ಗಂಗಾವತಿಯಲ್ಲಿ ಯಶಸ್ವಿ ೪ನೇ ವರ್ಷದ ಗರ್ಭಧಾರಣೆ ಸಮಸ್ಯೆ ಮತ್ತು ಬಂಜೆತನ ನಿವಾರಣೆಯ ಉಚಿತ ಶಿಬಿರ

ಗಂಗಾವತಿ: ಜೀನಿಯ ಫರ್ಟಿಲಿಟಿ ಸೆಂಟರ್ ಹಾಗೂ ಯಶೋಧ ಆಸ್ಪತ್ರೆ ಗಂಗಾವತಿ ಸಹಯೋಗದಲ್ಲಿ ಜನವರಿ-೩ ಶುಕ್ರವಾರ ಬೆಳಿಗ್ಗೆ ೧೦:೦೦ ಗಂಟೆಯಿಂದ ಮದ್ಯಾಹ್ನ ೪:೦೦ ರವರೆಗೆ ಗರ್ಭಧಾರಣೆ ಸಮಸ್ಯೆ ಮತ್ತು ಬಂಜೆತನ ನಿವಾರಣೆ ಬಗ್ಗೆ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ವೈದ್ಯರಾದ ಡಾ|| ಸತೀಶ ರಾಯಕರ್ ಪ್ರಕಟಣೆಯಲ್ಲಿ ತಿಳಿಸಿದರು.
ಹೊಸವರ್ಷದ ಪ್ರಯುಕ್ತ ಈ ಉಚಿತ ಶಿಬಿರದಲ್ಲಿ ಮಕ್ಕಳಿಲ್ಲದ ೭೫ ದಂಪತಿಗಳಿಗೆ ಉಚಿತ ಬಂಜೆತನ ನಿವಾರಣಾ ಶಿಬಿರ, ಉಚಿತ ಸಮಾಲೋಚನೆ, ಉಚಿತ ಸ್ಕ್ಯಾನ್‌, ಉಚಿತ ವೀರ್ಯಾಣು ಪರೀಕ್ಷೆ, ಉಚಿತ ತಪಾಸಣೆ, ಉಚಿತ ಸಲಹೆಗಳನ್ನು ನೀಡಲಾಗುತ್ತದೆ.
ಈ ಶಿಬಿರದಲ್ಲಿ ಡಾ|| ದಿವ್ಯಶ್ರೀ ಪಿ. ಯೆಸ್ ಹಾಗೂ ಡಾ|| ಪ್ರಭಾ ರಾಯಕರ್ ತಪಾಸಣೆ ಮಾಡಲಿದ್ದಾರೆ,
ಮಕ್ಕಳಾಗುವ ಅವಕಾಶವಿದ್ದರೂ ಸಹ ಸೂಕ್ತ ಸಲಹೆ, ಸೂಚನೆ, ಚಿಕಿತ್ಸೆಗಳಿಲ್ಲದೆ ಸಂತಾನಕ್ಕಾಗಿ ಹಂಬಲಿಸುತ್ತಿರುವ ದಂಪತಿಗಳಿಗಾಗಿಯೇ ಈ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ದಂಪತಿಗಳ ಬಂಜೆತನ ಪರಿಹಾರಕ್ಕಾಗಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಕೋರಿದ್ದಾರೆ.
ಈ ಉಚಿತ ಶಿಬಿರದ ನೋಂದಣಿಗಾಗಿ ಮೊಬೈಲ್ ಸಂಖ್ಯೆ ೮೯೭೦೪೯೦೧೦೮ ಸಂಪರ್ಕಿಸಲು ತಿಳಿಸಲಾಗಿದೆ.https://www.facebook.com/share/p/19k9iWSizM/

ಕಮ್ಮವಾರಿ ಯುವ ಸೇವಾ ಸಮಿತಿವತಿಯಿಂದ ನೂತನ ಕ್ಯಾಲೆಂಡರ್ ಬಿಡುಗಡೆ

ಗಂಗಾವತಿ: ತಾಲೂಕ ಕಮ್ಮಾವಾರಿ ಯುವ ಸೇವಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರದಂದು ನಗರದ ಅಗ್ರಿಕಲ್ಚರ್ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ 2025 ವರ್ಷದ ನೂತನ ಕ್ಯಾಲೆಂಡರ್ ಅನ್ನು ಶ್ರೀನಿವಾಸ್ ನೆಕ್ಕಂಟಿ, ಚಿನ್ನುಪಾಟಿ ಪ್ರಭಾಕರ್, ಜಿ ರಾಮಕೃಷ್ಣ, ಗೋವಿಂದ ಮುದ್ಯಾಳ, ಎನ್ ಕುಟುಂಬರಾವ್, ಸತ್ಯನಾರಾಯಣ, ಪ್ರಸಾದ್ ಸೇರಿದಂತೆ ಇತರರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನೆಕ್ಕಂಟಿ ಸತ್ಯನಾರಾಯಣ ಮಾತನಾಡಿ ಕಮ್ಮವಾರಿ ಸಮಾಜದ ಅಭಿವೃದ್ಧಿ ಸಂಘದವರು ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಶೇಕಡ 30ರಷ್ಟು ಬಡಜನರನ್ನು ಸಮಾಜ ಹೊಂದಿದ್ದು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತಹ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಹಕಾರಿ ಬ್ಯಾಂಕುಗಳು ನಿರ್ಮಾಣ, ಆಸ್ಪತ್ರೆ ಸೇರಿದಂತೆ ಸೌಲಭ್ಯ ವಂಚಿತ ಬಡ ಕುಟುಂಬಗಳ ಅಭಿವೃದ್ಧಿಗೆ ಶ್ರಮಿಸುವಂತಹ ಕಾರ್ಯವಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಸಂಕ್ರಾಂತಿ ಪ್ರಸಾದ್, ನೆಕ್ಕಂಟಿ ಸತ್ಯನಾರಾಯಣ, ಸುಬ್ಬರಾವ್ ಶ್ರೀಮತಿ ಮಾಲತಿ ಉಪಸ್ಥಿತರಿದ್ದರು. https://www.facebook.com/share/p/1E9861y6rf/