ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ರಾಯಭಾರಿಗಳು – ನಾಗರಾಜ್ ಎಸ್. ಗುತ್ತೇದಾರ್

ನಗರದ ಪ್ರತಿಷ್ಠಿತ ಸಂಕಲ್ಪ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲದ ಚುನಾವಣೆಯಲ್ಲಿ ಮತ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಕಲ್ಪ ಸಂಸ್ಥೆಯ ಕಾರ್ಯಾಧ್ಯಕ್ಷರು ಮತ್ತು ವಕೀಲರಾದ ನಾಗರಾಜ್ ಎಸ್. ಗುತ್ತೇದಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳಾಗಿ ಪ್ರಜಾಪ್ರಭುತ್ವದ ತತ್ವಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಚುನಾವಣೆಗಳು ಅಧಿಕಾರವನ್ನು ಶಾಂತಿಯುತವಾಗಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸಲು ಸಹಾಯಮಾಡುತ್ತವೆ ಎಂಬುದನ್ನು ಅವರು ಹೈಲೈಟ್ ಮಾಡಿದರು.

ವಿದ್ಯಾರ್ಥಿಗಳು ಅಂತಹ ಚುನಾವಣೆಗಳ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಮತ್ತು ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಎಂ.ಆರ್. ಮಂಜುಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ನಿಯಮಾನುಸಾರ ಮತದಾನ ಮಾಡುವ ಮಹತ್ವವನ್ನು ವಿವರಿಸಿದರು.

ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ಆಧಾರ್ ಗುರುತಿನ ಚೀಟಿಯೊಂದಿಗೆ ಮತದಾನದಲ್ಲಿ ಭಾಗವಹಿಸಿ ಶಾಹಿ ಬಳಸಿ ಸಹಿ ಮಾಡುವ ಮೂಲಕ ಗುರುತಿಸಿಕೊಂಡರು.

ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಲವಲವಿಕೆಯಿಂದ ಭಾಗವಹಿಸುತ್ತಿದ್ದರು ಮತ್ತು ಚುನಾವಣೆಗೆ ಶಕ್ತಿ ತುಂಬುವ ಕಾರ್ಯದಲ್ಲಿ ನಿರತರಾಗಿದ್ದರು.

ಚುನಾವಣಾ ಅಧಿಕಾರಿಗಳಾಗಿ ಹಿರಿಯ ಉಪನ್ಯಾಸಕರಾದ ಬಸವರಾಜ್, ನಾಗರಾಜ್, ಅಶೋಕ್, ವಿಶ್ವನಾಥ್, ಬಸನಗೌಡ, ಶರಣಬಸವರಾಜ್, ಶರಣಮ್ಮ, ರಾಹುಲ್ ಭಾಗವಹಿಸಿದ್ದರು.

ಅವರು ವಿದ್ಯಾರ್ಥಿಗಳಿಗೆ ಚುನಾವಣೆ ಪ್ರಕ್ರಿಯೆಯ ಕುರಿತು ಮಾರ್ಗದರ್ಶನ ಮಾಡುತ್ತಿರುವುದು ಈ ಸಂದರ್ಭದಲ್ಲಿ ಕಂಡುಬಂದಿತು.

ತಂಬೂರಿ ಜನಪದ ಹಾಡುಗಾರರು ಮಾಂಬಳ್ಳಿ ಶ್ರೀನಿವಾಸ್

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಾಂಬಳ್ಳಿಯ ಶ್ರೀನಿವಾಸ್ ಅವರು ಚಿಕ್ಕವಯಸ್ಸಿನಿಂದಲೂ ಜನಪದ ಹಾಡು, ತಂಬೂರಿ ಶೈಲಿಯ ಕತೆಗಳನ್ನು ಹಾಡುತ್ತಾ ಬಂದಿದ್ದಾರೆ.

ಸಿದ್ದಪ್ಪಾಜಿ ಪವಾಡಗಳು, ಮಂಟೇಸ್ವಾಮಿ ಕತೆ ಬಿಳಿಗಿರಿರಂಗನ ಕತೆ, ಮುಡುಕುತೊರೆ ಮಲ್ಲಿಕಾರ್ಜುನನ ಕತೆ, ಮಲೆಮಹದೇಶ್ವರ ಕತೆ. ಹೀಗೆ ಹಲವಾರು ಕತೆಗಳನ್ನು ತಾಳ ತಂಬೂರಿ ಗಗ್ಗರದ ನಾದಕ್ಕೆ ತಕ್ಕಂತೆ ಹಾಡುತ್ತಾರೆ.

ಸರಿಸುಮಾರು ಐವತ್ತಕ್ಕೂ ಹೆಚ್ಚು ತತ್ವಪದಗಳನ್ನು, ಅಂತಿಮಯಾತ್ರೆಯ ಭಜನೆ ಪದಗಳನ್ನು, ಶೋಕಗೀತೆಗಳನ್ನು ಹಾಡುವಲ್ಲಿ ಕರಗತ ಮಾಡಿಕೊಂಡಿದ್ದಾರೆ.

ಇವರ ಮಾಂಬಳ್ಳಿ ಮನೆಯ ಪಕ್ಕ ಮಹದೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನ, ಆ ಕಾಲಕ್ಕೆ ಮಠವಾಗಿತ್ತು. ಮುಂಭಾಗದಲ್ಲಿ ಮಜ್ಜನದ ಹನ್ನೆರಡಾಳುದ್ದ ನೆಲಬಾವಿ ಇದೆ.

ಆ ಬಾವಿಗೆ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಕಾಲು ಜಾರಿ ಬೀಳುತ್ತಾರೆ, ಮಗ ಕಾಣದಿದ್ದಾಗ ತಂದೆತಾಯಿಗಳು ಊರೆಲ್ಲಾ ಹುಡುಕಾಡುತ್ತಾರೆ, ಎಲ್ಲೂ ಸಿಗುವುದಿಲ್ಲ.

ಕೊನೆಗೆ ಮಠದ ಮುಂದಿನ ಬಾವಿಯಿಂದ ತಾಳದ ಶಬ್ಧ ಕೇಳಿಸುತ್ತದೆ. ಜನ ಓಡಿಹೋಗಿ ನೋಡಲು ತಾಳ ಹಾಕುತಿದ್ದ ಹುಡುಗ ಕಾಣಿಸುತ್ತಾನೆ.

ಆಗ ಹಗ್ಗದ ಸಹಾಯದಿಂದ ಮೇಲಕ್ಕೆ ಎತ್ತಿ ನೋಡಿದಾಗ ಬಾಲಕ ಶ್ರೀನಿವಾಸನ ಕೈಲಿ ತಾಳಗಳಿರುತ್ತವೆ.

