ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಗಂಗಾವತಿಯ ಸಂಕಲ್ಪ ಪಿಯು ಕಾಲೇಜಿನ ಶೇ. 76ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಗಂಗಾವತಿಯ ಸಂಕಲ್ಪ ಪಿಯು ಕಾಲೇಜಿನ ಶೇ. 76ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಗಂಗಾವತಿ: ಏಪ್ರಿಲ್‌-08 ಮಂಗಳವಾರ ಪ್ರಕಟವಾದ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ನಗರದ ಸಂಕಲ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇ.76ರಷ್ಟು ಫಲಿತಾಂಶ ಬಂದಿದ್ದು, ಕಲಾ ವಿಭಾಗದಲ್ಲಿ ಜಂಬಣ್ಣ ಎಂಬ ವಿದ್ಯಾರ್ಥಿ, ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ಎಂಬ ವಿದ್ಯಾರ್ಥಿನಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಜಂಬಣ್ಣ ಮಾರೆಪ್ಪ ವಿಭೂತಿ ಶೇ.94.66ರಷ್ಟು (568ಅಂಕ), ದುರುಗೇಶ ಜಂಬಣ್ಣ ವಿಭೂತಿ ಶೇ.93.33 ರಷ್ಟು (560ಅಂಕ) ಹಾಗೂ ಹುಲಿಗೆಮ್ಮ ಕುರಿ ವೆಂಕಟೇಶ ಶೇ. 93. ರಷ್ಟು (558) ಅಂಕ ಪಡೆದುಕೊಂಡಿರುತ್ತಾರೆ.

ಅದೇರೀತಿ ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ನಾಗೇಶ ಶೇ.93.33 (560ಅಂಕ), ಉಷಾರಾಣಿ ಶೇ.92.50 (555) ಹಾಗೂ ಸುಮಾ ಜಡಿಯಪ್ಪ ಶೇ. 92.33 ರಷ್ಟು (554 ಅಂಕ) ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯವಾರು 100ಕ್ಕೆ 100 ಅಂಕಗಳನ್ನು ಕಾಲೇಜಿನಲ್ಲಿ ಒಟ್ಟು ಹನ್ನೆರಡು ಮಕ್ಕಳು ಪಡೆದುಕೊಂಡಿದ್ದು, ಕನ್ನಡದಲ್ಲಿ ಇಬ್ಬರು, ಇತಿಹಾಸ ವಿಷಯದಲ್ಲಿ ಆರು ಜನ, ರಾಜ್ಯಶಾಸ್ತ್ರ ದಲ್ಲಿ ಇಬ್ಬರು, ಶಿಕ್ಷಣಶಾಸ್ತ್ರ ನಾಲ್ಕು ವಿದ್ಯಾರ್ಥಿಗಳು ನೂರು ಅಂಕ ಪಡೆದಿದ್ದಾರೆ.

ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 242 ವಿದ್ಯಾ ರ್ಥಿಗಳಲ್ಲಿ 183 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 44 ಮಕ್ಕಳು ಉನ್ನತ ಶ್ರೇಣಿ, 112-ಪ್ರಥಮದರ್ಜೆ, 22 ದ್ವಿತೀಯ ದರ್ಜೆ, ಐದು ಮಕ್ಕಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.

Leave a Reply