ಗಂಗಾವತಿ ಜನಪ್ರೀಯ ಶಾಸಕ ಜನಾರ್ಧನರೆಡ್ಡಿಯವರಿಗೆ ಕನ್ನಡಪ್ರೇಮಿ ಜಿ.ರಾಮಕೃಷ್ಣ ಅವರಿಂದ ಆತ್ಮೀಯ ಸನ್ಮಾನ.

ಗಂಗಾವತಿ: ಕಳೆದ ೨೦೨೩ ರಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಗಂಗಾವತಿ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮವಹಿಸುತ್ತಿರುವ ಮತ್ತು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನೆರವೇರಿಸಲು ಸಹಾಯ, ಸಹಕಾರ ನೀಡಿದ ಜನಪ್ರಿಯ ಶಾಸಕರಾದ ಶ್ರೀ ಗಾಲಿ ಜನಾರ್ಧನರೆಡ್ಡಿಯವರಿಗೆ ಮಾರ್ಚ್-೨೭ ಗುರುವಾರ ಸಾಹಿತ್ಯ ಸಮ್ಮೇಳನದ ವೇದಿಕೆ ಮುಂಭಾಗದಲ್ಲಿ ಶೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷರಾದ ಕನ್ನಡಪ್ರೇಮಿ ಜಿ. ರಾಮಕೃಷ್ಣ ಅವರು ಆತ್ಮೀಯವಾಗಿ ಸನ್ಮಾನಿಸಿದರು.

ಗಾನಯೋಗಿ ಪದ್ಮಭೂಷಣ ಶ್ರೀ ಪುಟ್ಟರಾಜ ಗವಾಯಿಗಳವರ ೧೧೧ನೆಯ ಜಯಂತೋತ್ಸವ. ಸಾಹಿತ್ಯ ಸಂಗೀತ ಒಂದೇ ನಾಣ್ಯದ ಎರಡು ಮುಖಗಳು: ಕಾಶಿಮ್ ಅಲಿ ಮುದ್ದಾಬಳ್ಳಿ.

ಗಂಗಾವತಿ: ಸಾಹಿತ್ಯ, ಸಂಗೀತ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಕನ್ನಡ ಸಾಹಿತ್ಯ ಸಮ್ಮೇಳನದಂಥ ಕಾರ್ಯಕ್ರಮಗಳಲ್ಲಿ ಸಂಗೀತ ಕಲಾವಿದರನ್ನು ನಿರ್ಲಕ್ಷಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸಾಹಿತ್ಯಕ್ಕೆ ಶಕ್ತಿ ತುಂಬುವುದೇ ಸಂಗೀತ. ಅಂತಹ ಅದ್ಭುತ ಶಕ್ತಿಯನ್ನು ಹೊಂದಿದ ಸಂಗೀತ ಪ್ರತಿಯೊಬ್ಬರ ಮನೆಯು ಒಬ್ಬ ಸಂಗೀತಗಾರನ್ನು ಹೊಂದಬೇಕು. ಯಾವುದೇ ಅಂಗವಿಕಲಾಂಗ ಅನಾಥ ಮಕ್ಕಳು ಇದ್ದಲ್ಲಿ ಅಂತಹ ಮಕ್ಕಳನ್ನು ಗದುಗಿನ ವೀರೇಶ್ವರ ಪುಣ್ಯಶ್ರಮಕ್ಕೆ ಸೇರ್ಪಡೆಗೊಳಿಸುವುದರ ಮೂಲಕ ಸ್ವಾವಲಂಬಿ ಬದುಕಿಗಾಗಿ ಸಮಾಜ ಮುಖಿವಾಗಿ ಜೀವಿಸಲು ಅವಕಾಶ ಕಲ್ಪಿಸಬೇಕೆಂದು ಗಾನಯೋಗಿ ಶ್ರೀಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಕಾಶಿಮಲಿ ಮುದ್ದಾಬಳ್ಳಿ ಹೇಳಿದರು.

ಅವರು ಬುಧವಾರದಂದು ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಡಾ. ಪಂಡಿತ್ ಪುಟ್ಟರಾಜ ಸಂಗೀತ ಕಲಾ ಪರಿಷತ್ ಹಾಗೂ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನ ಸಮಿತಿ ಆಯೋಜಿಸಿದ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ೧೧೧ನೇ ಜಯಂತೋತ್ಸವ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದುಗಿನ ಮಾದರಿಯಲ್ಲಿ ಭತ್ತದ ಕಣಜವನ್ನು ಎರಡನೆಯ ಕೈಲಾಸವನ್ನಾಗಿಸಿದ ಕೀರ್ತಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರಿಗೆ ಸಲ್ಲುತ್ತದೆ. ಈ ಹಿಂದಿನಂತೆ ಬೆಳ್ಳಿ ತುಲಾಭಾರವನ್ನು ಗಂಗಾವತಿಯ ಸರ್ವಭಕ್ತರ ಸಹಕಾರದಿಂದ ನಡೆಸುವುದರ ಮೂಲಕ ಅಂಧ ಅನಾಥ ನಿರ್ಗತಿಕರ ಮಕ್ಕಳ ಬದುಕಿಗೆ ಆಸರೆ ಆಗಬೇಕೆಂದು ಸಲಹೆ ನೀಡಿದರು.

ಸಮಾರಂಭದ ಉದ್ಘಾಟನೆಯನ್ನು ಜೆ. ನಾಗೇಶ್‌ರಾವ್ ನೆರವೇರಿಸಿ ಮಾತನಾಡಿ ನಗರದಲ್ಲಿ ಸಾಕಷ್ಟು ಸಂಗೀತ ಶಾಲೆಗಳನ್ನು ಹೊಂದಿದ್ದು, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ, ಸಂಗೀತ ಶಿಕ್ಷಣಕ್ಕೆ ಹೆಚ್ಚಿನ ಅಗತ್ಯ ನೀಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವೆಂಕಟೇಶ್ ದಾಸನಾಳವಹಿಸಿ ಮಾತನಾಡಿ, ಹಾನಗಲ್ಲ ಗುರು ಕುಮಾರಸ್ವಾಮಿಗಳವರ ದಿವ್ಯ ದೃಷ್ಟಿಯ ಫಲವೇ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಡಾ. ಪುಟ್ಟರಾಜ ಗವಾಯಿಗಳು. ಇಂತಹ ದೈವಿ ಪುರುಷರ ಅನುಗ್ರಹದಿಂದ ಸಂಗೀತ ಕ್ಷೇತ್ರ ಸಮೃದ್ಧಿಯಾಗಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಹೊಸಳ್ಳಿ ಶಂಕರಗೌಡ, ಮಲ್ಲಿಕಾರ್ಜುನಗೌಡ ಪಾಟೀಲ್, ಸುದರ್ಶನ್ ಜೋಶಿ, ಬಸವನಗೌಡ ಪಾಟೀಲ್, ದರೋಜಿ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಇದಕ್ಕೂ ಪೂರ್ವದಲ್ಲಿ ರುದ್ರಯ್ಯಸ್ವಾಮಿ ಅಯೋಧ್ಯ ಶ್ರೀ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ವೇದಿಕೆಯಲ್ಲಿನ ಗಣ್ಯರು ಪುಷ್ಪಾರ್ಚನೆ ನಡೆಸಿದರು. ಬಳಿಕ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಿಂದ ತಡರಾತ್ರಿ ೧ ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ಜರುಗಿತು. ಶಿಕ್ಷಕ ಮೈಲಾರಪ್ಪ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನ, ರೇಡಿಯೋ ನಿಲಯದಲ್ಲಿ ಸರ್ವಾಧ್ಯಕ್ಷ ಶ್ರೀ ಲಿಂಗಾರೆಡ್ಡಿ ಆಲೂರು ರವರಿಗೆ ಸನ್ಮಾನ

ಗಂಗಾವತಿ: ೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಲಿಂಗಾರೆಡ್ಡಿ ಆಲೂರು ರವರನ್ನು ಇಂದು ನಗರದ ಗ್ರಾಮೀಣ ಭಾರತಿ ೯೦.೪ ಎಫ್. ಎಂ. ರೇಡಿಯೋ ನಿಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ನಗರದಲ್ಲಿ ಮಾ.೨೭, ೨೮ರಂದು ಹಮ್ಮಿಕೊಳ್ಳಲಾಗಿರುವ ೧೩ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ, ಕಥೆಗಾರ, ಖ್ಯಾತ ನಿರೂಪಕ ಶ್ರೀ ಲಿಂಗಾರೆಡ್ಡಿ ಆಲೂರು ರವರನ್ನು ನಗರದ ವಿವೇಕಾನಂದ ಕಾಲೋನಿಯಲ್ಲಿರುವ ಗ್ರಾಮೀಣ ಭಾರತಿ ೯೦.೪ ಎಫ್.ಎಂ ರೇಡಿಯೋ ನಿಲಯದಲ್ಲಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಆಲೂರುರವರು ನನ್ನ ಸಾಹಿತ್ಯ ಕೃಷಿ, ಕನ್ನಡ ಸೇವೆಯನ್ನು ಗುರುತಿಸಿ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಗರದಲ್ಲಿ ಇದೇ ಮಾರ್ಚ್ ೨೭ ಮತ್ತು ೨೮ ರಂದು ನಡೆಯಲಿರುವ ಸಮ್ಮೇಳನಕ್ಕೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಬಂದು ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ರೇಡಿಯೋ ನಿಲಯದ ನಿರ್ದೇಶಕರಾದ ರಾಘವೇಂದ್ರ ತೂನ, ವ್ಯವಸ್ಥಾಪಕರಾದ ಲಾವಣ್ಯ ಅಂಚಕಟ್ಲು, ಖ್ಯಾತ ನಟ ವಿಷ್ಣುತೀರ್ಥ ಜೋಶಿ, ವಕೀಲರು ಶರದ್ ದಂಡಿನ್, ನಗರಸಭೆ ಸದಸ್ಯ ವಾಸುದೇವ ನವಲಿ, ಸಾಹಿತಿ ಅರಳಿ ನಾಗಭೂಷಣ, ವೀರೇಶ್, ಸುಬ್ರಹ್ಮಣ್ಯ ರಾಯಕರ್, ವಕೀಲರು ಶಿವಾನಂದಸ್ವಾಮಿ ನವಲಿ, ರೂಪನಗೌಡ ಸಂಗಾಪುರ ಸೇರಿದಂತೆ ಇತರರಿದ್ದರು.

NTEP ಕಾರ್ಯಕ್ರಮದಡಿಯಲ್ಲಿ ಉತ್ತಮ ಆಶಾಕಾರ್ಯಕರ್ತೆಯಾಗಿ ಹಿರೇಬೆಣಕಲ್‌ನ ಶಾಂತಮ್ಮ ಬೂದಗುಂಪ ಆಯ್ಕೆ.

ಗಂಗಾವತಿ: ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ NTEP ಕಾರ್ಯಕ್ರಮದ ಅಡಿಯಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಆಶಾ ಕಾರ್ಯಕರ್ತೆ ಶ್ರೀಮತಿ ಶಾಂತಮ್ಮ ಬೂದುಗುಂಪರವರು ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ, ೨೦೨೪ನೇ ಸಾಲಿನ ಅತ್ಯುತ್ತಮ ಉದ್ಯೋಗಿ ಎಂದು ಆಯ್ಕೆ ಮಾಡಲಾಗಿದೆ.

ಅವರಿಗೆ ಮಾರ್ಚ್ ೨೪ ಸೋಮವಾರ ಬೆಳಗ್ಗೆ ೧೦ ಗಂಟೆಗೆ ಕೊಪ್ಪಳದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ವಿಶ್ವ ಕ್ಷಯರೋಗ ದಿನ ೨೦೨೫ ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಹಾಗೂ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಶ್ರೀಮತಿ ಶಾಂತಮ್ಮ ಬೂದಗುಂಪ ಅವರಿಗೆ ಹಿರೇಬೆಣಕಲ್ ಗ್ರಾಮದ ಸಾರ್ವಜನಿಕರು ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.

ಅಪಾರ ಭಕ್ತಸಮೂಹ ಹೊಂದಿದ ಪೂಜ್ಯ ದೊಡ್ಡ ಯಮನೂರಪ್ಪ ನವಣಕ್ಕಿಯವರ ನಿಧನ: ಭಕ್ತ ಸಮೂಹ ಸಂತಾಪ

ಗಂಗಾವತಿ: ಗಂಗಾವತಿಯ ದೈವೀ ಪುರುಷ ಪೂಜ್ಯನೀಯ ಲಿಂಗೈಕ್ಯ ಶ್ರೀ ನವಣಕ್ಕಿ ನಾಗಪ್ಪ ತಾತನವರ ಹಿರಿಯ ಸುಪುತ್ರರಾದ ಪೂಜ್ಯನೀಯ ಶ್ರೀ ದೊಡ್ಡ ಯಮನಪ್ಪ ನವಣಕ್ಕಿಯವರು ತಂದೆಯವರ ಮಾರ್ಗದಲ್ಲಿಯೇ ಸೇವೆಯನ್ನು ಸಲ್ಲಿಸಿ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡಿದ್ದು, ಅವರು ಭಾನುವಾರ ರಾತ್ರಿ ೯ ರ ಸುಮಾರಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವು ಮಾರ್ಚ್-೨೪ ಸೋಮವಾರ ಗಂಗಾವತಿಯ ಜುಲೈನಗರದ ಬೈಪಾಸ್ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿತು.

ಪೂಜ್ಯರ ಆತ್ಮಕ್ಕೆ ಶಾಂತಿ ಸಿಗಲೆಂದು ಕುರುಹಿನಶೆಟ್ಟಿ ಸಮಾಜದ ಯಜಮಾನರುಗಳು, ಎಂ. ಮಲ್ಲಿಕಾರ್ಜುನ ನಾಗಪ್ಪ, ಚೆಗೂರು ಶ್ಯಾಮಣ್ಣ, ಏಳುಬಾವಿ ಕುಬೇರಪ್ಪ, ತಟ್ಟಿ ನಾಗಪ್ಪ, ಶ್ಯಾವಿ ತಿಪ್ಪಣ್ಣ ಹಾಗೂ ಕುರುಗೋಡು ಬಸವರಾಜ ಈ ಎಲ್ಲಾ ಸಮಾಜದ ಯಜಮಾನರು ಹಾಗೂ ಅಪಾರ ಬಂದು ಬಳಗದವರು ಮತ್ತು ಭಕ್ತ ಸಮೂಹದವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ 50ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ, ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

ಗಂಗಾವತಿ: ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾನಗಲ್ ಶ್ರೀಗಳ 11 ದಿನದ ಪುರಾಣ ಕಾರ್ಯಕ್ರಮ ಜರುಗಿಸಲಾಯಿತು.

ಜಾತ್ರಾ ದಿನದ ಅಂಗವಾಗಿ ಶರಣ ಬಸವೇಶ್ವರ ಮೂರ್ತಿಗೆ ಪೂಜಾ ಪುನಸ್ಕಾರ ಹಾಗೂ ಹೋಮ ಹವನಗಳನ್ನು ಅರ್ಚಕರಿಂದ ನೆರೆವೆರಿಸಲಾಯಿತು.

ಬೆಳಗಿನ ಜಾವ ವದುವರರನ್ನು ಕರೆತಂದು ಡಣಾಪೂರ ಗ್ರಾಮದ ತುಂಗಾಭದ್ರ ನದಿಗೆ ತೆರಳಿ ಕುಂಭಕಳಸಗಳಿಂದ ಪೂಜಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಗ್ರಾಮದ ರಾಜ ಬೀದಿಯಲ್ಲಿ ಸಕಲವಾದ್ಯವೃಂದಗಳಿಂದ, ಡೊಳ್ಳು, ವಿವಿದ ಮೇಳಗಳಿಂದ ಶರಣ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಸಕಲ ಭಕ್ತಾದಿಗಳೊಳಗೊಂಡ ಧರ್ಮ ಸಭೆಯಲ್ಲಿ ಮೂರು ನವಜೋಡಿಗಳು ಸಾಮೂಹಿಕ ವಿವಾಹಿತರಾಗಿ ಶ್ರೀ ಶರಣ ಬಸವೇಶ್ವರ ಭಕ್ತಿಗೆ ಪಾತ್ರರಾದರು.  ಬಳಿಕ ಶರಣ ಬಸವೇಶ್ವರ ಜಾತ್ರಮಹೋತ್ಸವಕ್ಕೆ ಆಗಮಿಸಿದ ಸಕಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರೆವೆರಿಸಲಾಯಿತು. ವಿಶೇಷವಾಗಿ ಅನ್ನಸಂತಪರ್ಣೆಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಿ ಭಕ್ತಾದಿಗಳಿಗೆ ನೀರನ್ನು ಲೋಟದಲ್ಲಿ ಸರಬರಾಜು ಮಾಡಿ ಪ್ಲಾಸ್ಟಿಕ್ ಮುಕ್ತ ಮಾಡಲಾಗಿದ್ದು ವಿಶೇಷ, ಗ್ರಾಮದ ಸಕಲರು ಭಾಗಿಯಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನೆರೆವೆರಿಸಿದರು.

ಸಂಜೆ ಶ್ರೀಶರಣ ಬಸವೇಶ್ವರ ಮಹಾರಥೋತ್ಸವಕ್ಕೆ ಹೆಬ್ಬಾಳ ಶ್ರೀಗಳು ಚಾಲನೆ ನೀಡಿದರು. ಈ ವೇಳೆ ತಿರುಪತ್ತೆಪ್ಪ ತಾತನವರು, ಅಯೋದ್ಯ ಹಾಲಮಠ ಗುರುಗಳು ಗ್ರಾಮದ ಹಿರಿಯರು ಭಾಗಿ ಇದ್ದು ಯಶಸ್ವಿಗೊಳಿಸಿದರು.

ಮುಂಬೈನಲ್ಲಿ ಕಿಶೋರ್ ಕುಮಾರ್ ಕಲಾಕೃತಿಗಳ ಪ್ರದರ್ಶನ.

ಮುಂಬಯಿ ಜಹಾಂಗೀರ್ ಆರ್ಟ್ ಗ್ಯಾಲರಿಯ ಆಡಿಟೋರಿಯಂ ಹಾಲ್ ನಲ್ಲಿ ‘ಸಮಗ್ರತೆಗಾಗಿ ಕಲೆ’ ಎಂಬ ಶಿರೋನಾಮೆ ಅಡಿಯಲ್ಲಿ ಶ್ರೀ ಕಿಶೋರ್ ಕುಮಾರ್ ಅವರ ಕಲಾಕೃತಿಗಳ ಪ್ರದರ್ಶನ ನೆಡೆಯಿತು.
ಕಿಶೋರ್ ಕುಮಾರ್ ತಮ್ಮ ವರ್ಣಚಿತ್ರಗಳಲ್ಲಿ ತಿಳಿಸುವ ಎರಡು ಮುಖ್ಯ ಕಾಳಜಿಗಳು ನೋವು ಮತ್ತು ಸಂತೋಷ. ಇವು ಸಾಂಸ್ಕೃತಿಕವಾಗಿ ಪರಸ್ಪರ ವಿರೋಧಾಭಾಸಗಳೆಂದು ಗುರುತಿಸಲ್ಪಟ್ಟಿರುವ ಎರಡು ಅಂಶಗಳಾಗಿವೆ. ಕಲಾವಿದನು ದೈವಿಕ ಚಿತ್ರಣವನ್ನು ಅಥವಾ ದೇಶೀಯ ಮಹಿಳೆಯನ್ನು ಚಿತ್ರಿಸುವ ಮೂಲಕ ‘ನಿರ್ಮಾಣ’ ವನ್ನು ಉದ್ದೇಶಿಸುತ್ತಿದ್ದಾನೆ ಎಂದು ಯೋಚಿಸುತ್ತಿರುವಾಗ ಅವನ ಬೆರಳುಗಳು ಮೊದಲಿಗೆ ವರ್ಣಚಿತ್ರವನ್ನು ಪ್ರದರ್ಶಿಸುವ ದ್ವಿಪಾತ್ರವನ್ನು ನಿರ್ವಹಿಸುತ್ತವೆ. ತದನಂತರ, ಅವರು ತಮ್ಮದೇ ಆದ ರೀತಿಯಲ್ಲಿ, ಬೆರಳುಗಳು ಚಿತ್ರಗಳನ್ನು ಅಳಿಸಿ, ಗೀಚುತ್ತವೆ ಮತ್ತು ಚಿತ್ರಿಸುತ್ತವೆ, ಅದು ಯಾವಾಗಲೂ ಆರಂಭದಲ್ಲಿ ಚಿತ್ರಿಸಿದ ಚಿತ್ರಣವನ್ನು ‘ಬೆಂಬಲಿಸುತ್ತದೆ’. ಇದಕ್ಕೆ ಹೊರತಾಗಿಲ್ಲ. ಅವನ ಮಹಿಳೆಯಂತಹ ಚಿತ್ರಣವು ಅವನ ‘ನೈಪುಣ್ಯದಿಂದ ನಿರೂಪಿಸಲು’ ಒಳಗೆ ಸೀಮಿತವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವನ ಕ್ಯಾನ್ವಾಸ್‌ನ ಅನ್ವೇಷಣೆಯ (ಹೇಳಲು, ಜ್ಞಾನೋದಯ) ಅಗಲ ಮತ್ತು ಆಳ ಏನೇ ಇರಲಿ, ದಶಕಗಳಿಂದ ಗಳಿಸಿದ ತನ್ನ ಕೌಶಲ್ಯವನ್ನು ಮೀರಿದ ಕಲ್ಪನೆಯನ್ನು ಅವನು ಬಿಡುವುದಿಲ್ಲ. ಕಳೆದ ಮೂರು ದಶಕಗಳಿಂದ ಅವರು ಆಯಿಲ್ ಮತ್ತು ಅಕ್ರಿಲಿಕ್ ವರ್ಣಗಳಲ್ಲಿ ಕರ್ನಾಟಕದ ಚಿತ್ರಾತ್ಮಕ ಐತಿಹಾಸಿಕತೆಯಿಂದ ವಿಕಸನಗೊಂಡ ಸಕಾರಾತ್ಮಕವಾದ ಬ್ರಷ್ ಸ್ಟ್ರೋಕ್‌ಗಳ ಕಾರಣದಿಂದಾಗಿ ಇದನ್ನು ಮಾಡಲು ಸಾಧ್ಯವಾಯಿತು.

ಪ್ರತಿಮಾರೂಪದ ದೈವಿಕ ಉಪಸ್ಥಿತಿಯನ್ನು ಅವನ ದೃಶ್ಯ ಉತ್ಪನ್ನಗಳಿಂದ ಪಣಕ್ಕಿಡಲಾಗಿದೆ. ಸಾಮಾನ್ಯವಾಗಿ, ಕಿಶೋರ್ ತನ್ನ ಚಿತ್ರಕಲೆ ತಂತ್ರಗಳ ಅನಿವಾರ್ಯ ಭಾಗವಾಗಿ ಎರಡು ಪರಸ್ಪರ ವಿರುದ್ಧವಾದ ಗುರುತುಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ಮಾಡುತ್ತಾನೆ.
ನಂತರದ ಹಂತದಲ್ಲಿ ಕೆಲವು ಹಂತಗಳಲ್ಲಿ ಅದನ್ನು ಅಳಿಸಲು ಕಲಾವಿದ ಏಕೆ ಚಿತ್ರಿಸುತ್ತಾನೆ ? ಮತ್ತು ಅವನು ಅಳಿಸುವಿಕೆಯಿಂದ ಚಿತ್ರಗಳನ್ನು ಮಾಡುತ್ತಾನೆ. ಇದು ಎರಡು ವಿರುದ್ಧ ದಿಕ್ಕಿನಲ್ಲಿ ಅವರು ನಿರ್ವಹಿಸುವ ವಿಶಿಷ್ಟ ದ್ವಿಪಾತ್ರ. ಪರಿಣಾಮವಾಗಿ ಅವನು ಡಬಲ್-ಸ್ವಯಂ ಸ್ವಾಧೀನಪಡಿಸಿಕೊಳ್ಳುತ್ತಾನೆ. ಅವನು ತನ್ನ ಸ್ವಂತ ದೈವತ್ವವನ್ನು ಸಾಂದರ್ಭಿಕ ವಿಚಾರವಾದದಿಂದ ಪ್ರಶ್ನಿಸಲು ಬಿಡುತ್ತಾನೆ. ಕಿಶೋರ್ ಚಿತ್ರಿಸುವ ರೀತಿ ಮತ್ತು ಅವರ ನೋವು ಮತ್ತು ಸಂತೋಷದ ವಿಷಯಗಳು ಪರಸ್ಪರ ಪೂರಕವಾಗಿವೆ. ವಾಸ್ತವವಾಗಿ, ಪ್ರತಿ ಕ್ಯಾನ್ವಾಸ್ (ಎ) ಎರಡು, (ಬಿ) ಎರಡು ಜಾಗಗಳು ಮತ್ತು (ಸಿ) ಕಡ್ಡಾಯ ಹೊಳಪು ಮತ್ತು ಕತ್ತಲೆಯ ಎರಡು ಜಾಗಗಳು, (ಡಿ) ರಿವರ್ಸಲ್‌ನಲ್ಲಿ ಚಿತ್ರಿಸುವುದರಿಂದ ಹಿಡಿದು ಅವರ ಒಟ್ಟಾರೆ ಚಿತ್ರಕಲೆಯ ಪ್ರಕ್ರಿಯೆಯು ‘ಡ್ರಾಯಿಂಗ್’ ಮೂಲಕ ‘ಬಣ್ಣದ’ ಎರಡು ಪದರಗಳ ನಡುವೆ ಅಡಗಿರುವ ಯಾವುದೋ ಒಂದು ತನಿಖೆಯಲ್ಲ. ಬಣ್ಣದೊಳಗೆ ಹೊಸ ರೇಖೆಗಳನ್ನು ಕಂಡುಹಿಡಿಯುವ ಬದಲು, ಅವರು ಈಗಾಗಲೇ ಸಾರ್ವಜನಿಕವಾಗಿ ಪ್ರತಿಮೆಗೊಳಿಸಲಾದ ಚಿತ್ರಗಳ ಹೊಸ ದೀಪಗಳನ್ನು ಮತ್ತು ಖಾಸಗಿಯಾಗಿ ಅಭಿವೃದ್ಧಿಪಡಿಸಿದ ವರ್ಣಚಿತ್ರ ಶೈಲಿಯನ್ನು ಆವಿಷ್ಕರಿಸಲು ಬಯಸುತ್ತಾರೆ.

ಏಕವ್ಯಕ್ತಿ ಪ್ರದರ್ಶನ

ವೆಂಕಟಪ್ಪ ಆರ್ಟ್ ಗ್ಯಾಲರಿ, ಬೆಂಗಳೂರು (೧೯೮೩). ರವೀಂದ್ರ ಕಲಾ ನಿಕೇತನ, ತುಮಕೂರು (೧೯೮೮, ೧೯೮೯). ಪ್ರಸಾದ್ ಆರ್ಟ್ ಗ್ಯಾಲರಿ, ಮಂಗಳೂರು (೧೯೯೪). ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ‘ದೃಶ್ಯ ಕಾವ್ಯ’ (೨೦೧೮). ಆರ್ಟಿವಲ್, ಸಮಕಾಲೀನ ಕಲಾ ಕಾರ್ಯಕ್ರಮ, ಮುಂಬೈ (೨೦೧೯). ಅನ್‌ಟೋಲ್ಡ್ -೨೦೨೧, ರವೀಂದ್ರ ಕಲಾ ನಿಕೇತನ, ತುಮಕೂರು (೨೦೨೧).

೪೦-ಗುಂಪು ಪ್ರದರ್ಶನಗಳು

ವೆಂಕಟಪ್ಪ ಆರ್ಟ್ ಗ್ಯಾಲರಿ, ಬೆಂಗಳೂರು (೧೯೮೨). ಅಹಮದಾಬಾದ್ (೧೯೮೩). ೭ನೇ ರಾಷ್ಟ್ರೀಯ ಕಲಾ ಮೇಳ, ನವದೆಹಲಿ (೧೯೯೪-೯೫). ಲಲಿತ ಕಲಾ ಅಕಾಡೆಮಿ, ಮದ್ರಾಸ್‌ನಿಂದ ಐದು ಯುವ ಕಲಾವಿದರ ಗುಂಪು (೧೯೯೬). ನೆಹರು ಸೆಂಟರ್, ಮುಂಬೈ (೨೦೦೨). ಅಖಿಲ ಭಾರತ ಪ್ರಾದೇಶಿಕ ಕೇಂದ್ರ, ಮದ್ರಾಸ್ (೨೦೦೩). ವರ್ಣಿಕಾ ಕರ್ನಾಟಕ ಕಲಾ ಪ್ರದರ್ಶನ, ದರ್ಬಾರ್ ಹಾಲ್, ಎರ್ನಾಕುಲಂ (೨೦೦೮). ಅನುಭವ ಕಲೆ – ದಿ ಎಕ್ಸ್ಪ್ಲಿಸಿಟ್ ಅಂಡ್ ದಿ ಇಂಪ್ಲಿಸಿಟ್, ಕರ್ನಾಟಕ ಸಂಘ, ನವದೆಹಲಿ (೨೦೦೯). ಮೈಸೂರಿನ ಶ್ರೀ ಕಲಾನಿಕೇತನದಲ್ಲಿ ಸಮಗ್ರತೆಗಾಗಿ ಕಲೆ (೨೦೧೮). ನವದೆಹಲಿಯ ಲಲಿತ ಕಲಾ ಅಕಾಡೆಮಿಯಲ್ಲಿ ಟೇಲ್ಸ್ ಅನ್ಟೋಲ್ಡ್ ಗ್ರೂಪ್ ಶೋ (೨೦೨೪).

ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು.

ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು 81 ರಿಂದ 85 ,
88 ರಿಂದ 2001, ನ್ಯಾಷನಲ್ ಲಲಿತಕಲಾ ಅಕಾಡೆಮಿ ನ್ಯೂ ಡೆಲ್ಲಿ,93, 2018, ನಾಗಪುರ ಎಸ್ ಸಿ ಇ ಝಡ್, 2000 ರಿಂದ 2004, ಆಲ್ ಇಂಡಿಯಾ ಹಾರ್ಟ್ ಕಾಂಪಿಟಿಷನ್, AIFAX, ನವದೆಹಲಿ,2024

ಪ್ರಶಸ್ತಿಗಳು :

ಅತ್ಯುತ್ತಮ ಚಿತ್ರಕಲೆ ಪ್ರಶಸ್ತಿ, ದಿ ಐಡಿಯಲ್ ಫೈನ್ ಆರ್ಟ್ ಇನ್ಸ್ಟಿಟ್ಯೂಟ್, ಗುಲ್ಬರ್ಗಾ (೧೯೮೧). ಅಖಿಲ ಭಾರತ ಕಲಾ ಪ್ರದರ್ಶನ, ಮೈಸೂರು ದಸರಾದಲ್ಲಿ ಮೈಸೂರಿನಲ್ಲಿ (೧೯೮೫, ೧೯೯೧, ೧೯೯೩, ೧೯೯೫, ೧೯೯೬, ೧೯೯೭, ೨೦೦೦, ೨೦೦೨). ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ (೧೯೯೪). ಎಲ್ಲದರಲ್ಲೂ ಮೆರಿಟ್ ಪ್ರಶಸ್ತಿ
ಭಾರತ ಕಲಾ ಪ್ರದರ್ಶನಗಳು, SಅZಅಅ, ನಾಗ್ಪುರ (೧೯೯೫). ತುಮಕೂರಿನಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ (೨೦೦೨). ಶ್ರೀ ಪಿ.ಆರ್. ತಿಪಸ್ವಾಮಿ ಪ್ರಶಸ್ತಿ (೨೦೦೯-೨೦೧೦). ಕಲರ್ ವಿಂಗ್ಸ್ನಿಂದ ನಬಂಕೂರ್ ಕಲಾ ಭವನದಿಂದ ‘ಗೋಲ್ಡನ್ ಅವಾರ್ಡ್’ (೨೦೨೦). ಶೃಂಗಾರಪ್ರಕಾಶನ ಪ್ರಶಸ್ತಿ, ಬೆಂಗಳೂರು (೨೦೨೨). ಪಾರ್ಶ್ವಪದಪ್ ರಾಷ್ಟ್ರೀಯ ಪ್ರಶಸ್ತಿ, ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ (೨೦೨೪).
೫೦- ಶಿಬಿರಗಳು:
ರಾಜ್ಯ ಮಟ್ಟದ ಗ್ರಾಫಿಕ್ ಕಾರ್ಯಾಗಾರ, ಸಿ.ಕೆ.ಪಿ., ಬೆಂಗಳೂರು (೧೯೮೫). ಯುವ ಕಲಾವಿದರ ಶಿಬಿರ, ಕರ್ನಾಟಕ ಲಲಿತ ಕಲಾ ಅಕಾಡೆಮಿ, ಮೈಸೂರು (೧೯೯೧). ರಾಜ್ಯ ಮಟ್ಟದ ಗ್ರಾಫಿಕ್ ಶಿಬಿರ, ಲಲಿತ ಕಲಾ ಅಕಾಡೆಮಿ, ಬೆಂಗಳೂರು (೧೯೯೪ಕರ್ನಾಟಕ ಲಲಿತ ಕಲಾ ಅಕಾಡೆಮಿ, ದಾವಣಗೆರೆ (೧೯೯೭). ೫೦-ವರ್ಷದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರು (೧೯೯೮). ೫೦-ವರ್ಷದ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ (೧೯೯೮). ಭಾರತ ಕಲಾವಿದರ ಶಿಬಿರ, SಅZಅಅ, ನಾಗ್ಪುರ (೨೦೦೧) ಕುಪ್ಪಳ್ಳಿಯಲ್ಲಿನ ಕಲಾವಿದರ ಶಿಬಿರ (೨೦೦೭), ಲಲಿತ್ ಕಲಾ ಅಕಾಡೆಮಿಯಿಂದ ಕೆ.ಎಸ್. ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನಲ್ಲಿ ಜಾಂಬೋರಿ ರಾಷ್ಟ್ರೀಯ ಚಿತ್ರಕಲಾ ಶಿಬಿರ (೨೦೨೨) ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಿಂದ (೨೦೨೪).

ಸಂಗ್ರಹಣೆ:

ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು; ಲಲಿತ ಕಲಾ ಅಕಾಡೆಮಿ, ನವದೆಹಲಿ, ಕರ್ನಾಟಕ ಮತ್ತು ವಿದೇಶದಾದ್ಯಂತ ಅನೇಕ ಖಾಸಗಿ ಸಂಗ್ರಹಣೆಗಳು.

ಜನನ: ೧೯೬೨ ರಲ್ಲಿ  ಗೋಗಿ, ಗುಲ್ಬರ್ಗಾ,
ವಿದ್ಯಾಭ್ಯಾಸ: ಐಡಿಯಲ್ ಫೈನ್ ಆರ್ಟ್ ಇನ್ಸ್ಟಿಟ್ಯೂಟ್, ಗುಲ್ಬರ್ಗಾದಿಂದ ಆರ್ಟ್ ಮಾಸ್ಟರ್ ಅನ್ನು ಪೂರ್ಣಗೊಳಿಸಿದರು (೧೯೮೨). ಐಡಿಯಲ್ ಫೈನ್ ಆರ್ಟ್ ಇನ್ಸ್ಟಿಟ್ಯೂಟ್, ಗುಲ್ಬರ್ಗಾ (೧೯೮೧) ನಿಂದ ಜಿ.ಡಿ. ಬಿ.ಎಫ್.ಎ. ಗ್ರಾಫಿಕ್‌ನಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ (೨೦೦೦). ಎಂ.ವಿ.ಎ. ಚಿತ್ರಕಲೆಯಲ್ಲಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೬). ತುಮಕೂರಿನ ರವೀಂದ್ರ ಕಲಾನಿಕೇತನದ ನಿವೃತ್ತ ಪ್ರಾಂಶುಪಾಲರು (೨೦೨೧).

ಗೊರೂರು ಅನಂತರಾಜು
ಹಾಸನ
9449462879

ಶ್ರೀ ತಿಮ್ಮನಾಯ್ಕ್ ಅವರಿಗೆ ರಾಷ್ಟ್ರ ಮಟ್ಟದ ಗಾನ ಕೋಗಿಲೆ ಪ್ರಶಸ್ತಿ ಪ್ರದಾನ

ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲೂಕಿನ ಮುದ್ಲಾಪುರ ಹೊಸ ತಾಂಡ, ಸೋವೇನಹಳ್ಳಿ ಗ್ರಾಮದ ಶ್ರೀ ತಿಮ್ಮನಾಯ್ಕ್ ತಂದೆ ದೇವಲಾನಾಯ್ಕ್ ಇವರು ಬಡ ಗಾಯಕ ಕಲಾವಿದರು. ಇವರ ಸಾಧನೆಯನ್ನು ಗುರುತಿಸಿ, ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ. ಜಿಲ್ಲಾ ಘಟಕ ಶಿವಮೊಗ್ಗದಲ್ಲಿ ಜರುಗಿದ ರಾಷ್ಟ್ರ ಮಟ್ಟದ ನುಡಿ ವೈಭವ ಕಾರ್ಯ ಕ್ರಮದಲ್ಲಿ ಶ್ರೀ ತಿಮ್ಮನಾಯ್ಕ್ ಇವರಿಗೆ ರಾಷ್ಟ್ರ ಮಟ್ಟದ ಗಾನ ಕೋಗಿಲೆ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಧು ನಾಯ್ಕ್ ಮತ್ತು ಬರಹಗಾರರ ಸಂಘದ ಗೌರವಾಧ್ಯಕ್ಷರಾದ ಗೊರೂರು ಅನಂತರಾಜು ಹಾಗೂ ಹಿರಿಯ ಸಾಹಿತಿಗಳು ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಶ್ರೀ ತಿಮ್ಮ ನಾಯ್ಕ್ ಇವರಿಗೆ ರಾಷ್ಟ್ರ ಮಟ್ಟದ ಗಾನ ಕೋಗಿಲೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

ಮಹಿಳೆಗೆ ಅನುಕಂಪ ಬೇಡ, ಅವಕಾಶ ನೀಡಿ: ಡಾ.ಶೋಭಾ.ಕೆ.ಎಸ್.

ಇಂದು ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಮಾರಂಭವನ್ನು ಜ್ಯೋತಿ ಬೆಳಗಿ ವಿನೂತನ ವಿಶೇಷ ರೀತಿಯಲ್ಲಿ ತೊಟ್ಟಿಲು ತೂಗುವ ಮೂಲಕ ಉದ್ಘಾಟಿಸಿದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಶೋಭಾ.ಕೆ.ಎಸ್.ರವರು ಇತ್ತೀಚಿನ ಶತಮಾನಗಳಲ್ಲಿ ಮಹಿಳೆ ಆಧುನಿಕ ಯುಗದಲ್ಲಿ ತೀವ್ರವಾಗಿ ಸದೃಢವಾಗುತ್ತಿರುವುದರಿಂದ ಮಹಿಳೆಗೆ ಅನುಕಂಪ ಬೇಡ ಅವಕಾಶ ನೀಡಿ ಎಂದು ಕರೆಕೊಟ್ಟರು.

ಕಾರ್ಯಕ್ರಮದ ಘನ ಉಪಸ್ಥಿತರಿದ್ದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಕರಿಗೂಳಿ ಯವರು ಸರ್ವ ರಂಗಗಳಲ್ಲಿ ಮಹಿಳೆಗೆ ಸಮಾನತೆ ಸಿಗಬೇಕು. ತಾಯಿ, ಹೆಂಡತಿ, ಸಹೋದರಿಯಾಗುವ ಮಹಿಳೆ ಉನ್ನತ ಶಿಕ್ಷಣ ಕಲಿತು ಅತ್ಯುನ್ನತ ಹುದ್ದೆಗೆ ಅಲಂಕೃತರಾಗಬೇಕೆಂದು ಆಶಿಸಿದರು.

ಘನ ಉಪಸ್ಥಿತರಿದ್ದ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಸರ್ಫರಾಜ್ ಅಹ್ಮದ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಪ್ರತಿಯೊಬ್ಬರೂ ತಾಯಿ ಮುಖ್ಯ.ಅಲ್ಲದೇ ಶಿಕ್ಷಣದಿಂದ ತಮ್ಮ ಗುರಿಗಳು ಅತ್ಯುತ್ತವಾಗಲೆಂದು ಶುಭಕೋರಿದರು.

ಬೋಧಕೇತರರಾದ ಶ್ರೀಮತಿ ಜಬೀನಾ ಬೇಗಂ ಅವರು ಮಾತನಾಡಿ ಸರ್ವಸಮತೆಯ ಬಾಳು ಬೇಕೆಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಹಾಗೂ ಮಹತ್ವ, ಪ್ರಸ್ತುತ ದಿನಗಳಲ್ಲಿ ಮಹಿಳೆಯ ಸ್ಥಾನದ ಕುರಿತು ಪ್ರಾಸ್ತಾವಿಕವಾಗಿ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ತಾತಪ್ಪ.ಕೆ ಇವರು ಅಭಿಪ್ರಾಯಿಸಿದರು.

ಸದರಿ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಲಾಯಿತು, ನಾಡಿನ ಮಹಿಳಾ ಸಾಧಕಿಯರ ಕುರಿತಾಗಿ ಕಾಲೇಜಿನ ಮಹಿಳಾ ವಿದ್ಯಾರ್ಥಿಗಳೇ ಭಾಷಣ ಮಾಡಿದರು.

ವಿದ್ಯಾರ್ಥಿನಿಯರಾದ ಸೂಫಿಯಾ ರವರು ಸಿಂಧುತಾಯಿ ಸಕ್ಪಾಲ್ ರ ಕುರಿತು, ಲಾವಣ್ಯರವರು ಸೂಲಗಿತ್ತಿ ನರಸಮ್ಮರ ಕುರಿತು , ರಾಧಿಕಾರವರು ತುಳಿಸಿಗೌಡ, ಪಲ್ಲವಿಯವರು ಸುನೀತಾ ವಿಲಿಯಮ್ಸ್, ಗಾಯತ್ರಿ ಎಂಬ ವಿದ್ಯಾರ್ಥಿನಿ ಭೀಮವ್ವ ದೊಡ್ಡ ಬಾಳಪ್ಪರ ಕುರಿತು ಮಹೇಶ್ವರಿರವರು ಅಕ್ಕಮಹಾದೇವಿ, ಅಂಬ್ರೀನ್ ಬೇಗಂ ಅವರು ಬಾನು ಮುಷ್ತಾಕ್ ರವರ ಕುರಿತು ವಿಚಾರ ಮಂಡನೆ ಮಾಡಿದರು, ನಂತರ ಕಾರ್ಯಕ್ರಮದಲ್ಲಿ ವಿಷಯಮಂಡನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ಉಡುಗೊರೆ ನೀಡಿ ಪ್ರೋತ್ಸಾಹ ಗೌರವ ನೀಡಲಾಯಿತು.

ಇದೇ ಸಂದರ್ಭದಲ್ಲಿ ವಾಣಿಜ್ಯ ಶಾಸ್ತ್ರದ ಡಿಜಿಟಲ್ ಮಾರ್ಕೆಟಿಂಗ್ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಅಖಿಲಾಂಡೇಶ್ವರಿ ವಾಸಂಶೆಟ್ಟಿ ಇವರನ್ನು ಗೌರವಿಸಲಾಯಿತು.

ಇತ್ತೀಚೆಗೆ ಆಂಧ್ರಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಪ್ರಾಂಶುಪಾಲರಾದ ಡಾ.ಶೋಭಾ.ಕೆ.ಎಸ್ ಅವರನ್ನು ಹಾಗೂ ಮಹಿಳಾ ಸಿಬ್ಬಂದಿಯವರಾದ ಸಂಧ್ಯಾ, ಜಬೀನಾ ಬೇಗಂ, ಶಾಂತಮ್ಮ, ಸಾವಿತ್ರಮ್ಮ ಇವರನ್ನು ಸನ್ಮಾನಿಸಲಾಯಿತು.

ಪ್ರಾಧ್ಯಾಪಕರಾದ ರವಿಕುಮಾರ್, ವಿರೂಪಾಕ್ಷ, ಶಂಕ್ರಪ್ಪ, ಶಶಿಕುಮಾರ್, ವೆಂಕಟರಾಜು, ಪೀರಾವಲಿ, ದೇವರಾಜ್, ಪರಶುರಾಮ್,ಈಶಪ್ಪ ಮೇಟಿ, ದುರ್ಗಾ ಕೃಷ್ಣ, ಉಪಸ್ಥಿತರಿದ್ದರು.

ರತ್ನಾ, ನಿರ್ಮಲ ಸ್ವಾಗತಿಸಿದರೆ, ದಾಕ್ಷಾಯಿಣಿ, ರಕ್ಷಿತಾ, ಪ್ರತಿಭಾ, ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಸಮಸ್ತ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದರು

ಅದ್ಧೂರಿಯಾಗಿ ಜರುಗಿದ ಶ್ರೀಗುರು ಬೆಟ್ಟದಲಿಂಗೇಶ್ವರ ಜಾತ್ರಾ ಮಹೋತ್ಸವ

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ೧೩೩ನೇ ಶ್ರೀಗುರು ಬೆಟ್ಟದೇಶ್ವರ ಶ್ರೀಗುರು ಲಿಂಗೇಶ್ವರರ ಜಾತ್ರಾ ಮಹೋತ್ಸವದ ಜೋಡು ರಥೋತ್ಸವವು ಮಾರ್ಚ್-೨೨ ಶನಿವಾರ ಅದ್ಧೂರಿಯಗಿ ಜರುಗಿತು.

ಹಿಂದಿನ ದಿನ ಮಾರ್ಚ್-೨೧ ಶುಕ್ರವಾರ ೧೩೩ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿದ್ದು, ಮಾರ್ಚ್-೨೨ ಫಾಲ್ಗುಣ ಬಹುಳ ಅಷ್ಠಮಿ ಶನಿವಾರ ಬೆಳಗಿನ ಜಾವ ೫:೩೦ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, ೧೧:೧೫ ರಿಂದ ೧೨:೧೫ ರವರೆಗಿನ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಜರುಗಿದವು. ಮದ್ಯಾಹ್ನ ಮಹಾಪ್ರಸಾದ ಕಾರ್ಯಕ್ರಮ ಜರುಗಿತು. ಸಂಜೆ ೫:೦೦ ಗಂಟೆಗೆ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವ ನಡೆಯಿತು.

ಈ ಉತ್ಸವದ ಸಾನಿಧ್ಯವನ್ನು ಹೆಬ್ಬಾಳ ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಶಾ.ಗ ಹೂವಿನಹಡಗಲಿ ಶ್ರೀ ಮ.ನಿ.ಪ್ರ. ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.

ಈ ಜಾತ್ರಾ ಮಹೋತ್ಸವದಲ್ಲಿ ಮಾಜಿ ಶಾಸಕ ಪರಣ್ಣ್ಣ ಮುನವಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಗೂ ಚಿಕ್ಕಬೆಣಕಲ್ ಹಾಗೂ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು.
ಮಾರ್ಚ್-೨೩ ಭಾನುವಾರ ಸಂಜೆ ಕಡುಬಿನ ಕಾಳಗ ನಡೆಯಲಿದೆ.