ಗಂಗಾವತಿ ಮುರಾಹರಿನಗರ ನಿವಾಸಿ ಹನುಮಮ್ಮಗೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ಹಸ್ತಾಂತರ.

ಗಂಗಾವತಿ: ನಗರದ ಮುರಾಹರಿನಗರ ಕಾರ್ಯಕ್ಷೇತ್ರದ ಮಾಶಾಸನ ಪಲಾನುಭವಿ ಹನುಮಮ್ಮ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಹಾಗೂ ಮಾತೋಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಮಾನ್ಯ ನಿರ್ದೇಶಕರಾದ ಪ್ರಕಾಶ್ ರಾವ್ ಸರ್ ಅವರು ವಾತ್ಸಲ್ಯ ನಾಮಫಲಕ ಅನಾವರಣ ಮಾಡುವ ಮೂಲಕ ಉದ್ಘಾಟನೆ ಮಾಡಿದರು ಹಾಗೂ ವಾತ್ಸಲ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜರೀನಾ ಅವರ ಮಗ ಜುಬೇರ ಅವರು, ಯೋಜನೆಯ ಹಿತೈಷಿಗಳಾದ ವಿಶ್ವನಾಥ್, ಶಿವುಕುಮಾರ್ ಅವರು ಅಮರೀಶ್ ಹಾಗೂ ಕೊಪ್ಪಳ ಪ್ರಾದೇಶಿಕ ಜ್ಞಾನ ವಿಕಾಸ ವಿಭಾಗದ ಮಾನ್ಯ ಯೋಜನಾಧಿಕಾರಿಗಳಾದ ಸುಧಾ, ಗಂಗಾವತಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಿರಿಂಜ, ವಲಯದ ಮೇಲ್ವಿಚಾರಕರು ದಯಾನಂದ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ, ಮೇಸ್ತ್ರಿ ಸುರೇಶ ಅವರು ಸೇವಾ ಪ್ರತಿನಿಧಿ ಲತಾ, ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply