ನಮ್ಮ ಜೀವನದಲ್ಲಿ ಹಠ, ಆಸೆ, ಅಹಂಕಾರ ಈ ಮೂರು ಇರಬಾರದು,
ಯಾವುದಕ್ಕೂ ಹಠ ಇರಬಾರದು. ಯಾವುದರ ಮೇಲು ಆತಿ ಆಸೆ ಇರಬಾರದು ಮತ್ತು ಅದು ನನ್ನದು, ನನ್ನದು ಅಷ್ಟೇ ಎಂಬ ಅಹಂಕಾರ ಇರಬಾರದು. ಇದರಿಂದ ಮನಃಶಾಂತಿ ಸಿಗುವುದಿಲ್ಲ.
ನಾನು ಹೇಳಿದ್ದೆ ನಡೀಬೇಕು ಅಂತ ಇಲ್ಲ, ಎಲ್ಲವು “ಈಶ್ವರನ ಇಚ್ಛೆ” ಹೇಗೆ ಇದೆಯೋ ಹಾಗೆ ನಡೆಯುವುದು. ನಾವು ನೀವು ಹೇಳಿದ ಹಾಗೆ ಏನು ನಡೆಯೋಲ್ಲ ಎಲ್ಲವು “ಈಶ್ವರನ ಸಂಕಲ್ಪ”ಹೇಗಿದೆಯೋ ಹಾಗೆ ನಡೆಯುತ್ತದೆ. ಅದಕ್ಕೆ ನಾವು ತಲೆ ಭಾಗಬೇಕೆ ವಿನಃ ನಾವು ಅದನ್ನೆಲ್ಲಾ ಕೇಳೋದಿಲ್ಲ ಅಂತ ಹೋದ್ರೆ ನಿಮಗೆ ಮನಃ ಶಾಂತಿ ಯಾವತ್ತೂ ಸಿಕ್ಕೊದಿಲ್ಲ.
ನಮ್ಮ ಜೀವನದಲ್ಲಿ ಪ್ರತಿಯೊಂದು ಘಳಿಗೆಗೂ ನಾವು ದೈವಿ ಸಂಪತ್ತನ್ನು ಹೆಚ್ಚಿಸಿಕೊಂಡರೆ, ಅಸುರಿ ಸಂಪತ್ತಿನಿಂದ ದೂರವಾಗಿದ್ದರೆ ಆಗ ಮಾತ್ರ ಮನಃ ಶಾಂತಿ ತಾನಾಗಿ ಸಿಕ್ಕುತ್ತದೆ ಮತ್ತು ಲೌಕಿಕ ವಿಷಯಗಳಲ್ಲಿ ಜಾಸ್ತಿ ಆಸೆಯನ್ನು ಇಟ್ಟುಕೊಳ್ಳಬಾರದು.
– ಜಗದ್ಗುರು ಶಂಕರಾಚಾರ್ಯ ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು*