ಗಂಗಾವತಿ: ತಾಲೂಕಿನ ಬಸಾಪಟ್ಟಣ ಮತ್ತು ಮಲ್ಲಾಪುರ ಗ್ರಾಮದ ಸೀಮಾ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಎಡದಂಡೆ ಕಾಲುವೆಯ ಬವಾರ್ ಪಕ್ಕದಲ್ಲಿರುವ ವಂಕಲಕುಂಟೆ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಮಲ್ಲಾಪುರ, ಬಸಾಪಟ್ಟಣ, ವೆಂಕಟಗಿರಿ, ಗಂಗಾವತಿ, ವಡ್ಡರಹಹಟ್ಟಿ ಹಾಗೂ ಇನ್ನಿತರ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಸಭೆ ಸೇರಿ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಸಲುವಾಗಿ ವಂಕಲಕುಂಟೆ ಶ್ರೀ ಮಾರುತೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ನೂತನವಾಗಿ ಗೌರವಾಧ್ಯಕ್ಷರನ್ನು, ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ದೇವಸ್ಥಾನದ ಪ್ರಮುಖ ಅರ್ಚಕರಾದ ಶ್ರೀ ಫಕೀರೇಶ್ವರಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಗೌರವಾಧ್ಯಕ್ಷರಾಗಿ ಬಸವನಗೌಡ ಮಾಲಿಪಾಟೀಲ್ ಮಲ್ಲಾಪುರ, ನಾಗಪ್ಪ ಕಂಬಳಿ ಬಸಾಪಟ್ಟಣ, ಅಧ್ಯಕ್ಷರಾಗಿ ಶಿವಕುಮಾರ ಅರಿಕೇರಿ ಗಂಗಾವತಿ, ಉಪಾಧ್ಯಕ್ಷರುಗಳಾಗಿ ಹನುಮಂತಪ್ಪ ಯಾದವ್ ವೆಂಕಟಗಿರಿ, ವಿರುಪಣ್ಣ ಡಂಬರ್ ಬಸಪಟ್ಟಣ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತಪ್ಪ ತಳವಾರ್ ಬಸಾಪಟ್ಟಣ, ಸಹ ಕಾರ್ಯದರ್ಶಿಯಾಗಿ ಕೆ ನಿಂಗಜ್ಜ, ಖಜಾಂಚಿಯಾಗಿ ಅಯ್ಯನಗೌಡ ಮಲ್ಲಾಪುರ, ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಕೆ ಮಂಜುನಾಥ್ ಕುರುಗೋಡು ಗಂಗಾವತಿ, ಮಹದೇವಪ್ಪ ಫೊಟೋಗ್ರಾಫರ್ ಗಂಗಾವತಿ, ಭೀಮರಾಯ ಸಿಂಗಾಪುರ ಸಿದ್ದಿಕೆರೆ, ವಡ್ರಹಟ್ಟಿಕ್ಯಾಂಪ್ ರಾಘವಲು, ನಾಗರಾಜ ಮಡಿವಾಳ ಹಾಗೂ ಲೋಕೇಶ್ ಯಾದವ್ ವೆಂಕಟಗಿರಿ ಅವರು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷರಾಗಿರುವ ಹಿರಿಯ ಸದಸ್ಯರಾದ ಹನುಮಂತಪ್ಪ ಯಾದವ್ ವೆಂಕಟಗಿರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.