ಶಂಕರ ಮಠದ ನವೀಕೃತ ಸಭಾಂಗಣದ ಉದ್ಘಾಟನೆ ಹಾಗೂ ಶೃಂಗೇರಿಯ ಶ್ರೀ ವಿದುಶೇಖರ ಮಹಾಸ್ವಾಮಿಗಳ ವಿಜಯ ಯಾತ್ರೆ ಯಶಸ್ವಿಗೆ ಪ್ರಾರ್ಥಿಸಿ ಗಣಪತಿ ಹೋಮ.

ಗಂಗಾವತಿ. ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಪ್ರಯುಕ್ತ ಜನವರಿ-21 ಹಾಗೂ 22 ರಂದು ಜರುಗಲಿರುವ ವಿಜಯ ಯಾತ್ರೆ 2025 ರ ಯಶಸ್ವಿಗೆ ಪ್ರಾರ್ಥಿಸಿಕೊಂಡು ಸೋಮವಾರದಂದು ಪೂಜ್ಯರಿಂದ ಲೋಕಾರ್ಪಣೆಗೊಳ್ಳಲಿರುವ ನವೀಕರಿಸಿದ ಸಭಾಂಗಣದ ಆವರಣದಲ್ಲಿ ಪ್ರಥಮ ಪೂಜೆ, ವಿಘ್ನ ವಿನಾಶಕ ಗಣಪತಿ ಪೂಜೆ, ಹೋಮವನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ತಂಡದವರು ಸಾಂಗತವಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿ ಕಿರಿಯ ಸ್ವಾಮೀಜಿಗಳು ವಿಜಯ ಯಾತ್ರೆಯ ಹಿನ್ನೆಲೆಯಲ್ಲಿ ಭಕ್ತ ಕೋಟಿ ಅನುಗ್ರಹಿಸಲು ನಗರಕ್ಕೆ ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಾಗಣಪತಿ ಹೋಮದೊಂದಿಗೆ ಯಾವುದೇ ರೀತಿಯ ಸಂಕಷ್ಟಗಳು ಆಗಬಾರದು ಎಂಬ ಉದ್ದೇಶದಿಂದ ಈ ಹೋಮದಿಂದಲೇ  ಸದರಿ ದಿನಗಳಂದು ವಿಜಯ ಯಾತ್ರೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಕಲ ಭಕ್ತಾದಿಗಳು ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೇದಮೂರ್ತಿ ಮಹೇಶ್ ಭಟ್ಟ ಜೋಶಿ ಸೇರಿದಂತೆ ಶಂಕರ ಮಠದ ಹಿರಿಯ ಸದಸ್ಯರಾದ ರಾಘವೇಂದ್ರ ಅಳವಂಡಿಕರ್. ಬ್ರಾಹ್ಮಣ ಸಮಾಜದ ತಾಲೂಕ ಅಧ್ಯಕ್ಷ ರಾಘವೇಂದ್ರ ಮೇಗೂರು. ಜಗನ್ನಾಥ್ ರಾವ್ ಅಳವಂಡಿಕರ್. ಶ್ರೀನಿವಾಸ ಕರಮುಡಿ, ಸುದರ್ಶನ ವೈದ್ಯ, ಭೀಮಸೇನ್ ರಾವ್. ವೇಣು ಇತರರು ಉಪಸ್ಥಿತರಿದ್ದರು.

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading