ಚಂಪಾ ಸೃಷ್ಟಿ ಪ್ರಯುಕ್ತ. ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಕಾರ್ತಿಕೋತ್ಸವದ

ಗಂಗಾವತಿ.. ನಗರದ ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ. ಕಾರ್ತಿಕ ಮಾಸದ ಕೊನೆಯ ದಿನವಾದ ಶನಿವಾರದಂದು ಚಂಪಾ ಸೃಷ್ಟಿ, ( ಶ್ರೀ ಸುಬ್ರಹ್ಮಣ್ಯೇಶ್ವರ ಆಚರಣೆ) ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ದೀಪೋತ್ಸವ ಅಪಾರ ಭಕ್ತಾದಿಗಳ ಮಧ್ಯೆ. ಶ್ರದ್ಧೆ ಭಕ್ತಿಯಿಂದ ಜರುಗಿತು.
ಇದಕ್ಕೂ ಪೂರ್ವದಲ್ಲಿ. ಅಮ್ಮನವರಿಗೆ. ವಿಶೇಷ ಅಲಂಕಾರ. ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರು ಸಾಂಗತವಾಗಿ ನಡೆಸಿಕೊಟ್ಟರು. ಬಳಿಕ ವಾಸವಿ ಮಹಿಳಾ ಮಂಡಳಿಯ ಸದಸ್ಯರಿಂದ ಭಜನೆ, ಲಲಿತ ಸಹಸ್ರ ಪಾರಾಯಣ ಪಠಣ. ಇತರೆ ಕಾರ್ಯಕ್ರಮಗಳು ಜರುಗಿದವು. ಬಳಿಕ. ಸಮಾಜದ ಅಧ್ಯಕ್ಷ ನಾಗರಾಜ ದರೋಜಿ. ದಂಪತಿಗಳು ಸೇರಿದಂತೆ. ಟ್ರಸ್ಟಿ ಸದಸ್ಯರ ನೇತೃತ್ವದಲ್ಲಿ. ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಬಳಿಕ ಅಧ್ಯಕ್ಷ ನಾಗರಾಜ ದರೋಜಿ ಮಾತನಾಡಿ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಚಂಪಾ ಸೃಷ್ಟಿಯ 16ನೇ ವರ್ಷದ ಕಾರ್ತಿಕ ದೀಪೋತ್ಸವ ಇದಾಗಿದ್ದು. ಸಮಾಜಭಂಧವರ ಎಲ್ಲರ ಸಹಕಾರದ ಮೇರೆಗೆ ಯಶಸ್ವಿಗೊಂಡಿದೆ. ಜ್ಯೋತಿ ಪರಂ ಬ್ರಹ್ಮ ಎನ್ನುವಂತೆ. ಕುಲದೇವತೆ. ಅಮ್ಮನವರು ಸರ್ವರಿಗೂ ಸುಖ ಶಾಂತಿ ಸಮೃದ್ಧಿ. ಕರುಣಿಸಲಿ ಎಂದು ಸಂಕಲ್ಪಿಸಿಕೊಂಡಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಡಿ ಮಲ್ಲಿಕಾರ್ಜುನ, ಗೋಪಾಲ ಶೆಟ್ಟಿ, ಆನೆಗುಂದಿ. ಡಿ ವೆಂಕಟೇಶ್ರು, ರುಕ್ಮಿಣಿ ಬಾಯಿ ದಮ್ಮೂರು, ಉಷಾ ಸಿರಿಗೇರಿ, ರೇಖಾ ಜಿ. ವಾಸವಿ ಯುವಜನ ಸಂಘದ ಯುವಕರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

October 2025
MTWTFSS
 12345
6789101112
13141516171819
20212223242526
2728293031 

Leave a Reply