ಡಾ. ಎಚ್.ಬಿ.ಯಶೋಧರಾ ಜನಪದ ಕ್ಷೇತ್ರಕ್ಕೆ ನೀಡಿದ ಎರಡು ಮಹತ್ವದ ಕೊಡುಗೆಗಳು
ಹಾಸನದ ಡಾ. ಎಚ್.ಬಿ.ಯಶೋಧರಾ ಅವರು ಜಾನಪದ ಕ್ಷೇತ್ರಕ್ಕೆ ನೀಡಿದ ಎರಡು ಮಹತ್ಕಾರ್ಯಗಳಲ್ಲಿ ಒಂದು ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಸಂಶೋಧನೆ ಮತ್ತೊಂದು ಯಕ್ಷಗಾನ ಕರಿಭಂಟನ ಕಥೆ ಸಂಪಾದನೆ. ಎರಡೂ ಜನಪದ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳಾಗಿವೆ ಎಂದು ಜನಪದ ಸಾಹಿತಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಚಂದ್ರುಕಾಳೇನಹಳ್ಳಿ ತಿಳಿಸಿದರು. ಹಾಸನದ ಮನೆ ಮನೆ ಕವಿಗೋಷ್ಠಿಯಿಂದ ಡಾ|| ಸಿ.ಎನ್. ಜಗದೀಶ್ರವರ ಪ್ರಾಯೋಜನೆಯಲ್ಲಿ ಅವರ ನಿವಾಸದಲ್ಲಿ ನಡೆದ ೩೨೬ನೇ ಕಾರ್ಯಕ್ರಮದಲ್ಲಿ ಡಾ. ಎಚ್.ಬಿ.ಯಶೋಧರಾ ಅವರ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಕೃತಿ ಕುರಿತಂತೆ…
