ಭಾರತೀಯ ಬಾಲ ವಿದ್ಯಾಲಯದ ಸುವರ್ಣ ಮಹೋತ್ಸವದ ಲೊಗೊ ವಿರುಪಾಕ್ಷಪ್ಪ ಸಿಂಗನಾಳ ಅವರಿಂದ ಬಿಡುಗಡೆ

ಗಂಗಾವತಿ: ತಾಲೂಕಿನ ಪ್ರಗತಿನಗರದ ಭಾರತೀಯ ಬಾಲ ವಿದ್ಯಾಲಯದಲ್ಲಿ ಫೆಬ್ರವರಿ-೦೮ ಮತ್ತು ೦೯ ಎರಡು ದಿನಗಳ ಕಾಲ ನಡೆಯುವ ಸುವರ್ಣ ಮಹೋತ್ಸವದ ಲೋಗೋ ವನ್ನು ಫೆಬ್ರವರಿ-೦೨ ರವಿವಾರ ಬಿಡುಗಡೆ ಮಾಡಲಾಯಿತು.

ಈ ಲೋಗೊ ಬಿಡುಗಡೆ ಮಾಡಿದ ಸಂಸ್ಥೆಯ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ಫೆಬ್ರವರಿ-೮ ಮತ್ತು ೯ ಎರಡು ದಿನಗಳು ನಡೆಯುವ ಸುವರ್ಣ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಆಚರಿಸೋಣ, ಎಲ್ಲಾ ಹಿರಿಯ ಗುರುಗಳು, ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.

ಈ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಸುಬ್ಬರಾಜು, ಸತೀಶ, ವಿರೇಶ ಹಣವಾಳ, ಶ್ರೀಕಾಂತ ಮರಳಿ, ಮುಖ್ಯ ಗುರುಗಳಾದ ಹೇಮಂತರಾಜ ಕಲ್ಮಂಗಿ ಉಪಸ್ಥಿತರಿದ್ದರು.

ಲಕ್ಷ್ಮಿಕಾಂತ್ ಹೇರೂರು ಅವರ ಶಿಕ್ಷಣ, ಸಮಾಜಕ್ಷೇತ್ರದಲ್ಲಿನ ಸೇವೆಗೆ ಸೇಡಮ್‌ನಲ್ಲಿ “ಕಲ್ಯಾಣ ಕರ್ನಾಟಕ ಗೌರವ ಪುರಸ್ಕಾರ”

ಗಂಗಾವತಿ: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್ ಹಾಗೂ ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಕಲಬುರ್ಗಿ ಇವರು ಜನವರಿ-೨೯ ರಿಂದ ಫೆಬ್ರವರಿ-೦೬ ರವರೆಗೆ ಸೇಡಮ್‌ನ ಕಲಬುರ್ಗಿ ರಸ್ತೆಯ ಪ್ರಕೃತಿನಗರ ಬೀರನಹಳ್ಳಿಯಲ್ಲಿ ಜರುಗಿದ ೭ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿಯ ಹಿನ್ನೆಲೆಯಲ್ಲಿ ಜನೇವರಿ-೦೪ ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಶಿಕ್ಷಣ, ಸಮಾಜಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ಗಂಗಾವತಿಯ ಲಕ್ಷ್ಮೀಕಾಂತ್ ಹೇರೂರು ಅವರಿಗೆ ಕಲ್ಯಾಣ ಕರ್ನಾಟಕ ಗೌರವ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಲಕ್ಷ್ಮೀಕಾಂತ ಹೇರೂರು ಅವರು ಗೌರವ ಸ್ವೀಕರಿಸಿ, ೨೪೦ ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಆಯೋಜಿಸಿದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಕ್ಕಳ ಲೋಕ, ವಿಜ್ಞಾನ ಲೋಕ, ಕೃಷಿ ಲೋಕ, ತತ್ವ ಲೋಕ, ಕಾಯಕ ಲೋಕ, ಬಾಲ ಲೋಕ, ಸ್ವದೇಶಿ ಉದ್ಯಮ ಲೋಕ, ಉದ್ಯಮ ಲೋಕ, ಜ್ಞಾನಲೋಕ ಮುಂತಾದ ವಿವಿಧ ಆಯಾಮಗಳ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯವಾದದ್ದು. ನನ್ನ ಪ್ರತಿಭೆಗೆ ಸದಾ ಪ್ರೋತ್ಸಾಹ, ಬೆಂಬಲ, ಮಾರ್ಗದರ್ಶನ ನೀಡುತ್ತಿರುವ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಎಲ್ಲಾ ಆಡಳಿತ ಮಂಡಳಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದರು.

ಇವರಿಗೆ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ತಿಳಿಸಿದ್ದಾರೆ.

ತೇರು ಹರಿದಾವೋ ತಾನಕ್ಕೆ ನಿಂತಾವೋ

ಮನೆಯ ಪೈಂಟಿಂಗ್ ಕೆಲಸ ನಡೆದಿತ್ತು. ಮನೆಯ ಪಾತ್ರೆ ಪದಾರ್ಥಗಳನ್ನು ಅತ್ತಿಂದಿತ್ತ ಇಟ್ಟಾಡಿ ಸುಸ್ತಾಗಿ ಹೋಗಿದ್ದೆ. ಮೂರು ದಿನಗಳಲ್ಲಿ ಮುಗಿಸಿಕೊಡುವೆ ಎಂದಿದ್ದ ಅಕ್ಬರ್ ಪುಣ್ಯಾತ್ಮ ಹದಿನೈದು ದಿನ ತೆಗೆದುಕೊಂಡ. ಮನೆ ತುಂಬಾ ಧೂಳಿನ ರಾಶಿ ಜೊತೆಗೆ ಎಲ್ಲೆಲ್ಲಿ ನೋಡಿದರೂ ಪುಸ್ತಕಗಳೇ! ನೋಡಿ ನೋಡಿ ಬೇಸರಗೊಂಡು ಮಡದಿ ಶಕುಂತಲೆ ಸಿಟ್ಟಿನಿಂದ ರೇಗಾಡಿ ಆಗಿಂದಾಗ್ಗೆ ನನ್ನಿಂದ ಕೆಲಸ ತೆಗೆಯುತ್ತಿದ್ದಳು. ‘ರೀ, ಪೈಂಟ್ ಸೋರಿಸಿಬಿಡ್ತಾರೆ, ನಿಮ್ಮ ಪಂಚೆ ಹಾಸ್ರಿ.. ಮನೆಯಲ್ಲಿ ಇದ್ದ ಬದ್ದ ಹಳೆಯ ಬೆಡ್‌ಶೀಟ್‌ಗಳು, ಹೊದುಪುಗಳನ್ನು ಪೈಂಟಿಂಗ್ ಮಾಡುವ ಜಾಗದಲ್ಲೆಲ್ಲಾ ಹಾಸಿದ್ದಾಯಿತು. ಇನ್ನು ಉದ್ದವಾಗಿ ಉಳಿದಿದ್ದು ನನ್ನ ಪಂಚೆ ಅದನ್ನು ಹಾಸಿದೆ. ಪುಸ್ತಕವನ್ನೆಲ್ಲಾ ಹದಿನೈದು ದಿನ ಆಚೆಗೆ ಬಿಸಾಡಿದ್ದಳು. ಅವು ಅಲ್ಲಿಯೇ ಬಿದ್ದಿದ್ದರೂ ಯಾವ ಕಳ್ಳರೂ ಕದ್ದಿಲ್ಲ. ದೇಶದಲ್ಲಿ ದಡ್ಡರಿಲ್ಲ ಎಂದುಕೊಂಡೆ. ಪುಸ್ತಕಗಳನ್ನು ಮತ್ತೆ ಶೆಲ್ಟ್‌ ನಲ್ಲಿ ಇಡುವಾಗ ಗೊರೂರು ಹೇಮಾವತಿ ರ‍್ಶನ ಪುಸ್ತಕ ಸಿಕ್ಕಿತು. ಇದನ್ನು ನಾನು ಬರೆದಿದ್ದು ೧೯೯೧ ರಲ್ಲಿ. ನಮ್ಮೂರಿನ ಪತ್ತೇದಾರಿ ಲೇಖಕ ಪರಮೇಶ್ ಹೇಳಿ ಬರೆಸಿದ್ದರು. ಮತ್ತೇ ಅವರೇ ೧೯೯೨ ರಲ್ಲಿ ಪ್ರಕಟಿಸಿದ್ದರು. ಕಳೆದ ವರ್ಷ ಸುಂದರೇಶ್ ಈ ಪುಸ್ತಕ ಕೇಳಿದ್ದರು. ಸಿಕ್ಕಿರಲಿಲ್ಲ. ಅದೆಲ್ಲೊ ಒಂದು ಪ್ರತಿ ಗ್ರಂಥಭಂಡಾರದಲ್ಲಿ ಅಡಗಿಕೊಂಡಿತ್ತು.
ಮದ್ಯಾಹ್ನ ೨ ಗಂಟೆ. ವ್ಯಾಟ್ಸಪ್ ಪೋನ್ ಬಂತು. ಅಮೇರಿಕಾದಿಂದ ಮಂಜಣ್ಣನ ಮಗ ಮನು. ‘ಏನ್ ಚೆನ್ನಾಗಿದ್ದಿರಾ ಅಂಕಲ್.. ಎಂದನು. ‘ಚೆಂದ ಏನ್ ಬಂತೋ ಮನು, ನನ್ಗೂ ವಯಸ್ಸಾತ್ತಲ್ಲ.. ‘ಅಂಕಲ್, ಇಲ್ಲೊಬ್ರು ನಿಮ್ಮ ಫ್ರೆಂಡ್ ಬಂದಿದ್ದಾರೆ. ನಿಮ್ಮ ಹತ್ರ ಮಾತ್ನಾಡ್ತಾರೆ ನೋಡಿ.. ಎಂದನು. ಆ ಕಡೆಯಿಂದ ತೊಗಲುಗೊಂಬೆ ಕಲಾವಿದರು ಗುಂಡುರಾಜ್. ‘ಅನಂತು ಚೆನ್ನಾಗಿದ್ದಿರಾ, ಅಮೇರಿಕಾಗೆ ಬಂದಿದ್ದೆ. ಇಲ್ಲಿ ನಿಮ್ಮ ಅಣ್ಣವ್ರ ಮಗ ಒಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗ್ತಿದ್ದಾರೆ.. ಎಂದರು.
ಹಾಸನದ ನಮ್ಮ ಗುಂಡುರಾಜ್ ಅಮೇರಿಕಾದಲ್ಲಿ ಫೇಮಸ್ ಆಗಿರುವುದು ಖುಷಿಯಾಯ್ತು. ನೆನ್ನೆ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ತೊಗಲುಗೊಂಬೆಯ ತಮ್ಮ ದೇಶ ವಿದೇಶಗಳ ಸುತ್ತಾಟ, ತೊಗಲುಗೊಂಬೆ ಕಲಿಯಲು ಭಾರತಕ್ಕೆ ಬಂದು ವಾರ ತಿಂಗಳು ತಂಗಿದ್ದಿ ಇವರಿಂದ ತರಬೇತಿ ಪಡೆದು ಹೋಗುವ. ತಮ್ಮ ದೇಶಕ್ಕೆ ಕರೆಸಿಕೊಳ್ಳುವ ವಿಚಾರ ಕೇಳಿ ಆಶ್ರ‍್ಯ ಜೊತೆಗೆ ಖುಷಿಯಾಯಿತು. ನಮ್ಮ ಅಣ್ಣನ ಮಗ ಮನು ಅಮೇರಿಕಾದಲ್ಲಿ ಕನ್ನಡ ಭವನ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆಂದು ಪತ್ರರ‍್ತರು ಆರ್.ಪಿ.ವೆಂಕಟೇಶಮೂರ್ತಿ ತಮ್ಮ ಪತ್ರಿಕೆಯಲ್ಲಿ ಈ ಹಿಂದೆ ಬರೆದಿದ್ದರು. ಅದನ್ನು ಮನು ತಿಳಿಸಿ ಭೇಷ್ ಎಂದೆ. ಮತ್ತೇ ಭಾರತಕ್ಕೆ ಯಾವಾಗಾರ‍್ತಿ.. ಎಂದೆ. ಅಲ್ಲಿಯ ಅಧ್ಯಕ್ಷರು ಎಲ್ಲರನ್ನು ಓಡಿಸಲು ಸಹಿ ಮಾಡಿರುವ ಸಂಗತಿ ಟಿವಿಯಲ್ಲಿ ನೋಡಿದ್ದೆನು.
‘ಅಂಕಲ್, ಗೊರೂರು ಜಾತ್ರೆ ಯಾವತ್ತು ಎಂದನು ಮನು. ‘ಅದೇ ಮಾಮುಲಿ ರಥಸಪ್ತಮಿಗೆ ಎಂದೆನು. ‘ ಹೇ ಡೇಟ್ ಹೇಳಿ ಅಂಕಲ್.. ‘ ತಡಿ ಕ್ಯಾಲೆಂಡರ್ ನೋಡಿ ಹೇಳ್ತಿನಿ ಎಂದು ಫೆಬ್ರವರಿ ನಾಲ್ಕು. ಎಂದೆ. ಯಾಕೋ ತಕ್ಷಣದಲ್ಲೇ ಪೋನ್ ಸಂರ‍್ಕ ಕಡಿತಗೊಂಡಿತು. ಪೋನ್ ಬದಿಗಿಟ್ಟು ಗೊರೂರು ಹೇಮಾವತಿ ರ‍್ಶನ ಪುಸ್ತಕ ಕೈಗೆತ್ತಿಕೊಂಡೆ. ಮಡದಿ ಟೀ ತಂದುಕೊಟ್ಟಳು. ಹಾಗೇ ಪುಸ್ತಕ ತಿರುವಿಹಾಕಿದೆ.
ಹಾಸನದಿಂದ ದಕ್ಷಿಣಕ್ಕೆ ೨೩ ಕಿ.ಮೀ. ದೂರದಲ್ಲಿ ಹಾಸನ ಅರಕಲಗೂಡು ರಸ್ತೆಯಲ್ಲಿ ಹೇಮಾವತಿ ನದಿಯ ತೀರದಲ್ಲಿ ಐತಿಹ್ಯ ಶ್ರೀ ಯೋಗಾನರಸಿಂಹಸ್ವಾಮಿ ಸನ್ನಿಧಿಯಲ್ಲಿ ಗೊರೂರು ನೆಲೆಗೊಂಡಿದೆ. (ನಾನೀಗ ಹಾಸನದಲ್ಲಿ ನೆಲೆಗೊಂಡಿದ್ದೇನೆ)
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಮ್ಮ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ ಮಹಿಮೆ ಮತ್ತು ಚರಿತ್ರೆ ಕೃತಿಯಲ್ಲಿ ಗೊರೂರಿಗೆ ಐದು ಮೈಲಿ ದೂರದಲ್ಲಿರುವ ಅರಕಲಗೂಡಿನಲ್ಲಿ ಐಗೂರು ಪಾಳೆಯಗಾರನಾದ ಕೃಷ್ಣಪ್ಪ ನಾಯಕನು (ಚರಿತ್ರೆಗನುಸಾರವಾಗಿ ಇವನ ಕಾಲ ೧೫೬೮) ಹೇಮಾವತಿ ನದಿಯಲ್ಲಿ ಸ್ನಾನ ಮಾಡಲು ಇಲ್ಲಿಗೆ ಆಗಮಿಸಿದನೆಂದು, ಇಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇಲ್ಲಿ ಉದ್ಭವಗೊಂಡಿದ್ದ ನರಸಿಂಹಮರ‍್ತಿಯನ್ನು ಪೂಜಿಸುತ್ತಿದ್ದರೆಂದೂ ನಾಯಕನಿಗೆ ಕೂಡಲೇ ತನಗೆ ನೃಸಿಂಹನೇ ದೇವಾಲಯವನ್ನು ನರ‍್ಮಿಸುವಂತೆ ಆಜ್ಞಾಪಿಸುತ್ತಿದ್ದಾನೆ ಎಂದು ಹೊಳೆದ ದೃಶ್ಯವಾಗಿ ತನ್ನ ಇಚ್ಚೆಯನ್ನು ಅಣ್ಣ ತಮ್ಮಂದಿರಿಗೆ ತಿಳಿಸಿ ಅವರಿಂದ ನರಸಿಂಹ ದೀಕ್ಷೆಯನ್ನು ಪಡೆದು ನೃಸಿಂಹಸ್ವಾಮಿಗೆ ಮೊದಲು ರ‍್ಭಗುಡಿಯನ್ನು ಕಟ್ಟಿಸಿದನೆಂದು, ಗೋರ‍್ಣ ಋಷಿಗಳು ತಪಸ್ಸು ಮಾಡಿದ ಸ್ಥಳವಾಗಿ ‘ಗೋರ‍್ಣ ನಗರ’ ವೆಂದು ಕರೆಯುತ್ತಾರೆ. ಅಷ್ಟರಲ್ಲಿ ಒಂದು ಕರೆ ಬಂತು. ಆ ಕಡೆಯಿಂದ ಜಗದೀಶ್ ರಾಮಘಟ್ಟ. ‘ನಾಳೆ ಜಾತ್ರೆ. ಬನ್ನಿ. ‘ ಈ ಸಾರಿ ನಾಟಕ ಉಂಟಾ ಎಂದೆ. ಇಲ್ಲಾ ರ‍್ಕೆಸ್ಟಾç ಎಂದರು.
‘ ಈ ಸಾರಿ ತೇರು ಉಂಟಾ.. ಹೋದ ರ‍್ಷ ಜಾತ್ರೆ ಟೈಂಗೆ ದೇವಸ್ಥಾನದ ಕಾಂಪೌಂಡು ಗೋಡೆ ಎಲ್ಲಾ ಒಡೆದುಹಾಕಿದ್ರಲ್ಲಾ.. ‘ ಅದು ಏನೂ ಆಗಿಲ್ಲ. ಅದರೆ ತೇರಿದೆ.. ಎಂದರು.
ಅಂದಕ್ಕೆ ರ‍್ಕಲಗೂಡು ಚೆಂದಕ್ಕೆ ನರಸೀಪುರ
ಚಿತ್ತರದ ಗೊಂಬೆ ಗೊರವೂರು
ಚಿತ್ತರದ ಗೊಂಬೆ ಗೊರವೂರು ಬೀದಿಯ
ಹದಿನಾರು ತೇರು ಹರಿದಾವೆ
ಗೊರೂರು ಹಳೇ ಗ್ರಾಮದಿಂದ ಹೇಮಾವತಿ ನದಿಗೆ ಹೋಗುವ ದಾರಿಯಲ್ಲಿ ಹೇಮಾವತಿ ನದಿ ದಡದಲ್ಲಿ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ ನೆಲೆಗೊಂಡಿದೆ. ಮುಖ್ಯ ರಸ್ತೆಯಿಂದ ಈ ದೇವಸ್ಥಾನÀವರೆಗೆ ಡಾಂಬರು ರಸ್ತೆ ಇದೆ. ಈ ದೇವಸ್ಥಾನ ವಿಶಾಲವಾಗಿದ್ದು ಛತ್ರದಂತಿರುವುದರಿಂದ ಇಲ್ಲಿ ಮದುವೆ ಮುಂಜಿ ಕರ‍್ಯಗಳು ನಡೆಯುತ್ತಿರುತ್ತವೆ. (ನಮ್ಮ ಅಕ್ಕನವರ ಮದುವೆ ನಡೆದಿದ್ದು ಇಲ್ಲಿಯೇ. ಅದು ೪೬ ರ‍್ಷಗಳ ಹಿಂದೆ) ನದಿಗೆ ಇಳಿಯಲು ಕಲ್ಲಿನ ಸೋಫಾನ ಪಂಕ್ತಿಗಳಿವೆ. ಇಲ್ಲಿ ನದಿ ಸ್ವಲ್ಪ ವಿಶಾಲವಾಗಿ ಹರಿಯುತ್ತದೆ, ಮಟ್ಟೆಕಲ್ಲು, ಆನೆಕಲ್ಲು ಎಂಬ ಎರಡು ಕಲ್ಲು ಬೆಟ್ಟಗಳು ನೀರಿನ ಮಧ್ಯದಲ್ಲಿವೆ. ಈ ಜಾಗ ಒಳ್ಳೆ ಈಜುಗಾರರಿಗೆ ಆನಂದ ನೀಡುತ್ತದೆ. (ಅದು ಈಗಲ್ಲ, ನಮ್ಮ ಬಾಲ್ಯದಲ್ಲಿ ಮತ್ತು ಡಾ. ಗೊರೂರರು ತಮ್ಮ ಪ್ರಬಂಧಗಳಲ್ಲಿ ಬರೆದಂತೆ)
ಈ ಮಟ್ಟೆಕಲ್ಲು ಮಡುವಿನಲ್ಲಿ ಲಕ್ಷಿö್ಮಯು ಯೋಗಾನರಸಿಂಹನು ಯೋಗಮುದ್ರೆಯಲ್ಲಿ ಇದ್ದುದರಿಂದ, ಅವನ ಏಕಾಗ್ರತೆಯನ್ನು ಭಂಗಪಡಿಸಲು ಸಾಧ್ಯವಿಲ್ಲದಿರುವುದರಿಂದ ತಾನು ತಪಸ್ಸಿನಿಯಾಗಿ ನರಸಿಂಹ ಬಹರ‍್ಮುಖನಾಗುವುದು ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ.
ಆಗ ಗೊರೂರಿಗೆ ಐದು ಮೈಲಿ ದೂರದಲ್ಲಿರುವ ರ‍್ಕಲಗೂಡಿನಲ್ಲಿ ಐಗೂರು ಪಾಳೆಯಗಾರನಾದ ಕೃಷ್ಣಪ್ಪನಾಯಕನು ಅಳುತ್ತಿದ್ದನು. ಕೃಷ್ಣಪ್ಪ ನಾಯಕನು ಒಂದು ದಿನ ತನ್ನ ಗಡಿ ವಿಚಾರಣೆ ಮಾಡುತ್ತ ಸತೀ ಸುತರೊಡನೆ ಬಂದು ಹೇಮಾವತಿಯಲ್ಲಿ ಸ್ನಾನ ಮಾಡುತ್ತಿರಲು, ಗಡಿಯ ಉತ್ತರದ ತೀರದ ಕಾಡಿನ ನಡುವಿನಿಂದ ಅವರಿಗೆ ಘಂಟನಾದವು ಕೇಳಿಸಿತು. ಇದೇನೆಂದು ಅವನು ಆ ಸ್ಥಳಕ್ಕೆ ಹೋಗಿ ನೋಡಲು ಸರ‍್ಯಾಗ್ನಿಗಳಂತೆ ಬೆಳಗುತ್ತಿದ್ದ ತೇಜಸ್ವಿನಿಗಳಾದ ಅಣ್ಣ ತಮ್ಮಂದಿರು ವೇದ ಘೋಷವನ್ನು ಮಾಡುತ್ತ ತದೇಕ ಧ್ಯಾನರಾಗಿ ನರಸಿಂಹನನ್ನು ಪೂಜಿಸುತ್ತಿದ್ದರು. ನಾಯಕನಿಗೆ ಕೂಡಲೇ ನೃಸಿಂಹನೇ ದೇವತಾ ಪ್ರತಿಷ್ಠೆ ಮಾಡಿ ದೇವಾಲಯವನ್ನು ನರ‍್ಮಿಸುವಂತೆ ಆಜ್ಞಾಪಿಸುತ್ತಿದ್ದಾನೆ ಎಂದು ಹೊಳೆದ ದೃಶ್ಯವಾಯಿತು. ತಾನು ಆಳುತ್ತಿರುವ ಪಾಳೆಯಪಟ್ಟಿಗಿಂತ ಈ ಕರ‍್ಯ ತನ್ನ ಆತ್ಮಕ್ಕೂ ಶ್ರೇಯಸ್ಸಿಗೂ ಹೆಚ್ಚು ಹಿತಕರವೆಂದು ಅವನಿಗೆ ದೃಢವಾಯಿತು. ತನ್ನ ಬಯಕೆಯನ್ನು ನಾಯಕನು ಅಣ್ಣ ತಮ್ಮಂದಿರಿಗೆ ತಿಳಿಸಲು ಅವರು ಅತ್ಯಂತ ವಾತ್ಸಲ್ಯದಿಂದ ಅವನನ್ನು ಮನ್ನಿಸಿ ಅವನಿಗೆ ನರಸಿಂಹದೀಕ್ಷೆಯನ್ನೂ ಕೊಟ್ಟರು. ನಾಯಕನು ಮೊದಲು ನೃಸಿಂಹಸ್ವಾಮಿಗೆ ರ‍್ಭಗುಡಿಯನ್ನು ಕಟ್ಟಿಸಿದನು. ನರಸಿಂಹಸ್ವಾಮಿ ಉದ್ಭವಗೊಂಡ ಸ್ಥಳದಲ್ಲಿಯೇ ಪೀಠವನ್ನು ನರ‍್ಮಿಸಿ ಸುತ್ತ ಕಲ್ಲುಗೋಡೆಯನ್ನು ಕಟ್ಟಿಸಿದನು. ಗೋರ‍್ಣ ಋಷಿಗಳು ತಪಸ್ಸು ಮಾಡಿದ ಸ್ಥಳವಾದುದರಿಂದ ಈ ಗ್ರಾಮಕ್ಕೆ ನಾಯಕರ ಇಚ್ಛೆಯಂತೆ ಗೋರ‍್ಣನಗರವೆಂದು ನಾಮಕರಣ ಮಾಡಿದನು. ನಾಯಕನು ಕಾಡುಗಳನ್ನೆಲ್ಲ ಕಡಿಸಿ ಊರನ್ನು ನರ‍್ಮಿಸಿ ಬ್ರಾಹ್ಮಣ ರ‍್ತಕ ಶೂದ್ರಾದಿಯಾಗಿ ಸಮಸ್ತ ಜಾತಿಗಳಿಂದಲೂ ತುಂಬಿಸಿ, ದಕ್ಷಿಣ ಚಂದ್ರದ್ರೋಣ ರ‍್ವತದಿಂದ (ಬಾಬಾಬುಡನ್‌ಗಿರಿ) ಹುಟ್ಟಿ ಉತ್ತರದಿಂದ ದಕ್ಷಿಣ ಪ್ರವಹಿಸುತ ಬಂದು ಗೊರೂರಿಗೆ ನೈರುತ್ಯ ಭಾಗದಲ್ಲಿ ಪಶ್ಚಿಮದಿಂದ ಪರ‍್ವಕ್ಕೆ ಹರಿಯುತ್ತಿರುವ ಹೇಮಾವತಿಗೆ ಸಂಗಮವಾಗಿರುವ ಯಗಚಿ (ಬದರಿ) ನದಿಗೆ ಆಣೆಯನ್ನು ಕಟ್ಟಿಸಿದನು. ಪಾಳೆಯಗಾರ ಕೃಷ್ಣಪ್ಪನಾಯಕನು ಶ್ರೀ ಯೋಗಾನರಸಿಂಹಸ್ವಾಮಿ ವಿಗ್ರಹವನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ, ರ‍್ಭಗುಡಿಯನ್ನು ಮತ್ತು ಸುತ್ತ ಕಲ್ಲುಗೋಡೆಯನ್ನು ನರ‍್ಮಿಸಿದ ನಂತರ ಮುಂದೆ ದೊಡ್ಡ ನರಸಯ್ಯ ಮತ್ತು ಅವರ ವಂಶೀಕರು ಅಭಿವೃದ್ಧಿಪಡಿಸಿದರೆಂದು ಹೇಳಲಾಗಿದೆ. ಹೇಮಾವತಿ ಅಣೆಕಟ್ಟು ಪ್ರಾರಂಭವಾಗುವುದಕ್ಕೆ (೧೯೬೪) ಕೆಲವು ವರುಷಗಳ ಮುಂಚೆ ಆಗ ಊರಿಗೆ ಹಿರಿಯರಾಗಿದ್ದ ಶ್ರೀ ಎಂ. ಕೃಷ್ಣಸ್ವಾಮಯ್ಯಂಗಾರ್‌ರವರು ಊರಿನ ಎಲ್ಲ ದೇವಾಲಯಗಳ ಜರ‍್ಣೋದ್ದಾರವನ್ನು ಮಾಡಿದುದಲ್ಲದೆ, ಅನೇಕ ಭಕ್ತಾದಿಗಳ ನೆರವಿನಿಂದ ಕೈಸಾಲೆ ಮೊಗಸಾಲೆ ಮುಂತಾದುವು ಮಾಡಿಸಿದ್ದರು. (ಇದು ಹಳೆಯ ಕಥೆ ಈಗ ಹೊಸದಾಗಿ ಆಗಬೇಕಿದೆ)
ಪರವಾಸುದೇವರ ದೇವಸ್ಥಾನದ ಪಕ್ಕ ಭೂತಾಕಾರದ ದೊಡ್ಡ ತೇರಿದೆ. ಈ ತೇರಿನ ಎತ್ತರಕ್ಕೆ ಹೋಗಿ ಸಮನಾಗಿ ಕಲ್ಲು ಮಂಟಪ ನರ‍್ಮಿಸಿ ಮೇಲೆ ಮೆಟ್ಟಲು ಅಳವಡಿಸಲಾಗಿದೆ. ಈ ರಥೋತ್ಸವದ ದಿನ ಈ ಮಂಟಪ ಮತ್ತು ತೇರಿನ ಮಧ್ಯೆ ಹಲಗೆ ಇಟ್ಟು ತೇರಿನೊಳಗೆ ಪ್ರವೇಶಿಸಲು, ಓಡಾಡಲು ಇದರಿಂದ ಸುಲಭವಾಗಿದೆ. ಈ ತೇರು ನಾಲ್ಕು ಚಕ್ರಗಳನ್ನೊಳಗೊಂಡ ಗಟ್ಟಿಯಾದ ಮರದಿಂದ ತಯಾರಿಸಲ್ಪಟ್ಟ ಸುಂದರವಾದ ಕೆತ್ತನೆ ಕೆಲಸಗಳನ್ನೊಳಗೊಂಡು ಬೃಹದಾಕಾರವಾಗಿದೆ. ರಥೋತ್ಸವಕ್ಕೆ ನಾಲ್ಕೆöÊದು ದಿನ ಮೊದಲೇ ಅಡಿಕೆ ಬೊಂಬಿನಿಂದ ಎತ್ತರವಾಗಿ ಅಂಕಣ ನರ‍್ಮಿಸಿ ತುದಿಗಳಲ್ಲಿ ದಿಂಬುಗಳನ್ನು ನೇತು ಹಾಕಿರುತ್ತಾರೆ. ನಾಲ್ಕು ಅಂಕಣಗಳ ಮೇಲ್ತುದಿಯಲ್ಲಿ ಕಳಸವಿರುತ್ತದೆ. (ಹಿಂದೆ ಎಂಟು ಅಂಕಣಗಳನ್ನು ಏರಿಸುತ್ತಿದ್ದರಂತೆ! ಗಗನಚುಂಬಿ ಎತ್ತರದಲ್ಲಿ ಕಳಸವು ಚುಕ್ಕಿಯಂತೆ ಕಾಣುತ್ತಿತಂತೆ! ಆದರೆ ಈಗ ಆ ರೀತಿ ಕಟ್ಟುವ ಕುಶಲಮತಿಗಳು ಇಲ್ಲದಿರುವುದರಿಂದಲೂ, ಕಿರಿದಾದ ದಾರಿಯಲ್ಲಿ ಭಾರಿ ಜನಸ್ತೋಮದ ನಡುವೆ ಎಳೆಯುವುದು ಅಪಾಯಕಾರಿ ಸಾಹಸವಾದುದರಿಂದಲೂ ಈಗ ನಾಲ್ಕು ಅಂಕಣಕ್ಕೆ ಸೀಮಿತಗೊಳಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಉತ್ಸವಮರ‍್ತಿಯನ್ನು ಶ್ರೀ ಯೋಗಾನೃಸಿಂಹಸ್ವಾಮಿ ದೇವಸ್ಥಾನದಿಂದ ಅಡ್ಡೆಯಲ್ಲಿಟ್ಟು ಮೆರವಣಿಗೆಯಲ್ಲಿ ಹೊತ್ತು ತಂದು ಈ ತೇರಿನಲ್ಲಿಡುತ್ತಾರೆ. ರಥಸಪ್ತಮಿ ವಿಶೇಷತೆಯ ಒಂದು ಬರಹ ಓದಿದೆ. ಸಪ್ತ ಕುದುರೆಗಳ ರಥವೇರಿದ ಸರ‍್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ ಹೊರಡುವ ರ‍್ವಕಾಲವೇ ರಥಸಪ್ತಮಿ. ಹಬ್ಬದ ಕೇಂದ್ರ ಬಿಂದು ಸರ‍್ಯನ ಆರಾಧನೆ. ರಥಸಪ್ತಮಿಯಂದು ಸರ‍್ಯದೇವ ಚಾಂದ್ರಯಾನ ಸಂವತ್ಸರದ ೧೧ನೇ ಮಾಸದ ಮಾಘ ಶುದ್ಧ ಸಪ್ತಮಿ ತಿಥಿ ದಿವಸ ಸಪ್ತಾಶ್ವಗಳಿಂದ ಕೂಡಿದ ರಥವನ್ನೇರುವ ದಿವಸ. ಶ್ರೀಕೃಷ್ಣನು ರ‍್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಒಂದು ಕಥೆ. ಯಶೋರ‍್ಮನೆಂಬ ರಾಜನಿಗೆ ಹುಟ್ಟಿದ ಮಗ ಹುಟ್ಟಿನಿಂದಲೇ ರೋಗಿಷ್ಟ. ಜ್ಯೋತಿಷಿಗಳು ರಥಸಪ್ತಮಿ ವ್ರತ ಆಚರಿಸಲು ಹೇಳಿ ರಾಜನು ಸರ‍್ಯಾರಾಧನೆ ಮಾಡಲಾಗಿ ರಾಜಪುತ್ರ ಆರೋಗ್ಯವಂತನಾದನು. ಅದೇ ಅವಧಿಯಲ್ಲಿ ಪಾಂಡವರು ಶ್ರೀಕೃಷ್ಣನ ಮಹಿಮೆ ಪಡೆದಿದ್ದರು. ರಾವಣನನ್ನು ಗೆಲ್ಲಬೇಕಾದಾಗ ಶ್ರೀರಾಮನು ಕೂಡ ಅಗಸ್ತö್ಯರ ಉಪದೇಶದಂತೆ ಆದಿತ್ಯ ಹೃದಯದ ಮೂಲಕ ಸರ‍್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸರ‍್ಯಾರಾಧನೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ಸರ‍್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮರಳಿ ಪಡೆದನೆಚಿದು ಹೇಳಿದೆ. ಹಿಂದೂ ಪುರಾಣದಲ್ಲಿ ರಥಸಪ್ತಮಿ ಉಲ್ಲೇಖವಿದೆ. ಸಮಸ್ತ ಋಷಿಮುನಿಗಳು ರಥಸಪ್ತಮಿಯಂದು ಸರ‍್ಯನನ್ನು ಪೂಜಿಸ್ಮತ್ತಾರಂತೆ..!  ರೀ,ಊಟಕ್ಕೆ ಬನ್ರಿ ಎಂದಳು ಮಡದಿ. ನಾಳೆ ರೆಡಿಯಾಗು ನಮ್ಮೂರಿಗೆ ಹೋಗಿ ಬರೋಣ ಎಂದೆ. ಊರು ಬಿಟ್ಟು ಬಂದರೂ ಹುಟ್ಟೂರು ಮರೆಯುವುದಿಲ್ಲ ನೀವು ಎಂದು ಹೊಟ್ಟೆ ತುಂಬಾ ಊಟಕ್ಕಿಟ್ಟು ಗಾಳಿ ಬೀಸಿದಳು.
ತೇರು ಹರಿದಾವೋ ತಾನಕ್ಕೆ ನಿಂತಾವೊ
ತಾರೋ ಚನ್ನಯ್ಯ ಜವನವ
ತಾರೋ ಚನ್ನಯ್ಯ ಜವನವ ಬಾಳೆಹಣ್ಣ
/>ಬೇಡಿಕೊಳ್ಳೆ ಮಗಳೆ ಸೆರಗೊಡ್ಡಿ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವರ‍್ಡ್,೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಡಾ. ಎಚ್.ಬಿ.ಯಶೋಧರಾ ಜನಪದ ಕ್ಷೇತ್ರಕ್ಕೆ ನೀಡಿದ ಎರಡು ಮಹತ್ವದ ಕೊಡುಗೆಗಳು

ಹಾಸನದ ಡಾ. ಎಚ್.ಬಿ.ಯಶೋಧರಾ ಅವರು ಜಾನಪದ ಕ್ಷೇತ್ರಕ್ಕೆ ನೀಡಿದ ಎರಡು ಮಹತ್ಕಾರ್ಯಗಳಲ್ಲಿ ಒಂದು ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಸಂಶೋಧನೆ ಮತ್ತೊಂದು ಯಕ್ಷಗಾನ ಕರಿಭಂಟನ ಕಥೆ ಸಂಪಾದನೆ. ಎರಡೂ ಜನಪದ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳಾಗಿವೆ ಎಂದು ಜನಪದ ಸಾಹಿತಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಚಂದ್ರುಕಾಳೇನಹಳ್ಳಿ ತಿಳಿಸಿದರು.

ಹಾಸನದ ಮನೆ ಮನೆ ಕವಿಗೋಷ್ಠಿಯಿಂದ ಡಾ|| ಸಿ.ಎನ್. ಜಗದೀಶ್‌ರವರ ಪ್ರಾಯೋಜನೆಯಲ್ಲಿ ಅವರ ನಿವಾಸದಲ್ಲಿ ನಡೆದ ೩೨೬ನೇ ಕಾರ್ಯಕ್ರಮದಲ್ಲಿ ಡಾ. ಎಚ್.ಬಿ.ಯಶೋಧರಾ ಅವರ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಕೃತಿ ಕುರಿತಂತೆ ಮಾತನಾಡಿ ಕೃತಿಯು ೧೧ ಅಧ್ಯಾಯಗಳಲ್ಲಿ ಡಾ. ಜೀ.ಶಂ.ಪ. ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಮಹಾಪ್ರಬಂಧ. ಯಕ್ಷಗಾನ ಸಾಹಿತ್ಯ ಸ್ವರೂಪವನ್ನು ಹಂತ ಹಂತವಾಗಿ ವಿಶ್ಲೇಸಿಸಿದ್ದಾರೆ. ಯಕ್ಷಗಾನ ಕಾವ್ಯವೂ ಹೌದು ನಾಟಕವೂ ಹೌದು. ಯಕ್ಷಗಾನ ಕಾವ್ಯ ಕಾಲಕ್ರಮೇಣ ದೃಶ್ಯಾಂಶವನ್ನೇ ಮುಂದಾಗಿಸಿ ನಾಟಕ ಸ್ವರೂಪ ಪಡೆದುಕೊಂಡಿದನ್ನು ನಿರೂಪಿಸುವಲ್ಲಿ ಸಾಕಷ್ಟು ಆಧಾರಗಳನ್ನು ಕಲೆಹಾಕಿದ್ದಾರೆ. ಶ್ರೀಕೃಷ್ಣ ಪಾರಿಜಾತ, ತಾಳಮದ್ದಲೆ, ಗೊಂಬೆಯಾಟಗಳ ಸಾಹಿತ್ಯ ಸ್ವರೂಪವನ್ನು ಗುರುತಿಸಿದ್ದಾರೆ ಎಂದು ಕೃತಿಯನ್ನು ತಮ್ಮ ಅನುಭವ ಹಿನ್ನಲೆಯಲ್ಲಿ ಪರಿಚಯಿಸಿದರು.
ತೊಗಲುಗೊಂಬೆ ಕಲಾವಿದರು ಹೂವಿನಹಳ್ಳಿ ಕಾವಲು ಗುಂಡುರಾಜ್ ತಾವು ಅಮೇರಿಕಾ ಒಳಗೊಂಡು ಹೊರದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶನ ಮತ್ತು ತರಭೇತಿ ನೀಡುತ್ತಾ ನಮ್ಮ ಸಂಸ್ಸೃತಿಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಕುರಿತು ಹೆಮ್ಮೆಯಿಂದ ವರ್ಣಿಸಿದರು.

ಡಾ. ಸಿ.ಎನ್. ಜಗದೀಶ್ ಮಾತನಾಡಿ ತಮ್ಮ ಧರ್ಮಪತ್ನಿ ಇಪ್ಪತ್ತು ವರ್ಷಗಳ ಹಿಂದೆ ತುಂಬಾ ಶ್ರದ್ಧೆಯಿಂದ ಈ ಜಾನಪದ ಕ್ಷೇತ್ರಕಾರ್ಯ ಮಾಡಿದ್ದು, ಸಂಗ್ರಹದ ದಾಖಲೆಗಳನ್ನು ಪ್ರದರ್ಶಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಎನ್.ಎಲ್.ಚನ್ನೇಗೌಡ, ಸರೋಜ ಟಿ.ಎಂ., ಪದ್ಮಾವತಿ ವೆಂಕಟೇಶ್, ಸಾವಿತ್ರಿ ಬಿ.ಗೌಡ, ಜಿ.ಆರ್. ಶ್ರೀಕಾಂತ್, ಗೊರೂರು ಅನಂತರಾಜು, ದಿಬ್ಬೂರು ರಮೇಶ್, ವನಜಾ ಸುರೇಶ್ ಸ್ವರಚಿತ ಕವಿತೆ ವಾಚಿಸಿದರು. ಎ.ನಂಜಪ್ಪ, ಮಂಜುಳ ಉಮೇಶ್, ರಾಣಿ ಚರಾಶ್ರಿ ರಂಗಗೀತೆಗಳನ್ನು ಹಾಡಿದರು. ರಮೇಶ್ ರೈತಸಂಘ, ಬಾಲಕೃಷ್ಣ ಹೆಚ್.ವಿ. ಜಾನಪದ ಗೀತೆ ಹಾಡಿದರು. ಗುಂಡುರಾಜ್ ಪ್ರಾರ್ಥಿಸಿದರು. ವಿದ್ಯಾನಗರ ಕುವೆಂಪು ಯುವಕರ ಸಂಘ ಸತೀಶ್ ಜಿ.ಎಸ್. ಪರಮೇಶ್, ಲೋಕೇಶ್ ಆರ್. ಮೊದಲಾದವರು ಇದ್ದರು. Dr. Chandru Kalenhalli and other dignitaries were honored after delivering a lecture.
ಉಪನ್ಯಾಸ ನೀಡಿದ ಡಾ.ಚಂದ್ರು ಕಾಳೇನಹಳ್ಳಿಯವರನ್ನು ಸನ್ಮಾನಿಸಲಾಯಿತು.

ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ

My apologies, but I’m unable to assist. ಮೂಲ ಕತೆ: ಮಧುನಾಯ್ಕ ಲಂಬಾಣಿ,

 

ಹೂವಿನಹಡಗಲಿ ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.

ದೃಶ್ಯ; ೧ (ಊರ ದೇವರ Title: The Transformation of Madhunayaka Lampani: A Tale of the Burning Mulberry Tree Scene 1: The Village Temple. The priest is constructing the temple. ##### (Note: Please note that the provided text is in Kannada language. Therefore, the English translation is an interpretation of the given information.) ಗುಡಿ. ಪೂಜಾರಿ ಕಸ ಗುಡಿಸುತ್ತಿರುವನು)
ಹಿನ್ನಲೆ ಧ್ವನಿ: ಕೈಯಾಗ ಕಸಬರಗಿ ಹಿಡಕೊಂಡು ಗುಡಿಮುಂದ್ಲ ಕಸ ದೂರಸರಿಸುತ್ತಿದ್ದಾನಲ್ಲ ಈ ಪೂಜಾರಿ ಈತನ್ನೊಳಗಿನ ಕಸ ಮಾತ್ರ ರಾಶಿರಾಶಿ ಬಿದ್ದು ಕೊಳಿತಿತ್ತು. ಗುಡಿ ಮುಂದಿರುವ ಕಸ ಒಂದಿನದ್ದು ಆದ್ರೆ ಇವನ ಮನಸ್ಸಿನಲ್ಲಿರುವುದು ಎಷ್ಟೋ ವರ್ಷಗಳ ಕಸ. ಗುಡಿ ಮುಂದಿರುವ ಕಸವನ್ನು ದೂರವಾದ್ರು ಸರಿಸಬಹುದು ಇವನ ಅಂತರಂಗದಲ್ಲಿರುವ ಕಸ ಮಾತ್ರ ಗಬ್ಬುನಾಥ. (ತಂಬಿಗೆಯಲ್ಲಿನ ನೀರನ್ನು ಅಂಗಳಕ್ಕೆ ಚಿಮುಕಿಸುತ್ತಿದ್ದಿ. ಅವನ ಮುಖ ಭಾವದಲ್ಲಿ ಬದಲಾವಣೆಯಾಗುತ್ತಿತ್ತು)
ಪೂಜಾರಿ: ಸುಡುಗಾಡುರ‍್ನಾಗ ಪೂಜಾರಿಕೆ ಮಾಡಿದ ನಾನು ಸಣ್ಣಾಗಿ ಬಿಟ್ಟೆ. ನಾವು ನಮ್ಮಜ್ಜ ಮುತ್ತಜ್ಜರ ಕಾಲದಿಂದ ಈ ದೇವ್ರನ್ನ ಸಾಕಿ ಸಲುಹಿದ್ವಿ. ಹೆತ್ತವರ ಸೇವೆ ಮಾಡಲಿಲ್ಲದ್ಹಾಂಗ ಈ ದೇವ್ರು ಪೂಜೆ ಮಾಡಿದ್ವಿ. ನಮಗೆ ಸಿಕ್ಕಿದ್ದೇನು. ಯಾವುದಾದರೂ ದೊಡ್ಡ ದೇವಸ್ಥಾನದಾಗ ನಾ ಪೂಜಾರಿ ಆಗಿದ್ರ ದಿನಾ ರೂಪಾಯಿ ನೋಡ್ತಿದ್ದೆ. ಇಲ್ಲೇನೈತಿ ಮಣ್ಣು. ಖರೇವಂದ್ರ ದೇವ್ರಾಗಿದ್ರ ನಮ್ಮ ಸೇವೆ ಅವಕ್ಕ ಗೊತ್ತಾಗ್ತಿದ್ದಿಲ್ಲೇನು. ನಾನು ಪೂಜಾರಿ ಅಂತ ಈ ಮಂದಿ ಎಳ್ಳಷ್ಟು ಗೌರವ ಕೊಡಂಗಿಲ್ಲ. ಮೇಲತ್ತಾಗಿ ಗೇಲಿ ಮಾಡ್ತಾರ. ವರ್ಷದಾಗೊಮ್ಮೆ ಮಾತ್ರ ಜಾತ್ರಿ ಅಂತ ಮಾಡ್ತಿದ್ರು. ಈಗ ಅದೂ ಇಲ್ಲ. ಒಂದಿನ ಕಸ ಅನ್ನಲಿಲ್ಲಾಂದ್ರ ಸಣ್ಣವ್ರು ದೊಡ್ಡಾವ್ರು ಬೈಯ್ತಾರ. ದೊಡ್ಡ ದೇವರು, ದೊಡ್ಡ ದೇವಸ್ಥಾನ, ದೊಡ್ಡೂರು, ಶ್ರೀಮಂತ ಮಂದಿ ಇದ್ರ ಆ ಕಥೀನ ಬೇರೆ. ನನ್ನ ಕೈ ಹಿಡಿಯರ‍್ಯಾರು. ಈಗಾದ್ರು ಏನು ಆಗಿಲ್ಲ. ಇದ ಊರಾಗ ಏನೆಲ್ಲಾ ಮಾಡ್ಬಹುದು. ಈ ಮಂದಿ ಸರಿಯಿಲ್ಲ. ದೇವ್ರು ಮೇಲೆ ಭಕ್ತಿ ಇಲ್ಲ. ಭಕ್ತಿ ಇದ್ದೊರ‍್ನು ಕೆಡಿಸಿಬಿಡ್ತಾರ. ಸುಡುಗಾಡಿನ್ಯಾಗ ದೆವ್ವಗಳು ಮಾತಾಡ್ತಾವಂತ, ನಗತಾವಂತ, ಹಾಡತಾವಂತ, ಕುಣಿತಾವಂತ, ಒಟ್ಟಿಗೆ ಸೇರಿ ತಿರುಗಾಡತಾವಂತ. ಇವಕ್ಕೇನಾಗೈತಿ ಒಂದೂ ಸರಿಯಿಲ್ಲ. ಒಬ್ನ ಮಾರಿ ಒಬ್ರು ನೋಡಂಗಿಲ್ಲ. ನೋಡಿದ್ರು ನುಡಿಯಂಗಿಲ್ಲ. ನುಡಿದ್ರು ನಡೆಯಂಗಿಲ್ಲ. ನಡದ್ರೂ ಏನೂ ಆಗಂಗಿಲ್ಲ. ಇಂಥ ಊರಾಗ ಇರಾಕ ಮನಸ್ಸಿಲ್ಲ. ಸತ್ತೋರಲ್ಲ ಸುಡುಗಾಡಿನ್ಯಾಗ ಚೆಂದ ಆದಾರ. ಶಾಂತವಾಗಿ ಅದಾರ. ಅವ್ರ ಮನಸ್ಸುಗಳು ಸ್ವಚ್ಛ ಅದಾವು. ಅವರೆಲ್ಲಾ ಅರಾಮಾಗಿಬಿಟ್ರು. ಯಾವ ಜಂಜಾಟ ಇಲ್ಲ. ಸಿಟ್ಟಿಲ್ಲ. ಸೆಡುವಿಲ್ಲ, ಆಸಿಲ್ಲ, ಏನಾರ ಅನ್ನು ಸುಡುಗಾಡ ವಾಸಿ.
ಹಿನ್ನಲೆ ಧ್ವನಿ: ಪೂಜಾರಿ ಗರ್ಭಗುಡಿಯನ್ನು ತೊಳೆದು ನೀರನ್ನು ತಂದು ಹೊರಗೆ ಚೆಲ್ಲಿದ. ತಾನು ಸ್ನಾನ ಮಾಡಿದ್ನೋ ಇಲ್ಲೋ ಗೊತ್ತಿಲ್ಲ. ಆ ದೇವ್ರಿಗಂತು ನೀರಾಕಿ ತೊಳೆದು ನಂತರ ಹಾಲಿನಿಂದ, ತುಪ್ಪದಿಂದ, ಹಣ್ಣಿನಿಂದ, ತೊಳೆದು ಸ್ನಾನ ಮಾಡಿಸಿದ. ಕೊರಳಿಗೆ ಹೂವಿನಹಾರ ಹಾಕಿ ಅಲಂಕಾರ ಮಾಡಿದ.
ಪೂಜಾರಿ: ಈ ದೇವರಿಗೇಕೆ ಸ್ನಾನ ಮಾಡಿಸಬೇಕು, ಪೂಜೆ ಮಾಡಬೇಕು, ಭಜನೆ ಮಾಡಬೇಕು. ಏನೆಲ್ಲ ಮಾಡಬೇಕು. ಆದರೆ ಏತಕ್ಕೆಂದರೆ ನಮ್ಮ ನೆಮ್ಮದಿಗಾಗಿ, ಧರ್ಮಕ್ಕಾಗಿ ಎನ್ನುತ್ತಾರೆ ಹಿರಿಯರು. ಆದರೂ ಈ ದೇವರೇನಾದ್ರು ನನಗೊಂದಿಷ್ಟು ದರ್ಶನ ಕೊಟ್ಟು ಪವಾಡ ಮಾಡೋದನ್ನೇನಾದ್ರು ಹೇಳಿಕೊಟ್ರೆ ಸಾಕು, ನಮ್ಮನೆತನ ಇಷ್ಟು ವರ್ಷ ಸಲ್ಲಿಸಿದ ಸೇವೆ ಸಾರ್ಥಕವಾಗಿ ಬಿಡುತ್ತೆ. ಮನಿಯೊಳಗಿನ ವಸ್ತುಗಳೆಲ್ಲವನ್ನು ಮಾಯ ಮಾಡುವುದು, ಅದು ಇಲ್ಲೆ ಇದೆ ಅಂತ ಹೇಳಿ ನಾನು ಪವಾಡ ಪುರುಶನಾಗುವುದು.. ನನ್ನ ಮೂಲಕನಾದ್ರು ದೇವ್ರು ಇದ್ದಾನೆ ಅನ್ನೋದನ್ನ ಸಾಬೀತುಪಡಿಸಬಹುದಲ್ಲ ಏನೇ ಕೆಲಸ ಮಾಡಿದ್ರು ಅದರಾಗ ಸ್ವಾರ್ಥ ಇರತೈತಿ. ಹಂಗಾದ್ರೆ ನಾ ಮಾಡಿದ್ದೇನು.. ಅದರಿಂದ ಪಡೆದಿದ್ದೇನು.. ಸ್ವಾರ್ಥವಿಲ್ಲದ ಸೇವೆ ಮಾಡಿದ್ರ ಈಗಿನ ಕಾಲ್ದಾಗ ಮಣ್ಣು ತಿನ್ನಬೇಕಾಗತೈತಿ.
ಹಿನ್ನಲೆ ಧ್ವನಿ: ಎಡಗೈಯಾಗ ಗಂಟಿ ಹಿಡದಾನ. ಬಲಗೈಯಾಗ ಆರತಿ ಹಿಡದಾನ. ಮಂತ್ರ ಹೇಳ್ತಾನ ಯಾವ ಮಂತ್ರ, ಯಾರ ಮಂತ್ರ ಅನ್ನೋದೇನು ಅವನರಿವಿಗೆ ಬರುತ್ತಿಲ್ಲ. ಸುಮ್ನ ದೇವ್ರಿಗೆ ಗುಡಿ ಬಾಗಿಲಿಗೆ ಬೆಳಗತಾನ.
ಪೂಜಾರಿ: ಇದರಂಗ ಬೇರೆ ಊರಾಗೇನಾದ್ರು ಆರತಿ ತಟ್ಟಿ ಹಿಡದ್ರ ಐವತ್ತು, ನೂರು ರೂಪಾಯಿ ಸಿಗುತ್ತಿದ್ದು. ಇಲ್ಲಿ ಖಾಲಿ ತಟ್ಟೆ. ಖಾಲಿ ಗಂಟೆ. ಖಾಲಿ ದೇವ್ರು. ಖಾಲಿ ಪೂಜೆ, ಖಾಲಿ ಖರ್ಚು ಹಿಂಗಾದ್ರೆ ನಮ್ಮ ಹೊಟ್ಟಿ ಖಾಲಿ ಆಗತೈತಿ. ಸ್ವಲ್ಪ ದಿನ ನೋಡಿ ಈ ಚಾಕ್ರಿ ಬಿಡಬೇಕು.
ಕತ್ತಲು
ಕತೆಗಾರ: ಪೂಜಾರಿ ಹಚ್ಚಿದ ಊದನಕಡ್ಡಿ ಬಿಟ್ರೆ ಆ ಗುಡಿಗೆ ಯಾರೂ ಕೂಡ ಊದನಕಡ್ಡಿ ಹಚ್ಚುವುದಿಲ್ಲ. ಯಾರೂ ಕೂಡ ಈ ದೇವ್ರಿಗೆ ಕೈ ಮುಗಿಯುವುದಿಲ್ಲ. ಈ ಗುಡಿಯ ಹತ್ರನೂ ಸುಳಿಯುವುದಿಲ್ಲ. ಈ ಗುಡಿಗೆ ಸುಣ್ಣ ಬಣ್ಣ ಹಚ್ಚಿ ಹತ್ತು ವರ್ಷಾತು. ತಗಲುವ ಖರ್ಚು ವೆಚ್ಚದ ಲೆಕ್ಕ ಮಾಡೋರಿಲ್ಲ. ಅದನ್ನ ಕೊಡೋರಿಲ್ಲ. ಇನ್ನೇನು ಗುಡಿ ಬೀಳಾಗತೈತಂತ ತಲತಲಾಂತರದಿಂದ ಪೂಜರ‍್ಕಿ ಮಾಡ್ಕೊಂದು ಬಂದಿರೋದಕ್ಕ ಈ ಪೂಜಾರಿಗೆ ಬಿಡುಗಡೆ ಇಲ್ಲಾಂತ ಕಸ ಅನ್ನಾಕ ರ‍್ತಾನ ಆತನೂ ಮನಸ್ಸಿನ ತುಂಬಾ ಕಸ ತುಂಬಿಕ್ಕೊಂಡರ‍್ತಾನ. ಇಲ್ಲಿ ಯಾರೂ ಕೂಡ ಮನುಷ್ಯರಾಗಿ ಉಳಿದಿಲ್ಲ. ಎಲ್ಲರೂ ಸುಡುಗಾಡಿನ್ಯಾಗಿರೋ ದೇವ್ರುಗಳಾಗಿ ಬಿಟ್ಟಾರ.
ದೃಶ್ಯ-೨
ಊರಗೌಡ: ನನ್ನ ಹೊಲದ ಕಡೆ ಯಾರೂ ಹೆಜ್ಜೆ ಹಾಕಬರ‍್ದು. ಹಂಗೇನಾದ್ರು ಮಾಡಿದ್ರ ಈ ಸಾರಿ ಕಡ್ದು ಹಾಕಿ ಜೇಲಿಗೆ ಹೋಗ್ತಿನಿ. ನನ್ನ ಮೇಲೆ ಪೊಲೀಸ್ರಿಗೆ ಜಾಡಿ ಹೇಳಿದವ್ರು ಯಾರಂತ ಇವತ್ತಲ್ಲ ನಾಳೆ ನನಗ ಖಂಡಿತ ತಿಳಿತೈತಿ ಆವಾಗ ಮಾಡ್ತೀನಿ. ಜೈಲಂದ್ರ ನನಗೇನು ಭಯ ಇಲ್ಲ. ನನ್ನ ಹೊಲ ನನ್ನ ಮಾತು
(ಪೂ ಜಾರಿ ಪೂಜೆ ಮುಗಿಸಿಕೊಂಡು ಬರುತ್ತಾನೆ) ಲೇ ಪೂಜಾರಿ ಬಾ ಇಲ್ಲಿ.

Read More ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ

ವಸಂತ ಪಂಚಮಿ ಪ್ರಯುಕ್ತ ಶಾರದಾ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು.

ಗಂಗಾವತಿ. ವಸಂತ ಪಂಚಮಿ ಪ್ರಯುಕ್ತ ಸೋಮವಾರದಂದು ಶೃಂಗೇರಿಯ ಶಾರದಾ ಪೀಠದ ಗಂಗಾವತಿ ಶಂಕರ ಮಠದ ಶಾರದಾ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ನೇತೃತ್ವದಲ್ಲಿ ಜರುಗಿದವು.
ಶ್ರೀ ಶಾರದಾ ಮಾತೆ ಸೇರಿದಂತೆ ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ ಪಾರಾಯಣ ಇವುಗಳ ಜೊತೆಗೆ 14 ಅಧಿಕ ಚಿಕ್ಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅಕ್ಷರ ಅಭ್ಯಾಸವನ್ನು ನೆರವೇರಿಸಲಾಯಿತು.
ಜೊತೆಗೆ ವಿವಿಧ ಶಾಲಾ ಕಾಲೇಜುಗಳ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಂಕಲ್ಪವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕುಮಾರ್ ಮಾತನಾಡಿ, ಮಾಘ ಮಾಸದ ಸೋಮವಾರ ದಿನವಾದ ಇಂದು ರೇವತಿ ನಕ್ಷತ್ರದ ಈ ಶುಭದಿನ ಮಕ್ಕಳ ಶೈಕ್ಷಣಿಕ ವ್ಯಾಸಂಗಕ್ಕಾಗಿ ಶ್ರೀ ಶಾರದಾ ಮಾತೆಯನ್ನು ಪೂಜಿಸುವ ಮಹತ್ವ ದಿನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಕಲ್ಪ, ಅಕ್ಷರ ಅಭ್ಯಾಸ ವಿದ್ಯಾರ್ಥಿಗಳಿಗೆ ನೆರವೇರಿಸಲಾಯಿತು. ಪಾಲಕರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಬ್ಯಾಂಕ್‌ನಲ್ಲಿ ಕೆಲಸ ಪಡೆಯಲು ಉತ್ತಮ ಅವಕಾಶವಿದು; ಈ ಕೂಡಲೇ ಅರ್ಜಿ ಸಲ್ಲಿಸಿ

ಕೆನರಾ ಬ್ಯಾಂಕ್ ಕ್ರೆಡಿಟ್ ಆಫೀಸರ್ (ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್ I) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20 ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್​​ಗೆ ಭೇಟಿ ನೀಡಿ ಹಾಗೂ ಅರ್ಜಿ ಸಲ್ಲಿಸಿ.
ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಯುವಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ಕೆನರಾ ಬ್ಯಾಂಕ್ ಕ್ರೆಡಿಟ್ ಆಫೀಸರ್ (ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್ I) ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಜನವರಿ 30 ರಂದು ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಕನಿಷ್ಟ ಶೇ. 60 ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಸಂಸ್ಥೆಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು, ಆದರೆ SC/ST/OBC/PWBD ವರ್ಗದ ಅಭ್ಯರ್ಥಿಗಳಿಗೆ ಶೇ. 5ರಷ್ಟು ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಸಲ್ಲಿಸಲು, ಅಭ್ಯರ್ಥಿಯ ವಯಸ್ಸು ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು. ಎಲ್ಲಾ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ., ಆದರೆ SC/ST/PWBD ವರ್ಗದ ಅಭ್ಯರ್ಥಿಗಳಿಗೆ ಶುಲ್ಕವನ್ನು 150 ರೂ.ಗಳಲ್ಲಿ ಇರಿಸಲಾಗಿದೆ. ಶುಲ್ಕವನ್ನು ಆನ್‌ಲೈನ್ ಮೋಡ್ ಮೂಲಕ ಮಾತ್ರ ಠೇವಣಿ ಮಾಡಬಹುದು.

ಒಬ್ಬರ ಮನ ನೋಯಿಸದೆ ಸುದೀರ್ಘ ಸೇವೆ ಸಲ್ಲಿಸಿದ ಭೀಮಣ್ಣ ಅಜಾತ ಶತ್ರು: ರಾಘವೇಂದ್ರ ನಾಯರಿ

ಗಂಗಾವತಿ: ಅರವತ್ತು ವರ್ಷದ ಬದುಕಿನಲ್ಲಿ ನಲವತ್ತೆರಡು ವರ್ಷಗಳನ್ನು ಕೆನರಾ ಬ್ಯಾಂಕ್ ಸೇವೆಯಲ್ಲಿಯೇ ಕಳೆದುದು ವಿಶೇಷವಲ್ಲ. ಇಡೀ ತನ್ನ ಸೇವಾ ಅವಧಿಯಲ್ಲಿ ಸಹೋದ್ಯೋಗಿ ಹಾಗೂ ಗ್ರಾಹಕರಿಗೆ ಮನ ನೋಯುವಂತಹ ಒಂದೇ ಒಂದು ಮಾತನ್ನಾಡದ ಭೀಮಣ್ಣನವರದು ವಿಸ್ಮಯ ವ್ಯಕ್ತಿತ್ವವೆಂದು ಅಖಿಲ ಭಾರತ ಕೆನರಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯರಿ ಅವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕೆನರಾಬ್ಯಾಂಕ್‌ನಲ್ಲಿ ಸೇವಾ ನಿವೃತ್ತಿಹೊಂದಿದ ಭೀಮಣ್ಣನವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಭೀಮಣ್ಣನವರು ನನಗೆ ಸಹೋದ್ಯೋಗಿಯ ಜೊತೆಗೆ ನನಗೆ ಅಣ್ಣನ ಸ್ಥಾನದಲ್ಲಿದ್ದರು ಎಂದು ೩೩ ವರ್ಷಗಳ ಹಿಂದಿನ ಬಾಂಧವ್ಯವನ್ನು ನೆನಪು ಮಾಡಿಕೊಂಡರು. ನಿವೃತ್ತಿಯ ನಂತರವೂ ಗಂಗಾವತಿ ಶಾಖೆಯಲ್ಲಿ ನೆನಪು ಮಾಡಿಕೊಳ್ಳುವ ವ್ಯಕ್ತಿತ್ವ ಭೀಮಣ್ಣನವರದು ಎಂದು ತಮ್ಮ ಹಲವಾರು ಪ್ರಸಂಗಗಳನ್ನು ಹಂಚಿಕೊಂಡರು.
ನಿವೃತ್ತ ನೌಕರರಾದ ರಾಘವೇಂದ್ರರಾವ್ ಅಳವಂಡಿಕರ್, ಕೆ. ಬಸವರಾಜ, ಮಹಾದೇವಪ್ಪ ಐಲಿ, ವೈ.ಎಸ್ ಕಲ್ಲೂರು, ಹೆಚ್. ರೇಣುಕಪ್ಪ ತಮ್ಮ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು.
ಭೌತಿಕವಾಗಿ ಭೀಮಣ್ಣನವರನ್ನು ಮುಟ್ಟಬಹುದೇ ಹೊರತು ಅವರ ವ್ಯಕ್ತಿತ್ವವನ್ನು ನಾವು ಮುಟ್ಟಲಾರೆವು ಎಂದು ಜುಲೈನಗರ ಶಾಖೆಯ ಬಿ.ಕೆ ವಾಸುದೇವರಾವ್ ಹೇಳಿದರೆ, ಕಾರಟಗಿ ಶಾಖೆಯ ಚಿದಂಬರ ಮುಜುಂದಾರ ಅವರು ಭೀಮಣ್ಣನವರ ಸೇವಾ ಅವಧಿಯ ಕೆಲ ಪ್ರಸಂಗಗಳನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಭೀಮಣ್ಣನವರ ಕುಟುಂಬವರ್ಗವು ಪಾಲ್ಗೊಂಡಿದ್ದು, ಮಕ್ಕಳಾದ ಪ್ರೇಮಲಕ್ಷ್ಮಿ, ಪ್ರಮೋದ ಹಾಗೂ ಪ್ರವೀಣ್ ರವರು ಮಾತನಾಡಿ, ಭೀಮಣ್ಣನವರ ಮಕ್ಕಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ ಎಂದರು. ಭೀಮಣ್ಣನವರ ಶ್ರೀಮತಿಯಾದ ರೇಣುಕಾ ಅವರು ಆನಂದಬಾಷ್ಪಗಳೊಂದಿಗೆ ಮೌನವಾಗಿಯೇ ಕಾರ್ಯಕ್ರಮವನ್ನು ಆಸ್ವಾದಿಸಿದರು.
ನೌಕರರಾದ ಶಿವಕುಮಾರ, ಬಸವರಾಜ, ಸುದರ್ಶನ, ರಾಜಶೇಖರ್ ಭೀಮಣ್ಣನವರ ತಮ್ಮ ಸಂಬಂಧವನ್ನು ಮೆಲುಕು ಹಾಕಿದರು.
ಶಾಖಾ ವ್ಯವಸ್ಥಾಪಕರಾದ ಸುಧೀಂದ್ರ ಜೋಶಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬ್ಯಾಂಕ್‌ನ ಠೇವಣಿ ಹಾಗೂ ವಸೂಲಾತಿಯಲ್ಲಿ ಭೀಮಣ್ಣನವರ ಸೇವೆ ಮರೆಯಲಾರದಂತಹುದು ಎಂದು ತಿಳಿಸಿದರು.
ಅನಿವಾರ್ಯ ಕಾರಣಗಳಿಂದ ಮುಖ್ಯ ವ್ಯವಸ್ಥಾಪಕ ಆರ್. ಗಿರಿಧರನ್ ಅವರ ಅನುಪಸ್ಥಿತಿಯನ್ನು ಜ್ಞಾಪಿಸಿಕೊಂಡ ನೌಕರರು, ಅವರು ಸಮಾರಂಭದಲ್ಲಿದ್ದಿದ್ದರೆ ಇನ್ನೂ ಹೆಚ್ಚಿನ ಮೆರುಗು ಬರುತ್ತಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀಮಣ್ಣನವರು, ನಾನು ಬೇರೆ, ಬ್ಯಾಂಕ್ ಬೇರೆ ಎಂದು ತಿಳಿದುಕೊಳ್ಳದಿರುವುದೇ ಇಂದಿನ ತಮ್ಮ ಪ್ರೀತಿ, ವಿಶ್ವಾಸಕ್ಕೆ ಕಾರಣ ಎಂದು ತಾವು ಕಷ್ಟಪಟ್ಟ ಹಿಂದಿನ ಘಟನೆಗಳನ್ನು ಜ್ಞಾಪಿಸಿಕೊಂಡು ಕೆನರಾ ಬ್ಯಾಂಕ್ ನೌಕರಿಗೆ ಬರಲು ತಮ್ಮ ಧಣಿ ಬೃಂದಾವನ ಹೋಟಲ್‌ನ ದಿ|| ಸತ್ಯನಾರಾಯಣರವರೇ ಕಾರಣ ಎಂದು ಹೃದಯತುಂಬಿ ಹೇಳಿದರು.
ಶಾಖೆಯ ಕ್ಯಾಷಿಯರ್ ಹನುಮಂತಪ್ಪ ಇವರು ಅಚ್ಚುಕಟ್ಟಾಗಿ ಸಭಾ ನಿರ್ವಹಣೆಗೈದರು.

ತಿಪ್ಪೇಸ್ವಾಮಿ ಹೆಚ್. ಅವರ ಸಂಶೋದನೆಗೆ ಬಳ್ಳಾರಿ ವಿ.ವಿ ಡಾಕ್ಟರೇಟ್

ಗಂಗಾವತಿ: ನಗರದ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ತಿಪ್ಪೇಸ್ವಾಮಿ ಹೆಚ್. ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ “ಎ ಸ್ಟಡಿ ಆನ್ ಪರ್ಫಾಮೆನ್ಸ್ ಆಫ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಂಡ್ ಇಟ್ಸ್ ಅಸೊಸಿಯೇಟ್ ಬ್ಯಾಂಕ್ಸ್ ಬಿಫೋರ್ ಆಂಡ್ ಆಫ್ಟರ್ ದಿ ಮರ್ಜರ್” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿಗೆ ಭಾಜನರಾಗಿರುತ್ತಾರೆ.
ಇವರ ಈ ಮಹಾಪ್ರಬಂಧಕ್ಕೆ ಬಳ್ಳಾರಿ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಭೀಮನಗೌಡ ರವರು ಮಾರ್ಗದರ್ಶನ ನೀಡಿದ್ದಾರೆ.
ಈ ಕುರಿತು ತಿಪ್ಪೇಸ್ವಾಮಿ ಹೆಚ್. ಮಾತನಾಡಿ ನಾನು ಮೂಲತಃ ಕಂಪ್ಲಿ ತಾಲೂಕಿನ ನಂ: ೧೫ ಗೋನಾಳ ಗ್ರಾಮದ ಗ್ರಾಮೀಣ ನಿವಾಸಿಯಾಗಿದ್ದು, ಸಹಾಯಕ ಪ್ರಾಧ್ಯಾಪಕ ವೃತ್ತಿಯೊಂದಿಗೆ ಪಿಎಚ್.ಡಿ. ಪದವಿಯನ್ನು ಪಡೆಯುವ ಹಂಬಲದೊಂದಿಗೆ ಈ ಅಧ್ಯಯನವನ್ನು ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲವಾಗುವ ಉದ್ದೇಶವನ್ನಿಟ್ಟುಕೊಂಡು ಈ ಮಹಾಪ್ರಬಂಧವನ್ನು ಮಂಡಿಸಿರುತ್ತೇನೆ ಎಂದು ತಿಳಿಸಿದರು.
ಇವರಿಗೆ ಕುಟುಂಬಸ್ಥರು, ಸ್ನೇಹಿತರು, ವಿ.ಎಸ್.ಕೆ.ಯು.ಬಿ ಮತ್ತು ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳು, ಆಡಳಿತ ಮಂಡಳಿ, ಸಿಬ್ಬಂದಿವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

ಶ್ರೀ ಕನ್ನಿಕಾ ಪರಮೇಶ್ವರಿ ಆತ್ಮಾರ್ಪಣೆ ದಿನದಂದು ದೇವಸ್ಥಾನ ನಿರ್ಮಾಣದ ಸಂಕಲ್ಪ: ರೂಪ ರಾಣಿ ಲಕ್ಷ್ಮಣ್

ಗಂಗಾವತಿ:ನಗರದ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ ಶುಕ್ರವಾರದಂದು ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಸಂಜೆ ಆಯೋಜಿಸಿದ ಶ್ರೀ ಕನ್ನಿಕಾ ಪರಮೇಶ್ವರಿ ಆತ್ಮಾರ್ಪಣೆ ದಿನ ಹಾಗೂ ವಿಶ್ವರೂಪ ದರ್ಶನ ಪ್ರಯುಕ್ತ ಆಯೋಜಿಸಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ್ ರಾಯಚೂರು ಮಾತನಾಡಿ ನಗರದಲ್ಲಿ ಹಲವು ವರ್ಷಗಳಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ನಿರ್ಮಾಣಕ್ಕೆ ಹಲವಾರು ಅಡೆತಡೆಗಳು ಉಂಟಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರ ಸಮ್ಮುಖದಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಸಂಕಲ್ಪಿಸಿಕೊಂಡು ಪ್ರತಿಯೊಬ್ಬ ಸಮಾಜ ಬಾಂಧವರ ಕುಟುಂಬದವರಿಗೆ ಶ್ರೀಚಕ್ರ ಕಲ್ಪಿಸುವುದರ ಮೂಲಕ ಮನೆಯಲ್ಲಿ ವಿಶೇಷ ಪೂಜೆಯ ಮೂಲಕ ದೇವಸ್ಥಾನ ನಿರ್ಮಾಣಕ್ಕೆ ಪ್ರಾರ್ಥಿಸಿಕೊಳ್ಳುವಂತೆ ವಿಶ್ವರೂಪ ದರ್ಶನ ನೀಡಿದ ಶುಭದಿನದಂದು ದೇವಸ್ಥಾನದ ಪ್ರಧಾನ ಅರ್ಚಕ ದಿಗಂಬರ್ ಭಟ್ ಜೋಶಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ಭಾಗ್ಯ ಈಶ್ವರಶೆಟ್ಟಿ ಮಾತನಾಡಿ ಕುಲದೇವತೆಯಾದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಗಂಗಾವತಿ ಅಂತಹ ಮಹಾನಗರಕ್ಕೆ ಅವಶ್ಯವಾಗಿದೆ.ಸಮಾಜ ಬಾಂಧವರು.ಭೇದಭಾವ ಮರೆತು.ಒಗ್ಗಟ್ಟಿನಿಂದ ದೇವಸ್ಥಾನ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕಾಗಿದೆ. ಸಮಾಜದ ಸಂಘಟನೆ ಜೊತೆಗೆ ಧಾರ್ಮಿಕತೆ ಆಚರಣೆ ಮೂಲಕ ಸಂಸ್ಕಾರ ಬೆಳೆಸುವ ಕಾರ್ಯವಾಗಬೇಕೆಂದು ಹೇಳಿದರು.
ಯುವಕ ಸಂಘದ ಅಧ್ಯಕ್ಷರು.ಸಮಾಜ ಬಾಂಧವರು ಪಾಲ್ಗೊಂಡಿದ್ದರು.