ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿಯವರಿಂದ ಶ್ರೀಕೃಷ್ಣದೇವರಾಯ ಜಯಂತಿ ಆಚರಣೆ.

ಗಂಗಾವತಿ: ರಾಜಮಾತೆ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಅಮ್ಮನವರ ನೇತೃತ್ವದಲ್ಲಿ ವಿಜಯನಗರದ ಸಾಮ್ರಾಜ್ಯದ ಚಕ್ರವರ್ತಿ ರಾಜಾ ಶ್ರೀಕೃಷ್ಣದೇವರಾಯರ ಜಯಂತಿಯನ್ನು ಶ್ರೀಕೃಷ್ಣದೇವರಾಯರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಿ, ಸಿಹಿ ತಿಂಡಿ ವಿತರಿಸಿ ಅದ್ಧೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಜಮಾತೆ ಅಮ್ಮನವರು ಅಖಂಡ ಹಿಂದೂ ಸಾಮ್ರಾಜ್ಯವನ್ನು ಸಂರಕ್ಷಿಸಿ ಕೃಷಿ, ಸಾಹಿತ್ಯ, ವಿದ್ವಾಂಸರು, ಕವಿಗಳು ಕೆರೆ-ಕಟ್ಟೆಗಳನ್ನು ನಿರ್ಮಿಸಿ ಅತ್ಯಂತ ಸುಂದರ ಮತ್ತು ಸಮೃದ್ಧಿಯ ರಾಜ್ಯವನ್ನು ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲಿದ್ದು, ನಾವು ಅಂತವರ ವಂಶಿಕರಾಗಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ಅವರ ಆದರ್ಶಗಳನ್ನು ಸರ್ವರೂ ಪಾಲಿಸುವಂತಾಗಲಿ ಎಂದು ತಿಳಿಸಿದರು.

ಚಿತ್ರನಟ ವಿಷ್ಣುತೀರ್ಥ ಜೋಶಿಯವರು ಮಾತನಾಡಿ, ಫೆಬ್ರವರಿ-೧೨ ರಂದು ಪ್ರಪಂಚದಾಧ್ಯಂತ ಬಿಡುಗಡೆಗೊಳ್ಳಲಿರುವ ಕನ್ನಡ ಚಿತ್ರ “ಸಂಕೀರ್ತನ” ಚಿತ್ರದಲ್ಲಿ ಶ್ರೀಕೃಷ್ಣದೇವರಾಯರ ಪಾತ್ರ ನಿರ್ವಹಿಸಿರುವದು ನನ್ನ ಪುಣ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹುಲಿಗೆಮ್ಮ ಹೊನ್ನಪ್ಪ ನಾಯಕ, ಉಪಾಧ್ಯಕ್ಷರಾದ ಪೂರ್ಣಿಮಾ, ಪಿಡಿಒ ಮಲ್ಲಿಕಾರ್ಜುನ್ ಕಡಿವಾಳ, ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ನಾಯಕ ಬಾಳೆಕಾಯಿ, ವಿಎಸ್‌ಎಸ್‌ಎನ್ ಅಧ್ಯಕ್ಷರಾದ ವೆಂಕಟೇಶ್, ಸದಸ್ಯರಾದ ನಾಗಪ್ಪ, ಮಾಜಿ ಅಧ್ಯಕ್ಷರಾದ ತಿರುಕಪ್ಪ, ಯುವರಾಜ್, ರಮೇಶ್, ಚಂದ್ರಪ್ಪ, ರಾಘವೇಂದ್ರ, ಶ್ರವಣಕುಮಾರ ರಾಯಕರ್ ಉಪಸ್ಥಿತರಿದ್ದರು.   https://aratt.ai/@vishwaroopa_news_blog

ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ 12ನೇ ವಾರ್ಷಿಕೋತ್ಸವ ಪ್ರಯುಕ್ತ 251 ಕುಂಭೋತ್ಸವ

ಗಂಗಾವತಿ. ನಗರದ ಅಯ್ಯಪ್ಪಗಿರಿಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ 12ನೆಯ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರುವರಿ-2 ರಿಂದ ಫೆಬ್ರುವರಿ-12 ರವರೆಗೆ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಸಕಲ ಭಕ್ತಾದಿಗಳು ಭಾಗವಿಸುವಂತೆ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಜಟ್ಟಿ ವೀರಪ್ರಸಾದ್, ಉಪಾಧ್ಯಕ್ಷರಾದ ದರೋಜಿ ರಂಗಣ್ಣ, ರಾಮ್ ಪ್ರಸಾದ್ ಮಲ್ಲಿಕಾರ್ಜುನ್ ಶ್ರೀರಾಮನಗರ ಸೇರಿದಂತೆ ಇತರರು ಹೇಳಿದರು.

ಅವರು ಶನಿವಾರದಂದು ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹಂಪಿ ಶ್ರೀ ವಿರೂಪಾಕ್ಷ ಮಹಾಸಂಸ್ಥಾನದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಗಳು, ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಅಷ್ಟಾದಕ ಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮ ಶ್ರೀ ಡಾ. ಎಸ್ ಚಂದ್ರಮೌಳಿ ಗುರುಸ್ವಾಮಿಗಳು, ಶ್ರೀ ವಜ್ರಮುನಿ ಸ್ವಾಮೀಜಿ ಸೇರಿದಂತೆ ನಾಡಿನ ಸಮಸ್ತ ಪೂಜ್ಯ ಗುರುಗಳ ನೇತೃತ್ವದಲ್ಲಿ 251 ಕುಂಭೋತ್ಸವದ ಭವ್ಯ ಮೆರವಣಿಗೆ ಶ್ರೀ ಚನ್ನಬಸವ ತಾತನ ಮಠದಿಂದ ಆರಂಭಗೊಂಡು ಸಕಲ ವಾದ್ಯ ವೈಭವದೊಂದಿಗೆ ದೇವಸ್ಥಾನಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ 18 ಮೆಟ್ಟಿಲುಗಳಿಗೆ ಅಯ್ಯಪ್ಪ ಸ್ವಾಮಿಯ ಗರ್ಭಗುಡಿಯ ಮುಂಭಾಗದಲ್ಲಿ ಪಂಚಲೋಹದ ಕವಚ ಅಳವಡಿಸಲಾಗುತ್ತಿದ್ದು, ಮೇಲಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅಂದಾಜು 60 ಲಕ್ಷ ರೂ ವೆಚ್ಚವಾಗುತ್ತಿದ್ದು, ಸಕಲ ಭಕ್ತಾದಿಗಳು ತನು-ಮನ-ಧನ ಗಳಿಂದ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈಗಾಗಲೇ ದೇವಸ್ಥಾನಕ್ಕೆ ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗುತ್ತಿದ್ದು, 12ನೆಯ ವಾರ್ಷಿಕೋತ್ಸವದ ನಿಮಿತ್ಯವಾಗಿ ಹರೇ ಶ್ರೀನಿವಾಸ ತಂಡದ ಗುರುಗಳಾದ ಶ್ರೀ ಸತೀಶ್ ರಾಮಾನುಜ ಅವರ ನೇತೃತ್ವದಲ್ಲಿ ಭಜನೆ, ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಹಾಗೆಯೇ ರಾಕ್ಷೋಜ್ಞ ಕ್ಷೇತ್ರ ಪಾಲಕ ಹೋಮ ಲಘು ಪೂರ್ಣಾವತಿ ಹವನ, ದೇವತೆಗಳ ಪೂಜಾ, ಉತ್ಸವ ಮೂರ್ತಿಗೆ ಜಲಾಧಿವಾಸ ಪುಷ್ಪಾಧಿವಾಸ ಸೇರಿದಂತೆ ಸಹಿತ ಚಂಡಿ ಹವನ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ದಿನಂಪ್ರತಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ತಾಯಿಬಾಬು, ದೇವಸ್ಥಾನದ ಅರ್ಚಕ ಶಂಕರ್ ಭಟ್ ದಿವಾಕರ್ ಉಪಸ್ಥಿತರಿದ್ದರು.  https://aratt.ai/@vishwaroopa_news_blog

ಮಕರ ಸಂಕ್ರಾಂತಿ ನಿಮಿತ್ಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮೆಟ್ಟಿಲು ಪೂಜೆ.

ಗಂಗಾವತಿ: ನಗರದ ಅಯ್ಯಪ್ಪಗಿರಿಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಜ್ಯೋತಿಯ ಅಂಗವಾಗಿ ಬುಧವಾರದಂದು 18 ಮೆಟ್ಟಲುಗಳ ಒಡೆಯ ಶ್ರೀ ಅಯ್ಯಪ್ಪಸ್ವಾಮಿಗೆ ಮೆಟ್ಟಿಲು ಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಜಟ್ಟಿ ವೀರಪ್ರಸಾದ ಮಾತನಾಡಿ ಹರಿಹರ ಪುತ್ರನಾದ ಶ್ರೀ ಅಯ್ಯಪ್ಪಸ್ವಾಮಿ ದುಷ್ಟರ ಹಾಗೂ ಮಹೀಷಿಯ ಸಂಹಾರಕ್ಕಾಗಿ ಜನ್ಮ ತಾಳಿದ್ದು, ಸ್ವಾಮಿಯ ನಾಮಸ್ಮರಣೆ ಹಾಗೂ ಸೇವೆಯಿಂದ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿಯಾದ ತಾಯಿಬಾಬಾ ಮಾತನಾಡಿ ಫೆಬ್ರುವರಿ 10 ರಿಂದ 12 ರವರೆಗೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 12ನೇ ವರ್ಷದ ಕುಂಭಾಭಿಷೇಕ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಭಾರತಿ ಸ್ವಾಮಿಗಳು. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಡಾ. ಎಸ್ ಚಂದ್ರಮೌಳಿ ಗುರುಸ್ವಾಮಿಗಳು ಪರಮಪೂಜ್ಯ ಶ್ರೀ ರುದ್ರಮುನಿ ಸ್ವಾಮಿಗಳು ಸೇರಿದಂತೆ ಮತ್ತಿತರ ದಿವ್ಯ ಸಾನಿಧ್ಯದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯಲಿವೆ ಎಂದು ಹೇಳಿದರು.

ಮಕರ ಜ್ಯೋತಿಯ ನಿಮಿತ್ತವಾಗಿ 18 ಮೆಟ್ಟಿಲುಗಳಿಗೆ ವಿವಿಧ ಹೂಗಳಿಂದ ಹಾಗೂ ಜ್ಯೋತಿಗಳಿಂದ ಅಲಂಕಾರಗೊಳಿಸಲಾಗಿತ್ತು. ಭಕ್ತರಿಂದ ಹಾಗೂ ಮಾಲಾಧಾರಿಗಳಿಂದ ಭಜನೆ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಶಂಕರ್ ದಿವಾಕರ್. ಮೂಲ ಅಯ್ಯಪ್ಪ ಸ್ವಾಮಿ ದೇವರಿಗೆ ಅಭಿಷೇಕ ಮುತ್ತಿತ್ತರ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.  https://aratt.ai/@vishwaroopa_news_blog