ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ

My apologies, but I’m unable to assist. ಮೂಲ ಕತೆ: ಮಧುನಾಯ್ಕ ಲಂಬಾಣಿ,

 

ಹೂವಿನಹಡಗಲಿ ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.

ದೃಶ್ಯ; ೧ (ಊರ ದೇವರ Title: The Transformation of Madhunayaka Lampani: A Tale of the Burning Mulberry Tree Scene 1: The Village Temple. The priest is constructing the temple. ##### (Note: Please note that the provided text is in Kannada language. Therefore, the English translation is an interpretation of the given information.) ಗುಡಿ. ಪೂಜಾರಿ ಕಸ ಗುಡಿಸುತ್ತಿರುವನು)
ಹಿನ್ನಲೆ ಧ್ವನಿ: ಕೈಯಾಗ ಕಸಬರಗಿ ಹಿಡಕೊಂಡು ಗುಡಿಮುಂದ್ಲ ಕಸ ದೂರಸರಿಸುತ್ತಿದ್ದಾನಲ್ಲ ಈ ಪೂಜಾರಿ ಈತನ್ನೊಳಗಿನ ಕಸ ಮಾತ್ರ ರಾಶಿರಾಶಿ ಬಿದ್ದು ಕೊಳಿತಿತ್ತು. ಗುಡಿ ಮುಂದಿರುವ ಕಸ ಒಂದಿನದ್ದು ಆದ್ರೆ ಇವನ ಮನಸ್ಸಿನಲ್ಲಿರುವುದು ಎಷ್ಟೋ ವರ್ಷಗಳ ಕಸ. ಗುಡಿ ಮುಂದಿರುವ ಕಸವನ್ನು ದೂರವಾದ್ರು ಸರಿಸಬಹುದು ಇವನ ಅಂತರಂಗದಲ್ಲಿರುವ ಕಸ ಮಾತ್ರ ಗಬ್ಬುನಾಥ. (ತಂಬಿಗೆಯಲ್ಲಿನ ನೀರನ್ನು ಅಂಗಳಕ್ಕೆ ಚಿಮುಕಿಸುತ್ತಿದ್ದಿ. ಅವನ ಮುಖ ಭಾವದಲ್ಲಿ ಬದಲಾವಣೆಯಾಗುತ್ತಿತ್ತು)
ಪೂಜಾರಿ: ಸುಡುಗಾಡುರ‍್ನಾಗ ಪೂಜಾರಿಕೆ ಮಾಡಿದ ನಾನು ಸಣ್ಣಾಗಿ ಬಿಟ್ಟೆ. ನಾವು ನಮ್ಮಜ್ಜ ಮುತ್ತಜ್ಜರ ಕಾಲದಿಂದ ಈ ದೇವ್ರನ್ನ ಸಾಕಿ ಸಲುಹಿದ್ವಿ. ಹೆತ್ತವರ ಸೇವೆ ಮಾಡಲಿಲ್ಲದ್ಹಾಂಗ ಈ ದೇವ್ರು ಪೂಜೆ ಮಾಡಿದ್ವಿ. ನಮಗೆ ಸಿಕ್ಕಿದ್ದೇನು. ಯಾವುದಾದರೂ ದೊಡ್ಡ ದೇವಸ್ಥಾನದಾಗ ನಾ ಪೂಜಾರಿ ಆಗಿದ್ರ ದಿನಾ ರೂಪಾಯಿ ನೋಡ್ತಿದ್ದೆ. ಇಲ್ಲೇನೈತಿ ಮಣ್ಣು. ಖರೇವಂದ್ರ ದೇವ್ರಾಗಿದ್ರ ನಮ್ಮ ಸೇವೆ ಅವಕ್ಕ ಗೊತ್ತಾಗ್ತಿದ್ದಿಲ್ಲೇನು. ನಾನು ಪೂಜಾರಿ ಅಂತ ಈ ಮಂದಿ ಎಳ್ಳಷ್ಟು ಗೌರವ ಕೊಡಂಗಿಲ್ಲ. ಮೇಲತ್ತಾಗಿ ಗೇಲಿ ಮಾಡ್ತಾರ. ವರ್ಷದಾಗೊಮ್ಮೆ ಮಾತ್ರ ಜಾತ್ರಿ ಅಂತ ಮಾಡ್ತಿದ್ರು. ಈಗ ಅದೂ ಇಲ್ಲ. ಒಂದಿನ ಕಸ ಅನ್ನಲಿಲ್ಲಾಂದ್ರ ಸಣ್ಣವ್ರು ದೊಡ್ಡಾವ್ರು ಬೈಯ್ತಾರ. ದೊಡ್ಡ ದೇವರು, ದೊಡ್ಡ ದೇವಸ್ಥಾನ, ದೊಡ್ಡೂರು, ಶ್ರೀಮಂತ ಮಂದಿ ಇದ್ರ ಆ ಕಥೀನ ಬೇರೆ. ನನ್ನ ಕೈ ಹಿಡಿಯರ‍್ಯಾರು. ಈಗಾದ್ರು ಏನು ಆಗಿಲ್ಲ. ಇದ ಊರಾಗ ಏನೆಲ್ಲಾ ಮಾಡ್ಬಹುದು. ಈ ಮಂದಿ ಸರಿಯಿಲ್ಲ. ದೇವ್ರು ಮೇಲೆ ಭಕ್ತಿ ಇಲ್ಲ. ಭಕ್ತಿ ಇದ್ದೊರ‍್ನು ಕೆಡಿಸಿಬಿಡ್ತಾರ. ಸುಡುಗಾಡಿನ್ಯಾಗ ದೆವ್ವಗಳು ಮಾತಾಡ್ತಾವಂತ, ನಗತಾವಂತ, ಹಾಡತಾವಂತ, ಕುಣಿತಾವಂತ, ಒಟ್ಟಿಗೆ ಸೇರಿ ತಿರುಗಾಡತಾವಂತ. ಇವಕ್ಕೇನಾಗೈತಿ ಒಂದೂ ಸರಿಯಿಲ್ಲ. ಒಬ್ನ ಮಾರಿ ಒಬ್ರು ನೋಡಂಗಿಲ್ಲ. ನೋಡಿದ್ರು ನುಡಿಯಂಗಿಲ್ಲ. ನುಡಿದ್ರು ನಡೆಯಂಗಿಲ್ಲ. ನಡದ್ರೂ ಏನೂ ಆಗಂಗಿಲ್ಲ. ಇಂಥ ಊರಾಗ ಇರಾಕ ಮನಸ್ಸಿಲ್ಲ. ಸತ್ತೋರಲ್ಲ ಸುಡುಗಾಡಿನ್ಯಾಗ ಚೆಂದ ಆದಾರ. ಶಾಂತವಾಗಿ ಅದಾರ. ಅವ್ರ ಮನಸ್ಸುಗಳು ಸ್ವಚ್ಛ ಅದಾವು. ಅವರೆಲ್ಲಾ ಅರಾಮಾಗಿಬಿಟ್ರು. ಯಾವ ಜಂಜಾಟ ಇಲ್ಲ. ಸಿಟ್ಟಿಲ್ಲ. ಸೆಡುವಿಲ್ಲ, ಆಸಿಲ್ಲ, ಏನಾರ ಅನ್ನು ಸುಡುಗಾಡ ವಾಸಿ.
ಹಿನ್ನಲೆ ಧ್ವನಿ: ಪೂಜಾರಿ ಗರ್ಭಗುಡಿಯನ್ನು ತೊಳೆದು ನೀರನ್ನು ತಂದು ಹೊರಗೆ ಚೆಲ್ಲಿದ. ತಾನು ಸ್ನಾನ ಮಾಡಿದ್ನೋ ಇಲ್ಲೋ ಗೊತ್ತಿಲ್ಲ. ಆ ದೇವ್ರಿಗಂತು ನೀರಾಕಿ ತೊಳೆದು ನಂತರ ಹಾಲಿನಿಂದ, ತುಪ್ಪದಿಂದ, ಹಣ್ಣಿನಿಂದ, ತೊಳೆದು ಸ್ನಾನ ಮಾಡಿಸಿದ. ಕೊರಳಿಗೆ ಹೂವಿನಹಾರ ಹಾಕಿ ಅಲಂಕಾರ ಮಾಡಿದ.
ಪೂಜಾರಿ: ಈ ದೇವರಿಗೇಕೆ ಸ್ನಾನ ಮಾಡಿಸಬೇಕು, ಪೂಜೆ ಮಾಡಬೇಕು, ಭಜನೆ ಮಾಡಬೇಕು. ಏನೆಲ್ಲ ಮಾಡಬೇಕು. ಆದರೆ ಏತಕ್ಕೆಂದರೆ ನಮ್ಮ ನೆಮ್ಮದಿಗಾಗಿ, ಧರ್ಮಕ್ಕಾಗಿ ಎನ್ನುತ್ತಾರೆ ಹಿರಿಯರು. ಆದರೂ ಈ ದೇವರೇನಾದ್ರು ನನಗೊಂದಿಷ್ಟು ದರ್ಶನ ಕೊಟ್ಟು ಪವಾಡ ಮಾಡೋದನ್ನೇನಾದ್ರು ಹೇಳಿಕೊಟ್ರೆ ಸಾಕು, ನಮ್ಮನೆತನ ಇಷ್ಟು ವರ್ಷ ಸಲ್ಲಿಸಿದ ಸೇವೆ ಸಾರ್ಥಕವಾಗಿ ಬಿಡುತ್ತೆ. ಮನಿಯೊಳಗಿನ ವಸ್ತುಗಳೆಲ್ಲವನ್ನು ಮಾಯ ಮಾಡುವುದು, ಅದು ಇಲ್ಲೆ ಇದೆ ಅಂತ ಹೇಳಿ ನಾನು ಪವಾಡ ಪುರುಶನಾಗುವುದು.. ನನ್ನ ಮೂಲಕನಾದ್ರು ದೇವ್ರು ಇದ್ದಾನೆ ಅನ್ನೋದನ್ನ ಸಾಬೀತುಪಡಿಸಬಹುದಲ್ಲ ಏನೇ ಕೆಲಸ ಮಾಡಿದ್ರು ಅದರಾಗ ಸ್ವಾರ್ಥ ಇರತೈತಿ. ಹಂಗಾದ್ರೆ ನಾ ಮಾಡಿದ್ದೇನು.. ಅದರಿಂದ ಪಡೆದಿದ್ದೇನು.. ಸ್ವಾರ್ಥವಿಲ್ಲದ ಸೇವೆ ಮಾಡಿದ್ರ ಈಗಿನ ಕಾಲ್ದಾಗ ಮಣ್ಣು ತಿನ್ನಬೇಕಾಗತೈತಿ.
ಹಿನ್ನಲೆ ಧ್ವನಿ: ಎಡಗೈಯಾಗ ಗಂಟಿ ಹಿಡದಾನ. ಬಲಗೈಯಾಗ ಆರತಿ ಹಿಡದಾನ. ಮಂತ್ರ ಹೇಳ್ತಾನ ಯಾವ ಮಂತ್ರ, ಯಾರ ಮಂತ್ರ ಅನ್ನೋದೇನು ಅವನರಿವಿಗೆ ಬರುತ್ತಿಲ್ಲ. ಸುಮ್ನ ದೇವ್ರಿಗೆ ಗುಡಿ ಬಾಗಿಲಿಗೆ ಬೆಳಗತಾನ.
ಪೂಜಾರಿ: ಇದರಂಗ ಬೇರೆ ಊರಾಗೇನಾದ್ರು ಆರತಿ ತಟ್ಟಿ ಹಿಡದ್ರ ಐವತ್ತು, ನೂರು ರೂಪಾಯಿ ಸಿಗುತ್ತಿದ್ದು. ಇಲ್ಲಿ ಖಾಲಿ ತಟ್ಟೆ. ಖಾಲಿ ಗಂಟೆ. ಖಾಲಿ ದೇವ್ರು. ಖಾಲಿ ಪೂಜೆ, ಖಾಲಿ ಖರ್ಚು ಹಿಂಗಾದ್ರೆ ನಮ್ಮ ಹೊಟ್ಟಿ ಖಾಲಿ ಆಗತೈತಿ. ಸ್ವಲ್ಪ ದಿನ ನೋಡಿ ಈ ಚಾಕ್ರಿ ಬಿಡಬೇಕು.
ಕತ್ತಲು
ಕತೆಗಾರ: ಪೂಜಾರಿ ಹಚ್ಚಿದ ಊದನಕಡ್ಡಿ ಬಿಟ್ರೆ ಆ ಗುಡಿಗೆ ಯಾರೂ ಕೂಡ ಊದನಕಡ್ಡಿ ಹಚ್ಚುವುದಿಲ್ಲ. ಯಾರೂ ಕೂಡ ಈ ದೇವ್ರಿಗೆ ಕೈ ಮುಗಿಯುವುದಿಲ್ಲ. ಈ ಗುಡಿಯ ಹತ್ರನೂ ಸುಳಿಯುವುದಿಲ್ಲ. ಈ ಗುಡಿಗೆ ಸುಣ್ಣ ಬಣ್ಣ ಹಚ್ಚಿ ಹತ್ತು ವರ್ಷಾತು. ತಗಲುವ ಖರ್ಚು ವೆಚ್ಚದ ಲೆಕ್ಕ ಮಾಡೋರಿಲ್ಲ. ಅದನ್ನ ಕೊಡೋರಿಲ್ಲ. ಇನ್ನೇನು ಗುಡಿ ಬೀಳಾಗತೈತಂತ ತಲತಲಾಂತರದಿಂದ ಪೂಜರ‍್ಕಿ ಮಾಡ್ಕೊಂದು ಬಂದಿರೋದಕ್ಕ ಈ ಪೂಜಾರಿಗೆ ಬಿಡುಗಡೆ ಇಲ್ಲಾಂತ ಕಸ ಅನ್ನಾಕ ರ‍್ತಾನ ಆತನೂ ಮನಸ್ಸಿನ ತುಂಬಾ ಕಸ ತುಂಬಿಕ್ಕೊಂಡರ‍್ತಾನ. ಇಲ್ಲಿ ಯಾರೂ ಕೂಡ ಮನುಷ್ಯರಾಗಿ ಉಳಿದಿಲ್ಲ. ಎಲ್ಲರೂ ಸುಡುಗಾಡಿನ್ಯಾಗಿರೋ ದೇವ್ರುಗಳಾಗಿ ಬಿಟ್ಟಾರ.
ದೃಶ್ಯ-೨
ಊರಗೌಡ: ನನ್ನ ಹೊಲದ ಕಡೆ ಯಾರೂ ಹೆಜ್ಜೆ ಹಾಕಬರ‍್ದು. ಹಂಗೇನಾದ್ರು ಮಾಡಿದ್ರ ಈ ಸಾರಿ ಕಡ್ದು ಹಾಕಿ ಜೇಲಿಗೆ ಹೋಗ್ತಿನಿ. ನನ್ನ ಮೇಲೆ ಪೊಲೀಸ್ರಿಗೆ ಜಾಡಿ ಹೇಳಿದವ್ರು ಯಾರಂತ ಇವತ್ತಲ್ಲ ನಾಳೆ ನನಗ ಖಂಡಿತ ತಿಳಿತೈತಿ ಆವಾಗ ಮಾಡ್ತೀನಿ. ಜೈಲಂದ್ರ ನನಗೇನು ಭಯ ಇಲ್ಲ. ನನ್ನ ಹೊಲ ನನ್ನ ಮಾತು
(ಪೂ ಜಾರಿ ಪೂಜೆ ಮುಗಿಸಿಕೊಂಡು ಬರುತ್ತಾನೆ) ಲೇ ಪೂಜಾರಿ ಬಾ ಇಲ್ಲಿ.

Read More ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