ಗಂಗಾವತಿ: ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಭಕ್ತಿಸಂಗೀತ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು ಎಂದು ವಿಶ್ವಕರ್ಮ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾದ ಕಾಳೇಶ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದರು.
ಅಂದು ಸಂಜೆ ೬ಕ್ಕೆ ಶಿವಸ್ವರೂಪರಾದ ಶ್ರೀಗುರು ಮೌನೇಶ್ವರರಿಗೆ ಪೂಜೆ, ಅಭಿಷೇಕ ನೆರವೇರಿಸಲಾಯಿತು. ನಂತರದಲ್ಲಿ ಭಕ್ತಿಸಂಗೀತ ಕಾರ್ಯಕ್ರಮಕ್ಕೆ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲಿಯವರು ಚಾಲನೆ ನೀಡಿದರು.
ಭಕ್ತಿ ಸಂಗೀತ ಕಾರ್ಯಕ್ರಮವನ್ನು ಸ್ಥಳೀಯ ಸಂಗೀತ ಕಲಾವಿದರಾದ ಕನಕಪ್ಪ ಚಿತ್ರಗಾರ, ಗಂಗಾಧರಯ್ಯ, ವೆಂಕಟೇಶ ದಾಸನಾಳ, ಕಾಶೀಂ ಅಲಿ ಮುದ್ದಾಬಳ್ಳಿ, ಶಿವಪ್ಪ ಹುಳ್ಳಿ, ನರಸಿಂದ ದರೋಜಿ, ಮಲ್ಲೇಶಪ್ಪ, ಸಮಾಜದ ಪ್ರತಿನಿಧಿಗಳಾದ ಸಣ್ಣೆಪ್ಪ ಕಮ್ಮಾರ, ನಾಗಪ್ಪ ಬಡಿಗೇರ ಸೇರಿದಂತೆ ಮುಂತಾದ ಸಂಗೀತ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಈ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಸಿ.ವಿ ಸರ್ವಜ್ಞಾಚಾರ್, ಪ್ರಮುಖರಾದ ಹನುಮೇಶ ಬಡಿಗೇರ, ಬಸವರಾಜ ಬಡಿಗೇರ, ಛಾಯಾ ಭಾಸ್ಕರ, ಬಸವರಾಜ ವಣಗೇರಿ, ಶ್ರೀನಿವಾಸ ಪತ್ತಾರ, ದೇವೆಂದ್ರ ಅರ್ಕಸಾಲಿ, ಗುರುರಾಜ ಬಡಿಗೇರ, ಮಹಿಳಾ ಮಂಡಳಿಯವರು, ಯುವಮಿತ್ರರು ಪಾಲ್ಗೊಂಡು ಅಚ್ಚುಕಟ್ಟಾಗಿ ನಡೆಸಿದರು.