ಗಂಗಾವತಿ: ನವೆಂಬರ್-೮ ಶನಿವಾರ ಸಂಜೆ ೫:೦೦ ಗಂಟೆಗೆ ನಡೆದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ಭಜನಾ ಮಂಡಳಿಯ ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು ಎಂದು ಪರಮ ಪೂಜ್ಯ ಶ್ರೀ ಶರಣಬಸವ ದೇವರು ಪ್ರಕಟಣೆಯಲ್ಲಿ ತಿಳಿಸಿದರು.
ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮಹಿಳೆಯರಿ ಗೋಸ್ಕರ ವಿಶೇಷವಾಗಿ ಈ ಒಂದು ವೇದಿಕೆ ಸ್ಥಾಪನೆಯಾಗಿದ್ದು ಅದಕ್ಕಾಗಿ ಗಂಗಾವತಿಯ ಎಲ್ಲಾ ಮಹಿಳೆಯರು ಆಧ್ಯಾತ್ಮಿಕವಾಗಿ ಈ ಒಂದು ಭಜನಾ ಮಂಡಳಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆಶೀರ್ವಾದ ರೂಪವಾಗಿ ಹೇಳಿದರು.
ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಶ್ರೀಕಂಠ ಚೌಕಿಮಠ ಇವರು ಅಂತರ್ಜಾಲದ ಮೂಲಕ ಭಜನಾ ಮಂಡಳಿಯ ಸ್ಥಾಪನೆಯ ಎಲ್ಲಾ ನಿಯಮಾವಳಿಗಳ ಬಗ್ಗೆ ಸವಿಸ್ತಾರವಾಗಿ ನಿರೂಪಿಸಿದರು.
ಉಪನ್ಯಾಸಕಿಯಾದ ಶ್ರೀಮತಿ ಅರ್ಚನಾ ಹಿರೇಮಠ ಇವರು ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಧಾರವಾಹಿಗಳಿಗೆ ಅವಲಂಬನೆಯಾಗಿದ್ದು ಅದಕ್ಕಾಗಿ ಆಧ್ಯಾತ್ಮಿಕವಾಗಿ ಹೊರಬರಲು ಈ ಒಂದು ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮಾಜಿ ಕಾಡಾ ಅಧ್ಯಕ್ಷರಾದ ಶ್ರೀಯುತ ತಿಪ್ಪೇರುದ್ರ ಸ್ವಾಮಿರವರು ಮಹಿಳೆಯರು ಈ ಒಂದು ಭಜನಾ ಮಂಡಳಿಯನ್ನು ಮುನ್ನಡೆಸಿಕೊಂಡು ಹೋಗಲು ಹಾಗೂ ಮುಂದಿನ ದಿನಮಾನಗಳಲ್ಲಿ ಎಲ್ಲಾ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಧ್ಯಾತ್ಮಿಕವಾಗಿ ಈ ಒಂದು ಭಜನಾ ಮಂಡಳಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. https://aratt.ai/@vishwaroopa_news_blog
