ಹಾಸನ ಕಲಾವಿದರಿಂದ ಮಲೈಮಹದೇಶ್ವರ ಬೆಟ್ಟದಲ್ಲಿ ಕುರುಕ್ಷೇತ್ರ ನಾಟಕ

ಹಾಸನದ ಶ್ರೀ ಶಾರದ ಕಲಾಸಂಘದ ಕಲಾವಿದರು ಶ್ರೀ ಹೆಚ್.ಜಿ. ಗ೦ಗಾಧರ್ ನೇತೃತ್ವದಲ್ಲಿ ನಂಜನಗೂಡಿನ ಶಿವರಂಜಿನಿ ಸಾಂಸ್ಕೃತಿಕ ಕಲಾ ಬಳಗರವರು ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು, ಮಹದೇಶ್ವರ ಬೆಟ್ಟದ ದೇವಸ್ಥಾನದ ರಂಗ ಮಂದಿರದಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ ದಿನಾಂಕ 21-6-2025 ರ ಶನಿವಾರ ರಾತ್ರಿ 8 ಗಂಟೆಗೆ ಎ.ಸಿ. ರಾಜು ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸುವರು.ಉದ್ಘಾಟನೆ ಶ್ರೀ. ಸುನೀಲ್ ಬೋಸ್, ಸಂಸದರು,ಚಾಮರಾಜನಗರ ಜಿಲ್ಲೆ. ಅಧ್ಯಕ್ಷತೆ ಶ್ರೀ ಹೆಚ್.ಸಿ. ಮಹದೇವಪ್ಪರವರು, ಸಚಿವರು, ಸಮಾಜ ಕಲ್ಯಾಣ ಇಲಾಖೆ. ಗೌರವ ಉಪಸ್ಥಿತಿ ಡಾ.ಎಂ. ಡಿ. ಸುದರ್ಶನ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು. ಶ್ರೀ ಗೊರೂರು ಅನಂತರಾಜು, ಸಾಹಿತಿಗಳು, ಹಾಸನ. ಶ್ರೀ ಯೋಗೇಶ್, ವಕೀಲರು, ಹಾಸನ. ಗೋವಿಂದೇಗೌಡ್ರು, ಕಲಾವಿದರು, ಹಾಸನ. ಸೋಮರಾಜ್, ಕಲಾವಿದರು, ನಂಜನಗೂಡು.

ಸಿದ್ದು ಪೂಣ೯ಚಂದ್ರರ ಹೊಸ ಸಿನಿಮಾ ಪುಟ್ಟಣ್ಣನ ಕತ್ತೆ

“ದಾರಿ ಯಾವುದಯ್ಯ ವೈಕುಂಠಕೆ ಎಂಬ ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಸಿದ್ದು ಪೂರ್ಣಚಂದ್ರರವರು ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಹಲವು ವಿಭಿನ್ನ ಚಿತ್ರಗಳನ್ನು ಈಗಾಗಲೇ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಕಮಲ, ತಾರಿಣಿ, ಈ ಪಾದ ಪುಣ್ಯ ಪಾದ, ಇವುಗಳ ಸಾಲಿಗೆ ಮತ್ತೊಂದು ಹೊಸ ಚಿತ್ರ ಪುಟ್ಟಣ್ಣನ ಕತ್ತೆ ಎಂಬ ಚಿತ್ರವೂ ಸೇರಿಕೊಳ್ಳುತ್ತದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನವರಾದ ಸಿದ್ದು ಪೂರ್ಣಚಂದ್ರ ಮತ್ತು ನನ್ನ ಸ್ನೇಹ ಕೆಲ ವರ್ಷಗಳಿಂದ ಆತ್ಮೀಯವಾಗಿ ಬೆಳೆದಿದೆ. ಇಂದು ಫೋನ್ ಗೆ ಸಿಕ್ಕರು. ನನ್ನ
(ನಿರ್ದೇಶಕರ) ಜನುಮದಿನದಂದು ಚಿತ್ರ ತಂಡ “ಪುಟ್ಟಣ್ಣನ ಕತ್ತೆ” ಪೋಸ್ಟರ್ ಬಿಡುಗಡೆ ಮಾಡಿದೆ ಎಂದರು. ಮೊದಲ ಪೋಸ್ಟರ್ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂಬುದು ಚಿತ್ರತಂಡದ ನಂಬಿಕೆ. ಮುಂದಿನ ಪೋಸ್ಟರ್ನಲ್ಲಿ ಕಲಾವಿದರನ್ನು ತೋರಿಸಲಾಗುತ್ತದೆ ಎಂದು ಸಿದ್ದು ತಿಳಿಸಿದರು.

ಎಲ್ಲರು ನಾಯಿ ಮೇಲೆ ಚಿತ್ರ ಮಾಡಿದರೆ ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡಬಾರದು ಅಂತ ಐಡಿಯಾ ಬಂದು ಈ ಕಥೆ ಹೊಳೆಯಿತೆಂದು ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆಯನ್ನು ಬಳಸಲಾಗಿದೆ ಎಂದರು. ಮೊದಲಿಗೆ ಇದು ಸಾವಾಲಾಗಿ ಪರಿಣಮಿಸಿದರೂ ನಂತರ ಅದರೊಂದಿಗೆ ನಟರನ್ನು ಬಿಟ್ಟು ಅಭ್ಯಾಸ ಮಾಡಿಸಿದೆವು, ನಟನೆ ಜೊತೆಗೆ ಅದರೊಂದಿಗೆ ಬಾಂಧವ್ಯ ಬೆಳೆಸಿಕೊಂಡ ನಂತರ ಚಿತ್ರೀಕರಿಸಲಾಯಿತು ಎಂದರು. ನಮ್ಮೆಲ್ಲರಿಗೂ ಕತ್ತೆಯ ಜೊತೆಗಿನ ಒಡನಾಟ ಹೊಸದು ಅದರ ಮನಸ್ಥಿತಿ ನೋಡಿಕೊಂಡು ಚಿತ್ರೀಕರಣ ಮಾಡಿದೆವು. ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ಧು ವಿಶೇಷ ಎಂದರು. ಇದಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತಿದ್ದೇನೆಂದು ಸಿದ್ದು ಪೂರ್ಣಚಂದ್ರ ಹೇಳಿದರು.

ಪೂರ್ಣಚಂದ್ರ ಫಿಲಂಸ್’ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ತನ್ಮಯ್ ಎಸ್ ಗೌಡರು ಬಂಡವಾಳ ಹೂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಅನಿಶ್ ಆರ್ಯನ್, ಭೀಮೇಶ್ ಅಭಿನಯಿಸಿದ್ದಾರೆ. ಉಳಿದಂತೆ ಕಲಾರತಿ ಮಹದೇವ್, ಸಿದ್ದು ಮಂಡ್ಯ, ರಶ್ಮಿ ಮೈಸೂರ್, ಬಾಬು, ರೋಹಿಣಿ, ಎನ್ ಟಿ ರಾಮಸ್ವಾಮಿ, ಲಕ್ಕಿ ಶಂಕರ್, ಶೃತಿ ಗಗನ, ಸೌಮ್ಯ, ಕವಿತಾ ಕಂಬಾರ್, ಲಿಯೋ ಶರ್ಮ, ವಿಭಾ ವಂದನ್ ಮೊದಲಾಗಿ ಅಭಿನಯಿಸುತ್ತಿದ್ದಾರೆ.

ಛಾಯಾಗ್ರಾಹಕರಾಗಿ ರಾಜು ಹೆಮ್ಮಿಗೇಪುರ, ಸಂಕಲನಕಾರರಾಗಿ ದೀಪು, ಸಂಗೀತ ಅನಂತ್ ಆರ್ಯನ್, ಸಿಂಕ್ ಸೌಂಡ್ ಕೃಷ್ಣಮೂರ್ತಿ ನಿರ್ವಹಿಸಿದ್ದಾರೆ.

ಇಷ್ಟು ಮಾಹಿತಿ ಹಂಚಿಕೊಂಡ ಸಿದ್ದುಗೆ ಶುಭಾಶಯ ಕೋರಿದೆ. ಇವರ ನಿರ್ದೇಶನದ ಈ ಹಿಂದಿನ ಮೂರು ಚಿತ್ರಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಫಿಲಂ ಫೇಸ್ಟಿವೆಲ್ ಗಳಲ್ಲಿ, ಪ್ರದರ್ಶನಗೊಂಡು ಅವಾರ್ಡ್ ಪಡೆದಿವೆ. ಇವರ ನಿರ್ದೇಶನದ ವೈಕುಂಠಕ್ಕೆ ದಾರಿ ಯಾವುದಯ್ಯಾ ನೂರಕ್ಕೂ ಮೀರಿ ಪ್ರಶಸ್ತಿ ಪುರಸ್ಕಾರಗಳ ಭೇಟೆಯಾಡಿದೆ. ಈ ಚಿತ್ರವನ್ನು ನೋಡಿ ನಾನು ಆಗೆ ಬರೆದಿದ್ದೆ. ಈ ಪಾದ ಪುಣ್ಯ ಪಾದ ಚಿತ್ರದ ಬಗ್ಗೆಯೂ ಬರೆಯಿರಿ ಕಳಿಸಿ ಕೊಡುತ್ತೇನೆ ಎಂದರು. ಖಂಡಿತ ಕಳಿಸಿ. ನಿಮ್ಮ ಹೊಸ ಚಿತ್ರವೂ ಯಶಸ್ವಿಯಾಗಲಿ. ಚಿತ್ರ ನೋಡುವ ಕುತೂಹಲ ಇದೆ ಎಂದೆ. ಆಗಲಿ ಚಿತ್ರ ಬಿಡುಗಡೆ ದಿನ ನಿಮಗೆ ತಿಳಿಸುವೆ ಎಂದರು.

ಗೊರೂರು ಅನಂತರಾಜು,
ಹಾಸನ
9449462879

ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ.

ಹಾಸನದ ಚಿತ್ರ ಕಲಾವಿದರು ಬಿ.ಎಸ್. ದೇಸಾಯಿ ವೃತ್ತಿಯಲ್ಲಿ ಚಿತ್ರ ಕಲಾ ಶಿಕ್ಷಕರು. ಮಕ್ಕಳಿಗೆ ಚಿತ್ರಕಲೆ ಕಲಿಸುವಲ್ಲಿ ಪರಿಣಿತರು. ಸ್ವಂತ ಮನೆಯನ್ನು ಚಿತ್ರಕಲಾ ಗ್ಯಾಲರಿಯಾಗಿ ಮಾಡಿ ಸತತ ಚಿತ್ರಕಲೆಯನ್ನೇ ಧ್ಯಾನಿಸುತ್ತಾ ಈ ದಿಶೆಯಲ್ಲಿ ಸದಾ ಕಾರ್ಯ ನಿರತರು. ಇವರ ಕಲಾ ಗ್ಯಾಲರಿಯಲ್ಲಿ ಆಗಿಂದಾಗ್ಗೆ ಚಿತ್ರಕಲಾ ಶಿಬಿರ, ಪ್ರದರ್ಶನಗಳು ಮತ್ತು ಪಾಠ ನಡೆಯುತ್ತಿರುತ್ತದೆ.

ಮೊನ್ನೆ ಓರ್ವ ಬಾಲೆಯ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ನೆಡೆಯಿತು. ಕಲಾವಿದೆ ಹೆಸರು ಡಿಂಪನಾ ಎಸ್. ದೇಸಾಯಿ. ಈಕೆಯ ವಯಸ್ಸುಮೂರು ವರ್ಷ ನಾಲ್ಕು ತಿಂಗಳು. ಈ ಕಲಾವಿದೆ ಬಣ್ಣಗಳ ಜಗತ್ತಿನಲ್ಲಿ ತನ್ನ ಕಲ್ಪನೆಯ ಲೋಕವನ್ನು ಚಿತ್ರಿಸಿದ್ದಾಳೆ. ದೇಸಾಯಿ ಒಂದೊಂದು ಚಿತ್ರದ ಕುರಿತಾಗಿಯೂ ತಮ್ಮದೇ ವ್ಯಾಖ್ಯಾನ ಮಂಡಿಸಿದರು. ಚಿತ್ರಗಳನ್ನು ತೋರಿಸುತ್ತಾ ನೋಡಿ ಈ ಚಿತ್ರದಲ್ಲಿ ಆಕೆಯ ನಿರೀಕ್ಷೆಗಳ ಉತ್ಸಾಹ ಕ್ರೀಡೆಗಿಂತಲೂ ಹೆಚ್ಚಿನ ಸ್ವಾತಂತ್ರ್ಯದ ಅನುಭವವಿದೆ. ನೀಲಿ ಹಿನ್ನಲೆಯಲ್ಲಿ ಹಕ್ಕಿಗಳು, ಮರಗಳು, ನದಿಯಂತೆ ಹರಡುವ ಹಾದಿಗಳು, ನೃತ್ಯವಾಡುವ ಚುಟುಕು ಆಕಾರಗಳು ಮತ್ತು ಬಣ್ಣದ ಮಿಶ್ರಣಗಳು ಆಕೆಯ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಬಣ್ಣಗಳ ಸಹಜ ಬಳಕೆ ಮತ್ತು ವಿಶಿಷ್ಟ ಆಕಾರಗಳು ಈಕೆಯ ಕಲಾತ್ಮಕ ಪ್ರತಿಭೆ ತೋರಿಸುತ್ತವೆ. ಬಣ್ಣಗಳಲ್ಲಿ ಚಿತ್ರಿಸಿರುವ ಪಶು ಅಥವಾ ಕಾಲ್ಪನಿಕ ಜೀವಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕಿರುವ ಹಾಸ್ಯಮಯ ಮುಖ, ಕಿವಿಗಳು ಮತ್ತು ಭಂಗಿಗಳು ಆಕೆಯ ಕಲ್ಪನೆಯೊಳಗಿನ ಸಂತೋಷದ ಪ್ರತೀಕ. ಕಪ್ಪು ಛಾಪುಗಳು, ಹಸಿರು-ಕೆಂಪು ಮಿಶ್ರಿತ ಬಣ್ಣಗಳ ಬಳಕೆ ಅನಿಯಮಿತ ರೇಖಾಚಿತ್ರಗಳು ಆಕೆಯ ಉಲ್ಲಾಸ, ನಿರ್ಬಂಧರಹಿತ ಚಿಂತನೆಗೆ ಸಾಕ್ಷಿ ಎಂದರು.

ಈ ಚಿತ್ರವನ್ನು ನೋಡಿ ಬಾಲಮನೆಯ ಕಲಾತ್ಮಕ ಶಕ್ತಿ ಎಷ್ಟು ವಿಶಾಲವಾಗಿದೆ. ನೀಲಿ ಹಿನ್ನಲೆಯಲ್ಲಿ ಹಕ್ಕಿಗಳು, ಮರಗಳು, ನದಿಯಂತೆ ಹರಡುವ ಹಾದಿಗಳು, ನೃತ್ಯವಾಡುವ ಚುಟುಕು ಆಕಾರಗಳು ಮತ್ತು ಬಣ್ಣದ ಮಿಶ್ರಣಗಳು ಆಕೆಯ ಭಾವನೆಗಳನ್ನು ವ್ಯಕ್ತಪಡಿಸುತ್ತವೆ ಅಲ್ಲವೇ ಎಂದರು. ನನ್ನದು ಮೌನ ವೀಕ್ಷಣೆ. ಹಸಿರು, ಕಪ್ಪು, ಕಿರು.ನೀಲಿ, ಗುಲಾಬಿ ಮತ್ತು ಕಿತ್ತಳೆ ಬಣ್ಣಗಳು ಇಲ್ಲಿ ಪರಸ್ಪರ ಬೆರೆತು ವಿಭಿನ್ನ ಭಾವನೆಗಳನ್ನು ಮೂಡಿಸುತ್ತವೆ. ಬಣ್ಣಗಳ ಸ್ಫೋಟವು ಮಕ್ಕಳ ಮನಸ್ಸಿನ ಉತ್ಸಾಹ, ಸ್ವಾತಂತ್ರ್ಯ ಮತ್ತು ಅನಿಸಿಕೆಗಳನ್ನು ಪ್ರತಿಬಿಂಬಿಸುತ್ತಿದೆ ಹೌದಷ್ಟೇ ಎಂದರು. ಸ್ವತಃ ಕಲಾ ಜಗತ್ತಿನಲ್ಲಿ ವಿಹರಿಸುವ ಕಲಾವಿದರ ಮಾತಿಗೆ ಹೌದೆಂದು ಗೋಣಾಡಿಸಿದೆ. ನೋಡಿ ಈ ಕಲಾಕೃತಿಯಲ್ಲಿ ವಿಶೇಷವಾಗಿ ಯಾವುದೇ ನಿರ್ದಿಷ್ಟ ಆಕಾರಗಳಿಲ್ಲದಿದ್ದರೂ, ಅದರಲ್ಲಿರುವ ಚಲನೆಯ ಲಯ, ಬಣ್ಣಗಳ ಆಯ್ಕೆ ಮತ್ತು ವ್ಯತ್ಯಾಸಗಳು ಚಿತ್ರಕ್ಕೆ ಹೇಗೆ ಜೀವ ನೀಡುತ್ತವೆ. ಗಾಢ ಬೊಳೆ ಬಣ್ಣದ ಹಿನ್ನೆಲೆಯು ಮಧ್ಯಭಾಗದ ಜೀವಂತ ಬಣ್ಣಗಳಿಗೆ ಸಾಕಷ್ಟು ತೀವ್ರತೆಯನ್ನು ಕೊಡುತ್ತದೆ. ಇದು ತಾಂತ್ರಿಕ ಕಲೆಯ ಪ್ರಾಯೋಗಿಕ ನೋಟ. ಮಕ್ಕಳ ಅತೃಪ್ತ ಕಲ್ಪನೆಗೆ ದಾರಿ ತೋರಿಸುವ ಹಾದಿ. ನೀಲಿ ಹಸಿರು ಬಣ್ಣಗಳ ಮಿಶ್ರಣದಿಂದ ಪ್ರಕೃತಿಯ ಗಾಢ ಪರಿಸರವನ್ನು ಕಲ್ಪಿಸಲಾಗಿದೆ. ಮಧ್ಯಭಾಗದಲ್ಲಿ ಕಾಣುವ ಮುಖಾಕೃತಿಯು ಪುಟಾಣಿ ಕಲಾವಿದೆಯ ಕಲ್ಪನೆಯ ಪಾತ್ರ. ಇದರ ಸೂತ್ರದಾರಿ ನೀವು ಎಂದು ಆತ್ಮೀಯರ ಮುಖ ನೋಡಿದೆ. ಅವರ ಮುಖದಲ್ಲಿ ಉತ್ಸಾಹ ಉಲ್ಲಾಸ ಎದ್ದು ಕಾಣುತ್ತಿತ್ತು. ಅವರ ಪಾಠ ಮುಂದುವರಿದಿತ್ತು. ನಾನೀಗ ವಿದ್ಯಾರ್ಥಿ. ಕೇಳಿಸಿಕೊಳ್ಳುವುದಷ್ಟೇ ಸಧ್ಯದ ಚಿಂತನೆ. ಬಲಭಾಗದಲ್ಲಿ ಧೂಪದಂತೆ ಹರಡಿದ ಕಪ್ಪು ಮತ್ತು ಬೂದು ಬಣ್ಣಗಳು ಮರ ಅಥವಾ ಪ್ರಾಣಿಗಳ ಶಿಲ್ಪದಂತೆ ತೋರುತ್ತವೆ. ಇಡೀ ಚಿತ್ರವು ಮರುಭೂಮಿಯ ನಡುವಿನ ಒಂದು ಹಸಿರು ತೋಟದ ರೀತಿಯಲ್ಲಿ ಕಂಡುಬರುತ್ತದೆ. ಕಾಫಿ ಎಸ್ಟೇಟ್ ತಲೆಯಲ್ಲಿ ಮಾಡಿ ಟೀ ಕುಡಿಯಬೇಕೆನಿಸಿತು. ಟೀ ಬ್ರೇಕ್ ನಂತರ ಚಿತ್ರ ವೀಕ್ಷಣೆ ವ್ಯಾಖ್ಯಾನ ಮುಂದುವರೆಯಿತು. ಹಸಿವಿನಿಂದ ತುಂಬಿದ ಕಲ್ಪನೆ, ವೈಭವ ಹಾಗೂ ಲಯಪೂರ್ಣ ಸ್ವಾತಂತ್ರ್ಯದೊಂದಿಗೆ ಮಕ್ಕಳ ನೈಸರ್ಗಿಕ ದೃಷ್ಟಿಕೋನ ಈ ಕಲಾಕೃತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ ಅನಂತರಾಜು ಎಂದರು. ಹೌದು ಸಾರ್ ಎಂದೆ. ಮಂದುವರಿದು ಮತ್ತೊಂದು ಚಿತ್ರ ತೋರಿಸಿ ಈ ಚಿತ್ರಕಲೆಯಲ್ಲಿ ಹಸಿರು ಮತ್ತು ನೀಲಿ ಬಣ್ಣಗಳ ಪ್ರಸಾರದಿಂದ ಪ್ರಕೃತಿಯ ಒಂದು ಆನಂದಕರ ದೃಶ್ಯ ಚಿತ್ರಿತವಾಗಿದೆ. ಚಿತ್ರದಲ್ಲಿ ಕುದುರೆ ಅಥವಾ ಮುಂಗೋಸೆಯ ರೀತಿಯ ಎರಡು ಪ್ರಾಣಿಗಳು ಕಾಣಿಸುತ್ತವೆ, ಇಬ್ಬರಿಗೂ ಕಿವಿ ಉದ್ದವಾಗಿದ್ದು, ಮುಖದಲ್ಲಿ ಸಂತೋಷದ ಅಭಿವ್ಯಕ್ತಿ. ಹಿಂಭಾಗದಲ್ಲಿ ಒಂದು ಚಿಕ್ಕ ಹಕ್ಕಿ ಉಕ್ಕುವ ರೇಖೆಯೊಂದಿಗೆ ಚಿತ್ರಿತವಾಗಿದೆ. ಬಲಭಾಗದಲ್ಲಿ ಮರದಾಕೃತಿಯೊಂದು ಇದ್ದು, ಪ್ರಪಂಚದ ನೈಸರ್ಗಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ನನ್ನ ಲೇಖನಕ್ಕೆ ಇಷ್ಟು ಸಾಕೆನಿಸಿತು.

ಆದರೂ ದೇಸಾಯಿ ಉತ್ಸಾಹಕ್ಕೆ ಭಂಗ ತರಲು ಮನಸ್ಸಾಗಲಿಲ್ಲ. ಈ ಚಿತ್ರದಲ್ಲಿ ಮಕ್ಕಳ ದೃಷ್ಟಿಕೋನ, ಉತ್ಸಾಹ ಕಲ್ಪನೆ ಸ್ಪಷ್ಟವಾಗಿ ವ್ಯಕ್ತವಾಗಿದೆ. ಮುಕ್ತ ಶೈಲಿಯ ಈ ಕಲಾಕೃತಿಯು ಅವರ ನೈಜ ಭಾವನೆಗಳನ್ನು ವೈವಿಧ್ಯಮಯ ಬಣ್ಣಗಳಲ್ಲಿ ಅನಾವರಣ ಮಾಡುತ್ತದೆ. ಹಳದಿ ಮತ್ತು ಕಂದು ಹಿನ್ನೆಲೆಯಲ್ಲಿ ಎರಡು ಮಾನವ ಆಕೃತಿಗಳು ಮತ್ತು ಮಧ್ಯದಲ್ಲಿ ಪ್ರಾಣಿ ಹೋಲುವ ಆಕೃತಿ ದೃಷ್ಟಿಗೆ ಬೀಳುತ್ತವೆ. ಎಡಭಾಗದಲ್ಲಿ ಒಂದು ಶ್ವೇತಾಕಾರದ ರಚನೆ ನೀರಿನ ಊತ ಅಥವಾ ಗೋಪುರದಂತೆ ಕಾಣುತ್ತದೆ. ಬಲಭಾಗದ ಆಕೃತಿಗೆ ಉಚ್ಚ ಉಡುಪು, ಮೇಲೆ ರೇಖೆಗಳು ಮುಂತಾದವು ಆಕರ್ಷಕವಾಗಿ ಮೂಡಿವೆ. ಮಧ್ಯದಲ್ಲಿ ಹಸಿರು ಬಣ್ಣದ ಆಕೃತಿ ಹುಳ ಅಥವಾ ಪಕ್ಷಿಯ ಭಾವನೆ ತೋರುತ್ತದೆ. ಈ ಪೇಂಟಿಂಗ್ ಮಕ್ಕಳ ನಿರೀಕ್ಷೆಗಳಿಂದ ಮುಕ್ತವಾದ ಕಲ್ಪನೆ ಮತ್ತು ಸಂವೇದನಾಶೀಲತೆಗೂ ಸಾಕ್ಷಿಯಾಗಿದೆ ಎಂದರು. ಹೇಗೆ ಅವರು ಒಂದೊಂದು ಚಿತ್ರದ ಬಗ್ಗೆಯೂ ವಿವರಣೆ ನೀಡುತ್ತಾ ಹೋದರೆ ಯಾವುದನ್ನು ಎಡಿಟ್ ಮಾಡುವುದು ಎನಿಸಿತು. ಇರಲಿ ಇದನ್ನು ಎಡಿಟರ್ ಗೆ ಬಿಟ್ಟುಬಿಡುವುದು ಎಂದುಕೊಂಡೆ ಮುಂದುವರಿದು ಈ ಚಿತ್ರದಲ್ಲಿ ಬೇರೆ ಬೇರೆ ಬಣ್ಣಗಳ ಸಮನ್ವಯವು ಮಕ್ಕಳ ನೈಜ ಭಾವನೆ ಉತ್ಸಾಹ ಪ್ರತಿಬಿಂಬಿಸುತ್ತದೆ. ಎಡಬದಿಯಲ್ಲಿ ಕಾಣುವ ದೊಡ್ಡ ಪ್ರಾಣಿ ಮುಖ ಹಾಗೂ ಬಲಭಾಗದ ಎರಡು ಸಣ್ಣ ಆಕೃತಿಗಳು ಪರಸ್ಪರ ಸಂವಹನದಲ್ಲಿರುವಂತೆ ತೋರುತ್ತವೆ. ಹಸಿರು, ನೀಲಿ ಮತ್ತು ಗುಲಾಬಿ ಬಣ್ಣಗಳ ಬಳಕೆ ಚಿತ್ರಕ್ಕೆ ನಿಜವಾದ ಜೀವಂತತೆಯನ್ನು ನೀಡುತ್ತದೆ. ಮಧ್ಯಭಾಗದಲ್ಲಿ ಕಾಣುವ ಬಿಳಿ ರೇಖೆಗಳಿಂದ ಕೂಡಿದ ಗೋಳುಗಳು, ತಾರೆಗಳು ಅಥವಾ ಹಕ್ಕಿಗಳ ಕಲ್ಪನೆ ತರಬಹುದು. ಕೆಳಭಾಗದ ಹಳದಿ ವೃತ್ತಾಕಾರ ಆಕೃತಿ ಕಿರಣ ಹೊರಹಾಕುವ ಸೂರ್ಯನಂತೆ ಕಾಣುತ್ತದೆ. ಇದು ಮಕ್ಕಳ ಕಲ್ಪನೆಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ.

ಈ ಚಿತ್ರದಲ್ಲಿ ಕಾಣುವ ಹಸಿರು ಮೈಬಣ್ಣದ ಪ್ರಾಣಿ ಆಕೃತಿಯು ಕಾಲ್ಪನಿಕ ಜಗತ್ತಿನ ಪಾತ್ರವಂತೆ ತೋರುತ್ತದೆ. ಗುಲಾಬಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳ ಸಮನ್ವಯ ಚಿತ್ರವು ಬಾಳಿನಲ್ಲಿ ಬಣ್ಣಗಳ ಮಹತ್ವವನ್ನೂ ಪ್ರತಿಬಿಂಬಿಸುತ್ತದೆ. ಹಿಂಬದಿಯಲ್ಲಿ ಹರಡಿರುವ ಬಿಳಿ ಪುಟ್ಟಬುಟ್ಟೆಗಳು ಮಳೆ ಹನಿ ನಕ್ಷತ್ರಗಳಂತೆ ಕಂಡು ಬರುತ್ತವೆ. ಚಿತ್ರವು ಮಕ್ಕಳ ಕಲ್ಪನೆ, ಸಂತೋಷ ಮತ್ತು ಮುಕ್ತ ಅಭಿವ್ಯಕ್ತಿಯ ದರ್ಪಣ.. ದೇಸಾಯಿ ಮಾತು ಮುಂದುವರೆದಂತೆ ಬೇಲೂರು ದೇವಸ್ಥಾನದ ದರ್ಪಣ ಸುಂದರಿ ನೆನಪಾದಳು. ಬಾಲೆಯ ಮುಖ ನೋಡಿದೆ. ಮುಗ್ಧತೆ ಮನೆ ಮಾಡಿತ್ತು. ನೋಡಿ ಅನಂತರಾಜು ಎಂದ ಕೂಡಲೇ ಮತ್ತೆ ನನ್ನ ಚಿತ್ರ ಇನ್ನೊಂದು ಚಿತ್ರದತ್ತ ಹರಿದಿತ್ತು. ಆ ಚಿತ್ರದಲ್ಲಿ ಮನುಷ್ಯಾಕಾರದ ಆಕೃತಿಗಳು ಮಕ್ಕಳ ದೃಷ್ಟಿಕೋನದಿಂದ ಸರಳವಾಗಿ ಹಾಗೂ ನೇರವಾಗಿ ರೂಪುಗೊಂಡಿವೆ. ವಿವಿಧ ಬಣ್ಣಗಳ ಸ್ಪಷ್ಟ ಬಳಕೆ—ಹಳದಿ, ಕೆಂಪು, ಬಿಳುಪು ಮತ್ತು ಕಪ್ಪು—ಚಿತ್ರದಲ್ಲಿ ಪ್ರಬಲ ಭಾವನೆಗಳನ್ನು ಹುಟ್ಟಿಸುತ್ತದೆ. ಎಡಭಾಗದಲ್ಲಿರುವ ಅಕ್ಷರಶಃ ತಲೆಕಟ್ಟಿದ ಪಾತ್ರ ಮತ್ತು ಮಧ್ಯಭಾಗದಲ್ಲಿರುವ ಕುರುಚಲು ರೇಖೆಗಳು ಮೌಲಿಕತೆ ಮತ್ತು ತಲ್ಲೀನತೆಯ ಸಂಕೇತಗಳಂತೆ ಕಾಣಿಸುತ್ತವೆ. ಬಲಭಾಗದಲ್ಲಿ ಹರಿದು ಹಾದುಹೋಗುವ ಕಪ್ಪು ಶಾಯಿಯಂತೆ ಇರುವ ಭಾಗವು ಚಿತ್ರಕ್ಕೆ ಆಳವನ್ನೂ, ಕುತೂಹಲವನ್ನೂ ಹೆಚ್ಚಿಸುತ್ತದೆ. ಈ ಚಿತ್ರವು ಮಕ್ಕಳ ಅಕ್ಷರರಹಿತ ಕಥನ ಶೈಲಿಯ ವಿಶಿಷ್ಟ ಉದಾಹರಣೆ ಆಗಿದ್ದು, ಅದರಲ್ಲಿ ನಿರ್ಣಯಾತ್ಮಕ ಚಲನೆಯ ಚಿಹ್ನೆಗಳು ಕಾಣಿಸುತ್ತವೆ.

ಈ ಚಿತ್ರದ ಹಿನ್ನಲೆಯಲ್ಲಿ ಹಳದಿ, ಗುಲಾಬಿ ಹಾಗೂ ನೀಲಿ ಬಣ್ಣಗಳ ಮೃದುವಾದ ಹಿನ್ನೋಟವು ಸಂತೃಪ್ತ ಭಾವನೆ ಮೂಡಿಸುತ್ತದೆ. ಎಡಭಾಗದಲ್ಲಿ ಕಣ್ಣಿಗೆ ಬೀಳುವಂತೆ ಮೂಡಿಸಿರುವ ಜ್ವಲಂತ ಬಣ್ಣಗಳ ಅಕ್ಷರಶಃ ಸ್ಫೋಟಕ ವಿನ್ಯಾಸವು ಆಕೆಯ ಉತ್ಸಾಹ ಮತ್ತು ವಿಶಿಷ್ಟ ಕಲ್ಪನೆಗೆ ಸಾಕ್ಷಿಯಾಗಿದೆ. ಕೆಂಪು, ನೇರಳೆ ಹಾಗೂ ಕಪ್ಪು ಬಣ್ಣಗಳ ಜಾಡುಗಳು ಬಲವಾದ ಭಾವನೆಗಳನ್ನು ಉಂಟುಮಾಡುತ್ತವೆ. ಬಲಭಾಗದಲ್ಲಿ ಚದುರಿದ ಶಾಯಿಯಂತೆ ಹರಡಿರುವ ಬಣ್ಣಗಳು ಮಂಕಾದ ಕನಸಿನ ಅನುಭವವನ್ನು ನೀಡುತ್ತವೆ. ಚಿತ್ರದಲ್ಲಿ ಅಭಿವ್ಯಕ್ತಿಯ ಸ್ವಾತಂತ್ರ್ಯ, ಮೌಲಿಕತೆ ಮತ್ತು ಮಕ್ಕಳ ಕಲಾತ್ಮಕ ಸಾಹಸ ಸ್ಪಷ್ಟವಾಗಿ ತೋರಿಸಿಕೊಳ್ಳುತ್ತದೆ. ಈ ಚಿತ್ರದಲ್ಲಿ ಹಸಿರು, ಕೆಂಪು, ಬಿಳಿ ಹಾಗೂ ಕಪ್ಪು ಬಣ್ಣಗಳ ಸಮನ್ವಯದಿಂದ ವಿಭಿನ್ನ ಆಕಾರಗಳು ಮೂಡಿವೆ. ಎಡಭಾಗದಲ್ಲಿ ಮೃಗದಂತಿರುವ ಬಿಳಿ ಆಕೃತಿಯು ಕೃತಕತೆಯಲ್ಲದ ಶುದ್ಧ ಮಕ್ಕಳ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಮಧ್ಯಭಾಗದಲ್ಲಿ ಕೆಂಪು ಹಾಗೂ ಬಿಳಿ ಬಣ್ಣಗಳಿಂದ ರೂಪುಗೊಂಡ ಲಲಿತ ಚಲನವು ಚಿತ್ತಾರಕ್ಕೆ ಜೀವ ತುಂಬುತ್ತದೆ.ಬಲಭಾಗದಲ್ಲಿ ಇರುವ ಕಲಾತ್ಮಕ ರೇಖೆಗಳು ಆಕೆಯ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಈ ಚಿತ್ರದಲ್ಲಿ ಬಣ್ಣದ ನಿರಂತರ ಅನ್ವೇಷಣೆ ಮತ್ತು ನಿರ್ಭೀತಿಯಿಂದ ಮಾಡಿದ ಆವಿಷ್ಕಾರ ಸ್ಪಷ್ಟವಾಗುತ್ತವೆ. ಮಕ್ಕಳ ಕಲಾ ಅಭಿವ್ಯಕ್ತಿ ಹೇಗೆ ಅಗಾಧವಾದಿರಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.

ಹೀಗೆ ದೇಸಾಯಿ ಪ್ರದರ್ಶನಕ್ಕಿರಿಸಿದ ಒಂದೊಂದು ಚಿತ್ರಕ್ಕೂ ತಮ್ಮದೇ ವ್ಯಾಖ್ಯಾನ ನೀಡಿದರು. ಅಂದ್ದಾಗೆ ಈ ಡಿಂಪನಾ ಈ ಬಿ.ಎಸ್.ದೇಸಾಯಿ ಅವರ ಮೊಮ್ಮಗಳು. ಈಕೆಯ ತಂದೆ ಶಶಿಕಿರಣ ದೇಸಾಯಿ ಕೂಡ ಉತ್ತಮ ಚಿತ್ರ ಕಲಾವಿದರು. ಇವರ ಕಲೆಗಾರಿಕೆಯ ಬಗ್ಗೆಯೂ ಈ ಹಿಂದೆ ಬರೆದಿರುವೆ. ತಂದೆ ಅಜ್ಪನ ಹಾದಿಯಲ್ಲೆ ಅತಿ ಚಿಕ್ಕ ವಯಸ್ಸಿಗೆ ಕುಂಚ ಹಿಡಿದು ಚಿತ್ರಿಸ ಹೊರಟ ಬಾಲೆ ಈ ಕಲೆಯಲ್ಲಿ ಸಾಧನೆ ಮಾಡಲಿ ಎಂದು ವಿಶ್ ಮಾಡಿದೆ.

ಗೊರೂರು ಅನಂತರಾಜು,
ಹಾಸನ,
9449462879

ರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರ-ಗೊರೂರು ಅನಂತರಾಜು

ಹಾಸನ ಜಿಲ್ಲಾ ಕಲಾವಿದರ ಸಂಘದ ವ್ಯಾಟ್ಸಪ್ ಗ್ರೂಪ್‌ನಲ್ಲಿ ಟಿ.ನಾಗರಾಜು ಕುರುಕ್ಷೇತ್ರ, ರಾಮಾಯಣ, ಶನಿಮಹಾತ್ಮೆ, ದಾನ ಶೂರ ಕರ್ಣ ನಾಟಕಗಳ ಪ್ರತಿಗಳನ್ನು ಟೈಪ್ ಮಾಡಿ ಹಾಕಿದ್ದರು. ಅದು ಕಲಾತಂಡಗಳು ನಾಟಕಗಳ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ತಮ್ಮ ಅಭ್ಯಾಸಕ್ಕೆ ಬಳಸಿಕೊಳ್ಳಲು ಸೂಕ್ತವಾಗಿತ್ತು. ಈ ನಾಟಕಗಳ ಪ್ರತಿಯಲ್ಲಿ ಕಲಾವಿದರು ತಮ್ಮ ಕಿರು ಪರಿಚಯ ಜೊತೆಗೆ ನಾಟಕ ಕುರಿತಾಗಿ ಕೆಲ ಅಂಶ ಹಾಕಿದ್ದರು. ಅವರ ನಂಬರ್ ಗಮನಿಸಿ ಪೋನಾಯಿಸಿದೆ. ನಾಗರಾಜು ತಮ್ಮ ಕಲಾ ಪರಿಚಯ ಹೇಳಿಕೊಳ್ಳುತ್ತಾ ತಾವು ಹಾಸನದ ಕಲಾತಂಡಗಳಲ್ಲಿ ಬಂದು ಭಾಗವಹಿಸಿದ್ದೇನೆ ಎಂದರು. ಹನುಮಂತನ ಪಾತ್ರಾಭಿನಯದ ವಿಡಿಯೋ ಶೇರ್ ಮಾಡಿ ಪರಿಚಯ ಮತ್ತು ಪೋಟೋ ಕಳಿಸಿದರು.

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ರಂಗ ನಿರ್ದೇಶಕರು ತಿಮ್ಮಯ್ಯ ಮತ್ತು ಕರಿಯಮ್ಮನವರ ಜೇಷ್ಠ ಪುತ್ರರಾಗಿ ದಿ. ೨೨-೧೦-೧೯೬೨ರಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ಮಾಯಸಂದ್ರದಲ್ಲಿ, ಪದವಿ ಶಿಕ್ಷಣ ಆದಿಚುಂಚನಗಿರಿ ಕ್ಷೇತ್ರ (ಬಿ.ಎ). ಬಾಲ್ಯದಿಂದಲೂ ಅಭಿನಯವನ್ನು ಹವ್ಯಾಸವಾಗಿ ಬಾಲ ಕಲಾವಿದರಾಗಿ ತಂದೆ ಮಾರ್ಗದರ್ಶನದಲ್ಲಿ ೯ನೇ ವಯಸ್ಸಿಗೆ ದಾನ ಶೂರ ಕರ್ಣ ನಾಟಕದ ವೃಷಿಕೇತು ಪಾತ್ರದ ಮೂಲಕ ರಂಗಪ್ರವೇಶ ಮಾಡಿದರು. ಉತ್ತಮ ಶಾರೀರವಿದ್ದ ಕಾರಣ ರುಕ್ಮಿಣಿ ಸೀತೆ ದ್ರೌಪದಿ ಸ್ವಯಂಪ್ರಭೆ ಕೊರಮಿ ಸಖಿಯರು ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿ ವಿಶೇಷವಾಗಿ ಕೊರಮಿ ಪಾತ್ರದಲ್ಲಿ ಮಿಂಚಿದರು. ಕುರುಕ್ಷೇತ್ರ ನಾಟಕದಲ್ಲಿ ದುಶ್ಯಾಸನ ಸಾತ್ಯಕಿ ಶ್ರೀಕೃಷ್ಣ ಕರ್ಣ ವಿದುರ ಅಭಿಮನ್ಯು ಮತ್ತು ರಾಮಾಯಣದಲ್ಲಿ ಭರತ ಶತೃಘ್ನ ವಿಭೀಷಣ ಲಂಕಿಣಿ ಘೋರ ಶೂರ್ಪನಖಿ.. ಹೀಗೆ ಎರಡು ನಾಟಕಗಳ ವಿವಿಧ ಪಾತ್ರಗಳಲ್ಲಿ ಹಾಗೂ ಯಕ್ಷಗಾನದಲ್ಲಿ ತುರುವೇಕೆರೆ ತಾ. ಪುರ ಗ್ರಾಮದ ಭಾಗವತರು ಗಂಗಣ್ಣನವರ ಮಾರ್ಗದರ್ಶನದಲ್ಲಿ ದಕ್ಷಯಜ್ಞ ನಾಟಕದಲ್ಲಿ ದಕ್ಷನ ಪಾತ್ರ ನಿರ್ವಹಿಸಿದ್ದಾರೆ. ಪಂಚವಟಿ ಯಕ್ಷಗಾನ ನಾಟಕದಲ್ಲಿ ಆಂಜನೇಯನ ಪಾತ್ರ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ೨೦೦೪ರಲ್ಲಿ ಮಾಯಸಂದ್ರದ ಗ್ರಾಮದೇವತೆ ಹಬ್ಬಕ್ಕೆ ಸಂಪೂರ್ಣ ರಾಮಾಯಣ ನಾಟಕದಲ್ಲಿ ಘಂಟಸಾಲಾ ಖ್ಯಾತಿಯ ಮಾಯಸಂದ್ರದ ಗುರುಗಳು ಎಂ.ಹೆಚ್.ನಾರಾಯಣ್‌ರ ಮಾರ್ಗದರ್ಶನದಲ್ಲಿ ಆಂಜನೇಯ ಪಾತ್ರದಲ್ಲಿ ಹೆಸರು ಪಡೆದರು. ತುರುವೇಕೆರೆ ತಾ. ಪುರ ಗ್ರಾಮದಲ್ಲಿ ೨೦೦೭ರಲ್ಲಿ ಆಂಜನೇಯ ಪಾತ್ರಾಭಿನಯಕ್ಕೆ ಅಂದಿನ ಮುಖ್ಯಮಂತ್ರಿಗಳಿ೦ದ ಪ್ರಶಂಸಾ ಪತ್ರ ಸಂದಿದೆ. ತುರುವೇಕೆರೆ ತಾಲ್ಲೂಕು ಮಾತ್ರವಲ್ಲದೆ ಬೆಂಗಳೂರು ತುಮಕೂರು ಮಂಡ್ಯ ಮೈಸೂರು ರಾಮನಗರ ಜಿಲ್ಲೆಗಳಲ್ಲಿ ಹಲವಾರು ಕಲಾಮಂದಿರ ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸಿ ಅಭಿನಯಿಸಿದ್ದಾರೆ. ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಂಜನೇಯ ಪಾತ್ರಕ್ಕೆ ಪ್ರಶಂಸೆ ಬಂದಿದೆ. ನನ್ನ ಕಲಾರಂಗಕ್ಕೆ ಮಾರ್ಗದರ್ಶನ ನೀಡಿದ ತಂದೆ ತಿಮ್ಮಯ್ಯರವರು ಪಿಟೀಲು ವಾದಕರು ವೆಂಕಟರಾಮಯ್ಯ, ಗುರುಗಳಾದ ಎಂ.ಹೆಚ್.ನಾರಾಯಣ್ ತಬಲ ವಾದಕರು ಜಯಕುಮಾರಣ್ಣ ಗುರುಗಳಾದ ಚನ್ನರಾಯಪಟ್ಟಣ ತಾ. ದ್ಯಾವೇನಹಳ್ಳಿ ಚೌಡಪ್ಪದಾಸರು ಹಾಸನ ಜಿಲ್ಲೆಯ ದೊಡ್ಡಗೇಣಿಗೆರೆ ರಂಗಪ್ಪದಾಸರು ಅಂಚಿಹಳ್ಳಿ ಸಂಜೀವಮೂರ್ತಿರವರಿಗೆ ನನ್ನ ನಮನಗಳೆಂದು ಸ್ಮರಿಸಿದರು. ಎಡೆಯೂರು ಸಾಂಸ್ಕೃತಿಕ ವೇದಿಕೆ ಎಡೆಯೂರು. ಶ್ರೀ ಕೊಲ್ಲಾಪುರದಮ್ಮ ಕೃಪಾಪೋಷಿತ ನಾಟಕ ಸಂಘ ಮಾಯಸಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಡೆಯೂರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರು ಶಾಲಾ ಶಿಕ್ಷಕರು ವೈ.ಎಸ್. ಹನುಮಂತಯ್ಯನವರು, ಶಾಲಾ ಶಿಕ್ಷಕರು ಇ.ಶಿವಣ್ಣ, ಸಿ.ಪಿ.ಪ್ರಕಾಶ್ ಸಾರಥ್ಯದಲ್ಲಿ ೨೦೧೭ರಲ್ಲಿ ಮಾಯಸಂದ್ರದ ಗ್ರಾಮದೇವತೆ ಶ್ರೀ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವದಲ್ಲಿ ಸಂಪೂರ್ಣ ರಾಮಾಯಣ ನಾಟಕದಂದು ಕಲಾಸೇವೆಗೆ ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಶಾಖಾಮಠದ ಪಟ್ಟಾಧ್ಯಕ್ಷರಾದ ಶ್ರೀ ಪ:ಬ್ರ: ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳವರು ರಜತ ಮುಕುಟ ಧಾರಣೆಯೊಂದಿಗೆ ಅಭಿನಯ ಚತುರ ಬಿರುದನ್ನು ನೀಡಿ ಆಶೀರ್ವದಿಸಿದ್ದಾರೆ.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ತಾ. ಗಣರಾಜ್ಯೋತ್ಸವ ಸಮಿತಿ. ತುರುವೇಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಯಸಂದ್ರ ಹೋಬಳಿ ಕನ್ನಡ ರಾಜ್ಯೋತ್ಸವ ಸಮಿತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಜಿಲ್ಲಾ ಕಲಾವಿದರ ಬಳಗ ಮಂಡ್ಯ. ತುಮಕೂರು ರಂಗಕಲಾವಿದರ ಸಂಘಗಳಿ೦ದ ಕಲಾಕ್ಷೇತ್ರ ಸಾಧನೆಗೆ ಪುರಸ್ಕಾರ ದೊರೆತಿದೆ. ಸರ್ಕಾರಿ ಸೇವೆಯಲ್ಲಿ ಬೆರಳಚ್ಚುಗಾರನಾಗಿ ಕಾವೇರಿ ನೀರಾವರಿ ನಿಗಮದಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ಅಕ್ಟೋಬರ್೨೦೨೨ ರಂದು ನಿವೃತ್ತಿ ಹೊಂದಿ ವಿಶ್ರಾಂತ ಜೀವನದಲ್ಲಿ ಕಲಾಸೇವೆ ಮುಂದುವರೆಸಿದ್ದಾರೆ. ನಾಟಕಗಳ ಪ್ರತಿಯನ್ನು ಹಳೆಯ ಪದ್ಯಗಳ ಜೊತೆಗೆ ಪ್ರಸ್ತುತ ಪದ್ಯಗಳನ್ನು ಒಳಗೊಂಡು ಹಿರಿಯ ರಂಗ ಕಲಾವಿದರ ಮಾರ್ಗದರ್ಶನದೊಂದಿಗೆ ನಾಟಕಕಾರರಿಗೆ ಅನುಕೂಲವಾಗಲೆಂದು ಮರು ಮುದ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗೊರೂರು ಅನಂತರಾಜು, ಹಾಸನ
ಮೊ: ೯೪೪೯೪೬೨೮೭೯.
ವಿಳಾಸ ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧

ಗೊರೂರು ಅನಂತರಾಜು ಅವರ ಕಲೆ-ಸೆಲೆ ಕಿರು ಅವಲೋಕನ

ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚಿನ ದಿಗ್ಗಜರಲ್ಲಿ ಹಾಸನದ ಶ್ರೀಯುತ ಗೊರೂರು ಅನಂತರಾಜುರವರು ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷ ಕೊಡುಗೆಯ ಪುಸ್ತಕಗಳನ್ನು ಕೊಡುತ್ತಿರುವ ಶ್ರೀ‌ ಗೊರೂರು ಅನಂತರಾಜುರವರು ಸಕಲಕಲಾ‌ ವಲ್ಲಭ ಎಂದರೆ ತಪ್ಪಾಗಲಾರದು. ಪ್ರತೀ ವರ್ಷದಂತೆ ಈ ವರ್ಷವೂ ಕಲೆ-ಸೆಲೆ ಎನ್ನುವ ಲೇಖನ ಸಂಕಲನವನ್ನು ಹೊರತರುತ್ತಿದ್ದಾರೆ.

ಈ ಪುಸ್ತಕವು ಮೈಸೂರಿನ ಪದ್ಮ ಶೇಖರ್ ಪ್ರಿಂಟರ್ಸ್ ರವರಿಂದ ಮುದ್ರಣಗೊಂಡಿದೆ‌, ಸುಂದರ ಮುಖಪುಟದಿಂದ ಆಕರ್ಷೀಯವಾಗಿದೆ. ಪುಸ್ತಕದ ಅಂಗಡಿಯಲ್ಲಿ ನಾವು ಪುಸ್ತಕ ಕೊಳ್ಳಲು ಹೋದಾಗ ,‌ನಮ್ಮ ಕಣ್ಣುಗಳನ್ನು ಆಕರ್ಷಿಸುವಂತಹ ಕಲೆ-ಸೆಲೆ ಎನ್ನುವ ಪುಸ್ತಕ ಇದಾಗಿದೆ.

ಈ ಪುಸ್ತಕದಲ್ಲಿ ಒಟ್ಟು ನಲವತ್ತು ಲೇಖನಗಳು ಒಳಗೊಂಡಿವೆ. ಸಮಾಜಮುಖಿಯಾದ ನಾಟಕಗಳು, ಐತಿಹಾಸಿಕ ನಾಟಕಗಳು ಪ್ರದರ್ಶನಗೊಂಡ ಬಗ್ಗೆ, ನಾಡು ನುಡಿಯ ಬಗ್ಗೆ ಮಾಹಿತಿ ಇದೆ.

*ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಾರಸುದಾರ ಮತ್ತು ಚಾವುಂಡರಾಯ ನಾಟಕ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಸಮಾಜಮುಖಿ ಬಳಗದವರಿಂದ ವಾರಸುದಾರ ಮತ್ತು ಚಾವುಂಡರಾಯ ಎಂಬ ಐತಿಹಾಸಿಕ ನಾಟಕಗಳು ಪ್ರದರ್ಶನಗೊಂಡ ಬಗ್ಗೆ ಬರೆದಿರುವ ಲೇಖನವಿದಾಗಿದೆ. ಈ ನಾಟಕವು ರಾಯಪುರ ಗ್ರಾಮದ ಜಯರಾಮ್ ರವರ ಮುಖಂಡತ್ವದಲ್ಲಿ ನಡೆದಿದೆ.  ಸಿರಿ ಸೆರೆ ನಾಟಕ ಬೆಂಗಳೂರು ಕೆಂಪೇಗೌಡರ ಜೀವನ ಚರಿತ್ರೆ ಆಧಾರಿತವಾಗಿದೆ.

ಶಿಶುನಾಳ ಶರೀಫರ ಜೀವನ ಗಾಥೆ ಹಾಸನದ ರಂಗ ಸಿರಿ ಕಾಲೇಜು ರಂಗೋತ್ಸವದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ನಾಟಕಗಳ ಪ್ರದರ್ಶನಗೊಂಡವು. ಹಾಸನದ ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಂಜುನಾಥ್ ಬೆಳೆಕೆರೆ ರಚಿಸಿದ ಶರೀಫ್ ನಾಟಕ ಪ್ರದರ್ಶಿಸಿದ ಬಗ್ಗೆ‌ ಮನೋಜ್ಞ ಲೇಖನ ‌ ಇದಾಗಿದೆ.

ಬಾಡಿದ ಬದುಕು ನಾಟಕ ಮತ್ತು ಗ್ಯಾರಂಟಿ ರಾಮಣ್ಣ.
ಹಾಸನದ ಸಾಹಿತ್ಯ ಭವನದಲ್ಲಿ ಪ್ರಗತಿ ಗ್ರಾಮೀಣ‌ ಅಭಿವೃದ್ದಿ ಮತ್ತು ತರಬೇತಿ ಸಂಸ್ಥೆ, ಆಶ್ರಯದಲ್ಲಿ ರಂಗ ನಟ ಡಿ.ವಿ.ನಾಗಮೇಹನ್ ಹುಟ್ಟುಹಬ್ಬದ ನಿಮಿತ್ತ ರಂಗಗೀತೆಗಳ ಕಾರ್ಯಕ್ರಮ ಹಾಗೂ ಗ್ಯಾರಂಟಿ ರಾಮಣ್ಣ ವಿರಚಿತ ಬಾಡಿದ ಬದುಕು ಸಾಮಾಜಿಕ ನಾಟಕ ಪ್ರದರ್ಶನದ ಬಗ್ಗೆ ಸುಂದರವಾಗಿ ಬರೆದ ಲೇಖನ ಇದಾಗಿದೆ. ಈ ನಾಟಕದಲ್ಲಿ ರಾಮಣ್ಣ ಅತಿಯಾದ ರಂಗಸಜ್ಜಿಕೆ, ಥಳಕು ಬಳುಕು ಯಾವುದೂ ಇಲ್ಲದೆ ಸಹಜವಾಗಿಯೇ ನಟರಿಂದ ಅಭಿನಯ ತೆಗೆದಿದ್ದಾರೆ. ಇಂತಹ ಉಪಯುಕ್ತವಾದ ಲೇಖನಗಳನ್ನೊಳಗೊಂಡ ಈ ಕಲೆ-ಸೆಲೆ ಪುಸ್ತಕವುಎಲ್ಲರ ಮನಮುಟ್ಟಲಿ ಸಾಹಿತ್ಯ ಕ್ಷೇತ್ರದಲ್ಲಿ ಮನ್ನಣೆ ಪಡೆಯಲಿ ಎಂದು ಆಶಿಸುತ್ತೇನೆ

ಸಾವಿತ್ರಮ್ಮ ಓಂಕಾರ್ ಅರಸೀಕೆರೆ
ಮೊ:9449657379

ವಿಲಕ್ಷಣ ನಗೆಯ ಶುಕುನಿ ಪಾತ್ರದಾರಿ ಡಿ.ವಿ.ನಾಗಮೋಹನ್

ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಬರುವ ಒಂದು ವಿಲಕ್ಷಣ ಪಾತ್ರ ಶಕುನಿ. ಈ ನಾಟಕದಲ್ಲಿ ಎಲ್ಲಾ ಪಾತ್ರಗಳಿಗೂ ರಂಗಗೀತೆಗಳನ್ನು ಅಳವಡಿಸಿ ರಂಗ ನಿರ್ದೇಶಕರು ಪಾತ್ರಗಳನ್ನು, ಪಾತ್ರದಾರಿ ಹೊಸಬರಾಗಿದ್ದರೂ ಹೇಗೋ ಸರಿದೂಗಿಸಿ ಹಾಡಿನ ಮರೆಯಲ್ಲಿ ಗೆರೆ ದಾಟಿಸಿಬಿಡುತ್ತಾರೆ. ಆದರೆ ಶಕುನಿ ಪಾತ್ರಕ್ಕೆ ವಿಶಿಷ್ಟತೆ ಇದೆ. ಹಾಡು ಅಷ್ಟಿಲ್ಲ. ಆದರೆ ಈ ಪಾತ್ರಕ್ಕೆ ಅಭಿನಯವೇ ಪ್ರಧಾನ. ಅಂತೆಯೇ ಮಾತು, ತಂತ್ರ, ಕುತಂತ್ರ ಹೆಣೆಯುತ್ತಲೇ ಶತ್ರು ದುರ್ಯೋಧನನ ಜೊತೆಗಿದ್ದೆ ಬೆನ್ನಿಗೆ ಗುನ್ನಾ ಇಡುವ ವಿಲನ್ ಕ್ಯಾರಕ್ಟರ್. ತನ್ನ ಸಹೋದರರ ಸಾವಿಗೆ ಕಾರಣನಾದ ಪ್ರಬಲ ದೊರೆಗೆ ಜೊತೆಗಿದ್ದೆ ಮಕಾಡೆ ಮಲಗಿಸುವ ಚಾಣಾಕ್ಷ ನಡೆ, ಕುಹಕ ಮಾತು, ಸೇಡಿನ ಜ್ಞಾಲೆ ಒಡಲಲ್ಲಿ ಇದ್ದರೂ ಬೂದಿ ಮುಚ್ಚಿದ ಕೆಂಡವಾಗಿ ನಗುವ ನಟನೆ, ಬೆನ್ನ ಹಿಂದಿನ ವ್ಯಂಗ್ಯ ನಗೆ, ಸೇಡಿನ ಜ್ವಾಲೆಯ ವಿಕಟ ನಗೆ, ಮಾತಿನ ಮೋಡಿಯ ಕಪಟಿ ಅಭಿನಯ ಇವೆಲ್ಲವೂ ಈ ಪಾತ್ರದಲ್ಲಿ ಅಡಕವಾಗಿದೆ. ಹೀಗಾಗಿ ಎ೦ಟು ಗಂಟೆಯ ನಾಟಕದಲ್ಲಿ ಈ ಪಾತ್ರವೂ ವೈಶಿಷ್ಟಪೂರ್ಣವಾಗಿ ತನ್ನದೇ ಸ್ಥಾನಮಾನ ಹೊಂದಿದೆ. ಇಂತಹ ಒಂದು ಪಾತ್ರವನ್ನು ನಿವ೯ಹಿಸುವಲ್ಲಿ ತಮ್ಮದೇ ಶ್ರಮದಿಂದ ತಕ್ಕಮಟ್ಟಿಗೆ ಯಶಸ್ಸು ಕಂಡವರು ನಾಗಮೋಹನ್. ಶಕುನಿಯಾಗಿ 40 ಬಾರಿ ನಟಿಸಿರುವರು ಈ ಪಾತ್ರಕ್ಕೆ ಆನಂದ ಮಹಾದಾನಂದ ಪ್ರಿಯ ಶಕುನಿಗೆ ಮಹಾದನಂದ.. ಎಂಬ ಸಂದರ್ಭೋಚಿತ ರಂಗಗೀತೆಯನ್ನು ರಚಿಸಿ ಅಳವಡಿಸಿದವರು ತುಮಕೂರು ಕಡೆಯ ರಂಗ ನಿರ್ದೇಶಕರು. ನಿಜಕ್ಕೂ ಈ ಹಾಡು ಈ ಪಾತ್ರಕ್ಕೆ ಜೀವ ಕಳೆ ತುಂಬಿದೆ.

ಇರಲಿ ಈ ಮೋಹನ ಇವತ್ತಿನ ಕಲಾವಿದರಲ್ಲ, ಇವರನ್ನು ಹತ್ತಾರು ವರ್ಷಗಳಿಂದ ಬಲ್ಲೆನಾದರೊ, ಇವರ ರಂಗ ಚಟುವಟಿಕೆ ಗಮನಿಸಿದ್ದೇನೆ ಆದರೂ ಯಾಕೋ ಈ ಮೋಹನ ನನ್ನ ಬರಹಕ್ಕೆ ಸಿಕ್ಕದೆ ಮೋಹಿನಿ ಆಟ ಆಡುತ್ತಾ ತಪ್ಪಿಸಿಕೊಂಡು ಬ೦ದಿದ್ದರು. ಬೆಂಗಳೂರಿನ ನಾಗರಬಾವಿಯಲ್ಲಿದ್ದೆ. ಬಿಟ್ಟಗೌಡನಹಳ್ಳಿ ರಮೇಶ್ ಗೌಡರು ತಮ್ಮಳ್ಳಿಯಲ್ಲಿ ಮನೆಯ ಮಂದೆಯೇ ಸೀನರಿ ಹಾಕಿಸಿ ನಾಟಕ ಮಾಡಿಸುತ್ತಿದ್ದರು. ಇಲ್ಲಿಂದಲೇ ಮಾತನಾಡಿಸಿ ಅವರ ರ೦ ಸೇವೆ ಕುರಿತಾಗಿ ಬರೆದಿದ್ದೆ. ರಂಗಭೂಮಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ರಂಗಭೂಮಿಯನ್ನು ಪೋಷಿಸುವ ಕಲಾವಿದರು ಬೇಕು. ಈ ದಿಶೆಯಲ್ಲಿ ಮೋಹನ್ ರವರದು ಗಮನಾರ್ಹ ಪಾತ್ರವಿದೆ. ಈ ಪಾತ್ರದಾರಿಯನ್ನು ಫೋನ್‌ನಲ್ಲಿ ಮಾತನಾಡಿಸಿದೆ.

ಮೋಹನ್, ನಾನು ಈವರೆವಿಗೂ ನೂರಾರು ಕಲಾವಿದರ ಕುರಿತಾಗಿ ಬರೆದಿರುವೆನಷ್ಟೇ. ಇದು ನಿಮಗೂ ಗೊತ್ತು. ಆದರೂ ನೀವೇಕೆ ನನ್ನ ಬರಹಕ್ಕೆ ಸಿಗುತ್ತಿಲ್ಲ. “ಸರಿ ಸಾರ್, ಇವತ್ತು ಶನಿವಾರ. ನನಗೆ ಯಾವುದೇ ಪಂಕ್ಷನ್ ಇಲ್ಲ.
(ಇವರು ಅಡಿಗೆ ಕಂಟ್ರಾಕ್ಸರ್. ಅಡಿಗೆ ಮಾಡಿ ಬಡಿಸುವ ಬಾಣಸಿಗ. ಎಷ್ಟೋ ನಾಟಕ ಕಾರ್ಯಕ್ರಮಗಳಿಗೆ ಅನ್ನದಾನ ಮಾಡಿದ ಪುಣ್ಯಾತ್ಮ) ಬನ್ನಿ ಸಾರ್ ಮಾತನಾಡೋಣ ಎಂದರು. ಇಲ್ಲಾ ನಾನು ಬೆಂಗಳೂರಿನಲ್ಲಿದ್ದೇನೆ. ಸಮಯ ವ್ಯರ್ಥ ಮಾಡದೇ ನಮ್ಮ ರಂಗ ಸೇವೆ ಕುರಿತಾಗಿ ಮಾಹಿತಿ ಹೇಳಿ ಎಂದೆ. “ಸರಿ, ಬರಕ್ಕೂಳ್ಳಿ ಎಂದರು. ನನ್ನ ಹೆಸರು ಡಿ.ವಿ. ನಾಗಮೋಹನ್. ತಂದೆ ಹೆಸರು ಡಿ.ಕೆ. ವಿಶ್ವೇಶ್ವರಯ್ಯ. ತಾಯಿ ಸರೋಜಮ್ಮ. ನಮ್ಮ ಊರು ದಿಂಡಗೂರು. ಚನ್ನರಾಯಪಟ್ಟಣ ತಾಲೂಕಿನ ಗ್ರಾಮ. ನಾನು 18 ವರ್ಷದ ಬಾಲಕನಾಗಿದ್ದಾಗಲೇ ರಂಗಭೂಮಿ ಪ್ರವೇಶ ಮಾಡಿದೆ. ಮೊದಲನೇ ಪಾತ್ರ ಉತ್ತರೆ. 2ನೇ ಯದು ರುಕ್ಮಿಣಿ, ನಂತರ ನಾಗರಾಣಿ..ಹೀಗೆ ಆರಂಭದಲ್ಲಿ ಸ್ತ್ರೀ ಪಾತ್ರವೇ ಸಿಕ್ಕವು. ನಾಚಿಕೊಳ್ಳದೇ ಪಕ್ಕ ನಿಭಾಯಿಸಿದೆ. ಆ ನಂತರ ಶಕುನಿ, ದುರ್ಯೋಧನ, ಭೀಮ, ದುಶ್ಯಾಸನ, ಅರ್ಜುನ ಇನ್ನೂ ಅನೇಕ ಕುರುಕ್ಷೇತ್ರ ನಾಟಕದ ಪಾತ್ರಗಳನ್ನೆಲ್ಲ ಮಾಡಿದೆ. ಸುಮಾರು ನೂರಕ್ಕಿಂತಲೂ ಹೆಚ್ಚು ಬಾರಿ ಅಭಿನಯಿಸಿರುತ್ತೇನೆ. ಕಲಾರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಅನೇಕ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕನಾಗಿದ್ದೇನೆ. ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ಕಾರ್ಯಧ್ಯಕ್ಷನಾಗಿ, ಅನ್ನಪೂರ್ಣೇಶ್ವರಿ ಕಲಾ ಸಂಘದ ಅಧ್ಯಕ್ಷನಾಗಿದ್ದೇನೆ. ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಘಟಕದ ಅಧ್ಯಕ್ಷ. ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಸಮಾಜ ಸೇವೆಯಲ್ಲಿ ಕ್ರಿಯಾಶೀಲನು.

ಹೌದು, ಮೋಹನ್ ಹಾಸನದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಹಾಸನದ ಕಲಾಭವನದಲ್ಲಿ ಕೇವಲ ಕುರುಕ್ಷೇತ್ರ ರಾಮಾಯಣ ನಾಟಕಗಳೇ ಪ್ರಧಾನವಾಗಿ ಪ್ರದರ್ಶಿತವಾಗುತ್ತಿರುವಲ್ಲಿ ಬೇರೆ ಬೇರೆ ಪೌರಾಣಿಕ ನಾಟಕಗಳನ್ನು ರಂಗದ ಮೇಲೆ ತರುವಲ್ಲಿ ಚಿಂತಿಸಿ ಪ್ರಯತ್ನಿಸಿದ್ದಾರೆ. ರತಿ ಕಲ್ಯಾಣ, ಕೌಂಡಿಲಕನ ವಧೆ, ರಾಜಾಸುಯಾಗ, ಭಕ್ತ ಪ್ರಹ್ಲಾದ, ಭಕ್ತ ಮಾಂಧಾತ, ಸತ್ಯಮಾರ್ತಿ, ತ್ರಿಜನ್ಮ ಮೋಕ್ಷ, ಮೂರೂವರೆ ವಜ್ರ, ವೀರ ಅಭಿಮನ್ಯು ಹೀಗೆ ಪೌರಾಣಿಕ ನಾಟಕಗಳನ್ನು ಅಡಿಸಿದ್ದಾರೆ. ರತ್ನ ಮಾಂಗಲ್ಯ ಸಾಮಾಜಿಕ ನಾಟಕದ ಹಾಸ್ಯ ಪಾತ್ರದ ಅಭಿನಯದಲ್ಲಿ ಗಮನ ಸೆಳೆದಿದ್ದಾರೆ.. ಗೌಡ್ರು ಗದ್ಲ ನಾಟಕದಲ್ಲಿ ಮತ್ತು ಮೊನ್ನೆ ಸತಿ ಸಂಸಾರದ ಜ್ಯೋತಿ ಸಾಮಾಜಿಕ ನಾಟಕದಲ್ಲಿ ನಟಿಸಿದ್ದಾರೆ. ಕೃಷ್ಣ-5 ಬಾರಿ, ದುರ್ಯೋಧನ -2 ಬಾರಿ ಅಷ್ಟೇ ಅಲ್ಲಾ ಹತ್ತಾರು ನಾಟಕಗಳಲ್ಲಿ ಬಹುಮುಖಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ..ಹಾಸನದ ಕಲಾಭವನದಲ್ಲಿ ಐದು ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ ಸಂಘಟಿಸಿದ್ದಾರೆ. ಅಂದ್ದಾಗೆ ಅನಂತರಾಜು ಮತ್ತೆ ಜುಲೈ ತಿಂಗಳಲ್ಲಿ ಐದು ದಿನಗಳ ಪೌರಾಣಿಕ ನಾಟಕೋತ್ಸವ ಆಯೋಜಿಸುತ್ತಿದ್ದೇನೆ ಎಂದರು. ಮೋಹನ್, ನಿಮ್ಮಂತಹ ರಂಗ ಸಂಘಟಕರು ಜಿಲ್ಲಾ ರಂಗಭೂಮಿಗೆ ಅವಶ್ಯ ಇದೆ. ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ ಶುಭಾಶಯಗಳು ಎ೦ದೆ.

ಗೊರೂರು ಅನಂತರಾಜು,
ಹಾಸನ
9449462879

ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ

ಶ್ರೀ ಜೈ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಬಿಟ್ಟಗೌಡನಹಳ್ಳಿ ಗೊರೂರು ರಸ್ತೆ ಹಾಸನ ತಂಡದ ಕಲಾವಿದರು ರಮೇಶ್ ಗೌಡಪ್ಪ ಖಜಾಂಚಿ, ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ.) ಇವರ ನೇತೃತ್ವದಲ್ಲಿ ಮೇ 21ನೇ ತಾ. ಬುಧವಾರ ಸಂಜೆ 7ಕ್ಕೆ ಬೆಳ್ಳಿ ಕಿರೀಟ ಪುರಸ್ಕೃತ ರಂಗ ನಿರ್ದೇಶಕ ಕೃಷ್ಣಮೂರ್ತಿ ಬೀಚೇನಹಳ್ಳಿ ಹೊಳೆನರಸೀಪುರ ತಾ. ಇವರ ನಿರ್ದೇಶನದಲ್ಲಿ ಬಿಟ್ಟಗೌಡನಹಳ್ಳಿಯ ರಮೇಶ್ ಗೌಡಪ್ಪರವರ ಮನೆ ಮುಂದೆ ದೇವನೂರು ಬಾಬಣ್ಣನರ ಚೆನ್ನಬಸವೇಶ್ವರ ಡ್ರಾಮಾ ಸೀನರಿಯ ರಂಗಸಜ್ಜಿಕೆಯಲ್ಲಿ ಜಿಲ್ಲೆಯ ಅನುಭವಿ ಕಲಾವಿದರು ಸೇರಿ ರಾಜಾ ಸತ್ಯವ್ರತ ಎಂಬ ಪೌರಾಣಿಕ ನಾಟಕ ಪ್ರದರ್ಶಿಸುತ್ತಿದ್ದಾರೆ.

ಈ ತಂಡ ಕಳೆದ ಒಂದು ತಿಂಗಳಿಂದ ನಮ್ಮ ಮನೆ ಮುಂಭಾಗ ಇರುವ ಶ್ರೀ ಶನೀಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಂಗ ತಾಲೀಮು ನಡೆಸುತ್ತಿತ್ತು. ಕಲಾವಿದರ ಹಾಡುಗಾರಿಕೆ ಹಾರ್ಮೋನಿಯಂ ಮಾಸ್ತರ ಸಂಗೀತ ಸಾಂಗತ್ಯದಲ್ಲಿ ಮನೆಯವರೆಗೂ ಕೇಳಿಬರುತ್ತಿತ್ತು. ನನಗೆ ಅಲ್ಲಿಗೆ ಹೋಗಿ ನೋಡುವ ಕುತೂಹಲ, ಹಾಡು ಕೇಳುವ ಬಯಕೆ ಉಂಟಾಗುತ್ತಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಮಗನ ಮದುವೆ ಬಿಸಿಯಲ್ಲಿ ಮುಳುಗಿಹೋಗಿ ಅತ್ತ ಕಡೆ ಧಾವಿಸಲಿಲ್ಲ. ಮದುವೆ ಕಾರ್ಯ ಮುಗಿದು ಬೆಂಗಳೂರಿನಲ್ಲಿ ಇರುವಾಗ್ಗೆ ನಾಟಕದ ಪಾಂಪ್ಲೆಟ್ ಗ್ರೂಪ್ ನಲ್ಲಿ ನೋಡಿದೆ. ಗೌಡರು ಹಾಕಿದ್ದರು. ಫೋನ್ ನಲ್ಲಿ ಸಂಪರ್ಕಿಸಿದೆ.

ಗೌಡ್ರೇ, ತಾವು ಹಾಸನ ಜಿಲ್ಲಾ ರಂಗಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಯಾಶೀಲರಾಗಿದ್ದೀರಿ. ಇನ್ನೂ ನಿಮ್ಮೂರಿನ ನಿಮ್ಮ ಮನೆ ಮುಂದೆಯೇ ಶನಿಪ್ರಭಾವ ನಾಟಕ ಮಾಡಿಸುತ್ತಿದ್ದೀರಿ. ನೀವು ಈ ಹಿಂದೆ ಹಾಸನದ ಕಲಾಭವನದಲ್ಲಿ ರತ್ನ ಮಾಂಗಲ್ಯ ಸಾಮಾಜಿಕ ನಾಟಕದಲ್ಲಿ ಅಭಿನಯಿಸಿದ್ದನ್ನು ಗಮನಿಸಿರುವೆ.
ಈಗ ನೀವು ರಾಜ ಸತ್ಯವ್ರತನ ಪ್ರಮುಖ ಪಾತ್ರವನ್ನೇ ನಿಭಾಯಿಸುತ್ತಿದ್ದೀರಿ. ನೀವು ಈವರೆಗೆ ಎಷ್ಟು ನಾಟಕಗಳಲ್ಲಿ ಯಾವ್ಯಾವ ಪಾತ್ರ ನಿಭಾಯಿಸಿದ್ದೀರಿ ಎಂದು ಕೇಳಿದೆ.

ಸಾರ್. ನೀವು ನನಗೆ ಕಲಾಭವನದ ಕಡೆ ಸಿಗಲಿಲ್ಲ. ನಾಟಕ ನೋಡಲು ಬನ್ನಿ ಎಂದರು. ಮುಂದುವರಿದು ನಾನು ಈವರೆಗೆ ನಲ್ವತ್ತು ನಾಟಕಗಳಲ್ಲಿ ನಟಿಸಿರುವುದಾಗಿ ಹೇಳಿ ದಶರಥನ ಪಾತ್ರವನ್ನು ಐದು ಬಾರಿ, ಕರ್ಣನ ಪಾತ್ರ ಹದಿಮೂರು ಬಾರಿ, ರಾಮ 5 ಸಲ, ಕೃಷ್ಣ-3 ಮತ್ತು ನಾರದನಾಗಿ ಒಮ್ಮೆ ತಂಬೂರಿ ಹಿಡಿದು ರಂಗದ ಮೇಲೆ ಬಂದಿರುವೆ ಎಂದರು. ರತ್ನ ಮಾಗಲ್ಯ ಸಾಮಾಜಿಕ ನಾಟಕದಲ್ಲಿ ನಾಲ್ಕು ಪ್ರಯೋಗ ಮತ್ತು ಗೌಡ್ರು ಗದ್ಲದಲ್ಲಿ ಒಮ್ಮೆ ಗುಡುಗಿದ್ದೇನೆ. ಇಷ್ಟೇ ಎಂದರು.

ಸದ್ಯಕ್ಕೆ ಇಷ್ಟು ಸಾಕು. ಮಂದೆಯೂ ನಿಮ್ಮ ಕಲಾಸೇವೆ ಹೀಗೆ ಸಾಗಲಿ ಜನರಿಗೆ ಮನರಂಜನೆ ದೊರೆಯಲಿ ಎಂದೆ.

ಗೊರೂರು ಅನಂತರಾಜು,
ಹಾಸನ
9449462879

ಪೌರಾಣಿಕ ನಾಟಕಗಳ ಪಾತ್ರದಾರಿ ಇಂಜಿನಿಯರ್ ನಾಗರಾಜ್ ಕೆ. -ಗೊರೂರು ಅನಂತರಾಜು, ಹಾಸನ.

ಆಲೂರು ತಾಲ್ಲೂಕು ಕುಂದೂರು ಹೋಬಳಿ ಸುಳುಗೋಡು ಗ್ರಾಮದ ನಾಗರಾಜ್ ಕೆ. ವೃತ್ತಿಯಲ್ಲಿ ಕೆಇಬಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್. ಪ್ರವೃತ್ತಿಯಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ನಟರಾಗಿ ನಟಿಸುತ್ತಾ ಬಂದಿರುವರು. ಈ ಹಿಂದೆ ಇವರು ಹಾಸನದ ಕಲಾಭವನದಲ್ಲಿ ಎ.ಸಿ.ರಾಜು ನಿರ್ದೇಶನದಲ್ಲಿ ದೇವಿ ಮಹಾತ್ಮೆ ನಾಟಕದಲ್ಲಿ ರಂಬೇಶ್‌ನ ಪಾತ್ರ ನಿರ್ವಹಿಸಿದ್ದರು. ಆಗ ಇವರ ಅಭಿನಯ ನೋಡಿದ್ದೆ. ಮೊನ್ನೆ ನಾಗರಾಜ್‌ರಿಂದ ಪೋನ್ ಬಂತು. ಸಾರ್ ನಾನು ಪೌರಾಣಿಕ ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿರುವೆ. ನೀವು ರಂಗನಟರ ಬಗ್ಗೆ ಬರೆಯುವ ಲೇಖನಗಳನ್ನು ಓದಿರುವೆ…ಎಂದಾಗ ಇಂಜಿನಿಯರ್ ಮಾತಿನ ಇಂಗಿತ ತಿಳಿಯಿತು. ನಿಮ್ಮ ರಂಗಭೂಮಿ ಸೇವೆ ಕುರಿತಾಗಿ ಬರೆಯುವ, ಈ ದಿಶೆಯಲ್ಲಿ ಮಾಹಿತಿ ಕಳಿಸಿ ಎಂದೆ. ಅವರು ಒಂದಿಷ್ಟು ವಿಡಿಯೋ ಕಳಿಸಿದರು. ಡೌನ್‌ಲೋಡ್ ಮಾಡಿ ನೋಡಿದೆ. ನೀವು ರಂಗಕ್ಷೇತ್ರದ ಹಾದಿಯಲ್ಲಿ ಸಾಗಿಬಂದ ಮಾಹಿತಿ ಕಳಿಸಿ ಎಂದೆ. ಸಾರ್, ನೀವು ಹಾಸನದಲ್ಲಿ ಎಲ್ಲಿ ಸಿಗ್ತೀರಾ ಎಂದರು. ನಿಮ್ಮ ಮನೆ ಎಲ್ಲಿ ಎಂದೆ. ಹಾಸನದ ಚನ್ನಪಟ್ಟಣದಲ್ಲಿ ಎಂದರು. ಸರಿ, ನಾನು ಬೆಂಗಳೂರಿನಿಂದ ಬರುತ್ತಿರುವೆ ಬಸ್ ಸ್ಟ್ಯಾಂಡ್‌ನಲ್ಲಿ ನನ್ನ ಬೈಕ್ ಇದೆ. ನೀವು ಅಲ್ಲಿಗೆ ಬನ್ನಿ ಎಂದೆ, ಬಂದಿದ್ದರು. ಇಬ್ಬರು ಬೈಕ್‌ನಲ್ಲಿ ಹೊರಟು ಹಾಸನದ ಹೋಟೆಲ್ ಹೊಕ್ಕೆವು. ಕಾಫಿ ಕುಡಿಯುತ್ತಾ ಮಾತಿಗೆಳೆದೆ. ನಾನು ೨೫ ವರ್ಷಗಳಿಂದ ರಂಗಭೂಮಿಯಲ್ಲಿದ್ದೇನೆ. ನನ್ನ ಜನ್ಮ ದಿನಾಂಕ ೩೦-೫-೧೯೭೩. ನನ್ನ ಪ್ರೈಮರಿ ವಿದ್ಯಾಭ್ಯಾಸ ಸುಳಗೋಡು ಗ್ರಾಮದಲ್ಲಿ, ಪಕ್ಕದ ಗಂಜಿಗೆರೆಯಲ್ಲಿ ಮಿಡಲ್ ಸ್ಕೂಲ್. ಆಲೂರು ಕಲಿವೀರ್ ವಸತಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ. ಡಿಪ್ಲೋಮ ಮಾಡಿದ್ದು ಹಾಸನದ ಎಲ್.ವಿ.ಪಾಲಿಟೆಕ್ನಿಕ್‌ನಲ್ಲಿ. ತಂದೆ ಹೆಸರು ಕರಿಯಯ್ಯ. ತಾಯಿ ದೇವಮ್ಮ. ೨೦೦೦ರಲ್ಲಿ ಕೆಲಸಕ್ಕೆ ಸೇರಿದೆ. ೧೯೮೪-೮೫ರಲ್ಲಿ ಸುಳಗೋಡಿನಲ್ಲಿ ಹತ್ತರ ಪ್ರಾಯದಲ್ಲಿ ರಾಮಾಯಣ ನಾಟಕದ ಚಿಕ್ಕ ಪಾತ್ರದಲ್ಲಿ ರಂಗ ಪ್ರವೇಶಿಸಿದ್ದೆ. ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಟಿ.ದಾಸರಹಳ್ಳಿಯಲ್ಲಿ ೧೯೯೭ರಲ್ಲಿ ಕೆಲವು ಪೌರಾಣಿಕ ನಾಟಕಗಳ ದೃಶ್ಯಾವಳಿಯಲ್ಲಿ ನಟಿಸಿದ್ದೆ. ಆಲೂರು ಟೌನ್‌ನಲ್ಲಿ ೨೦೧೦, ೧೨ರಲ್ಲಿ ನನ್ನ ನೇತೃತ್ವದಲ್ಲಿ ೨ ಬಾರಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಲಾಗಿದೆ. ಯಕ್ಷಗಾನವೇ ಪ್ರಧಾನವಾಗಿರುವ ದಕ್ಷಿಣ ಕರ್ನಾಟಕದ ಕಡಬದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲಕ್ಕೆ ಎ.ಸಿ.ರಾಜು ನಿರ್ದೇಶನದಲ್ಲಿ ಅಲ್ಲಿ ಸತ್ಯಹರಿಶ್ಚಂದ್ರ ನಾಟಕ ಪ್ರದರ್ಶಿಸಿ ಹರಿಶ್ಚಂದ್ರನ ಪಾತ್ರ ನಿರ್ವಹಿಸಿದ್ದೆ. ಕಡಬ ತಾ. ಸವಣೂರಿನಲ್ಲಿ ಕುರುಕ್ಷೇತ್ರ ಆಡಿಸಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಶಾಲಾ ಮಕ್ಕಳಿಗೆ ರಾಮಾಯಣ, ಕುರುಕ್ಷೇತ್ರ ನಾಟಕಗಳ ಪಾತ್ರಗಳ ತರಬೇತಿ ನೀಡಿ ಶಾಲೆ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಶ್ರಮಿಸಿದೆ. ಸರಿ, ನೀವು ಇದುವರೆಗೆ ಯಾವ್ಯಾವ ನಾಟಕಗಳಲ್ಲಿ ಏನೇನು ಪಾತ್ರಗಳನ್ನು ನಿರ್ವಹಿಸಿದ್ದೀರಿ..? ಟೀ ಸೀಪ್ ಮಾಡುತ್ತಾ ಒಂದು ಪ್ರಶ್ನೆ ಒಗೆದೆ. ಸತ್ಯ ಹರಿಶ್ಚಂದ್ರ, ಕುರುಕ್ಷೇತ್ರ, ದೇವಿ ಮಹಾತ್ಮೆ, ರಾಮಾಯಣ ನಾಟಕದಲ್ಲಿ ೧೦ ಬಾರಿ ಶ್ರೀಕೃಷ್ಣನ ಪಾತ್ರ, ಶಕುನಿಯಾಗಿ ೧೪ ಸಲ, ೧೫ ಬಾರಿ ವಿಧುರ, ಭೀಷ್ಮ ದ್ರೋಣ ತಲಾ ಹತ್ತು ಸಲ, ನಾರದನಾಗಿಯೂ ಹತ್ತು, ದೃತರಾಷ್ಟ್ರ-೮, ಸಾತ್ಯಕಿ-೫, ಕರ್ಣ-೪, ಅರ್ಜುನ-೨, ಸೂತ್ರದಾರಿ, ದುರ್ಯೋಧನ, ಆಂಜನೇಯ, ಭರತ, ಡಂಗೂರಿ, ಮಾರೀಚ ಹೀಗೆ ಪಾತ್ರಗಳ ಪರಕಾಯ ಪ್ರವೇಶ ಹೇಳುತ್ತಾ ಹೋದರು. ಅದು ಸರಿ, ಸತ್ಯಹರಿಶ್ಚಂದ್ರನ ಪಾತ್ರ ಎಷ್ಟು ಬಾರಿ ಎಂದೆ. ಮೂರು ಸರ್ತಿ ಅಷ್ಟೇ. ಈ ಸತ್ಯಹರಿಶ್ಚಂದ್ರ ನಾಟಕವನ್ನು ಹಾಸನದ ಕಲಾಭವನದಲ್ಲಿ ಪ್ರದರ್ಶಿಸಬೇಕೆಂಬ ಆಸೆ ಇದೆ ಎಂದರು. ಖಂಡಿತ ಮಾಡಿ ನಾನು ನೋಡುವೆ ಎಂದೆ.

