೨೦೨೪-೨೫ನೇ ಸಾಲಿನ ವಿಜಯಪುರ ಮಹಿಳಾ ವಿಶ್ವಾವಿದ್ಯಾಲಯದ ಫಲಿತಾಂಶದಲ್ಲಿ ಗಂಗಾವತಿಯ ಸಂಕಲ್ಪ ಪ್ರ.ದ.ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಮೋಘ ಸಾಧನೆ

ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ೨೦೨೪-೨೫ನೇ ಸಾಲಿನ ಬಿ.ಎ ಮತ್ತು ಬಿಕಾಂ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಲಾಗಿದೆ.

ಗಂಗಾವತಿಯ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ.

ಬಿ.ಎ ಪದವಿಯಲ್ಲಿ ಒಟ್ಟು ೭೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.

ನೇಹಾ ತಂದೆ ಯಮನೂರ್‌ ಸಾಬ ಶೇ ೯೩.೩೮%, ರೇವತಿ ತಂದೆ ಜಯಣ್ಣ ಹೆಬ್ಬಾಳ್ ಶೇ ೯೩.೭%, ತಿರುಮಲ ತಂದೆ ಪಾಮಣ್ಣ ಪೂಜಾರಿ ಶೇ ೯೨.೯೨%, ಚೈತ್ರ ತಂದೆ ಲಕ್ಷ್ಮೀಪತಿ ಶೇ ೯೨.೭೬% ಫಲಿತಾಂಶ ಪಡೆದಿದ್ದಾರೆ.

ಅದೇ ರೀತಿ ಬಿಕಾಂ ಪದವಿಯಲ್ಲಿ ಒಟ್ಟು ೬೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿ ಗಳಿಸಿದ್ದಾರೆ.

ಪೂರ್ಣಿಮಾ ತಂದೆ ಶೇಖರಪ್ಪ ಮಡಿವಾಳ್ ಶೇ ೯೭.೦೭%, ಸಾಕ್ಷಿಪ್ರಿಯ ತಂದೆ ಮಂಜುನಾಥ್ ಶೆಟ್ಟಿ ಶಹಪುರ್ ಶೇ ೯೭.೦೭%, ಯಾಮಿನಿ ತಂದೆ ಪಿ ಕೃಷ್ಣ ಶೇ ೯೬.೩೧% ಹಾಗೂ ಅನಂತಲಕ್ಷ್ಮಿ ತಂದೆ ಆನಂತ್ಲ್ಯಾಕ್ಷ್ಮಿ ದೊಡ್ಡಮಲ್ಲಪ್ಪ ಶೇ ೯೫.೮೪% ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆಯುವುದರ ಮೂಲಕ ವಿದ್ಯಾರ್ಥಿನಿಯರು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೇಮಂತರಾಜ ಜಿ. ಕಲ್ಮಂಗಿ, ಕಾರ್ಯಾಧ್ಯಕ್ಷರಾದ ನಾಗರಾಜ ಎಸ್ ಗುತ್ತೇದಾರ, ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿ, ಕಾರ್ಯದರ್ಶಿಗಳಾದ ಬಸವರಾಜ ಎಲ್ ಕೇಸರಹಟ್ಟಿ, ಕೋಶಾಧ್ಯಕ್ಷರಾದ ಮಲ್ಲಿಕಾರ್ಜುನ ಸಿಂಗನಾಳ, ನಿರ್ದೇಶಕರಾದ ಡಾ. ಅಮಿತ್ ಕುಮಾರ್ ರೆಡ್ಡಿ ಹಾಗೂ ಪ್ರಾಚಾರ್ಯರಾದ ಬಸಪ್ಪ ಶಿರಿಗೇರಿ ಹಾಗೂ ಮಹಾವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯ ಉಜ್ವಲವಾಗಲೆಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯು ವಿಶೇಷವಾಗಿ ಪ್ರೋತ್ಸಾಹಿಸಿದ ಪಾಲಕರಿಗೆ ಹಾಗೂ ಉತ್ತಮ ಬೋಧನೆ ಮಾಡಿ ವಿದ್ಯಾರ್ಥಿನಿಯರ ಸಾಧನೆಗೆ ಕಾರಣರಾದ ಉಪನ್ಯಾಸಕ ವೃಂದಕ್ಕೆ ಅಭಿನಂದನೆ ಸಲ್ಲಿಸಿದೆ.

ಮಾಹಿತಿಗಾಗಿ
ಬಸಪ್ಪ ಶಿರಿಗೇರಿ
ಪ್ರಾಚಾರ್ಯರು,
ಸಂಕಲ್ಪ ಪ್ರಥಮ ದರ್ಜೆ ಮಹಾವಿದ್ಯಾಲಯ ಗಂಗಾವತಿ.
ಅeಟಟ: ೯೦೧೯೧೯೮೦೬೭

ಗಂಡುಗಲಿ ಕುಮಾರರಾಮನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಜನಮಾನಸದಲ್ಲಿ ಬೇರೂರಿವೆ: ಸೋಮನಾಥ ಎಸ್. ಹೆಬ್ಬಡದ

ಗಂಗಾವತಿ: ಇಂದು ಜುಲೈ-೯ ಶನಿವಾರ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗಂಡುಗಲಿ ಕುಮಾರರಾಮನ ಜಯಂತಿಯನ್ನು ಆಚರಿಸಲಾಯಿತು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿಯ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು .

ಜಯಂತಿಯ ಅಂಗವಾಗಿ, ಶ್ರೀ ಸೋಮನಾಥ ಎಸ್. ಹೆಬ್ಬಡದ ಅವರು ಗಂಡುಗಲಿ ಕುಮಾರರಾಮನ ಇತಿಹಾಸ ಹಾಗೂ ಅವನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಮನೋಭಾವ ಕುರಿತು ಉಪನ್ಯಾಸ ನೀಡಿದರು.

ಅವರು ಕುಮಾರರಾಮನ ತ್ಯಾಗ ಬಲಿದಾನದ ಬಗ್ಗೆ ಹಾಗೂ ಸದ್ಗುಣಗಳ ಕಾರಣದಿಂದ ಇಂದಿಗೂ ಜನಮಾನಸದಲ್ಲಿ ಬೇರೂರಿದ್ದು, ಇಂದಿಗೂ ಆತನನ್ನು ಪೂಜಿಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಾಂತ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಅಶೋಕ್ ರಾಯಕರ್, ಇತಿಹಾಸವನ್ನು ತಿರುಚುವ ಅಪಾಯದ ಬಗ್ಗೆ ಎಚ್ಚರಿಸಿದರು.

ಮೈಸೂರಿನ ಕನ್ನಂಬಾಡಿ ಕಟ್ಟೆಯ ಇತಿಹಾಸವನ್ನು ತಪ್ಪಾಗಿ ಜನರಿಗೆ ತಿಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬುದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಡಾ|| ಮಾನಸ ಡಿ.ಎ. ಅವರು, ವಿದ್ಯಾರ್ಥಿಗಳಿಗೆ ಹೋರಾಟಗಾರರ ಜೀವನ ಚರಿತ್ರೆ ಪರಿಚಯಿಸುವ ಪರಿಷತ್ತಿನ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದರು.

ಅವರು ಈ ಕಾರ್ಯಕ್ರಮಗಳು ಯುವಕರಲ್ಲಿ ದೇಶಭಕ್ತಿ ಮತ್ತು ಸಂಸ್ಕೃತಿ ಅರಿವು ಬೆಳೆಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯಂಕಪ್ಪ ಕಟ್ಟಿಮಣಿ, ರಾಜೇಶ್ ನಾಯಕ್ ದೊರೆ ಮತ್ತು ಹರನಾಯಕ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅವರು ಗಂಡುಗಲಿ ಕುಮಾರರಾಮನ ಹೋರಾಟ ಇಂದಿನ ಪೀಳಿಗೆಗೆ ಪ್ರೇರಣೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷ ಎನ್. ಜಡೆಪ್ಪ ಮೆಟ್ರಿ, ಯುವಕರು ದುಶ್ಚಟಗಳಿಂದ ದೂರವಿದ್ದು ದೇಶದ ಗರಿಮೆ ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತರಾಗಬೇಕು ಎಂದು ಕರೆ ನೀಡಿದರು.

ಅವರು ಸಾಹಿತ್ಯ ಮತ್ತು ಸಂಸ್ಕೃತಿ ರಕ್ಷಣೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕುಮಾರಿ ಸೌಮ್ಯ ನಿರ್ವಹಿಸಿದರು, ಶ್ರೀ ಮಹದೇವ್ ಮೋಟಿ ಅವರು ಕಾರ್ಗಿಲ್ ಯೋಧರಿಗೆ ನಮನ ಸಲ್ಲಿಸುವ ದೇಶಭಕ್ತಿ ಗೀತೆ ಹಾಡಿದರು.

ಸ್ವಾಗತವನ್ನು ಯಲ್ಲಪ್ಪ ಕಲಾಲ್ ಮಾಡಿದರು. ವಂದನಾರ್ಪಣೆಯನ್ನು ಬಳ್ಳಾರಿ ವಿಭಾಗಿಯ ಸಂಯೋಜಕರಾದ ಶ್ರೀಧರ್. ಟಿ ಸಲ್ಲಿಸಿ ಶಾಂತಿ ಮಂತ್ರ ಪಠಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಪ್ರಕಾಶ್ ಪಾಟೀಲ್, ಶಿವನಗೌಡ ತೆಗ್ಗಿ, ಶ್ರವಣಕುಮಾರ ರಾಯಕರ್, ಉಪನ್ಯಾಸಕರಾದ ಬಾಳಪ್ಪ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಂಕರ ಮಠದಲ್ಲಿ ನೂತನ ಉಪಕರ್ಮ ಹಾಗೂ ಜನಿವಾರ ಧಾರಣೆ.

ಗಂಗಾವತಿ: ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ, ನೂತನ ಉಪಕರ್ಮ ಹಾಗೂ ಜನಿವಾರಧಾರಣೆ ಧಾರ್ಮಿಕವಾಗಿ ನೆರವೇರಿತು.

ಈ ಸಂದರ್ಭದಲ್ಲಿ ಉಪನಯನಗೊಂಡ ಎರಡು ಮಕ್ಕಳಿಗೆ ಉಪಕರ್ಮ ಹಾಗೂ ಸಮಾಜ ಬಾಂಧವರ ಜನಿವಾರಧಾರಣೆ ವಿಧಿಗಳನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ನೆರವೇರಿಸಿದರು.

ವೇದಮೂರ್ತಿ ಮಹೇಶ್ ಭಟ್ ಜೋಶಿ ಅವರು, ಸನಾತನ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಗಳು ಹಿಂದಿನ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದ್ದವು ಎಂದು ಹೇಳಿದರು.

ಉಪನಯನಗೊಂಡ ವಟುಗಳಿಗೆ ಶಿಕ್ಷಣ ಕಲಿಯುವ ಅವಕಾಶ ದೊರಕುತ್ತಿದ್ದ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಅವರು ಉಲ್ಲೇಖಿಸಿದರು.

ಅವರು ಜನಿವಾರಧಾರಣೆ ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಅಗತ್ಯವಾದ ಆಚರಣೆ ಎಂದು ವಿವರಿಸಿದರು.

ಧಾರ್ಮಿಕ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸನಾತನ ಧರ್ಮದ ರಕ್ಷಣೆಗೆ ನಾವು ಕೈಜೋಡಿಸಬಹುದು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪಕರ್ಮ ಹೋಮ, ಗಾಯತ್ರಿ ಮಂತ್ರ ಪಾರಾಯಣ ಮತ್ತು ಇತರೆ ಪೂಜಾ ಕಾರ್ಯಕ್ರಮಗಳು ಶನಿವಾರ ಬೆಳಿಗ್ಗೆ ನೆರವೇರಿಸಲಾಯಿತು.

ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ ಕರ್. ಸುರೇಶ್. ಅನಿಲ್ ಅಳವಂಡಿ. . . ಶೇಷಗಿರಿ ಗಡಾದ್. ಇತರರು ಪಾಲ್ಗೊಂಡಿದ್ದರು

ವರದಿ : ಸುದರ್ಶನ ವೈದ್ಯ

ಫೋಟೊ : ಶ್ರೀನಿವಾಸ ಕರಮುಡಿ

ಎಲ್ಲಾ ಉದ್ಯಾನವನಗಳಲ್ಲಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು: ಡಾ|| ಶಿವಕುಮಾರ ಮಾಲಿಪಾಟೀಲ್

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ ಸಹಯೋಗದೊಂದಿಗೆ ಜುಲೈ-೮ ಶುಕ್ರವಾರ ನಗರದ ನೆಹರುಪಾರ್ಕ್ನಲ್ಲಿ ವನಮಹೋತ್ಸವ ಆಚರಿಸಲಾಯಿತು.

ಖ್ಯಾತ ವೈದ್ಯರಾದ ಲಯನ್ ಡಾ|| ದೇವರಾಜ ಅವರು ಗಿಡ ನೆಡುವುದರ ಮುಖಾಂತರ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್‌ರವರು ನಗರದ ಎಲ್ಲಾ ಗಾರ್ಡನ್‌ಗಳನ್ನು ಸಾರ್ವಜನಿಕರು ವಾಯುವಿಹಾರಕ್ಕೆ ಬಳಸಬೇಕು.

ಸಾರ್ವಜನಿಕರು ಗಾರ್ಡನ್‌ಗಳ ಸ್ವಚ್ಛತೆ ಕಾಪಾಡಿ ಪರಿಸರ ಉಳಿಸಿಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಖಜಾಂಚಿಯಾದ ಲ. ಶಿವಪ್ಪ ಗಾಳಿ, ಲ. ನಾಗರಾಜ ಗುತ್ತೇದಾರ, ಲ. ಸುರೇಶ ಸಂಕನೂರು, ಲ. ಗುರುಪ್ರಸಾದ, ಬಸವರಾಜ ಮ್ಯಾಗಳಮನಿ, ಪ್ರಹ್ಲಾದ ಕುಲಕರ್ಣಿ, ಚಿದಾನಂದ ಕೀರ್ತಿ ಹಾಗೂ ಸಂಕಲ್ಪ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಂಕರೇಗೌಡ ತುಂಬಕೆರೆಯವರ “ಕೃಷ್ಣಸಾಗರ ಮತ್ತು ಇತರ ಕವನಗಳು” ಗೊರೂರು ಅನಂತರಾಜು, ಹಾಸನ

ಶ್ರೀ ಶಂಕರೇಗೌಡ ತುಂಬಕೆರೆಯವರ ಕೖಷ್ಣಸಾಗರ ಮತ್ತು ಇತರ ಕವನಗಳು ಎಂಬುದು ಇವರ ನಾಲ್ಕನೇ ಕೃತಿ. ಈ ಕೃತಿಯಲ್ಲಿ ಶ್ರೀ ಸ್ವಾಮಿ ರಾಮಕೃಷ್ಣ ಪರಮಹಂಸರನ್ನು ವಿಧವಿಧವಾಗಿ ನಿವೇದಿಸಿಕೊಳ್ಳುವ ಕವಿತೆಗಳೇ ಹೆಚ್ಚಾಗಿವೆ.

ಪ್ರಕೃತಿ ಕವಿತೆ, ತಾಯಿ ದೇವತೆ, ಜ್ಞಾನ ದೇವತೆ ಮತ್ತು ಪರಮಾತ್ಮನಲ್ಲಿ ಒಳ್ಳೆಯ ದಾರಿ ತೋರಿಸುವಂತಹ ಬೇಡುವ ಸಲಹುವ ಪ್ರಾರ್ಥಿಸುವ ಪದ್ಯಗಳು ಇವೆ. ಇವಲ್ಲದೆ ಪ್ರೇಮ ಗೀತೆಗಳು, ಸ್ವಾಮಿ ವಿವೇಕಾನಂದರ ಕುರಿತು ಬರೆದಿರುವ ಕವನಗಳು ಇವೆ.

ಮಂಡ್ಯ ಜಿಲ್ಲೆಯ ಶಂಕರೇಗೌಡ ತುಂಬಕೆರೆಯವರು ಫೋನಿನ ಮಾತಿನಲ್ಲಿ ತಮ್ಮ ಪರಿಚಯ ಹೇಳಿಕೊಳ್ಳುತ್ತಾ ಇವರ ಮೂರು ಕೃತಿಗಳು ಈಗಾಗಲೇ ಪ್ರಕಟವಾಗಿರುವುದು ತಿಳಿಯಿತು. ಅವುಗಳ ವಿಚಾರದ ಮಾಹಿತಿ ವ್ಯಾಟ್ಸಪ್ ಮಾಡಿದರು.

ಚಿಂತನ ಸೌರಭ ಇದು ಲೇಖಕರ ಚಿಂತನೆಗಳ ಬರಹ. ಒಂದು ವಿಷಯವನ್ನು ಈ ಆಧುನಿಕ ಸಂದರ್ಭದಲ್ಲಿ ವಾಸ್ತವ ದೃಷ್ಟಿಕೋನದಿಂದ ಹೇಗೆ ಅವಲೋಕಿಸಬಹುದು ಎಂಬುದನ್ನು ಗಮನವಿರಿಸಿ ಆದಷ್ಟು ಚಿಕ್ಕದಾಗಿ ಸರಳವಾಗಿ ಏನು ಹೇಳಬೇಕು ಅದನ್ನಷ್ಟೇ ಹೇಳಿ ಅರ್ಥೈಸಿದ್ದಾರೆ.

ಇವರ ಇನ್ನೊಂದು ಕೃತಿ ಹನಿಗವನ ಸೌರಭ. ಇದು ನನಗೆ ಇಷ್ಟವಾದ ಪ್ರಕಾರ. ಇದರಲ್ಲಿ 500 ಚುಟುಕುಗಳಿವೆ. ಹತ್ತು ಹಲವು ವಿಷಯಗಳನ್ನು ನಾಲ್ಕು ಸಾಲುಗಳ ಚುಟುಕುಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಇವರ ಮತ್ತೊಂದು ಸಂಕಲನ ಆಧುನಿಕ ವಚನ ಸೌರಭ. ಇದು 400 ವಚನಗಳನ್ನು ಒಳಗೊಂಡಿದೆ. ವರ್ತಮಾನದ ಸಮಾಜದಲ್ಲಿ ಘಟಿಸುವ ಘಟನೆಗಳಿಗೆ 5 ಸಾಲಿನ ವಚನ ಓದುಗರನ್ನು ಎಚ್ಚರಿಸುತ್ತದೆ.

