ಐರಣಿ ಮಠದ ತುಂಗಭದ್ರಾ ದಡದಲ್ಲಿ ಎರಡನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಜಾಲನೆ

ರಾಣಿಬೆನ್ನೂರು ತಾಲ್ಲೂಕಿನ ಐರಣಿ ಮಠದ ಸನ್ನಿಧಿಯಲ್ಲಿ ನಿರ್ಮಲ ತುಂಗಭದ್ರ ಅಭಿಯಾನದ ಎರಡನೇ ಹಂತದ ಪಾದಯಾತ್ರೆಯನ್ನು ವೀರಾಪುರ ಹಿರೇಮಠದ ಡಾ. ಮರುಳಸಿದ್ದ ಪಂಡಿತಾರಾಧ್ಯ ಮಹಾಸ್ವಾಮಿಗಳು, ಐರಾವತ ಐರಣಿ ಮಠದ ಶ್ರೀ ಮಾಧವಾನಂದ ಸ್ವಾಮೀಜಿ, ಪ್ರಧಾನ ಸಂಘಟಕರಾದ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ರಾಷ್ಟ್ರೀಯ ಸಂಚಾಲಕರಾದ ಶ್ರೀ ಬಸವರಾಜ್ ಪಾಟೀಲ್ ವೀರಾಪುರ, ಸಾಮಾಜಿಕ ಕಾರ್ಯಕರ್ತರು ಹಾಗೂ ಚನ್ನಗಿರಿ ಮಾಜಿ ಶಾಸಕರಾದ ಮಹಿಮಾ ಪಾಟೀಲ್, ಖ್ಯಾತ ಆರ್ಥಿಕ ತಜ್ಞರು ಹಾಗೂ ಪರಿಸರ ಪ್ರೇಮಿಗಳಾದ ಪ್ರೊ. ಬಿ.ಎನ್. ಕುಮಾರಸ್ವಾಮಿ, ಐ.ಐ.ಟಿ ಧಾರವಾಡದ ಪ್ರೊ. ಎಲ್.ಕೆ. ಶ್ರೀಪತಿ ಇವರು ತುಂಗಭದ್ರಾ ನದಿಗೆ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಸಂಘಟಕರಾದ ಬಾಲಕೃಷ್ಣ ನಾಯ್ಡು, ಮಾದವನ್ ಗೋ ಸಿರಿ, ಗೋವರ್ದನ್, ಗಂಗಾವತಿಯ ಡಾ|| ಶಿವಕುಮಾರ ಮಾಲಿಪಾಟೀಲ್, ಪ್ರಹ್ಲಾದ್ ಕುಲಕರ್ಣಿ, ಮಂಜುನಾಥ ಸಿರಿಗೇರಿ ಹಾಗೂ ಶಿವಮೊಗ್ಗ, ಹರಿಹರ, ಬೆಂಗಳೂರು, ದಾವಣಗೆರೆಯ ಹಲವಾರು ಪರಿಸರ ಪ್ರೇಮಿಗಳು, ಗಣ್ಯರು ಉಪಸ್ಥಿತರಿದ್ದರು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading