VISHWAROOPA NEWS BLOG

ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ  ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.

ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.

ಗಂಗಾವತಿ: ಟಿವಿ-೫ ಮಾಧ್ಯಮದ ಜಿಲ್ಲಾ ವರದಿಗಾರರಾದ ನಾಗರಾಜ್ ವೈ ಇವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡುವ ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಹಿನ್ನೆಲೆ ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾದ ಬಸವರಾಜ್ ಮ್ಯಾಗಳಮನಿ ಅವರ ನೇತೃತ್ವದಲ್ಲಿ ನಾಗರಾಜ್.ವೈ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿಸಿ ಮಾತನಾಡಿದ ಬಸವರಾಜ್ ಮ್ಯಾಗಳಮನಿಯವರು, ನಾಗರಾಜ್ ಅವರು ಬಹಳ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ…

Read More
ಮೇ-೧ ಕಾರ್ಮಿಕ ದಿನಾಚರಣೆಯಂದು ಸಿ.ಐ.ಟಿ.ಯು ನೂತನ ಪ್ರಣಾಳಿಕೆ

ಮೇ-೧ ಕಾರ್ಮಿಕ ದಿನಾಚರಣೆಯಂದು ಸಿ.ಐ.ಟಿ.ಯು ನೂತನ ಪ್ರಣಾಳಿಕೆ

ಗಂಗಾವತಿ: ವ್ಯವಸ್ಥಿತ ಬಿಕ್ಕಟ್ಟಿನಲ್ಲಿ ಮುಳುಗಿರುವ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಆಕ್ರಮಣಕಾರಿ ದಾಳಿಯ ವಿರುದ್ಧ ಮತ್ತು ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ರಕ್ಷಿಸಲು ಸಮರಧೀರವಾಗಿ ಹೋರಾಡುತ್ತಿರುವ ವಿಶ್ವದ ದುಡಿಯುವ ಜನರಿಗೆ ಸಿಐಟಿಯು ಕ್ರಾಂತಿಕಾರಿ ಶುಭಾಶಯಗಳನ್ನು ಕೋರುತ್ತಾ, ಮೇ-೧ ಗುರುವಾರ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಂದು ಸಿಐಟಿಯು ದುಡಿಯುವ ವರ್ಗದ ಅಂತರಾಷ್ಟ್ರೀಯತೆಗೆ ತನ್ನ ಬದ್ಧತೆಯನ್ನು ಹೊಂದಿ ಶೋಷಣೆ, ತಾರತಮ್ಯದ ವಿರುದ್ಧ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಎಲ್ಲಾ ದುಡಿಯುವ ಜನರ ಹೋರಾಟಗಳಲ್ಲಿ ಅವರೊಂದಿಗೆ ಒಗ್ಗೂಡಿ ನೂತನ ಪ್ರಣಾಳಿಕೆಯನ್ನು ತಂದಿದೆ ಎಂದು ಸಿ.ಐ.ಟಿ.ಯು.ನ ಜಿಲ್ಲಾಧ್ಯಕ್ಷರಾದ…

Read More
ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಬಸವ ಜಯಂತಿ ಆಚರಣೆ : ಭಾರಧ್ವಾಜ್

ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಬಸವ ಜಯಂತಿ ಆಚರಣೆ : ಭಾರಧ್ವಾಜ್

ಗಂಗಾವತಿ: ಏಪ್ರಿಲ್-೩೦ ಬುಧವಾರ ನಗರದ ಬಸ್ ನಿಲ್ದಾಣ ಹತ್ತಿರದ ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಆಚರಣೆ ಮಾಡಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು. ಈ ಪ್ರಯುಕ್ತ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ, ಅವರ ಸಮಾನತೆ ತತ್ವಗಳ ಕುರಿತು ತಿಳಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಇಂಕಿಲಾಬಿ ಫಯಾಜ್ ಸರಾಜಿದಾರ, ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ…

Read More
ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

ಗಂಗಾವತಿ. ನಗರದ ತಹಶೀಲ್ ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು ಉಪ ತಹಶೀಲ್ದಾರ್ ಮಹಾಂತೇಶ್ ಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ. ಆಚರಣೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಮಹಾಂತೇಶ್ ಗೌಡ ಮಾಹಿತಿ ನೀಡಿದರು. ಬಳಿಕ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಮಾತನಾಡಿ ಕೇಂದ್ರ ಸರ್ಕಾರದ ಆದೇಶದಂತೆ ಶ್ರೀ ಶಂಕರಾಚಾರ್ಯರ ಜಯಂತೋತ್ಸವವನ್ನು ತತ್ವಜ್ಞಾನಿಗಳ (ವಿಶ್ವ ದಾರ್ಶನಿಕರ) ದಿನಾಚರಣೆಯನ್ನು ಮೇ-2 ಶುಕ್ರವಾರದಂದು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಆಚರಿಸಲು ತಹಶೀಲ್ದಾರರು ಆದೇಶ ನೀಡಬೇಕು….

Read More
ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ

ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ

ಗಂಗಾವತಿ: ತಾಲೂಕಿನ ಗಡ್ಡಿ-ಉಡುಮಕಲ್ ಗ್ರಾಮದಲ್ಲಿ ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ ಇದೇ ಏಪ್ರಿಲ್-೩೦ ಬುಧವಾರ ನಡೆಯಲಿದೆ. ಏಪ್ರಿಲ್-೨೯ ಮಂಗಳವಾರ ಆಹ್ವಾನಿತರ ಭಜನಾ ಸಂಘದವರಿಂದ ಡೊಳ್ಳು ವಾದ್ಯಗಳೊಂದಿಗೆ ಅದ್ದೂರಿ ಸ್ವಾಗತ, ಏಪ್ರಿಲ್-೩೦ ಬುಧವಾರ ಬೆಳಗ್ಗೆ ೩:೦೦ ಗಂಟೆಗೆ ತಾತನವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಗ್ಗೆ ೬:೦೦ ಗಂಟೆಗೆ ಸುಮಂಗಲೆಯರಿಂದ ಕಳಶದೊಂದಿಗೆ ಡೊಳ್ಳಿನ ಸಂಗಡ ಗಂಗೆಸ್ಥಳಕ್ಕೆ ಹೋಗಿ ಬರುವುದು, ನಂತರ ಗಣಾರಾಧನೆ ನಡೆಯುವುದು, ನಂತರ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ…

Read More
ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ: ಭಾರಧ್ವಾಜ್

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ: ಭಾರಧ್ವಾಜ್

ಗಂಗಾವತಿ: ಕೊಪ್ಪಳ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿ ನೋಂದಣಿಗೆ ಸಲ್ಲಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು. ಈ ಸಂಘವು ಕ್ರಾಂತಿಚಕ್ರ ಬಳಗದ ಅಡಿಯಲ್ಲಿ ನೋಂದಣಿಯಾಗಲಿದ್ದು, ಸಂಘಕ್ಕೆ ನಿವೃತ್ತ ಹಿರಿಯ ಕಾರ್ಮಿಕ ನಿರೀಕ್ಷಕರಾದ ಶೇಖರಗೌಡ ಮಾಲಿಪಾಟೀಲ್‌ರವರು ಗೌರವ ಸಲಹೆಗಾರರಾಗಿ ಸಲಹೆ ನೀಡಲಿದ್ದು, ಅಧ್ಯಕ್ಷರಾಗಿ ಇಬ್ರಾಹಿಂ ಮೇಸ್ತ್ರಿ,…

Read More
ಮೈಸೂರು ಶೋಭಾರಾಣಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಮೈಸೂರು ಶೋಭಾರಾಣಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಹಾಸನ: ಹಾಸನದ ಚಿತ್ಕಲಾ ಪೌ೦ಡೇಶನ್ ವತಿಯಿಂದ ಏರ್ಪಡಿಸಿರುವ ಏಕ ವ್ಯಕ್ತಿಚಿತ್ರ ಕಲಾ ಪ್ರದರ್ಶನಕ್ಕೆ ಕದಂಬ ಸೈನ್ಯ ಕನ್ನಡ ಪರ ಸಂಘಟನೆಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್, ಸಾಹಿತಿ ಗೊರೂರು ಅನಂತರಾಜು, ಚಿತ್ರ ಕಲಾವಿದ ಯಾಕೂಬ್, ಉಪನ್ಯಾಸಕರು ಎ.ರಾಮಮೂರ್ತಿ ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್ ಏಪ್ರಿಲ್-25‌ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಬಿ.ಎಸ್ ದೇಸಾಯಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಚಿತ್ಕಲಾ ಫೌಂಡೇಶನ್ ವತಿಯಿಂದ ಹಾಸದ ಜನತೆಗೆ ಶೋಭಾ ರಾಣಿ ಅವರ ಕಲಾಕೃತಿಗಳನ್ನು ಪರಿಚಯಿಸುವ ಉದ್ದೇಶದಿಂದ…

Read More
ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಎನ್.ಐ.ಎಸ್ ಕೋರ್ಸ್ ಯೋಗಾಸನ ತರಬೇತಿಗಾರರ ತರಬೇತಿಗೆ ಗಂಗಾವತಿಯ ಯೋಗ ಶಿಕ್ಷಕ ಎನ್. ಭಾನುಪ್ರಸಾದ ಆಯ್ಕೆ.

ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಎನ್.ಐ.ಎಸ್ ಕೋರ್ಸ್ ಯೋಗಾಸನ ತರಬೇತಿಗಾರರ ತರಬೇತಿಗೆ ಗಂಗಾವತಿಯ ಯೋಗ ಶಿಕ್ಷಕ ಎನ್. ಭಾನುಪ್ರಸಾದ ಆಯ್ಕೆ.

ಗಂಗಾವತಿ: ಭಾರತೀಯ ಕ್ರೀಡಾ ಪ್ರಾಧಿಕಾರದ ಶೈಕ್ಷಣಿಕ ವಿಭಾಗವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯು ನಡೆಸುತ್ತಿರುವ ಎನ್.ಐ.ಎಸ್ ಕೋರ್ಸ್ ಯೋಗಾಸನ ತರಬೇತಿಗಾರರ ತರಬೇತಿಗೆ ಗಂಗಾವತಿಯ ಯೋಗ ಶಿಕ್ಷಕರಾದ ಎನ್. ಭಾನುಪ್ರಸಾದ್ ರವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಈ ಯೋಗ ತರಬೇತಿಯು ಪಂಜಾಬ್‌ನ ಪಟಿಯಾಲದಲ್ಲಿ ಮುಂದಿನ ತಿಂಗಳು ಮೇ-೬ ರಿಂದ ಆರು ವಾರಗಳ ಕಾಲ ನಡೆಯಲಿದೆ. ಈ ಯೋಗ ತರಬೇತಿಗೆ ಆಯ್ಕೆಯಾದ ಎನ್. ಭಾನುಪ್ರಸಾದ ಅವರಿಗೆ ಪ್ರಜ್ವಲ ಯೋಗ ಕೇಂದ್ರ, ಸ್ನೇಹ ಬಳಗ ಯೋಗ ಸಂಸ್ಥೆ ಹಾಗೂ ಪ್ರಗತಿ ಕ್ರೀಡಾ…

Read More
ಕೆರಳ ರಾಜ್ಯದಲ್ಲಿ ಕನ್ನಡಿಗ ಪತ್ರಕರ್ತನಿಗೆ ಒಲಿದ ಪ್ರಶಸ್ತಿ. ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ಪ್ರಶಸ್ತಿಗೆ ಟಿವಿ-೫ ನಾಗರಾಜ್.ವೈ ಆಯ್ಕೆ.

ಕೆರಳ ರಾಜ್ಯದಲ್ಲಿ ಕನ್ನಡಿಗ ಪತ್ರಕರ್ತನಿಗೆ ಒಲಿದ ಪ್ರಶಸ್ತಿ. ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ಪ್ರಶಸ್ತಿಗೆ ಟಿವಿ-೫ ನಾಗರಾಜ್.ವೈ ಆಯ್ಕೆ.

ಕಾಸರಗೋಡುನಲ್ಲಿ ನಡೆಯುವ ಸಮಾರಂಭದಲ್ಲಿ ಸಭಾಪತಿಗಳು ಸೇರಿದಂತೆ ಹಲವಾರು ಸಚಿವರು ಭಾಗಿ. ಕಾಸರಗೋಡು (ಕೆರಳ) : ಕೇರಳ ರಾಜ್ಯದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವ ಹಾಗೂ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಮಾಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪೈಕಿ ಶ್ರೀ ಜೋಸೆಫ್ ಮಥಾಯಿಸ್ ದುಬೈ ಅವರು ನೀಡುವ ದತ್ತಿನಿಧಿ ಪ್ರಶಸ್ತಿ ಆಯ್ಕೆ ಸಮಿತಿಯು ಕೊಪ್ಪಳ ಜಿಲ್ಲೆಯ ಟಿವಿ-೫ ವಾಹಿನಿಯ ಜಿಲ್ಲಾ ವರದಿಗಾರ ನಾಗರಾಜ್ ವೈ ಅವರನ್ನು ಆಯ್ಕೆ…

Read More
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಜಿಲ್ಲಾ ಮಹಿಳಾ ಯುವ ಘಟಕದ ಪದಾಧಿಕಾರಿಗಳ ನೇಮಕ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಜಿಲ್ಲಾ ಮಹಿಳಾ ಯುವ ಘಟಕದ ಪದಾಧಿಕಾರಿಗಳ ನೇಮಕ.

ಗಂಗಾವತಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಕೊಪ್ಪಳ ಜಿಲ್ಲಾ ಮಹಿಳಾ ಯುವ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಎಂದು ಮಹಾಸಭಾದ ಜಿಲ್ಲಾಧ್ಯಕ್ಷರಾದ ಕಳಕನಗೌಡ ಪಾಟೀಲ್ ಕಲ್ಲೂರು ಪ್ರಕಟಣೆಯಲ್ಲಿ ತಿಳಿಸಿದರು. ಅವರು ಏಪ್ರಿಲ್-೨೦ ಭಾನುವಾರ ಕೊಪ್ಪಳದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿಯಾದ ಕೆ.ಬಿ. ಶ್ರೀನಿವಾಸರೆಡ್ಡಿ, ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಮ.ನಿ.ಪ್ರ.ಸ್ವ ಡಾ. ಮಹಾದೇವಸ್ವಾಮಿಗಳು ಕುಕನೂರು, ಜಿಲ್ಲಾ…

Read More