ಇದನ್ನು ನೋಡಿ ತಂದೆತಾಯಿಗಳು ಮತ್ತು ಊರಿನವರು ಇವನನ್ನು ತಡೆಯಬಾರದು, ಹಾಡಲಿ ಬಿಡಿ ಎಂದು ಹೇಳುತ್ತಾರೆ.

ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬರೀ ತಾಳ ನುಡಿಸಿಕೊಂಡು ಸಿದ್ಧಪ್ಪಾಜಿಯ ಒಂಬತ್ತು ಪವಾಡವನ್ನು ಹಾಡುತ್ತಿದ್ದರು.

ಇವರ ಸ್ವರಮಾಧುರ್ಯಕ್ಕೆ ಜನ ಮನಸೋತು ರಾತ್ರಿಯಿಡಿ ಕುಳಿತು ಕತೆ ಕೇಳುವುದರ ಜೊತೆಗೆ ಸೊಲ್ಲು ಹಿಮ್ಮೇಳ ಹಾಡುತಿದ್ದರೆಂದರೆ ಕೇವಲ ಹನ್ನೆರಡನೇ ವಯಸ್ಸಿಗೆ ಇವರಿಗೆ ಕಲಾಸರಸ್ವತಿ ಒಲಿದಿದ್ದಳು ಎಂದು ಹೇಳಬಹುದು.

ಇವರು ತಾಳ ಹಿಡಿದು ಹಾಡಲು ಪ್ರಾರಂಭಿಸಿದಾಗ ಈಗಿನ ಹೆಸರಾಂತ ಗಾಯಕರು ಯಾರು ಇರಲಿಲ್ಲ. ಅವರೆಲ್ಲರಿಗೂ ಹಿರಿಯ ಕಲಾವಿದರು. ಇವರು ಒಂದೆರಡು ಕಡೆ ಸಿದ್ದಪ್ಪಾಜಿಯ ಕಳ್ಳಿಪವಾಡದ ಸಮಯದಲ್ಲಿ ಕಳ್ಳಿ ಹಾಲನ್ನು ಕುಡಿದಿರುವುದಾಗಿ ಹೇಳಿದ್ದಾರೆ.

ಅಂದರೆ ಅಷ್ಟು ಮೈದುಂಬಿ ಮೈಮರೆತು ಹಾಡುತ್ತಿದ್ದರು. ಇವರಿಗೆ ತಂದೆ-ತಾಯಿ, ಮಡದಿ, ಇಬ್ಬರು ಮಕ್ಕಳಿದ್ದಾರೆ. ಕತೆ ಕಾರ್ಯಕ್ರಮ ಉಳಿದಂತೆ ಪ್ರತಿದಿನವು ಬೆಳಗ್ಗೆ 7 ಗಂಟೆಯಿಂದ 10 ಗಂಟೆ ನಡುವಿನಲ್ಲಿ ಹೆಗಲಿಗೆ ಜೋಳಿಗೆ ನೇತು ಹಾಕಿಕೊಂಡು ಕೈಲಿ ದಂಬಡಿ ತಾಳ ಹಾಕುತ್ತಾ ಉಪದಾನ ಮಾಡುತ್ತಾರೆ.

ಉಪದಾನದಿಂದ ಬಂದ ದವಸ-ಧಾನ್ಯವನ್ನು ತಂದೆ-ತಾಯಿಗಳಿಗೂ ಕೊಟ್ಟು ಅವರು ಮೂರೊತ್ತು ಊಟ ಮಾಡುವಂತೆ ನೋಡಿಕೊಳ್ಳುತ್ತಿರುವುದು ನಮ್ಮ ಇವತ್ತಿನ ಯುವಜನರಿಗೆ ಮಾದರಿ. ತಂದೆ ತಾಯಿಯನ್ನು ಭಿಕ್ಷೆ ಮಾಡಿ ಸಾಕುತ್ತಿರುವವರಲ್ಲಿ ಇವರು ಮೊದಲಿಗರಿರಬಹುದು.

ಕೆಲವೊಮ್ಮೆ ಇವರು ಜೋಳಿಗೆ ಹಿಡಿದು ರಾತ್ರಿ ವೇಳೆ ಕುಂತು ಭಿಕ್ಷೆ ಮಾಡಿ ತಂದು ನೆರೆಮನೆಯವರಿಗೂ ಕೊಟ್ಟು ಊಟ ಮಾಡಿಸಿರುವ ನಿದರ್ಶನವಿದೆ. ಸುತ್ತಲಿನ ಎಲ್ಲಾ ಊರುಗಳ ಮಾಹಿತಿ ಇವರಲ್ಲಿ ಲಭಿಸುತ್ತದೆ.

ಕೋಪವೇ ಇಲ್ಲದ ವ್ಯಕ್ತಿತ್ವ ಇವರದು, ಎನ್ನುವ ನನಗೆ ಮಾಹಿತಿ ಒದಗಿಸಿದ ಮಳವಳ್ಳಿ ಪಿ. ನಾಗರತ್ನಮ್ಮ ರವರು ಜನಪದ ಕ್ಷೇತ್ರಕಾರ್ಯದಲ್ಲಿ ಕ್ರಿಯ ಶೀಲ ವ್ಯಕ್ತಿತ್ವದವರು.

ಅಂಗಡಿಯ ತರಕಾರಿಯಾಗಲಿ, ಭಿಕ್ಷೆ ಮಾಡಿದ ಅಕ್ಕಿ, ರಾಗಿಯಾಗಲಿ, ಹಣ್ಣಾಗಲಿ ಮಾಂಸವೇ ಆಗಲಿ, ಮಡದಿ ಮನೆಗೆ, ತಾಯಿ ಮನೆಗೆಂದು ಎರಡೆರಡು ಕಟ್ಟಿಸುತ್ತಾರೆ.

ಹಾಗೆಯೇ ತಾಯಿ ಮನೆಗೆ, ಮಡದಿ ಮಕ್ಕಳಿಗೆ ತಲುಪಿಸುವುದು ಇವರ ದೊಡ್ಡ ಗುಣ ಎ೦ದು ಹಾಡಿ ಹೊಗಳಿದರು ಮೇಡಂ.

ಗೊರೂರು ಅನಂತರಾಜು
ಹಾಸನ
9449462879
ವಿಳಾಸ : ಹುಣಸಿನಕೆರೆ ಬಡಾವಣೆ,
29ನೇ ವಾಡ್೬, 3 ನೇ ಕ್ರಾಸ್
ಶ್ರೀ ಶನೇಶ್ವರ ದೇವಸ್ಥಾನ,
ಹಾಸನ – 573201

ಸ್ತನ ಕ್ಯಾನ್ಸರ್ ಹಾಗೂ ಹೃದಯರೋಗಗಳನ್ನು ಉಚಿತ ಆರೋಗ್ಯ ಶಿಬಿರಗಳಿಂದ ನಿಯಂತ್ರಿಸಬಹುದಾಗಿದೆ: ಡಾ|| ಜಿ. ಚಂದ್ರಪ್ಪ

ಗಂಗಾವತಿ: ಆರೋಗ್ಯವೇ ಮಹಾ ಭಾಗ್ಯ ಎಂಬ ನಾಣ್ನುಡಿಯಂತೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇದೆ.

ಇತ್ತೀಚೆಗೆ ಹಾಸನ ಸೇರಿ ರಾಜ್ಯದ ಹಲವೆಡೆ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿದೆ, ಇದು ಆತಂಕಕಾರಿ ವಿಷಯವಾಗಿದೆ.

ಅದೇ ರೀತಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ವೈದ್ಯ ಡಾ|| ಜಿ. ಚಂದ್ರಪ್ಪ ಹೇಳಿದರು.

ಇಂತಹ ಮಾರಕ ರೋಗಗಳನ್ನು ನಿಯಂತ್ರಿಸಲು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಜುಲೈ-೧೬ ಬುಧವಾರದಂದು ಶ್ರೀರಾಮನಗರದ ಎಕೆಆರ್‌ಡಿ ಪಿಯು ಕಾಲೇಜಿನಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.

ಈ ಶಿಬಿರವನ್ನು ಲಯನ್ಸ್ ಕ್ಲಬ್ ಗಂಗಾವತಿ, ಬೆಂಗಳೂರು ವಿಜಯನಗರ, ಐಎಂಎ, ವೈದೇಹಿ ಆಸ್ಪತ್ರೆ ಮತ್ತು ಗ್ರೇಸ್ ಫೌಂಡೇಶನ್ ನಡೆಸಿದವು.

ಡಾ|| ಚಂದ್ರಪ್ಪ ಅವರು ಶಿಬಿರದಲ್ಲಿ ಪಾಲ್ಗೊಂಡು, ಆರೋಗ್ಯ ಶಿಬಿರಗಳ ಮಹತ್ವವನ್ನು ವಿವರಿಸಿದರು.

ಈ ಶಿಬಿರವನ್ನು ಲಯನ್ಸ್ ಕ್ಲಬ್‌ನ ಪಿ.ಎಂ.ಜೆ.ಎಫ್, ಲಯನ್ ಡಾ|| ಮಾಧವಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಹಿಂದಿನ ಅಧ್ಯಕ್ಷರಾದ ಲಯನ್ ಗಂಗಾಧರ ಅವರು ಉದ್ಘಾಟಿಸಿದರು.

ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ರಕ್ತ ತಪಾಸಣೆ, ಬಿ.ಪಿ, ಸಕ್ಕರೆ ಕಾಯಿಲೆ ಸೇರಿದಂತೆ ದೀರ್ಘ ಅವಧಿಯ ರೋಗರುಜಿನಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಅಧಿಕ ವೆಚ್ಚವಾಗಲಿದ್ದು, ಅವುಗಳಿಗೆ ಕಡಿವಾಣ ಹಾಕಲು ಇಂತಹ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಸಹಕಾರಿಯಾಗಲಿವೆ ಎಂದರು.

ಮಳೆಯ ನಡುವೆಯೂ ೮೫೦ ಜನರು ತಪಾಸಣೆಗೆ ಹಾಜರಾಗಿದ್ದು, ಇದರಲ್ಲಿ ಹಲವು ತಪಾಸಣೆ ವಿಭಾಗಗಳು ಇದ್ದವು.

ಕಣ್ಣಿನ ತಪಾಸಣೆಗೆ ೨೭೦, ಇಕೋ ಮತ್ತು ಇ.ಸಿ.ಜಿ ಗೆ ೨೫೦, ಮೆಮೋಗ್ರಾಫಿಗೆ ೬೦ ಜನರು ತಪಾಸಣೆಗೆ ಬಂದಿದ್ದರು.

ಆರ್ಥೋಪೆಡಿಕ್ ವಿಭಾಗದಲ್ಲಿ ೨೫೦ ಜನರಿಗೆ ತಪಾಸಣೆ ಮಾಡಲಾಗಿತ್ತು.ಸರ್ವರಿಗೂ ಬಿ.ಪಿ, ಶುಗರ್ ತಪಾಸಣೆ ಉಚಿತವಾಗಿ ಮಾಡಲಾಯಿತು ಹಾಗೂ ಔಷಧಿಗಳ ವಿತರಣೆ ನಡೆಯಿತು.

ಐ.ಎಂ.ಎ ಮೈತ್ರಿ ಅಧ್ಯಕ್ಷರಾದ ಡಾ|| ಮೇಧಾ ಮಲ್ಲನಗೌಡ ಅವರು ಸ್ತನ ಕ್ಯಾನ್ಸರ್ ಕುರಿತು ಮಾತನಾಡಿ, ಮಹಿಳೆಯರು ಸ್ತನ ಕ್ಯಾನ್ಸರ್ ಬಗ್ಗೆ ವಿಶೇಷ ಗಮನಹರಿಸಬೇಕು, ಅಂತಹ ಲಕ್ಷಣಗಳು ಕಂಡುಬಂದಲ್ಲಿ ಪ್ರಥಮ ಹಂತದಿಂದಲೇ ಚಿಕಿತ್ಸೆಗೆ ಒಳಪಟ್ಟಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ಹೇಳಿದರು.

ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಅಧ್ಯಕ್ಷರಾದ ಲ.ಎಸ್. ಸತೀಶ್ ಅದಿಥಿಯ, ಕಾರ್ಯದರ್ಶಿಯಾದ ಲ. ಆನಂದ ಎಸ್, ಖಜಾಂಚಿಯಾದ ಲ. ಸುದೇಶಕುಮಾರ ಉಪಸ್ಥಿತರಿದ್ದರು.

ಡಾ|| ಎ.ಎಸ್.ಎನ್ ರಾಜು, ಡಾ|| ನಾಗರಾಜ ಹೆಚ್., ಡಾ|| ಅಕ್ಷತಾ ಪಟ್ಟಣಶೆಟ್ಟಿ, ಡಾ|| ಅವಿನಾಶ್ ಪದ್ಮಶಾಲಿ ಮೊದಲಾದವರು ಉಪಸ್ಥಿತರಿದ್ದರು.

ಡಾ. ಎ.ಸೋಮರಾಜು, ಟಿ.ರಾಮಕೃಷ್ಣ, ಈರಣ್ಣ ಪತೇಪೂರ್, ಜಿ.ಹರಿಬಾಬು, ಡಾ|| ಪಂಪಾಪತಿ ಮುಂತಾದವರು ಉಪಸ್ಥಿತರಿದ್ದರು.

ಶ್ರೀರಾಮನಗರ ಸಮುದಾಯ ಆಡಳಿತಾಧಿಕಾರಿ ಡಾ|| ವೀರಾನಾಯ್ಕ, ಡಾ|| ವರಲಕ್ಷ್ಮೀ, ರೆಡ್ಡಿ ಶ್ರೀನಿವಾಸ್, ಶಾಂತಪ್ಪ, ಹುಸೇನ್ ಬೀ, ಮಹಮ್ಮದ್ ರಫಿ ಉಪಸ್ಥಿತರು.

ಮುಖಂಡರು ಬಬ್ಬಾ ಸತ್ಯನಾರಾಯಣ, ರೆಡ್ಡಿ ನಾಗೇಶ್ವರರಾವ್, ಮಂಜು ಕಟ್ಟಿಮನಿ, ಜಂಬಣ್ಣ ಐಲಿ, ಶಿವಪ್ಪ ಗಾಳಿ ಇತರರು ಭಾಗವಹಿಸಿದ್ದರು.

ಶಿಬಿರದ ಶಂಯೋಜಕರಾದ ಲಯನ್ ಸುಬ್ರಹ್ಮಣ್ಯಶ್ವರಾವ್ ಹಾಗೂ ಮಲ್ಲಿಕಾರ್ಜುನ ಹಚ್ಚೊಳ್ಳಿಯವರನ್ನು ಸನ್ಮಾನಿಸಲಾಯಿತು.

ಎಕೆಆರ್‌ಡಿ ಕಾಲೇಜು ಆಡಳಿತ ಮಂಡಳಿ ವೈದ್ಯರಿಗೆ ಹಾಗೂ ಶಿಬಿರಾರ್ಥಿಗಳಿಗೆ ಉಪಹಾರ, ಊಟ ವ್ಯವಸ್ಥೆ ಮಾಡಿತ್ತು.

ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೋ:ನಂ: ೯೪೪೮೩೦೨೭೭೫

ಚಿತ್ರ ಸಂತೆ ಪತ್ರಿಕೆಯಿಂದ ಗಂಗಾವತಿಯ ಚನ್ನಬಸವ ಕೊಟಗಿ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ

ಗಂಗಾವತಿ: ಜುಲೈ-೧೫ ಮಂಗಳವಾರ, ಬೆಂಗಳೂರಿನ ಸದಾಶಿವನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭ ಜರುಗಿತು.

ಈ ಸಮಾರಂಭದಲ್ಲಿ ಗಂಗಾವತಿಯ ಕಲಾವಿದ ಹಾಗೂ ಪತ್ರಕರ್ತ ಚನ್ನಬಸವ ಕೊಟಗಿಗೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಪ್ರಶಸ್ತಿಯನ್ನು ಚಿತ್ರ ಸಂತೆ ಪತ್ರಿಕೆಯ ಸಂಪಾದಕರಾದ ಗಿರೀಶ್ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ವರ್ಷದಿಂದ ವರ್ಷಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಬಾರಿ ೫೦ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯದ ಟೆಲಿಕಾಂ ನೌಕರರ ಸಂಘದ ಟ್ರಸ್ಟ್ ಅಧ್ಯಕ್ಷ ಡಾ. ಎನ್. ನರಸಿಂಹಮೂರ್ತಿಯವರು ವಹಿಸಿದ್ದರು.

ಚಲನಚಿತ್ರ ನಟ ವಿಜಯ್ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಕಲಾಭಿಮಾನಿಗಳಿಗೆ ಮತ್ತು ಸಾಧಕರಿಗೆ ಗೌರವ ವ್ಯಕ್ತಪಡಿಸುವ ವೇದಿಕೆಯಾಗಿತ್ತು.

ಚನ್ನಬಸವ ಕೊಟಗಿ, ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದ, ಪತ್ರಕರ್ತ ಮತ್ತು ಪ್ರವಾಸ ಮಾರ್ಗದರ್ಶಕರಾಗಿ ಹಲವಾರು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಂಘಟಕ, ಸಂಘ-ಸಂಸ್ಥೆಗಳ ಪ್ರತಿನಿಧಿ ಹಾಗೂ ಖಾಸಗಿ ಟಿ.ವಿ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿ ಹೆಸರು ಪಡೆದಿದ್ದಾರೆ.

ಪ್ರಸ್ತುತ ಅವರು ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಬಹುಮುಖ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಸ್ವೀಕರಿಸುವಾಗ ಅವರು ತಮ್ಮ ಪತ್ನಿ ಲಕ್ಷ್ಮೀ ಕೊಟಗಿ ಹಾಗೂ ಪುತ್ರ ಸ್ಕಂದ ಕೊಟಗಿ ಉಪಸ್ಥಿತರಿದ್ದರು. ಚಿತ್ರ ಸಂತೆ ಪತ್ರಿಕೆಯ ಸಂಪಾದಕರಿಗೆ ಹಾಗೂ ಸಿಬ್ಬಂದಿಗಳಿಗೆ ಕುಟುಂಬದ ಪರವಾಗಿ ಚನ್ನಬಸವ ಕೊಟಗಿಯವರು ಕೃತಜ್ಞತೆ ಸಲ್ಲಿಸಿದರು.

ಮಾಹಿತಿಗಾಗಿ:
ಚನ್ನಬಸವ ಕೊಟಗಿ
ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರು.
ಹಂಪಿ, ಸಾ|| ಗಂಗಾವತಿ
ಮೊ.ನಂ: ೯೪೮೧೦೮೭೦೦೯

ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ಬಿ.ಎಲ್.ಬುಲ್ಸ್ ಕರಾಟೆ ಸಂಸ್ಥೆಯ ಕ್ರೀಡಾಪಟುಗಳ ಸಾಧನೆ
ಗಂಗಾವತಿ: ಜುಲೈ 13ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದ 9ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಬಿ.ಎಲ್.ಬುಲ್ಸ್ ಕರಾಟೆ ಸಂಸ್ಥೆಯ 26 ಕ್ರೀಡಾಪಟುಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಚಂದ್ರೇಗೌಡ ಪೊಲೀಸ್ ಪಾಟೀಲ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು, ನಮ್ಮ ಸಂಸ್ಥೆಯ 26 ಕರಾಟೆ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದಿದ್ದಾರೆ.
ಅಹಾನ್, ಸಾತ್ವಿಕ್, ಕೃಷ್ಣ, ರಿಷಿಕ್, ಚಿನ್ನಪ್ಪ, ಅವೇಜ್, ಆಲಿಯಾ, ಶರತ್ ಮತ್ತು ಅಬುಬಕರ್ ಕಟಾ ಹಾಗೂ ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶಿವರಾಜ್, ಗಾನವಿ, ಅನ್ವಿತಾ ದೇವಿಕೇರಿ ಮತ್ತು ವಾಣಿ ಕುಮಾರ್ ಕಟಾ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಮರ್ಥ್, ಅಭಿರಾಮ್, ಲೋಚನ್, ಅಖಿಲೇಶ್, ಕುಶಾಲ್, ದಿಲೀಪ್ ಕಟಾದಲ್ಲಿ ಪ್ರಥಮ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪ್ರಣವಿ, ಶರತ್ ಪಂಡಿತ್ ಮತ್ತು ಅಬ್ರಾರ್ ಕಟಾದಲ್ಲಿ ಪ್ರಥಮ ಹಾಗೂ ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹರಣಿ ಕಟಾದಲ್ಲಿ ತೃತೀಯ ಹಾಗೂ ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿದ್ದಾಳೆ.
ಹರ್ಷ ಕಟಾದಲ್ಲಿ ತೃತೀಯ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾನೆ.
ಸಚಿನ್ ಕಟಾ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಗೌರವ ತಂದಿದ್ದಾನೆ.
ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸಾಧನೆಮಾಡಿ ಬಹುಮಾನಗಳನ್ನು ಪಡೆದು ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಈ ಸಾಧನೆಗೆ ವಿದ್ಯಾರ್ಥಿಗಳಿಗೆ ಶಿಲ್ಪಾ, ಮೀನಾಕ್ಷಿ, ಫಯಾಜ್, ಪ್ರಜ್ವಲ್ ಹಾಗೂ ಕರಾಟೆ ಮುಖ್ಯ ತರಬೇತಿದಾರ ಮಂಜುನಾಥ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮಾಹಿತಿಗಾಗಿ
ಮಂಜುನಾಥ ರಾಠೋಡ್
ಕರಾಟೆ ತರಬೇತುದಾರರು,
ಮೊ.ನಂ: ೭೨೫೯೬೧೮೬೩೭
ಸ.ಮಾ.ಹಿ.ಪ್ರಾ ಪ್ರಾಪರ್ ಶಾಲೆಯಲ್ಲಿ ೧೯೯೮-೯೯ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಅದ್ಧೂರಿಯಾಗಿ ಜರುಗಿದ ಗುರುವಂದನಾ ಕಾರ್ಯಕ್ರಮ
ಗಂಗಾವತಿ: ನಗರದಲ್ಲಿರುವ ಸ.ಮಾ.ಹಿ.ಪ್ರಾ ಪ್ರಾಪರ್ ಶಾಲೆಯಲ್ಲಿ ೧೯೯೮–೯೯ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಜುಲೈ-೧೨ ಶನಿವಾರ ಅದ್ಧೂರಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಜೊತೆಗೆ ಸ್ನೇಹಿತರ ಸಮ್ಮಿಲನ ಕೂಡ ಆಯೋಜಿಸಲಾಗಿದ್ದು, ಶಾಲಾ ಆವರಣದಲ್ಲಿ ಭಾವುಕ ಕ್ಷಣಗಳು ಮೆಲುಕು ಹಾಕಿದವು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್.ಬಿ ನಟೇಶ್ ಉದ್ಘಾಟಿಸಿದರು. ಅವರು ಮಾತನಾಡಿ, ಶಾಲೆಯ ೧೨೦ನೇ ವಸಂತದ ಆರಂಭ ಈ ಸಂಧರ್ಭದಲ್ಲಿ ಬಹುಮಾನವಾಗಿದೆ ಎಂದರು.
ಈ ಹಳೆಯ ವಿದ್ಯಾರ್ಥಿಗಳ ಪ್ರೀತಿ, ನೆನೆಪುಗಳು ಇಂತಹ ಗುರುವಂದನಾ ಕಾರ್ಯಕ್ರಮದ ಮೂಲಕ ವ್ಯಕ್ತವಾಗಿವೆ ಎಂದೂ ಅವರು ಶ್ಲಾಘಿಸಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಈರೇಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ವಸ್ತ್ರದ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರೋಷಣ್ಣ, ಶಿಕ್ಷಣ ಸಂಯೋಜಕ ಆನಂದ ನಾಗಮ್ಮನವರು ಉಪಸ್ಥಿತರಿದ್ದರು.
ಬಿ.ಆರ್.ಪಿ ಶ್ರೀಮತಿ ಶಶಿಕಲಾ ಜೆ. ಮತ್ತು ಸಿ.ಆರ್.ಪಿ ಶಿವಪ್ರಸಾದ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮಹತ್ವ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಹಳೆಯ ಶಿಕ್ಷಕರಾದ ಪಂಪಣ್ಣ, ವಿಷ್ಣುತೀರ್ಥ, ಚನ್ನಮ್ಮ, ಮೇರಿ, ಹಾಗೂ ಇತರ ಗುರುಗಳನ್ನು ಸನ್ಮಾನಿಸಲಾಯಿತು.
ಗುರುಗಳಿಗೆ ವಂದನೆ ಸಲ್ಲಿಸಲು ಹಳೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಪ್ರಸ್ತುತ ಮುಖ್ಯೋಪಾದ್ಯಾಯರು ಹಾಗೂ ಶಿಕ್ಷಕರಿಗೂ ಸನ್ಮಾನ ನಡೆಯಿತು.
ನೂರಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು, ಈ ಬಾಂಧವ್ಯ ಭರವಸೆಯ ಕ್ಷಣಕ್ಕೆ ಸಾಕ್ಷಿಯಾದರು.
ಮಾಹಿತಿಗಾಗಿ:
ಮಂಜುನಾಥ ಸೋನಾರ್
ವಿಶ್ವರೂಪ ಕಂಪ್ಯೂಟರ್ಸ್ ಗಂಗಾವತಿ
ಮೊ.ನಂ: ೯೯೬೪೪೧೫೫೫೬
ತಂಬೂರಿ ಪದ ಗಾಯಕರು ಕೆಬ್ಬೇಪುರದ ಆರ್. ಸಿದ್ಧರಾಜು ಗೊರೂರು ಅನಂತರಾಜು, ಹಾಸನ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರದ ಆರ್. ಸಿದ್ಧರಾಜು ಅವರು ಪ್ರಸಿದ್ಧ ತಂಬೂರಿ ಪದ ಕಲಾವಿದರಾಗಿದ್ದಾರೆ.

ಇವರು ರಾತ್ರಿಯಿಡೀ ತಂಬೂರಿ ನುಡಿಸಿ ಜನಪದ ಕಾವ್ಯಗಳನ್ನು ಹಾಡುವ ಅಪಾರ ಪ್ರತಿಭೆ ಹೊಂದಿರುವ ಕಲಾವಿದರು.

ತಂದೆ ದಿವಂಗತ ಕೆ.ಬಿ.ರಾಚಯ್ಯ ಆಕಾಶವಾಣಿಯ ಎ-ಗ್ರೇಡ್ ಜನಪದ ಕಲಾವಿದರಾಗಿದ್ದರು. ಹಾಡುಗಾರಿಕೆಯ ಕಲೆಯನ್ನು ತಂದೆಯಿಂದಲೇ ಇವರು ಸಂಪಾದಿಸಿದ್ದಾರೆ.

ಇವರು ಕೂಡ ಆಕಾಶವಾಣಿಯಲ್ಲಿ ಎ-ಗ್ರೇಡ್ ಕಲಾವಿದರಾಗಿದ್ದಾರೆ. ೪೨ ವರ್ಷಗಳಿಂದ ಮೃತರ ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಜಾತ್ರೆ, ಉತ್ಸವಗಳಲ್ಲಿ ತಂಬೂರಿ ಪದಗಳನ್ನು ಹಾಡಿ ಜನರ ಮನ ಗೆದ್ದಿದ್ದಾರೆ.

ಇವರು ಕೇವಲ ೩ನೇ ತರಗತಿ ವ್ಯಾಸಂಗ ಹೊಂದಿದ್ದರೂ ಜನಪದ ಸಾಹಿತ್ಯದಲ್ಲಿ ಪುಸ್ತಕಕ್ಕಿಂತಲೂ ಹೆಚ್ಚಿನ ತಿಳುವಳಿಕೆ ಹೊಂದಿದ್ದಾರೆ.

ಸಿದ್ದರಾಜು ಸುಮಾರು ೧೫ಕ್ಕೂ ಹೆಚ್ಚು ಜನಪದ ಕಥೆಗಳನ್ನು ತಂಬೂರಿಯೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಾರೆ.

ಇವರು ಹಾಡಿಕೊಂಡು ಬಂದಿರುವ ಕಥೆಗಳು ಮಂಟೇಸ್ವಾಮಿ ತಂಬೂರಿ ಕಥೆ, ರಾಜ ಸತ್ಯವ್ರತ, ಬಣಜಿ ಹೊನ್ನಮ್ಮ, ದೊಡ್ಡಬಸವಣ್ಣನ ಕತೆ, ಅಣ್ಣತಂಗಿ ಕಥೆ, ನಲ್ಲತಂಗಿ ಕಥೆ, ಕುಂತಿ ಪದ, ಮುಡುಕುತೊರೆ ಮಲ್ಲಪ್ಪ, ಅರ್ಜುನ ಜೋಗಿ, ಬಾಲ್ನಾಗಮ್ಮ, ಮೈದಾಲರಾಮ, ನಿಂಗರಾಜಮ್ಮ. ಚೆನ್ನಿಗರಾಯ, ಕಾಳಿಂಗರಾಜನ ಕಥೆ ಪಿರಿಯಾಪಟ್ಟಣ ಕಾಳಗ.

ಅವರು ಹಾಡುವಾಗ ತಾಳ, ತಂಬೂರಿ, ಡಿಕ್ಕಿ, ದಂಬ್ಡಿ, ಕಂಬ್ಚಿ, ಚಿಟಗದಾಳ ಮುಂತಾದ ತಂತ್ರೋಪಕರಣಗಳನ್ನು ಬಳಸುತ್ತಾರೆ. ಇವುಗಳಲ್ಲಿ ಸೃಜನಶೀಲ ರಾಗ-ತಾಳ ಜೋಡಣೆ ಮೂಲಕ ಹಾಡುಗಳನ್ನು ಅತ್ಯಂತ ಸುಂದರವಾಗಿ ನಿರ್ವಹಿಸುತ್ತಾರೆ.

ಪಿ. ನಾಗರತ್ನಮ್ಮ ಮಳವಳ್ಳಿ ಸಂಪಾದಿತ “ಮಂಟೇಸ್ವಾಮಿ ಜನಪದ ಕಾವ್ಯ” ಕೃತಿಗೆ ಸಿದ್ಧರಾಜು ಹಾಡಿ ಸಹಕಾರ ನೀಡಿದ್ದಾರೆ. ಈ ಕೃತಿಯಲ್ಲಿ ಮಂಟೇಸ್ವಾಮಿ ಅವರ ಜೀವನದ ಪ್ರತಿಯೊಂದು ಘಟನೆಗೆ ಪದ ಕಟ್ಟಿ ಹಾಡಲಾಗಿದೆ.

ಧರೆ ಕಂಡ ಧರ್ಮಗುರು ಪುಸ್ತಕದ ಸ್ಥಳ ಮಾಹಿತಿಗೆ ರಾಗ ಜೋಡಿಸಿ ಹಾಡಿದ ವಿಚಾರವನ್ನು ಪಿ. ನಾಗರತ್ನಮ್ಮ ಶ್ಲಾಘಿಸಿದ್ದಾರೆ. ಅವರು ಕಲಾವಿದನ ಚತುರತೆಯನ್ನು ಪ್ರಶಂಸಿಸಿದ್ದಾರೆ.

ಹಿಮ್ಮೇಳ ಕಲಾವಿದರಾಗಿ ನೀಲಿಸಿದ್ದಯ್ಯ ಮತ್ತು ರಾಚಯ್ಯ ಕೂಡ ರಾಗಪೂರ್ಣ ಗಾನದಲ್ಲಿ ಭಾಗವಹಿಸುತ್ತಾರೆ. ಇವರು ಸಹ ತಂಬೂರಿಗಾನದಲ್ಲಿ ಬಹುಮಟ್ಟಿಗೆ ಪರಿಣಿತರಾಗಿದ್ದಾರೆ.

2023ರ ಮಾರ್ಚ್ 13ರಂದು ಗುಂಡ್ಲುಪೇಟೆ ಶಿಕ್ಷಕರ ಭವನದಲ್ಲಿ ಮಂಟೇಸ್ವಾಮಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಇವರಿಗೆ ಸನ್ಮಾನ ಸಲ್ಲಿಸಲಾಗಿದೆ. ಈ ಕಾರ್ಯಕ್ರಮವನ್ನು ತಾಲ್ಲೂಕು ಕಸಾಪ ಮತ್ತು ಮಳವಳ್ಳಿ ಸುಂದರಮ್ಮ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಲಾಗಿತ್ತು.

2016ರಲ್ಲಿ ಸವಣೂರಿನ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಜಾನಪದ ಉತ್ಸವದಲ್ಲಿ ಇವರಿಗೆ ಕಲಾರಶ್ಮಿ ಸಮ್ಮಾನ ಲಭಿಸಿದೆ.
2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಂಟೇಸ್ವಾಮಿ ನೀಲಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಅದೇ ವರ್ಷ ಮಳವಳ್ಳಿಯ ಮಂಟೇಸ್ವಾಮಿ ಮಠ ಕಪ್ಪಡಿ ಜಾತ್ರೆಯಲ್ಲಿಯೂ ಪ್ರಶಸ್ತಿ ಪತ್ರ ಲಭಿಸಿದೆ. ಕರ್ನಾಟಕ ಜಾನಪದ ಅಕಾಡೆಮಿ 2025ರ ಮಾರ್ಚ್ 15ರಂದು ಬೀದರ್‌ನಲ್ಲಿ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

“ಇಷ್ಟವರೆಗೆ ಎಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ?” ಎಂಬ ಪ್ರಶ್ನೆಗೆ ಅವರು, “ಸುಮಾರು ಐದು ಸಾವಿರ ಆಗಬಹುದು” ಎಂದು ಉತ್ತರಿಸಿದರು.
ಇವರು ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಲಿದ್ದಾರೆ, ಅವರಿಗೆ ನಮ್ಮೆಲ್ಲರ ಪುರಸ್ಕಾರವಾಗಲಿ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಜುಲೈ-೧೬ ಬುಧವಾರ ಶ್ರೀರಾಮನಗರದಲ್ಲಿ ನಡೆಯುವ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಪೂರ್ವಭಾವಿ ಸಭೆ ಯಶಸ್ವಿ: ಡಾ|| ಶಿವಕುಮಾರ ಮಾಲಿಪಾಟೀಲ್

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ, ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗಂಗಾವತಿ, ಐಎಂಎ ಮೈತ್ರಿ ಗಂಗಾವತಿ, ವೈದೇಹಿ ಆಸ್ಪತ್ರೆ ಬೆಂಗಳೂರು ಹಾಗೂ ಗ್ರೇಸ್ ಕ್ಯಾನ್ಸರ್ ಫೌಂಡೇಷನ್ ಹೈದರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರವನ್ನು ಜುಲೈ-೧೬ ಬುಧವಾರ, ಬೆಳಿಗ್ಗೆ ೯:೦೦ ರಿಂದ ಮಧ್ಯಾಹ್ನ ೨:೦೦ ರವರೆಗೆ ಗಂಗಾವತಿಯ ಶ್ರೀರಾಮನಗರದ ಎ.ಕೆ.ಆರ್.ಡಿ. ಪಿ.ಯು ಕಾಲೇಜು ಆವರಣದಲ್ಲಿ ನಡೆಸಲಾಗುವುದು.

ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ, ನರ ಸಂಬಂಧಿ ಕಾಯಿಲೆ, ನೇತ್ರರೋಗ, ಸ್ತನ ಕ್ಯಾನ್ಸರ್ ತಪಾಸಣೆ ಮುಂತಾದವುಗಳು ಒಳಗೊಂಡಿದೆ.

ಈ ಕುರಿತು ಪೂರ್ವಭಾವಿ ಸಭೆಯನ್ನು ಶ್ರೀರಾಮನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಸಲಾಯಿತು ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಡಾ. ಶಿವಕುಮಾರ ಮಾಲಿಪಾಟೀಲ್‌ ತಿಳಿಸಿದ್ದಾರೆ.

ಲಯನ್ಸ್ ಸುಬ್ರಹ್ಮಣ್ಯೇಶ್ವರರಾವ್ ಮಾತನಾಡಿ, ಸ್ತನ ಕ್ಯಾನ್ಸರ್ ತಪಾಸಣೆಗೆ ಉಚಿತ ಮೆಮೊಗ್ರಾಫಿ ಸೌಲಭ್ಯವನ್ನು ಮಹಿಳೆಯರಿಗೆ ನೀಡಲಾಗುವುದು ಎಂದರು.

ಈ ಶಿಬಿರದಲ್ಲಿ ನುರಿತ ವೈದ್ಯರು ನಿಯಮಿತವಾಗಿ ವಿವಿಧ ಕಾಯಿಲೆಗಳಿಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.

ಹೃದಯರೋಗ, ಕಣ್ಣಿನ ತಪಾಸಣೆ, ಸಕ್ಕರೆ ಕಾಯಿಲೆ, ಬಿ.ಪಿ, ದಂತಚಿಕಿತ್ಸೆ, ಎಲುಬು ಕೀಲು ಸಮಸ್ಯೆ, ಸ್ತ್ರೀರೋಗ ತಪಾಸಣೆ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ಲಭ್ಯವಿದೆ.

ಸ್ತ್ರೀರೋಗ ತಪಾಸಣೆಯೂ ಈ ಶಿಬಿರದಲ್ಲಿ ಇರಲಿದೆ ಹಾಗೂ ವೈದ್ಯರ ಮಾರ್ಗದರ್ಶನದೊಂದಿಗೆ ಉಚಿತ ಔಷಧಿಗಳನ್ನೂ ನೀಡಲಾಗುತ್ತದೆ.

ನೇತ್ರ ತಪಾಸಣೆ ನಂತರ ಕನ್ನಡಕ ಅಗತ್ಯವಿರುವವರಿಗೆ ಉಚಿತ ಕನ್ನಡದ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸಭೆಯ ಅಧ್ಯಕ್ಷತೆಯನ್ನು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯಾದ ಡಾ|| ವೀರಾನಾಯಕ ಅವರು ಎಲ್ಲಾ ಗ್ರಾಮಗಳಲ್ಲಿ ಶಿಬಿರದ ಜಾಗೃತಿ ಬಗ್ಗೆ ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಈ ಶಿಬಿರದ ಪ್ರಚಾರವನ್ನು ನಡೆಸಲಾಗುವುದು ಎಂದು ತಿಳಿಸಿದರು.

ಲಯನ್ ಹರಿಬಾಬು ಅವರು ಸಾರ್ವಜನಿಕರಿಗೆ ಈ ಶಿಬಿರದ ಸದುಪಯೋಗ ಪಡೆಯುವಂತೆ ಮನವಿ ಸಲ್ಲಿಸಿದರು.

ಈ ಶಿಬಿರದಲ್ಲಿ ಜಂಬಣ್ಣ ಐಲಿ, ಶಿವಪ್ಪ ಗಾಳಿ, ವೆಂಕಟರತ್ನಂ, ಸಿದ್ದಣ್ಣ ಜಕ್ಲಿ, ವೆಂಕಟೇಶ್ವರರಾವ್, ಸುಬ್ಬರಾಜು, ಶ್ರೀನಿವಾಸು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹಾಗೂ ಶ್ರೀರಾಮನಗರದ ಗಣ್ಯರು, ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀರಾಮನಗರ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಮುಸ್ಟೂರು ಸೋಮನಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಶ್ರೀರಾಮನಗರ ಎಪಿಎಂಸಿ ಮಾಜಿ ಅಧ್ಯಕ್ಷ ಮುಸ್ಟೂರು ಸೋಮನಗೌಡ, ಗ್ರಾ.ಪಂ. ಸದಸ್ಯರು, ಸ್ಥಳೀಯ ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೊ.ನಂ: ೯೪೪೮೩೦೨೭೭೫

ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆ ಭಾರತೀಯ ಸನಾತನ ಗುರು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ: ರಾಘವೇಂದ್ರ ಅಳವಂಡಿಕರ್

ಗಂಗಾವತಿ: ಭಾರತದ ಸನಾತನ ಗುರು ಪರಂಪರೆ ಪ್ರಸ್ತುತ ದಿನಗಳಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಂಕರ ಮಠದ ಹಿರಿಯ ಸದಸ್ಯ ರಾಘವೇಂದ್ರ ಅಳವಂಡಿಕರ್ ಹೇಳಿದರು.

ಅವರು ಗುರುವಾರದಂದು ನಗರದ ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆಯ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಹಾಭಾರತವನ್ನು ರಚಿಸಿದ ವೇದವ್ಯಾಸರು ಜನಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುತ್ತದೆ.

ಇದರ ಅರ್ಥ ಗುರುವಿನ ಪೂಜಾ ದಿನವಾಗಿದ್ದು, ಪ್ರಥಮವಾಗಿ ಮಾತೃದೇವೋಭವ, ಪಿತೃದೇವೋಭವ ಹಾಗೂ ಆಚಾರ್ಯ ದೇವೋಭವವೆಂದು ಕರೆಯಲಾಗುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ವೇದಾಬಾಯಿ ಬಾಲಕೃಷ್ಣ ದೇಸಾಯಿ ಮಾತನಾಡಿ, ಹರ ಮುನಿದರೂ ಗುರು ಕಾಯುವಂತೆ ಗುರುಗಳ ಅನುಗ್ರಹವಿಲ್ಲದೆ ಶಿಷ್ಯ ಏನನ್ನೂ ಸಾಧಿಸಲಾರ.

ಇದಕ್ಕೆ ಪೂರಕವೆಂಬಂತೆ ಗುರು ಶಿಷ್ಯರ ಸಂಬಂಧದ ಬಗ್ಗೆ ಹೇಳುವುದಾದರೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಒಳಗೊಂಡಂತೆ ಉನ್ನತ ಅಧ್ಯಯನವನ್ನು ಸಾಧನೆ ಮಾಡಲು ಎಲ್ಲ ಶಿಷ್ಯರುಗಳಿಗೆ ಸಲ್ಲುತ್ತದೆ.

ಒಟ್ಟಾರೆ ಜನ್ಮ ತಾಳಿದ ಪ್ರತಿಯೊಬ್ಬರಿಗೂ ಗುಣಮಟ್ಟದ ಸಂಸ್ಕಾರ ಪಡೆಯಲು ಗುರುಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಶ್ರೀ ಶಾರದಾ ದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ, ಗುರುಪಾದುಕೆಗಳಿಗೆ ಅರ್ಚಕ ಕುಮಾರ್ ಭಟ್ ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ, ಇತರ ಪೂಜಾ ಕಾರ್ಯಕ್ರಮವನ್ನು ನಡೆಸಿದರು.

ಸಂಜೆ ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಹಾಗೂ ಇತರೆ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಜರುಗಿದವು.

ಈ ಸಂದರ್ಭದಲ್ಲಿ ವಿನಾಯಕ ಜೋಶಿ, ಹೊಸಳ್ಳಿ ಭೀಮಶಂಕರ, ಜಗನ್ನಾಥ್ ಅಳವಂಡಿಕರ್, ಶ್ರೀನಿವಾಸ ಕರಮುಡಿ, ನಾಗೇಶ್ ಭಟ್, ವೇಣುಗೋಪಾಲ್, ಶ್ರೀನಿವಾಸ ಅಳವಂಡಿಕರ್ ಇತರರು ಉಪಸ್ಥಿತರಿದ್ದರು.

ಮಾಹಿತಿಗಾಗಿ:
ಸುದರ್ಶನ ವೈದ್ಯ
ಮೊ: ೯೪೪೯೨೨೯೪೮೮, ೬೩೬೨೪೫೯೭೬೭

ಚಿತ್ರ ಸಂತೆ ಪತ್ರಿಕೆಯಿಂದ ನೀಡಲಾಗುವ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಆಯ್ಕೆ.

ಗಂಗಾವತಿ: ರಾಜ್ಯದ ಚಿತ್ರರಂಗ ವಿಭಾಗದ ಪ್ರತಿಷ್ಠಿತ ಪತ್ರಿಕೆಯಾದ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಉತ್ತಮ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.

ಅದರಂತೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಅವರು ಆಯ್ಕೆಯಾಗಿದ್ದಾರೆ.

ಅವರಿಗೆ ಜುಲೈ-೧೫ ಮಂಗಳವಾರ ಬೆಂಗಳೂರಿನ ಸದಾಶಿವ ನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನ ಸಭಾಂಗಣದಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಚನ್ನಬಸವ ಕೊಟಗಿಯವರು ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸಿದ್ದಾರೆ. ಮತ್ತು ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಸೇವೆಯನ್ನು ಗುರುತಿಸಿದ ಚಿತ್ರ ಸಂತೆ ಪತ್ರಿಕೆಯ ಮುಖ್ಯ ಸಂಪಾದಕರಾದ ಗಿರೀಶ್ ವಿ. ಗೌಡ ರವರು ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಇವರಿಗೆ ಗಂಗಾವತಿಯ ಸಮಸ್ತ ನಾಗರಿಕರು, ಕಲಾವಿದರು, ಪತ್ರಕರ್ತರು, ಸಾಹಿತಿಗಳು, ಸಂಘ-ಸಂಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿವೆ.

ಮಾಹಿತಿಗಾಗಿ:
ಚನ್ನಬಸವ ಕೊಟಗಿ
ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರು.
ಹಂಪಿ, ಸಾ|| ಗಂಗಾವತಿ
ಮೊ.ನಂ: ೯೪೮೧೦೮೭೦೦೯

VISHWAROOPA NEWS BLOG

Infinite

Skip to content ↓