ತೇರು ಹರಿದಾವೋ ತಾನಕ್ಕೆ ನಿಂತಾವೋ

ಮನೆಯ ಪೈಂಟಿಂಗ್ ಕೆಲಸ ನಡೆದಿತ್ತು. ಮನೆಯ ಪಾತ್ರೆ ಪದಾರ್ಥಗಳನ್ನು ಅತ್ತಿಂದಿತ್ತ ಇಟ್ಟಾಡಿ ಸುಸ್ತಾಗಿ ಹೋಗಿದ್ದೆ. ಮೂರು ದಿನಗಳಲ್ಲಿ ಮುಗಿಸಿಕೊಡುವೆ ಎಂದಿದ್ದ ಅಕ್ಬರ್ ಪುಣ್ಯಾತ್ಮ ಹದಿನೈದು ದಿನ ತೆಗೆದುಕೊಂಡ. ಮನೆ ತುಂಬಾ ಧೂಳಿನ ರಾಶಿ ಜೊತೆಗೆ ಎಲ್ಲೆಲ್ಲಿ ನೋಡಿದರೂ ಪುಸ್ತಕಗಳೇ! ನೋಡಿ ನೋಡಿ ಬೇಸರಗೊಂಡು ಮಡದಿ ಶಕುಂತಲೆ ಸಿಟ್ಟಿನಿಂದ ರೇಗಾಡಿ ಆಗಿಂದಾಗ್ಗೆ ನನ್ನಿಂದ ಕೆಲಸ ತೆಗೆಯುತ್ತಿದ್ದಳು. ‘ರೀ, ಪೈಂಟ್ ಸೋರಿಸಿಬಿಡ್ತಾರೆ, ನಿಮ್ಮ ಪಂಚೆ ಹಾಸ್ರಿ.. ಮನೆಯಲ್ಲಿ ಇದ್ದ ಬದ್ದ ಹಳೆಯ ಬೆಡ್‌ಶೀಟ್‌ಗಳು, ಹೊದುಪುಗಳನ್ನು ಪೈಂಟಿಂಗ್ ಮಾಡುವ ಜಾಗದಲ್ಲೆಲ್ಲಾ ಹಾಸಿದ್ದಾಯಿತು. ಇನ್ನು ಉದ್ದವಾಗಿ ಉಳಿದಿದ್ದು ನನ್ನ ಪಂಚೆ ಅದನ್ನು ಹಾಸಿದೆ. ಪುಸ್ತಕವನ್ನೆಲ್ಲಾ ಹದಿನೈದು ದಿನ ಆಚೆಗೆ ಬಿಸಾಡಿದ್ದಳು. ಅವು ಅಲ್ಲಿಯೇ ಬಿದ್ದಿದ್ದರೂ ಯಾವ ಕಳ್ಳರೂ ಕದ್ದಿಲ್ಲ. ದೇಶದಲ್ಲಿ ದಡ್ಡರಿಲ್ಲ ಎಂದುಕೊಂಡೆ. ಪುಸ್ತಕಗಳನ್ನು ಮತ್ತೆ ಶೆಲ್ಟ್‌ ನಲ್ಲಿ ಇಡುವಾಗ ಗೊರೂರು ಹೇಮಾವತಿ ರ‍್ಶನ ಪುಸ್ತಕ ಸಿಕ್ಕಿತು. ಇದನ್ನು ನಾನು ಬರೆದಿದ್ದು ೧೯೯೧ ರಲ್ಲಿ. ನಮ್ಮೂರಿನ ಪತ್ತೇದಾರಿ ಲೇಖಕ ಪರಮೇಶ್ ಹೇಳಿ ಬರೆಸಿದ್ದರು. ಮತ್ತೇ ಅವರೇ ೧೯೯೨ ರಲ್ಲಿ ಪ್ರಕಟಿಸಿದ್ದರು. ಕಳೆದ ವರ್ಷ ಸುಂದರೇಶ್ ಈ ಪುಸ್ತಕ ಕೇಳಿದ್ದರು. ಸಿಕ್ಕಿರಲಿಲ್ಲ. ಅದೆಲ್ಲೊ ಒಂದು ಪ್ರತಿ ಗ್ರಂಥಭಂಡಾರದಲ್ಲಿ ಅಡಗಿಕೊಂಡಿತ್ತು.
ಮದ್ಯಾಹ್ನ ೨ ಗಂಟೆ. ವ್ಯಾಟ್ಸಪ್ ಪೋನ್ ಬಂತು. ಅಮೇರಿಕಾದಿಂದ ಮಂಜಣ್ಣನ ಮಗ ಮನು. ‘ಏನ್ ಚೆನ್ನಾಗಿದ್ದಿರಾ ಅಂಕಲ್.. ಎಂದನು. ‘ಚೆಂದ ಏನ್ ಬಂತೋ ಮನು, ನನ್ಗೂ ವಯಸ್ಸಾತ್ತಲ್ಲ.. ‘ಅಂಕಲ್, ಇಲ್ಲೊಬ್ರು ನಿಮ್ಮ ಫ್ರೆಂಡ್ ಬಂದಿದ್ದಾರೆ. ನಿಮ್ಮ ಹತ್ರ ಮಾತ್ನಾಡ್ತಾರೆ ನೋಡಿ.. ಎಂದನು. ಆ ಕಡೆಯಿಂದ ತೊಗಲುಗೊಂಬೆ ಕಲಾವಿದರು ಗುಂಡುರಾಜ್. ‘ಅನಂತು ಚೆನ್ನಾಗಿದ್ದಿರಾ, ಅಮೇರಿಕಾಗೆ ಬಂದಿದ್ದೆ. ಇಲ್ಲಿ ನಿಮ್ಮ ಅಣ್ಣವ್ರ ಮಗ ಒಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗ್ತಿದ್ದಾರೆ.. ಎಂದರು.
ಹಾಸನದ ನಮ್ಮ ಗುಂಡುರಾಜ್ ಅಮೇರಿಕಾದಲ್ಲಿ ಫೇಮಸ್ ಆಗಿರುವುದು ಖುಷಿಯಾಯ್ತು. ನೆನ್ನೆ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ತೊಗಲುಗೊಂಬೆಯ ತಮ್ಮ ದೇಶ ವಿದೇಶಗಳ ಸುತ್ತಾಟ, ತೊಗಲುಗೊಂಬೆ ಕಲಿಯಲು ಭಾರತಕ್ಕೆ ಬಂದು ವಾರ ತಿಂಗಳು ತಂಗಿದ್ದಿ ಇವರಿಂದ ತರಬೇತಿ ಪಡೆದು ಹೋಗುವ. ತಮ್ಮ ದೇಶಕ್ಕೆ ಕರೆಸಿಕೊಳ್ಳುವ ವಿಚಾರ ಕೇಳಿ ಆಶ್ರ‍್ಯ ಜೊತೆಗೆ ಖುಷಿಯಾಯಿತು. ನಮ್ಮ ಅಣ್ಣನ ಮಗ ಮನು ಅಮೇರಿಕಾದಲ್ಲಿ ಕನ್ನಡ ಭವನ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆಂದು ಪತ್ರರ‍್ತರು ಆರ್.ಪಿ.ವೆಂಕಟೇಶಮೂರ್ತಿ ತಮ್ಮ ಪತ್ರಿಕೆಯಲ್ಲಿ ಈ ಹಿಂದೆ ಬರೆದಿದ್ದರು. ಅದನ್ನು ಮನು ತಿಳಿಸಿ ಭೇಷ್ ಎಂದೆ. ಮತ್ತೇ ಭಾರತಕ್ಕೆ ಯಾವಾಗಾರ‍್ತಿ.. ಎಂದೆ. ಅಲ್ಲಿಯ ಅಧ್ಯಕ್ಷರು ಎಲ್ಲರನ್ನು ಓಡಿಸಲು ಸಹಿ ಮಾಡಿರುವ ಸಂಗತಿ ಟಿವಿಯಲ್ಲಿ ನೋಡಿದ್ದೆನು.
‘ಅಂಕಲ್, ಗೊರೂರು ಜಾತ್ರೆ ಯಾವತ್ತು ಎಂದನು ಮನು. ‘ಅದೇ ಮಾಮುಲಿ ರಥಸಪ್ತಮಿಗೆ ಎಂದೆನು. ‘ ಹೇ ಡೇಟ್ ಹೇಳಿ ಅಂಕಲ್.. ‘ ತಡಿ ಕ್ಯಾಲೆಂಡರ್ ನೋಡಿ ಹೇಳ್ತಿನಿ ಎಂದು ಫೆಬ್ರವರಿ ನಾಲ್ಕು. ಎಂದೆ. ಯಾಕೋ ತಕ್ಷಣದಲ್ಲೇ ಪೋನ್ ಸಂರ‍್ಕ ಕಡಿತಗೊಂಡಿತು. ಪೋನ್ ಬದಿಗಿಟ್ಟು ಗೊರೂರು ಹೇಮಾವತಿ ರ‍್ಶನ ಪುಸ್ತಕ ಕೈಗೆತ್ತಿಕೊಂಡೆ. ಮಡದಿ ಟೀ ತಂದುಕೊಟ್ಟಳು. ಹಾಗೇ ಪುಸ್ತಕ ತಿರುವಿಹಾಕಿದೆ.
ಹಾಸನದಿಂದ ದಕ್ಷಿಣಕ್ಕೆ ೨೩ ಕಿ.ಮೀ. ದೂರದಲ್ಲಿ ಹಾಸನ ಅರಕಲಗೂಡು ರಸ್ತೆಯಲ್ಲಿ ಹೇಮಾವತಿ ನದಿಯ ತೀರದಲ್ಲಿ ಐತಿಹ್ಯ ಶ್ರೀ ಯೋಗಾನರಸಿಂಹಸ್ವಾಮಿ ಸನ್ನಿಧಿಯಲ್ಲಿ ಗೊರೂರು ನೆಲೆಗೊಂಡಿದೆ. (ನಾನೀಗ ಹಾಸನದಲ್ಲಿ ನೆಲೆಗೊಂಡಿದ್ದೇನೆ)
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಮ್ಮ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ ಮಹಿಮೆ ಮತ್ತು ಚರಿತ್ರೆ ಕೃತಿಯಲ್ಲಿ ಗೊರೂರಿಗೆ ಐದು ಮೈಲಿ ದೂರದಲ್ಲಿರುವ ಅರಕಲಗೂಡಿನಲ್ಲಿ ಐಗೂರು ಪಾಳೆಯಗಾರನಾದ ಕೃಷ್ಣಪ್ಪ ನಾಯಕನು (ಚರಿತ್ರೆಗನುಸಾರವಾಗಿ ಇವನ ಕಾಲ ೧೫೬೮) ಹೇಮಾವತಿ ನದಿಯಲ್ಲಿ ಸ್ನಾನ ಮಾಡಲು ಇಲ್ಲಿಗೆ ಆಗಮಿಸಿದನೆಂದು, ಇಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇಲ್ಲಿ ಉದ್ಭವಗೊಂಡಿದ್ದ ನರಸಿಂಹಮರ‍್ತಿಯನ್ನು ಪೂಜಿಸುತ್ತಿದ್ದರೆಂದೂ ನಾಯಕನಿಗೆ ಕೂಡಲೇ ತನಗೆ ನೃಸಿಂಹನೇ ದೇವಾಲಯವನ್ನು ನರ‍್ಮಿಸುವಂತೆ ಆಜ್ಞಾಪಿಸುತ್ತಿದ್ದಾನೆ ಎಂದು ಹೊಳೆದ ದೃಶ್ಯವಾಗಿ ತನ್ನ ಇಚ್ಚೆಯನ್ನು ಅಣ್ಣ ತಮ್ಮಂದಿರಿಗೆ ತಿಳಿಸಿ ಅವರಿಂದ ನರಸಿಂಹ ದೀಕ್ಷೆಯನ್ನು ಪಡೆದು ನೃಸಿಂಹಸ್ವಾಮಿಗೆ ಮೊದಲು ರ‍್ಭಗುಡಿಯನ್ನು ಕಟ್ಟಿಸಿದನೆಂದು, ಗೋರ‍್ಣ ಋಷಿಗಳು ತಪಸ್ಸು ಮಾಡಿದ ಸ್ಥಳವಾಗಿ ‘ಗೋರ‍್ಣ ನಗರ’ ವೆಂದು ಕರೆಯುತ್ತಾರೆ. ಅಷ್ಟರಲ್ಲಿ ಒಂದು ಕರೆ ಬಂತು. ಆ ಕಡೆಯಿಂದ ಜಗದೀಶ್ ರಾಮಘಟ್ಟ. ‘ನಾಳೆ ಜಾತ್ರೆ. ಬನ್ನಿ. ‘ ಈ ಸಾರಿ ನಾಟಕ ಉಂಟಾ ಎಂದೆ. ಇಲ್ಲಾ ರ‍್ಕೆಸ್ಟಾç ಎಂದರು.
