ಸಮಾಜಸೇವಕ ಪಿ. ನವೀನ್ ಕುಮಾರ್ ರವರ ೩೨ನೇ ವರ್ಷದ ಜನ್ಮದಿನ ಅರ್ಥಪೂರ್ಣವಾಗಿ ಆಚರಣೆ

ಪಿ.ನವೀನ್ ಕುಮಾರ್ ಬಳ್ಳಾರಿಯವರು ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಪಂಪಾಸರೋವರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಅವರು ತಮ್ಮ ೩೨ನೇ ಜನ್ಮದಿನವನ್ನು ಗಂಗಾವತಿಯ ಲಯನ್ಸ್ ಚಾರಿಟೇಬಲ್ ಟ್ರಸ್ಟ್ನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿಅನ್ನ ಸಂತರ್ಪಣೆ ಮಾಡಿ ಆಚರಿಸಿಕೊಂಡರು.

ಕೇಕ್ ಕತ್ತರಿಸುವುದರ ಮೂಲಕ ಹಾಗೂ ಪಂಪಾ ಸರೋವರದಲ್ಲಿರುವ ಎಲ್ಲಾ ಆಟೋ ಚಾಲಕರಿಗೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡುವ ಮೂಲಕ ಸರಳತೆಯಿಂದ ಆಚರಿಸಿಕೊಂಡರು.

ಅನ್ನಸಂತರ್ಪಣೆ ಮಾಡಿ ಮಾತನಾಡಿದ ಅವರು ಬುದ್ಧಿಮಾಂದ್ಯ ಶಾಲೆಯಲ್ಲಿ ೩೨ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದು ತುಂಬಾ ಸಂತೋಷವಾಗಿದೆ.

ಪಂಪಾ ಸರೋವರದ ಶ್ರೀ ವಿಜಯಲಕ್ಷ್ಮಿ ಅಮ್ಮನವರ ಆಶೀರ್ವಾದದಿಂದ ಕಿಷ್ಕಿಂದಾ ಭಾಗದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಗೆಳೆಯರ ಬಳಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲು ನಿರ್ದರಿಸಿತು.

ಮುಂದಿನ ದಿನಗಳಲ್ಲಿ ಕಾರ್ಯಯೋಜನೆಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.

ಗೆಳೆಯರ ಬಳಗದ ಪ್ರಮುಖರಾದ ಹನುಮನಹಳ್ಳಿ ಬಾಲು, ರಾಘು ಪಂಪಾಸರೋವರ, ಜವಳಿ ಮಂಜುನಾಥ್, ಚಂದ್ರು, ವೀರೇಶ ಆನೆಗುಂದಿ ಹಾಗೂ ಬಸವನಗೌಡ ಹಿರೇಬೆಣಕಲ್ ಸೇರಿದಂತೆ ನೂರಾರು ಸಂಖ್ಯೆಯ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ ಗೊರೂರು ಅನಂತರಾಜು, ಹಾಸನ.

ಹಾಸನ ತಾಲ್ಲೂಕು ಮುಟ್ಟನಹಳ್ಳಿಯ ಲೇಖಕರಾದ ತ್ಯಾಗರಾಜ್ ಮತ್ತು ತಂಡ ಪ್ರಸಿದ್ಧ ಚಾರಣಕ್ಕೆ ಹೆಸರು ವಾಸಿಯಾದ ಪುಷ್ಪಗಿರಿ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಬಂದ ಸಾಹಸ ಕಥನವನ್ನು ಸ್ವಾರಸ್ಯಕರವಾಗಿ ಮಿನಿ ಕಾದಂಬರಿ ಸ್ವರೂಪದಲ್ಲಿ ಓದಿಸಿಕೊಂಡು ಹೋಗುವಂತೆ ಬಣ್ಣಿಸಿದ್ದಾರೆ.

ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ.

ಇಂತಹ ಚಾರಣದ ಅನುಭವವನ್ನು ಬರಹಕ್ಕಿಳಿಸುವುದು ಒಂದು ಕೌಶಲ್ಯವೆ ಸರಿ. ಆಧುನಿಕತೆ, ಲೋಕಜ್ಞಾನ ಬೆಳೆದಂತೆ ಬರಹವೂ ಕೂಡ ಹೊಸತು ಕಂಡುಕೊಳ್ಳುತ್ತಿದೆ.

ನಾವು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳನ್ನು ಓದುವಾಗ ಮಲೆನಾಡಿನ ಜನಜೀವನ ಹಾಗೂ ಪರಿಸರದಲ್ಲಿ ತೆರೆದುಕೊಂಡಂತೆ ಇಲ್ಲಿಯ ಚಾರಣದಲ್ಲಿ ದಟ್ಟ ಅರಣ್ಯ ಪರಿಸರ ಪಿಕ್ನಿಕ್ ಕಥನದಲ್ಲಿ ರೂಪುಗೊಳ್ಳುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ದೇವಸ್ಥಾನಗಳು, ಪ್ರವಾಸಿ ತಾಣಗಳು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅನುಭವವನ್ನು ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಬರೆಯುತ್ತಿರುತ್ತೇನೆ.

ಆಗುಂಬೆ ಎಸ್.ನಟರಾಜ್‌ರಂತಹ ಲೇಖಕರು ಬರೆದ ತಮ್ಮ ಪ್ರವಾಸಾನುಭವವನ್ನು ಜೊತೆಗೆ ಆ ಸ್ಥಳದ ಐತಿಹಾಸಿಕ ಹಿನ್ನೋಟದ ಜೊತೆಗೆ ಸುಧೀರ್ಘವಾಗಿ ಬರೆದ ಪುಸ್ತಕಗಳನ್ನು ಓದುತ್ತಿದ್ದೇನೆ.

ಯೂ ಟ್ಯೂಬ್‌ನಂತಹ ದೃಶ್ಯ ಮಾಧ್ಯಮಗಳಲ್ಲಿ ಕ್ಯಾಮರ, ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿ ಪ್ರಸಿದ್ಧ ತಾಣಗಳನ್ನು ಕಣ್ಣಮುಂದೆಯೇ ಕಟ್ಟಿಕೊಡುವುದನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇನೆ.

ಈ ದಿಸೆಯಲ್ಲಿ ಚಾರಣ ಹೊರಟ ಲೇಖಕರು ತ್ಯಾಗರಾಜ್ ಮತ್ತು ಆರು ಮಂದಿಯ ತಂಡ ಮಂಜಿನ ದಾರಿಯಲ್ಲಿ ಬೆಟ್ಟ ಹತ್ತಿ ಇಳಿದು ಬಂದ ಚಾರಣದ ಸಾಹಸ ಕಥೆ ಸಹಜ ಬರವಣಿಗೆಯಲ್ಲಿ ನಿರೂಪಿತವಾಗಿದೆ.

ಹಾಗೆಯೇ ತಮ್ಮ ಪ್ರತಿ ಹೆಜ್ಜೆಯನ್ನು ದಾಖಲಿಸುತ್ತಾ ಸಾಗುವ ಚಾರಣದ ಅನುಭವ ಲೇಖಕರ ಬರಹ ಶೈಲಿಯಿಂದ ಓದುಗರಿಗೂ ಬೋರಾಗದೆ ಓದಿಸಿಕೊಂಡು ಹೋಗುತ್ತದೆ.

ಎಲ್ಲೋ ನಾವೇ ಆ ಪಯಣದಲ್ಲಿ ಭಾಗಿಯಾದಂತೆ ಕಣ್ಮುಂದೆ ದೃಶ್ಯ ಗೋಚರಿಸುತ್ತದೆ.

ಕಡೆಯಲ್ಲಿ ಒಂದು ನಿತ್ಯ ಹರಿದ್ವರ್ಣದ ಕಾಡಿನ ಪಯಣವು ಹಚ್ಚ ಹಸಿರಾಗಿ ಮನದಲ್ಲಿ ಉಳಿದುಬಿಡುತ್ತದೆ.

ಲೇಖಕರ ಮೊದಲ ಕಂತಾದ ಈ ಪುಸ್ತಕ ೪೪ ಪುಟಗಳ ವಿಸ್ತಾರದಲ್ಲಿ ಹರಡಿಕೊಂಡಿದೆ ಹಾಗೂ ಚಾರಣದ ಸರಣಿಗಳು ಭಾಗ-೧ ಎಂದೇ ಹೆಸರಿಡಲಾಗಿದೆ.

ಅಲ್ಲದೆ ಇನ್ನು ಮುಂದೆಯೂ ಸಹ ಲೇಖಕರು ಹೊಸ ಹೊಸ ಪ್ರದೇಶಗಳಿಗೆ ಚಾರಣ ಮಾಡಿದ ಅನುಭವ ದಾಖಲಿಸಿ ಕೃತಿ ರೂಪದಲ್ಲಿ ಪ್ರಕಟಿಸುವ ಇಂಗಿತ ಅಭಿವ್ಯಕವಾಗಿದೆ.

ಲೇಖಕರು ಹಲವಾರು ಸಾಹಸ ಚಾರಣಗಳನ್ನು ಮಾಡಿರುವ ಅನುಭವ ದಟ್ಟವಾದಂತಿದೆ. ಈ ಲೇಖನವು ಮುಂದೆ ಈ ಪ್ರದೇಶದಲ್ಲಿ ಚಾರಣ ಮಾಡುವ ಸಾಹಸಿಗರಿಗೆ ಮಾರ್ಗದರ್ಶಿ ಗೈಡ್ ಆಗುವುದು ನಿಶ್ಚಿತ.

ಪ್ರಸ್ತುತ ಈ ಕೃತಿಯ ಪುಷ್ಪಗಿರಿ ಬೆಟ್ಟಕ್ಕೆ ಚಾರಣ ಮಾಡುವವರಿಗೆ ಉಪಯುಕ್ತವಾಗಿದೆ. ಹಾಗೆಯೇ ಒಮ್ಮೆ ಓದಿಸಿಕೊಳ್ಳುವ ಸದಭಿರುಚಿಯ ಕೃತಿಯಾಗಿದೆ.

ಜಿಲ್ಲಾ ಮಟ್ಟದ ಚೆಸ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

ಗಂಗಾವತಿ: ಸೆಪ್ಟೆಂಬರ್-೦೧ ರಂದು ಜಿಲ್ಲಾ ಕ್ರೀಡಾಂಗಣ ಕೊಪ್ಪಳ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆ, ಶೆಟಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಈ ಸ್ಪರ್ಧೆಯಲ್ಲಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಪ್ರಾಥಮಿಕ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಸಮೀಕ್ಷಾ, ಶಿವರಾಜ್ ಮತ್ತು ಬಾಲಕಿಯರ ಪ್ರೌಢ ವಿಭಾಗದಲ್ಲಿ ಸೃಜನಾ ಪ್ರಥಮ ಸ್ಥಾನ ಪಡೆದು, ಮುಂದೆ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅದೇರೀತಿ ನಿವೇದ, ರಾಮ್ ಸೂರ್ಯ, ವೈಭವ್, ಶಿವಕುಮಾರ್, ಧನುಷ್ ಬಾಲಕರ ಪ್ರಾಥಮಿಕ ವಿಭಾಗದ ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ನಾಳೆಗಳು ನಮ್ಮದೆನಿಸಿವೆ ಭರವಸೆಯ.. ತಾಯಿ ಮತ್ತು ಅವಳಿ ಮಕ್ಕಳ ಕಲಾಪರಿಚಯ – ಗೊರೂರು ಅನಂತರಾಜು, ಹಾಸನ.

ನಾಳೆಗಳು ನಮ್ಮದೆನಿಸಿವೆ ಭರವಸೆಯ ನಾಳೆಗಳು ನಮ್ಮದೆನಿಸಿವೆ ಎಂಬ ಒಂದು ಸೊಗಸಾದ ಹಾಡಿಗೆ ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಕಲ್ಲುರೋಡ ಗ್ರಾಮದ ಮಹಾನಂದ ಮಠಪತಿ ಮೇಡಂ ತಮ್ಮ ಕಲೆಗಾರಿಕೆ ಪೋಟೋಗಳನ್ನು ಅಳವಡಿಸಿ ಒಂದು ವಿಡಿಯೋ ಮಾಡಿದೆ.

ಅದನ್ನು ಹೂವಿನಹಡಗಲಿಯ ಕತೆಗಾರ ಮಧುನಾಯ್ಕ್ ಲಂಬಾಣಿ ಗ್ರೂಪ್‌ನಲ್ಲಿ ಹಾಕಿದ್ದರು.

ಅನಂತರಾಜ್ ಸರ್, ಚಿಕ್ಕಮಗಳೂರಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಬರಹಗಾರರ ಸಂಘ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಕಾರದಲ್ಲಿ ಇತ್ತೀಚಿಗೆ ನಡೆಸಿತ್ತಲ್ಲಾ ರಾಜ್ಯಮಟ್ಟದ ಗಾಯನ ಸ್ಫರ್ಧೆ ಇಲ್ಲಿ ಭಾಗವಹಿಸಿದ್ದ ಗಾಯಕಿ ಮಹಾನಂದ ಮಠಪತಿ ಮಗಳು ನೃತ್ಯಗಾರ್ತಿ ಅಭಿಶ್ರೀ ಇವರ ಕಲಾ ಪರಿಚಯ ಮಾಡಿ ಎಂದು ಕೊಂಚವೆ ಮಾಹಿತಿ ಕಳಿಸಿದ್ದರು.

ಅಲ್ಲಿ ತೀರ್ಪುಗಾರನಾಗಿ ಭಾಗವಹಿಸಿದ್ದ ನಾನು, ಮೇಡಂ ರ ಹಾಡನ್ನು ಆಗ ಕೇಳಿದ್ದೆನು, ಆದರೆ ಪರಿಚಯ ಇರಲಿಲ್ಲ. ಮೇಡಂ ನಂಬರ್ ಪಡೆದು ಮಾತನಾಡುತ್ತಾ ಅವರು ತಮ್ಮ ಕಲಾ ಪರಿಚಯ ಹೇಳಿಕೊಂಡರು.

ನಾನು ಶಾಲಾ ದಿನಗಳಲ್ಲಿ ಭರತನಾಟ್ಯ ,ಶ್ಲೋಕ, ವಚನ ಗಾಯನ, ಭಾವಗೀತೆ, ಜಾನಪದ ಗೀತೆ, ಭಕ್ತಿ ಗೀತೆ.. ಹೀಗೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿದ್ದೆನು.

ನಾನು ಹತ್ತನೇ ತರಗತಿ ಮುಗಿಸಿದ ನಂತರ ನನಗೆ ೧೭ ವರ್ಷಕ್ಕೆ ನಮ್ಮ ಸಂಬಂಧಿಕರಲ್ಲಿ ಮದುವೆ ಮಾಡಿಕೊಡಲಾಯಿತು.

ನನಗೆ ಏಳು ವರ್ಷಗಳ ಬಳಿಕ ಎರಡು ಅವಳಿ ಮಕ್ಕಳು ಹುಟ್ಟಿದರು. ಮಕ್ಕಳು ಹುಟ್ಟಿದ ಒಂದು ವರ್ಷಕ್ಕೆ ನನ್ನ ಪತಿಯನ್ನು ಕಳೆದುಕೊಂಡೆನು. ನಂತರ ನಾನು ಮತ್ತೆ ಶಿಕ್ಷಣ ಮುಂದುವರಿಸಿದೆನು.

ಪಿಯುಸಿ, ಬಿಎ ಎಕ್ಸಾಮ್ ಬರೆದೆನು. ಲಾಕ್ಡೌನ್ ಟೈಮ್ ನಲ್ಲಿ ಮನೆಯಲ್ಲೇ ಭರತನಾಟ್ಯ ಹರ‍್ಮೋನಿಯಂ ಎರಡು ಮಕ್ಕಳಿಗೆ ಫೋನಲ್ಲಿ ನೋಡುತ್ತಾ ಕಲಿಸುತ್ತಿದ್ದೆನು. ನಾವು ಗುರುಗಳ ಹತ್ತಿರ ಕಲಿಬೇಕು ಅಂದ್ರೆ ನಮಗೆ ಯಾವುದೇ ರೀತಿ ಅನುಕೂಲ ಇರಲಿಲ್ಲ.

೨೦೧೬ ರಿಂದ ೨೦೨೪ ರವರೆಗೆ ಶಾಲಾ ಸಂಗೀತ ಶಿಕ್ಷಕಿಯಾಗಿ ಸೇವೆ ಮಾಡುತ್ತಿದ್ದೆ. ನನಗೆ ಭರತನಾಟ್ಯ ಮತ್ತು ಸಂಗೀತ ಅಂದರೆ ತುಂಬಾ ಆಸಕ್ತಿ ಇದೆ.

ನನಗೆ ತಿಳಿದಿದ್ದು ಮಕ್ಕಳಿಗೆ ಕಲಿಸುತ್ತಿದ್ದೇನೆ. ಇದಕ್ಕೆ ನನ್ನ ತಂದೆ-ತಾಯಿ, ಅತ್ತೆ ಸ್ನೇಹ ಬಳಗ ಸಹಾಯ ಮಾಡಿ ಪ್ರೋತ್ಸಾಹಿಸಿದ್ದಾರೆ.

ಪ್ರತಿ ತಿಂಗಳು ನಮ್ಮ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಅಂದರೆ ಬಸವಣ್ಣನವರ ಕುರಿತು ಸಾಮಾಜಿಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಚಿಂತನ ಕಾರ್ಯಕ್ರಮ ನಮ್ಮ ಮನೆಯವರು ಇದ್ದಾಗ ಮಾಡುತ್ತಿದ್ದರು.

ಅದನ್ನು ಹಾಗೆ ಬಿಡುವುದು ಬೇಡ ಎಂದು ನಾನು ನನ್ನ ಜನ್ಮ ದಿನದಂದು ಈ ಕಾರ್ಯಕ್ರಮ ಮಾಡಿ ನನ್ನಂತೆಯೇ ಕಲಾಕ್ಷೇತ್ರದ ಸಾಧಕರನ್ನು ಸನ್ಮಾನಿಸಿರುವೆ.

ನಾನು ಮಾಡಿರುವಂತಹ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿತ್ತು ಅಂತ ಹೇಳಿದ್ದಾರೆ ಎಲ್ಲರು. ಊರಿನಲ್ಲಿ ಯಾವುದೇ ಒಂದು ಕರ್ಯಾಕ್ರಮ ಇರಲಿ ಆ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆಯುತ್ತಿದ್ದರು.

ರಾಯಚೂರಿನ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೩ನೇ ಶ್ರೀರಾಯರ ಆರಾಧನೆಯ ಕಾರ್ಯಕ್ರಮ ನಡೆಯುತಿತ್ತು.

ಇದರ ಅಂಗವಾಗಿ ಮಂತ್ರಾಲಯದ ರಾಘವೇಂದ್ರಸ್ವಾಮಿಗಳವರ ಮಠ ಹಾಗೂ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮಠದ ಮುಂಭಾಗ ರಾಜ ಬೀದಿಯಲ್ಲಿ ದೇಶ-ವಿದೇಶದ ೩೫೦ ನೃತ್ಯಗಾರರು ಏಕಕಾಲಕ್ಕೆ ನಾಮ ರಾಮಾಯಣಂ ನೃತ್ಯ ಪ್ರದರ್ಶಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ೨೦೨೪ರಲ್ಲಿ ಆಗಿದೆ.

ಜಪಾನ್, ಜರ್ಮನಿ, ಇಂಡೋನೇಷಿಯಾ ದೇಶ ಸೇರಿದಂತೆ ಭಾರತ ದೇಶದ ಹಲವಾರು ರಾಜ್ಯದಿಂದ ಕಲಾವಿದರು ಆಗಮಿಸಿದ್ದರು.

ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ ಈ ನೃತ್ಯೋತ್ಸವ ಸಂಭ್ರಮ ರಾಯರ ಪಾದದಲ್ಲಿ ಸಮರ್ಪಣೆ ಮಾಡಿತು.

ಅದರಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಮುಖ್ಯಸ್ಥ ಅರವಿಂದಸಿಂಗ್, ಪ್ರಧಾನ ಕಾರ್ಯದರ್ಶಿ ಮತ್ತು ನೃತ್ಯಗಾರ್ತಿ ಸ್ವಾತಿ ಪಿ. ಭಾರದ್ವಾಜ್ ಅವರನ್ನು ಮರೆಯುವಂತಿಲ್ಲ.

ಈ ತಂಡದಲ್ಲಿ ತಾಯಿ ಮಹಾನಂದ ಮಠಪತಿ ಮತ್ತು ಮಗಳು ಅಭಿಶ್ರೀ ಇದ್ದು ಸರ್ಟಿಫಿಕೇಟ್ ಪಡೆದಿದ್ದಾರೆ.

ಇವರ ದೊಡ್ಡ ಮಗಳು ಅನುಶ್ರೀ ಹರ‍್ಮೋನಿಯಂ ಮತ್ತು ಪಿಯಾನ ಕಲಿಯುತ್ತಿದ್ದಾಳೆ. ವಚನ ಗಾಯನ, ಹರ‍್ಮೋನಿಯಂ ಜೊತೆ ಫೋನಲ್ಲಿ ನೋಡಿ ಕಲಿಸುತ್ತಿದ್ದೇನೆ ಎಂದರು.

ನಾನು ಕಲರ್ಸ್ ಕನ್ನಡ ದಲ್ಲಿ ಅಡಿಶನ್ ಕೊಟ್ಟಿದ್ದೇನೆ ಹಾಡು ಕರ್ನಾಟಕ ಹಾಗೆ ಜೀ ಕನ್ನಡದಲ್ಲಿ ಸರಿಗಮಪದಲ್ಲಿ ಭಾಗವಹಿಸಿದ್ದೇನೆ.

೨೦೨೪ರಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಎರಡು ಮಕ್ಕಳ ಜೊತೆ ನಾನು ಕೂಡ ಡಾನ್ಸ್ ಮಾಡಿದ್ದೇನೆ.

ಅದರಲ್ಲಿ ನನ್ನ ಚಿಕ್ಕ ಮಗಳು ಅಭಿಶ್ರೀಗೆ ನೀನು ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀಯಾ ಅಂತ ಹೇಳಿ ಪವರ್ ಸ್ಟಾರ್ ಶೀಲ್ಡು ಕೊಟ್ಟಿದ್ದರು.

೧೧ ವರ್ಷದ ಅಭಿಶ್ರೀ ೨೭ ರಾಜ್ಯಮಟ್ಟದ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಈಕೆ ಕೂಡ ನೃತ್ಯ ಕ್ಷೇತ್ರದ ಚಿಗುರು ಪ್ರತಿಭೆ.

ಶ್ರೀ ವೀರೇಂದ್ರಪಾಟೀಲ್ ಪಬ್ಲಿಕ್ ಸ್ಕೂಲ್ ಚಿಂಚೋಳಿಯಲ್ಲಿ ೫ ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅವಳಿ ಸಹೋದರಿಯರು ಓದಿನಲ್ಲಿ ಮುಂದಿರುವರು.

ನೃತ್ಯ ಪ್ರತಿಭೆ ಅಭಿಶ್ರೀ ಇಲ್ಲಿಯವರೆಗೆ ಪಡೆದ ಪ್ರಶಸ್ತಿಗಳು ಕನ್ನಡದ ಚಿನ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ ಸನ್ಮಾನ, ತಾಲೂಕು ಬಸವ ಕೇಂದ್ರ ಸನ್ಮಾನ, ಡ್ಯಾನ್ಸ್ ಫಾರ್ ಇಂಡಿಯಾ ಬೆಂಗಳೂರು, ಟ್ಯಾಲೆಂನ್ಟ್ ಸ್ಟಾರ್ ಅವಾರ್ಡ್ ಬೀದರ್, ಸ್ವಾಮಿ ವಿವೇಕಾನಂದ ಶಾಲೆಯಿಂದ ಸನ್ಮಾನ, ಶ್ರೀ ಹಾಲಪ್ಪಯ್ಯ ವಿರಕ್ತ ಮಠ ಸೇಡಂ ಸನ್ಮಾನ, ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೀಗೆ ಮಗಳ ಸಾಧನೆ ಹಂಚಿಕೊಂಡರು.

೨೦೨೧ರಲ್ಲಿ ಮಹಾನಂದ ಮಠಮತಿ ಅವರು ಚಿಂಚೊಳ್ಳಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ಇವರು ಪ್ರತಿ ಭಾನುವಾರ ನಡೆಸುತ್ತಿರುವ ವಿವಿಧ ಹಾಡುಗಳ ಸ್ಪರ್ಧೆಯಲ್ಲಿ ನಾನು ಹಾಡುತ್ತಿರುವುದು ನನಗೆ ಇನ್ನಷ್ಟು ಹೊಸ ಹಾಡು ಕಲಿಯುವುದಕ್ಕೆ ಅನುಕೂಲವಾಗಿದೆ.

ನಾನು ಪ್ರತಿ ವಾರ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿ ಚಿಕ್ಕಮಗಳೂರುನಲ್ಲಿ ರಾಜ್ಯಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ಪಡೆದಿದ್ದೇನೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹೀಗೆ ಕಾರ್ಯಕ್ರಮ ಮಾಡುತ್ತಿರುವುದರಿಂದ ಮರೀಚಿಕೆಯಾಗಿ ಉಳಿದುಕೊಂಡಿರುವ ನನ್ನಂತಹ ಕೆಲ ಕಲಾವಿದರು ಹೊರ ತರಲು ಕಾರಣರಾಗಿರುವ ರಾಜ್ಯಧ್ಯಕ್ಷ ಮಧುನಾಯ್ಕ ಲಂಬಾಣಿ ಸರ್ ಗೆ ನನ್ನ ನಮನಗಳು ಎಂದು ಮಾತು ಮುಗಿಸಿದರು.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧

 

ವೈಜೆಆರ್ ಕಾಲೇಜಿ ವಿಜೃಂಭಣೆಯಿಂದ ನಡೆದ ಗಣಪನ ವಿಸರ್ಜನೆ ಮೆರವಣಿಗೆ

ಗಂಗಾವತಿ : ವಿದ್ಯಾನಗರ ವೈಜೆಆರ್ ಪಿಯು ಕಾಲೇಜ್ ನಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಣ್ಣಿನ ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿ ಐದು ದಿನ ಕಾಲೇಜಿನಲ್ಲಿ ಪ್ರತಿಷ್ಠಾಪಿಸಿ ಗಣೇಶನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ರವಿವಾರ ವಿಸರ್ಜನ ವೇಳೆ ಯುವಕರು ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಗಣೇಶನ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತೋಷಪಟ್ಟರು.

ಈ ವೇಳೆ ಅಧ್ಯಕ್ಷ ಕಲ್ಯಾಣಂ ಜಾನಕಿರಾಮ್ ಮಾತನಾಡಿ ಜಿಲ್ಲೆ ಮತ್ತು ರಾಜ್ಯದ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ, ಆಯಸ್ಸು, ಐಶ್ವರ್ಯ, ಶಾಂತಿ, ನೆಮ್ಮದಿ ನೀಡಿ ದೇವರು ಕಾಪಾಡಲಿ.

ಉತ್ತಮ ಮಳೆ, ಬೆಳೆ ಆಗಿ ರೈತರಲ್ಲಿ ಸಂತೋಷ ಉಂಟು ಮಾಡಲಿ ವಿದ್ಯಾರ್ಥಿಗಳಿಗೆ ವಿದ್ಯೆ ಬುದ್ಧಿ ಆ ವಿಘ್ನೇಶ್ವರ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಬಿ.ಕೋಟಯ್ಯ ಚೌಧರಿ, ನಿರ್ದೇಶಕ ಕಲ್ಯಾಣಂ ಜೈದೀಪ್ ಉಪನ್ಯಾಸಕ ವೃಂದ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 

ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಇವರಿಂದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರಿಗೆ ಪುಣ್ಯಕೋಟಿ ಪ್ರಶಸ್ತಿ ಪ್ರದಾನ.
ಗಂಗಾವತಿ: ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಇವರಿಂದ ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರಿಗೆ ಆಗಸ್ಟ್-೨೮ ಗುರುವಾರ ಲಯನ್ಸ್ ಕ್ಲಬ್‌ನಲ್ಲಿ ಪುಣ್ಯಕೋಟಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ಶೇಖರ್ ತೆಗ್ಗಿ ಅವರು ತಿಳಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಡಾ|| ಶಿವಕುಮಾರ ಮಾಲಿಪಾಟೀಲ್ ಅವರು ವೃತ್ತಿಯಲ್ಲಿ ಒಬ್ಬ ವೈದ್ಯರಾಗಿ ಸಾಹಿತಿಗಳಾಗಿ, ಸಮಾಜ ಸೇವಕರಾಗಿ ಸಾಕಷ್ಟು ಸೇವೆಗಳನ್ನು ಸಲ್ಲಿಸುತ್ತಾ ಜನಾನುರಾಗಿಯಾಗಿದ್ದಾರೆ.
ಇವರಿಗೆ ಸನ್ಮಾನಿಸಿ ಅಭಿನಂದಿಸುವುದು ನಮ್ಮ ಅಕಾಡೆಮಿಯ ಹೆಬ್ಬಯಕೆಯಾಗಿತ್ತು. ಅಂದರೆ ಈ ದಿನ ಅವರಿಗೆ ಪುಣ್ಯಕೋಟಿ ಪ್ರಶಸ್ತಿ ಪ್ರದಾನ ಮಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಡಕಿಯ ವಡಕೆಪ್ಪ ತಾತನವರು ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಬಸವರಾಜ ಮೇಟಿ ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರು, ನಾನು ಸುಮಾರು ೨೦೦೦ನೇ ಇಸ್ವಿಯಲ್ಲಿ ಲಯನ್ಸ್ ಕ್ಲಬ್ ಸದಸ್ಯನಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇನೆ.
ಅಂದಿನಿಂದ ಪರಿಸರ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ನಗರದ ಸ್ವಚ್ಛತೆ ಕುರಿತಂತೆ ಹಲವಾರು ಸೇವಾ ಕಾರ್ಯಗಳಲ್ಲಿ ನಾನು ತೊಡಗಿಕೊಂಡಿದ್ದೇನೆ.
ಗಂಗಾವತಿ ಒಂದು ಮಾದರಿ ನಗರವಾಗಿ ಅಭಿವೃದ್ಧಿಯಾಗಬೇಕೆನ್ನುವುದು ನನ್ನ ಒತ್ತಾಸೆಯಾಗಿದೆ.
ಆ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಕೈಜೋಡಿಸಬೇಕೆಂದರು. ನನ್ನ ಈ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪ್ರಹ್ಲಾದ ಕುಲಕರ್ಣಿ, ಚಿದಾನಂದ ಕೀರ್ತಿ, ದಶರಥ ಪಿ., ರಮೇಶ ಕೋಟಿ, ಹೆಚ್. ಮಲ್ಲಿಕಾರ್ಜುನ, ಸಿಂಗಾಪುರ ಭೀಮರಾಯ ನಾಯಕ್, ಶಿವಕುಮಾರ ಹಾದಿಮನಿ, ಪ್ರಕಾಶರೆಡ್ಡಿ, ಆರ್. ಚನ್ನಬಸವ, ಆರತಿ ಮಂಜುನಾಥ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಆಗಸ್ಟ್-೨೪ ರವಿವಾರ ಉದ್ಘಾಟನೆಗೊಂಡ ಶ್ರೀ ರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನ.

ಗಂಗಾವತಿ: ಸಮಾಜಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯವಾಗಿದೆ. ಒಗ್ಗಟ್ಟಿನಿಂದ ಸಮಾಜವು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಅವರು ರವಿವಾರ ನಗರದ ಮಾರುತೇಶ್ವರನಗರ ಉಪ್ಪಿನಮಾಳಿ ಕ್ಯಾಂಪಿನಲ್ಲಿರುವ ಶ್ರೀರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಸರ್ವ ವರ್ಗಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಸದರಿ ಸಮುದಾಯ ಭವನಕ್ಕೆ ಮೂರು ಲಕ್ಷ ಅನುದಾನವನ್ನು ನೀಡಲಾಗಿದೆ ಎಂದು ಸ್ಮರಿಸಿದರು.

ಅಲ್ಲದೆ ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿ, ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಸಮುದಾಯಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ ಎಂದರು.

ಅಧ್ಯಕ್ಷತೆಯನ್ನು ಮೋಚಿಗಾರ ಸಮಾಜದ ಅಧ್ಯಕ್ಷರಾದ ಮಂಜುನಾಥ ಹಂಚಾಳಪ್ಪ ಕಳ್ಳಿಮನಿ ವಹಿಸಿದ್ದರು.

ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್. ಶ್ರೀನಾಥ್, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ವಕೀಲರು, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದ್ದರು.

ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ಮೋಚಿಗಾರ ಸಮಾಜದ ರಾಜ್ಯಾಧ್ಯಕ್ಷರಾದ ಶಿವಣ್ಣ ಮುಳುಗುಂದ, ಹನುಮಂತಪ್ಪ ಹುನುಗುಂದ, ಮಲ್ಲಿಕಾರ್ಜುನ ಹುಲ್ಲೂರು, ವಿರೇಶ ತಾವರಗೇರಾ, ಯಮನೂರಪ್ಪ ಕೊಟಿ, ಕಾಶೀಮಪ್ಪ ಹಾದಿಮನಿ ಸೇರಿದ್ದರು.

ಮನೋಹರಗೌಡ ಹೇರೂರು, ಪರಶುರಾಮ ಮಡ್ಡೇರ್, ಜೋಗದ ನಾರಾಯಣಪ್ಪ ನಾಯಕ, ರಮೇಶ ಕೋಟಿ, ಸೋಮಣ್ಣ ಕಿನ್ನಾಳ, ಪಟ್ಟೆಪ್ಪ ಕವಲೂರು, ಚನ್ನಬಸವ ಸೂಡಿ, ಮಲ್ಲಿಕಾರ್ಜುನ ಮಂಗಳೂರು, ಮಂಜುನಾಥ ಬಂಡಿ, ಶರಣಪ್ಪ ಬಂಡಿ, ವನಗುಂದಿ ಕೃಷ್ಣ, ಮಂಜುನಾಥ ಕೋಳೂರು, ಶಿವಕುಮಾರ ಗೌಡ, ಕನಕಪ್ಪ ಹೊಸಪೇಟೆ, ಶಂಕ್ರಪ್ಪ ಪೂಜಾರಿ ಸೇರಿದಂತೆ ಇನ್ನಿತರರಿದ್ದರು.

೬ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲಾ ಯೋಗಾಪಟುಗಳ ಸಾಧನೆ

ಗಂಗಾವತಿ: ಯೋಗಾಸನ ಭಾರತ್ ಸಂಯೋಜಿತವಾಗಿರುವ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ೬ನೇ ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನ್ನು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಆಯೋಜಿಸಿತ್ತು.

ಸ್ಪರ್ಧೆಯನ್ನು ಆಗಸ್ಟ್-೨೨, ೨೩, ೨೪ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.

ತಂಡದ ಕೋಚ್ ಆಗಿ ರೇಷ್ಮ ವಡ್ಡಟ್ಟಿ, ವ್ಯವಸ್ಥಾಪಕರಾಗಿ ಮಹಾಂತೇಶ್‌ರವರು ಭಾಗವಹಿಸಿದ್ದರು.

ಈ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ೨೧ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗಂಗಾವತಿಯ ನಿತಿನ್, ನಿಹಾರಿಕಾ, ಎನ್.ಚೇತನ್, ಕೃಷ್ಣ ರೆಡ್ಡಿ, ಅಮೃತ, ಭೀಮೇಶ, ಶರಣಮ್ಮ, ಭಾರ್ಗವಿ, ನಿತಿಕಾ ಬಿ. ಮತ್ತು ತನ್ಮಯ ಪಾಟೀಲ್, ಮಧುಸೂದನ್ ಕೊಪ್ಪಳ ಅವರು ಹಲವಾರು ಪದಕಗಳನ್ನು ಪಡೆದರು.

೧೦ ವರ್ಷದ ಕೆಳಗಿನ ಬ್ಯಾಕ್ ಬೆಂಡಿಂಗ್ ಸ್ಪರ್ಧೆಯಲ್ಲಿ ನಿತಿನ್ ಚಿನ್ನದ ಪದಕವನ್ನು ಪಡೆದನು.

ಜೂನಿಯರ್ ಬಾಲಕಿಯರ ೧೪-೧೮ ಲೆಗ್ ಬ್ಯಾಲೆನ್ಸ್ ಮತ್ತು ಟ್ವಿಸ್ಟಿಂಗ್ಕಾಂ ಟೆಟೇಶನ್‌ನಲ್ಲಿ ಬೆಳ್ಳಿ ಪದಕವನ್ನು ತನ್ಮಯ್ ಪಾಟೀಲ್ ಪಡೆದಳ

೪೫ ರಿಂದ ೫೫ ಸುಪೈನ್ ಕಾಂಪಿಟೇಶನ್‌ನಲ್ಲಿ ಕಂಚಿನ ಪದಕವನ್ನು ಭೀಮೇಶ್ ಪಡೆದನು.

ಈ ಸ್ಪರ್ಧೆಗೆ ಕೊಪ್ಪಳ ಜಿಲ್ಲೆಯಿಂದ ನ್ಯಾಯ ನಿರ್ಣಾಯಕರಾಗಿ ಎನ್. ಬಾನುಪ್ರಸಾದ್ ಮತ್ತು ಜಯಶ್ರೀ ಆಯ್ಕೆಯಾಗಿದ್ದರು.

ಕೊಪ್ಪಳ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಗೌರವಾಧ್ಯಕ್ಷ ಶಾಮಮೂರ್ತಿ ಐಲಿ, ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರಜಾಕ್, ಕಾರ್ಯದರ್ಶಿ ಎನ್. ಭಾನುಪ್ರಸಾದ್, ಖಜಾಂಚಿ ಡಾ. ಕೆ. ಭಾನು ಪ್ರಕಾಶ್ ವಿಜೇತರಿಗೆ ಹಾಗೂ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.

 

 

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ನೋಂದಣಿ
ಗಂಗಾವತಿ: ಹಿರಿಯ ಕಾರ್ಮಿಕ ಹೋರಾಟಗಾರ ಭಾರಧ್ವಾಜ್ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಸ್ಥಾಪನೆಗೊಂಡಿತು.
ಕಲಬುರ್ಗಿ ಪ್ರಾದೇಶಿಕ ಕಛೇರಿಯ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯಿಂದ ನೋಂದಣಿಯಾಗಿ ಅಸ್ತಿತ್ವಕ್ಕೆ ಬಂದಿದೆ ಎಂದು ಸಂಘದ ಅಧ್ಯಕ್ಷರಾದ ಇಬ್ರಾಹಿಂ ಮೇಸ್ತ್ರೀ ತಿಳಿಸಿದರು.
ಸಂಘದ ನೋಂದಣಿ ಸಂಖ್ಯೆ: ಐಅಏಂಐ/ಖಿU/P-೬೧೦೦೨೦೭೨/೨೦೨೫-೨೬ ಆಗಿದೆ.
ಇದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಗೊಂಡಿದೆ.
ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಿದೆ.
ಈ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಮುಂದಿನ ತಿಂಗಳು ಸೆಪ್ಟೆಂಬರ್-೨೮ ರಂದು ನಗರದ ರಾಯಚೂರು ರಸ್ತೆಯಲ್ಲಿರುವ ಆಟೋನಗರದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಹನುಮಂತ ಚೌಡಪ್ಪ, ಪ್ರಧಾನ ಕಾರ್ಯದರ್ಶಿಯಾದ ಮಹೆಬೂಬಸಾಬ ಲಾಠಿ, ಜಂಟಿ ಕಾರ್ಯದರ್ಶಿಯಾದ ಚಾಂದಪಾಷಾ, ಸಂಘಟನಾ ಕಾರ್ಯದರ್ಶಿ ಮರಿಸ್ವಾಮಿ, ಸಿಕಂದರ್, ಸಹಕೋಶಾಧ್ಯಕ್ಷರಾದ ರಸೂಲ್, ಸದಸ್ಯರಾದ ಜಗದೀಶ ಮೇಸ್ತಿç ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯಕುಮಾರ ಗದ್ದಿ ಅವರ ಮನೆಯಲ್ಲಿ ಯಶಸ್ವಿಯಾಗಿ ಜರುಗಿದ ಆಗಸ್ಟ್-೨೨, ೨೦೨೫ ರ ವಚನ ಶ್ರಾವಣ
ಶ್ರಾವಣ ಮಾಸದ ಅಂಗವಾಗಿ ಗಂಗಾವತಿ ನಗರದಲ್ಲಿ ಒಂದು ತಿಂಗಳ ಪರ್ಯಂತ ನಡೆಯುತ್ತಿರುವ ವಚನ ಶ್ರಾವಣ ಕಾರ್ಯಕ್ರಮ.
ಮೂವತ್ತನೇ ದಿನವಾದ ಆಗಸ್ಟ್-೨೨ ಶುಕ್ರವಾರ ಸ್ನೇಹ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಗದ್ದಿಯವರ ಮನೆಯಲ್ಲಿ ಜರುಗಿತು.
ಈ ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿದ್ದ ವಿಜಯಕುಮಾರ ಗದ್ದಿ ಮಾತನಾಡಿ, ಈ ವಚನ ಶ್ರಾವಣ ಕಾರ್ಯಕ್ರಮವು ಮನೆ ಮನೆಗಳಿಂದ ಮನ ಮನಗಳಿಗೆ ವಚನ ಸಂದೇಶ ಹರಡುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಡಾ|| ರಾಜಶೇಖರ ನಾರಿನಾಳ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಶೈಲ ಪಟ್ಟಣಶೆಟ್ಟಿ, ಕೆ.ಬಸವರಾಜ್, ಎ.ಕೆ. ಮಹೇಶಕುಮಾರ, ಪಂಪಣ್ಣ, ಟಿ ದಿಲೀಪಕುಮಾರ ವಂದಾಲ, ರಾಜಶೇಖರ್ ವೈಜಾಪುರ್, ವೀರಣ್ಣ ಅರಸುಣಿಸಿ, ಕೆ.ಶರಬಣ್ಣ, ಶ್ರೀಮತಿ ವಿಜಯಲಕ್ಷ್ಮೀ ಗದ್ದಿ ಹಾಗೂ ರಾಷ್ಟ್ರೀಯ ಬಸವದಳ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ನಗರದ ಬಸವ ಭಕ್ತರು ಹಾಗೂ ಧ್ಯಾನ ಬಳಗದ ಸದಸ್ಯರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡಿದರು.
ಈ ಕಾರ್ಯಕ್ರಮವನ್ನು ವಿರೇಶ ಅಸರೆಡ್ಡಿಯವರು ನಿರೂಪಣೆಗೈದರು.