ಬಸವ ಸಂಸ್ಕೃತಿ ಅಭಿಯಾನಕ್ಕೆ ಪೂರ್ವಭಾವಿ ಸಭೆ ಆಯೋಜನೆ.

ಬಸವ ಸಂಸ್ಕೃತಿ ಅಭಿಯಾನಕ್ಕೆ ಪೂರ್ವಭಾವಿ ಸಭೆ ಆಯೋಜನೆ.

ಲಿಂಗಾಯತ್ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಹಾಗೂ ರಾಷ್ಟ್ರೀಯ ಬಸವದಳ ಸೇರಿ ಸಭೆಯಲ್ಲಿ ಪಾಲ್ಗೊಂಡವು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ಕ, ಕದಳಿ ವೇದಿಕೆ, ಅಕ್ಕಮಹಾದೇವಿ ಮಹಿಳಾ ಮಂಡಳಿ ಸದಸ್ಯರೂ ಸಹ ಹಾಜರಿದ್ದರು.

ಕೊಪ್ಪಳ ಸರ್ವ ಬಸವಪರ ಸಂಘಟನೆಗಳ ಸಂಯೋಗದೊಂದಿಗೆ ಪೂರ್ವಭಾವಿ ಸಭೆಯನ್ನು ಕೊಪ್ಪಳದ ಶಾಂತವೇದ ಕಲ್ಯಾಣ ಮಂಟಪದಲ್ಲಿ ಸಭೆ ಸಂಜೆ 6 ಗಂಟೆಗೆ ನಡೆಸಲಾಯಿತು.

ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಎಲ್ಲಾ ಪದಾಧಿಕಾರಿಗಳು ಹಾಗೂ ಬಸವಭಕ್ತರು ಬಂದು ಆಗಮಿಸಿ , ತಮ್ಮ ಸಲಹೆ ಸೂಚನೆಳನ್ನು ನೀಡಿದ್ದಾರೆ.

ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಭಾಲ್ಕಿ ಹಿರೇಮಠದ ಶ್ರೀ ಪೂಜ್ಯ ಗುರುಬಸವ ಪಟ್ಟದ್ ದೇವರು ವಹಿಸಿದರು.

ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ ರೂಪರೇಷೆ ಕುರಿತು ಚರ್ಚೆ ನಡೆಯಿತು. ಎಲ್ಲಾ ಬಸವಭಕ್ತರಿಂದ ಅಮೂಲ್ಯ ಸಲಹೆಗಳು ಬಂದವು.

ಕೊಪ್ಪಳ ಜಿಲ್ಲಾ ಘಟಕವು ಬೇರೆ ಬೇರೆ ಸಮಿತಿಗಳನ್ನು ರಚಿಸಿತು. ಗಂಗಾವತಿಯಿಂದ ಬಸವಭಕ್ತರು ಶ್ರೀ ಪರಮಪೂಜ್ಯ ಗುರುಬಸವ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕೊಪ್ಪಳದ ಹಿರಿಯರಾದ ವೀರೇಶ್ ಬಳ್ಳಳ್ಳಿ, ಕೆ. ಶರಣಪ್ಪ ವಕೀಲರು, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಜಿ. ನಾಗರಾಜ್, ಚನ್ನಬಸವ ಕೊಟಗಿ, ಏ.ಕೆ. ಮಹೇಶ್ ಕುಮಾರ್, ಪತ್ರಪ್ಪ, ನಿಜಲಿಂಗಪ್ಪ ಮೆಣಸಗಿ, ತಿಪ್ಪಣ್ಣ ಸಿದ್ದಣ್ಣ, ಪಂಪಣ್ಣ ಮತ್ತು ಅನೇಕರು ಭಾಗವಹಿಸಿದರು.

Leave a Reply