ಯುವಜನತೆ ದೇಶದ ಆಸ್ತಿ: ಹೇಮಂತರಾಜ ಕಲ್ಮಂಗಿ

ಯುವಜನತೆ ದೇಶದ ಆಸ್ತಿ: ಹೇಮಂತರಾಜ ಕಲ್ಮಂಗಿ

ಗಂಗಾವತಿ: ನಗರದ ಸಂಕಲ್ಪ ಎಜುಕೇಷನ್ ಟ್ರಸ್ಟ್ (ರಿ) ಅಂಗಸಂಸ್ಥೆಯಾದ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭ ಹಾಗೂ ಎನ್.ಎಸ್.ಎಸ್ ದೈನಂದಿನ ಚಟುವಟಿಕೆಗಳಿಗೆ ಚಾಲನೆಯನ್ನು ಐ.ಎಂ.ಎ ಹಾಲ್‌ನಲ್ಲಿ ನೀಡುತ್ತಾ, ಸಂಸ್ಥೆಯ ಅಧ್ಯಕ್ಷರಾದ ಹೇಮಂತರಾಜ ಕಲ್ಮಂಗಿಯವರು ಮಾತನಾಡಿ ಇಂದಿನ ಯುವ ಜನತೆ ದೇಶದ ಆಸ್ತಿಯಾಗಿದ್ದು, ವೈಯಕ್ತಿಕ-ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ನಡೆದಾಗ ಮಾತ್ರ ದೇಶ ವಿಶ್ವಮಟ್ಟದಲ್ಲಿ ಗೌರವಕ್ಕೆ ಪಾತ್ರವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ನಡೆಯುವಂತೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎಂ.ಆರ್. ಮಂಜುಸ್ವಾಮಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಾ ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಉದ್ಯೋಗವಕಾಶಗಳು ವಿಪುಲವಾಗಿ ದೊರೆಯುತ್ತವೆ. ಇದರ ಮೂಲಕ ವೈಯಕ್ತಿಕ, ಆರ್ಥಿಕ ಭದ್ರತೆ ಲಭಿಸುವುದಲ್ಲದೆ ಸ್ವಾವಲಂಬಿ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ಆಧುನಿಕ ಮಾಧ್ಯಮಗಳ ಸದುಪಯೋಗ ಪಡೆದುಕೊಂಡು ಯಶಸ್ಸನ್ನು ಸಾಧಿಸುವಂತೆ ಮಾರ್ಗದರ್ಶನ ಮಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ನಾಗರಾಜ ಹೆಚ್. ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ವಿದ್ಯಾರ್ಥಿನಿಯರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ನಿರ್ದೇಶಕರಾದ ಡಾ. ಅಮಿತ್‌ಕುಮಾರ ರೆಡ್ಡಿ, ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರಿಸರದಲ್ಲಿ ಸತತ ಪ್ರಯತ್ನ ಮಾಡುತ್ತಾ ಬದುಕನ್ನು ಕಟ್ಟಿಕೊಳ್ಳಲು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತಿವಹಿಸಿದ್ದ ಪ್ರಾಚಾರ್ಯರಾದ ಬಸವರಾಜ ಶಿರಿಗೇರಿಯವರು, ವಿದ್ಯರ್ಥಿನಿಯರು ಯಾವುದೇ ಕೆಲಸ ಮಾಡಬೇಕಾದರೂ ಮೊದಲು ತಮ್ಮ ಕುಟುಂಬ, ತಂದೆ-ತಾಯಿ ಬಗ್ಗೆ ಆಲೋಚಿಸಿ ಮುಂದೆ ಸಾಗಿದರೆ ಖಂಡಿತ ಸಾಧಕಿಯರಾಗುತ್ತಾರೆ ಎಂದು ಹೇಳಿ, ನೂತನ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರಿ ಶುಭಹಾರೈಸಿದರು.

ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಕು. ಮುಸ್ಕಾನ್ ಕಂಫ್ಲಿ ಬಿ.ಕಾಂ ಹಾಗೂ ಸಹಕಾರ್ಯದರ್ಶಿಯಾದ ಕು. ಅಕ್ಷತಾ ಪಂಪಾಪತಿ ಎಲ್ಲಾ ವಿದ್ಯಾರ್ಥಿನಿಯರಿಗೂ ಹೂವು ನೀಡಿ, ಸ್ವಾಗತಿಸಿ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವರಾಜ, ವೈ. ಬಸವನಗೌಡ, ಸುರೇಶ, ಶ್ರೀಮತಿ ಆಶಾ, ಶ್ರೀಮತಿ ಉಷಾದೇವಿ, ರಮೇಶ, ಚನ್ನಬಸವ, ವಿಶ್ವನಾಥ, ಶಿವಶರಣ, ರಾಹುಲ್, ಶ್ರೀಮತಿ ಮೇಘ, ಶರಣಮ್ಮ, ವೆಂಕಟಲಕ್ಷಿö್ಮ, ಗುರುಮೂರ್ತಿ, ಅಶೋಕ ಹೆಚ್.ಎಂ ಸೇರಿದಂತೆ ಇತರರ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿಯಾದ ಶ್ರೀಮತಿ ಸಂಪತ್‌ಕುಮಾರಿ ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀಮತಿ ವಿದ್ಯಾ ಗಣ್ಯರನ್ನು ಸ್ವಾಗತಿಸಿದರೆ, ಶಂಕರ ವರದಾಪುರ ವಂದಿಸಿದರು.

Leave a Reply