‘ ಈ ಸಾರಿ ತೇರು ಉಂಟಾ.. ಹೋದ ರ‍್ಷ ಜಾತ್ರೆ ಟೈಂಗೆ ದೇವಸ್ಥಾನದ ಕಾಂಪೌಂಡು ಗೋಡೆ ಎಲ್ಲಾ ಒಡೆದುಹಾಕಿದ್ರಲ್ಲಾ.. ‘ ಅದು ಏನೂ ಆಗಿಲ್ಲ. ಅದರೆ ತೇರಿದೆ.. ಎಂದರು.
ಅಂದಕ್ಕೆ ರ‍್ಕಲಗೂಡು ಚೆಂದಕ್ಕೆ ನರಸೀಪುರ
ಚಿತ್ತರದ ಗೊಂಬೆ ಗೊರವೂರು
ಚಿತ್ತರದ ಗೊಂಬೆ ಗೊರವೂರು ಬೀದಿಯ
ಹದಿನಾರು ತೇರು ಹರಿದಾವೆ
ಗೊರೂರು ಹಳೇ ಗ್ರಾಮದಿಂದ ಹೇಮಾವತಿ ನದಿಗೆ ಹೋಗುವ ದಾರಿಯಲ್ಲಿ ಹೇಮಾವತಿ ನದಿ ದಡದಲ್ಲಿ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ ನೆಲೆಗೊಂಡಿದೆ. ಮುಖ್ಯ ರಸ್ತೆಯಿಂದ ಈ ದೇವಸ್ಥಾನÀವರೆಗೆ ಡಾಂಬರು ರಸ್ತೆ ಇದೆ. ಈ ದೇವಸ್ಥಾನ ವಿಶಾಲವಾಗಿದ್ದು ಛತ್ರದಂತಿರುವುದರಿಂದ ಇಲ್ಲಿ ಮದುವೆ ಮುಂಜಿ ಕರ‍್ಯಗಳು ನಡೆಯುತ್ತಿರುತ್ತವೆ. (ನಮ್ಮ ಅಕ್ಕನವರ ಮದುವೆ ನಡೆದಿದ್ದು ಇಲ್ಲಿಯೇ. ಅದು ೪೬ ರ‍್ಷಗಳ ಹಿಂದೆ) ನದಿಗೆ ಇಳಿಯಲು ಕಲ್ಲಿನ ಸೋಫಾನ ಪಂಕ್ತಿಗಳಿವೆ. ಇಲ್ಲಿ ನದಿ ಸ್ವಲ್ಪ ವಿಶಾಲವಾಗಿ ಹರಿಯುತ್ತದೆ, ಮಟ್ಟೆಕಲ್ಲು, ಆನೆಕಲ್ಲು ಎಂಬ ಎರಡು ಕಲ್ಲು ಬೆಟ್ಟಗಳು ನೀರಿನ ಮಧ್ಯದಲ್ಲಿವೆ. ಈ ಜಾಗ ಒಳ್ಳೆ ಈಜುಗಾರರಿಗೆ ಆನಂದ ನೀಡುತ್ತದೆ. (ಅದು ಈಗಲ್ಲ, ನಮ್ಮ ಬಾಲ್ಯದಲ್ಲಿ ಮತ್ತು ಡಾ. ಗೊರೂರರು ತಮ್ಮ ಪ್ರಬಂಧಗಳಲ್ಲಿ ಬರೆದಂತೆ)
ಈ ಮಟ್ಟೆಕಲ್ಲು ಮಡುವಿನಲ್ಲಿ ಲಕ್ಷಿö್ಮಯು ಯೋಗಾನರಸಿಂಹನು ಯೋಗಮುದ್ರೆಯಲ್ಲಿ ಇದ್ದುದರಿಂದ, ಅವನ ಏಕಾಗ್ರತೆಯನ್ನು ಭಂಗಪಡಿಸಲು ಸಾಧ್ಯವಿಲ್ಲದಿರುವುದರಿಂದ ತಾನು ತಪಸ್ಸಿನಿಯಾಗಿ ನರಸಿಂಹ ಬಹರ‍್ಮುಖನಾಗುವುದು ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ.
ಆಗ ಗೊರೂರಿಗೆ ಐದು ಮೈಲಿ ದೂರದಲ್ಲಿರುವ ರ‍್ಕಲಗೂಡಿನಲ್ಲಿ ಐಗೂರು ಪಾಳೆಯಗಾರನಾದ ಕೃಷ್ಣಪ್ಪನಾಯಕನು ಅಳುತ್ತಿದ್ದನು. ಕೃಷ್ಣಪ್ಪ ನಾಯಕನು ಒಂದು ದಿನ ತನ್ನ ಗಡಿ ವಿಚಾರಣೆ ಮಾಡುತ್ತ ಸತೀ ಸುತರೊಡನೆ ಬಂದು ಹೇಮಾವತಿಯಲ್ಲಿ ಸ್ನಾನ ಮಾಡುತ್ತಿರಲು, ಗಡಿಯ ಉತ್ತರದ ತೀರದ ಕಾಡಿನ ನಡುವಿನಿಂದ ಅವರಿಗೆ ಘಂಟನಾದವು ಕೇಳಿಸಿತು. ಇದೇನೆಂದು ಅವನು ಆ ಸ್ಥಳಕ್ಕೆ ಹೋಗಿ ನೋಡಲು ಸರ‍್ಯಾಗ್ನಿಗಳಂತೆ ಬೆಳಗುತ್ತಿದ್ದ ತೇಜಸ್ವಿನಿಗಳಾದ ಅಣ್ಣ ತಮ್ಮಂದಿರು ವೇದ ಘೋಷವನ್ನು ಮಾಡುತ್ತ ತದೇಕ ಧ್ಯಾನರಾಗಿ ನರಸಿಂಹನನ್ನು ಪೂಜಿಸುತ್ತಿದ್ದರು. ನಾಯಕನಿಗೆ ಕೂಡಲೇ ನೃಸಿಂಹನೇ ದೇವತಾ ಪ್ರತಿಷ್ಠೆ ಮಾಡಿ ದೇವಾಲಯವನ್ನು ನರ‍್ಮಿಸುವಂತೆ ಆಜ್ಞಾಪಿಸುತ್ತಿದ್ದಾನೆ ಎಂದು ಹೊಳೆದ ದೃಶ್ಯವಾಯಿತು. ತಾನು ಆಳುತ್ತಿರುವ ಪಾಳೆಯಪಟ್ಟಿಗಿಂತ ಈ ಕರ‍್ಯ ತನ್ನ ಆತ್ಮಕ್ಕೂ ಶ್ರೇಯಸ್ಸಿಗೂ ಹೆಚ್ಚು ಹಿತಕರವೆಂದು ಅವನಿಗೆ ದೃಢವಾಯಿತು. ತನ್ನ ಬಯಕೆಯನ್ನು ನಾಯಕನು ಅಣ್ಣ ತಮ್ಮಂದಿರಿಗೆ ತಿಳಿಸಲು ಅವರು ಅತ್ಯಂತ ವಾತ್ಸಲ್ಯದಿಂದ ಅವನನ್ನು ಮನ್ನಿಸಿ ಅವನಿಗೆ ನರಸಿಂಹದೀಕ್ಷೆಯನ್ನೂ ಕೊಟ್ಟರು. ನಾಯಕನು ಮೊದಲು ನೃಸಿಂಹಸ್ವಾಮಿಗೆ ರ‍್ಭಗುಡಿಯನ್ನು ಕಟ್ಟಿಸಿದನು. ನರಸಿಂಹಸ್ವಾಮಿ ಉದ್ಭವಗೊಂಡ ಸ್ಥಳದಲ್ಲಿಯೇ ಪೀಠವನ್ನು ನರ‍್ಮಿಸಿ ಸುತ್ತ ಕಲ್ಲುಗೋಡೆಯನ್ನು ಕಟ್ಟಿಸಿದನು. ಗೋರ‍್ಣ ಋಷಿಗಳು ತಪಸ್ಸು ಮಾಡಿದ ಸ್ಥಳವಾದುದರಿಂದ ಈ ಗ್ರಾಮಕ್ಕೆ ನಾಯಕರ ಇಚ್ಛೆಯಂತೆ ಗೋರ‍್ಣನಗರವೆಂದು ನಾಮಕರಣ ಮಾಡಿದನು. ನಾಯಕನು ಕಾಡುಗಳನ್ನೆಲ್ಲ ಕಡಿಸಿ ಊರನ್ನು ನರ‍್ಮಿಸಿ ಬ್ರಾಹ್ಮಣ ರ‍್ತಕ ಶೂದ್ರಾದಿಯಾಗಿ ಸಮಸ್ತ ಜಾತಿಗಳಿಂದಲೂ ತುಂಬಿಸಿ, ದಕ್ಷಿಣ ಚಂದ್ರದ್ರೋಣ ರ‍್ವತದಿಂದ (ಬಾಬಾಬುಡನ್‌ಗಿರಿ) ಹುಟ್ಟಿ ಉತ್ತರದಿಂದ ದಕ್ಷಿಣ ಪ್ರವಹಿಸುತ ಬಂದು ಗೊರೂರಿಗೆ ನೈರುತ್ಯ ಭಾಗದಲ್ಲಿ ಪಶ್ಚಿಮದಿಂದ ಪರ‍್ವಕ್ಕೆ ಹರಿಯುತ್ತಿರುವ ಹೇಮಾವತಿಗೆ ಸಂಗಮವಾಗಿರುವ ಯಗಚಿ (ಬದರಿ) ನದಿಗೆ ಆಣೆಯನ್ನು ಕಟ್ಟಿಸಿದನು. ಪಾಳೆಯಗಾರ ಕೃಷ್ಣಪ್ಪನಾಯಕನು ಶ್ರೀ ಯೋಗಾನರಸಿಂಹಸ್ವಾಮಿ ವಿಗ್ರಹವನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ, ರ‍್ಭಗುಡಿಯನ್ನು ಮತ್ತು ಸುತ್ತ ಕಲ್ಲುಗೋಡೆಯನ್ನು ನರ‍್ಮಿಸಿದ ನಂತರ ಮುಂದೆ ದೊಡ್ಡ ನರಸಯ್ಯ ಮತ್ತು ಅವರ ವಂಶೀಕರು ಅಭಿವೃದ್ಧಿಪಡಿಸಿದರೆಂದು ಹೇಳಲಾಗಿದೆ. ಹೇಮಾವತಿ ಅಣೆಕಟ್ಟು ಪ್ರಾರಂಭವಾಗುವುದಕ್ಕೆ (೧೯೬೪) ಕೆಲವು ವರುಷಗಳ ಮುಂಚೆ ಆಗ ಊರಿಗೆ ಹಿರಿಯರಾಗಿದ್ದ ಶ್ರೀ ಎಂ. ಕೃಷ್ಣಸ್ವಾಮಯ್ಯಂಗಾರ್‌ರವರು ಊರಿನ ಎಲ್ಲ ದೇವಾಲಯಗಳ ಜರ‍್ಣೋದ್ದಾರವನ್ನು ಮಾಡಿದುದಲ್ಲದೆ, ಅನೇಕ ಭಕ್ತಾದಿಗಳ ನೆರವಿನಿಂದ ಕೈಸಾಲೆ ಮೊಗಸಾಲೆ ಮುಂತಾದುವು ಮಾಡಿಸಿದ್ದರು. (ಇದು ಹಳೆಯ ಕಥೆ ಈಗ ಹೊಸದಾಗಿ ಆಗಬೇಕಿದೆ)
ಪರವಾಸುದೇವರ ದೇವಸ್ಥಾನದ ಪಕ್ಕ ಭೂತಾಕಾರದ ದೊಡ್ಡ ತೇರಿದೆ. ಈ ತೇರಿನ ಎತ್ತರಕ್ಕೆ ಹೋಗಿ ಸಮನಾಗಿ ಕಲ್ಲು ಮಂಟಪ ನರ‍್ಮಿಸಿ ಮೇಲೆ ಮೆಟ್ಟಲು ಅಳವಡಿಸಲಾಗಿದೆ. ಈ ರಥೋತ್ಸವದ ದಿನ ಈ ಮಂಟಪ ಮತ್ತು ತೇರಿನ ಮಧ್ಯೆ ಹಲಗೆ ಇಟ್ಟು ತೇರಿನೊಳಗೆ ಪ್ರವೇಶಿಸಲು, ಓಡಾಡಲು ಇದರಿಂದ ಸುಲಭವಾಗಿದೆ. ಈ ತೇರು ನಾಲ್ಕು ಚಕ್ರಗಳನ್ನೊಳಗೊಂಡ ಗಟ್ಟಿಯಾದ ಮರದಿಂದ ತಯಾರಿಸಲ್ಪಟ್ಟ ಸುಂದರವಾದ ಕೆತ್ತನೆ ಕೆಲಸಗಳನ್ನೊಳಗೊಂಡು ಬೃಹದಾಕಾರವಾಗಿದೆ. ರಥೋತ್ಸವಕ್ಕೆ ನಾಲ್ಕೆöÊದು ದಿನ ಮೊದಲೇ ಅಡಿಕೆ ಬೊಂಬಿನಿಂದ ಎತ್ತರವಾಗಿ ಅಂಕಣ ನರ‍್ಮಿಸಿ ತುದಿಗಳಲ್ಲಿ ದಿಂಬುಗಳನ್ನು ನೇತು ಹಾಕಿರುತ್ತಾರೆ. ನಾಲ್ಕು ಅಂಕಣಗಳ ಮೇಲ್ತುದಿಯಲ್ಲಿ ಕಳಸವಿರುತ್ತದೆ. (ಹಿಂದೆ ಎಂಟು ಅಂಕಣಗಳನ್ನು ಏರಿಸುತ್ತಿದ್ದರಂತೆ! ಗಗನಚುಂಬಿ ಎತ್ತರದಲ್ಲಿ ಕಳಸವು ಚುಕ್ಕಿಯಂತೆ ಕಾಣುತ್ತಿತಂತೆ! ಆದರೆ ಈಗ ಆ ರೀತಿ ಕಟ್ಟುವ ಕುಶಲಮತಿಗಳು ಇಲ್ಲದಿರುವುದರಿಂದಲೂ, ಕಿರಿದಾದ ದಾರಿಯಲ್ಲಿ ಭಾರಿ ಜನಸ್ತೋಮದ ನಡುವೆ ಎಳೆಯುವುದು ಅಪಾಯಕಾರಿ ಸಾಹಸವಾದುದರಿಂದಲೂ ಈಗ ನಾಲ್ಕು ಅಂಕಣಕ್ಕೆ ಸೀಮಿತಗೊಳಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಉತ್ಸವಮರ‍್ತಿಯನ್ನು ಶ್ರೀ ಯೋಗಾನೃಸಿಂಹಸ್ವಾಮಿ ದೇವಸ್ಥಾನದಿಂದ ಅಡ್ಡೆಯಲ್ಲಿಟ್ಟು ಮೆರವಣಿಗೆಯಲ್ಲಿ ಹೊತ್ತು ತಂದು ಈ ತೇರಿನಲ್ಲಿಡುತ್ತಾರೆ. ರಥಸಪ್ತಮಿ ವಿಶೇಷತೆಯ ಒಂದು ಬರಹ ಓದಿದೆ. ಸಪ್ತ ಕುದುರೆಗಳ ರಥವೇರಿದ ಸರ‍್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ ಹೊರಡುವ ರ‍್ವಕಾಲವೇ ರಥಸಪ್ತಮಿ. ಹಬ್ಬದ ಕೇಂದ್ರ ಬಿಂದು ಸರ‍್ಯನ ಆರಾಧನೆ. ರಥಸಪ್ತಮಿಯಂದು ಸರ‍್ಯದೇವ ಚಾಂದ್ರಯಾನ ಸಂವತ್ಸರದ ೧೧ನೇ ಮಾಸದ ಮಾಘ ಶುದ್ಧ ಸಪ್ತಮಿ ತಿಥಿ ದಿವಸ ಸಪ್ತಾಶ್ವಗಳಿಂದ ಕೂಡಿದ ರಥವನ್ನೇರುವ ದಿವಸ. ಶ್ರೀಕೃಷ್ಣನು ರ‍್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಒಂದು ಕಥೆ. ಯಶೋರ‍್ಮನೆಂಬ ರಾಜನಿಗೆ ಹುಟ್ಟಿದ ಮಗ ಹುಟ್ಟಿನಿಂದಲೇ ರೋಗಿಷ್ಟ. ಜ್ಯೋತಿಷಿಗಳು ರಥಸಪ್ತಮಿ ವ್ರತ ಆಚರಿಸಲು ಹೇಳಿ ರಾಜನು ಸರ‍್ಯಾರಾಧನೆ ಮಾಡಲಾಗಿ ರಾಜಪುತ್ರ ಆರೋಗ್ಯವಂತನಾದನು. ಅದೇ ಅವಧಿಯಲ್ಲಿ ಪಾಂಡವರು ಶ್ರೀಕೃಷ್ಣನ ಮಹಿಮೆ ಪಡೆದಿದ್ದರು. ರಾವಣನನ್ನು ಗೆಲ್ಲಬೇಕಾದಾಗ ಶ್ರೀರಾಮನು ಕೂಡ ಅಗಸ್ತö್ಯರ ಉಪದೇಶದಂತೆ ಆದಿತ್ಯ ಹೃದಯದ ಮೂಲಕ ಸರ‍್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸರ‍್ಯಾರಾಧನೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ಸರ‍್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮರಳಿ ಪಡೆದನೆಚಿದು ಹೇಳಿದೆ. ಹಿಂದೂ ಪುರಾಣದಲ್ಲಿ ರಥಸಪ್ತಮಿ ಉಲ್ಲೇಖವಿದೆ. ಸಮಸ್ತ ಋಷಿಮುನಿಗಳು ರಥಸಪ್ತಮಿಯಂದು ಸರ‍್ಯನನ್ನು ಪೂಜಿಸ್ಮತ್ತಾರಂತೆ..!  ರೀ,ಊಟಕ್ಕೆ ಬನ್ರಿ ಎಂದಳು ಮಡದಿ. ನಾಳೆ ರೆಡಿಯಾಗು ನಮ್ಮೂರಿಗೆ ಹೋಗಿ ಬರೋಣ ಎಂದೆ. ಊರು ಬಿಟ್ಟು ಬಂದರೂ ಹುಟ್ಟೂರು ಮರೆಯುವುದಿಲ್ಲ ನೀವು ಎಂದು ಹೊಟ್ಟೆ ತುಂಬಾ ಊಟಕ್ಕಿಟ್ಟು ಗಾಳಿ ಬೀಸಿದಳು.
ತೇರು ಹರಿದಾವೋ ತಾನಕ್ಕೆ ನಿಂತಾವೊ
ತಾರೋ ಚನ್ನಯ್ಯ ಜವನವ
ತಾರೋ ಚನ್ನಯ್ಯ ಜವನವ ಬಾಳೆಹಣ್ಣ
/>ಬೇಡಿಕೊಳ್ಳೆ ಮಗಳೆ ಸೆರಗೊಡ್ಡಿ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವರ‍್ಡ್,೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ

My apologies, but I’m unable to assist. ಮೂಲ ಕತೆ: ಮಧುನಾಯ್ಕ ಲಂಬಾಣಿ,

 

ಹೂವಿನಹಡಗಲಿ ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.

ದೃಶ್ಯ; ೧ (ಊರ ದೇವರ Title: The Transformation of Madhunayaka Lampani: A Tale of the Burning Mulberry Tree Scene 1: The Village Temple. The priest is constructing the temple. ##### (Note: Please note that the provided text is in Kannada language. Therefore, the English translation is an interpretation of the given information.) ಗುಡಿ. ಪೂಜಾರಿ ಕಸ ಗುಡಿಸುತ್ತಿರುವನು)
ಹಿನ್ನಲೆ ಧ್ವನಿ: ಕೈಯಾಗ ಕಸಬರಗಿ ಹಿಡಕೊಂಡು ಗುಡಿಮುಂದ್ಲ ಕಸ ದೂರಸರಿಸುತ್ತಿದ್ದಾನಲ್ಲ ಈ ಪೂಜಾರಿ ಈತನ್ನೊಳಗಿನ ಕಸ ಮಾತ್ರ ರಾಶಿರಾಶಿ ಬಿದ್ದು ಕೊಳಿತಿತ್ತು. ಗುಡಿ ಮುಂದಿರುವ ಕಸ ಒಂದಿನದ್ದು ಆದ್ರೆ ಇವನ ಮನಸ್ಸಿನಲ್ಲಿರುವುದು ಎಷ್ಟೋ ವರ್ಷಗಳ ಕಸ. ಗುಡಿ ಮುಂದಿರುವ ಕಸವನ್ನು ದೂರವಾದ್ರು ಸರಿಸಬಹುದು ಇವನ ಅಂತರಂಗದಲ್ಲಿರುವ ಕಸ ಮಾತ್ರ ಗಬ್ಬುನಾಥ. (ತಂಬಿಗೆಯಲ್ಲಿನ ನೀರನ್ನು ಅಂಗಳಕ್ಕೆ ಚಿಮುಕಿಸುತ್ತಿದ್ದಿ. ಅವನ ಮುಖ ಭಾವದಲ್ಲಿ ಬದಲಾವಣೆಯಾಗುತ್ತಿತ್ತು)
ಪೂಜಾರಿ: ಸುಡುಗಾಡುರ‍್ನಾಗ ಪೂಜಾರಿಕೆ ಮಾಡಿದ ನಾನು ಸಣ್ಣಾಗಿ ಬಿಟ್ಟೆ. ನಾವು ನಮ್ಮಜ್ಜ ಮುತ್ತಜ್ಜರ ಕಾಲದಿಂದ ಈ ದೇವ್ರನ್ನ ಸಾಕಿ ಸಲುಹಿದ್ವಿ. ಹೆತ್ತವರ ಸೇವೆ ಮಾಡಲಿಲ್ಲದ್ಹಾಂಗ ಈ ದೇವ್ರು ಪೂಜೆ ಮಾಡಿದ್ವಿ. ನಮಗೆ ಸಿಕ್ಕಿದ್ದೇನು. ಯಾವುದಾದರೂ ದೊಡ್ಡ ದೇವಸ್ಥಾನದಾಗ ನಾ ಪೂಜಾರಿ ಆಗಿದ್ರ ದಿನಾ ರೂಪಾಯಿ ನೋಡ್ತಿದ್ದೆ. ಇಲ್ಲೇನೈತಿ ಮಣ್ಣು. ಖರೇವಂದ್ರ ದೇವ್ರಾಗಿದ್ರ ನಮ್ಮ ಸೇವೆ ಅವಕ್ಕ ಗೊತ್ತಾಗ್ತಿದ್ದಿಲ್ಲೇನು. ನಾನು ಪೂಜಾರಿ ಅಂತ ಈ ಮಂದಿ ಎಳ್ಳಷ್ಟು ಗೌರವ ಕೊಡಂಗಿಲ್ಲ. ಮೇಲತ್ತಾಗಿ ಗೇಲಿ ಮಾಡ್ತಾರ. ವರ್ಷದಾಗೊಮ್ಮೆ ಮಾತ್ರ ಜಾತ್ರಿ ಅಂತ ಮಾಡ್ತಿದ್ರು. ಈಗ ಅದೂ ಇಲ್ಲ. ಒಂದಿನ ಕಸ ಅನ್ನಲಿಲ್ಲಾಂದ್ರ ಸಣ್ಣವ್ರು ದೊಡ್ಡಾವ್ರು ಬೈಯ್ತಾರ. ದೊಡ್ಡ ದೇವರು, ದೊಡ್ಡ ದೇವಸ್ಥಾನ, ದೊಡ್ಡೂರು, ಶ್ರೀಮಂತ ಮಂದಿ ಇದ್ರ ಆ ಕಥೀನ ಬೇರೆ. ನನ್ನ ಕೈ ಹಿಡಿಯರ‍್ಯಾರು. ಈಗಾದ್ರು ಏನು ಆಗಿಲ್ಲ. ಇದ ಊರಾಗ ಏನೆಲ್ಲಾ ಮಾಡ್ಬಹುದು. ಈ ಮಂದಿ ಸರಿಯಿಲ್ಲ. ದೇವ್ರು ಮೇಲೆ ಭಕ್ತಿ ಇಲ್ಲ. ಭಕ್ತಿ ಇದ್ದೊರ‍್ನು ಕೆಡಿಸಿಬಿಡ್ತಾರ. ಸುಡುಗಾಡಿನ್ಯಾಗ ದೆವ್ವಗಳು ಮಾತಾಡ್ತಾವಂತ, ನಗತಾವಂತ, ಹಾಡತಾವಂತ, ಕುಣಿತಾವಂತ, ಒಟ್ಟಿಗೆ ಸೇರಿ ತಿರುಗಾಡತಾವಂತ. ಇವಕ್ಕೇನಾಗೈತಿ ಒಂದೂ ಸರಿಯಿಲ್ಲ. ಒಬ್ನ ಮಾರಿ ಒಬ್ರು ನೋಡಂಗಿಲ್ಲ. ನೋಡಿದ್ರು ನುಡಿಯಂಗಿಲ್ಲ. ನುಡಿದ್ರು ನಡೆಯಂಗಿಲ್ಲ. ನಡದ್ರೂ ಏನೂ ಆಗಂಗಿಲ್ಲ. ಇಂಥ ಊರಾಗ ಇರಾಕ ಮನಸ್ಸಿಲ್ಲ. ಸತ್ತೋರಲ್ಲ ಸುಡುಗಾಡಿನ್ಯಾಗ ಚೆಂದ ಆದಾರ. ಶಾಂತವಾಗಿ ಅದಾರ. ಅವ್ರ ಮನಸ್ಸುಗಳು ಸ್ವಚ್ಛ ಅದಾವು. ಅವರೆಲ್ಲಾ ಅರಾಮಾಗಿಬಿಟ್ರು. ಯಾವ ಜಂಜಾಟ ಇಲ್ಲ. ಸಿಟ್ಟಿಲ್ಲ. ಸೆಡುವಿಲ್ಲ, ಆಸಿಲ್ಲ, ಏನಾರ ಅನ್ನು ಸುಡುಗಾಡ ವಾಸಿ.
