ರೆಡ್ಡಿ ಸಮಾಜದ ಯುವ ಸಂಘದ ನೇತೃತ್ವದಲ್ಲಿ ಸಮ್ಮೇಳನ ಅಧ್ಯಕ್ಷರಿಗೆ ಸನ್ಮಾನ

ಗಂಗಾವತಿ:. ಶಿಕ್ಷಕರಾಗಿ, ವಿಮರ್ಶಕರಾಗಿ, ರಂಗಭೂಮಿ ಕಲಾವಿದನಾಗಿ, ಕೃಷಿ ಪತ್ರಿಕೆಯ ವರದಿಗಾರರಾಗಿ, ಅತ್ಯುತ್ತವಾದ ಜನಪದ ಕಲಾವಿದರಾಗಿ ಹೀಗೆ ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ 13ನೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಗೊಂಡ ಲಿಂಗಾರೆಡ್ಡಿ ಆಲೂರ್ ಅವರಿಗೆ ರೆಡ್ಡಿ ಸಮಾಜದ ಯುವ ಘಟಕದ ನೇತೃತ್ವದಲ್ಲಿ ಮಾರ್ಚ್-12‌ ಬುಧವಾರದಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಪ್ರಸ್ತುತ ಕೆಸರಹಟ್ಟಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾದ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರ್ ಸರ್ ಅವರಿಗೆ ಯುವ ಮುಖಂಡ ಚನ್ನಬಸವ ಜೇಕಿನ್‌ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಮಾತನಾಡಿ 13ನೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು. ಅವರು ಸಲ್ಲಿಸಿದ ಕಲೆ, ಸಾಹಿತ್ಯ, ಕೃಷಿಗೆ ಸಲ್ಲಿಸಿದ ಪ್ರಾಮಾಣಿಕ ಸೇವೆ ಮುಖ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಆಲೂರು ಅವರ ಹೆಸರನ್ನು ಘೋಷಣೆ ಮಾಡಿರುವುದು ರೆಡ್ಡಿ ಸಮಾಜಕ್ಕೆ ಹಾಗೂ ಸಾಹಿತ್ಯ ಆಸಕ್ತರಿಗೆ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.

ಉಮೇಶ ಸಿಂಗನಾಳ, ರವಿ ಚೈತನ್ಯ ರೆಡ್ಡಿ, ವಿಶ್ವನಾಥ್ ಮಾಲಿಪಾಟೀಲ್, ಎರಿಸ್ವಾಮಿ, ಮಹಾಂತೇಶ್ ಗೌಡ, ಅಮರಣ್ಣ, ಜೀವನ್ ಕುಮಾರ್, ಚನ್ನಬಸವ ಹೇರೂರು, ಉಮೇಶ್ ರೆಡ್ಡಿ, ವೀರನಗೌಡ ಕೆಸರಹಟ್ಟಿ, ನವೀನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply