ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮ

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-07-2025 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ 34 ಮಂದಿ ಗಾಯಕ-ಗಾಯಕಿಯರು ಆಯ್ಕೆಯಾಗಿದ್ದು, ತಮ್ಮ ಕಲೆ ಪ್ರದರ್ಶನ ಮಾಡಲು ಅವಕಾಶ ಪಡೆಯಿದ್ದಾರೆ.

ಆಯ್ಕೆಯಾದ ಕಲಾವಿದರು ಇಂತಿವೆ:

  1. ಶ್ರೀಮತಿ ಸುಮಂಗಲಾ ದೇಸಾಯಿ (ಜೋಯಿಡಾ)

  2. ವಿಜಯಕುಮಾರ್ (ಹೊಸಪೇಟೆ)

  3. ಶ್ರೀಮತಿ ಜಿ.ನೀಲಗಂಗಮ್ಮ (ಹೊಸಪೇಟೆ)

  4. ಶ್ರೀಮತಿ ವಾಸವಿ ಸತೀಶ್ (ತುರುವೇಕೆರೆ)

  5. ವಾಲ್ಯಾನಾಯ್ಕ್ ಎಲ್ (ವಿಜಯನಗರ)

  6. ರಾಕೇಶ್ ಸಿಂಗ್ (ಚಿಕ್ಕಮಗಳೂರು)

  7. ಪಿ.ಮಲ್ಲಿಕಾರ್ಜುನ (ದಾವಣಗೆರೆ)

  8. ರಾಮನಾಥ ಜೆ. ನಾಯ್ಕ (ಅಂಕೋಲಾ)

  9. ಶ್ರೀಮತಿ ರೀನಾ ನಂದನ್ (ಹೊಸಪೇಟೆ)

  10. ಹನುಮಂತ ನಾಯ್ಕ್ ಸಿ (ನಾಗರಕಟ್ಟೆ ತಾಂಡ)

  11. ಬಿ.ಎನ್. ನಾಗೇಶ್ (ದಾವಣಗೆರೆ)

  12. ಗೌರಿ ಅರಸು (ಮಂಡ್ಯ)

  13. ವೀಣಾ ನಟರಾಜ್ (ಅಜ್ಜಂಪುರ)

  14. ಸ್ನೇಹ (ತೀರ್ಥಹಳ್ಳಿ)

  15. ಎಲ್. ಗಣೇಶ್ (ತುಂಬಿನಕೇರಿ ದೊಡ್ಡತಾಂಡ)

  16. ಆರ್. ಪ್ರಿಯಾಂಕ (ಹೊಸಪೇಟೆ)

  17. ಟಿ. ದೀಪಾ (ವಿಜಯನಗರ)

  18. ವಿದ್ಯಾ ಕೆ (ಚಿಕ್ಕಮಗಳೂರು)

  19. ಪ್ರಶಾಂತ್ ಕುಲಕರ್ಣಿ (ದಾಂಡೇಲಿ)

  20. ಶಶಿಧರ್ ಹಿರೇಮಠ (ಸೊಂಡೂರು)

  21. ಲಕ್ಷ್ಮೀ ಎಚ್ (ಹೊಸಪೇಟೆ)

  22. ಜೂಟೂರು ರಾಘವೇಂದ್ರ (ಹೊಸಪೇಟೆ)

  23. ಶ್ರೀದೇವಿ ತೇರದಾಳ (ಮಹಾಲಿಂಗಪುರ)

  24. ಉಮೇಶ್ ಕುಮಾರ್ ಎಚ್.ಎನ್ (ದಾವಣಗೆರೆ)

  25. ವಿಜಯಶಾಂತಿ ಕೆ (ಕಮಲಾಪುರ)

  26. ಡಾ. ಅಶೋಕ್ ಬಾಬು ಎ.ಆರ್ (ಚಿಕ್ಕಬಳ್ಳಾಪುರ)

  27. ಎಚ್. ಶ್ರೀನಿವಾಸ್

  28. ತಿಮ್ಮನಾಯ್ಕ್ ಸಿ (ಮುದ್ಲಾಪುರ)

  29. ರಮೇಶ್ ಎಸ್. ಲಮಾಣಿ (ಚಿತ್ರದುರ್ಗ)

  30. ಭಾಗ್ಯ ಎಸ್ (ಶಿವಮೊಗ್ಗ)

  31. ಕವಿತಾಬಾಯಿ ವೈ (ಭದ್ರಾವತಿ)

  32. ವಿಜಯ್ ಕುಮಾರ್ ಸಿ.ಆರ್ (ಚಿಕ್ಕಮಗಳೂರು)

  33. ಸುರೇಶ್ ರಾವ್ (ತುಮಕೂರು)

  34. ಮಹಾನಂದ ಮಠಪತಿ (ಕಲ್ಲೂರ್ ರೋಡ್)

ಈ ಗಾಯನ ಕಾರ್ಯಕ್ರಮದ ವೇಳೆ “ಕನ್ನಡ ಕೋಗಿಲೆ” ಎಂಬ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭ ಕೂಡ ನಡೆಯಲಿದೆ ಎಂದು ತಿಳಿಸಲಾಗಿದೆ.

ಈ ಎಲ್ಲ ಗಾಯಕ ಗಾಯಕಿಯರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಂತೆಯೇ, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಕೋರಿದ್ದಾರೆ.

Leave a Reply