ಗಂಗಾವತಿ: ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ಸಾಕಷ್ಟು ಅಭಿವೃದ್ಧಿಪಥದಲ್ಲಿ ಮುಂದೆ ಸಾಗಿದ್ದರೂ ಸಹ. ಪ್ರಮುಖವಾಗಿ ಜನತೆಗೆ ಅಗತ್ಯ ಇರುವ ಆಹಾರಕ್ಕೆ ಸಂಬಂಧಿಸಿದಂತೆ, ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತಾಪಿ ವರ್ಗ ಅವರ ಸೇವೆ ಅನನ್ಯವಾಗಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಮಾಜಿ ಸದಸ್ಯ ಶ್ರೀಧರ್ ಕೇಸರಹಟ್ಟಿ ಹೇಳಿದರು.
ಅವರು ಶ್ರೀರಾಮನಗರದ ಶ್ರೀಮತಿ ಪರಿಮಳಬಾಯಿ ನಾರಾಯಣರಾವ್ ಅಪ್ಸಾನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಸೋಮವಾರದಂದು ಜರುಗಿದ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಸಾಧಕ ರೈತರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದೇಶವಾಸಿಗಳಿಗೆ ಹೊಟ್ಟೆ ತುಂಬಿಸುವುದು ಯಂತ್ರಗಳು ಅಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ರೈತರ ಕೃಷಿ ಬೆಳವಣಿಗೆಯಿಂದಾಗಿ ದೇಶ ಹಸಿವು ಮುಕ್ತವಾಗಲು ಸಾಧ್ಯವಾಗುತ್ತದೆ. ಅಂತಹ ರೈತರ ಕೃಷಿ ಕಾರ್ಯಚಟುವಟಿಕೆಗಳಿಗೆ ಸರ್ಕಾರಗಳು ಹಾಗೂ ಪ್ರತಿಯೊಬ್ಬರು ಸ್ಮರಿಸಲೇಬೇಕಾದ ಅವಶ್ಯಕತೆ ಇದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಸಮಾರಂಭ ಕುರಿತು ಮಾತನಾಡಿದರು.
ಇದಕ್ಕೂ ಪೂರ್ವದಲ್ಲಿ ಅಪಾರ ಸಂಖ್ಯೆಯ ರೈತರು ಬೃಹತ್ ಮೆರವಣಿಗೆಯನ್ನು ನಡೆಸಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಗಂಗಾವತಿ ಕೆವಿಕೆ ಸಂಸ್ಥೆಯ ಸಂತೋಷ್ ಎಲ್.ಆರ್.ಸಿ ಅಧಿಕಾರಿ ಹಿರೇಮಠ್, ರೈತ ಮುಖಂಡ ಸಿದ್ದನಗೌಡ ಸೇರಿದಂತೆ ಇತರರು ಕೃಷಿಯ ತಮ್ಮ ಜೀವನದ ಉಸಿರಾಗಿಸಿಕೊಂಡ ರೈತರು ಆದ ಕುಸುಮ ರವಿ, ಕೃಷಿ ಉಪಕರಣಗಳ ತಯಾರಕರು ಸುಬ್ರಮಣ್ಯ ಬಸಾಪಟ್ಟಣ, ಸಿದ್ದನಗೌಡ, ರಮೇಶ್ ಕಲ್ಗುಡಿ, ಸತ್ಯನಾರಾಯಣ ಕೋಟೆಕ್ಯಾಂಪ್, ವೈ ಸತ್ಯನಾರಾಯಣ ಮುಸ್ಟೂರು ಡಗ್ಗಿ ಕ್ಯಾಂಪ್ ಶ್ರೀಧರ ಕೆಸರಹಟ್ಟಿ, ನರೇಶ್ ಮಲಕನಮರಡಿ ಅಣ್ಣಾರಾವ್. ನಾಗೇಶ್ ರಾವ್ ಹಾಗೂ ರಾಜಪ್ಪ ರೈತರನ್ನು ವೇದಿಕೆಯಲ್ಲಿನ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.