ಗಂಗಾವತಿ: ತಾಲೂಕ ಕಮ್ಮಾವಾರಿ ಯುವ ಸೇವಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರದಂದು ನಗರದ ಅಗ್ರಿಕಲ್ಚರ್ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ 2025 ವರ್ಷದ ನೂತನ ಕ್ಯಾಲೆಂಡರ್ ಅನ್ನು ಶ್ರೀನಿವಾಸ್ ನೆಕ್ಕಂಟಿ, ಚಿನ್ನುಪಾಟಿ ಪ್ರಭಾಕರ್, ಜಿ ರಾಮಕೃಷ್ಣ, ಗೋವಿಂದ ಮುದ್ಯಾಳ, ಎನ್ ಕುಟುಂಬರಾವ್, ಸತ್ಯನಾರಾಯಣ, ಪ್ರಸಾದ್ ಸೇರಿದಂತೆ ಇತರರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೆಕ್ಕಂಟಿ ಸತ್ಯನಾರಾಯಣ ಮಾತನಾಡಿ ಕಮ್ಮವಾರಿ ಸಮಾಜದ ಅಭಿವೃದ್ಧಿ ಸಂಘದವರು ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಶೇಕಡ 30ರಷ್ಟು ಬಡಜನರನ್ನು ಸಮಾಜ ಹೊಂದಿದ್ದು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತಹ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಹಕಾರಿ ಬ್ಯಾಂಕುಗಳು ನಿರ್ಮಾಣ, ಆಸ್ಪತ್ರೆ ಸೇರಿದಂತೆ ಸೌಲಭ್ಯ ವಂಚಿತ ಬಡ ಕುಟುಂಬಗಳ ಅಭಿವೃದ್ಧಿಗೆ ಶ್ರಮಿಸುವಂತಹ ಕಾರ್ಯವಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಂಕ್ರಾಂತಿ ಪ್ರಸಾದ್, ನೆಕ್ಕಂಟಿ ಸತ್ಯನಾರಾಯಣ, ಸುಬ್ಬರಾವ್ ಶ್ರೀಮತಿ ಮಾಲತಿ ಉಪಸ್ಥಿತರಿದ್ದರು. https://www.facebook.com/share/p/1E9861y6rf/