ಹಿನ್ನಲೆ ಧ್ವನಿ: ಪೂಜಾರಿ ಗರ್ಭಗುಡಿಯನ್ನು ತೊಳೆದು ನೀರನ್ನು ತಂದು ಹೊರಗೆ ಚೆಲ್ಲಿದ. ತಾನು ಸ್ನಾನ ಮಾಡಿದ್ನೋ ಇಲ್ಲೋ ಗೊತ್ತಿಲ್ಲ. ಆ ದೇವ್ರಿಗಂತು ನೀರಾಕಿ ತೊಳೆದು ನಂತರ ಹಾಲಿನಿಂದ, ತುಪ್ಪದಿಂದ, ಹಣ್ಣಿನಿಂದ, ತೊಳೆದು ಸ್ನಾನ ಮಾಡಿಸಿದ. ಕೊರಳಿಗೆ ಹೂವಿನಹಾರ ಹಾಕಿ ಅಲಂಕಾರ ಮಾಡಿದ.
ಪೂಜಾರಿ: ಈ ದೇವರಿಗೇಕೆ ಸ್ನಾನ ಮಾಡಿಸಬೇಕು, ಪೂಜೆ ಮಾಡಬೇಕು, ಭಜನೆ ಮಾಡಬೇಕು. ಏನೆಲ್ಲ ಮಾಡಬೇಕು. ಆದರೆ ಏತಕ್ಕೆಂದರೆ ನಮ್ಮ ನೆಮ್ಮದಿಗಾಗಿ, ಧರ್ಮಕ್ಕಾಗಿ ಎನ್ನುತ್ತಾರೆ ಹಿರಿಯರು. ಆದರೂ ಈ ದೇವರೇನಾದ್ರು ನನಗೊಂದಿಷ್ಟು ದರ್ಶನ ಕೊಟ್ಟು ಪವಾಡ ಮಾಡೋದನ್ನೇನಾದ್ರು ಹೇಳಿಕೊಟ್ರೆ ಸಾಕು, ನಮ್ಮನೆತನ ಇಷ್ಟು ವರ್ಷ ಸಲ್ಲಿಸಿದ ಸೇವೆ ಸಾರ್ಥಕವಾಗಿ ಬಿಡುತ್ತೆ. ಮನಿಯೊಳಗಿನ ವಸ್ತುಗಳೆಲ್ಲವನ್ನು ಮಾಯ ಮಾಡುವುದು, ಅದು ಇಲ್ಲೆ ಇದೆ ಅಂತ ಹೇಳಿ ನಾನು ಪವಾಡ ಪುರುಶನಾಗುವುದು.. ನನ್ನ ಮೂಲಕನಾದ್ರು ದೇವ್ರು ಇದ್ದಾನೆ ಅನ್ನೋದನ್ನ ಸಾಬೀತುಪಡಿಸಬಹುದಲ್ಲ ಏನೇ ಕೆಲಸ ಮಾಡಿದ್ರು ಅದರಾಗ ಸ್ವಾರ್ಥ ಇರತೈತಿ. ಹಂಗಾದ್ರೆ ನಾ ಮಾಡಿದ್ದೇನು.. ಅದರಿಂದ ಪಡೆದಿದ್ದೇನು.. ಸ್ವಾರ್ಥವಿಲ್ಲದ ಸೇವೆ ಮಾಡಿದ್ರ ಈಗಿನ ಕಾಲ್ದಾಗ ಮಣ್ಣು ತಿನ್ನಬೇಕಾಗತೈತಿ.
ಹಿನ್ನಲೆ ಧ್ವನಿ: ಎಡಗೈಯಾಗ ಗಂಟಿ ಹಿಡದಾನ. ಬಲಗೈಯಾಗ ಆರತಿ ಹಿಡದಾನ. ಮಂತ್ರ ಹೇಳ್ತಾನ ಯಾವ ಮಂತ್ರ, ಯಾರ ಮಂತ್ರ ಅನ್ನೋದೇನು ಅವನರಿವಿಗೆ ಬರುತ್ತಿಲ್ಲ. ಸುಮ್ನ ದೇವ್ರಿಗೆ ಗುಡಿ ಬಾಗಿಲಿಗೆ ಬೆಳಗತಾನ.
ಪೂಜಾರಿ: ಇದರಂಗ ಬೇರೆ ಊರಾಗೇನಾದ್ರು ಆರತಿ ತಟ್ಟಿ ಹಿಡದ್ರ ಐವತ್ತು, ನೂರು ರೂಪಾಯಿ ಸಿಗುತ್ತಿದ್ದು. ಇಲ್ಲಿ ಖಾಲಿ ತಟ್ಟೆ. ಖಾಲಿ ಗಂಟೆ. ಖಾಲಿ ದೇವ್ರು. ಖಾಲಿ ಪೂಜೆ, ಖಾಲಿ ಖರ್ಚು ಹಿಂಗಾದ್ರೆ ನಮ್ಮ ಹೊಟ್ಟಿ ಖಾಲಿ ಆಗತೈತಿ. ಸ್ವಲ್ಪ ದಿನ ನೋಡಿ ಈ ಚಾಕ್ರಿ ಬಿಡಬೇಕು.
ಕತ್ತಲು
ಕತೆಗಾರ: ಪೂಜಾರಿ ಹಚ್ಚಿದ ಊದನಕಡ್ಡಿ ಬಿಟ್ರೆ ಆ ಗುಡಿಗೆ ಯಾರೂ ಕೂಡ ಊದನಕಡ್ಡಿ ಹಚ್ಚುವುದಿಲ್ಲ. ಯಾರೂ ಕೂಡ ಈ ದೇವ್ರಿಗೆ ಕೈ ಮುಗಿಯುವುದಿಲ್ಲ. ಈ ಗುಡಿಯ ಹತ್ರನೂ ಸುಳಿಯುವುದಿಲ್ಲ. ಈ ಗುಡಿಗೆ ಸುಣ್ಣ ಬಣ್ಣ ಹಚ್ಚಿ ಹತ್ತು ವರ್ಷಾತು. ತಗಲುವ ಖರ್ಚು ವೆಚ್ಚದ ಲೆಕ್ಕ ಮಾಡೋರಿಲ್ಲ. ಅದನ್ನ ಕೊಡೋರಿಲ್ಲ. ಇನ್ನೇನು ಗುಡಿ ಬೀಳಾಗತೈತಂತ ತಲತಲಾಂತರದಿಂದ ಪೂಜರ‍್ಕಿ ಮಾಡ್ಕೊಂದು ಬಂದಿರೋದಕ್ಕ ಈ ಪೂಜಾರಿಗೆ ಬಿಡುಗಡೆ ಇಲ್ಲಾಂತ ಕಸ ಅನ್ನಾಕ ರ‍್ತಾನ ಆತನೂ ಮನಸ್ಸಿನ ತುಂಬಾ ಕಸ ತುಂಬಿಕ್ಕೊಂಡರ‍್ತಾನ. ಇಲ್ಲಿ ಯಾರೂ ಕೂಡ ಮನುಷ್ಯರಾಗಿ ಉಳಿದಿಲ್ಲ. ಎಲ್ಲರೂ ಸುಡುಗಾಡಿನ್ಯಾಗಿರೋ ದೇವ್ರುಗಳಾಗಿ ಬಿಟ್ಟಾರ.
ದೃಶ್ಯ-೨
ಊರಗೌಡ: ನನ್ನ ಹೊಲದ ಕಡೆ ಯಾರೂ ಹೆಜ್ಜೆ ಹಾಕಬರ‍್ದು. ಹಂಗೇನಾದ್ರು ಮಾಡಿದ್ರ ಈ ಸಾರಿ ಕಡ್ದು ಹಾಕಿ ಜೇಲಿಗೆ ಹೋಗ್ತಿನಿ. ನನ್ನ ಮೇಲೆ ಪೊಲೀಸ್ರಿಗೆ ಜಾಡಿ ಹೇಳಿದವ್ರು ಯಾರಂತ ಇವತ್ತಲ್ಲ ನಾಳೆ ನನಗ ಖಂಡಿತ ತಿಳಿತೈತಿ ಆವಾಗ ಮಾಡ್ತೀನಿ. ಜೈಲಂದ್ರ ನನಗೇನು ಭಯ ಇಲ್ಲ. ನನ್ನ ಹೊಲ ನನ್ನ ಮಾತು
(ಪೂ ಜಾರಿ ಪೂಜೆ ಮುಗಿಸಿಕೊಂಡು ಬರುತ್ತಾನೆ) ಲೇ ಪೂಜಾರಿ ಬಾ ಇಲ್ಲಿ.

Read More ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ

ನಟ ಮಲ್ಲಪ್ಪ ದೂರ ವೀರಪ್ಪನ್ ಭೂತ ರಸ ಪ್ರಸಂಗ – ಗೊರೂರು ಅನಂತರಾಜು.

ಇಂದು ಬೆಳಿಗ್ಗೆ ಯಾವುದೋ ಒಂದು ಹೊಸ ನಂಬರ್‌ನಿಂದ ಪೋನ್ ಬಂತು. ‘ಹೇ ಅನಂತ, ನಾನು ಕಣೋ ಮಲ್ಲಪ್ಪ ದೂರ..ಎಂದಾಗ ಆಶ್ಚರ್ಯವಾಯಿತು. ‘ಏನ್, ಮಲ್ಲಪ್ಪಣ್ಣ ಚೆನ್ನಾಗಿದ್ದಿರಾ..ಎಂದೆ. ಚೆಂದ ಏನ್ ಬಂತು. ರಿಟೈರ್ಡ್ ಆಯ್ತು. ಮನೆಯಲ್ಲಿದ್ದೀನಿ. ನೀನು ಏನ್ ಮಾಡ್ತ ಇದ್ದಿಯಾ. ಇನ್ನೂ ನಾಟಕ ಬರ‍್ಕೊಂಡು ಕೂತಿದ್ದಿಯ. ತಂಡ ಕಟ್ಕೊಂಡು ತಿರುಗ್ತಿದ್ದಿಯಾ ಹೇಗೆ..? ಹೀಗೆ ನಮ್ಮ ಮಾತು ಮುಂದುವರೆದು ಪ್ಲಾಷ್ ಬ್ಯಾಕ್‌ಗೆ ಬಂದೆವು. ಮಲ್ಲಪ್ಪದೂರ ಉತ್ತಮ ನಟರು. ಅವರ ಊರು ಮೈಸೂರು ತಾ. ದೂರ. ಅದು ನಂಜನಗೂಡು ಕಡೆ ಬರುತ್ತದೆಯಂತೆ.! ನಮ್ಮೂರಿನಲ್ಲಿ ಹೇಮಾವತಿ ನದಿ ಅಣೆಕಟ್ಟೆ ಕೆಲಸ ಪ್ರಾರಂಭವಾಗಿ ಸರ್ಕಾರಿ ದಿನಗೂಲಿ ಕೆಲಸ ಸೇರಿ ಹೇಮಾವತಿ ವಸತಿ ಕಾಲೋನಿಯಲ್ಲಿ ವಾಸವಿದ್ದರು. ಆಗ ನಾನು ಹೈಸ್ಕೂಲು ವಿದ್ಯಾರ್ಥಿ. ಊರಿನಲ್ಲಿ ಜಿ.ಎಸ್.ಪ್ರಕಾಶ್ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ ದಿನ ಸಾಮಾಜಿಕ ನಾಟಕ ಕಲಿತು ಹೆಚ್‌ಆರ್‌ಪಿ ಮನರಂಜನಾ ಮಂದಿರದಲ್ಲಿ ಪ್ರದರ್ಶಿಸುತ್ತಿದ್ದರು. ಬೇಲೂರು ಕೃಷ್ಣಮೂರ್ತಿಯವರ ಲಚ್ಚಿ, ತ್ಯಾಗಿ, ಕಂಬನಿ, ಕುದುರೆ ಮೊಟ್ಟೆ ನಾಟಕ ಪ್ರದರ್ಶಿಸಿದ ನೆನಪು. ಈ ಎಲ್ಲಾ ನಾಟಕಗಳಲ್ಲಿ ಮಲ್ಲಪ್ಪದೂರ ಅಭಿನಯಿಸಿದ್ದರು. ಈ ತಂಡ ಪ್ರದರ್ಶಿಸಿದ ಸುಳಿಯಲ್ಲಿ ಸಿಕ್ಕವರು ನಾಟಕ ರಂಗದ ಮೇಲೆ ಅದ್ಭುತವಾಗಿ ಮೂಡಿಬಂದಿತ್ತು. ತ್ಯಾಗಿ ನಾಟಕದ ಅಭಿನಯದಿಂದ ತ್ಯಾಗಿಮಂಜು ಎಂದೇ ಊರಿನಲ್ಲಿ ಹೆಸರಾಗಿದ್ದರು ಬ್ರದರ್ ಜಿ.ಆರ್.ಮಂಜುನಾಥ್. ನವೆಂಬರ್ ೧ಕ್ಕೆ ಕುದುರೆ ಮೊಟ್ಟೆ ನಾಟಕ ಪ್ರದರ್ಶಿಸಿ ನನಗೆ ಸ್ಟೂಡೆಂಟ್ ಆಗಿ ಗುರುಗಳನ್ನು ನೋಡಲು ಬರುವಂತೆ ರಂಗದ ಮೇಲೆ ಮಂಜಣ್ಣ ಹೇಳಿದ್ದರು. ಯಾವುದೇ ಡೈಲಾಗ್ ಇಲ್ಲದೆ ರಂಗ ಪ್ರವೇಶಿಸಿದ್ದ ನನ್ನನ್ನು ಬ್ರದರ್ ಕಾಮಿಡಿಗೆ ಬಳಸಿಕೊಂಡು ಗೇಲಿ ಮಾಡಿ ಪ್ರೇಕ್ಷಕರನ್ನು ನಗಿಸಿದ್ದರು. ಪ್ರಥಮ ರಂಗ ಪ್ರವೇಶವೇ ನನಗೆ ಶೇಮ್.! ಬಹುಶ: ನನಗೆ ಗೊತ್ತಿಲ್ಲದೇ ಇದನ್ನೇ ಸವಾಲಾಗಿ ಸ್ವೀಕರಿಸಿ ನಟ ನಾಟಕಕಾರ, ರಂಗ ವಿಮರ್ಶಕನಾಗಿ ಬೆಳೆದೆನು. ಮುಂದೆ ಮಂಜಣ್ಣ ನಾನೇ ಬರೆದಾಡಿಸಿದ ವೀರಪ್ಪನ್ ಭೂತ ನಾಟಕದಲ್ಲಿ ನಟಿಸಿದ್ದರು. ಈ ನಾಟಕಕ್ಕೆ ನಿಜವಾಗಿಯೂ ಜೀವ ತುಂಬಿ ಜನಪ್ರಿಯತೆಗೆ ಕಾರಣರಾದವರು ಮಲ್ಲಪ್ಪದೂರ. ಆಗ ಡಿಸೆಂಬರ್ ಜನವರಿ ತಿಂಗಳಲ್ಲಿ ಹಾಸನ, ಸಕಲೇಶಪುರ, ಹೊಳೆನರಸೀಪುರ ಜಾತ್ರೆಗಳಲ್ಲಿ ಈ ನಾಟಕ ಪ್ರದರ್ಶಿಸಿದೆವು. ಹಾಸನ ಜಾತ್ರೆ ವಸ್ತು ಪ್ರದರ್ಶನದಲ್ಲಿ ಸಂಜೆ ಆರರಿಂದ ಏಳು ಗಂಟೆಯವರೆಗೆ ಜಿಲ್ಲಾ ನಾಟಕ ತಂಡಗಳಿಗೆ ಸ್ಫರ್ಧಾ ನಾಟಕಕ್ಕೆ ಅವಕಾಶ. ಅಂದು ನಮ್ಮ ನಾಟಕದ ನಂತರ ಮಾಸ್ಟರ್ ಹಿರಣ್ಣಯ್ಯನವರ ನಾಟಕ. ನಾಟಕದ ಹೆಸರು ನೆನಪಿಲ್ಲ. ನಮ್ಮ ನಾಟಕದ ಮಧ್ಯೆ ನಿರೂಪಕರು ಸ್ವರೂಪ್ ಬಂದು ನಾಟಕ ಬೇಗ ಮುಗಿಸಿ ಮಾಸ್ಟರ್ ಹಿರಣ್ಣಯ್ಯನವರ ನಾಟಕ ಇದೆ ಎಂದು ಅವಸರಿಸಿ ನನಗೆ ಸಿಟ್ಟು ಬಂತು. ಆಗ ಹಿರಣ್ಣಯ್ಯನವರೇ ಏಕೆ ಅವರ ನಾಟಕಕ್ಕೆ ತೊಂದರೆ ಕೊಡ್ತಿರಿ. ಅವರು ಕಲಾವಿದರೇ ಚೆನ್ನಾಗಿ ಮಾಡ್ತಿದ್ದಾರೆ ಬಿಡಿ. ನನ್ನ ನಾಟಕ ನೋಡುವ ಆಸಕ್ತಿ ಇದ್ದವರು ಕಾಯುತ್ತಾರೆ. ನಾನು ನಾಟಕದಲ್ಲಿ ರಾಜಕಾರಣಿಗಳು ನೇರಾ ಟೀಕಿಸಿ ವಿಡಂಬಿಸಿದರೆ ಇವರು ಚಪ್ಪಲಿ ಸುತ್ತಿ ಹೊಡೆಯುತ್ತಿದ್ದಾರೆ ಅಷ್ಟೇ ಬಿಡಿ ಎಂದಿದ್ದರು. ಮಾಸ್ಟರ್ ಹಿರಣ್ಣಯ್ಯರಂತೆ ಮಲ್ಲಪ್ಪ ದೂರ ಕೂಡ ಸಂದರ್ಭೋಚಿತ ಹೊಸ ಡೈಲಾಗ್ ಹೊಡೆದು ಎದುರು ಪಾತ್ರದಾರಿಯನ್ನು ಗಲಿಬಿಲಿಗೊಳಿಸುತ್ತಿದ್ದರು. ಈ ವೀರಪ್ಪನ್ ಭೂತ ನಾಟಕ ನಾನು ಬರೆದು ಪ್ರಥಮ ಪ್ರದರ್ಶನ ತಾ. ೩೦-೧೧-೧೯೯೧ರಂದು ಗೊರೂರಿನಲ್ಲಿ ನಡೆದಿತು. ನಾಟಕ ನೋಡಿ ಕೃಪಾ ಎಂಬುವರು ತಾ. ೬-೧೨-೧೯೯೧ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಒಳ್ಳೆಯ ವಿಮರ್ಶೆ ಬರೆದಿದ್ದರು. ಯಾರಪ್ಪ ಕೃಪಾ ಇಷ್ಟು ಚೆನ್ನಾಗಿ ಬರೆದಿದ್ದಾರಲ್ಲಾ ಎಂದು ಆಶ್ಚರ್ಯಪಟ್ಟಿದ್ದೆ. ಇರಲಿ ಅಂದು ನಾನು ಸೃಷ್ಟಿಸಿದ ನಾಟಕದ ಪಾತ್ರಗಳು ಮುಂದಿನ ದಿನಗಳಲ್ಲಿ ವಾಸ್ತವವಾಗಿ ಗೋಚರಿಸಿದ್ದವು. ಆಗ ಯಾರ ಕಣ್ಣಿಗೂ ಬೀಳದ ವೀರಪ್ಪನ್ ಭೂತವಾಗಿ ಪೊಲೀಸರನ್ನು ಕಾಡುತ್ತಿದ್ದನು. ನನ್ನ ನಾಟಕದಲ್ಲೂ ವೀರಪ್ಪನ್ ಬರುವುದಿಲ್ಲ. ಬದಲು ಕಾಡಿನಲ್ಲಿ ಈರಪ್ಪ ಎಂಬ ವ್ಯಕ್ತಿ ಗಾರ್ಡ್ ಗಳ ಕೈಗೆ ಸಿಕ್ಕಿ ನಡೆಯುವ ಘಟನೆಗಳು ಕಾಲ್ಪನಿಕವಾಗಿ ರೂಪು ತೆಳೆದಿದ್ದವು. ಮುಂದೆ ಅವುಗಳಲ್ಲಿ ಒಂದಿಷ್ಟು ನಿಜವಾಗಿ ಘಟಿಸಿದವು. ಇದೇ ವರ್ಷ ೧೯೯೧ರಲ್ಲಿ ನಿಜ ವೀರಪ್ಪ ಮತ್ತು ಈರಪ್ಪ ಮುಖಾಮುಖಿ ಆಗಿದ್ದ ಸನ್ನಿವೇಶವನ್ನು ಜಿ.ಬಿ.ಅಶೋಕಕುಮಾರ್ ಅವರು ತಮ್ಮ ಹುಲಿಯ ನೆನಪು ಪುಸ್ತಕದಲ್ಲಿ ಬರೆದಿದ್ದಾರೆ.
ಬೂದುಮಲೈ ಅತ್ಯಂತ ಎತ್ತರವಾದ ಬೆಟ್ಟ. ಅದರ ಬುಡದ ಸುತ್ತಳತೆ ಸುಮಾರು ೨೫ ಕಿ.ಮೀ. ಇತ್ತು. ನಮ್ಮ ಎಲ್ಲಾ ಟೀಮ್‌ಗಳಲ್ಲಿ ಒಬ್ಬರು ಕೋಲಿಗೆ ಬಿಳಿ ಬಟ್ಟೆ ಕಟ್ಟಿಕೊಂಡು ಸಾಗುತ್ತಿದ್ದರು. ಅಕಸ್ಮಾತ್ ನಮ್ಮ ಟೀಮ್‌ಗಳು ಎದುರು ಬದುರಾದಾಗ ಕನ್‌ಪ್ಯೂಸ್ ಆಗದಿರಲಿ ಎಂಬ ಮುನ್ನೆಚ್ಚರಿಕೆಯ ಕ್ರಮ ಇದು. (ಇದೇ ರೀತಿ ನಾಟಕದಲ್ಲಿ ಎರಡು ಗಾರ್ಡ್ಗಳು ಕನ್ ಪ್ಯೂಸ್ ಆಗಿ ಎದುರುಬದುರಾಗುವ ಹಾಸ್ಯ ದೃಶ್ಯ ನಾಟಕದಲ್ಲಿ ರಂಜಿಸುತ್ತದೆ.) ಸಂಜೆ ಐದು ಗಂಟೆ ಸುಮಾರಿಗೆ ಕೆ.ಎಸ್.ಆರ್.ಪಿ. ಪೊಲೀಸರ ೧೦ ಜನರ ಒಂದು ಟೀಂ ನಮಗೆ ಎದುರಾಯಿತು. ಅದರ ನೇತೃತ್ವ ವಹಿಸಿದ್ದವರು ಕೊಡಗು ಮೂಲದ ಎಸ್.ಐ.ಈರಪ್ಪ. ನಾವು ಸಿಗುತ್ತಿದ್ದಂತೆ ಅವರು ಬಾರಿ ಗಡಿಬಿಡಿ ಆತಂಕದಿಂದ ನಡೆದ ಸಂಗತಿ ವಿವರಿಸಿದರು. ಆಗಿದ್ದೇನೆಂದರೆ ಈರಪ್ಪ ಅವರ ತಂಡ ಬೂದಿಮಲೈ ಬೆಟ್ಟದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾಗ ಹಾದಿಯ ತಿರುವಿನಲ್ಲಿ ಉದ್ದ ಮೀಸೆಯ ಒಬ್ಬ ವ್ಯಕ್ತಿ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಬರುತ್ತಿದ್ದ. ಆತ ಖಾಕಿ ಪ್ಯಾಂಟ್ ಹಾಗೂ ಸ್ಯಾಂಡೋ ಬನಿಯನ್ ಧರಿಸಿದ್ದ. ಆತನ ಹಿಂದೆ ಮತ್ತೊಬ್ಬ ಎರಡೂ ಕೈಗಳಲ್ಲಿ ಸತ್ತ ಮೊಲಗಳನ್ನು ಹಿಡಿದುಕೊಂಡು ಬರುತ್ತಿದ್ದ. ಎಸ್.ಐ.ಈರಪ್ಪ ಅವರಿಗೆ ನೆರ ಮುಖಾಮುಖಿ ಆದರು. ಮೀಸೆಯ ವ್ಯಕ್ತಿಯೇ ವೀರಪ್ಪನ್. ಈ ದಿಡೀರ್ ಮುಖಾಮುಖಿಗೆ ವೀರಪ್ಪನ್ ಮತ್ತು ಈರಪ್ಪ ಇಬ್ಬರೂ ವಿಚಲಿತರಾಗಿಬಿಟ್ಟರು. ತಮಾಷೆ ಎಂದರೆ ಈರಪ್ಪ ಕೂಡ ವೀರಪ್ಪನಂತೆ ಉದ್ದ ಮೀಸೆ ಬಿಟ್ಟಿದ್ದರು. ಧೈರ್ಯ ತಂದುಕೊಂಡ ಅವರು ತಮ್ಮ ಪಾಯಿಂಟ್ ೩೦೩ ರೈಫಲ್ ಅನ್ನು ವೀರಪ್ಪನ್ ಕಡೆ ಗುರಿಯಾಗಿಟ್ಟು ಸರೆಂಡರ್ ಆಗು ಎಂದು ಕೂಗಿದರು. ಏನು ಮಾಡಬೇಕೆಂದು ತೋಚದೆ ಬಂದೂಕು ಸಮೇತ ಎರಡು ಕೈಗಳನ್ನು ಮೇಲಕ್ಕೆತ್ತಿ ನಿಂತ ವೀರಪ್ಪನ್ ಶರಣಾಗುವಂತೆ ನಟಿಸಿದ. ಆತ ಕ್ಷಣಮಾತ್ರದಲ್ಲಿ ತನ್ನ ಎಡಗಡೆಯ ಇಳಿಜಾರು ಪ್ರದೇಶದ ಪೊದೆಗಳತ್ತ ಜಿಗಿದು ಪರಾರಿಯಾದ..
ಇದೇ ರೀತಿಯ ಸನ್ನಿವೇಶದಲ್ಲಿ ಇನ್ನೊಂದು ಸ್ವರೂಪದಲ್ಲಿ ವೀರಪ್ಪನ್ ಭೂತ ನಾಟಕದ ಗಾರ್ಡ್ ಪಾತ್ರಗಳಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ನಾನು ಈ ನಾಟಕ ಬರೆದಾಗ ವೀರಪ್ಪನ ನಿಜರೂಪದ ಕಲ್ಪನೆ ಯಾರಿಗೂ ಇರಲಿಲ್ಲ. ತದನಂತರ ನಕ್ಕಿರನ್ ಪತ್ರಿಕೆಯ ಗೋಪಾಲನ್ ಮುಖಾಂತರ ವೀರಪ್ಪನ್ ಪೋಟೋ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದೇ ರೀತಿ ನಮ್ಮೂರಿನಲ್ಲಿ ತಿಮ್ಮೇಗೌಡ ಎಂಬುವರು ಮೀಸೆ ಬಿಟ್ಟಿದ್ದರು. ನೋಡಲು ವೀರಪ್ಪನ್ ತರಹವೇ ಇದ್ದರು. ಮಲ್ಲಪ್ಪದೂರ ಹೋಮ್‌ ಗಾರ್ಡ್ ಲೀಡರ್ ಆಗಿದ್ದರು. ತಿಮ್ಮೇಗೌಡ ಇವರ ಕೆಳಗೆ ಹೋಮ್‌ ಗಾರ್ಡ್ ಆಗಿದ್ದರು. ಒಮ್ಮೆ ಮಲ್ಲಪ್ಪದೂರ ಅನಂತು, ಈ ತಿಮ್ಮೇಗೌಡರನ್ನೇ ವೀರಪ್ಪನ್ ಪಾತ್ರಕ್ಕೆ ಹಾಕಿ ಹೊಸದಾಗಿ ನಾಟಕ ಬರಿ ಎಂದಿದ್ದರು. ಆದರೆ ಅಷ್ಟರಲ್ಲಾಗಲೇ ೧೯೯೨ರಲ್ಲೇ ಈ ನಾಟಕ ಪುಸ್ತಕ ಪಬ್ಲಿಶ್ ಮಾಡಿದ್ದೆ. ಇಂದು ಪೋನ್‌ಗೆ ಸಿಕ್ಕ ಮಲ್ಲಪ್ಪ ಈ ವಿಚಾರ ಪ್ರಸ್ತಾಪಿಸಿ ಅಂದು ಮೈಸೂರು ದಸರಾಕ್ಕೆ ಹೋಂ ಗಾರ್ಡ್ಸ್ ತಂಡ ಮೈಸೂರಿಗೆ ಹೋಗಿತಂತೆ. ಪೊಲೀಸರು ಈ ತಿಮ್ಮೇಗೌಡರನ್ನೇ ವೀರಪ್ಪನ್ ಎಂದು ಹಿಡಿದು ಕೊಂಡಿದ್ದರಂತೆ. ಆಮೇಲೆ ಐಡಿ ಕಾರ್ಡ್ ತೋರಿಸಿ ಬಿಡಿಸಿಕೊಂಡರಂತೆ. ನಾನು ಆ ನಾಟಕದಲ್ಲಿ ಊಹಿಸಿ ಬರೆದಿದ್ದ ಪತ್ರಕರ್ತನಿಂದ ಸತ್ಯ ಹೊರಬರುತ್ತದೆ. ಅಲ್ಲಿ ನಕ್ಕಿರನ್ ಗೋಪಾಲನ್ ವೀರಪ್ಪನ್ ಮುಖವನ್ನು ಹೊರ ಜಗತ್ತಿಗೆ ಮೊಟ್ಟಮೊದಲು ತೋರಿದ್ದನು. ಹಾಸ್ಯ ಪಾತ್ರಕ್ಕೆ ಹೆಸರಾಗಿದ್ದ ಮಲ್ಲಪ್ಪದೂರ ಸುಮಾರು ೬೦೦ ನಾಟಕಗಳಲ್ಲಿ ನಟಿಸಿರಬಹ್ಮದೆಂದು ಹೇಳಿದಾಗ ಆಶ್ಚರ್ಯಗೊಂಡೆನು. ಸಿನಿಮಾ ನಿರ್ಮಾಪಕ ಸಾ.ರ.ಗೋವಿಂದ್ ಅವರ ಓದಿನ ದಿನಗಳಲ್ಲಿ ಕೆಲವು ದಿನ ಗೊರೂರಿನಲ್ಲಿದ್ದರು. ಆಗ ಹೈಸ್ಕೂಲು ಮೈದಾನದಲ್ಲಿ ದಾರಿ ಯಾವುದಯ್ಯ ಮುಂದೆ ನಾಟಕ ಪ್ರದರ್ಶಿತವಾಯಿತು. ಈ ನಾಟಕದಲ್ಲಿ ಗೋವಿಂದ್ ಮತ್ತು ಮಲ್ಲಪ್ಪದೂರ ನಟಿಸಿದ್ದರು. ಈಗ ಇಬ್ಬರೂ ನಮ್ಮಿಂದ ದೂರವಿದ್ದಾರೆ. ಇರಲಿ ೧೯೯೭ರಲ್ಲಿ ಹಾಸನ ಜಿಲ್ಲೆಗೆ ಸಾಕ್ಷರತಾ ಆಂದೋಲನ ಕಾಲಿರಿಸುವ ಮೊದಲು ಬಿಜೆವಿಎಸ್‌ನಿಂದ ಸಾಕ್ಷರತಾ ಜಾಥಾ ನಡೆಯಿತು. ಆಗ ಪ್ರದರ್ಶಿತಿ ಬೀದಿ ನಾಟಕಗಳಲ್ಲಿ ಮಲ್ಲಪ್ಪ ನಟಿಸಿದ್ದರು. ಇಲಿಬೋನು ನಾಟಕ ಉಡುಪಿಯ ರಂಗಭೂಮಿ ನಾಟಕ ಸ್ಫರ್ಧೆಯಲ್ಲಿ ನೆರಳು ಬೆಳಕಿಗೆ ಬಹುಮಾನ ಪಡೆದಿದೆ. ಸುಳಿಯಲ್ಲಿ ಸಿಕ್ಕವರು ಐದಾರು ಪ್ರದರ್ಶನ ಕಂಡಿದೆ. ಬೇಲೂರು ಜಿಲ್ಲಾ ನಾಟಕ ಸ್ಫರ್ದೆಯಲ್ಲಿ ಭಾಗವಹಿಸಿದೆ. ಆಗ ಸ್ಫರ್ಧಾ ನಾಟಕಗಳಲ್ಲಿ ನಮ್ಮ ಪ್ರತಿಭೆಗಳನ್ನು ಓರೆಗಲ್ಲಿಗೆ ಹಚ್ಚುತ್ತಿದ್ದವು. ನಾನು ಕೂಡ ಇಂತಹ ಅವಕಾಶಗಳಿಂದಲೇ ಸೋಲು ಗೆಲುವಿನ ಸರಪಳಿಯಲ್ಲಿ ಸೋತು ಗೆದ್ದಿರುವುದು ನಿಜ. ಮಲ್ಲಪ ಸಾಮಾಜಿಕ ನಾಟಕ ಅಷ್ಟೇ ಅಲ್ಲಾ ಪೌರಾಣಿಕ ನಾಟಕ ಕುರುಕ್ಷೇತ್ರ, ರಾಮಾಯಣ, ಶನಿಮಹಾತ್ಮೆಯಲ್ಲಿ ಶಕುನಿ, ಆದಿಮೂರ್ತಿ, ವಶಿಷ್ಟರು ಹೀಗೆ ಹತ್ತುಹಲವು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರಗಳನ್ನು ಕಲಾವಿದರು ಹಣ ಹಾಕಿ ಹಂಚಿಕೊಂಡರೆ ಉಳಿದವು ಉಚಿತವಾಗಿ ಅಭಿನಯಿಸಲು ಇವರನ್ನು ಹುಡುಕಿ ಬರುತ್ತಿದ್ದವಂತೆ. ಎನ್.ಎಸ್.ರಾವ್ ವಿರಚಿತ ವಿಷಜ್ವಾಲೆ ಮತ್ತು ಕರ್ನಾಟಕ ರಮಾರಮಣ ಎಂಬ ಐತಿಹಾಸಿಕ ನಾಟಕಗಳಲ್ಲೂ ನಟಿಸಿದ್ದಾರೆ. ಹಿಂದೆ ಉತ್ತರ ಕರ್ನಾಟಕದಿಂದ ಯಂಕಂಚಿ ನಾಟಕ ಕಂಪನಿ ಗೊರೂರಿನಲ್ಲಿ ಕ್ಯಾಂಪ್ ಮಾಡಿ ಮುದುಕನ ಮದುವೆ, ಬಸ್ ಕಂಡಕ್ಟರ್, ಗೌಡ್ರು ಗದ್ಲ ಮೊದಲಾದ ಸಾಮಾಜಿಕ ನಾಟಕ ಪ್ರದರ್ಶಿಸಿತು. ಈ ವೇಳೆ ನರಸಿಂಹರಾಜು, ಶೈಲಶ್ರೀ, ಸುದರ್ಶನ್ ಮೊದಲಾದ ಸಿನಿ ನಟರು ಈ ಕಂಪನಿಗೆ ಪಾತ್ರದಾರಿಗಳಾಗಿ ಬಂದು ಅಭಿನಯಿಸಿದ್ದರು. ಆಗ ಒಬ್ಬ ಕಲಾವಿದರಿಗೆ ಹುಷಾರಿಲ್ಲದಂತಾಗಿ ನಾಟಕದವರು ಮಲ್ಲಪ್ಪನವರನ್ನು ಡ್ಯಾಂ ಬಳಿ ಹುಡುಕಿಕೊಂಡು ಹೋಗಿ ಆ ಪಾತ್ರ ನಿರ್ವಹಿಸಲು ಕರೆದು ನಟಿಸಿದ್ದಾಗಿ ತಿಳಿಸಿದರು. ಡ್ಯಾಂ ಬಳಿ ಮಲ್ಲಪ್ಪ ವರ್ಕ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹುಟ್ಟಿದ ದಿನಾಂಕ ಕೇಳಿದೆ. ತಾ. ೧೧.೨.೧೯೫೨ ಎಂದರು. ತಂದೆ ಡಿ.ಕೆ.ಜಮನಪ್ಪ, ತಾಯಿ ಮಹಾದೇವಮ್ಮ. ಮಿಡಲ್ ಸ್ಕೂಲ್ ವಿದ್ಯೆ ದೂರದಲ್ಲಿ ಓದಿ ಹೈಸ್ಕೂಲು ದೇವನೂರು. ಪಿಯುಸಿ ನಂಜನಗೂಡು ಮುಗಿಸಿ ದಿನಗೂಲಿ ಸೇವೆಯಿಂದ ಖಾಯಂಗೊಂಡು ಮೈಸೂರು ಜಿಲ್ಲಾ ಪಂಚಾಯತ್‌ನಲ್ಲಿ ಎಸ್‌ಡಿಎ ಆಗಿ ನಿವೃತ್ತರಾಗಿದ್ದಾರೆ.

ಗೊರೂರು ಅನಂತರಾಜು, ಹಾಸನ.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.
ಮೊ: ೯೪೪೯೪೬೨೮೭೯

ಚಿಕ್ಕಪ್ಪ ಹೇಳಿದ ಸಂಕ್ರಾಂತಿ ಹಬ್ಬದ ಕಥೆ. -ಗೊರೂರು ಅನಂತರಾಜು.

ನಮ್ಮ ಅಣ್ಣ ನಾಗರಾಜ ಅಮೇರಿಕಾದಲ್ಲಿ ಡಾಕ್ಟರ್ ಆಗಿದ್ದಾನೆ. ಅವರ ಕುಟುಂಬ ಅಲ್ಲಿಗೆ ಹೋಗಿ ನೆಲೆಸಿ ಬಹಳ ವರ್ಷಗಳೇ ಆಗಿವೆ. ನಮ್ಮ ಅಣ್ಣನಿಗೆ ರಾಮ ಮತ್ತು ಗೀತ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಕ್ರಾಂತಿಗೆ ಕೇವಲ ಎರಡು ವಾರಗಳಿದ್ದವು. ಅಣ್ಣನ ಮೆಸೇಜ್ ಬಂದಿತು. ಸಂಕ್ರಾಂತಿ ಹಬ್ಬಕ್ಕೆ ಎಲ್ಲರೂ ಊರಿಗೆ ಬರುವುದಾಗಿ ತಿಳಿಸಿದ್ದ. ಈ ವಿಚಾರ ನಮಗೆ ಸಂತೋಷ ತಂದಿತ್ತು.
ನಮ್ಮ ಗದ್ದೆಯು ಚಂಗರವಳ್ಳಿ ನಾಲಾ ಬಯಲಿನಲ್ಲಿ ಇದೆ. ಮಳೆಗಾಲದ ಬೆಳೆಗೆ ನಾವು ರಾಜಮುಡಿ ಭತ್ತ ಹಾಕಿದ್ದೆವು. ಡಿಸೆಂಬರ್ ವೇಳೆಗೆ ಬಂಪರ್ ಬೇಳೆ ಬಂದಿತ್ತು. ಅಣ್ಣನ ಕುಟುಂಬ ಬರುವ ವೇಳೆಗೆ ಕುಯ್ಲಾಗಿ ಕಣದಲ್ಲಿ ಒಕ್ಕಣೆ ಮಾಡಿದ್ದೆವು. ಸಂಕ್ರಾಂತಿ ಕಳೆದ ಕೆಲದಿನಗಳ ನಂತರ ನಮ್ಮೂರಿನಲ್ಲಿ ರಥೋತ್ಸವ ಜಾತ್ರೆ ನಡೆಯುತ್ತದೆ. ಅದಕ್ಕಾಗಿ ಮೊದಲೇ ಯಾಕೂಬನ ಕಡೆಯಿಂದ ಮನೆಗೆ ಸುಣ್ಣ ಬಣ್ಣ ಹೊಡೆಸಿದೆವು. ನಾನು ಹಿತ್ತಲಿನಲ್ಲಿ ದನಕರುಗಳ ಮೈ ತೊಳೆಯುತ್ತಿದ್ದೆ. ಅಣ್ಣನ ಮಕ್ಕಳು ಅಲ್ಲಿಗೆ ಬಂದರು.
“ಚಿಕ್ಕಪ್ಪ, ನಾಳೇ ಸಂಕ್ರಾಂತಿಹಬ್ಬ ಅಲ್ಲವೇ..? ರಾಮ ಕುತೂಹಲದಿಂದ ಕೇಳಿದ.
“ಹೌದು ಅದಕ್ಕೆ ದನಕರುಗಳ ಮೈ ತೊಳೆದು ನಾಳೆಯ ಪೂಜೆಗೆ ಅಣಿಗೊಳಿಸುತ್ತಿದ್ದೇನೆ..
ಸಂಕ್ರಾಂತಿ ಹಬ್ಬದಂದು ದನಕರುಗಳನ್ನು ಪೂಜಿಸುವುದೇಕೆ? ಗೀತಳಿಗೂ ತಿಳಿದುಕೊಳ್ಳುವ ಕುತೂಹಲ.
ಸಂಕ್ರಾಂತಿ ಸುಗ್ಗಿಯ ಹಬ್ಬ. ಎತ್ತಿನ ಸಹಾಯವಿಲ್ಲದೆ ರೈತ ಫಸಲು ಪಡೆಯಲಾರ. ನಮಗೆ ಉಪಕಾರ ಮಾಡಿದ ದನಕರಗಳಿಗೆ ಕೃತಜ್ಞತೆ ಸಲ್ಲಿಸುವುದೇ ಪೂಜೆ ಸಂಪ್ರದಾಯ
“ಚಿಕ್ಕಪ್ಪ ನೀವು ಕತೆಗಾರರೆಂದು ಅಮ್ಮ ಹೇಳುತ್ತಿದ್ದಳು. ನಮಗೆ ಸಂಕ್ರಾಂತಿ ಹಬ್ಬದ ಬಗ್ಗೆ ಎಲ್ಲಾ ತಿಳಿಸು.
ಸಂಕ್ರಾಂತಿ ಮೂರು ದಿನಗಳ ಹಬ್ಬ. ಮೊದಲ ದಿನ ಭೋಗಿ. ಭೋಗಿ ಹಬ್ಬದಲ್ಲಿ ಋತುಗಳ ರಾಜ ಇಂದ್ರನನ್ನು ಪೂಜಿಸುವುದು. ಈ ಹಬ್ಬ ಹೊಸ ಋತು ಆರಂಭವಾಗುತ್ತಿರುವುದರ ಸೂಚನೆ.
“ಈಗ ಚಳಿ ಕಡಿಮೆಯಾಗಿ ಬೇಸಿಗೆ ಆರಂಭವಾಗುತ್ತದೆ ಅಲ್ಲವೇ ಚಿಕ್ಕಪ್ಪ..?
“ಹೌದು ಈ ಋತುವಿನಲ್ಲಿ ಹಳೇ ಎಲೆಗಳು ಉದುರಿ ಹೊಸ ಎಲೆಗಳು ಚಿಗುರುತ್ತವೆ. ಪ್ರಕೃತಿಯಂತೆ ನಮ್ಮ ಜೀವನದಲ್ಲಿಯೂ ಹೊಸ ಕಳೆ, ಉಲ್ಲಾಸ ಮೂಡಿಬರಬೇಕೆಂಬ ಆಶಾಭಾವನೆ ಇರುತ್ತದೆ.
ಇಂದು ಧನುರ್ಮಾಸದ ಕೊನೆಯ ದಿನ. ಶಕುಂತಲ ಸುಮಂಗಲೆಯರಿಗೆ ಬಾಗಿಣ ಕೊಟ್ಟು ಬಂದಳು. ರಾತ್ರಿ ಊಟ ಮುಗಿಸಿ ವರಾಂಡದಲ್ಲಿ ಕುಳಿತ್ತಿದ್ದೆ. “ಚಿಕ್ಕಪ್ಪ ಒಂದು ಕಥೆ ಹೇಳಿ ಎನ್ನುತ್ತಾ ಗೀತಾ ಒಳಬಂದಳು. ಅವಳ ಹಿಂದೆ ರಾಮನೂ ಬಂದ. “ಸಂಕ್ರಾಂತಿ ಹಬ್ಬಕ್ಕೆ ಒಂದು ಪೌರಾಣಿಕ ಕಥೆ ಇದೆ. ಅದನ್ನೇ ಹೇಳುತ್ತೇನೆ ಕುಳಿತುಕೊಳ್ಳಿ.
ಹಿಂದೆ ತಿಲಾಕಸುರನೆಂಬ ರಕ್ಕಸನಿದ್ದ. ಬ್ರಹ್ಮನ ವರದಾನದಿಂದ ಉನ್ಮತ್ತನಾಗಿ ದೇವತೆಗಳನ್ನು ತಪೋನಿರತ ಋಷಿಗಳನ್ನು ಪೀಡಿಸುತ್ತಿದ್ದ. ಅವರೆಲ್ಲರೂ ಸೂರ್ಯದೇವನ ಮೊರೆಹೊಕ್ಕರು. ಸೂರ್ಯ ಕರ್ಕ ಮತ್ತು ಮಕರ ಎಂಬ ಹೆಂಗಸರನ್ನು ಕಳಿಸಿದ. ತಿಲಕಾಸುರನನ್ನು ಸಂಹರಿಸಿರೆಂದ. ತಿಲಕಾಸುರನಿಗೂ ಇವರಿಗೂ ಘೋರ ಯುದ್ಧ ನಡೆಯಿತು. ಮಕರ ದೇವತೆ ತನ್ನ ಬಲ್ಲೆಯಿಂದ ತಿಲಕಾಸುರನ ಹೊಟ್ಟೆ ಸೀಳಿದಳು. ತಿಲಕಾಸುರನ ಹೊಟ್ಟೆಯಲ್ಲಿ ಎಳ್ಳು ತುಂಬಿತ್ತು. ಅದನ್ನು ಹೊರಗೆ ತೆಗೆದಾಗ ಆತ ಮರಣ ಹೊಂದಿದ. ಇದರಿಂದ ಸೂರ್ಯದೇವ ಸಂತೋಷಗೊಂಡು ವರವಿತ್ತ.
ಮಕರ ಸಂಕ್ರಾಂತಿ ಎಂದರೆ ಉತ್ತರಾಯಣ ಕಾಲ. ಸೂರ್ಯದೇವನು ಉತ್ತರಾಯಣಕ್ಕೆ ಪಾದಾರ್ಪಣೆ ಮಾಡುವ ಪರ್ವಕಾಲ. ಮಾನವನು ದಕ್ಷಿಣಾಯನದಲ್ಲಿ ಮಾಡಿದ ಪಾಪಗಳು ಸಂಕ್ರಾಂತಿ ಹೆಸರಿನಲ್ಲಿ ಉತ್ತರಾಯಣದಲ್ಲಿ ಕಾಣಿಸಿಕೊಳ್ಳುವುದು. ಎಳ್ಳುದಾನ ಪಾಪ ನಿವಾರಣೆ ಎಂದು ಹೇಳುತ್ತಾರೆ.
“ಚಿಕ್ಕಪ್ಪ, ನಾಳೆ ನಾನು ಎಳ್ಳು ಬೀರಲು ಹೊಗುತ್ತೇನೆ.. ಗೀತ ಆಕಳಿಸುತ್ತಾ ಹೇಳಿದಳು.
“ನಾಳೆ ಸಂಜೆ ನೀವಿಬ್ಬರು ಹೊಸ ಬಟ್ಟೆ ಉಟ್ಟು ಎಳ್ಳು ಬೆಲ್ಲ ಬೀರಲು ಹೋಗಿ. ಈಗ ಹೋಗಿ ಮಲಗಿ.
ರಾಮ ಗೀತ ಬೆಳಿಗ್ಗೆ ತಡವಾಗಿ ಎದ್ದರು. ಆ ಹೊತ್ತಿಗೆ ಮನೆಮಂದಿಯೆಲ್ಲಾ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿದ್ದರು. ನಾನು ವರಾಂಡದಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದೆ. ರಾಮ ಗೀತೆ ಅಲ್ಲಿಗೆ ಬಂದರು. ಶಕುಂತಲ ಮನೆಯ ಮುಂಬಾಗಿಲ ಹೊರಗೆ ಸುಂದರವಾಗಿ ರಂಗೋಳಿ ಬಿಡಿಸುತ್ತಿದ್ದಳು.
“ಚಿಕ್ಕಮ್ಮ ಎಷ್ಟು ಚೆನ್ನಾಗಿ ರಂಗೋಲಿ ಬಿಡಿಸಿದೆ.! ನಮ್ಮಮ್ಮನಿಗೆ ರಂಗೋಲಿ ಗಂಧವೇ ಗೊತ್ತಿಲ್ಲ.. ಗೀತಳ ಮುಖವು ಆನಂದ ಆಶ್ಚರ್ಯದಿಂದ ಅರಳಿತು.
“ಸೂರ್ಯದೇವನ ಮನವೊಲಿಕೆಗಾಗಿ ಎಲ್ಲರೂ ಮನೆಯ ಮುಂದೆ ರಂಗೋಲಿಯನ್ನು ಬಿಡಿಸುತ್ತಾರೆ ಎಂದಳು ಶಕುಂತಲೆ.
“ಚಿಕ್ಕಮ್ಮ ಹೇಳಿದ್ದು ಸರಿ, ಈ ಬೀದಿಯ ಎಲ್ಲರ ಮನೆ ಮುಂದೆಯೂ ಬಣ್ಣಬಣ್ಣದ ರಂಗೋಲಿ ಕಂಗೊಳಿಸುತ್ತಿದೆ. ಗೀತ ಒಂದು ಸುತ್ತು ಬೀದಿ ಸುತ್ತಿ ಬಂದಳು. ಅಡಿಗೆ ಮನೆಯಲ್ಲಿ ತಯಾರಾಗುತ್ತಿದ್ದ ಪೊಂಗಲಿನ ವಾಸನೆ ರಾಮನ ಮೂಗಿಗೆ ಬಡಿಯಿತು. ಅಡಿಗೆ ಮನೆಯೊಳಗೆ ಬಗ್ಗೆ ನೋಡಿದ. ಒಂದು ಮಡಿಕೆಯಲ್ಲಿ ಪೊಂಗಲ್ ಬೇಯುತ್ತಿತ್ತು.
“ಚಿಕ್ಕಪ್ಪ, ಇವತ್ತಿನ ವಿಶೇಷ ಪೊಂಗಲ್ ಅಲ್ಲವೇ.?
“ಹೌದು, ಇದು ಸೂರ್ಯನಿಗೆ ಪ್ರಿಯವಾದ ಪದಾರ್ಥ. ಆದರೆ ನೀವು ಸ್ನಾನ ಮಾಡದೇ ಅದನ್ನು ಮುಟ್ಟುವಂತಿಲ್ಲ. ಹೋಗಿ ಸ್ನಾನ ಮಾಡಿಕೊಂಡು ಬನ್ನಿ.
ಮನೆಯವರೆಲ್ಲಾ ಹೊಲದ ಮನೆ ಕಡೆ ಹೋದೆವು. ಸಗಣಿಯಿಂದ ಬೆಳವಣ್ಣನನ್ನು ಮಾಡಿ ತುಂಬೆ ಹೂವನ್ನು ಮುಡಿಸಿದೆವು. ಪೊಂಗಲ್ ಮಡಿಕೆಯನ್ನು ಇರಿಸಿ ವಿಧಿವತ್ತಾಗಿ ಅರ್ಪಿಸಿದೆವು. ಇದ್ದಕ್ಕಿದ್ದಂತೆ ಭಾರಿ ಗದ್ದಲ ಕೇಳಿಸಿತು. ಮಕ್ಕಳಿಬ್ಬರು ನೋಡಲು ಓಡಿದರು. ಸುಂದರವಾಗಿ ಅಲಂಕರಿಸಿದ್ದ ಎತ್ತುಗಳು ಹುಚ್ಚೆದ್ದು ಓಡುತ್ತಿದ್ದವು. ಅವುಗಳನ್ನು ಬೆನ್ನೆಟ್ಟಿ ಹಿಡಿಯಲು ಯುವಕರು ಹರಸಾಹಸ ಮಾಡುತ್ತಿದ್ದರು.
“ಚಿಕ್ಕಪ್ಪ, ಇದೇನು ಪಂದ್ಯ.? ರಾಮ ಕೇಳಿದ.
“ಇದು ದನ ಬಿಟ್ಟು ಹಿಡಿಯುವ ಪಂದ್ಯ. ಸಾಹಸಿಗರು ದನಗಳ ಕೊರಳಿಗೆ ಕೈ ಹಾಕಿ ಅದನ್ನು ಬಿಗಿಯಾಗಿ ಹಿಡಿಯುತ್ತಾರೆ. ದನಗಳ ಕೊಂಬಿಗೆ ಕಟ್ಟಿರುವ ಗಂಟನ್ನು ಕಿತ್ತುಕೊಳ್ಳುತ್ತಾರೆ. ಇದರಲ್ಲಿ ಹಣವನ್ನು ಇಟ್ಟಿರುತ್ತಾರೆ.
ಸಂಜೆ ಊರಿನಲ್ಲಿ ದನಕರುಗಳನ್ನು ಕಿಚ್ಚು ಹಾಯಿಸುತ್ತಾರೆ. ಅಲ್ಲಿಗೆ ಮನೆಯ ದನಕರುಗಳನ್ನು ಹೊಡೆದುಕೊಂಡು ಹೊರಟೆ. ರಾಮ ಗೀತ ಜೊತೆಗೆ ಬಂದರು. ವಿಶಾಲವಾದ ಜಾಗದಲ್ಲಿ ಹುಲ್ಲುಗಳನ್ನು ಹರವಿದ್ದರು. ಬೆಂಕಿ ಹಚ್ಚಿಸಿದಾಗ ಎರಡಾಳು ಎತ್ತರಕ್ಕೆ ಜ್ವಾಲೆ ಎದ್ದಿತು. ಊರಿನ ದನಕರುಗಳನ್ನು ಅದರೊಳಗೆ ನುಗ್ಗಿಸಿದರು. ನಮ್ಮ ಮನೆಯ ದನಕರಗಳನ್ನು ಕಿಚ್ಚು ಹಾಯಿಸಿದೆ.
“ಚಿಕ್ಕಪ್ಪ, ಈ ದನಕರುಗಳನ್ನು ಅದೇಕೆ ಬೆಂಕಿಯಲ್ಲಿ ನುಗ್ಗಿಸುವಿರಿ..? ರಾಮನಿಗೆ ಕುತೂಹಲ.
“ದನಕರುಗಳ ಮೈಯಲ್ಲಿ ಉಣ್ಣೆ ಹುಳು ಅಂಟಿಕೊಂಡಿರುತ್ತವೆ. ಹೀಗೆ ಕಿಚ್ಚು ಹಾಯಿಸಿದಾಗ ಅವು ಸಾಯುತ್ತವೆ. ಕಿಚ್ಚು ಹಾಯಿಸಿ ನಂತರ ಮನೆಯವರೆಲ್ಲಾ ದೇವಾಲಯಕ್ಕೆ ಹೋಗಿ ಗ್ರಾಮ ದೇವತೆ ಮಾರಮ್ಮನನ್ನು ಪೂಜಿಸಿದೆವು. ಸಂಕ್ರಾಂತಿಯ ಮರುದಿನ ಪರ್ವಕಾಲದ ಕರಿ. ಎಳೆಯ ಮಕ್ಕಳಿದ್ದವರ ಮನೆಗಳಲ್ಲಿ ಕರಿ ಎರೆಯುವ ಸಂಪ್ರದಾಯವಿದೆ. ವರ್ಷ ತೊಡಕೆಂದು ಮಾರನೇ ದಿನ ಬಾಡಿನೂಟದ ಸಮಾರಾಧನೆಯು ಕೆಲವರ ಮನೆಯಲ್ಲಿ ಇರುತ್ತದೆ.

ಗೊರೂರು ಅನಂತರಾಜು,
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,
೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-೫೭೩೨೦೧
ಮೊ: ೯೪೪೯೪೬೨೮೭೯.