ಗೊರೂರು ಅನಂತರಾಜು, ಹಾಸನ.

ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.

ಆರ್ಟ್ ಫಾರ್ ಇಂಟಿಗ್ರಿಟಿ ಡಾ. ವಿಠಲ ರೆಡ್ಡಿ ಎಫ್ ಚುಳಕಿ

ಮುಂಬಯಿ ಜಹಾಂಗೀರ್ ಆರ್ಟ್‌ ಗ್ಯಾಲರಿಯ ಆಡಿಟೋರಿಯಂ ಹಾಲ್ ನಲ್ಲಿ ‌ʼಆರ್ಟ್ ಫಾರ್ ಇಂಟಿಗ್ರಿಟಿ’ ಎಂಬ ಶೀರ್ಷಿಕೆಯ ಅಡಿಯಲ್ಲಿ
ಡಾ. ವಿಠ್ಠಲರಡ್ಡಿ ಎಫ್ ಚುಳಕಿಯವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಇವರ ಕಲಾಕೃತಿಯ ಗುರಿ ವಾಸ್ತವದ ಮಾಂತ್ರಿಕತೆಯನ್ನು ಹಿಡಿಯುವುದು ಮತ್ತು ಈ ವಾಸ್ತವವನ್ನು ಚಿತ್ರಕಲೆಯಲ್ಲಿ ವರ್ಗಾಯಿಸುವುದು, ಅದೃಶ್ಯವನ್ನು ವಾಸ್ತವದ ಮೂಲಕ ಗೋಚರಿಸುವಂತೆ ಮಾಡುವುದು. ಈ ಕಾರ್ಯಯದಲ್ಲಿ ನನಗೆ ಹೆಚ್ಚು ಸಹಾಯ ಮಾಡುವುದು. ಬಾಹ್ಯಾಕಾಶದ ಒಳಹೊಕ್ಕು ಎತ್ತರ, ಅಗಲ ಮತ್ತು ಆಳ ಈ ಮೂರು ವಿದ್ಯಮಾನಗಳಾಗಿದ್ದು ಚಿತ್ರದ ಅಮೂರ್ತ ಮೇಲ್ಮೈಯನ್ನು ರೂಪಿಸುವುದು ಮತ್ತು ಬಾಹ್ಯಾಕಾಶದ ಅನಂತತೆಯಿಂದ ನನ್ನನ್ನು ನಾನು ರಕ್ಷಿಸಿಕೊಳ್ಳಲು ಒಂದೇ ಸಮತಲಕ್ಕೆ ವರ್ಗಾಯಿಸಬೇಕು. ಅವರ ಅಂಕಿ ಅಂಶಗಳು ಬಂದು ಹೋಗುತ್ತವೆ. ಅದೃಷ್ಟ ಅಥವಾ ದುರಾದೃಷ್ಟದಿಂದ ಸೂಚಿಸಲಾಗಿದೆ. ಇವರ ಸ್ಪಷ್ಟವಾದ ಆಕಸ್ಮಿಕ ಗುಣಮಟ್ಟದಿಂದ ಅವುಗಳನ್ನು ಸರಿಪಡಿಸಲು ಇವರು ಪ್ರಯತ್ನಿಸುತ್ತಾರೆ.
ಡಾ. ವಿಠಲ್‌ ರೆಡ್ಡಿ, ಚುಳಕಿಯವರ ಕಲೆಯ ಸಾಂಕೇತಿಕ ಕೃತಿಗಳು ಗುಪ್ತ ಬಣ್ಣದ ಮೇಲ್ಮೈಗಳಿಂದ ಹೊರ ಚಾಚಿಕೊಂಡಿರುವುದು ಅಲೌಕಿಕತೆ ಸಾಂಕೇತಿಕ ವ್ಯಕ್ತಿ ನಿಷ್ಠತೆಯನ್ನು ಹೊರಹೊಮ್ಮಿಸುತ್ತದೆ. ಪರಸ್ಪರ ರ‍್ಥ ತಯಾರಿಕೆಯ ಪ್ರಕ್ರಿಯೆಯ ವರ್ಧನೆಗೆ ಲಕ್ಷಣಗಳು ಆಗಾಗೆ ಕೊಡುಗೆ ನೀಡುತ್ತವೆ. ಮುಖಾಮುಖಿಯ ಮಾನವ ರೂಪಗಳು ರಹಸ್ಯ ಭಾವನೆಗಳು ಮತ್ತು ಸಂವೇದನೆಗಳ ಆಹ್ವಾನ ಮತ್ತು ಪ್ರಚೋದನೆಯಾಗಿದೆ. ಅಧ್ಯಯನದ ಬ್ರಶ್ ಸ್ಟ್ರೋಕ್‌ಗಳ ಇತರ ಕೃತಿಗಳು ಭೌತಿಕ ಪ್ರಪಂಚದ ಸಮತಲದ ಪರಿಚಯವನ್ನು ಸಾರವನ್ನು ನೀಡುತ್ತದೆ. ಪ್ರಾಪಂಚಿಕ ಸಂವೇದನೆಯ ಸಾಂಕೇತಿಕ ಅರ್ಥದಿಂದ ನಿರ್ಗಮನವು ಬಣ್ಣದ ಕ್ಷೇತ್ರದ ವರ್ಣಚಿತ್ರಗಳ ಸನ್ನೆಗಳ ಪ್ರದರ್ಶನದಲ್ಲಿ ಸೂಚಿಸುತ್ತದೆ. ಡ. ರಡ್ಡಿ ಅವರ ಕ್ಯಾನ್ವಾಸ್ ನಲ್ಲಿನ ವರ್ಣಚಿತ್ರಗಳ ಸರಣಿಯು ವಿಶಾಲವಾದ ಸನ್ನಿವೇಶದಲ್ಲಿ ಇಣುಕುವ ಆಕಾರಗಳು ಮತ್ತು ಸ್ವರೂಪಗಳ ಅಡಿಯಲ್ಲಿ ಮುಕ್ತವಾಗಿ ಹರಿಯುವ ವರ್ಣದ್ರವ್ಯಗಳ ತಮಾಶೆಯ ರೂಪಾಂತರದ ಕಡೆಗೆ. ಈ ಆಕಾರಗಳು ಮತ್ತು ರೂಪಗಳು ಜೀವನದೊಂದಿಗೆ ಒಬ್ಬರ ಮುಖಾಮುಖಿಯಾಗಲು ಅಗೋಚರವಾಗಿರುವ ಕೊರತೆಯಿಂದ ಹೊರಹೊಮ್ಮುತ್ತವೆ. ಒಂದು ನಿರ್ದಿಷ್ಠ ಮಟ್ಟದಲ್ಲಿ, ಕೃತಿಗಳಲ್ಲಿನ ಸಾಂಕೇತಿಕ ಪಾತ್ರಗಳು ವಾಸ್ತವದ ಬೆನ್ನಟ್ಟುವ ವಿದ್ಯಮಾನಗಳನ್ನು ರೂಪಿಸುತ್ತವೆ. ಸಾಮಾನ್ಯವಾಗಿ ಕಂಡುಬರುವ ಉತ್ಪ್ರೇಕ್ಷಿತ ಮಾನವ ದೇಹದ ತುಣುಕುಗಳು ಅನಿಮಿಯ ಅಂಶಗಳನ್ನು ಆಹ್ವಾನಿಸುವಂತೆ. ವಾಸ್ತವದ ವಿವಿಧ ದೈನಂದಿನ ವಸ್ತುಗಳು ಮತ್ತಷ್ಟು ಕಾಣಿಸಿಕೊಳ್ಳುವಿಕೆಯು ಚಿತ್ರಕಲೆಯ ವಿಷಯಗಳಿಗೆ ಅಡಕವಾಗಿವೆ. ರೆಡ್ಡಿಯವರ ಇತ್ತೀಚಿನ ಕೃತಿಗಳ ಸರಣಿಯು ಪ್ರಕೃತಿಯ ಮತ್ತು ಅದರ ಒಳ ಹರವಿನ ನಿರೂಪಣೆ ನಿರೂಪಿಸಲು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ.


ಪ್ರಶಸ್ತಿಗಳು:
೧೯೯೯ ಬಿಸಿಎಂ ವಿಭಾಗದ ಅತ್ಯುತ್ತಮ ಕಲಾ ಕೃತಿ ಪ್ರಶಸ್ತಿ
೧೯೯೨ ಕ್ಯಾಮಲಿನ್ ೧೯೯೯ ಕಾಲೇಜು ವಾರ್ಷಿಕ ಪ್ರಶಸ್ತಿ,
೧೯೯೬ ೧೯೯೯ ೨೦೦೦ ೨೦೦೧ ೨೦೦೨ ೨೦೧೭ ಮೈಸೂರು ದಸರಾ ಪ್ರಶಸ್ತಿ ೨೦೦೨ ರಾಷ್ಟ್ರೀಯ ಚಿನ್ನದ ಪದಕ ಪ್ರಶಸ್ತಿ ಜರ‍್ಖಂಡ್ ರಾಜ್ಯ ಭಾರತ ೨೦೦೩ ಏಳನೇ ಕರ್ನಾಟಕ ಕಲಾಮೇಳ ಬೆಂಗಳೂರು
೨೦೦೫ ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಬೆಂಗಳೂರು .
೨೦೧೦, ೭೬ನೇ ಸಾಹಿತ್ಯ ಸಮ್ಮೇಳನ ಪ್ರಶಸ್ತಿ
೨೦೧೬ ಫೆಲೋಶಿಪ್ ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು ೨೦೧೮ ಮತ್ತು ೨೦೨೪ ಮೈಸೂರು ದಸರಾ ಪ್ರಶಸ್ತಿ ಕಾವ್ಯ ,೨೦೨೫ ಪ್ರತಿಷ್ಠಿತ ಗೌರವ ಪ್ರಶಸ್ತಿ ಕರ್ನಾಟಕದಲ್ಲಿ ಅಕಾಡೆಮಿ ಬೆಂಗಳೂರು.
ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು
ಮೈಸೂರು ಕಲಾಮಂದಿರ ೧೯೯೯ ಪುಣೆ ಸಾವಯಗಂಧರ್ವ ಸಭಾಂಗಣ ಮಹಾರಾಷ್ಟ್ರ ೨೦೧೩, ಹುಬಳ್ಳಿ ಆರ್ಟ್ ಗ್ಯಾಲರಿ ೨೦೧೫, ವಿಶ್ವ ಕನ್ನಡ ಹಬ್ಬ ಪ್ರಯುಕ್ತ ಪ್ರೆಸ್ ಕ್ಲಬ್ ಬೆಂಗಳೂರು ಮತ್ತು ಕನ್ನಡ ಬಳಗ ದುಬೈ ವತಿಯಿಂದ ೧೮ರಿಂದ ೧೯ ನವಂಬರ್ ೨೦೨೨, ಇಂಡಿಯನ್ ಹೈ ಸ್ಕೂಲ್ ದುಬೈ. ಶ್ರೀ ಕಲಾನಿಕೇತನ ದೃಶ್ಯ ಕಲಾ ಗ್ಯಾಲರಿ ಮೈಸೂರು ೨೭ ದಿಂದ ೩೦ ಜನವರಿ ೨೦೨೪ ವರೆಗೆ:
ಗುಂಪು ಪ್ರದರ್ಶನಗಳು:
ಒಟ್ಟು ೩೪ ಭಾಗವಹಿಸಿದ ಪ್ರರ‍್ಶನಗಳು. ಭಾರತರಾದ್ಯಂತ ಹಾಗೂ ವಿದೇಶಗಳಲ್ಲಿ ಒಟ್ಟು ೬೮ ಕಡೆಗೆ ಭಾಗವಹಿಸುವಿಕೆ
ಮುಖ್ಯವಾಗಿ ಭಾಗವಹಿಸಿ ರಚಿಸಿದ ಕಲಾಕೃತಿಗಳ ಶಿಬಿರಗಳು:
ಭಾವಚಿತ್ರ ಶಿಬಿರ ಕೊಲ್ಲಾಪುರ್ ೧೯೯೯, ಸಾಂಪ್ರದಾಯಿಕ ಶಿಬಿರ ಮೈಸೂರು ೨೦೦೦, ಅಖಿಲ ಭಾರತದ ದಕ್ಷಿಣ ಮಧ್ಯ ವಲಯ ೨೦೦೨, ಕಿನ್ನಾಳ ಕಲೆ ಶಿಬಿರ ಮೈಸೂರು ಆಲ್ ಇಂಡಿಯಾ ಲ್ಯಾಂಡ್ ಸೇಫ್ ಕ್ಯಾಂಪ್ ಮೈಸೂರು ೨೦೦೩, ಕರ್ನಾಟಕ ಲಲಿತಕಲಾ ಅಕಾಡೆಮಿ ಗ್ರಾಫಿಕ್ ಕ್ಯಾಂಪ್ ಗುಲ್ರ‍್ಗ ೨೦೧೪, ನಿರಂತರ ಕಾಲೇಜು ಬೆಂಗಳೂರು ೨೦ಂ೪ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಲಲಿತಕಲಾ ಕಾಲೇಜು ಕಾಲೇಜು ಹುಬ್ಬಳ್ಳಿ ೨೦೦೫, ಕೆಎಲ್‌ಕೆ ಅಕಾಡೆಮಿ ಚಿತ್ರಗಳ ಶಿಬಿರ ಬಾಗಲಕೋಟೆ ೨೦೦೬, ಸುರ‍್ಣ ರ‍್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ೨೦೧೭, ರೇಖಾ ಸಂಭ್ರಮ ಉಡುಪಿ ೨೦೦೯, ಕಲೆ ಅಕಾಡೆಮಿ ಸುತ್ತೂರು ಭೂದೃಶ್ಯ ಶಿಬಿರ ೨೦೦೯, ಬಿ ಎಸ್.ಕೆ ವರ್ಮ ಅವರ ಹುಟ್ಟು ಹಬ್ಬದ ನಿಮಿತ್ತ ಸಿ ಕೆ ಪಿ ಬೆಂಗಳೂರು, ೨೦೧೦ ,ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ಕಡೂರು ೨೦೧೦, ೭೬ನೇ ಸಾಹಿತ್ಯ ಸಮ್ಮೇಳನ ಶಿಬಿರ ೨೦೧೦ ಗದಗ್, ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿ ೨೦೧೧, ಕೆಎಲ್‌ಕೆ ಸಾಂಪ್ರದಾಯಿಕ ಶಿಬಿರ ಉಡುಪಿ ೨೦೧೧, ಜಿಲ್ಲಾ ಉತ್ಸವ ೨೦೧೦ ವರ್ಷ ಮಂಡ್ಯ, ೨೦೧೩-೭೯ನೇ ಸಾಹಿತ್ಯ ಸಮ್ಮೇಳನ ವಿಜಯಪುರ, ಬೆಂಗಳೂರು ೨೦೧೩ ರಾಷ್ಟ್ರ ಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕಲಾಸಶಿಬಿರ ಕಾಗಿನೆಲೆ ೨೦೧೩, ಜಿಲ್ಲಾ ಉತ್ಸವ ಧಾರವಾಡ ೨೦೧೧, ರಾಜ್ಯ ಮಟ್ಟದ ಹೆಚ್ ಕೆ ಪಾಟೀಲ್ ಹುಟ್ಟುಹಬ್ಬದ ನಿಮಿತ್ತ ೨೦೧೪, ಬನವಾಸಿ ಉತ್ಸವ ಬನವಾಸಿ ೨೦೧೫, ರಾಜ್ಯಮಟ್ಟದ ವೈಶಾಖ ಕಲಾವಿದರ ಶಿಬಿರ ಖೇಲ್ಕೆ ಮಡಿಕೇರಿ ೨೦೧೫, ಕಂಪ್ಯೂಟರ್ ಸೆಮಿನಾರ್ ಕೆವಿ ಹಂಪಿ ೨೦೧೫, ಕೆ ಎಸ್ ಎನ್ ನರಸಿಂಹಸ್ವಾಮಿ ಶತಮಾನೋತ್ಸವ ಕಲಾಶಿಬಿರ ಕನ್ನಡ ಭವನ ಬೆಂಗಳೂರು ೨೦೧೬, ರೈಲ್ವೆ ವೀಲ್ ಫ್ಯಾಕ್ಟರಿ ಕಲಾಸಶಿಬಿರ ಬೆಂಗಳೂರು ೨೦೧೬, ಕಲೆಯಲ್ಲಿ ರೇಖೆಗಳು ವಿಚಾರ ಸಂಕರ‍್ಣ ೨೦೧೫, ಕಲಾಚಿಂತನ ವಿಚಾರ ಸಂಕಿರಣ ಕೆಎಲ್‌ಕೆ ಬೆಂಗಳೂರು ೨೦೧೬ ಇನ್ನು ಅನೇಕ ಕಲಾಶಿಬಿರಗಳಲ್ಲಿ ಭಾಗವಹಿಸಿ ತಮ್ಮದೇ ಆದ ಚಾಪನ್ನು ಮೂಡಿಸಿದಂತಹ ಕಲಾವಿದರು

ವಿದ್ಯಾಭ್ಯಾಸ:

ಆರ್ಟ್ ಮಾಸ್ಟರ್ ಡಿಪ್ಲೋಮಾ ೧೯೯೧, ಡಿಪ್ಲೋಮಾ ೧೯೯೨, ಶ್ರೀ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯ ಹುಬ್ಬಳ್ಳಿ, ಎಂ ವಿ ಎ ಹಂಪಿ ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ.
ಪಿ ಎಚ್ ಡಿ ಗುಲ್ಬರ್ಗಾ ವಿಶ್ವವಿದ್ಯಾಲಯ ಗುಲ್ಬರ್ಗಾ
೨೦೦೯ ರಿಂದ ೧೩ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರು

ಹುಟ್ಟೂರು:

ಕಗದಾಳ ಗ್ರಾಮ, ಸೌದತ್ತಿ ತಾಲೂಕು, ಬೆಳಗಾಂ- ಜಿಲ್ಲೆ

ಪ್ರಸ್ತುತ ಸೇವೆ:
ಉಪನ್ಯಾಸಕ ಮತ್ತು ಕಲಾವಿದ ಮೈಸೂರಿನ ಶ್ರೀಕಲಾನಿಕೇತನ ಕಾಲೇಜ್ ಆಫ್ ವಿಜ್ಯೂವಲ್  ಆರ್ಟ್, ನಂಬರ್ ಸಿ.ಎ / ೧೫ ವಿಜಯನಗರ, ಮೈಸೂರು.

ಗೊರೂರು ಅನಂತರಾಜು
ಹಾಸನ
೫೭೩೨೦೧

ಪಿ.ಎಸ್. ಕಡೇಮನಿ ನವ್ಯ ಶೈಲಿಯ ಕಲೆಗಾರಿಕೆ

ಕಲೆ ಕೇವಲ ರೇಖೆಗಳು ಮತ್ತು ಬಣ್ಣಗಳಿಗೆ ಸೀಮಿತವಾಗಿಲ್ಲ. ಇದರ ಗೋಳವು ಅಗಾಧವಾಗಿದೆ. ವಿಜಯಪುರದ ಶ್ರೀ ಪಿ.ಎಸ್.ಕಡೇಮನಿ ಬಿಎಲ್‌ಡಿ ಕಲಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರು, ವೃತ್ತಿಯಿಂದ ನಿವೃತ್ತರಾದರು ಪ್ರವತ್ತಿಯ ಮೂಲಕ ಕಲಾ ಲೋಕಕ್ಕೆ ಚಿರಪರಿಚಿತರು. ಅವರ ನಿವೃತ್ತಿಯು ಅವರನ್ನು ವಿಶ್ರಾಂತ ಜೀವನಕ್ಕೆ ಕಟ್ಟಿ ಹಾಕದೆ ಕಲೆಗಾಗಿ ತಮ್ಮ ಸಮಗ್ರ ಜೀವನವನ್ನು ಮುಡುಪಾಗಿಟ್ಟವರು.

ಕುಮಟೆ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಗ್ರಾಮೀಣ ಸಂಸ್ಕೃತಿಯಿ೦ದ ಹೆಚ್ಚು ಪ್ರಭಾವಿತರಾದ ಇವರು ಗ್ರಾಮೀಣ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಸರಳ ಮತ್ತು ಸಹಜವಾಗಿ ಚಿತ್ರಿಸಿದ್ದಾರೆ, ಅವರ ನೆನಪುಗಳು ಹಳ್ಳಿಯಲ್ಲಿನ ಬಾಲ್ಯದ ಬಣ್ಣ ಮತ್ತು ಶಬ್ದಗಳಿಂದ ತುಂಬಿವೆ, ಚಿತ್ರಗಳು ಅವರ ನೆನಪುಗಳನ್ನು ಪ್ರತಿಬಿಂಬಿಸುತ್ತವೆ ಮತ್ತು ಬಡವರ ಮತ್ತು ಶ್ರೀಮಂತ ಜನರ ಮೇಲೆ ಪ್ರಭಾವ ಬೀರುತ್ತವೆ. ಅವರ ವರ್ಣಚಿತ್ರಗಳು ಬಿಲ್ ಗೇಟ್ಸ್ ಅವರ ಗೋಡೆಗಳನ್ನು ಅಲಂಕರಿಸಿವೆ. ಕರ್ನಾಟಕ ಸರ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಗ್ರಾಮೀಣ ಜೀವನದ ವಿವಿಧ ಅಂಶಗಳನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅವರು ಗ್ರಾಮೀಣ ಮತ್ತು ನಗರ ಪ್ರಪಂಚಕ್ಕೆ ಮುಕ್ತವಾಗಿ ತೆರೆದುಕೊಳ್ಳುತ್ತಾರೆ.

ಕ್ರಾಂತಿಕಾರಿ ಸಂವಹನ ವ್ಯವಸ್ಥೆಯಿಂದ ಜಗತ್ತು ಚಿಕ್ಕದಾಗುತ್ತಿದೆ. ಇದು ತುಂಬಾ ಚಿಕ್ಕದಾಗಿದೆ, ನಾವು ಅದನ್ನು ಭೂಗೋಳದ ಮೇಜಿನ ಮೇಲೆ ಇಡಬಹುದು. ಸೌಕರ್ಯಗಳು ಗ್ರಾಮೀಣ ಜಾನಪದವನ್ನು ತಲುಪಿವೆ, ಜೀವನದ ವರ್ಣರಂಜಿತ ಭಾಗವಾಗಿದೆ, ಅವರು ಬಾಲ್ಯದಲ್ಲಿ ದಿನನಿತ್ಯದ ಚಿತ್ರಗಳನ್ನು ನೋಡಬಹುದು ಮತ್ತು ನೆನಪಿಸಿಕೊಳ್ಳಬಹುದು ಎಂದು ಅವರು ದೃಶ್ಯೀಕರಿಸಿದರು, ಅದರ ಕೆಲಸವು ಅವರ ಚಿಕ್ಕ ಹುಡುಗನ ಆರಂಭಿಕ ವರ್ಷಗಳನ್ನು ನೆನಪಿಸುತ್ತದೆ, ಬಣ್ಣಗಳ ಆಟವು ಅವರ ಗ್ರಾಮೀಣ ಬಾಲ್ಯದ ಉತ್ಸಾಹದ ಹೊಳಪು ಮತ್ತು ಉಷ್ಣತೆಯ ಗುಣಲಕ್ಷಣಗಳನ್ನು ಹೊರಹಾಕುತ್ತದೆ. ರೈತರು ಮೊಬೈಲ್ ಹಿಡಿದುದನ್ನು ನೋಡಬಹುದು, ಅವರ ಚಿತ್ರಗಳಲ್ಲಿ ಹಳ್ಳಿಯ ಸನ್ನಿವೇಶ ಮತ್ತು ಘಟನೆಗಳನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಹಳ್ಳಿಯ ಸಂಪ್ರದಾಯಗಳು ಮತ್ತು ಕೌದಿಯ ಹಳ್ಳಿಯ ಜೀವನ ಹೊಲಿಗೆ ಮತ್ತು ಅದರ ತೇಪೆಗಳು ಇತ್ಯಾದಿಗಳನ್ನು ಅದ್ಭುತವಾಗಿ ಮತ್ತು ನೈಸರ್ಗಿಕವಾಗಿ ತೋರಿಸಲಾಗಿದೆ, ಜೀವನದ ನದಿ ಹರಿಯುವಾಗ, ಅಸಂಖ್ಯಾತ ಘಟನೆಗಳು ಸಂಭವಿಸುತ್ತವೆ, ಹಳ್ಳಿಗರು ತಮ್ಮ ಪ್ರಾಣಿಗಳನ್ನು ಪ್ರೀತಿಸುತ್ತಾರೆ, ಮನುಷ್ಯರು ಮತ್ತು ಪ್ರಾಣಿಗಳು ತಮ್ಮ ಚಿತ್ರಗಳಲ್ಲಿ ಸಮೀಕರಣವನ್ನು ಹಂಚಿಕೊಳ್ಳುತ್ತಾರೆ.

ಇ೦ದು ಆಧುನಿಕತೆಯಿಂದಾಗಿ ಮಾನವೀಯತೆ , ಪ್ರೀತಿ, ಪ್ರಾಣಿ, ಸಂಸ್ಕೃತಿ, ಸಂಪ್ರದಾಯ ನಿಧಾನವಾಗಿ ಮರೆಯಾಗುತ್ತಿದೆ. ಇದು ಅದರ ಪರಿಣಾಮಗಳನ್ನು ಹೊಂದಿದೆ ಮತ್ತು ಈ ಅನ್ವೇಷಣೆಯಲ್ಲಿ ಸ್ವಲ್ಪ ಸಾಮರಸ್ಯವಿದೆ. ಅವರು ಆಧುನಿಕ ಅಸ್ತಿತ್ವದ ಕೊಳಕು ಮತ್ತು ದುರಂತವನ್ನು ಬಹಿರಂಗಪಡಿಸುತ್ತಾರೆ, ಈ ಗ್ರಾಮೀಣ ಪ್ರತಿಬಿಂಬಗಳು ನಮಗೆಲ್ಲರಿಗೂ ಸಂದೇಶವನ್ನು ನೀಡಬಹುದು.
ಹಳ್ಳಿಯಲ್ಲಿ ಹುಟ್ಟಿ ತಂದೆ-ತಾಯಿಯೊಂದಿಗೆ ಕೃಷಿಯನ್ನು ಹೆಚ್

ಕಲೆ ಕೇವಲ ರೇಖೆಗಳು ಮತ್ತು ಬಣ್ಣಗಳಿಗೆ ಸೀಮಿತವಾಗಿಲ್ಲ. ಇದರ ಗೋಳವು ಅಗಾಧವಾಗಿದೆ ವಿಜಯಪುರದ ಶ್ರೀ ಪಿ.ಎಸ್.ಕಡೇಮನಿ ಬಿಎಲ್‌ಡಿ ಕಲಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರು, ವೃತ್ತಿಯಿಂದ ನಿವೃತ್ತರಾದರು ಪ್ರವತ್ತಿಯ ಮೂಲಕ ಕಲಾ ಲೋಕಕ್ಕೆ ಚಿರಪರಿಚಿತರು. ಅವರ ನಿವೃತ್ತಿಯು ಅವರನ್ನು ವಿಶ್ರಾಂತ ಜೀವನಕ್ಕೆ ಕಟ್ಟಿ ಹಾಕದೆ ಕಲೆಗಾಗಿ ತಮ್ಮ ಸಮಗ್ರ ಜೀವನವನ್ನು ಮುಡುಪಾಗಿಟ್ಟವರು.

ಕುಮಟೆ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಗ್ರಾಮೀಣ ಸಂಸ್ಕೃತಿಯಿ೦ದ ಹೆಚ್ಚು ಪ್ರಭಾವಿತರಾದ ಇವರು ಗ್ರಾಮೀಣ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಸರಳ ಮತ್ತು ಸಹಜವಾಗಿ ಚಿತ್ರಿಸಿದ್ದಾರೆ, ಅವರ ನೆನಪುಗಳು ಹಳ್ಳಿಯಲ್ಲಿನ ಬಾಲ್ಯದ ಬಣ್ಣ ಮತ್ತು ಶಬ್ದಗಳಿಂದ ತುಂಬಿವೆ, ಚಿತ್ರಗಳು ಅವರ ನೆನಪುಗಳನ್ನು ಪ್ರತಿಬಿಂಬಿಸುತ್ತವೆ ಮತ್ತು ಬಡವರ ಮತ್ತು ಶ್ರೀಮಂತ ಜನರ ಮೇಲೆ ಪ್ರಭಾವ ಬೀರುತ್ತವೆ. ಅವರ ವರ್ಣಚಿತ್ರಗಳು ಬಿಲ್ ಗೇಟ್ಸ್ ಅವರ ಗೋಡೆಗಳನ್ನು ಅಲಂಕರಿಸಿವೆ. ಕರ್ನಾಟಕ ಸರ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಗ್ರಾಮೀಣ ಜೀವನದ ವಿವಿಧ ಅಂಶಗಳನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅವರು ಗ್ರಾಮೀಣ ಮತ್ತು ನಗರ ಪ್ರಪಂಚಕ್ಕೆ ಮುಕ್ತವಾಗಿ ತೆರೆದುಕೊಳ್ಳುತ್ತಾರೆ.

ಕ್ರಾಂತಿಕಾರಿ ಸಂವಹನ ವ್ಯವಸ್ಥೆಯಿಂದ ಜಗತ್ತು ಚಿಕ್ಕದಾಗುತ್ತಿದೆ. ಇದು ತುಂಬಾ ಚಿಕ್ಕದಾಗಿದೆ, ನಾವು ಅದನ್ನು ಭೂಗೋಳದ ಮೇಜಿನ ಮೇಲೆ ಇಡಬಹುದು. ಸೌಕರ್ಯಗಳು ಗ್ರಾಮೀಣ ಜಾನಪದವನ್ನು ತಲುಪಿವೆ, ಜೀವನದ ವರ್ಣರಂಜಿತ ಭಾಗವಾಗಿದೆ, ಅವರು ಬಾಲ್ಯದಲ್ಲಿ ದಿನನಿತ್ಯದ ಚಿತ್ರಗಳನ್ನು ನೋಡಬಹುದು ಮತ್ತು ನೆನಪಿಸಿಕೊಳ್ಳಬಹುದು ಎಂದು ಅವರು ದೃಶ್ಯೀಕರಿಸಿದರು, ಅದರ ಕೆಲಸವು ಅವರ ಚಿಕ್ಕ ಹುಡುಗನ ಆರಂಭಿಕ ವರ್ಷಗಳನ್ನು ನೆನಪಿಸುತ್ತದೆ, ಬಣ್ಣಗಳ ಆಟವು ಅವರ ಗ್ರಾಮೀಣ ಬಾಲ್ಯದ ಉತ್ಸಾಹದ ಹೊಳಪು ಮತ್ತು ಉಷ್ಣತೆಯ ಗುಣಲಕ್ಷಣಗಳನ್ನು ಹೊರಹಾಕುತ್ತದೆ. ರೈತರು ಮೊಬೈಲ್ ಹಿಡಿದುದನ್ನು ನೋಡಬಹುದು, ಅವರ ಚಿತ್ರಗಳಲ್ಲಿ ಹಳ್ಳಿಯ ಸನ್ನಿವೇಶ ಮತ್ತು ಘಟನೆಗಳನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಹಳ್ಳಿಯ ಸಂಪ್ರದಾಯಗಳು ಮತ್ತು ಕೌದಿಯ ಹಳ್ಳಿಯ ಜೀವನ ಹೊಲಿಗೆ ಮತ್ತು ಅದರ ತೇಪೆಗಳು ಇತ್ಯಾದಿಗಳನ್ನು ಅದ್ಭುತವಾಗಿ ಮತ್ತು ನೈಸರ್ಗಿಕವಾಗಿ ತೋರಿಸಲಾಗಿದೆ, ಜೀವನದ ನದಿ ಹರಿಯುವಾಗ, ಅಸಂಖ್ಯಾತ ಘಟನೆಗಳು ಸಂಭವಿಸುತ್ತವೆ, ಹಳ್ಳಿಗರು ತಮ್ಮ ಪ್ರಾಣಿಗಳನ್ನು ಪ್ರೀತಿಸುತ್ತಾರೆ, ಮನುಷ್ಯರು ಮತ್ತು ಪ್ರಾಣಿಗಳು ತಮ್ಮ ಚಿತ್ರಗಳಲ್ಲಿ ಸಮೀಕರಣವನ್ನು ಹಂಚಿಕೊಳ್ಳುತ್ತಾರೆ.

ಇ೦ದು ಆಧುನಿಕತೆಯಿಂದಾಗಿ ಮಾನವೀಯತೆ , ಪ್ರೀತಿ, ಪ್ರಾಣಿ, ಸಂಸ್ಕೃತಿ, ಸಂಪ್ರದಾಯ ನಿಧಾನವಾಗಿ ಮರೆಯಾಗುತ್ತಿದೆ. ಇದು ಅದರ ಪರಿಣಾಮಗಳನ್ನು ಹೊಂದಿದೆ ಮತ್ತು ಈ ಅನ್ವೇಷಣೆಯಲ್ಲಿ ಸ್ವಲ್ಪ ಸಾಮರಸ್ಯವಿದೆ. ಅವರು ಆಧುನಿಕ ಅಸ್ತಿತ್ವದ ಕೊಳಕು ಮತ್ತು ದುರಂತವನ್ನು ಬಹಿರಂಗಪಡಿಸುತ್ತಾರೆ, ಈ ಗ್ರಾಮೀಣ ಪ್ರತಿಬಿಂಬಗಳು ನಮಗೆಲ್ಲರಿಗೂ ಸಂದೇಶವನ್ನು ನೀಡಬಹುದು.
ಹಳ್ಳಿಯಲ್ಲಿ ಹುಟ್ಟಿ ತಂದೆ-ತಾಯಿಯೊಂದಿಗೆ ಕೃಷಿಯನ್ನು ಹೆಚ್ಚು ಕಂಡವರು, ಹುಡುಗನಾಗಿದ್ದಾಗ ಇತಿಮಿತಿ ನೋವು, ಸಮಸ್ಯೆಗಳಿದ್ದರೂ ನೆಮ್ಮದಿ ಕಂಡಿದ್ದು, ಗ್ರಾಮೀಣ ಜನರ ಬದುಕಿಗೆ ಅವರ ಆತ್ಮ ಮಿಡಿಯುತ್ತದೆ ಹಾಗಾಗಿ ಅವರ ಚಿತ್ರಕಲೆಗಳು ಸಹಜವಾಗಿಯೇ ಅದರ ಫಲವೇ. ಪಿ.ಎಸ್.ಕಡೇಮನಿಯವರ ಕೃತಿಗೆ ಅವರ ಪ್ರೀತಿ ಪ್ರಶಂಸೆಗಳು
ಮತ್ತು ಹಿಂದಿನವರು ಮತ್ತು ಅವರ ಜೀವನದ ಮೇಲಿನ ಪ್ರೀತಿ, ಅವರ ಅನೇಕ ಹಬ್ಬಗಳು ಅವರ ವರ್ಣಚಿತ್ರಗಳ ವಿಷಯವಾಗಿದೆ. ಹಬ್ಬ ಹರಿದಿನಗಳಲ್ಲಿ ಗೋಡೆಯ ಮೇಲೆ ಅವರ ಚಿತ್ರಗಳನ್ನು ಸೂಕ್ಷ್ಮವಾಗಿ ನೋಡಿದ ಅವರು ಅವರ ಬಗ್ಗೆ ಅಪಾರವಾದ ಸಹಾನುಭೂತಿ ಮತ್ತು ವಾತ್ಸಲ್ಯವನ್ನು ಹೊಂದಿದ್ದಾರೆ, ಅವರ ತಾಯಿ ಕೌದಿ ಹೊಲಿಯುವ ಮೂಲಕ ಹೆಚ್ಚು ಪ್ರಭಾವಿತರಾಗಿದ್ದಾರೆ, ಹಳ್ಳಿಯ ಸನ್ನಿವೇಶವನ್ನು ಸುಂದರವಾಗಿ ಚಿತ್ರಿಸಿದ್ದಾರೆ, ಅವರ ಚಿತ್ರಗಳು ಆಕರ್ಷಕವಾಗಿವೆ ಮತ್ತು ಮೋಡಿ ಮಾಡುವ ಸುಂದರವಾಗಿವೆ.

ಜಿ.ಕೆ.ಪಾಟೀಲ,
ಪ್ರಧಾನ ಕಾರ್ಯದರ್ಶಿ ಬಿಎಲ್‌ಡಿಇ ಸಂಸ್ಥೆ ,
ವಿಜಯಪುರ.

ಕರ್ನಾಟಕದ ವಿಜಯಪುರ ಜಿಲ್ಲೆಯ ಕುಮಠೆಯಲ್ಲಿ ೧೯೫೫ ರಲ್ಲಿ ಜನಿಸಿದರು.
ವಿದ್ಯಾಭ್ಯಾಸ: ಜಿ.ಡಿ. ಆರ್ಟ್ ಅಂಡ್ ಆರ್ಟ್ ಮಾಸ್ಟರ್, ಧಾರವಾಡ; ಪಿ.ಜಿ. ಡಿಪ್ಲೊಮಾ ಇನ್ ಆರ್ಟ್ ಹಿಸ್ಟರಿ, ಕರ್ನಾಟಕ ವಿಶ್ವವಿದ್ಯಾಲಯ: ಎಂ.ವಿ.ಎ. ಕನ್ನಡ ವಿಶ್ವವಿದ್ಯಾಲಯ, ಹಂಪಿ.
೧೯೮೦ರಲ್ಲಿ ವಿಜಯಪುರದ ಬಿಎಲ್‌ಡಿಇಎಯ ಶ್ರೀ ಶಿದ್ದೇಶ್ವರ ಲಲಿತಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ೨೦೧೧ರಲ್ಲಿ ಅದೇ ಸಂಸ್ಥೆಯ ಪ್ರಾಂಶುಪಾಲರಾದರು. ೨೦೧೫ ರಲ್ಲಿ ಇವರು ನಿವೃತ್ತರಾದರು. ೨೦೧೫ ರಿಂದ ೨೦೧೭ ರವರೆಗೆ ಶ್ರೀ ಶಿದ್ದೇಶ್ವರ ಲಲಿತ ಕಲಾ ಕಾಲೇಜಿನ ನಿರ್ದೇಶಕರು, ೨೦೦೧ ರಿಂದ ೨೦೦೪ ರವರೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಮತ್ತು ವಿಜಯಪುರ. ಪ್ರಸ್ತುತ ವಿಜಯಪುರದ ಪೊನ್ನ ಆರ್ಟ್ ಗ್ಯಾಲರಿಯ ಅಧ್ಯಕ್ಷರಾಗಿದ್ದಾರೆ.

ಇವರು ೭೦ ಕ್ಕೂ ಹೆಚ್ಚು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ (೧೯೯೧-೨೦೧೬) ವಿವಿಧೆಡೆ ಆಯೋಜಿಸಿದ್ದ ಹಲವು ಕಲಾವಿದರ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ೧೯೯೨ ಪ್ರಾದೇಶಿಕ ಲಲಿತ ಕಲಾ ಅಕಾಡೆಮಿ-ಮದ್ರಾಸ್.ಯುವ ಕಲಾವಿದರ ಶಿಬಿರ ವಿಜಯಪುರ, ೧೯೫೫ ಹಾಲಬಾವಿ ಸ್ಕೂಲ್ ಆಫ್ ಆರ್ಟ್ ಧಾರವಾಡದ ವಜ್ರಮಹೋತ್ಸವ. ಬೆನಾನ್ ಸ್ಮಿತ್ ಸ್ಕೂಲ್ ಆಫ್ ಆರ್ಟ್ ಬೆಳಗಾವಿಯಿಂದ ಆರ್ಟಿಡ್ ಶಿಬಿರ. ಮಡಿಕೇರಿ, ಪೊನ್ನಂಪೇಟೆಯಲ್ಲಿ ಜಲವರ್ಣ ಶಿಬಿರ. ೧೯೯೬ ರಾಜ್ಯ ಮಟ್ಟದ ಕಲಾವಿದರ ಶಿಬಿರ-ಬಾಗಲಕೋಟ ರಾಜ್ಯ ಮಟ್ಟದ ಕಲಾವಿದರ ಶಿಬಿರ, ವಿಜಯಪುರದಲ್ಲಿ. ೧೯೯೮-೫೦ನೇ ವರ್ಷ ಭಾರತೀಯ ಸ್ವಾತಂತ್ರ‍್ಯ ಕಲಾವಿದರ ಶಿಬಿರ, ವಿಜಯಪುರ. ೨೦೦೦ ಹಂಪಿ ಉತ್ಸವ ಶಿಬಿರ-ಹಂಪಿ. ಅಖಿಲ ಭಾರತ ಕಲಾವಿದರ ಶಿಬಿರ-ಬಾದಾಮಿ. ೨೦೦೧- ಆಲ್ ಇಂಡಿಯಾ ಆರ್ಟಿಸ್ಟ್ -ನವದೆಹಲಿ, ೨೦೦೬ – ನುಡಿ ಹಬ್ಬ ಕಲಾವಿದರ ಶಿಬಿರ ಕನ್ನಡ ವಿಶ್ವವಿದ್ಯಾಲಯ-ಹಂಪಿ ಸಾರ್ವತ್ರಿಕ ಪ್ರವಾಸೋದ್ಯಮ ದಿನಕ್ಕಾಗಿ ಕಲಾವಿದರ ಶಿಬಿರ – ವಿಜಯಪುರ. ೨೦೦೭- ಕರ್ನಾಟಕ ಏಕೀಕರಣ ಸ್ವಾತಂತ್ರ‍್ಯ ಹೋರಾಟಗಾರರ ಭಾವಚಿತ್ರ ಶಿಬಿರ, ಬೆಳಗಾವಿ. ಕಿತ್ತೂರು ಕರ್ನಾಟಕ ಕಲಾವಿದರ ಶಿಬಿರ. ಕನ್ನಡ ವಿಶ್ವವಿದ್ಯಾಲಯ ಹಂಪಿ, ೨೦೦೯-ಆಳ್ವಾಸ್ ಚಿತ್ರಸಿರಿ ಕಲೆ ಆಳ್ವಾಸ್ ಶಿಕ್ಷಣ ಟ್ರಸ್ಟ್-ಮೂಡಬಿದಿರೆ. ೨೦೧೧-ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿ. ಅಖಿಲ ಭಾರತ ಕಲಾವಿದರ ಶಿಬಿರ ಉಳ್ಳಾಲ-ಬಂಟ್ವಾಳ, ೨೦೧೩- ಚಿತ್ರ ಪರಿಷೆ ಕಲಾ ಶಿಬಿರ-ಬೆಂಗಳೂರು. ಕನಕದಾಸ ಕಲಾವಿದರ ಶಿಬಿರ- ಹಾವೇರಿ, ರಾಘವೇಂದ್ರ ಮಧ್ವಾಚಾರ್ಯ ಕಲಾವಿದರ ಶಿಬಿರ-ಮಂತ್ರಾಲಯ(ಎ.ಪಿ.).

ಪ್ರದರ್ಶನಗಳು
————-

೧೯೮೫ರಿಂದ ೨೦೧೬ರವರೆಗೆ ಬೆಂಗಳೂರು, ಗದಗ, ವಿಜಯಪುರ, ಧಾರವಾಡ ಬಾಗಲಕೋಟ, ಹುಬ್ಬಳ್ಳಿ, ಹೈದರಾಬಾದ್, ಸೊಲ್ಲಾಪುರ ಮತ್ತಿತರ ಕಡೆ ೧೫ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿದೆ. ೬೫ ಕ್ಕೂ ಹೆಚ್ಚು ಗುಂಪು ಪ್ರದರ್ಶನವನ್ನು ಮಾಡಿದ್ದಾರೆ. ೧೯೮೬-ಪ್ರದರ್ಶನ ಮತ್ತು ಸಂಸ್ಕೃತಿ ಇಲಾಖೆ- ವಿಜಯಪುರ. ೧೯೮೯-ಅಖಿಲ ಭಾರತ ಕಲಾ ಪ್ರದರ್ಶನ-ಧಾರವಾಡ. ೧೯೯೫-ಪ್ರಾದೇಶಿಕ ಕಲಾ ಪ್ರದರ್ಶನ-ಬೆಂಗಳೂರು. ೧೯೯೭- ಅಖಿಲ ಭಾರತ ಚಿತ್ರಕಲಾ ಪ್ರದರ್ಶನ-ಜೈಪುರ. ೧೯೯೮-ಮೈಸೂರು ದಾರಾ ಕಲಾ ಪ್ರದರ್ಶನ. ೨೦೦೦ ಜನಪದ ಕಲಾ ಪ್ರದರ್ಶನ-ಹಂಪಿ, ಕರ್ನಾಟಕ ಸಮಕಾಲೀನ ಕಲಾ ಪ್ರದರ್ಶನ-ಹೈದರಾಬಾದ್. ೦೭,೧೩- ಚಿತ್ರಸಂತೆ-ಬೆಂಗಳೂರು, ೨೦೦೬-೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ-ಬೀದರ್. ಕ್ಯಾಮ್ಲಿನ್ ಕಲಾ ಪ್ರದರ್ಶನ-ಚೆನ್ನೈ. ನೆಹರು ಕಲಾ ಕೇಂದ್ರ-ಮು೦ಬೈ. ೨೦೧೪-ಪೊಟ್ರೇಟ್ ಪೇಂಟಿಂಗ್ ಎಕ್ಸಿಬಿಷನ್-ಬೆಂಗಳೂರು. ಹಲವಾರು ಕರ್ನಾಟಕ ಕಲಾ ಮೇಳಗಳು ಮತ್ತು ರಾಷ್ಟ್ರೀಯ ಕಲಾ ಮೇಳಗಳಲ್ಲಿ ಸಹ ಭಾಗವಹಿಸಿದ್ದಾರೆ.

ಪ್ರಶಸ್ತಿಗಳು
———-

೧೯೮೮-ಮೈಸೂರು ದಸರಾ ಪ್ರಶಸ್ತಿ. ೧೯೯೩-ರಾಜ್ಯ ಮಟ್ಟದ ಯುವ ಕಲಾವಿದ ಪ್ರಶಸ್ತಿ, ವಿಜಯಪುರ. ೧೯೯೫-ಏಡ್ಸ್ ನಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ, ದಾವಣಗೆರೆ.೧೯೯೬-ರಾಜ್ಯ ಮಟ್ಟದ ಕಲಾ ಪ್ರದರ್ಶನ, ಮಹಾಲಿಂಗಪುರ. ೨೦೦೪-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಜಯಪುರ. ೨೦೧೩-ಡಿ.ವಿ.ಹಾಲಭಾವಿ ಕುಂಚ ಕಲಾಶ್ರೀ ಪ್ರಶಸ್ತಿ, ಧಾರವಾಡ.
೨೦೧೪-ಶ್ರೀ ಟಿ.ಪಿ.ಅಕ್ಕಿ ಚಿನ್ನದ ಪದಕ-ಗದಗ. ೨೦೧೫-ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಎಂ.ಬಿ. ಪಾಟೀಲ ಕಲಾವಿದರ ಸ್ಮಾರಕ “ದೃಶ್ಯಭೂಷಣ” ಪ್ರಶಸ್ತಿ ಎಂ.ಎಂ.ಕೆ ಗುಲಬರ್ಗಾ. ೨೦೧೧-ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ

ಕಲಾಕೃತಿಗಳ ಸಂಗ್ರಹ
—————–

ಬಿಲ್ ಗೇಟ್ಸ್, ಅಮೇರಿಕಾ ನವದೆಹಲಿ. ಕೆ.ಕೆ ಹೆಬ್ಬಾರ್ ಆರ್ಟ್ ಫೌಂಡೇಶನ್, ಮುಂಬೈ.ರೀಜನಲ್ ಸೆಂಟರ್ ಲಲಿತ್ ಕಲಾ ಅಕಾಡೆಮಿ ಚೆನ್ನೈ. ಕರ್ನಾಟಕ ಲಲಿತಾ ಕಲಾ ಅಕಾಡೆಮಿ, ಬೆಂಗಳೂರು. ಚಿತ್ರಕಲಾ ಪರಿಷತ್, ಬೆಂಗಳೂರು. ಎನ್.ಆರ್.ಐ. ವಿಜಯಪುರ

ಗೊರೂರು ಅನಂತರಾಜು
ಹಾಸನ
94494 62879