ಶೃಂಗೇರಿಯ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳವರ ಪುರ ಪ್ರವೇಶ ಹಾಗೂ ಶ್ರದ್ಧೆ ಭಕ್ತಿಯಿಂದ ಜರುಗಿದ ಶೋಭಾಯಾತ್ರೆ

ಗಂಗಾವತಿ: ಶೃಂಗೇರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಪ್ರಯುಕ್ತ ಕಿರಿಯ ಸ್ವಾಮೀಜಿಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳ ವಿಜಯ ಯಾತ್ರೆ ಪ್ರಯುಕ್ತ, ಪುರಪ್ರವೇಶ ಮಾಡುವುದರ ಮೂಲಕ ಸರ್ವ ಭಕ್ತಾದಿಗಳು ಸಕಲ ವಾದ್ಯ ವೈಭವದೊಂದಿಗೆ ವಿವಿಧ ಮಹಿಳಾ ಭಜನಾ ಮಂಡಳಿಯವರ ಸೊಗಸಾದ ಕೋಲಾಟ, ಭಜನೆ. ಋತಿಜ್ವರ, ವೇದ ಮಂತ್ರ ಘೋಷದೊಂದಿಗೆ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿಕೊಳ್ಳುವುದರ ಮೂಲಕ ವಾಲ್ಮೀಕಿ ವೃತ್ತದಲ್ಲಿ ವೇದಮೂರ್ತಿ ಮಹೇಶ್ ಭಟ್ ತಂಡದವರಿಂದ ಮಹರ್ಷಿ ವಾಲ್ಮೀಕಿ ಅವರಿಗೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಸರ್ವಲಾoಕೃತ ತೆರೆದ ವಾಹನ ಮೂಲಕ ಶೋಭಾ ಯಾತ್ರೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರುಗಳಾದ ವೀರಭದ್ರಪ್ಪ ನಾಯಕ. ಜೋಗದ ನಾರಾಯಣಪ್ಪ ನಾಯಕ ಸೇರಿದಂತೆ ತಾಲೂಕ ಬ್ರಾಹ್ಮಣ ಸಮಾಜದ ಭಾಂಧವರು. ವಿವಿಧ ಸಮಾಜದ ಮುಖಂಡರು ಯಾವುದೇ ಭೇದ ಭಾವ ಇಲ್ಲದೆ ಸರ್ವ ಜನಾಂಗದವರು ಪಾಲ್ಗೊಂಡಿದ್ದು ವಿಶೇಷವಾಗಿ ಕಂಡುಬಂದಿತು.

ರಾಜಬೀದಿಯ ಉದ್ದಕ್ಕೂ ಸತೀಶ್ ಗುರೂಜಿ ಅವರ ನೇತೃತ್ವದ ಶ್ರೀ ರಾಮನಗರ ಕಲ್ಗೂಡಿ ಹೇರೂರು ನವ ಬೃಂದಾವನ ಭಜನಾ ಮಂಡಳಿ, ಶಾರದಾ ಶಂಕರ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿ ಮಹಿಳೆಯರು ದಾರಿ ಉದ್ದಕ್ಕೂ ವಿಶೇಷ ಗಮನ ಸೆಳೆದರು. ಕೊಪ್ಪಳ ರಾಯಚೂರು ವಿಜಯನಗರ ಜಿಲ್ಲೆ ಗದಗ ಭಾಗಗಳಿಂದ ಅಪಾರ ಭಕ್ತಾದಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ. ರಾಘವೇಂದ್ರ ಮೇಗೂ ರ್ ಸುದರ್ಶನ್ ಜೋಶಿ. ಆರ್ಯವೈಶ್ಯ ಸಮಾಜದ ಬಾಂಧವರು ಪಾಲ್ಗೊಂಡಿದ್ದರು .

Leave a Reply

Discover more from VISHWAROOPA NEWS BLOG

Subscribe now to keep reading and get access to the full archive.

Continue reading