ಸನಾತನ ಧರ್ಮ ರಕ್ಷಣೆಗೆ ಶೃಂಗೇರಿ ಶಾರದಾ ಪೀಠದ ಕೊಡುಗೆ ಅನನ್ಯ: ನಾರಾಯಣರಾವ್ ವೈದ್ಯ.

ಗಂಗಾವತಿ: ಅದ್ವೈತ ಸಿದ್ದಾಂತದ ತಳಹದಿಯ ಮೇಲೆ ಜಗದ್ಗುರು ಶ್ರೀ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾದ ಪೀಠಗಳಲ್ಲಿ ಪ್ರಥಮ ಪೀಠ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶೃಂಗೇರಿ ಶಾರದಾ ಪೀಠ ತನ್ನದೇ ಆದ ಗುರು ಪರಂಪರೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪೀಠವು ಸನಾತನ ಧರ್ಮದ ರಕ್ಷಣೆ ಹಾಗೂ ದೇಶದ ಸುಭಿಕ್ಷೆಗೆ ಮಹತ್ವವಾದ ಕೊಡುಗೆಯನ್ನು ನೀಡಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಮಂಗಳವಾರ ಶಾರದಾ ದೇವಸ್ಥಾನದಲ್ಲಿ ಜಗದ್ಗುರು ಶ್ರೀಶ್ರೀ ವಿದುಶೇಖರ ಮಹಾಸ್ವಾಮಿಗಳವರ ೩೩ನೆಯ ವರ್ಧಂತಿ ಮಹೋತ್ಸವದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶೃಂಗೇರಿಯ ಹಿರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ದಿವ್ಯದೃಷ್ಟಿಯ ಪರಿಣಾಮವಾಗಿ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ತಮ್ಮ ೨೨ನೇ ವಯಸ್ಸಿನಲ್ಲಿ ಜನವರಿ-೨೩, ೨೦೧೫ ರಂದು ತಮ್ಮ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಅನುಗ್ರಹಿಸಿದರು. ಬಳಿಕ ಗುರುಗಳ ಅನುಗ್ರಹದಂತೆ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಧರ್ಮ ವಿಜಯಯಾತ್ರೆ, ಪ್ರಯಾಗರಾಜ್ ಕುಂಭಮೇಳದಲ್ಲಿ ಪುಣ್ಯಸ್ನಾನ, ಕಾಶ್ಮೀರದಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಷ್ಠಾಪನೆ ಸೇರಿದಂತೆ ದೇಶ ಯುದ್ಧದ ಸ್ಥಿತಿಯಲ್ಲಿದ್ದಾಗಲೇ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಶ್ರೀ ಶಾರದಾ ಪೀಠ ಪ್ರಸಾದದ ರೂಪದಲ್ಲಿ ಎರಡು ಲಕ್ಷ ರೂಪಾಯಿ ಕಳಿಸಿಕೊಟ್ಟರು. ದೇಶ ಕಾಯುವ ಯೋಧರಿಗಾಗಿ ಪ್ರತಿವರ್ಷ ಶಾರದಾ ಪೀಠದಿಂದ ಆರ್ಥಿಕ ನೆರವು ನೀಡುತ್ತಿರುವುದು ಅವರ ಅಪ್ರತಿಮ ದೇಶಭಕ್ತಿಯನ್ನು ಬಿಂಬಿಸುತ್ತದೆ. ನಗರದಲ್ಲಿ ಶ್ರೀಮಠ ಸ್ಥಾಪನೆಗೊಂಡು ಎಂಟು ವರ್ಷಗಳು ಪೂರೈಸುತ್ತಿದ್ದು, ಉಭಯ ಜಗದ್ಗುರುಗಳ ಅನುಗ್ರಹದಂತೆ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬರಲಾಗಿದೆ ಎಂದು ತಿಳಿಸಿದ ಅವರು, ಸಮರ್ಥ ಪೀಠಾಧೀಶ್ವರರಾಗಿ ಮಠದ ಬಹು ಆಯಾಮದ ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಕ್ತಿ ತುಂಬುತ್ತಿದ್ದಾರೆ. ಸನಾತನ ಧರ್ಮದ ಸಮರ್ಥ ಮಾರ್ಗದರ್ಶಕರಾಗಿ ಸಾಧನಾ ಪಥದಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಅಷ್ಟೋತ್ತರ ಪಾರಾಯಣ, ಶಿವ ಪಂಚಾಕ್ಷರಿ ಸ್ತೋತ್ರ ಪಾರಾಯಣ ಇತರೆ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ಜಗನ್ನಾಥ್ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಅನಿಲ್, ನಾಗೇಶ ಭಟ್, ಶ್ರೀನಿವಾಸ ಕರಮುಡಿ, ಭೀಮಾಶಂಕರ ಹೊಸಳ್ಳಿ, ಪವನ್ ಜೋಶಿ, ಮೋಹನ್ ಲೆಕ್ಕಿಹಾಳ, ವೇಣು, ಪ್ರಶಾಂತ್ ಜೋಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ

ವಿದುಶೇಖರ ಮಹಾಸ್ವಾಮಿಗಳ ಜನನ ತಿರುಪತಿಯಲ್ಲಿ ನಿಷ್ಠಾವಂತ ವೇದ ವಿದ್ವಾಂಸರ ಮನೆಯಲ್ಲಿ 1993ರ ಜುಲೈ 24 ರಂದು ಆಯಿತು. ಅವರ ತಂದೆ ಕುಪ್ಪಾ ವೇ ಬ್ರ.ಶ್ರೀ.ಶಿವಸುಬ್ರಹ್ಮಣ್ಯ ಅವದಾನಿ ಮತ್ತು ತಾಯಿ ಶ್ರೀಮತಿ ಸೀತಾ ನಾಗಲಕ್ಷ್ಮಿ.ಈ ದಂಪತಿಗಳ ಕಿರಿಯ ಪುತ್ರರೇ ತಿರುಪತಿಯಲ್ಲಿ ವೆಂಕಟೇಶ್ವರನ ಕೃಪೆಯಿಂದ ಜನಿಸಿ ವೆಂಕಟೇಶ ಪ್ರಸಾದರೆನಿಸಿದರು. ಐದನೇ ವಯಸ್ಸಿನಲ್ಲೇ ಅವರಿಗೆ ಬ್ರಹ್ಮೋಪದೇಶ ಆಯಿತು. ತಾತ ರಾಮಗೋಪಾಲ ಯಾಜಿಯವರಲ್ಲಿ ಬಾಲಕ ಕೃಷ್ಣ ಯಜುರ್ವೇದ ಕ್ರಮಾಂಕ ಪಾಠ ಕಲಿಯಲು ಆರಂಭಿಸಿದ್ದು ಉಪನಯನದ ನಂತರ.

2006 ರಲ್ಲಿ ತಂದೆಯವರೊಂದಿಗೆ ಬಾಲಕ ಶೃಂಗೇರಿಗೆ ಮೊದಲ ಬಾರಿ ಆಗಮಿಸಿದಾಗ ಈ ಕ್ಷೇತ್ರ ಬಾಲಕನನ್ನು ಸೆಳೆದಿರಲೇಬೇಕು. ಪುನ: 2008 ರಲ್ಲಿ ತಂದೆಯವರೊಂದಿಗೆ ಬಂದರು. ಆಗಲೇ ತಮಗೆ ಶೃಂಗೇರಿಯೇ ಕರ್ಮಭೂಮಿ ಎಂದವರ ಮನಸ್ಸು ಗಟ್ಟಿ ಮಾಡಿತ್ತು.

2009 ರಲ್ಲಿ ಮತ್ತೆ ಶೃಂಗೇರಿಗೆ ಬಂದಾಗ ಜಗದ್ಗುರುಗಳಿಂದ ತಾನು ಶಾಸ್ತ್ರ ಕಲಿಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದರು. ತಂದೆಯವರ ಅನುಮತಿ ನಂತರ ಜಗದ್ಗುರುಗಳ ಅನುಮತಿಯೂ ದೊರಕಿತು. ಕೇವಲ ಒಂದೂವರೆ ವರ್ಷದಲ್ಲಿ ಸಂಸ್ಕೃತ ಕಲಿತಿದ್ದು ಮಾತ್ರವಲ್ಲ ಕನ್ನಡದಲ್ಲಿ ಉಪನ್ಯಾಸ ನೀಡುವಷ್ಟು ಅವರು ಸಮರ್ಥರಾಗಿದ್ದರು. ಉಳಿದವರಿಗೆ ಒಂದೇ ಭಾಷೆ ಕಲಿಯಲು ಕನಿಷ್ಠ ನಾಲ್ಕು ವರ್ಷದ ಕಲಿಕೆ ಅಗತ್ಯವಾದರೆ ಇವರಿಗೆ ಇಷ್ಟು ಸ್ವಲ್ಪ ಸಮಯದಲ್ಲೇ ಎರಡು ಭಾಷೆಯ ಹಿಡಿತ ಸಿದ್ಧಿಸಿತ್ತು.

ಸಂಸ್ಕೃತ ಕಾವ್ಯ ಮತ್ತು ಸಾಹಿತ್ಯವನ್ನು ಶೃಂಗೇರಿಯ ವಿದ್ವಾನ್ ಶಿವಕುಮಾರ ಶರ್ಮ ಬೋಧಿಸಿದರೆ ವಿದ್ವಾನ್ ಕೃಷ್ಣ ರಾಜ ಭಟ್ಟರು ವ್ಯಾಕರಣ ಬೋಧಿಸಿದರು. ಎಲ್ಲವೂ ಬಹುಬೇಗ ಕಲಿತ ಬ್ರಹ್ಮಚಾರಿ ಅಚ್ಚರಿಗೆ ಕಾರಣರಾದರು. ಸೂಕ್ಷ್ಮ ಗ್ರಾಹಿ ಬ್ರಹ್ಮಚಾರಿಯಯ ಗುಣ ಸ್ವಭಾವ, ಜ್ಞಾನದಾಹ ಅರಿತ ಜಗದ್ಗುರುಗಳು ತಾವೇ ಶಾಸ್ತ್ರ ಕಲಿಸಲು ನಿರ್ಧರಿಸಿದರು. ಎರಡು ವರ್ಷ ಜಗದ್ಗುರುಗಳಿಂದ ಶಿಕ್ಷಣ ದೊರಕಿತು. ನ್ಯಾಯ ಶಾಸ್ತ್ರ, ಮೀಮಾಂಸ ಮತ್ತು ವೇದಾಂತ ಕಲಿಕೆ ಸಾಗುತ್ತಿದ್ದಾಗಲೇ ಅವರ 22 ನೇ ವಯಸ್ಸಿನಲ್ಲೇ ಜನವರಿ 23.2015 ರಂದು ಜಗದ್ಗುರುಗಳು ಅವರಿಗೆ ಸನ್ಯಾಸವಿತ್ತು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿ ಶ್ರೀವಿಧುಶೇಖರ ಭಾರತಿ ಎಂಬ ಯೋಗಪಟ್ಟನೀಡಿದರು.

ಆಗ ಜಗದ್ಗುರುಗಳು ತಮಗೆ ಅತ್ಯಂತ ಪೂಜನೀಯರಾದ ತಮ್ಮ ಪರಮಗುರು ಸ್ಮರಣೆಯಲ್ಲಿ ತಾವು ಶ್ರೀ ವಿಧುಶೇಖರ ಎಂಬ ಯೋಗಪಟ್ಟ ನೀಡುತ್ತಿದ್ದು ವಿಧು ಎಂದರೆ ಚಂದ್ರನೆಂದೇ ಅರ್ಥ ಎಂದು ವಿವರ ನೀಡಿದ್ದರು.

ಮುಂದೆ ಎರಡು ವರ್ಷಗಳ ಕಾಲ ಅವರು ತಮ್ಮ ಗುರುವರ್ಯರಿಂದ ಸಂಪೂರ್ಣ ವೇದಾಂತ ಶಾಸ್ತ್ರಹೃದ್ಗತ ಮಾಡಿಕೊಂಡರು. ತಮಿಳು ಶಿಕ್ಷಣವನ್ನೇನೂ ಅವರು ಪಡೆದವರಲ್ಲ. 2017 ರಲ್ಲಿ ತಮ್ಮ ಗುರುವರ್ಯರೊಂದಿಗೆ ಧರ್ಮ ವಿಜಯಯಾತ್ರೆ ಕೈಗೊಂಡಾಗ ಅವರ ತಮಿಳುನಾಡಿನಲ್ಲಿ ತಮಿಳಿನಲ್ಲೇ ಅನುಗ್ರಹ ಭಾಷಣ ಮಾಡಿದರು. ಮುಂದೆ ಅವರು ತಮಿಳುನಾಡಿನ ವಿಜಯಯಾತ್ರೆಯ ಸಂಧರ್ಭದಲ್ಲೆಲ್ಲಾ ತಾವು ತಮಿಳು ಮಾತೃಭಾಷೆಯವರೇ ಎಂಬ ರೀತಿ ಉಪನ್ಯಾಸ ನೀಡಿದರು. ತಮ್ಮ 25ನೇ ವಯಸ್ಸಿನಲ್ಲೇ ಜಗದ್ಗುರುಗಳ ಅನುಜ್ಞೆಯಂತೆ ಅವರು ಐದು ತಿಂಗಳ ಧರ್ಮವಿಜಯ ಯಾತ್ರೆಯನ್ನು ಕರ್ನಾಟಕ, ಆಂದ್ರಗಳಲ್ಲಿ ಕೈಗೊಂಡರು. ನಂತರ 4 ತಿಂಗಳ ಮಹಾರಾಷ್ಟ್ರ ವಿಜಯಯಾತ್ರೆಯನ್ನು ಮಾಡಿದರು. 2020 ರಲ್ಲಿ ಕೇರಳದಲ್ಲಿ ವಿಜಯಯಾತ್ರೆಯನ್ನು ಕೈಗೊಂಡರು ಮತ್ತು ಮಲೆಯಾಳಿಯಲ್ಲೇ ಅನುಗ್ರಹ ಭಾಷಣ ಮಾಡಿದರು. 2022 ರಲ್ಲಿ ತಮ್ಮ ಗುರುವರ್ಯರ ಅನುಜ್ಞೆಯಂತೆ ದ್ವಾರಕೆಗೆ ತೆರಳಿ ದ್ವಾರಕಾ ಮತ್ತು ಬದರೀ ಶಂಕರಾಚಾರ್ಯರ ಪಟ್ಟಾಭಿಷೇಕ ನಡೆಸಿ ಅನುಗ್ರಹಿಸಿದರು. ಆಗ ಅವರು ಹಿಂದಿ ಭಾಷೆಯ ಉಪನ್ಯಾಸ ಗಮನ ಸೆಳೆಯಿತು.

ಅವನಿ ಶೃಂಗೇರಿ ಮಠ, ನೆಲಮಾವು ಮಠಗಳ ಮಠಾದಿಪತಿಗಳಿಗೆ ಅವರು ಪಟ್ಟಾಭಿಷೇಕ ಮಾಡಿದರು. ಕಾಶ್ಮೀರದ ಟ್ವೀಟ್ವಾಲ್ ಗೆ ತಮ್ಮ ಗುರುವರ್ಯರ ಆದೇಶದಂತೆ ತೆರಳಿ ಶಾರದಾಂಬೆಯ ಪ್ರಾಣ ಪ್ರತಿಷ್ಠೆ ಮಾಡಿ ಅಭಿನವ ಶಂಕರಾಚಾರ್ಯರೆನಿಸಿದರು. ಅವರು ಗುರುವರ್ಯರ ಆದೇಶದಂತೆ ಧರ್ಮ ಪ್ರಬೋಧನೆಗಾಗಿ ನಿರಂತರ ಧರ್ಮ ವಿಜಯ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಪರಿವ್ರಾಜಕಾಚಾರ್ಯರೆನಿಸಿದ್ದಾರೆ.
ಅವರು ದೇವಸ್ಥಾನಗಳಲ್ಲಿ ನಡೆಸುವ ಪೂಜೆ, ದೇವಸ್ಥಾನಗಳ ಕುಂಭಾಭಿಷೇಕದಲ್ಲಿ, ಹೋಮ ಹವನಗಳಲ್ಲಿ ಪಾಲ್ಗೊಳ್ಳುವ ರೀತಿ ಭಕ್ತರ ಹೃನ್ಮನ ಸೆಳೆಯುತ್ತದೆ.

ಶೃಂಗೇರಿಯ ಅತ್ಯಂತ ಪ್ರಸಿದ್ಧ ವಾಕ್ಯಾರ್ಥ ಸಭೆಗಳಲ್ಲಿ ಅವರು ಅಧ್ಯಕ್ಷತೆವಹಿಸಿ ನಿರ್ವಹಿಸುವ ರೀತಿ ದೇಶದ ಪ್ರಖ್ಯಾತ ಪಂಡಿತರನ್ನೇ ನಿಬ್ಬೆರಗಾಗುವಂತೆ ಮಾಡಿದೆ. ಧರ್ಮ ಆಚರಣೆಗೆ ಅವರು ನೀಡುವ ಉಪನ್ಯಾಸಗಳು ಮನಸ್ಸಿಗೆ ನಾಟುತ್ತದೆ. ಸತತ ಅಧ್ಯಯನ ಮತ್ತು ಅಧ್ಯಾಪನ ನಡೆಸುವ ಅವರು ತಮ್ಮ ಅನುಗ್ರಹ ಭಾಷಣಗಳಲ್ಲಿ ಭಗವದ್ಗೀತೆ, ಶಂಕರ ಭಾಷ್ಯ, ವೇದ, ಉಪನಿಷತ್, ಶಂಕರ ವಿಜಯ, ಪುರಾಣಗಳ ಶ್ಲೋಕಗಳನ್ನು ಪೋಣಿಸುವ ರೀತಿ ಅವರ ಅಪಾರ ವಿದ್ವತ್ ಗೆ ಸಾಕ್ಷಿ ಹೇಳುತ್ತದೆ.

ಶೃಂಗೇರಿಯ ಗುರುಪರಂಪರೆಯ ಎಲ್ಲಾ ವಿಶೇಷಣಗಳೂ ಅವರಲ್ಲಿ ಮೈತಾಳಿದೆ. ಈ ವರ್ಷದ ಅವರ ಉತ್ತರ ಭಾರತದ ಧರ್ಮ ವಿಜಯ ಯಾತ್ರೆ ಉದ್ದಕ್ಕೂ ಕಂಡ ದೃಶ್ಯ ಭಾರತದ ಧಾರ್ಮಿಕ ಕ್ಷೇತ್ರದಲ್ಲಿ ನವ ನಕ್ಷತ್ರೋದಯವಾಗಿದ್ದಕ್ಕೆ ಸಾಕ್ಷಿ ಒದಗಿಸಿತು. ಪ್ರಯಾಗರಾಜ್ ಮಹಾ ಕುಂಭದಲ್ಲಿ ಅವರು ಮೌನಿ ಅಮವಾಸ್ಯೆಯ ದಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಇದಕ್ಕೂ ಮೊದಲು ಅಲ್ಲಿ ಪ್ರತಿದಿನ ಶಾಸ್ತ್ರ ಸಭೆ ನಡೆಸಿದರು. ಸಂತ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಮೂರು ಆಮ್ನಾಯ ಪೀಠಾದೀಶ್ವರರು ಪಾಲ್ಗೊಂಡ ಧರ್ಮ ಸಂಸತ್ ಅಧ್ಯಕ್ಷತೆ ವಹಿಸಿದರು.

ಕಾಶಿಯಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ಪ್ರತಿಷ್ಠಾ ಕುಂಭಾಭಿಷೇಕ ನಡೆಸಿದರು. ತಮ್ಮ ಗುರುವರ್ಯರು ಎಲ್ಲೆಲ್ಲಿ ತೆರಳಿ ಅನುಗ್ರಹಿಸಿದ್ದರೋ ಅಲ್ಲೆಲ್ಲಾ ತೆರಳಿ ಅನುಗ್ರಹಿಸಿದರು. ಕಾಶೀ ವಿಶ್ವನಾಥನ ಪೂಜೆ ನೇರವೇರಿಸಿದರು.

ಈಗಾಗಲೇ ಅವರು ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳಾದ ತಿರಚಂದೂರು ಮತ್ತು ಪಳನಿಗೆ ತೆರಳಿ ಪೂಜೆ ನೆರವೇರಿಸಿದ್ದಾರೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂಬತ್ತು ಕಡೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇಶಾದ್ಯಂತ ನೂರಾರು ದೇವಸ್ಥಾನಗಳ ಕುಂಭಾಭಿಷೇಕ, ಪ್ರತಿಷ್ಠಾ ಕಾರ್ಯಕ್ರಮ ನಡೆಸಿದ್ದಾರೆ.

ಎಲ್ಲಕ್ಕೂ ಶಿಖರಪ್ರಾಯವಾಗಿ ಅವರ ಅಚಲ ಗುರುಭಕ್ತಿ ಸಾಟಿ ಇಲ್ಲದ್ದು. ಎಲ್ಲೇ ಶೃಂಗೇರಿಯಿಂದ ದೂರ ತೆರಳಲಿ ತಮ್ಮ ಗುರುವರ್ಯರ ಸ್ಮರಣೆ ಮಾಡದೇ ಅವರು ಅನುಗ್ರಹ ಭಾಷಣ ನೀಡುವುದೇ ಇಲ್ಲ.ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳ ಸನ್ಯಾಸ ಸ್ವೀಕರಿಸಿದ ಸುವರ್ಣ ವರ್ಷಾಚರಣೆಯನ್ನು ಅವರು ಅಭೂತಪೂರ್ವವಾಗಿ ಆಚರಿಸಿದರು. ಸುವರ್ಣ ಭಾರತಿ ಕಾರ್ಯಕ್ರಮ ಒಂದು ನವ ಇತಿಹಾಸ ಸೃಷ್ಟಿಸಿತು. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ “ನಮ: ಶಿವಾಯ” ಶ್ರೀ ಭಾರತೀತೀರ್ಥ ಮಹಿಸ್ವಾಮಿಗಳ ಸುವರ್ಣ ವರ್ಷದ ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಕಂಠಗಳು ಏಕಕಾಲಕ್ಕೆ ಒಂದೆಡೆ ಶಂಕರ ಭಗವತ್ಪಾದರ ಸ್ತೋತ್ರ ಪಠಣ ಮಾಡುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿತು.

ಶೃಂಗೇರಿಯಲ್ಲಿ ಗುರುವರ್ಯರ ಗೌರವಾರ್ತ ನಡೆದ ತ್ರಿವೇಣಿ ಸಂಗಮವೂ ಒಂದು ವಿಶ್ವ ದಾಖಲೆಯೇ. ಶೃಂಗೇರಿಯಂತ ಪುಟ್ಟ ಹಳ್ಳಿಯಲ್ಲಿ ಐವತ್ತು ಸಹಸ್ರ ಭಕ್ತರು ಸ್ತೋತ್ರ ಪಠಣ ಮಾಡಿ ಇತಿಹಾಸ ಸೃಷ್ಟಿಸಿದರು.

ದೇಶ ಯುದ್ದ ಸ್ಥಿತಿಯಲ್ಲಿದ್ದಾಗಲೇ ಜಗದ್ಗುರುಗಳು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮ ನಡೆಸಿದರು. ಆ ಸಂಧರ್ಭ ಅವರು ಪುರ ಪ್ರವೇಶ ಮಾಡುವಾಗ ಸಂಪ್ರದಾಯದಂತೆ ತಮ್ಮ ಶೋಭಾಯಾತ್ರೆ ಸಿದ್ಧತೆ ಆಗಿದ್ದರೂ ಅದನ್ನು ನಿರಾಕರಿಸಿದರು. ದೇಶ ಸಂಕಷ್ಟದಲ್ಲಿದೆ ನಮ್ಮ ಶೋಭಾಯಾತ್ರೆ ಬೇಡ ಎಂದರು. ದೇಶದ ಒಳಿತಿಗಾಗಿ ಅವಿರತ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಉಪದೇಶಿಸಿದರು. ಕಾಶ್ಮೀರದ ಉಗ್ರರ ದಾಳಿಯಲ್ಲಿ ಬಲಿಯಾದ ಎಲ್ಲ ಸಂತ್ರಸ್ತರ ಕುಟುಂಬಗಳಿಗೂ ಶಾರದಾ ಪ್ರಸಾದ ರೂಪವಾಗಿ ತಲಾ ಎರಡು ಲಕ್ಷ ರೂ ಕಳಿಸಿಕೊಟ್ಟರು.ಅವರ ಅಪ್ರತಿಮ ದೇಶಭಕ್ತಿ ಶ್ರೀ ವಿದ್ಯಾರಣ್ಯರನ್ನು ನೆನಪಿಗೆ ತರುವಂತಿತ್ತು.

ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರನ್ನು ಆಗಲೇ ದೇಶದ ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಅನೇಕ ರಾಜ್ಯದ ರಾಜ್ಯಪಾಲರು, ಗೃಹಸಚಿವರೂ ಸೇರಿದಂತೆ ಕೇಂದ್ರದ ಮಂತ್ರಿಗಳು, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಒಳಗೊಂಡಂತೆ ಅನೇಕ ಮುಖ್ಯ ಮಂತ್ರಿಗಳು, ಧಾರ್ಮಿಕ ಮುಖಂಡರು, ನ್ಯಾಯ ಮೂರ್ತಿಗಳು, ಎಲ್ಲಾ ಕ್ಷೇತ್ರಗಳ ಮುಖಂಡರು ಭೇಟಿ ಆಗಿ ಅನುಗ್ರಹ ಪಡೆದಿದ್ದಾರೆ.

ಸಕಲ ಶಾಸ್ತ್ರ ಪಾರಂಗತರಾಗಿ, ವೇದಾಂತ ಹೃದ್ಗತ ಮಾಡಿಕೊಂಡು ನೈಜ ಸನ್ಯಾಸಿಯಾಗಿ ಸನಾತನ ಧರ್ಮದ ತೋರುಬೆಳಕಾಗಿ ಅವರು ಮೂಡಿ ಬಂದಿದ್ದಾರೆ. ಶೃಂಗೇರಿಯ ಧಕ್ಷಿಣಾಮ್ನಾಯ ಶಾರದಾಪೀಠವನ್ನು ಮುನ್ನೆಡೆಸುವ ಸಮರ್ಥ ಪೀಠಾದೀಶ್ವರರಾಗಿ ಮಠದ ಬಹು ಆಯಾಮದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರು ಶಕ್ತಿ ತುಂಬುತ್ತಿದ್ದಾರೆ. ತಮ್ಮ ಶಿಷ್ಯರು ತಮಗೆ ಪ್ರತಿಕ್ಷಣ ಆನಂದ ಉಂಟು ಮಾಡುತ್ತಿದ್ದಾರೆ. ನಮ್ಮ ಮನಸ್ಸಿನಲ್ಲಿದ್ದುದನ್ನು ಅವರ ಓದಬಲ್ಲರು.

ಶೃಂಗೇರಿಗೆ ಅತ್ಯಂತ ಯೋಗ್ಯ ಉತ್ತರಾಧಿಕಾರಿಯನ್ನು ಜಗನ್ಮಾತೆ ಶಾರದಾಂಬೆ ಅನುಗ್ರಹಿಸಿದ್ದಾಳೆ ಎಂಬ ಜಗದ್ಗುರು ಶ್ರೀ ಭಾರತೀತೀರ್ಥರ ಮಾತು ಅಕ್ಷರಶಃ ಸತ್ಯವಾಗಿದೆ. ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಸನಾತನ ಧರ್ಮದ ಸಮರ್ಥ ಮಾರ್ಗದರ್ಶಕರಾಗಿ ಸಾಧನಾ ಪಥದಲ್ಲಿ ಮುನ್ನೆಡೆಯುತ್ತಿದ್ದಾರೆ.

