ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಿದ್ದರಾಮಸ್ವಾಮಿ

ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಿದ್ದರಾಮಸ್ವಾಮಿ

ಗಂಗಾವತಿ: ತಾಲೂಕಿನ ಎಂ.ಎಸ್.ಎಂ.ಎಸ್ ಮಹಾವಿದ್ಯಾಲಯದಲ್ಲಿ ಶಿಕ್ಷಣಪ್ರೇಮಿ, ಹಿರಿಯ ರಾಜಕಾರಣಿ ಹೆಚ್.ಎಂ. ಸಿದ್ದರಾಮಸ್ವಾಮಿ ತಮ್ಮ ೭೦ನೇ ವರ್ಷದ ಹುಟ್ಟು ಹಬ್ಬವನ್ನು ತಮ್ಮದೇ ಪ್ರೌಢಶಾಲೆ ಮತ್ತು ಕಾನೂನು ಪದವಿ ಕಾಲೇಜು, ಡಿಗ್ರಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸರಳವಾಗಿ ಮತ್ತು ಸಂಭ್ರಮದೊಂದಿಗೆ ಆಚರಿಸಿಕೊಂಡರು.

ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಶಿಕ್ಷಕ, ಶಿಕ್ಷಕಿಯರು, ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿದ್ದರಾಮಸ್ವಾಮಿಯವರ ಬಗ್ಗೆ ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಅವರು ನಡೆದುಕೊಳ್ಳುವ ರೀತಿ-ನೀತಿಗಳ ಬಗ್ಗೆ ಕೊಂಡಾಡಿದರು.
ಸಿದ್ದರಾಮ ಸ್ವಾಮಿಯವರು ಈ ಮಟ್ಟಕ್ಕೆ ಬೆಳೆಯಬೇಕೆಂದರೆ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿನಿಂತು ಸಾಧನೆಯನ್ನು ಮಾಡಿದ್ದಾರೆ. ಇದು ಹಾಗೆ ಸುಮ್ಮನೆ ಒಲಿಯುವಂತದ್ದು ಅಲ್ಲ, ಇದರ ಹಿಂದೆ ಸ್ವಾಮಿಯವರ ಅಪಾರ ಶ್ರಮವಿದೆ ಎಂದು ಶಿಕ್ಷಕ ವರ್ಗ ತಮ್ಮ ಅನಿಸಿಕೆಯನ್ನು ಹೇಳಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಮತ್ತು ಅದನ್ನು ಮುನ್ನಡೆಸುವುದು ಅಷ್ಟೊಂದು ಸುಲಭದ ವಿಷಯವಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಕೆಲಸ ನಿರ್ವಹಿಸುವ ಉಪನ್ಯಾಸಕರು ಸಿದ್ದರಾಮಸ್ವಾಮಿಯವರ ಬಗ್ಗೆ ಮಾತನಾಡುತ್ತಾ ನಮ್ಮಲ್ಲಿರುವ ಎಲ್ಲ ಶಿಕ್ಷಕ ವೃಂದವನ್ನು ಅವರು ಯಾವತ್ತೂ ಕೆಲಸಗಾರರು, ದುಡಿಯುವವರು ಎಂದು ಭೇದ ಭಾವವಿಲ್ಲದೆ ತಮ್ಮ ಕುಟುಂಬ ಸದಸ್ಯರೆಂಬಂತೆ ನಮ್ಮನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಎಂದು ಗುಣಗಾನ ಮಾಡಿದರು. ಸರಳ ಮತ್ತು ಸಜ್ಜನಿಕೆ ವ್ಯಕ್ತಿಯಾಗಿರುವ ಸಿದ್ದರಾಮಸ್ವಾಮಿ ಅವರು ಇನ್ನೂ ನೂರು ವರ್ಷ ಬಾಳಿ ಬದುಕಲಿ ಎಂದು ಎಲ್ಲರೂ ಶುಭ ಹಾರೈಸಿದರು.

ಸಿದ್ದರಾಮಸ್ವಾಮಿಯವರ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಕಾಲೇಜ್ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಹಲವಾರು ಸ್ಪೋರ್ಟ್ಸ್ ಗಳನ್ನು ನಡೆಸಿದರು. ಪ್ರಥಮ, ದ್ವಿತೀಯ, ತೃತೀಯ ಎಂಬAತೆ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಪಾರ್ವತಮ್ಮ, ಕಾಲೇಜ್ ಆಡಳಿತ ಅಧಿಕಾರಿಗಳಾದ ಬಸವರಾಜಸ್ವಾಮಿ, ವಿರೂಪಾಕ್ಷಯ್ಯ ಸ್ವಾಮಿ, ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವರ್ಗ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply