ಪಾಲಕಿ ಉತ್ಸವ ಹಾಗೂ ತೊಟ್ಟಿಲು ಉತ್ಸವದೊಂದಿಗೆ ಮದ್ವ ಜಯಂತಿ ಸಂಪನ್ನ

ಗಂಗಾವತಿ.:ನಗರದ ಯೋಗೀಶ್ವರ ಯಾಜ್ಞವಲ್ಕ್ಯಮಂದಿರದಲ್ಲಿ ಗುರುವಾರದಂದು ಜರುಗಿದ ಮಧ್ವ ನವಮಿ ಉತ್ಸವ ಪಾಲಕಿ ಹಾಗೂ ತೊಟ್ಟಿಲು ಉತ್ಸವದೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ. ವೇದಮೂರ್ತಿ ಪ್ರದೀಪ ಆಚಾರ್ ಅವರು ವೆಂಕಟೇಶ್ ಲೆಕ್ಕಿಹಾಳ ದಂಪತಿಗಳಿಗೆ ಮಹಾಸಂಕಲ್ಪ, ಅಷ್ಟವಧಾನ ಸೇವೆ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಸಾಂಗತವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭಜನೆ ನೃತ್ಯಗಳಿಂದ ತಮ್ಮ ಭಕ್ತಿ ಭಾವವನ್ನು ಸಮರ್ಪಿಸಿದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರುಳಿಧರ್ ಕುಲಕರ್ಣಿ. ಸತೀಶ್. ಪ್ರಭಾಕರ್ ದಿನ್ನಿ. ತಿರುಮಲ್ ರಾವ್ ಆಲಂಪಲ್ಲಿ, ರಾಘವೇಂದ್ರ ಮೇಗೂರು ಲಕ್ಷ್ಮಣ ಜಮಖಂಡಿ. ಕೋಮಲಾಪುರ ಪ್ರಹ್ಲಾದ್ ಸೇರಿದಂತೆ ಮಹಿಳಾ ಭಜನಾ ಮಂಡಳಿಯ ಸದಸ್ಯರು. ಭಕ್ತರು ಪಾಲ್ಗೊಂಡಿದ್ದರು.

Leave a Reply