ಗಂಗಾವತಿ: ಇಲ್ಲಿನ ಶಂಕರ ಮಠದಲ್ಲಿ ಶ್ರೀ ದತ್ತಾತ್ರೇಯ ಜಯಂತೋತ್ಸವದ ಸಂದರ್ಭದಲ್ಲಿ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ಕಿರಿಯ ಸ್ವಾಮೀಜಿಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಆಶಯದಂತೆ ಹರ ಮತ್ತು ಹರಿ ಒಂದೇ ಎಂಬ ದಿವ್ಯ ಸಂದೇಶವನ್ನು ಸಾರುವ ಉದ್ದೇಶದಿಂದ ಹಾಗೂ ಶ್ರೀಮತಸ್ಥರು ಒಂದಾಗುವುದರ ಮೂಲಕ ಸನಾತನ ಧರ್ಮದ ರಕ್ಷಣೆಗಾಗಿ ಹರಿ ನಾಮಾಮೃತ ಕೋಟಿ ಬರವಣಿಗೆ ಪತ್ರಿಕೆಯನ್ನು ಧರ್ಮದರ್ಶಿ ನಾರಾಯಣರಾವ್ ಉದ್ಘಾಟಿಸಿದರು
ಬಳಿಕ ಮಾತನಾಡಿದ ಅವರು ಯಾವುದೇ ಜಾತಿ ಮತ ಪಂಥವೆನಿಸದೆ ಸರ್ವ ಜನಾಂಗದವರು ಶಿವನಾಮ ಹಾಗೂ ರಾಮನಾಮವನ್ನು 108 ಬರವಣಿಗೆ ಮೂಲಕ ಶೃಂಗೇರಿ ಉಭಯ ಜಗದ್ಗುರುಗಳಿಗೆ ಸಮರ್ಪಿಸಲಾಗುತ್ತದೆ ಎಂದು ತಿಳಿಸಿ. ಆಗಮಿಸಿದ ಸರ್ವ ಭಕ್ತಾದಿಗಳಿಗೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಮೋಹನ್ ಹಂಪಿ ಅವರಿಂದ ಶ್ರೀ ದತ್ತಾತ್ರೇಯ ಕುರಿತು ಪ್ರವಚನ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

