ಗಂಗಾವತಿ : ಜೂನ್-೨೮ ಶನಿವಾರದಂದು ತ್ರಿವಿಧ ದಾಸೋಹದ ನಾಡು ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಒಂದು ಭಾವಪೂರ್ಣ ಸಮಾರಂಭ ನಡೆಯಿತು.
ಡಾ. ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳವರ ಗ್ರಂಥ ಲೋಕಾರ್ಪಣೆಯು ಈ ದಿನದ ಆಕರ್ಷಣೆಯಾಗಿತ್ತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಸೇತುವೆ ಬಳಿ ಸ್ಥಾಪಿಸಲಾದ “ಸಿದ್ದಗಂಗಾಶ್ರೀ ಬೆಲ್ಲದ ಚಹಾ ಅಂಗಡಿ”ಗೆ ವಿಶೇಷ ಗೌರವ ದೊರೆಯಿತು.
ಅಂಗಡಿಯ ನಾಮಫಲಕವನ್ನು ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಅನಾವರಣಗೊಳಿಸಿ ಸಾಂಕೇತಿಕವಾಗಿ ಉದ್ಘಾಟಿಸಿದರು.
ಅವರು ಮಾತನಾಡುತ್ತಾ “ಈ ಅಂಗಡಿ ನಾಡಿನಾದ್ಯಂತ ಹೆಸರಾಗಲಿ. ಗುರುಪರಂಪರೆ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ” ಎಂದು ಆಶೀರ್ವದಿಸಿದರು.
ಬಸನಗೌಡ ಹೊಸಳ್ಳಿ ಮತ್ತು ಅವರ ಕುಟುಂಬ ವರ್ಗ ಈ ವಿಶೇಷ ಅನುಭವದಿಂದ ಧನ್ಯರಾದರು.
ಈ ಸಮಾರಂಭದಲ್ಲಿ ನಾಡಿನ ಹೆಸರಾಂತ ಜಾನಪದ ವಿದ್ವಾಂಸ ಡಾ. ಶ್ರೀ ಗೊ. ರು. ಚೆನ್ನಬಸಪ್ಪ ಅವರು ವಿಶೇಷ ಆತಿಥ್ಯ ವಹಿಸಿದರು.
ಸಿದ್ದಗಂಗೆಯ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಇತರ ಪ್ರಮುಖ ಅತಿಥಿಗಳಲ್ಲೊಬ್ಬರಾಗಿದ್ದರು.
ಇದಲ್ಲದೆ, ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಈ ಸಂಭ್ರಮದಲ್ಲಿ ಹಾರ್ದಿಕವಾಗಿ ಭಾಗವಹಿಸಿದ್ದರು.
ಮಾಹಿತಿಗಾಗಿ:
ಬಸನಗೌಡ ಹೊಸಳ್ಳಿ
ಅಧ್ಯಕ್ಷರು, ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘ
ಮೊ.ನಂ: ೭೪೮೩೨೨೯೯೬೨