ಕದಂಬ ಸೈನ್ಯ ಸಾಹಿತ್ಯ ಸಂಘಟನೆ ಮತ್ತು ಕದಂಬ ವಾಣಿ ಪತ್ರಿಕೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಕವಿಗೋಷ್ಕಿ ಶ್ರೀರಂಗಪಟ್ಟಣದಲ್ಲಿ

ಹಾಸನ: ಮಂಡ್ಯ ಜಿಲ್ಲೆ ಪ್ರಸಿದ್ಧ ಕದಂಬ ವಾಣಿ ಪತ್ರಿಕೆ ವತಿಯಿಂದ ಮೈಸೂರು ವಿಭಾಗ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಸನ ಜಿಲ್ಲೆ ವತಿಯಿಂದ ಎಂಟು ಮಂದಿಗೆ ಕವಿಗೋಷ್ಠಿಗೆ ಅವಕಾಶ ಕಲ್ಪಿಸಲಾಗುವುದು. ಕವಿಗಳು ತಮ್ಮ ವಿವರ, ಹೆಸರು, ದೂರವಾಣಿ ಸಂಖ್ಯೆಯನ್ನು ಕದಂಬ ಸೈನ್ಯ ಕನ್ನಡ ಸಂಘಟನೆ ಹಾಸನ ಜಿಲ್ಲೆ ಗೌರವ ಅಧ್ಯಕ್ಷರು ಗೊರೂರು ‌ಅನಂತರಾಜುರವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಅಕ್ಟೋಬರ್ ೧೫ನೇ ತಾರೀಖಿನ ಒಳಗೆ ಎಂದು ಮನವಿ ಮಾಡಲಾಗಿದೆ. ಗೊರೂರು ಅನಂತ ರಾಜು ರವರ ದೂರವಾಣಿ ಸಂಖ್ಯೆ ೯೪೪೯೪೬೨೮೭೯.

ಕಾರ್ಯಕ್ರಮವನ್ನು ಶ್ರೀ ಶ್ರೀ ಕ್ಷೇತ್ರ ಚಂದ್ರವನ ಶ್ರೀರಂಗಪಟ್ಟಣ ಪೂರ್ವ ವಾಹಿನಿ ಕಾವೇರಿ ನದಿ ತೀರದಲ್ಲಿ ಹಮ್ಮಿಕೊಳ್ಳಲಾಗಿದೆ. ಒಟ್ಟು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಮಡಿಕೇರಿ ಜಿಲ್ಲೆಗಳ ಕವಿಗಳಿಗೆ ಆಹ್ವಾನ ನೀಡಲಾಗಿದೆ. ಮಧ್ನಾಹ ಊಟದ ವ್ಯವಸ್ಥೆ ಮಾಡಲಾಗಿದೆ, ಸಂಜೆ ಟೀ ವ್ಯವಸ್ಥೆ ಮಾಡಲಾಗಿದೆ.  ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗವುದು. ಪ್ರಥಮ, ದ್ವಿತೀಯ, ತೃತೀಯ, ಇಬ್ಬರಿಗೆ ಸಮಾಧಾನ ಪ್ರಶಸ್ತಿ ನೀಡಿ ವೇದಿಕೆಯಲ್ಲಿ ಸನ್ಮಾನ ಮಾಡಲಾಗುವುದು.

 

Leave a Reply