ಮಹಾಶಿವರಾತ್ರಿ ಅಂಗವಾಗಿ ಸಿದ್ದಿಕೆರೆಯಲ್ಲಿ ಬೇಡರ ಕಣ್ಣಪ್ಪ ನಾಮಫಲಕಕ್ಕೆ ಪೂಜಾ ಕಾರ್ಯಕ್ರಮ

ಗಂಗಾವತಿ: ನಗರದ ೪ನೇ ವಾರ್ಡ್ ಸಿದ್ದಿಕೆರೆಯಲ್ಲಿ ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಬೇಡರ ಕಣ್ಣಪ್ಪ ಭಾವಚಿತ್ರವಿರುವ ನಾಮಫಲಕಕ್ಕೆ ಗಂಗಾವತಿ ತಾಲೂಕ ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಸಂಘದ ಅಧ್ಯಕ್ಷರಾದ ಜೆ. ಸೋಮಪ್ಪ ಕವಿಗಳು ಪ್ರಕಟಣೆ ಮೂಲಕ ತಿಳಿಸಿದರು.


ಅವರು ಮಹಾಶಿವರಾತ್ರಿಯ ದಿನ ಸಂಜೆ ೬ ಗಂಟೆಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಬೇಡರ ಕಣ್ಣಪ್ಪನು ಮಹಾಶಿವನ ಭಕ್ತನಾಗಿ ತನ್ನ ಕಣ್ಣುಗಳನ್ನು ದಾನ ನೀಡಿದ ದಿನವೇ ಮಹಾಶಿವರಾತ್ರಿಯಾಗಿದ್ದು, ಈ ಮಹಾಶಿವರಾತ್ರಿ ಅಂಗವಾಗಿ ಶಿವನ ಭಕ್ತ ಬೇಡರ ಕಣ್ಣಪ್ಪನಿಗೆ ನಮ್ಮ ಸಂಘದಿಂದ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಪೂಜಾ ಕಾರ್ಯಕ್ರಮದಲ್ಲಿ ಚಿಕ್ಕವಂಕಲಕುಂಟಾ ದೇವಸ್ಥಾನದ ಫಕೀರೇಶ್ವರ ತಾತನವರು, ನಗರಸಭೆ ಸದಸ್ಯ ಎಫ್.ರಾಘವೇಂದ್ರ, ಸಿದ್ದಿಕೆರೆ ಮಾರೆಮ್ಮ ದೇವಸ್ಥಾನದ ಅರ್ಚಕರಾದ ಪ್ರಭಾಕರ, ಸಂಘದ ಗೌರವಾಧ್ಯಕ್ಷ ನಾಗಭೂಷಣ ನಾಯಕ ರಾಂಪುರ, ಉಪಾಧ್ಯಕ್ಷರಾದ ಸಿಂಗಾಪುರ ಭೀಮರಾಯ ನಾಯಕ, ಉಮೇಶಪ್ಪ ರಾಂಪುರ, ಕಾರ್ಯದರ್ಶಿಯಾದ ಟಿ. ಅನೀಲಕುಮಾರ, ಮುಖಂಡರಾದ ಸೋಮಲಾಪುರ ಬಸಪ್ಪ ನಾಯಕ, ಸೋಮಲಾಪುರ ಶೇಖರ ನಾಯಕ, ಕೋಲ್ಕಾರ ನಾಗರಾಜ ನಾಯಕ, ಮಣ್ಣೂರು ನಾಗಪ್ಪ ನಾಯಕ, ಗಿರೀಶ ನಾಯಕ ಬಸವನದುರ್ಗ, ಟಿ. ಬಸವರಾಜ ಮಲ್ಲಾಪುರ, ಸಿಂಗಾಪುರ ಶ್ರೀನಿವಾಸ ನಾಯಕ ಸೇರಿದಂತೆ ಸಿದ್ದಿಕೆರೆ, ಸಂಗಾಪುರ, ರಾಂಪುರ ಗ್ರಾಮದ ಗುರುಹಿರಿಯರು, ಸರ್ವ ಸಮಾಜಗಳ ಮುಖಂಡರು, ಪ್ರಮುಖರು ಪಾಲ್ಗೊಂಡಿದ್ದರು.

Leave a Reply