ಜಗದ್ಗುರು ವಾಣಿ

ನಮ್ಮ ಜೀವನದಲ್ಲಿ ಹಠ, ಆಸೆ, ಅಹಂಕಾರ ಈ ಮೂರು ಇರಬಾರದು,

ಯಾವುದಕ್ಕೂ ಹಠ ಇರಬಾರದು. ಯಾವುದರ ಮೇಲು ಆತಿ ಆಸೆ ಇರಬಾರದು ಮತ್ತು ಅದು ನನ್ನದು, ನನ್ನದು ಅಷ್ಟೇ ಎಂಬ ಅಹಂಕಾರ ಇರಬಾರದು. ಇದರಿಂದ ಮನಃಶಾಂತಿ ಸಿಗುವುದಿಲ್ಲ.

ನಾನು ಹೇಳಿದ್ದೆ ನಡೀಬೇಕು ಅಂತ ಇಲ್ಲ, ಎಲ್ಲವು “ಈಶ್ವರನ ಇಚ್ಛೆ” ಹೇಗೆ ಇದೆಯೋ ಹಾಗೆ ನಡೆಯುವುದು. ನಾವು ನೀವು ಹೇಳಿದ ಹಾಗೆ ಏನು ನಡೆಯೋಲ್ಲ ಎಲ್ಲವು “ಈಶ್ವರನ ಸಂಕಲ್ಪ”ಹೇಗಿದೆಯೋ ಹಾಗೆ ನಡೆಯುತ್ತದೆ. ಅದಕ್ಕೆ ನಾವು ತಲೆ ಭಾಗಬೇಕೆ ವಿನಃ ನಾವು ಅದನ್ನೆಲ್ಲಾ ಕೇಳೋದಿಲ್ಲ ಅಂತ ಹೋದ್ರೆ ನಿಮಗೆ ಮನಃ ಶಾಂತಿ ಯಾವತ್ತೂ ಸಿಕ್ಕೊದಿಲ್ಲ.

ನಮ್ಮ ಜೀವನದಲ್ಲಿ ಪ್ರತಿಯೊಂದು ಘಳಿಗೆಗೂ ನಾವು ದೈವಿ ಸಂಪತ್ತನ್ನು ಹೆಚ್ಚಿಸಿಕೊಂಡರೆ, ಅಸುರಿ ಸಂಪತ್ತಿನಿಂದ ದೂರವಾಗಿದ್ದರೆ ಆಗ ಮಾತ್ರ ಮನಃ ಶಾಂತಿ ತಾನಾಗಿ ಸಿಕ್ಕುತ್ತದೆ ಮತ್ತು ಲೌಕಿಕ ವಿಷಯಗಳಲ್ಲಿ ಜಾಸ್ತಿ ಆಸೆಯನ್ನು ಇಟ್ಟುಕೊಳ್ಳಬಾರದು.
– ಜಗದ್ಗುರು ಶಂಕರಾಚಾರ್ಯ ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು*

 

ಸೇಬು ಅಥವಾ ಸೇಬಿನ ರಸ ಇದರಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ?

ಸೇಬು ಹಣ್ಣಿನ ಸೇವನೆ ಆರೋಗ್ಯ ತುಂಬಾ ಒಳ್ಳೆಯದು.  ಸೇಬು ಹಣ್ಣನ್ನು ನೇರವಾಗಿ ಸೇವಿಸಬಹುದು ಹಾಗೂ ಜ್ಯೂಸ್‌ ಮಾಡಿ ಕುಡಿಯಲೂ ಬಹುದು, ಇವೆರಡರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಪ್ರಯೋಜನ ಎಂಬುದನ್ನು ನೋಡೋಣ.

ಪ್ರತಿ ದಿನ ಒಂದು ಸೇಬು ಹಣ್ಣು ಸೇವಿಸುವುದರಿಂದ ಆಸ್ಪತ್ರೆಯಿಂದ ದೂರವಿರಬಹುದು ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಸೇಬು ಹಣ್ಣಿಗೆ ಅನೇಕ ಕಾಯಿಲೆಗಳು ಬರದಂತೆ ತಡೆಯುವ ಶಕ್ತಿ ಇದೆ. ಅಂದರೆ ಹಣ್ಣುಗಳನ್ನು ಸೇವನೆ ಮಾಡುವುದು ಅಥವಾ ಅದರ ರಸ, ಜ್ಯೂಸ್ ಮಾಡಿ ಕುಡಿಯುವುದೋ ಎಂದು ಯೋಚಿಸುವವಋ ಸಂಖ್ಯೆಯೇ ಹೆಚ್ಚಾಗಿದೆ.

ಸಾಮಾನ್ಯವಾಗಿ ಆರೋಗ್ಯ ತಜ್ಞರು ಹೇಳುಂತೆ ಸೇಬು ಹಣ್ಣಿನ ರಸಕ್ಕಿಂತ ಹಣ್ಣುಗಳನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಸೇಬು ಹಣ್ಣುಗಳನ್ನು ತಿನ್ನುವುದರಿಂದ ಫೈಬರ್, ಜೀವಸತ್ವ ಮತ್ತು ಖನಿಜಗಳು ಸಿಗುತ್ತವೆ. ಆದರೆ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದಕ್ಕೆ ಸೇರಿಸುವ ಸಕ್ಕರೆಯಿಂದ ಕ್ಯಾಲೊರಿ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸೇಬು ಹಣ್ಣುಗಳ ರಸದಲ್ಲಿ ಫೈಬರ್ ಅಂಶವೂ ಇರುವುದಿಲ್ಲ. ಸೇಬು ಹಣ್ಣು ಕಬ್ಬಿಣದಿಂದ ಸಮೃದ್ಧವಾಗಿದ್ದು, ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ.