ಬಿ.ಎಲ್.ಬುಲ್ಸ್ ಕರಾಟೆ ಸಂಸ್ಥೆಯ ೯ನೇ ವಾರ್ಷಿಕೋತ್ಸವದಲ್ಲಿ ೫೧ ಕರಾಟೆ ವಿದ್ಯಾರ್ಥಿಗಳಿಗೆ ಬೆಲ್ಟ್ ವಿತರಣೆ.

ಗಂಗಾವತಿ: ಅಕ್ಟೋಬರ್-೧೨ ರಂದು ನಗರದ ಹೊಸಳ್ಳಿ ರಸ್ತೆಯಲ್ಲಿರುವ ವಿವೇಕ ಭಾರತಿ ಶಾಲೆ ಆವರಣದಲ್ಲಿ ಬಿ.ಎಲ್. ಬುಲ್ಸ್ ಕರಾಟೆ ಸಂಸ್ಥೆಯ ೯ನೇ ವಾರ್ಷಿಕೋತ್ಸವದ ಅಂಗವಾಗಿ ಕರಾಟೆ ವಿದ್ಯಾರ್ಥಿಗಳಿಗೆ ಬೆಲ್ಟ್ ಪರೀಕ್ಷೆ ಮತ್ತು ಮಕ್ಕಳಿಗೆ ಸಸಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಮುಖ್ಯ ಪರಿವೀಕ್ಷಕರಾಗಿ ಅಬ್ದುಲ್ ರಜಾಕ್ ಸಿಂಧನೂರ್ ರವರು ಆಗಮಸಿದ್ದರು ಹಾಗೂ ೫೧ ಕರಾಟೆ ವಿದ್ಯಾರ್ಥಿಗಳು ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಮತ್ತು ಪ್ರಿಯಾ ಮತ್ತು ಪ್ರಣವಿ ವಿದ್ಯಾರ್ಥಿಗಳು ಡಬಲ್ ಪ್ರಮೋಶನ್ ಪಡೆದುಕೊಂಡರು.

ಕರಾಟೆಯ ಮುಖ್ಯ ತರಬೇತಿರಾದ ಮಂಜುನಾಥ ರಾಠೋಡ್ ಮಾತನಾಡಿ ಮಕ್ಕಳಿಗಿರುವ ಧೈರ್ಯ. ಪ್ರತಿಭೆ. ಸಾಹಸ ಪ್ರದರ್ಶನ ಮತ್ತು ಇನ್ನಿತರ ಐಚ್ಛಿಕ ಕಲಿಕೆ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಜೊತೆಗೆ ಆತ್ಮ ರಕ್ಷಣಾ ಕಲೆ ಎಲ್ಲರಿಗೂ ಬಹು ಮುಖ್ಯವಾಗಿದೆ ಎಂದು ಹೇಳಿದ್ದರು. ಕರಾಟೆ ತರಬೇತಿದಾರಾದ ಫಯಾಜ್, ಮೀನಾಕ್ಷಿ, ಪ್ರಜ್ವಲ್ ಮತ್ತು ವಿವೇಕ ಭಾರತಿ ಶಾಲೆ ಅಧ್ಯಕ್ಷರಾದ ಅಶೋಕ್ ಮತ್ತು ಕರಾಟೆ ಪಾಲಕರಾದ ಮಂಜುನಾಥ್, ಶ್ರೀಮತಿ ಲಕ್ಷಿö್ಮ, ಶ್ರೀಮತಿ ಶ್ರೀಕುಮಾರಿ, ಡಾ|| ಕಿರಣ್ ಕುಮಾರ್, ಮಂಜುನಾಥ್ ವಕೀಲರು, ಪಲ್ಲವಿ, ವಲಿಭಾಷಾ, ಭೀಮರಾಯ ಮುಂತಾದವರು ಉಪಸ್ಥಿತರಿದ್ದರು.

ಪಂಡರಾಪುರ ಪಾದಯಾತ್ರೆಯ ಯಾತ್ರಾತ್ರಿಗಳಿಂದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ನಿವಾಸದಲ್ಲಿ ವಿಶೇಷ ಪೂಜೆ

ಗಂಗಾವತಿ: ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಅವರ ನಿವಾಸದಲ್ಲಿ ಕಳೆದ 38 ವರ್ಷಗಳಿಂದ ಭದ್ರಾವತಿ ಮತ್ತು ಓಬಳಾಪುರಂನಿಂದ ಪಂಡರಾಪುರಕ್ಕೆ ಹೋಗುವ ಪಾದಯಾತ್ರೆಯ ಯಾತ್ರಾತ್ರಿಗಳಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ಶ್ರೀ ಪಂಡರಾಪುರ ಪಾಂಡುರಂಗನ ಮತ್ತು ರುಕ್ಮಿಣಿ ದೇವಿಯ ಆರಾಧನೆ ಮಾಡಲಾಯಿತು. ಜೊತೆಗೆ ಭಜನೆಯನ್ನು ನೆರವೇರಿಸಿ ಮುಂದೆ ಸಾಗಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಾದಯಾತ್ರೆಯ ಮತ್ತು ಭಜನಾ ಮಂಡಳಿಯ ಉಸ್ತುವಾರಿಗಳಾದ ಚಂದ್ರಶೇಖರ ಗೋಂದಿಮಠ ಭದ್ರಾವತಿ ಅವರು, ಪಾದಯಾತ್ರೆಯು ಸ್ವಾಮಿ ನಾಮದೇವಾನಂದ ಭಾರತಿ ಸ್ವಾಮಿಗಳು ಸಾಧಕಾಶ್ರಮ ಗೊಂದಿಮಠ ಅವರ ನೇತೃತ್ವದಲ್ಲಿ ಕಳೆದ 38 ವರ್ಷಗಳಿಂದ ಶ್ರೀ ಪಾಂಡುರಂಗ ಪಂಡರಾಪುರಕ್ಕೆ ಪಾದಯಾತ್ರೆಯನ್ನು ಇಂದಿಗೂ ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಪಾದಯಾತ್ರೆ ಉದ್ದೇಶ ದುಷ್ಟ ಚಟಗಳಿಂದ ದೂರ ಮಾಡುವುದು. ಗೋಂದಿಮಠ ಎಂದರೆ ಜೀವನದ ಜಂಜಾಟದಲ್ಲಿ ಜೊತೆಗೆ ಗೊಂದಲವಿಲ್ಲದ ಜೀವನ ನಡೆಸುವುದಕ್ಕೆ ಆಶ್ರಯ ನೀಡುವಂತ ಮಠ ಎಂದು ಹೇಳಿದರು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ ಮತ್ತು ಭಜನಾ ಮಂಡಳಿಯ ಸದಸ್ಯರು, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿಮ್ಮ. ಶ್ರೀಮತಿ ಪದ್ಮಾವತಿ, ಶ್ರೀಮತಿ ರಾಧಿಕಾ ಮತ್ತು ಸದಸ್ಯರು, ವಾಸವಿ ಯುವಜನ ಸಂಘದ ಅಧ್ಯಕ್ಷ ಮಂಜುನಾಥ ಮತ್ತು ದರೋಜಿ ವೆಂಕಟೇಶ. ಗುರು ಭೀಮ್ ಭಟ್ ಜೋಶಿ. ಭೀಷ್ಮ ನಾರಾಯಣ ಸೇರಿದಂತೆ ಸಮಾಜದ ಮುಖಂಡರಾದ ಜಿ.ಆರ್.ಎಸ್ ಸತ್ಯನಾರಾಯಣ, ಸಂಜಿವ ಕುಮಾರ ರಾಯಚೂರು. ಹೊಸೂರ ಮಂಜುನಾಥ ಶ್ರೇಷ್ಠಿ, ಬಸವರಾಜ, ಪ್ರಶಾಂತ ಸೇರಿದಂತೆ ಇತರರು ಭಾಗವಹಿಸಿ ಅಧ್ಯಕ್ಷರ ಕುಟುಂಬಸ್ಥರಿಂದ ಲಘುಉಪಹಾರವನ್ನು ನೆರವೇರಿಸಲಾಯಿತು.