ಜಂಗಮರ ಕಲ್ಗುಡಿ ಹಾಗೂ ಮರಳಿ ಗ್ರಾಮಗಳಲ್ಲಿ ಯಶಸ್ವಿಯಾಗಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಪೂರ್ವಭಾವಿ ಸಭೆ

ಜಂಗಮರ ಕಲ್ಗುಡಿ ಹಾಗೂ ಮರಳಿ ಗ್ರಾಮಗಳಲ್ಲಿ ಯಶಸ್ವಿಯಾಗಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಪೂರ್ವಭಾವಿ ಸಭೆ

ಗಂಗಾವತಿ: ಶನಿವಾರ ಸಾಯಂಕಾಲ ಕಲ್ಗುಡಿ ಗ್ರಾಮದ ಬೆಟ್ಟದ ಲಿಂಗೇಶ್ವರ ದೇವಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಮುಖಂಡರಾದ ಪ್ರಸಾದ್ ಅವರು ಮಾತನಾಡಿ ತುಂಗಭದ್ರಾ ನದಿಯ ಋಣದಲ್ಲಿ ನಾವಿದ್ದೇವೆ, ಆ ಪಾದಯಾತ್ರೆಯಲ್ಲಿ ಎಲ್ಲಾ ಯುವಕರು, ರೈತರು ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಮರಳಿ ಗ್ರಾಮದ ಬೊಳೋಡಿ ಬಸವೇಶ್ವರ ಸಮುದಾಯ ಭವನದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಸಭೆಯಲ್ಲಿ ಪಾಲ್ಗೊಂಡ ಮುಖಂಡರಾದ ರಮೇಶ್ ಕುಲಕರ್ಣಿ ತಿಳಿಸಿದರು.

ಉಭಯ ಸಭೆಗಳಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮತಿಯ ಪ್ರಮುಖರಾದ ಶ್ರೀ ಜಗನ್ನಾಥ ಅಲ್ಲಂಪಲ್ಲಿ, ಮಹಮ್ಮದ್ ರಫಿ, ಡಾ|| ಶಿವಕುಮಾರ್ ಮಾಲಿಪಾಟೀಲ್, ಅರ್ಜುನ್, ಶರಣಬಸವರಾಜ ರೆಡ್ಡಿ, ಯಮನೂರಪ್ಪ ನಾಯಕ್, ಧನಂಜಯ ಉಪ್ಪಾರ, ಗಾದಿಲಿಂಗಪ್ಪ, ವೆಂಕೋಬ ಮೇಲಕ್ರಿ, ನಿರುಪಾದೆಪ್ಪ, ಶರಣಪ್ಪ ಡಿ., ವಿರೇಶಪ್ಪ ಲಕೋಟಿ, ಯಮನೂರಪ್ಪ ನಾಯಕ, ಮನ್ಸೂರ್ ಬೆಗ್, ಮೌಲಾಹುಸೇನ್, ದ್ಯಾಮಣ್ಣ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.

Leave a Reply