ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ

ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ

ಗಂಗಾವತಿ: ತಾಲೂಕಿನ ಗಡ್ಡಿ-ಉಡುಮಕಲ್ ಗ್ರಾಮದಲ್ಲಿ ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ ಇದೇ ಏಪ್ರಿಲ್-೩೦ ಬುಧವಾರ ನಡೆಯಲಿದೆ.

ಏಪ್ರಿಲ್-೨೯ ಮಂಗಳವಾರ ಆಹ್ವಾನಿತರ ಭಜನಾ ಸಂಘದವರಿಂದ ಡೊಳ್ಳು ವಾದ್ಯಗಳೊಂದಿಗೆ ಅದ್ದೂರಿ ಸ್ವಾಗತ, ಏಪ್ರಿಲ್-೩೦ ಬುಧವಾರ ಬೆಳಗ್ಗೆ ೩:೦೦ ಗಂಟೆಗೆ ತಾತನವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಗ್ಗೆ ೬:೦೦ ಗಂಟೆಗೆ ಸುಮಂಗಲೆಯರಿಂದ ಕಳಶದೊಂದಿಗೆ ಡೊಳ್ಳಿನ ಸಂಗಡ ಗಂಗೆಸ್ಥಳಕ್ಕೆ ಹೋಗಿ ಬರುವುದು, ನಂತರ ಗಣಾರಾಧನೆ ನಡೆಯುವುದು, ನಂತರ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ ಕಾರ್ಯಕ್ರಮ ಮತ್ತು ಸಂಜೆ ೫:೦೦ ಗಂಟೆಗೆ ತಾತನವರ ಉತ್ಸವ ಜರುಗಲಿದೆ.

ಉತ್ಸವದ ನೇತೃತ್ವವನ್ನು ಗಡ್ಡಿಮಠದ ಶ್ರೀ ವೇ.ಮೂ. ಈಶ್ವರಯ್ಯ ಸ್ವಾಮಿ ಹಾಗೂ ಉಡುಮಕಲ್ ಬೃಹನ್ಮಠದ ಅಧ್ಯಕ್ಷರಾದ ಶ್ರೀ ವೇ.ಮೂ. ವೀರಬಸವ ಶಾಸ್ತ್ರಿಗಳು ವಹಿಸಲಿದ್ದಾರೆ. ಮೇ-೦೧ ರಂದು ಅಮರೇಶಯ್ಯಸ್ವಾಮಿ ಗಡ್ಡಿಮಠ ಇವರ ಅಧ್ಯಕ್ಷತೆಯಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಈ ಜಾತ್ರಾ ಮಹೋತ್ಸವಕ್ಕೆ ಸಕಲ ಭಕ್ತಾದಿಗಳು ಆಗಮಿಸಿ ತಾತನವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿ ಮುಖ್ಯಸ್ಥರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿರುವ ಪಕೀರಪ್ಪ ಪೂಜಾರ ಇವರು ವಿನಂತಿಸಿದ್ದಾರೆ.

Leave a Reply