ನದಿ ಹಾಗೂ ತೀರ್ಥಕ್ಷೇತ್ರಗಳ ಸುತ್ತಮುತ್ತ ೫೦೦ ಮೀಟರ್ ಸೋಪು, ಶಾಂಪು ಬಳಕೆ ನಿರ್ಬಂಧ ಸ್ವಾಗತಾರ್ಹ: ವಿಷ್ಣುತೀರ್ಥ ಜೋಷಿ

ನದಿ ಹಾಗೂ ತೀರ್ಥಕ್ಷೇತ್ರಗಳ ಸುತ್ತಮುತ್ತ ೫೦೦ ಮೀಟರ್ ಸೋಪು, ಶಾಂಪು ಬಳಕೆ ನಿರ್ಬಂಧ ಸ್ವಾಗತಾರ್ಹ: ವಿಷ್ಣುತೀರ್ಥ ಜೋಷಿ

ಗಂಗಾವತಿ: ನದಿ, ತೀರ್ಥಕ್ಷೇತ್ರಗಳಲ್ಲಿ ಅರ್ಧ ಬಳಸಿದ ಶಾಂಪೂ, ಸೋಪು ಇತ್ಯಾದಿ ಬಳಕೆ ಮಾಡುವುದನ್ನು ನಿರ್ಬಂಧಿಸುವ ಮೂಲಕ ನದಿ ನೀರು ಮಲಿನವಾಗದಂತೆ ತಡೆಯಲು ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ವಿಷ್ಣುತೀರ್ಥ ಜೋಷಿ ಪ್ರಕಟಣೆಯಲ್ಲಿ ಶ್ಲಾಘಿಸಿದರು. ಅರಣ್ಯ ಸಚಿವರ ತೀರ್ಮಾನವನ್ನು ಸ್ವಾಗತಿಸಿ ಮಾತನಾಡಿದ ಅವರು, ಕಳೆದ ಸಂಕ್ರಮಣದ ದಿನದಂದು ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಆಶ್ರಯದಲ್ಲಿ ರಾಜ್ಯಾದ್ಯಂತ ವಿವಿಧ ತೀರ್ಥ, ಪುಣ್ಯಕ್ಷೇತ್ರಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಕಡಲೆಹಿಟ್ಟಿನ ಮಿಶ್ರಣದ ಪ್ಯಾಕೆಟ್‌ಗಳನ್ನು ಹಂಚುವ ಮೂಲಕ “ವಿಷ ಮುಕ್ತ…

Read More
ಶ್ರೀ ಶಂಕರಮಠದ ಶಾರದಾಂಬೆಗೆ ಏಳನೇ ವರ್ಷದ ಸಂಭ್ರಮ. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಬದ್ಧ: ನಾರಾಯಣರಾವ್ ವೈದ್ಯ.

ಶ್ರೀ ಶಂಕರಮಠದ ಶಾರದಾಂಬೆಗೆ ಏಳನೇ ವರ್ಷದ ಸಂಭ್ರಮ. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಬದ್ಧ: ನಾರಾಯಣರಾವ್ ವೈದ್ಯ.

ಗಂಗಾವತಿ: ನಗರದ ಶಾರದಾ ನಗರದಲ್ಲಿರುವ ಶ್ರೀ ಶಂಕರಮಠ ಹಾಗೂ ಶ್ರೀ ಶಾರದಾದೇವಿಯ 7ನೇ ವರ್ಷದ ಪ್ರತಿಷ್ಠಾಪನಾ ದಿನಾಚರಣೆಯನ್ನು ಮಾರ್ಚ್-10‌ ಸೋಮವಾರದಂದು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. ಅಂದು ಬೆಳಿಗ್ಗೆ ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಶಾರದ ಶಂಕರ ಭಕ್ತ ಮಂಡಳಿ, ವಿಜಯಧ್ವಜ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಬಳಗ ಸೇರಿದಂತೆ ಇತರೆ ಭಜನಾ ಮಂಡಳಿಯ ಸದಸ್ಯರುಗಳಿಂದ ಲಲಿತಾ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ, ಅಷ್ಟೋತ್ತರ ಪಾರಾಯಣ, ಭಜನೆ ಸೇರಿದಂತೆ ಇತರೆ…

Read More
ಗಂಗಾವತಿಯ ರೇಡಿಯೋದಿಂದ ಮಿಷನ್ ಎಸ್.ಎಸ್.ಎಲ್.ಸಿ-೨೫ ರಾಜ್ಯವ್ಯಾಪಿ ಪ್ರಸಾರ ಶ್ಲಾಘನೀಯ : ಗಾಲಿ ಜನಾರ್ಧನರೆಡ್ಡಿ

ಗಂಗಾವತಿಯ ರೇಡಿಯೋದಿಂದ ಮಿಷನ್ ಎಸ್.ಎಸ್.ಎಲ್.ಸಿ-೨೫ ರಾಜ್ಯವ್ಯಾಪಿ ಪ್ರಸಾರ ಶ್ಲಾಘನೀಯ : ಗಾಲಿ ಜನಾರ್ಧನರೆಡ್ಡಿ

ಪರೀಕ್ಷೆಯು ಭಯ ನಿರ್ಮಿಸುವುದಕ್ಕಲ್ಲ, ನಮ್ಮ ಆಂತರ್ಯದಲ್ಲಿರುವ ಶಕ್ತಿಯನ್ನು ಹೊರಹಾಕಲು ಇರುವ ಅವಕಾಶ ಗಂಗಾವತಿ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡು ನಮ್ಮ ತಾಲೂಕಿಗೆ ಮತ್ತು ತಂದೆ-ತಾಯಿಗಳಿಗೆ ಹಾಗೂ ಗುರುಗಳಿಗೆ ಕೀರ್ತಿ ತರಲು, ಒಳ್ಳೆಯ ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ಪರೀಕ್ಷೆ ಎನ್ನುವುದು ಭಯದ ವಾತಾವರಣವನ್ನು ನಿರ್ಮಿಸುವುದಲ್ಲ, ನಿಮ್ಮ ಆಂತರ್ಯದಲ್ಲಿರುವ ಶಕ್ತಿಯನ್ನು ಹೊರಹಾಕಲಿಕ್ಕೆ ಇರುವ ಒಂದು ಸುವರ್ಣಾವಕಾಶ ಎಂದು ಶಾಸಕರಾದ ಗಾಲಿ ಜನಾರ್ಧನರೆಡ್ಡಿಯವರು ಹೇಳಿದರು. ಅವರು ಇಂದು ಮಾರ್ಚ್-೮ ಶನಿವಾರ, ಗಂಗಾವತಿ ಗ್ರಾಮೀಣ ಭಾರತಿ ೯೦.೪ ಎಫ್.ಎಂ. ಸಮುದಾಯ…

Read More
ಹಿರೇಜಂತಕಲ್‌ನ ಸರಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ಹಿರೇಜಂತಕಲ್‌ನ ಸರಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ಗಂಗಾವತಿ: ನಗರದ ಹಿರೇಜಂತಕಲ್‌ನ ಸರಕಾರಿ ಪ್ರೌಢಶಾಲೆಯ ೨೦೨೪-೨೫ ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಮಾರ್ಚ್-೮ ಶನಿವಾರ ನಗರಸಭೆ ಸದಸ್ಯರಾದ ಶ್ರೀಮತಿ ಹುಲಿಗೆಮ್ಮ ಕಿರಿಕಿರಿ ಅವರು ವೇದಿಕೆ ಮೇಲೆ ಹಾಸಿನರಾದ ಎಲ್ಲಾ ಗಣ್ಯರೊಂದಿಗೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ವಿ.ಗೊಂಡಬಾಳ ವಹಿಸಿ ಮಾತನಾಡಿ, ಮಕ್ಕಳಲ್ಲಿ ಸಹನೆ ಸತತ ಪರಿಶ್ರಮ ಧನಾತ್ಮಕ ಚಿಂತನೆ ಕಠಿಣ ಪರಿಶ್ರಮಗಳು ಯಶಸ್ಸಿನ ಮೆಟ್ಟಿಲುಗಳು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ…

Read More
ಶೃಂಗೇರಿಯ ಜಗದ್ಗುರು ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಭವ್ಯವಾದ ಶುಭಯಾತ್ರೆ.

ಶೃಂಗೇರಿಯ ಜಗದ್ಗುರು ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಭವ್ಯವಾದ ಶುಭಯಾತ್ರೆ.

ಕೊಪ್ಪಳ: ನಗರಕ್ಕೆ ಆಗಮಿಸಿದ ಶೃಂಗೇರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಶೋಭಾ ಯಾತ್ರೆ ಸಹಸ್ರಾರು ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಶುಕ್ರವಾರದಂದು ಜರುಗಿತು. ಹೊಸಪೇಟೆ ರಸ್ತೆಯಲ್ಲಿರುವ ಶ್ರೀ ಈಶ್ವರ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ಮಂಡಳಿಯ ಸದಸ್ಯರು ಹಾಡು, ಕೋಲಾಟಗಳಿಂದ ಗಮನ ಸೆಳೆದರು. ಬಳಿಕ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜಗದ್ಗುರುಗಳಿಂದ ಆಶೀರ್ವಚನ ಜರುಗಿತು.

Read More
ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ

ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ

ನಾಟಕದಲ್ಲೇ ಹುಟ್ಟಿ ನಾಟಕದಲ್ಲಿ ಬೆಳೆದು ನಾಟಕವೇ ಜೀವನವಾಗಿರುವಾಗ ನನಗೆ ನಾಟಕ ಬೀದಿಗಿಳಿಯಿತೇ? ಎಂದು ಸಂಕಟವಾಯ್ತು ನಿಜ. ಆದರೆ ಹೆಜ್ಜೆ ಗೆಜ್ಜೆಯ ಬೀದಿ ನಾಟಕ ವೀಕ್ಷಿಸಿದಾಗ ಇದೊಂದು ಬಯಸದೇ ಬಂದ ಭಾಗ್ಯ ಎನಿಸಿತು. ಜನಮನ ರಂಜಿಸಲು ಭವ್ಯ ರಂಗಸಜ್ಜಿಕೆ ಬೇಡ. ಕೇವಲ ಬೀದಿಯೇ ಸಾಕು ಎಂಬುದನ್ನು ಮೈಸೂರು ರಮಾನಂದ್ ದೃಡಪಡಿಸಿದ್ದಾರೆ. ಈ ಮಾತುಗಳನ್ನು ಬಹಳ ಹಿಂದೆಯೇ ವರನಟ ಡಾ. ರಾಜಕುಮಾರ್ ನುಡಿದಿದ್ದಾರೆ. ಪ್ರಭಾಕರ ಜೋಶಿ ಸಂಪಾದಕತ್ವದಲ್ಲಿ ಮೈಸೂರು ರಮಾನಂದ್ ಅಭಿನಂದನ ಗ್ರಂಥ ರಂಗಾನಂದದಲ್ಲಿ ಈ ನುಡಿಗಳನ್ನು ನಟ, ನಾಟಕಕಾರರಾದ…

Read More
ಭತ್ತದ ಕಣಜ ಗಂಗಾವತಿ ನಾಡಿನಲ್ಲಿ ಮಹಿಳಾ ಕರಾಟೆ ಕಲೆಯ ಕಲರವಕ್ಕೆ ಕನ್ನಡಿಯಾದ ಕಲ್ಯಾಣಿಯವರ ಸಾಹಸಗಾಥೆ

ಭತ್ತದ ಕಣಜ ಗಂಗಾವತಿ ನಾಡಿನಲ್ಲಿ ಮಹಿಳಾ ಕರಾಟೆ ಕಲೆಯ ಕಲರವಕ್ಕೆ ಕನ್ನಡಿಯಾದ ಕಲ್ಯಾಣಿಯವರ ಸಾಹಸಗಾಥೆ

ಗಂಗಾವತಿ: ಮೊದಲನೆಯದಾಗಿ ನಾಡಿನ ಸಮಸ್ತ ಮಹಿಳೆಯರಿಗೆ ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳು”. ಸಾಧನೆ ಮತ್ತು ಕಷ್ಟ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕಷ್ಟ ತೊಂದರೆ ಇಲ್ಲದ ಸಾಧನೆಯನ್ನು ಕೊಂಡಾಡುವಾಗ ಸಮಾಜವು ‘ಸಾಧನೆ’ ಎಂದು ಕರೆಯುವುದಕ್ಕೆ ಲೆಕ್ಕವಿಲ್ಲದಷ್ಟು ಸಬೂಬನ್ನು ಲೇಪಿಸಿ ಸಾಧನೆಯ ಮೆರಗನ್ನೆ ಬರಿದು ಮಾಡುತ್ತದೆ. ಸಮಾಜದ ಲೆಕ್ಕ ಬಿಡಿ, ಸಾಧಕನ ಮನಸ್ಸೆ ಶ್ರಮವಿರದ, ಕಷ್ಟವಿರದ ಸಾಧನೆಯನ್ನು ಒಪ್ಪಿಕೊಳ್ಳುವದಿಲ್ಲ. ಅದರಲ್ಲಿಯೂ ಮಹಿಳೆಯರ ಸಾಧನೆಯ ಆದಿಯು ಪುರುಷರ ಸಾಧನೆಯ ಹಾದಿಗಿಂತಲೂ ಕಷ್ಟದಾಯಕವಾಗಿರುತ್ತದೆ. ಆಧುನಿಕ ಕಲ್ಯಾಣ ಸಮಾಜದಲ್ಲಿ ಸಮಾನತೆಯ ಮಂತ್ರದ…

Read More
ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಬೆಳ್ಳಿ ಸಿಂಹಾಸನ ಹಾಗೂ ಪ್ರಭಾವಳಿ ಸಮರ್ಪಣೆ, ಸಾಗರದಲ್ಲಿ ಹರಿದು ಬಂತು ಭಕ್ತ ಸಮೂಹ.

ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಬೆಳ್ಳಿ ಸಿಂಹಾಸನ ಹಾಗೂ ಪ್ರಭಾವಳಿ ಸಮರ್ಪಣೆ, ಸಾಗರದಲ್ಲಿ ಹರಿದು ಬಂತು ಭಕ್ತ ಸಮೂಹ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶಿರಡಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೆಯ ವಾರ್ಷಿಕೋತ್ಸವ ಮಾರ್ಚ್-5 ಬುಧವಾರರಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಅವರಿಗೆ ಬೆಳ್ಳಿ ಸಿಂಹಾಸನ ಹಾಗೂ ಬೆಳ್ಳಿ ಪ್ರಭಾವಳಿಯನ್ನು ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಸಮರ್ಪಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಜೋಶಿ ಹಾಗೂ ಋತುಜರ್ ತಂಡದವರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಮಹಾಸಂಕಲ್ಪ, ಅಷ್ಟೋತ್ತರ ಪಾರಾಯಣ ಸೇರಿದಂತೆ ಶ್ರೀ ಸಾಯಿಬಾಬಾ ನಾಮಸ್ಮರಣೆಯನ್ನು ನಡೆಸಲಾಯಿತು….

Read More
ಮಾರ್ಚ್-4‌ ರಂದು ಜರುಗಿದ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ

ಮಾರ್ಚ್-4‌ ರಂದು ಜರುಗಿದ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ

ಗಂಗಾವತಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ, ಭಕ್ತಿ ಭಾವನೆಯಿಂದ ಸಂಜೆ 5:30ಕ್ಕೆ ಶ್ರೀಮಠದ ಆವರಣದಿಂದ ಸಕಲ ವಾದ್ಯ, ವೈಭವದೊಂದಿಗೆಹೊರಟ ಮಹಾರಥೋತ್ಸವದಲ್ಲಿ ಭಕ್ತಾದಿಗಳು ನಾಣ್ಯ ಹಾಗೂ ಉತ್ತತ್ತಿಯನ್ನು ರಥೋತ್ಸವಕ್ಕೆ ಸಮರ್ಪಿಸಿ ತಮ್ಮ ಭಕ್ತಿ ಭಾವವನ್ನು. ವ್ಯಕ್ತಪಡಿಸಿದರು. ರಥೋತ್ಸವ ಕಲ್ಮಠದವರೆಗೆ ತೆರಳಿ ದೇವಸ್ಥಾನಕ್ಕೆ ಆಗಮಿಸಿತು. ಈ. ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಮಹೇಶ್, ಹೊಸಳ್ಳಿ ಶಂಕರಗೌಡ, ನವಲಿ ವಾಸು, ಪರಗಿ ನಾಗರಾಜ್ ಸೇರಿದಂತೆ ವಿವಿಧ ಸಮಾಜ ಬಾಂಧವರು ಪಾಲ್ಗೊಂಡಿದ್ದರು..

Read More
ತ್ರಿ ಭಾಷಾ ಕವಿ ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಜಯಂತೋತ್ಸವ.

ತ್ರಿ ಭಾಷಾ ಕವಿ ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಜಯಂತೋತ್ಸವ.

ಬೆಂಗಳೂರು: ಇಲ್ಲಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಸ್ವರಲೋಕ ಸಂಗೀತ ಮತ್ತು ಸಾಂಸ್ಕೃತಿಕ ಮಹಾ ವಿದ್ಯಾಲಯದಲ್ಲಿ ಮಾರ್ಚ್-4‌ ಮಂಗಳವಾರದಂದು ತ್ರಿಬಾಷಾ ಕವಿ ಅಂಧರ ಬಾಳಿನ ಆಶಾಕಿರಣ ಗದಗ ವೀರೇಶ್ವರ ಪುಣ್ಯಶ್ರಮದ ದಿವ್ಯಜ್ಯೋತಿ ಲಿಂಗೈಕ್ಯ ಡಾ. ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಸುನಿತಾ ಗಂಗಾವತಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭವ್ಯ ಚಲ್ಲಯ್ಯ ಸೇರಿದಂತೆ ವಿದ್ಯಾಲಯದ ವಿದ್ಯಾರ್ಥಿಗಳು ಸ್ವರ ಸಂಗೀತದ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮತ್ತು ಪ್ರಮೋದ್…

Read More