ಗಂಗಾವತಿ ನಗರದ ಕೊಟ್ಟೂರು ಬಸವೇಶ್ವರ ದೇವಾಲಯ ಮುಂಭಾಗದಲ್ಲಿ ಕನ್ನಡ ಕನಸು ಯುಟ್ಯೂಬ್ ಚಾನೆಲ್ ಉದ್ಘಾಟಸಿತು.
ಹುಸೇನಪ್ಪ ಹಂಚಿನಾಳ ವಕೀಲರು ಮಾಜಿ ನಗರಸಭೆ ಅಧ್ಯಕ್ಷ, ಈ ದಿನಮಾನಗಳಲ್ಲಿ ಇಂತಹ ನೂರಾರು ಯುಟ್ಯೂಬ್ ಚಾನೆಲ್ ಗಳು ಹುಟ್ಟುತ್ತವೆ.
ಆದರೆ ಆ ಚಾನೆಲ್ ಗಳು ತಾತ್ಕಾಲಿಕವಾಗಿ ಪ್ರಚಾರದಲ್ಲಿ ಇರುತ್ತದೆ. ಅದೇ ರೀತಿಯಾಗಿ ನಿಮ್ಮ ಚಾನೆಲ್ ಕೂಡ ಆ ರೀತಿ ಆಗಬಾರದು. ನೀವು ನೋಡಿಕೊಳ್ಳಬೇಕು ಎಂದರು.
ನೀವು ರಾಮಕೃಷ್ಣ ಅವರು ಮೊದಲಿನಿಂದ ವಿವಿಧ ವೃತ್ತಿಗಳ ಮೂಲಕವೇ ಪ್ರಸಿದ್ಧವಾದವರು ಮತ್ತು ಮಾಧ್ಯಮ ವೃತ್ತಿಯಲ್ಲಿ ಕೂಡ ಹೆಸರುವಾಸಿಯಾದವರು.
ಈಗ ಸ್ವಂತ ತಮ್ಮ ಕೈಚಳಕದಿಂದ ಕನ್ನಡ ಕನಸು ಎಂಬ ಹೊಸ ಯೂಟ್ಯೂಬ್ ಚಾನೆಲ್ ಚಾಲ್ತಿಗೆ ತಂದಿರುವುದು ತುಂಬಾ ಸಂತೋಷದ ವಿಷಯ.
ಈ ಚಾನೆಲ್ ಮುಂದಿನ ದಿನಮಾನಗಳಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲೆಂದು ಹಾರೈಸಿದರು.
ಅದೇ ರೀತಿಯಾಗಿ ವಿರುಪಾಕ್ಷಪ್ಪ ಸಿರವಾರ ಕಲಾವಿದರು ಮಾತನಾಡಿ ಕನ್ನಡ ನ್ಯೂಸ್ ಚಾನೆಲ್ ಗೆ ನಮ್ಮ ಗಂಗಾವತಿ ನಗರದಲ್ಲಿ ನಡೆಯುವಂತಹ ಸಾಂಸ್ಕೃತಿಕ ನಾಟಕಗಳು ಮತ್ತು ಸ್ಪೋರ್ಟ್ಸ್ ಗಳು ಇಂತಹ ಕಾರ್ಯಕ್ರಮಗಳಿಗೆ ಇವರನ್ನ ಆಹ್ವಾನಿಸಿ ಅವರಿಗೆ ಪ್ರಚಾರಪಡಿಸಲಿಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಹೋರಾಟಗಾರ ಹುಲುಗಪ್ಪ ಮಾಗಿ, ವೀರಭದ್ರಪ್ಪ ನಾಯಕ್, ರವಿಕುಮಾರ್ ನಿತ್ಯ ಕರ್ನಾಟಕ ಸಂಪಾದಕರು, ಪ್ರಕಾಶ್ ವಕೀಲರು, ರಮೇಶ್ ಕೋಟೆ, ಭೀಮ ಘರ್ಜನೆ ಸಂಪಾದಕರು, ಮಾರ್ಕಂಡೇಯ, ಆರ್ ಚನ್ನಬಸವ ವರದಿಗಾರರು, ಎಸ್ ಬಿ ಖಾದ್ರಿ.
ಶ್ರೀಮತಿ ಅರುಣ ದೇವಿ ಪ್ರಾಂಶುಪಾಲರು ವಿಸ್ಡಮ್ ಶಾಲೆ, ಅಕ್ಷರ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಶ್ರೀಮತಿ ಹೀಮಾ ಸೇರಿದಂತೆ ಇತರರು ಚಾನೆಲ್ ಗೆ ಸಂತಸದಿಂದ ಶುಭ ಹಾರೈಸಿದರು.