 

ಶ್ರೀ ನಾರಾಯಣರಾವ್‌ ವೈದ್ಯ

ಧರ್ಮದರ್ಶಿಗಳು, ಶೃಂಗೇರಿ ಶಂಕರಮಠ

ಶಾರದಾ ನಗರ, ಗಂಗಾವತಿ.

 

ಮನಸೆಳೆದ ರಾಜ್ಯಮಟ್ಟದ ಗಾಯನ ಸ್ಫರ್ಧೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಾರ್ಯಕ್ರಮಕ್ಕೆ ಪ್ರಶಂಸೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಘಟಕ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಲಾಯಿತು.

ಈ ಕಾರ್ಯಕ್ರಮ ಭಾನುವಾರ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆಯಿತು, ಮತ್ತು ನೆರೆದ ಪ್ರೇಕ್ಷಕರ ಮನಸೆಳೆದು ಪ್ರಶಂಸೆಗೆ ಪಾತ್ರವಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ ಲಂಬಾಣಿ, ಸಂಘದ ಉದ್ದೇಶಗಳನ್ನು ವಿವರಿಸಿದರು.

ಸಂಘವು ಪ್ರತೀ ಭಾನುವಾರ ಆನ್‌ಲೈನ್‌ನಲ್ಲಿ ವಿವಿಧ ಹಾಡುಗಳ ಸ್ಪರ್ಧೆಗಳನ್ನು ನಡೆಸಿ ಪ್ರತಿಭಾನ್ವಿತರಿಗೆ ವೇದಿಕೆ ಒದಗಿಸುತ್ತಿದೆ.

ಈ ಸ್ಪರ್ಧೆಗಳ ಪ್ರಥಮ ಹಂತದಲ್ಲಿ ೩೪ ಮಂದಿ ಗಾಯಕರನ್ನು ಆಯ್ಕೆ ಮಾಡಿ ಚಿಕ್ಕಮಗಳೂರಿಗೆ ಆಹ್ವಾನಿಸಲಾಗಿತ್ತು.

ಅವರು ವೇದಿಕೆಯಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿದ್ದು, ಪ್ರತಿಯೊಬ್ಬರಿಗೂ ಪ್ರಶಸ್ತಿ ನೀಡಲಾಯಿತು ಎಂದು ಅವರು ಹೇಳಿದರು.

ಇದಲ್ಲದೆ ದಾಂಡೆಲಿಯಲ್ಲಿ ೨ನೇ ಹಂತದ ಸ್ಪರ್ಧೆ ನಡೆಯಲಿದ್ದು, ಆಯ್ಕೆಯಾದ ಶ್ರೇಷ್ಠ ಗಾಯಕರಿಗೆ ಮುಂದಿನ ವರ್ಷ ಸನ್ಮಾನವಿದೆ.

ಜನವರಿಯಲ್ಲಿ ಬೆಳಗಾವಿಯಲ್ಲಿ ನಡೆಯುವ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ನೀಡಲಾಗುವುದು ಎಂದು ತಿಳಿಸಿದರು.

ಸಂಘವು 2020ರಲ್ಲಿ ಸ್ಥಾಪನೆಯಾಗಿ ಸಾಹಿತ್ಯ, ಸಂಸ್ಕೃತಿಕ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ.

ಕೊರೋನಾ ಸಮಯದಲ್ಲಿ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ವೈದ್ಯಕೀಯ ಸಲಹೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘದ ಘಟಕಗಳು ಸ್ಥಾಪನೆಯಾಗಿವೆ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿವೆ.

ತೀರ್ಪುಗಾರರಾಗಿ ಭಾಗವಹಿಸಿದ ಸಾಹಿತಿ ಗೊರೂರು ಅನಂತರಾಜು, ಗಾಯಕರು ಕವಿಗಳು ಮತ್ತು ಶ್ರೋತೃಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ ಎಂದರು.

ಹಾಡು ಮತ್ತು ಸಂಗೀತವು ಸಮಾಜದ ಆರೋಗ್ಯಕರ ಮನೋಭಾವನೆಗೆ ಸಹಾಯಮಾಡುವ ದಿವ್ಯ ಔಷಧಿಯಂತೆ ಕೆಲಸಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಘಟಕದ ಅಧ್ಯಕ್ಷ ಡಾ. ವಿದ್ಯಾ ಕೆ. ಅಧ್ಯಕ್ಷತೆ ವಹಿಸಿದ್ದರು ಮತ್ತು ಉತ್ತಮ ಆಯ್ಕೆ ಪ್ರಕ್ರಿಯೆಗೆ ಪ್ರಶಂಸೆ ವ್ಯಕ್ತವಾಯಿತು. ಘಟಕದ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. ತಾಳ್ಮೆಯಿಂದ ಗಾಯಕರ ಆಯ್ಕೆ ಮಾಡಿ ಶ್ಲಾಘನೀಯ ಕೆಲಸ ಮಾಡಿದ್ದಾರೆ.

ಕುರುವಂಜಿ ಕೆ.ಪಿ. ವೆಂಕಟೇಶ್ ಅವರು ಮಾಜಿ ರಾಜ್ಯಾಧ್ಯಕ್ಷರಾಗಿದ್ದು, ಸಫಾಯಿ ಕರ್ಮಚಾರಿ ನಿಗಮ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಬಿ.ಎಲ್. ಪ್ರವೀಣ್ ಬೆಟ್ಟಗೇರಿ, ಜಯಣ್ಣ ಹಾಗೂ ಎಂ.ಎಸ್. ನಾಗರಾಜ್ ಅವರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಪಾಲ್ಗೊಂಡಿದ್ದರು. ಎಚ್.ಎಂ. ಜಗದೀಶ್ ಉಪಾಧ್ಯಕ್ಷರಾಗಿ, ಹಸೈನಾರ್ ಬೆಳಗೊಳ ಜಿಲ್ಲಾ ಕೋಶಾಧ್ಯಕ್ಷರಾಗಿ ತಮ್ಮ ಶ್ರದ್ಧಾಭಕ್ತಿಯ ಸೇವೆ ಸಲ್ಲಿಸಿದರು.

ರಾಕೇಶ್ ಸಿಂಗ್ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷರು ವಿಜಯಕುಮಾರ್ ಎಚ್.ಸಿ. ಆಗಿದ್ದರು.

ಮೂಡಿಗೆರೆ ತಾಲ್ಲೂಕಿನ ಘಟಕ ಅಧ್ಯಕ್ಷರು ಮಂಜುನಾಥ ಬೆಟ್ಟಗೆರೆ, ಸಲಹೆಗಾರರಾಗಿದ್ದು ವಿನೋದ್ ಗೌರವ ನೀಡಿದರು.

