ಅಂಜನಾದ್ರಿ ಶ್ರೀ ಆಂಜನೇಯಸ್ವಾಮಿ ಪ್ರಧಾನ ಅರ್ಚಕ ವಿದ್ಯಾದಾಸ್ ಬಾಬಾ ಅವರ ನೇತೃತ್ವದಲ್ಲಿ ಪ.ಪೂ ಶ್ರೀ ಲಕ್ಕಡದಾಸ್ ಬಾಬಾ ಅವರ ೨೭ನೇ ಪುಣ್ಯಸ್ಮರಣೆ ಕಾರ್ಯಕ್ರಮ

ಗಂಗಾವತಿ: ಮಾರ್ಚ್-೩೦ ಭಾನುವಾರ ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪರಮಪೂಜ್ಯ ಶ್ರೀ ಲಕ್ಕಡದಾಸ್ ಬಾಬಾ ಅವರ ೨೭ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವಿದ್ಯಾದಾಸ್ ಬಾಬಾ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಮತ್ತು ವೈಭವದಿಂದ ನಡೆಯಿತು.

ಬೆಳಗ್ಗೆಯಿಂದಲೇ ಶ್ರೀ ಲಕ್ಕಡ ದಾಸ್ ಅವರ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ಕಾರ್ಯಕ್ರಮಗಳು ಹೈದರಾಬಾದಿನ ಪ್ರಮುಖ ಪಕ್ಷದ ಜಗದೀಶ್ ಸಾಂಕಲಾ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದವು.

ಭಕ್ತಾದಿಗಳಾದ ದೇವ ನಾರಾಯಣ ಸಾಂಕ್ಲಾ, ಶಿವಪ್ರಸಾದ್, ಜಿ ನರೇಶ್ ಪಚ್ಚೆವ, ಸುರೇಶ್ ಕುಮಾರ್, ಲೋಹಿಯಾ ಪರಿವಾರ ಶ್ರೀ ದೇವನಾರಾಯಣ ಸಾಂಕ್ಲಾ, ಧನ ಧನ್ಯಶ್ರೀ ಸಂಕ್ಲಾ, ಅರ್ಜುನ್ ಸಾಂಕ್ಲಾ, ರಾಮಕಿಶೋರಿ ತಿವಾರಿ ಹಾಗೂ ಹೈದರಾಬಾದಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಲಕ್ಕಡದಾಸ್ ಬಾಬಾ ಅವರ ೨೭ನೇ ಪುಣ್ಯಸ್ಮರಣೆಗೆ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿತ್ತು.

Leave a Reply