ಲಯನ್ಸ್ ಕ್ಲಬ್ ನ ವತಿಯಿಂದ ಉಚಿತ ಕನ್ನಡಕ ವಿತರಣೆ

ಲಯನ್ಸ್ ಕ್ಲಬ್ ನ ವತಿಯಿಂದ ಉಚಿತ ಕನ್ನಡಕ ವಿತರಣೆ

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಮತ್ತು ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜುಲೈ 24ರಂದು ಜರುಗಿತು.

ಈ ಕಾರ್ಯಕ್ರಮದಲ್ಲಿ, ಜುಲೈ 16ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದ ನೇತ್ರ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ 360 ಕನ್ನಡಕಗಳನ್ನು ವಿತರಿಸಲಾಯಿತು.

ವಿತರಣಾ ಕಾರ್ಯಕ್ರಮ ಶ್ರೀರಾಮನಗರದ ಎ.ಕೆ.ಆರ್.ಡಿ ಪಿಯು ಕಾಲೇಜಿನ ಆವರಣದಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಹಾಗೂ ವಿಜಯನಗರ ಲಯನ್ಸ್ ಕ್ಲಬ್‌ನ ಲ.ಗಂಗಾಧರ ಮತ್ತು ಲ.ಎನ್. ಭೈರೇಗೌಡ ಭಾಗವಹಿಸಿದರು.

ಗಂಗಾವತಿ ಲಯನ್ಸ್‌ ಕ್ಲಬ್‌ ನ ಹಿರಿಯ ಸದಸ್ಯರಾದ ಲ.ಹರಿಬಾಬು, ಆರೋಗ್ಯ ಶಿಬಿರದ ಸಂಯೋಜಕರಾದ ಲ.ಸುಬ್ರಮಣ್ಯೇಶ್ವರರಾವ್‌ ಭಾಗವಹಿಸಿದರು.

ಲಯನ್ಸ್‌ ಕ್ಲಬ್‌ ಗಂಗಾವತಿ ಖಜಾಂಚಿಯಾದ ಲ.ಶಿವಪ್ಪ ಗಾಳಿ, ಲ.ಅಜಾದ್ ಗನ್ನಮನಿ, ಲ.ಶಿವಕುಮಾರ ಅಂಗಡಿ, ಲ.ಗುರುಪ್ರಸಾದ, ಪಿ.ಸತ್ಯನಾರಾಯಣ, ಎ.ಕೆ.ಆರ್.ಡಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಅಮರೇಶ ಪಾಟೀಲ್‌ ಸೇರಿದಂತೆ ಇತರರು, ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಿದರು.

ಮಾಹಿತಿಗಾಗಿ
ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೋ:ನಂ: ೯೪೪೮೩೦೨೭೭೫

Leave a Reply