ಇಂಪಾ ನಾಗರಾಜ್ ಅವರು ಗೌರವ ಕಾರ್ಯದರ್ಶಿಯಾಗಿ, ನವೀನ್ ಬಿ.ಆರ್. ಹಾಗೂ ರವಿ ಕುನ್ನಳ್ಳಿ ಅವರು ಗೌರವ ಸಲಹೆಗಾರರಾಗಿದ್ದರು.

ಮಧುಚಂದ್ರ ಹಾಗೂ ಮಜಾಭಾರತ ಕಲಾವಿದರು ತಮ್ಮ ಕಲಾ ಪ್ರದರ್ಶನದಿಂದ ಪ್ರೇಕ್ಷಕರನ್ನು ಮನಮೆಚ್ಚಿಸಿದರು.

ರಮೇಶ ಯಾದವ್ ಅವರು ಕಾಮಿಡಿ ಕಿಲಾಡಿಗಳ ತಂಡದ ಕಲಾವಿದರಾಗಿದ್ದು, ಮನರಂಜನೆ ಮೂಲಕ ಸಭಿಕರನ್ನು ಆಕರ್ಷಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕದ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಜಿಲ್ಲೆಗಳ ಪ್ರಮುಖರು, ಕಲಾವಿದರು, ಹಾಗೂ ಮಾಧ್ಯಮದ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಆಯ್ಕೆಯಾದ ಗಾಯಕ-ಗಾಯಕಿಯರಿಗೆ “ಕರುನಾಡು ಕೋಗಿಲೆ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಮೂಲಕ ಸಾಹಿತ್ಯ-ಸಂಸ್ಕೃತಿಯ ಬೆಳವಣಿಗೆಗೆ ಸಂಘವು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಯಿತು.

ಪತ್ರಕರ್ತ ಹೆಚ್. ಮಲ್ಲಿಕಾರ್ಜುನ ರವರಿಗೆ ಮಾಧ್ಯಮ ಶ್ರೀ ಪ್ರಶಸ್ತಿ

ಗಂಗಾವತಿ: ಹಿರಿಯ ಪತ್ರಕರ್ತರು ಹಾಗೂ ಕಲ್ಯಾಣಸಿರಿ ಪತ್ರಿಕೆಯ ಸಂಪಾದಕರಾದ ಹೊಸಕೇರಾ ಮಲ್ಲಿಕಾರ್ಜುನರವರು ಮಾಧ್ಯಮ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದ್ದು, ಜುಲೈ-೩೧ ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯ ಸಂಘದ ಉದ್ಘಾಟನೆ ಜೊತೆಗೆ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪತ್ರಕರ್ತರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

 

ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಂ.ರಾಜಶೇಖರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆ ಮಾಡಲಿದ್ದಾರೆ.

ಕಾಡುಸಿದ್ದೇಶ್ವರ ಸಂಸ್ಥಾನ ಮಠದ ಕರಿವೃಷಭ ದೇಶಿ ಕೇಂದ್ರ ಶಿವಯೋಗೀಶ್ವರರು, ಅವಧೂತ ವಿನಯ್ ಗುರೂಜಿ, ಹೊರನಾಡು ಕ್ಷೇತ್ರದ ಡಾ. ಭೀಮೇಶ್ವರ ಜೋಷಿ ಸಾನಿಧ್ಯ ವಹಿಸುವರು. ರಾಜ್ಯದ ಮಂತ್ರಿಗಳು ಸೇರಿದಂತೆ ನಾಡಿನ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ವರದಿ:
ಹೆಚ್.ಮಲ್ಲಿಕಾರ್ಜುನ
ರಾಜ್ಯ ಸಮಿತಿ ಸದಸ್ಯರು
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ)ಬೆಂಗಳೂರು
ಮೊ: ೯೮೮೦೬೯೩೭೨೩

ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ 33ನೇ ವರ್ಧಂತೀ ಉತ್ಸವ

ಗಂಗಾವತಿ: ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜುಲೈ-29 ಮಂಗಳವಾರ, ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು ಉತ್ಸವ ನಡೆಯಲಿದೆ.

ಬೆಳಗ್ಗೆ 9 ಘಂಟೆಗೆ ಗುರುಗಳ ಪಾದುಕೆಗಳಿಗೆ ಅಭೀಷೇಕ, ಶಂಕರ ಅಷ್ಟೋತ್ತರ ಪಾರಾಯಣ ಸೇರಿದಂತೆ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ಸಂಜೆ: 5.30ರಿಂದ ಭಜನೆ, ಆರತಿ ಹಾಗೂ ಮಹಾಮಂಗಳಾರತಿ ಜರುಗಲಿವೆ

ಪತ್ರಿಕಾ ದಿನಾಚರಣೆ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜರುಗಿತು.

ಗಂಗಾವತಿ: ಜುಲೈ 31 ರಂದು ಬೆಂಗಳೂರಿನ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕದ ಮಾಧ್ಯಮ ಪತ್ರಕರ್ತರ (ರಿ) ಸಂಘವನ್ನು ಅಧಿಕೃತವಾಗಿ ಸ್ಥಾಪಿಸಲಾಗುವುದು.

ಈ ಸಂಘವನ್ನು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಅದೇ ವೇದಿಕೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವೂ ಜರುಗಲಿದೆ.

ಅದೇ ದಿನ ಸಂಘದ ವೆಬ್‌ಸೈಟ್ ಉದ್ಘಾಟನೆ ಮತ್ತು ಸದಸ್ಯರ ಗುರುತಿನ ಕಾರ್ಡ್ ವಿತರಣೆ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ಈ ಕಾರ್ಯಕ್ರಮಕ್ಕೆ ಗಂಗಾವತಿಯ ಹೆಚ್ಚಿನ ಪತ್ರಕರ್ತರು ಭಾಗವಹಿಸಬೇಕೆಂಬ ಉದ್ದೇಶದಿಂದ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜುಲೈ 17ರಂದು ನಡೆಯಿತು.

ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಈ ಸಭೆ ನಡೆದಿದ್ದು, ರಾಜ್ಯ ಸಮಿತಿ ಸದಸ್ಯ ಎಚ್. ಮಲ್ಲಿಕಾರ್ಜುನ ಹೊಸಕೇರಿ ನೇತೃತ್ವ ವಹಿಸಿದ್ದರು.

ಜಿಲ್ಲಾಧ್ಯಕ್ಷ ರಮೇಶ್ ಕೋಟಿಯವರೂ ಸಭೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ, ಪತ್ರಕರ್ತರು ಸಂಘದ ಮಾನಸಮರ್ಥತೆ ಕಾಪಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಡಿ.ಎಂ. ಸುರೇಶ್, ಎಸ್. ಮಾರ್ಕಂಡೇಯ, ರಾಮಕೃಷ್ಣ ಸಿ.ಡಿ, ರಮೇಶ್ ಕಾಳಿ, ಮಲ್ಲೇಶ ನಾಯ್ಕ್ ಮತ್ತು ಹಲವರು ಭಾಗವಹಿಸಿದರು.

ಸಭೆಯಲ್ಲಿ ನಾಗರಾಜ ಕೊಟ್ನೆಕಲ್, ಸೋಮಪ್ಪ, ನಾಗರಾಜ ಅಂಗಡಿ, ಶರಣಯ್ಯ ಹೆಚ್.ಎಂ, ಡಿ.ರವಿಕುಮಾರ್, ಗಾಯಕವಾಡ, ಯಮನೂರಪ್ಪ, ಹೆಚ್.ಭೋಗೇಶ್ ಮತ್ತು ಇತರರು ಉಪಸ್ಥಿತರಿದ್ದರು.

ಆಷಾಢ ಮಾಸದ ಭೀಮನ ಅಮಾವಾಸ್ಯೆ: ಕಿಷ್ಕಿಂದ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು

ಗಂಗಾವತಿ: ಇತಿಹಾಸ ಪ್ರಸಿದ್ಧ ಹನುಮ ಹುಟ್ಟಿದ ನಾಡೆಂದು ಪ್ರಸಿದ್ಧವಾದ ವಿಜಯನಗರ ಸಾಮ್ರಾಜ್ಯದ ಆನೆಗುಂದಿ ಪ್ರದೇಶದ ಕಿಷ್ಕಿಂದ ಅಂಜನಾದ್ರಿಯಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಪೂಜಾ ಕಾರ್ಯಕ್ರಮಗಳು ಚಿಕ್ಕ ರಾಮಪುರದ ಆಂಜನೇಯ ದೇವಾಲಯದಲ್ಲಿ, ಪ್ರಧಾನ ಅರ್ಚಕ ಶ್ರೀ ವಿದ್ಯಾದಾಸ ಬಾಬಾಜಿ ಅವರ ನೇತೃತ್ವದಲ್ಲಿ ಉತ್ಸವಪೂರ್ವಕವಾಗಿ ನೆರವೇರಿಸಲ್ಪಟ್ಟವು.

ಬೆಳಿಗ್ಗೆ ಮೂಲ ಆಂಜನೇಯನಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ವಾಯುಸ್ತುತಿ ಪಠಣ, ಹನುಮಾನ್ ಚಾಲೀಸಾ ಪಾರಾಯಣ ಹಾಗೂ ಭಜನೆಗಳನ್ನು ಮಾಡಲಾಯಿತು.

ಪೂಜೆಯ ಬಳಿಕ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.

 

ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಭಕ್ತರು ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅರ್ಚಕ ವಿದ್ಯಾದಾಸ ಬಾಬಾಜಿ ಮಾತನಾಡುತ್ತಾ, “ಆಂಜನೇಯನ ಅವತಾರವಾದ ಭೀಮಸೇನ ಧರ್ಮಮಾರ್ಗದಲ್ಲಿ ನಡೆದದ್ದು, ಕೌರವರು ಸೋಲಲು ಇದು ಕಾರಣವಾಯಿತು,” ಎಂದು ಹೇಳಿದರು.

ಪತಿಗೆ ಪಾದಪೂಜೆ ಮಾಡುವುದರ ಮೂಲಕ ಪತ್ನಿಯು ಗಂಡನ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುವ ಪವಿತ್ರ ದಿನವಾಗಿದೆ ಎಂಬುದನ್ನೂ ಅವರು ತಿಳಿಸಿದರು.

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-07-2025 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ 34 ಮಂದಿ ಗಾಯಕ-ಗಾಯಕಿಯರು ಆಯ್ಕೆಯಾಗಿದ್ದು, ತಮ್ಮ ಕಲೆ ಪ್ರದರ್ಶನ ಮಾಡಲು ಅವಕಾಶ ಪಡೆಯಿದ್ದಾರೆ.

ಆಯ್ಕೆಯಾದ ಕಲಾವಿದರು ಇಂತಿವೆ:

  1. ಶ್ರೀಮತಿ ಸುಮಂಗಲಾ ದೇಸಾಯಿ (ಜೋಯಿಡಾ)

  2. ವಿಜಯಕುಮಾರ್ (ಹೊಸಪೇಟೆ)

  3. ಶ್ರೀಮತಿ ಜಿ.ನೀಲಗಂಗಮ್ಮ (ಹೊಸಪೇಟೆ)

  4. ಶ್ರೀಮತಿ ವಾಸವಿ ಸತೀಶ್ (ತುರುವೇಕೆರೆ)

  5. ವಾಲ್ಯಾನಾಯ್ಕ್ ಎಲ್ (ವಿಜಯನಗರ)

  6. ರಾಕೇಶ್ ಸಿಂಗ್ (ಚಿಕ್ಕಮಗಳೂರು)

  7. ಪಿ.ಮಲ್ಲಿಕಾರ್ಜುನ (ದಾವಣಗೆರೆ)

  8. ರಾಮನಾಥ ಜೆ. ನಾಯ್ಕ (ಅಂಕೋಲಾ)

  9. ಶ್ರೀಮತಿ ರೀನಾ ನಂದನ್ (ಹೊಸಪೇಟೆ)

  10. ಹನುಮಂತ ನಾಯ್ಕ್ ಸಿ (ನಾಗರಕಟ್ಟೆ ತಾಂಡ)

  11. ಬಿ.ಎನ್. ನಾಗೇಶ್ (ದಾವಣಗೆರೆ)

  12. ಗೌರಿ ಅರಸು (ಮಂಡ್ಯ)

  13. ವೀಣಾ ನಟರಾಜ್ (ಅಜ್ಜಂಪುರ)

  14. ಸ್ನೇಹ (ತೀರ್ಥಹಳ್ಳಿ)

  15. ಎಲ್. ಗಣೇಶ್ (ತುಂಬಿನಕೇರಿ ದೊಡ್ಡತಾಂಡ)

  16. ಆರ್. ಪ್ರಿಯಾಂಕ (ಹೊಸಪೇಟೆ)

  17. ಟಿ. ದೀಪಾ (ವಿಜಯನಗರ)

  18. ವಿದ್ಯಾ ಕೆ (ಚಿಕ್ಕಮಗಳೂರು)

  19. ಪ್ರಶಾಂತ್ ಕುಲಕರ್ಣಿ (ದಾಂಡೇಲಿ)

  20. ಶಶಿಧರ್ ಹಿರೇಮಠ (ಸೊಂಡೂರು)

  21. ಲಕ್ಷ್ಮೀ ಎಚ್ (ಹೊಸಪೇಟೆ)

  22. ಜೂಟೂರು ರಾಘವೇಂದ್ರ (ಹೊಸಪೇಟೆ)

  23. ಶ್ರೀದೇವಿ ತೇರದಾಳ (ಮಹಾಲಿಂಗಪುರ)

  24. ಉಮೇಶ್ ಕುಮಾರ್ ಎಚ್.ಎನ್ (ದಾವಣಗೆರೆ)

  25. ವಿಜಯಶಾಂತಿ ಕೆ (ಕಮಲಾಪುರ)

  26. ಡಾ. ಅಶೋಕ್ ಬಾಬು ಎ.ಆರ್ (ಚಿಕ್ಕಬಳ್ಳಾಪುರ)

  27. ಎಚ್. ಶ್ರೀನಿವಾಸ್

  28. ತಿಮ್ಮನಾಯ್ಕ್ ಸಿ (ಮುದ್ಲಾಪುರ)

  29. ರಮೇಶ್ ಎಸ್. ಲಮಾಣಿ (ಚಿತ್ರದುರ್ಗ)

  30. ಭಾಗ್ಯ ಎಸ್ (ಶಿವಮೊಗ್ಗ)

  31. ಕವಿತಾಬಾಯಿ ವೈ (ಭದ್ರಾವತಿ)

  32. ವಿಜಯ್ ಕುಮಾರ್ ಸಿ.ಆರ್ (ಚಿಕ್ಕಮಗಳೂರು)

  33. ಸುರೇಶ್ ರಾವ್ (ತುಮಕೂರು)

  34. ಮಹಾನಂದ ಮಠಪತಿ (ಕಲ್ಲೂರ್ ರೋಡ್)

ಈ ಗಾಯನ ಕಾರ್ಯಕ್ರಮದ ವೇಳೆ “ಕನ್ನಡ ಕೋಗಿಲೆ” ಎಂಬ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭ ಕೂಡ ನಡೆಯಲಿದೆ ಎಂದು ತಿಳಿಸಲಾಗಿದೆ.

ಈ ಎಲ್ಲ ಗಾಯಕ ಗಾಯಕಿಯರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಂತೆಯೇ, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಕೋರಿದ್ದಾರೆ.

ಲಯನ್ಸ್ ಕ್ಲಬ್ ನ ವತಿಯಿಂದ ಉಚಿತ ಕನ್ನಡಕ ವಿತರಣೆ

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಮತ್ತು ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜುಲೈ 24ರಂದು ಜರುಗಿತು.

ಈ ಕಾರ್ಯಕ್ರಮದಲ್ಲಿ, ಜುಲೈ 16ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದ ನೇತ್ರ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ 360 ಕನ್ನಡಕಗಳನ್ನು ವಿತರಿಸಲಾಯಿತು.

ವಿತರಣಾ ಕಾರ್ಯಕ್ರಮ ಶ್ರೀರಾಮನಗರದ ಎ.ಕೆ.ಆರ್.ಡಿ ಪಿಯು ಕಾಲೇಜಿನ ಆವರಣದಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಹಾಗೂ ವಿಜಯನಗರ ಲಯನ್ಸ್ ಕ್ಲಬ್‌ನ ಲ.ಗಂಗಾಧರ ಮತ್ತು ಲ.ಎನ್. ಭೈರೇಗೌಡ ಭಾಗವಹಿಸಿದರು.

ಗಂಗಾವತಿ ಲಯನ್ಸ್‌ ಕ್ಲಬ್‌ ನ ಹಿರಿಯ ಸದಸ್ಯರಾದ ಲ.ಹರಿಬಾಬು, ಆರೋಗ್ಯ ಶಿಬಿರದ ಸಂಯೋಜಕರಾದ ಲ.ಸುಬ್ರಮಣ್ಯೇಶ್ವರರಾವ್‌ ಭಾಗವಹಿಸಿದರು.

ಲಯನ್ಸ್‌ ಕ್ಲಬ್‌ ಗಂಗಾವತಿ ಖಜಾಂಚಿಯಾದ ಲ.ಶಿವಪ್ಪ ಗಾಳಿ, ಲ.ಅಜಾದ್ ಗನ್ನಮನಿ, ಲ.ಶಿವಕುಮಾರ ಅಂಗಡಿ, ಲ.ಗುರುಪ್ರಸಾದ, ಪಿ.ಸತ್ಯನಾರಾಯಣ, ಎ.ಕೆ.ಆರ್.ಡಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಅಮರೇಶ ಪಾಟೀಲ್‌ ಸೇರಿದಂತೆ ಇತರರು, ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಿದರು.

ಮಾಹಿತಿಗಾಗಿ
ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೋ:ನಂ: ೯೪೪೮೩೦೨೭೭೫

ಚಿಕ್ಕಮಗಳೂರು ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಜುಲೈ 27, 2025ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕವು ಸಂಯುಕ್ತವಾಗಿ ಆಯೋಜಿಸಿವೆ.

ರಾಜ್ಯ ಸಂಘವು ಪ್ರತಿ ಭಾನುವಾರ ಆನ್‌ಲೈನ್‌ನಲ್ಲಿ ಜಾನಪದ, ಭಾವಗೀತೆ, ಚಿತ್ರಗೀತೆಗಳನ್ನು ಒಳಗೊಂಡ ಗಾಯನ ಸ್ಪರ್ಧೆಗಳನ್ನು ಹಮ್ಮಿಕೊಂಡಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಗಾಯಕ-ಗಾಯಕಿಯರಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹ ನೀಡಲಾಗಿದೆ.

ಅವರಲ್ಲಿ ಆಯ್ಕೆಯಾದ 34 ಮಂದಿ ಪ್ರತಿಭಾನ್ವಿತ ಗಾಯಕರಿಗೆ ಈ ಸಮಾರಂಭದಲ್ಲಿ ಕನ್ನಡ ಕೋಗಿಲೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾದ ಡಾ. ವಿದ್ಯಾ ಕೆ. ಅವರು ವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಮಧುನಾಯಕ್ ಲಂಬಾಣಿ ಉದ್ಘಾಟಿಸಲಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಆಶಯ ಭಾಷಣ ನೀಡಲಿದ್ದಾರೆ.

ಹಾಸನದ ಸಾಹಿತಿ ಗೊರೂರು ಅನಂತರಾಜು ಮತ್ತು ಕುರುವಂಜಿ ಕೆ.ಪಿ. ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದಲ್ಲದೆ, ಚಿಕ್ಕಮಗಳೂರಿನ ಬಿ.ಎಲ್. ಪ್ರವೀಣ್, ಜಯಣ್ಣ, ಎಂ.ಎಸ್. ನಾಗರಾಜ್, ಎಚ್.ಎಂ. ಜಗದೀಶ್, ಹಸೈನಾರ್ ಬಿಳಿಗುಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಕೇಶ್ ಸಿಂಗ್, ಡಾ. ಶೈಲಜಾ ಕುಮಾರ್, ವಿನೋದ್, ಇಂಪಾ ನಾಗರಾಜ್, ನವೀನ್ ಬಿ.ಆರ್., ವಿಜಯ್ ಕುಮಾರ್, ಸಿ.ಆರ್.ಗೌರವ ಕಾರ್ಯದರ್ಶಿ, ರವಿ ಕುನ್ನಳ್ಳಿ ಗೌರವ ಸಹ ಉಪಸ್ಥಿತರಿರಲಿದ್ದಾರೆ.

ಪ್ರಶಸ್ತಿ ಪ್ರದಾನವನ್ನು ಮಹಾಭಾರತ ಕಲಾವಿದರಾದ ಮಧುಚಂದ್ರ, ರಮೇಶ್ ಯಾದವ್ ಮತ್ತು ಕಾಮಿಡಿ ಕಿಲಾಡಿ ಕಲಾವಿದರು ನೆರವೇರಿಸಲಿದ್ದಾರೆ.