್ಯೋತಿಷ್ಯ ನಂಬುವುದಕ್ಕಿಂತ ಚಿಕಿತ್ಸೆಯ ಕಡೆ ನಿರ್ಧಾರ ಮಾಡಿದೆ. ಆದರೆ ಆಸ್ಪತ್ರೆಗೆ ಹೋಗಿದಂತೆ ಅನುಭವಿಸಿದ ನೋವು ಮರೆತೇ ಆಗಲ್ಲ.

ಟ್ರೀಟ್ಮೆಂಟ್ ಸುಲಭವಾಗಿರಲಿಲ್ಲ. ನರಕ ಅನುಭವಿಸಿದ್ದೆ. ಮನಸ್ಸಿಗೆ ತಾನೇ ಧೈರ್ಯ ಹೇಳಿಕೊಂಡು ಮುಂದುವರಿಯಬೇಕಾಯಿತು. ಅವರು ಕೇಳಿದಂತೆ ನನ್ನ ಹಾಡುಗಳು ನನ್ನಿಗೆ ಶಕ್ತಿ ಕೊಟ್ಟವು. ಪುನಃ ಹಾಡಲು ಪ್ರಾರಂಭ ಮಾಡಿದೆ.

ಭಾವಗೀತೆ, ಜನಪದ ಗೀತೆಗಳ ಮೂಲಕ ನನ್ನ ನೋವನ್ನು ಮರೆತುಬಿಡುತ್ತಿದ್ದೆ. ಕರೋಕೆ ಮೂಲಕ ಅಭ್ಯಾಸ ಮುಂದುವರಿಸಿದೆ. ಅಂತೆಯೇ ಟ್ರೀಟ್ಮೆಂಟ್ ಮುಗಿಯಿತು. ನಾನು ‘ನಾರ್ಮಲ್’ ಎಂಬ ವರದಿ ಪಡೆದೆ.

ಆದರೆ ಮಾತ್ರೆಗಳನ್ನು ನಿಲ್ಲಿಸಲಿಲ್ಲ. ಅದರ ಜೊತೆಗೆ ಇನ್ನೂ ಹಲವು ಕಾಯಿಲೆಗಳು ನನ್ನ ಜೀವನದಲ್ಲಿ ಸೇರಿಕೊಂಡವು. ಸಂಗೀತವೇ ಆ ಸಂಕಷ್ಟದಿಂದ ದಾರಿ ತೋರಿಸಿತು. ಕ್ಯಾನ್ಸರ್ ಬಂದವನು ಸತ್ತೇ ಹೋಗ್ತಾನೆ ಎಂಬ ಜನರ ನಂಬಿಕೆಗೆ ಬದಲಾಗಿಸಲು ನಾನು ಮುಂದಾದೆ. ದೇವರು ನನ್ನಲ್ಲಿ ಆತ್ಮಬಲ ತುಂಬಿದನು.

ನಾನು ಮ್ಯೂಸಿಕ್‌ ಮೂಲಕ ಬದುಕನ್ನು ಪುನರಾಯಿಸಿಕೊಂಡೆ. ಗುಂಪಿನಲ್ಲಿ ಹಾಡುತ್ತಿದ್ದಾಗ ನನ್ನ ಪ್ರತಿಭೆ ಮಸುಕಾಗಿ ಹೋಗುತ್ತಿತ್ತು. ಆದ್ದರಿಂದ ಸಿಂಗಲ್ ಹಾಡುಗಳನ್ನು ಮಾಡಲು ನಿರ್ಧರಿಸಿದೆ.

ಸ್ನೇಹಿತರು ನನ್ನ ಮೇಲೆ ನಂಬಿಕೆ ಇಟ್ಟು, ವೇದಿಕೆಯಲ್ಲಿ ಐದು ಹಾಡುಗಳಿಗೆ ಅವಕಾಶ ಕೊಟ್ಟರು. ಆಗಿನಿಂದ ನನ್ನ ಪ್ರಯಾಣ ಮುಂದುವರಿಯಿತು. ಎಲ್ಲೆಡೆ ನಾನು ಪ್ರೀತಿಯಿಂದ ಕರೆಯಲ್ಪಡುತ್ತಾ ಹಾಡುತ್ತಿದ್ದೇನೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಆನ್‌ಲೈನ್ ವೇದಿಕೆ ನನಗೆ ಹೊಸ ಅಂಗಳವಾಯಿತು. ಅಲ್ಲಿ ಹಾಡಿದ ಹಾಡು ಆಯ್ಕೆ ಆಯ್ತು. ಮಧು ನಾಯ್ಕ್ ಲಂಬಾಣಿ ಅವರು ನನ್ನಲ್ಲಿ ಆಸಕ್ತಿಯಿಂದ ಮಾತನಾಡಿದರು. ಅವರು ಉತ್ತಮ ಸಂಘಟಕರಾಗಿದ್ದು ನಮ್ಮಂತಹ ಕಲಾವಿದರಿಗೆ ಮುಖ್ಯ ವಾಹಿನಿಗೆ ತಲುಪಲು ಸಹಾಯ ಮಾಡಿದ್ದಾರೆ.

ಇಂದಿನವರೆಗೆ 300ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಮದುವೆ, ಹಬ್ಬ, ಶುಭಸಮಾರಂಭ ಎಲ್ಲೆಡೆ ಗಾಯನ ಮಾಡಿದ್ದೇನೆ. ನಾನು ಒಬ್ಬಳಾಗಿ ಹೋಗುವುದು ಸರಿಯೆಂದು ಅನಿಸದ ಕಾರಣ ನನ್ನ ಮಗಳಿಗೂ ಹಾಡು ಕಲಿಸಿದ್ದೇನೆ.
ಅವಳು ನನ್ನ ಜೊತೆಗೆ 6ನೇ ವರ್ಷದಿಂದಲೇ ಹಾಡುತ್ತಿದ್ದಾಳೆ. ಇಡೀ ಕುಟುಂಬ ನನ್ನ ಹಿಂದೆ ನಿಂತಿದೆ.

“ನಂದೇ ಸ್ನೇಹ ತೀರ್ಥಹಳ್ಳಿ” ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದೇನೆ. ಜನ ನನ್ನ ಹಾಡುಗಳನ್ನು ಕೇಳುತ್ತಾರೆ. ಇದರಿಂದ ಮತ್ತಷ್ಟು ಕಲಿಕೆಗೆ ಸಹಾಯವಾಗುತ್ತಿದೆ. ಎಲ್ಲೆಡೆ “ಯೂಟ್ಯೂಬ್ ಸಿಂಗರ್ ಸ್ನೇಹ ಅಲ್ವಾ?” ಎನ್ನುತ್ತಾರೆ. ಇದು ನನಗೆ ಸಂತೋಷ, ಧೈರ್ಯ ಮತ್ತು ಬಲವನ್ನು ನೀಡುತ್ತದೆ.

27 ರಂದು ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ಸಿಕ್ಕಿತು. ಅದು ನನ್ನ ಜೀವನದ ಮರೆಯಲಾರದ ಕ್ಷಣ. ಗುರುರಾದ ಗೊರೂರು ಅನಂತರಾಜು ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ನನ್ನ ಕಷ್ಟ ಧೈರ್ಯದಿಂದ ಕೇಳಿದ ನಿಮಗೆ ಅನಂತ ಧನ್ಯವಾದಗಳು.
ನಿಮ್ಮ ಸ್ನೇಹ, ತೀರ್ಥಹಳ್ಳಿ.

ಶನಿವಾರ ಸಂಜೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಕಾರ್ಯಕ್ರಮ

ಶನಿವಾರದಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಾಸನದ ಉತ್ತರ ಬಡಾವಣೆಯಲ್ಲಿ ಸ್ಥಾಪಿತ ನಾಟ್ಯ ಕಲಾ ನಿವಾಸ್ ಸಂಸ್ಥೆಯು ಆಗಸ್ಟ್ 2 ರಂದು 18ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.

ಈ ವಿಶೇಷ ದಿನದ ಪ್ರಯುಕ್ತ ಸಂಜೆ ನಾಲ್ಕು ಗಂಟೆಗೆ ‘ಹರಿಹರ ಸುತ’ ಎಂಬ ಅಯ್ಯಪ್ಪನ ಚರಿತ್ರೆ ಆಧಾರಿತ ನೃತ್ಯ ನಾಟಕದ ಪ್ರದರ್ಶನವಿದೆ.

ನಂತರ, ಸಂಜೆ ಆರು ಗಂಟೆಯಿಂದ ಕರ್ನಾಟಕದ ಖ್ಯಾತ ನೃತ್ಯ ಕಲಾವಿದರು ‘ನಾಟ್ಯ ದಾಸೋಹಂ’ ಕಾರ್ಯಕ್ರಮದಲ್ಲಿ ಹರಿದಾಸರ ರಚನೆಗಳನ್ನು ಹಾಡಿ ನೃತ್ಯಿಸುತ್ತಾರೆ.

ಸಂಸ್ಥೆಯ ಪ್ರಾಂಶುಪಾಲ ಉನ್ನತ್ ಜೈನ್ ಅವರು ಈ ಕಾರ್ಯಕ್ರಮದ ಮಾಹಿತಿ ನೀಡಿದ್ದು, ಸಾರ್ವಜನಿಕರನ್ನು ಭಾಗವಹಿಸಲು ಆಹ್ವಾನಿಸಿದ್ದಾರೆ.

ಸಂಗೀತವೇ ನನ್ನ ಉಸಿರು – ನಾಗರಕಟ್ಟೆಯ ಗಾನಕೋಗಿಲೆ ಸಿ. ಹನುಮಂತನಾಯ್ಕ

ಕಳೆದ 12 ವರ್ಷಗಳಿಂದ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದೇನೆ.

ಜಾನಪದ ಗೀತೆ ವೈಯಕ್ತಿಕ ಮತ್ತು ಸಮೂಹ ಗಾಯನ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಹಿಂದೂಸ್ತಾನಿ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ.

ಕರ್ನಾಟಕ ಶಾಸ್ತ್ರೀಯ ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಲಾ ಪ್ರೀತಿಗೆ ಮತ್ತಷ್ಟು ಬೆಳಕು ಹರಿಸಿದ್ದೇನೆ.

ಇಂತಹ ವೈವಿಧ್ಯಮಯ ಪ್ರತಿಭೆ ಹೊಂದಿರುವ ವ್ಯಕ್ತಿ ನಾಗರಕಟ್ಟೆಯ ಸಿ. ಹನುಮಂತನಾಯ್ಕ, ಪ್ರಸ್ತುತ ದಾವಣಗೆರೆಯ ದುಗ್ಗಮ್ಮಪೇಟೆಯ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿದ್ದಾರೆ.

ಇವರು ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವುದರ ಜೊತೆಗೆ ಅಂಗವಿಕಲರ ರಾಜ್ಯ ಮಟ್ಟದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.

ಹುಟ್ಟಿದ 14 ತಿಂಗಳ ನಂತರ ಪೋಲಿಯೋ ರೋಗದಿಂದ ವಿಕಲಚೇತನರಾದ ಇವರು ತಂದೆ ಚಂದ್ರನಾಯ್ಕ ಅವರಿಂದ ಪ್ರೇರಣೆಯುಂಟಾಯಿತು ಎಂದು ಕೃತಜ್ಞತಾಪೂರ್ವಕವಾಗಿ ನೆನಪಿಸುತ್ತಾರೆ.

ತಾಯಿ ಪುಟ್ಟಿಬಾಯಿ, ಪತ್ನಿ ಪವಿತ್ರಾ, ಮಗ ವಿಕ್ರಮ್ ನಾಯ್ಕ ಹಾಗೂ ಮಗಳು ದ್ರುವೀಕ ಅವರ ಪ್ರೀತಿಯ ಕುಟುಂಬವಾಗಿದೆ.

ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನಾಗರಕಟ್ಟೆಯಲ್ಲಿಯೇ ಮುಗಿಸಿ, ದಾವಣಗೆರೆಯ ಮೋತಿಯಪ್ಪ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.

ಡಿ.ಎಡ್ ತರಬೇತಿಯನ್ನು ತುಮಕೂರಿನ ಚಿಕ್ಕನಹಳ್ಳಿ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪಡೆದು, ಧಾರವಾಡದಿಂದ ಬಿಎ, ಇಗ್ನೋದಿಂದ ಬಿ.ಎಡ್ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಪಡೆದಿರುವ ಇವರು, 2010ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಶಿಕ್ಷಕರ ಹುದ್ದೆಗೆ ಆಯ್ಕೆಯಾದರು.

ಬಾಲ್ಯದಲ್ಲಿಯೇ ತಂದೆ ಹಾಡುತ್ತಿದ್ದ ಲಾವಣಿ, ಕೋಲಾಟ, ಭಜನೆ ಪದಗಳು ಇವರಿಗೆ ಸಂಗೀತದ ಪ್ರೇರಣೆಯಾಗಿದ್ದು, 4ನೇ ತರಗತಿಯಿಂದ ಹಾಡುಗಳನ್ನು ಹಾಡತೊಡಗಿದರು.

ಇವರೆಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ 130ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಗಾನಕೋಗಿಲೆ. ಅವರಿಗೆ ‘ಕಲಾ ವಿಭೂಷಣ’, ‘ಶಿಕ್ಷಣ ಸೌರಭ’ ಪ್ರಶಸ್ತಿಗಳು ಲಭಿಸಿವೆ.

ಇವರ ಮತ್ತೊಂದು ವಿಶೇಷತೆ ಎಂದರೆ ಗಂಡು ಹಾಗೂ ಹೆಣ್ಣು ಧ್ವನಿಯಲ್ಲಿ ಹಾಡಬಹುದಾದ ಅಪರೂಪದ ಪ್ರತಿಭೆ. ಮಕ್ಕಳಿಗೂ ಈ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ತ್ರಿಚಕ್ರ ವಾಹನದಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುವ ಮೂಲಕ ಇವರು ಸಾಮಾಜಿಕ ಕಳಕಳಿಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಇವರು ಕರ್ನಾಟಕ ರಾಜ್ಯ ಬರಹಗಾರರ ಸಂಘದ (ರಿ.) ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ್ ಲಂಬಾಣಿ ಅವರು ಆಯೋಜಿಸಿದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹಾಡಿ “ಕರ್ನಾಟಕ ಕರುನಾಡ ಕೋಗಿಲೆ” ಪ್ರಶಸ್ತಿಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಅವರು ಹಾಡಿದ ಕರೋಕೆ ಗೀತೆಯನ್ನು ತೀರ್ಪುಗಾರನಾಗಿ ನಾನು ಆಲಿಸಿದ್ದು, ಅವರ ಸಾಮೂಹಿಕ ನಾಡಗೀತೆ ವಿಶೇಷವಾಗಿ ಗಮನಸೆಳೆದಿತು.

“ಹತ್ತನೇ ವಯಸ್ಸಿನಿಂದಲೇ ನಾನು ಜಾನಪದ, ಭಾವಗೀತೆ, ಲಾವಣಿ, ಚಿತ್ರಗೀತೆಗಳನ್ನೇ ಹಾಡುತ್ತಾ ಕಲಿಸುತ್ತಾ ಬಂದಿದ್ದೇನೆ ಸಾರ್,” ಎನ್ನುತ್ತಾರೆ ಅವರು.

“ನಮ್ಮ ಶಾಲೆಯ ಎರಡನೇ ತರಗತಿಯ ಮಕ್ಕಳು ನಾಡಗೀತೆಗಳನ್ನು ಕರೋಕೆಯೊಂದಿಗೆ ತುಂಬಾ ಸೊಗಸಾಗಿ ಹಾಡುತ್ತಾರೆ ಸಾರ್,” ಎಂದು ಸಂತೋಷದಿಂದ ಹೇಳುತ್ತಾರೆ.

“ವಿಕಲಚೇತನ ಎಂದು ಕೆಲವೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆಗ ಎರಡು ಹಾಡುಗಳನ್ನು ಹಾಡಿ ತೃಪ್ತಿಪಟ್ಟುಕೊಳ್ಳುತ್ತೇನೆ,” ಎನ್ನುತ್ತಾರೆ ಅವರು ಭಾವೋದ್ರೇಕದಿಂದ.

“ನನ್ನ ಮನಸ್ಸು, ಹೃದಯ ಹರ್ಷಗೊಳ್ಳುತ್ತದೆ. ನೋವು ಮರೆತುಹೋಗುತ್ತದೆ. ನಿಜಕ್ಕೂ ಸಂಗೀತವೇ ನನ್ನ ಉಸಿರು,” ಎಂದು ಕಣ್ಣೀರಿನಿಂದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ :ಹುಣಸಿನಕೆರೆ ಬಡಾವಣೆ,
29ನೇ ವಾಡ್೬, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201

ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್

ನನ್ನ ಹೆಸರು ಅಶ್ವಿನಿ ಹರೀಶ್. ನಾನು 25-4-1984 ರಂದು ಹೊನ್ನವಳ್ಳಿಯಲ್ಲಿ ಜನಿಸಿದ್ದೇನೆ. ಈ ಊರು ಚಲನಚಿತ್ರ ಹಾಸ್ಯನಟ ಹೊನ್ನವಳ್ಳಿ ಕೃಷ್ಣ ಅವರ ಹುಟ್ಟೂರು.

ನನ್ನ ತಂದೆ-ತಾಯಿಗೆ ಎಂಟು ಮಂದಿ ಮಕ್ಕಳಿದ್ದು, ನಾನು ಏಳನೇ ಸ್ಥಾನದಲ್ಲಿದ್ದೇನೆ. ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಹೇಮಾವತಿ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದೇನೆ.

ಚಿಕ್ಕಂದಿನಿಂದಲೇ ನನಗೆ ಹಾಡು ಹಾಡುವುದು ಬಹಳ ಇಷ್ಟವಾಗಿತ್ತು. ಶಾಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದೆ.

ಹೊಲದ ಹತ್ತಿರ ಕೆಲಸ ಮಾಡುವಾಗ ದನ ಮೇಯಿಸುವಾಗ ನನಗೆ ನಾನೇ ಹಾಡಿಕೊಳ್ಳುತ್ತಿದೆ. ಮನೆಯಲ್ಲಿ ಕೆಲಸ ಮಾಡುವಾಗಲು ಪಾತ್ರೆ ತೊಳೆಯುವಾಗಲು ಮನೆ ಸಾರಿಸುವಾಗಲೂ ಹಾಡು ಹೇಳುತ್ತಲೇ ಇದ್ದೆ.

ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಅರಕಲಗೂಡು ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಸೇರಿದ್ದೆ. ಆದರೆ ಆ ವೇಳೆ ನನ್ನ ತಂದೆ ನಿಧನರಾದರು.

ಕುಟುಂಬದ ಆರ್ಥಿಕ ತೊಂದರೆಗಳಿಂದಾಗಿ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಆದರೂ ನಾನು ಹಾಡು ಹೋದ ಹಾದಿಯನ್ನು ತೊರೆದಿಲ್ಲ.

2006 ರಲ್ಲಿ “ಈ ಟಿವಿಯ ಹಾಡಿಗೊಂದು ಹಾಡು” ಕಾರ್ಯಕ್ರಮದ ಆಡಿಶನ್‌ ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದೆ.

ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಬಿ.ಆರ್. ಛಾಯ ಮತ್ತು ರವಿಶಂಕರ್ ಜ್ಯೂರಿಯಾಗಿ ಭಾಗವಹಿಸಿದ್ದರು.

ಅರಕಲಗೂಡಿಗೆ ಮನೆ ಬದಲಾಯಿಸಿದ ನಂತರ, ಜನಪದ ಕಲಾವಿದ ದೇವಾನಂದ್ ವರಪ್ರಸಾದ್ ಅವರು ಬೇಸಿಗೆ ಶಿಬಿರ ಆಯೋಜಿಸಿದ್ದರು.

ಅವರಿಗೆ ನನ್ನ ಮಗಳನ್ನು ಸೇರಿಸಲು ಹೋಗಿ ನನ್ನಲ್ಲಿದ್ದ ಗಾಯನ ಆಸಕ್ತಿಯನ್ನು ನೋಡಿ, ಅವರಿಗೆ ಹಾಡಲು ಅವಕಾಶ ನೀಡಿದರು.

ಮೈಸೂರು ದಸರಾ, ಕೋಟಿ ಕಂಠ ಗೀತೆ, YESHTEL ಟಿವಿ ಕಾರ್ಯಕ್ರಮಗಳಲ್ಲಿ ಜನಪದ ಗೀತೆಗಳನ್ನು ಹಾಡಿದ್ದೇನೆ.

ಮೈಸೂರು ಕಿರು ರಂಗಮಂದಿರದ ಜಾನಪದ ಹಬ್ಬದಲ್ಲಿ ‘ಸೋಜಿಗಾದ ಸೂಜುಮಲ್ಲಿಗೆ’ ಹಾಡು ಹಾಡಿ ಶ್ರೋತೃಗಳ ಮನಗೆದ್ದಿದ್ದೆ.

ದೇವಾನಂದ್ ಅವರ ಸಂಗೀತ ಸಂಯೋಜನೆಯಲ್ಲಿ “ದೂರದ ಬೆಟ್ಟ ನುಣ್ಣಗೆ” ಎಂಬ ನಾಟಕದಲ್ಲಿ ನಾನು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದೆ.

ಸೋಬಾನೆ, ರಾಗಿ ಬೀಸೋ ಪದಗಳ ತರಬೇತಿ ಅವರು ನೀಡಿದರು. ಅವರ ಮಾರ್ಗದರ್ಶನದಿಂದ ನಾನು ಹೊಸ ಶೈಲಿಗಳನ್ನು ಕಲಿತೆ.

ಶೇಖರ್ ಅವರು ನನ್ನ ಚಲನಚಿತ್ರ ಗೀತೆಗಳ ಗಾಯನದ ಶೈಲಿಗೆ ಮಾರ್ಗದರ್ಶನ ನೀಡಿದ್ದಾರೆ. ಕರೋಕೆ ಪಾಠ ಕಲಿಸಿದ್ದಾರೆ.

ಅವರು ಆಯೋಜಿಸಿದ್ದ “ಸ್ವರ ಸಂಭ್ರಮ” ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನ ಹಾಗೂ ಸ್ಮರಣಿಕೆಗಳನ್ನು ಗಳಿಸಿದ್ದೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಯೂತ್ ಮೇಳದಲ್ಲಿ ಜಿಲ್ಲಾ ಮಟ್ಟ, ವಿಭಾಗ ಮಟ್ಟ ಜಯಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾದೆ.

ಆದರೆ ಕೋವಿಡ್ ಕಾರಣದಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದು ನನ್ನ ಸಂಗೀತ ಪಯಣದಲ್ಲಿ ಒಂದು ನಿರಾಸೆಯ ಹಂತವಾಯಿತು.

‘ಲಹರಿ’ ಎಂಬ ತಂಡವನ್ನು ತಯಾರಿಸಿ ವಿವಿಧ ಹಬ್ಬಗಳಲ್ಲಿ ಭಾಗವಹಿಸಿದ್ದೆ. ಹಳ್ಳಿ ಸಂಸ್ಕೃತಿ ಹಬ್ಬದಲ್ಲಿ ನನ್ನ ಮಗಳು ಹಾಗೂ ಮಕ್ಕಳು ಸೇರಿಕೊಂಡಿದ್ದೆವು.

ಅಲ್ಲಿ ಭಜನೆ, ನೃತ್ಯ, ಜನಪದ ಗೀತೆಗಳು, ಆರತಿ ಶಾಸ್ತ್ರದ ಹಾಡುಗಳೊಂದಿಗೆ ಪ್ರಥಮ ದ್ವಿತೀಯ ಬಹುಮಾನ ಗಳಿಸಿದ್ದೆವು.

ಅರಕಲಗೂಡು ದಸರಾ, ಗಣೇಶೋತ್ಸವ, ಶಿಕ್ಷಕರ ದಿನಾಚರಣೆಯಲ್ಲಿ ನಮ್ಮ ತಂಡದಿಂದ ಹಾಡುಗಳನ್ನು ಪ್ರಸ್ತುತಪಡಿಸಿದ್ದೆವು.

ಹಾಸನ ಜಿಲ್ಲೆಯ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್ ಡಿ. ಉಡುವಾರೆ ಅವರು ಕರೀಂಖಾನ್ ಪ್ರಶಸ್ತಿ ನೀಡಿ ಗೌರವಿಸಿದರು.

ಕರ್ನಾಟಕ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯಕ್ ಲಂಬಾಣಿ ಅವರು ನಡೆಸಿದ ಆನ್‌ಲೈನ್ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಗೌರವ ಪಡೆದೆ.

2024ರ ಶಿವಮೊಗ್ಗ “ಕನ್ನಡ ನುಡಿ ವೈಭವ” ಕಾರ್ಯಕ್ರಮದಲ್ಲಿ ನನಗೆ ‘ಗಾನಕೋಗಿಲೆ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್,
ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ,
ಹಾಸನ-573201

ಪತ್ರಿಕಾ ಮಾದ್ಯಮ ಪ್ರಜಾಪ್ರಭುತ್ವದ ಪ್ರಾಣವಾಯು: ಕೆ.ವಿ ಪ್ರಭಾಕರ್

ಬೆಂಗಳೂರು: ಮಾಧ್ಯಮಗಳು ಪ್ರಜಾಪ್ರಭುತ್ವದ ಪ್ರಾಣವಾಯು ಎನ್ನುವ ಅಂಬೇಡ್ಕರ್ ಅವರ ಮಾತು ಗಟ್ಟಿಯಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅಭಿಪ್ರಾಯಪಟ್ಟರು.

ಅವರು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ “ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ”ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹಿರಿಯ ಪತ್ರಕರ್ತರಿಗೆ ಮಾಧ್ಯಮಶ್ರೀ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು. ಸ್ವಾತಂತ್ರ‍್ಯಹೋರಾಟವನ್ನು ಮುನ್ನಡೆಸಿದ್ದ ಭಾರತೀಯ ಪತ್ರಿಕೋದ್ಯಮ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಾತಂತ್ರ್ಯದ ನಂತರ ಅಭಿವೃದ್ಧಿಯಾದ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮದ ಮೂಲಕ ಸಮಾಜವನ್ನು ಎಚ್ಚರಿಸುವ ಹೊಣೆಗಾರಿಕೆ ನಿರ್ವಹಿಸಿದೆ. ಆದರೆ ಇಂದು ಅರೆಸತ್ಯ ಮತ್ತು ಸುಳ್ಳು ಸುದ್ದಿಗಳು ಭಾರತೀಯ ಪತ್ರಿಕೋದ್ಯಮದ ಈ ಮಹೋನ್ನತ ಘನತೆಯನ್ನು ಹಾಳುಗೆಡಹುವ ರೀತಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರೂ, ಸಂಪಾದಕರೂ ಆಗಿದ್ದ ಅಂಬೇಡ್ಕರ್ ಅವರು ಸಂಘಟನೆ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಸಂಘಟಕ ಧ್ವನಿ ಸರ್ಕಾರದ ಮತ್ತು ಸಮಾಜದ ಕಣ್ಣು ತೆರೆಸುತ್ತವೆ ಎಂದಿದ್ದರು. ಪತ್ರಿಕಾ ಸಂಘಟನೆಗಳು, ಪತ್ರಕರ್ತರ ಸಂಘಗಳು ಮಾಧ್ಯಮವನ್ನು ಜನಪರವಾಗಿ, ಭಯಮುಕ್ತವಾಗಿಡಲು ಪತ್ರಕರ್ತರು ಯಾವುದೇ ಹಿಂಜರಿಕೆಯಿಲ್ಲದೆ ವರದಿ ಮಾಡಲು ಇದು ಸಹಾಯ ಮಾಡುವ ರೀತಿಯಲ್ಲಿ ಶ್ರಮಿಸಬೇಕು. ಪತ್ರಕರ್ತರಿಗೆ ನೈತಿಕ ಮಾರ್ಗಸೂಚಿಗಳನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತ ಹೊಕ್ಕೇರಿ ಮಲ್ಲಿಕಾರ್ಜುನ ಸೇರಿ ಸಾಧಕರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯ ವಿನಯ್ ಗುರೂಜಿ, ಅರಣ್ಯ ಸಚಿವ ಈಶ್ವರಖಂಡ್ರೆ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸಂಘದ ಪದಾಧಿಕಾರಿಗಳಿದ್ದರು.

ಸನಾತನ ಧರ್ಮ ರಕ್ಷಣೆಗೆ ಶೃಂಗೇರಿ ಶಾರದಾ ಪೀಠದ ಕೊಡುಗೆ ಅನನ್ಯ: ನಾರಾಯಣರಾವ್ ವೈದ್ಯ.

ಗಂಗಾವತಿ: ಅದ್ವೈತ ಸಿದ್ದಾಂತದ ತಳಹದಿಯ ಮೇಲೆ ಜಗದ್ಗುರು ಶ್ರೀ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾದ ಪೀಠಗಳಲ್ಲಿ ಪ್ರಥಮ ಪೀಠ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶೃಂಗೇರಿ ಶಾರದಾ ಪೀಠ ತನ್ನದೇ ಆದ ಗುರು ಪರಂಪರೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪೀಠವು ಸನಾತನ ಧರ್ಮದ ರಕ್ಷಣೆ ಹಾಗೂ ದೇಶದ ಸುಭಿಕ್ಷೆಗೆ ಮಹತ್ವವಾದ ಕೊಡುಗೆಯನ್ನು ನೀಡಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಮಂಗಳವಾರ ಶಾರದಾ ದೇವಸ್ಥಾನದಲ್ಲಿ ಜಗದ್ಗುರು ಶ್ರೀಶ್ರೀ ವಿದುಶೇಖರ ಮಹಾಸ್ವಾಮಿಗಳವರ ೩೩ನೆಯ ವರ್ಧಂತಿ ಮಹೋತ್ಸವದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ದಿವ್ಯದೃಷ್ಟಿಯ ಪರಿಣಾಮವಾಗಿ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ತಮ್ಮ ೨೨ನೇ ವಯಸ್ಸಿನಲ್ಲಿ ಜನವರಿ-೨೩, ೨೦೧೫ ರಂದು ತಮ್ಮ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಅನುಗ್ರಹಿಸಿದರು. ಬಳಿಕ ಗುರುಗಳ ಅನುಗ್ರಹದಂತೆ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಧರ್ಮ ವಿಜಯಯಾತ್ರೆ, ಪ್ರಯಾಗರಾಜ್ ಕುಂಭಮೇಳದಲ್ಲಿ ಪುಣ್ಯಸ್ನಾನ, ಕಾಶ್ಮೀರದಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಷ್ಠಾಪನೆ ಸೇರಿದಂತೆ ದೇಶ ಯುದ್ಧದ ಸ್ಥಿತಿಯಲ್ಲಿದ್ದಾಗಲೇ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಶ್ರೀ ಶಾರದಾ ಪೀಠ ಪ್ರಸಾದದ ರೂಪದಲ್ಲಿ ಎರಡು ಲಕ್ಷ ರೂಪಾಯಿ ಕಳಿಸಿಕೊಟ್ಟರು. ದೇಶ ಕಾಯುವ ಯೋಧರಿಗಾಗಿ ಪ್ರತಿವರ್ಷ ಶಾರದಾ ಪೀಠದಿಂದ ಆರ್ಥಿಕ ನೆರವು ನೀಡುತ್ತಿರುವುದು ಅವರ ಅಪ್ರತಿಮ ದೇಶಭಕ್ತಿಯನ್ನು ಬಿಂಬಿಸುತ್ತದೆ. ನಗರದಲ್ಲಿ ಶ್ರೀಮಠ ಸ್ಥಾಪನೆಗೊಂಡು ಎಂಟು ವರ್ಷಗಳು ಪೂರೈಸುತ್ತಿದ್ದು, ಉಭಯ ಜಗದ್ಗುರುಗಳ ಅನುಗ್ರಹದಂತೆ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬರಲಾಗಿದೆ ಎಂದು ತಿಳಿಸಿದ ಅವರು, ಸಮರ್ಥ ಪೀಠಾಧೀಶ್ವರರಾಗಿ ಮಠದ ಬಹು ಆಯಾಮದ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಕ್ತಿ ತುಂಬುತ್ತಿದ್ದಾರೆ. ಸನಾತನ ಧರ್ಮದ ಸಮರ್ಥ ಮಾರ್ಗದರ್ಶಕರಾಗಿ ಸಾಧನಾ ಪಥದಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಅಷ್ಟೋತ್ತರ ಪಾರಾಯಣ, ಶಿವ ಪಂಚಾಕ್ಷರಿ ಸ್ತೋತ್ರ ಪಾರಾಯಣ ಇತರೆ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ಜಗನ್ನಾಥ್ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಅನಿಲ್, ನಾಗೇಶ ಭಟ್, ಶ್ರೀನಿವಾಸ ಕರಮುಡಿ, ಭೀಮಾಶಂಕರ ಹೊಸಳ್ಳಿ, ಪವನ್ ಜೋಶಿ, ಮೋಹನ್ ಲೆಕ್ಕಿಹಾಳ, ವೇಣು, ಪ್ರಶಾಂತ್ ಜೋಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ

ವಿದುಶೇಖರ ಮಹಾಸ್ವಾಮಿಗಳ ಜನನ ತಿರುಪತಿಯಲ್ಲಿ ನಿಷ್ಠಾವಂತ ವೇದ ವಿದ್ವಾಂಸರ ಮನೆಯಲ್ಲಿ 1993ರ ಜುಲೈ 24 ರಂದು ಆಯಿತು. ಅವರ ತಂದೆ ಕುಪ್ಪಾ ವೇ ಬ್ರ.ಶ್ರೀ.ಶಿವಸುಬ್ರಹ್ಮಣ್ಯ ಅವದಾನಿ ಮತ್ತು ತಾಯಿ ಶ್ರೀಮತಿ ಸೀತಾ ನಾಗಲಕ್ಷ್ಮಿ.ಈ ದಂಪತಿಗಳ ಕಿರಿಯ ಪುತ್ರರೇ ತಿರುಪತಿಯಲ್ಲಿ ವೆಂಕಟೇಶ್ವರನ ಕೃಪೆಯಿಂದ ಜನಿಸಿ ವೆಂಕಟೇಶ ಪ್ರಸಾದರೆನಿಸಿದರು. ಐದನೇ ವಯಸ್ಸಿನಲ್ಲೇ ಅವರಿಗೆ ಬ್ರಹ್ಮೋಪದೇಶ ಆಯಿತು. ತಾತ ರಾಮಗೋಪಾಲ ಯಾಜಿಯವರಲ್ಲಿ ಬಾಲಕ ಕೃಷ್ಣ ಯಜುರ್ವೇದ ಕ್ರಮಾಂಕ ಪಾಠ ಕಲಿಯಲು ಆರಂಭಿಸಿದ್ದು ಉಪನಯನದ ನಂತರ.

2006 ರಲ್ಲಿ ತಂದೆಯವರೊಂದಿಗೆ ಬಾಲಕ ಶೃಂಗೇರಿಗೆ ಮೊದಲ ಬಾರಿ ಆಗಮಿಸಿದಾಗ ಈ ಕ್ಷೇತ್ರ ಬಾಲಕನನ್ನು ಸೆಳೆದಿರಲೇಬೇಕು. ಪುನ: 2008 ರಲ್ಲಿ ತಂದೆಯವರೊಂದಿಗೆ ಬಂದರು. ಆಗಲೇ ತಮಗೆ ಶೃಂಗೇರಿಯೇ ಕರ್ಮಭೂಮಿ ಎಂದವರ ಮನಸ್ಸು ಗಟ್ಟಿ ಮಾಡಿತ್ತು.

2009 ರಲ್ಲಿ ಮತ್ತೆ ಶೃಂಗೇರಿಗೆ ಬಂದಾಗ ಜಗದ್ಗುರುಗಳಿಂದ ತಾನು ಶಾಸ್ತ್ರ ಕಲಿಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದರು. ತಂದೆಯವರ ಅನುಮತಿ ನಂತರ ಜಗದ್ಗುರುಗಳ ಅನುಮತಿಯೂ ದೊರಕಿತು. ಕೇವಲ ಒಂದೂವರೆ ವರ್ಷದಲ್ಲಿ ಸಂಸ್ಕೃತ ಕಲಿತಿದ್ದು ಮಾತ್ರವಲ್ಲ ಕನ್ನಡದಲ್ಲಿ ಉಪನ್ಯಾಸ ನೀಡುವಷ್ಟು ಅವರು ಸಮರ್ಥರಾಗಿದ್ದರು. ಉಳಿದವರಿಗೆ ಒಂದೇ ಭಾಷೆ ಕಲಿಯಲು ಕನಿಷ್ಠ ನಾಲ್ಕು ವರ್ಷದ ಕಲಿಕೆ ಅಗತ್ಯವಾದರೆ ಇವರಿಗೆ ಇಷ್ಟು ಸ್ವಲ್ಪ ಸಮಯದಲ್ಲೇ ಎರಡು ಭಾಷೆಯ ಹಿಡಿತ ಸಿದ್ಧಿಸಿತ್ತು.

ಸಂಸ್ಕೃತ ಕಾವ್ಯ ಮತ್ತು ಸಾಹಿತ್ಯವನ್ನು ಶೃಂಗೇರಿಯ ವಿದ್ವಾನ್ ಶಿವಕುಮಾರ ಶರ್ಮ ಬೋಧಿಸಿದರೆ ವಿದ್ವಾನ್ ಕೃಷ್ಣ ರಾಜ ಭಟ್ಟರು ವ್ಯಾಕರಣ ಬೋಧಿಸಿದರು. ಎಲ್ಲವೂ ಬಹುಬೇಗ ಕಲಿತ ಬ್ರಹ್ಮಚಾರಿ ಅಚ್ಚರಿಗೆ ಕಾರಣರಾದರು. ಸೂಕ್ಷ್ಮ ಗ್ರಾಹಿ ಬ್ರಹ್ಮಚಾರಿಯಯ ಗುಣ ಸ್ವಭಾವ, ಜ್ಞಾನದಾಹ ಅರಿತ ಜಗದ್ಗುರುಗಳು ತಾವೇ ಶಾಸ್ತ್ರ ಕಲಿಸಲು ನಿರ್ಧರಿಸಿದರು. ಎರಡು ವರ್ಷ ಜಗದ್ಗುರುಗಳಿಂದ ಶಿಕ್ಷಣ ದೊರಕಿತು. ನ್ಯಾಯ ಶಾಸ್ತ್ರ, ಮೀಮಾಂಸ ಮತ್ತು ವೇದಾಂತ ಕಲಿಕೆ ಸಾಗುತ್ತಿದ್ದಾಗಲೇ ಅವರ 22 ನೇ ವಯಸ್ಸಿನಲ್ಲೇ ಜನವರಿ 23.2015 ರಂದು ಜಗದ್ಗುರುಗಳು ಅವರಿಗೆ ಸನ್ಯಾಸವಿತ್ತು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ ಶ್ರೀವಿಧುಶೇಖರ ಭಾರತಿ ಎಂಬ ಯೋಗಪಟ್ಟನೀಡಿದರು.

ಆಗ ಜಗದ್ಗುರುಗಳು ತಮಗೆ ಅತ್ಯಂತ ಪೂಜನೀಯರಾದ ತಮ್ಮ ಪರಮಗುರು ಸ್ಮರಣೆಯಲ್ಲಿ ತಾವು ಶ್ರೀ ವಿಧುಶೇಖರ ಎಂಬ ಯೋಗಪಟ್ಟ ನೀಡುತ್ತಿದ್ದು ವಿಧು ಎಂದರೆ ಚಂದ್ರನೆಂದೇ ಅರ್ಥ ಎಂದು ವಿವರ ನೀಡಿದ್ದರು.

ಮುಂದೆ ಎರಡು ವರ್ಷಗಳ ಕಾಲ ಅವರು ತಮ್ಮ ಗುರುವರ್ಯರಿಂದ ಸಂಪೂರ್ಣ ವೇದಾಂತ ಶಾಸ್ತ್ರಹೃದ್ಗತ ಮಾಡಿಕೊಂಡರು. ತಮಿಳು ಶಿಕ್ಷಣವನ್ನೇನೂ ಅವರು ಪಡೆದವರಲ್ಲ. 2017 ರಲ್ಲಿ ತಮ್ಮ ಗುರುವರ್ಯರೊಂದಿಗೆ ಧರ್ಮ ವಿಜಯಯಾತ್ರೆ ಕೈಗೊಂಡಾಗ ಅವರ ತಮಿಳುನಾಡಿನಲ್ಲಿ ತಮಿಳಿನಲ್ಲೇ ಅನುಗ್ರಹ ಭಾಷಣ ಮಾಡಿದರು. ಮುಂದೆ ಅವರು ತಮಿಳುನಾಡಿನ ವಿಜಯಯಾತ್ರೆಯ ಸಂಧರ್ಭದಲ್ಲೆಲ್ಲಾ ತಾವು ತಮಿಳು ಮಾತೃಭಾಷೆಯವರೇ ಎಂಬ ರೀತಿ ಉಪನ್ಯಾಸ ನೀಡಿದರು. ತಮ್ಮ 25ನೇ ವಯಸ್ಸಿನಲ್ಲೇ ಜಗದ್ಗುರುಗಳ ಅನುಜ್ಞೆಯಂತೆ ಅವರು ಐದು ತಿಂಗಳ ಧರ್ಮವಿಜಯ ಯಾತ್ರೆಯನ್ನು ಕರ್ನಾಟಕ, ಆಂದ್ರಗಳಲ್ಲಿ ಕೈಗೊಂಡರು. ನಂತರ 4 ತಿಂಗಳ ಮಹಾರಾಷ್ಟ್ರ ವಿಜಯಯಾತ್ರೆಯನ್ನು ಮಾಡಿದರು. 2020 ರಲ್ಲಿ ಕೇರಳದಲ್ಲಿ ವಿಜಯಯಾತ್ರೆಯನ್ನು ಕೈಗೊಂಡರು ಮತ್ತು ಮಲೆಯಾಳಿಯಲ್ಲೇ ಅನುಗ್ರಹ ಭಾಷಣ ಮಾಡಿದರು. 2022 ರಲ್ಲಿ ತಮ್ಮ ಗುರುವರ್ಯರ ಅನುಜ್ಞೆಯಂತೆ ದ್ವಾರಕೆಗೆ ತೆರಳಿ ದ್ವಾರಕಾ ಮತ್ತು ಬದರೀ ಶಂಕರಾಚಾರ್ಯರ ಪಟ್ಟಾಭಿಷೇಕ ನಡೆಸಿ ಅನುಗ್ರಹಿಸಿದರು. ಆಗ ಅವರು ಹಿಂದಿ ಭಾಷೆಯ ಉಪನ್ಯಾಸ ಗಮನ ಸೆಳೆಯಿತು.

ಅವನಿ ಶೃಂಗೇರಿ ಮಠ, ನೆಲಮಾವು ಮಠಗಳ ಮಠಾದಿಪತಿಗಳಿಗೆ ಅವರು ಪಟ್ಟಾಭಿಷೇಕ ಮಾಡಿದರು. ಕಾಶ್ಮೀರದ ಟ್ವೀಟ್ವಾಲ್ ಗೆ ತಮ್ಮ ಗುರುವರ್ಯರ ಆದೇಶದಂತೆ ತೆರಳಿ ಶಾರದಾಂಬೆಯ ಪ್ರಾಣ ಪ್ರತಿಷ್ಠೆ ಮಾಡಿ ಅಭಿನವ ಶಂಕರಾಚಾರ್ಯರೆನಿಸಿದರು. ಅವರು ಗುರುವರ್ಯರ ಆದೇಶದಂತೆ ಧರ್ಮ ಪ್ರಬೋಧನೆಗಾಗಿ ನಿರಂತರ ಧರ್ಮ ವಿಜಯ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಪರಿವ್ರಾಜಕಾಚಾರ್ಯರೆನಿಸಿದ್ದಾರೆ.
ಅವರು ದೇವಸ್ಥಾನಗಳಲ್ಲಿ ನಡೆಸುವ ಪೂಜೆ, ದೇವಸ್ಥಾನಗಳ ಕುಂಭಾಭಿಷೇಕದಲ್ಲಿ, ಹೋಮ ಹವನಗಳಲ್ಲಿ ಪಾಲ್ಗೊಳ್ಳುವ ರೀತಿ ಭಕ್ತರ ಹೃನ್ಮನ ಸೆಳೆಯುತ್ತದೆ.

ಶೃಂಗೇರಿಯ ಅತ್ಯಂತ ಪ್ರಸಿದ್ಧ ವಾಕ್ಯಾರ್ಥ ಸಭೆಗಳಲ್ಲಿ ಅವರು ಅಧ್ಯಕ್ಷತೆವಹಿಸಿ ನಿರ್ವಹಿಸುವ ರೀತಿ ದೇಶದ ಪ್ರಖ್ಯಾತ ಪಂಡಿತರನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಧರ್ಮ ಆಚರಣೆಗೆ ಅವರು ನೀಡುವ ಉಪನ್ಯಾಸಗಳು ಮನಸ್ಸಿಗೆ ನಾಟುತ್ತದೆ. ಸತತ ಅಧ್ಯಯನ ಮತ್ತು ಅಧ್ಯಾಪನ ನಡೆಸುವ ಅವರು ತಮ್ಮ ಅನುಗ್ರಹ ಭಾಷಣಗಳಲ್ಲಿ ಭಗವದ್ಗೀತೆ, ಶಂಕರ ಭಾಷ್ಯ, ವೇದ, ಉಪನಿಷತ್, ಶಂಕರ ವಿಜಯ, ಪುರಾಣಗಳ ಶ್ಲೋಕಗಳನ್ನು ಪೋಣಿಸುವ ರೀತಿ ಅವರ ಅಪಾರ ವಿದ್ವತ್ ಗೆ ಸಾಕ್ಷಿ ಹೇಳುತ್ತದೆ.

ಶೃಂಗೇರಿಯ ಗುರುಪರಂಪರೆಯ ಎಲ್ಲಾ ವಿಶೇಷಣಗಳೂ ಅವರಲ್ಲಿ ಮೈತಾಳಿದೆ. ಈ ವರ್ಷದ ಅವರ ಉತ್ತರ ಭಾರತದ ಧರ್ಮ ವಿಜಯ ಯಾತ್ರೆ ಉದ್ದಕ್ಕೂ ಕಂಡ ದೃಶ್ಯ ಭಾರತದ ಧಾರ್ಮಿಕ ಕ್ಷೇತ್ರದಲ್ಲಿ ನವ ನಕ್ಷತ್ರೋದಯವಾಗಿದ್ದಕ್ಕೆ ಸಾಕ್ಷಿ ಒದಗಿಸಿತು. ಪ್ರಯಾಗರಾಜ್ ಮಹಾ ಕುಂಭದಲ್ಲಿ ಅವರು ಮೌನಿ ಅಮವಾಸ್ಯೆಯ ದಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಇದಕ್ಕೂ ಮೊದಲು ಅಲ್ಲಿ ಪ್ರತಿದಿನ ಶಾಸ್ತ್ರ ಸಭೆ ನಡೆಸಿದರು. ಸಂತ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಮೂರು ಆಮ್ನಾಯ ಪೀಠಾದೀಶ್ವರರು ಪಾಲ್ಗೊಂಡ ಧರ್ಮ ಸಂಸತ್ ಅಧ್ಯಕ್ಷತೆ ವಹಿಸಿದರು.

ಕಾಶಿಯಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ಪ್ರತಿಷ್ಠಾ ಕುಂಭಾಭಿಷೇಕ ನಡೆಸಿದರು. ತಮ್ಮ ಗುರುವರ್ಯರು ಎಲ್ಲೆಲ್ಲಿ ತೆರಳಿ ಅನುಗ್ರಹಿಸಿದ್ದರೋ ಅಲ್ಲೆಲ್ಲಾ ತೆರಳಿ ಅನುಗ್ರಹಿಸಿದರು. ಕಾಶೀ ವಿಶ್ವನಾಥನ ಪೂಜೆ ನೇರವೇರಿಸಿದರು.

ಈಗಾಗಲೇ ಅವರು ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳಾದ ತಿರಚಂದೂರು ಮತ್ತು ಪಳನಿಗೆ ತೆರಳಿ ಪೂಜೆ ನೆರವೇರಿಸಿದ್ದಾರೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂಬತ್ತು ಕಡೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇಶಾದ್ಯಂತ ನೂರಾರು ದೇವಸ್ಥಾನಗಳ ಕುಂಭಾಭಿಷೇಕ, ಪ್ರತಿಷ್ಠಾ ಕಾರ್ಯಕ್ರಮ ನಡೆಸಿದ್ದಾರೆ.

ಎಲ್ಲಕ್ಕೂ ಶಿಖರಪ್ರಾಯವಾಗಿ ಅವರ ಅಚಲ ಗುರುಭಕ್ತಿ ಸಾಟಿ ಇಲ್ಲದ್ದು. ಎಲ್ಲೇ ಶೃಂಗೇರಿಯಿಂದ ದೂರ ತೆರಳಲಿ ತಮ್ಮ ಗುರುವರ್ಯರ ಸ್ಮರಣೆ ಮಾಡದೇ ಅವರು ಅನುಗ್ರಹ ಭಾಷಣ ನೀಡುವುದೇ ಇಲ್ಲ.ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳ ಸನ್ಯಾಸ ಸ್ವೀಕರಿಸಿದ ಸುವರ್ಣ ವರ್ಷಾಚರಣೆಯನ್ನು ಅವರು ಅಭೂತಪೂರ್ವವಾಗಿ ಆಚರಿಸಿದರು. ಸುವರ್ಣ ಭಾರತಿ ಕಾರ್ಯಕ್ರಮ ಒಂದು ನವ ಇತಿಹಾಸ ಸೃಷ್ಟಿಸಿತು. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ “ನಮ: ಶಿವಾಯ” ಶ್ರೀ ಭಾರತೀತೀರ್ಥ ಮಹಿಸ್ವಾಮಿಗಳ ಸುವರ್ಣ ವರ್ಷದ ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಕಂಠಗಳು ಏಕಕಾಲಕ್ಕೆ ಒಂದೆಡೆ ಶಂಕರ ಭಗವತ್ಪಾದರ ಸ್ತೋತ್ರ ಪಠಣ ಮಾಡುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿತು.

ಶೃಂಗೇರಿಯಲ್ಲಿ ಗುರುವರ್ಯರ ಗೌರವಾರ್ತ ನಡೆದ ತ್ರಿವೇಣಿ ಸಂಗಮವೂ ಒಂದು ವಿಶ್ವ ದಾಖಲೆಯೇ. ಶೃಂಗೇರಿಯಂತ ಪುಟ್ಟ ಹಳ್ಳಿಯಲ್ಲಿ ಐವತ್ತು ಸಹಸ್ರ ಭಕ್ತರು ಸ್ತೋತ್ರ ಪಠಣ ಮಾಡಿ ಇತಿಹಾಸ ಸೃಷ್ಟಿಸಿದರು.

ದೇಶ ಯುದ್ದ ಸ್ಥಿತಿಯಲ್ಲಿದ್ದಾಗಲೇ ಜಗದ್ಗುರುಗಳು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮ ನಡೆಸಿದರು. ಆ ಸಂಧರ್ಭ ಅವರು ಪುರ ಪ್ರವೇಶ ಮಾಡುವಾಗ ಸಂಪ್ರದಾಯದಂತೆ ತಮ್ಮ ಶೋಭಾಯಾತ್ರೆ ಸಿದ್ಧತೆ ಆಗಿದ್ದರೂ ಅದನ್ನು ನಿರಾಕರಿಸಿದರು. ದೇಶ ಸಂಕಷ್ಟದಲ್ಲಿದೆ ನಮ್ಮ ಶೋಭಾಯಾತ್ರೆ ಬೇಡ ಎಂದರು. ದೇಶದ ಒಳಿತಿಗಾಗಿ ಅವಿರತ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಉಪದೇಶಿಸಿದರು. ಕಾಶ್ಮೀರದ ಉಗ್ರರ ದಾಳಿಯಲ್ಲಿ ಬಲಿಯಾದ ಎಲ್ಲ ಸಂತ್ರಸ್ತರ ಕುಟುಂಬಗಳಿಗೂ ಶಾರದಾ ಪ್ರಸಾದ ರೂಪವಾಗಿ ತಲಾ ಎರಡು ಲಕ್ಷ ರೂ ಕಳಿಸಿಕೊಟ್ಟರು.ಅವರ ಅಪ್ರತಿಮ ದೇಶಭಕ್ತಿ ಶ್ರೀ ವಿದ್ಯಾರಣ್ಯರನ್ನು ನೆನಪಿಗೆ ತರುವಂತಿತ್ತು.

ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರನ್ನು ಆಗಲೇ ದೇಶದ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಅನೇಕ ರಾಜ್ಯದ ರಾಜ್ಯಪಾಲರು, ಗೃಹಸಚಿವರೂ ಸೇರಿದಂತೆ ಕೇಂದ್ರದ ಮಂತ್ರಿಗಳು, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಒಳಗೊಂಡಂತೆ ಅನೇಕ ಮುಖ್ಯ ಮಂತ್ರಿಗಳು, ಧಾರ್ಮಿಕ ಮುಖಂಡರು, ನ್ಯಾಯ ಮೂರ್ತಿಗಳು, ಎಲ್ಲಾ ಕ್ಷೇತ್ರಗಳ ಮುಖಂಡರು ಭೇಟಿ ಆಗಿ ಅನುಗ್ರಹ ಪಡೆದಿದ್ದಾರೆ.

ಸಕಲ ಶಾಸ್ತ್ರ ಪಾರಂಗತರಾಗಿ, ವೇದಾಂತ ಹೃದ್ಗತ ಮಾಡಿಕೊಂಡು ನೈಜ ಸನ್ಯಾಸಿಯಾಗಿ ಸನಾತನ ಧರ್ಮದ ತೋರುಬೆಳಕಾಗಿ ಅವರು ಮೂಡಿ ಬಂದಿದ್ದಾರೆ. ಶೃಂಗೇರಿಯ ಧಕ್ಷಿಣಾಮ್ನಾಯ ಶಾರದಾಪೀಠವನ್ನು ಮುನ್ನೆಡೆಸುವ ಸಮರ್ಥ ಪೀಠಾದೀಶ್ವರರಾಗಿ ಮಠದ ಬಹು ಆಯಾಮದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರು ಶಕ್ತಿ ತುಂಬುತ್ತಿದ್ದಾರೆ. ತಮ್ಮ ಶಿಷ್ಯರು ತಮಗೆ ಪ್ರತಿಕ್ಷಣ ಆನಂದ ಉಂಟು ಮಾಡುತ್ತಿದ್ದಾರೆ. ನಮ್ಮ ಮನಸ್ಸಿನಲ್ಲಿದ್ದುದನ್ನು ಅವರ ಓದಬಲ್ಲರು.

ಶೃಂಗೇರಿಗೆ ಅತ್ಯಂತ ಯೋಗ್ಯ ಉತ್ತರಾಧಿಕಾರಿಯನ್ನು ಜಗನ್ಮಾತೆ ಶಾರದಾಂಬೆ ಅನುಗ್ರಹಿಸಿದ್ದಾಳೆ ಎಂಬ ಜಗದ್ಗುರು ಶ್ರೀ ಭಾರತೀತೀರ್ಥರ ಮಾತು ಅಕ್ಷರಶಃ ಸತ್ಯವಾಗಿದೆ. ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಸನಾತನ ಧರ್ಮದ ಸಮರ್ಥ ಮಾರ್ಗದರ್ಶಕರಾಗಿ ಸಾಧನಾ ಪಥದಲ್ಲಿ ಮುನ್ನೆಡೆಯುತ್ತಿದ್ದಾರೆ.

 

ಶ್ರೀ ನಾರಾಯಣರಾವ್‌ ವೈದ್ಯ

ಧರ್ಮದರ್ಶಿಗಳು, ಶೃಂಗೇರಿ ಶಂಕರಮಠ

ಶಾರದಾ ನಗರ, ಗಂಗಾವತಿ.

 

VISHWAROOPA NEWS BLOG

Infinite

Skip to content ↓