೨೦೨೪-೨೫ನೇ ಸಾಲಿನ ವಿಜಯಪುರ ಮಹಿಳಾ ವಿಶ್ವಾವಿದ್ಯಾಲಯದ ಫಲಿತಾಂಶದಲ್ಲಿ ಗಂಗಾವತಿಯ ಸಂಕಲ್ಪ ಪ್ರ.ದ.ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಮೋಘ ಸಾಧನೆ
ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ೨೦೨೪-೨೫ನೇ ಸಾಲಿನ ಬಿ.ಎ ಮತ್ತು ಬಿಕಾಂ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಲಾಗಿದೆ.
ಗಂಗಾವತಿಯ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ.
ಬಿ.ಎ ಪದವಿಯಲ್ಲಿ ಒಟ್ಟು ೭೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.
ನೇಹಾ ತಂದೆ ಯಮನೂರ್ ಸಾಬ ಶೇ ೯೩.೩೮%, ರೇವತಿ ತಂದೆ ಜಯಣ್ಣ ಹೆಬ್ಬಾಳ್ ಶೇ ೯೩.೭%, ತಿರುಮಲ ತಂದೆ ಪಾಮಣ್ಣ ಪೂಜಾರಿ ಶೇ ೯೨.೯೨%, ಚೈತ್ರ ತಂದೆ ಲಕ್ಷ್ಮೀಪತಿ ಶೇ ೯೨.೭೬% ಫಲಿತಾಂಶ ಪಡೆದಿದ್ದಾರೆ.
ಅದೇ ರೀತಿ ಬಿಕಾಂ ಪದವಿಯಲ್ಲಿ ಒಟ್ಟು ೬೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿ ಗಳಿಸಿದ್ದಾರೆ.
ಪೂರ್ಣಿಮಾ ತಂದೆ ಶೇಖರಪ್ಪ ಮಡಿವಾಳ್ ಶೇ ೯೭.೦೭%, ಸಾಕ್ಷಿಪ್ರಿಯ ತಂದೆ ಮಂಜುನಾಥ್ ಶೆಟ್ಟಿ ಶಹಪುರ್ ಶೇ ೯೭.೦೭%, ಯಾಮಿನಿ ತಂದೆ ಪಿ ಕೃಷ್ಣ ಶೇ ೯೬.೩೧% ಹಾಗೂ ಅನಂತಲಕ್ಷ್ಮಿ ತಂದೆ ಆನಂತ್ಲ್ಯಾಕ್ಷ್ಮಿ ದೊಡ್ಡಮಲ್ಲಪ್ಪ ಶೇ ೯೫.೮೪% ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆಯುವುದರ ಮೂಲಕ ವಿದ್ಯಾರ್ಥಿನಿಯರು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೇಮಂತರಾಜ ಜಿ. ಕಲ್ಮಂಗಿ, ಕಾರ್ಯಾಧ್ಯಕ್ಷರಾದ ನಾಗರಾಜ ಎಸ್ ಗುತ್ತೇದಾರ, ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿ, ಕಾರ್ಯದರ್ಶಿಗಳಾದ ಬಸವರಾಜ ಎಲ್ ಕೇಸರಹಟ್ಟಿ, ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಸಿಂಗನಾಳ, ನಿರ್ದೇಶಕರಾದ ಡಾ. ಅಮಿತ್ ಕುಮಾರ್ ರೆಡ್ಡಿ ಹಾಗೂ ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ಹಾಗೂ ಮಹಾವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯು ವಿಶೇಷವಾಗಿ ಪ್ರೋತ್ಸಾಹಿಸಿದ ಪಾಲಕರಿಗೆ ಹಾಗೂ ಉತ್ತಮ ಬೋಧನೆ ಮಾಡಿ ವಿದ್ಯಾರ್ಥಿನಿಯರ ಸಾಧನೆಗೆ ಕಾರಣರಾದ ಉಪನ್ಯಾಸಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದೆ.
ಮಾಹಿತಿಗಾಗಿ
ಬಸಪ್ಪ ಶಿರಿಗೇರಿ
ಪ್ರಾಚಾರ್ಯರು,
ಸಂಕಲ್ಪ ಪ್ರಥಮ ದರ್ಜೆ ಮಹಾವಿದ್ಯಾಲಯ ಗಂಗಾವತಿ.
ಅeಟಟ: ೯೦೧೯೧೯೮೦೬೭


ಗಂಗಾವತಿ: ಇಂದು ಜುಲೈ-೯ ಶನಿವಾರ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗಂಡುಗಲಿ ಕುಮಾರರಾಮನ ಜಯಂತಿಯನ್ನು ಆಚರಿಸಲಾಯಿತು.
ಗಂಗಾವತಿ: ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ, ನೂತನ ಉಪಕರ್ಮ ಹಾಗೂ ಜನಿವಾರಧಾರಣೆ ಧಾರ್ಮಿಕವಾಗಿ ನೆರವೇರಿತು.
ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ ಸಹಯೋಗದೊಂದಿಗೆ ಜುಲೈ-೮ ಶುಕ್ರವಾರ ನಗರದ ನೆಹರುಪಾರ್ಕ್ನಲ್ಲಿ ವನಮಹೋತ್ಸವ ಆಚರಿಸಲಾಯಿತು.
ಶ್ರೀ ಶಂಕರೇಗೌಡ ತುಂಬಕೆರೆಯವರ ಕೖಷ್ಣಸಾಗರ ಮತ್ತು ಇತರ ಕವನಗಳು ಎಂಬುದು ಇವರ ನಾಲ್ಕನೇ ಕೃತಿ. ಈ ಕೃತಿಯಲ್ಲಿ ಶ್ರೀ ಸ್ವಾಮಿ ರಾಮಕೃಷ್ಣ ಪರಮಹಂಸರನ್ನು ವಿಧವಿಧವಾಗಿ ನಿವೇದಿಸಿಕೊಳ್ಳುವ ಕವಿತೆಗಳೇ ಹೆಚ್ಚಾಗಿವೆ.
ಗೊರೂರು ಅನಂತರಾಜು, ಹಾಸನ.
ಗಂಗಾವತಿ: ಕಂಜ್ಯೂಮರ್ ಕಾನ್ಫೆಡರೇಷನ್ ಆಫ್ ಇಂಡಿಯಾ (ಸಿ.ಸಿ.ಐ) ದ ಅಂಗಸಂಸ್ಥೆಯಾದ ಗ್ರಾಹಕರ ಸಮನ್ವಯ ಸಮಿತಿ (ಸಿ.ಸಿ.ಸಿ), ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ.
ಸಾರ್, ನಮಸ್ಕಾರ. ನನ್ನ ಹೆಸರು ಸ್ನೇಹ, ಊರು ತೀರ್ಥಹಳ್ಳಿ. ನನಗೆ ಸಂಗೀತವೇ ಉಸಿರು, ಕನಸು, ಜೀವನದ ಭಾಗವಾಗಿದೆ. ನಾಲ್ಕನೇ ತರಗತಿಯಿಂದಲೇ ವೇದಿಕೆ ಮೇಲೆ ಹಾಡುತ್ತಿದ್ದೆ.


ಶನಿವಾರದಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ 12 ವರ್ಷಗಳಿಂದ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದೇನೆ.


ಗೊರೂರು ಅನಂತರಾಜು, ಹಾಸನ.