ಗೀತಾಂಜಲಿಗೊಂದು ಭಾವಥಾ೯ಂಜಲಿ ಇದು ಡಾ. ಕೆ. ಗೌರಮ್ಮ ಮತ್ತು ಶಂಕರೇಗೌಡ ತುಂಬಕೆರೆ ಇವರು ಆರ್. ಎಲ್.ಜಿ ಅವರು ಇಂಗ್ಲಿಷ್ ನಿಂದ ಅನುವಾದಿಸಿರುವ ವರಕವಿ ರವೀಂದ್ರರ ಗೀತಾಂಜಲಿ ಕೃತಿಯಿಂದ ಪ್ರಭಾವಿತರಾಗಿ ಅದರ ಎಲ್ಲಾ 103 ಕವನಗಳನ್ನು ಅಮೂಲಾಗ್ರವಾಗಿ ಓದಿ ನಂತರ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಭಾವಾರ್ಥವನ್ನು ಬರೆದಿದ್ದಾರೆ.

ಮಂಡ್ಯದ ಅಭಿನವ ಭಾರತಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನಂತರ ಅಲ್ಲಿನ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ 2018 ರಲ್ಲಿ ನಿವೃತ್ತರಾಗಿ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ.

ಇವರಿಗೆ 2012ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಕಥಾ ವಿಮರ್ಶೆ ನಗೆ ಹನಿಗಳು ಚಿತ್ರ ಕವನಗಳು ಪದರಂಗ ಪದಬಂಧ ರಚನೆ ಮುಂತಾದವು ಇವರ ಹವ್ಯಾಸ.

ಇವರ ಕಷ್ಟಸಾಗರ ಮತ್ತು ಇತರ ಕವನಗಳು ಸಂಕಲದಲ್ಲಿ 100 ವೈವಿಧ್ಯಪೂರ್ಣ ಕವಿತೆಗಳಿವೆ. ಪ್ರದಾನವಾಗಿ ಭಕ್ತಿ ಗೀತೆಗಳು ಮಾಧವನ ಕುರಿತ ಪದ್ಯಗಳು ಸರಳ ಬಾಷೆಯಲ್ಲಿ ರಾಗ ತಾಳ ಅನುಸಾರ ರೂಪುಗೊಂಡು ಗಾಯಕರು ವೇದಿಕೆಗಳಲ್ಲಿ ರಾಗ ಹಾಕಿ ಹಾಡಬಹುದಾಗಿದೆ.

ಇನನೇನಮ್ಮ ನಮ್ಮ ಮಾಧವನು
ಮನವನ್ನು ತಣಿಸುವ ಮೋಹನನು
ಸದ್ದುಗದ್ದಲವಿಲ್ಲದೆ ಬಂದಿರುವನು
ನಮ್ಮೊಡನಾಡಲು ಇಲ್ಲಿಯೇ ಇರುವನು

ಶಿಶು ಕಾವ್ಯವಾಗಿಯು ಮನಸೆಳೆವ ಕೆಲವು ಗೀತೆಗಳು ಈ ಕೃತಿಯಲ್ಲಿ ಸಾಕಷ್ಟಿವೆ.

ಮಗುವೆ ಬಿರಿವ ತುಟಿಯ
ನಾನು ನಿನ್ನ ನೋಡಿದಾಗ
ಎನ್ನ ಮನವು ಹರ್ಷದಿ
ಮುದಗೊಳ್ಳುವುದು ಆಗ

ಪ್ರಕೃತಿ ಕಾವ್ಯಗಳು ಪರಿಸರ ಕಾಳಜಿ ಪರಿಸರ ಪ್ರೇಮ ಈ ಕೆಳಗಿನ ಕವಿತೆಯಲ್ಲಿ ಅಭಿವ್ಯಕ್ತವಾಗಿದೆ.

ಆಹಾ ಏನು ಚೆಲುವು
ಎಂಥ ಸೊಬಗು ಈ ಬುವಿಯಲ್ಲಿ
ಯಾರು ಇದನು ರೂಪಿಸಿದರು?
ಸಗ್ಗದ ಸಿರಿ ತಂದು ಮಾಡಿದರು!

ಜೀವನದಿ ಕಾವೇರಿ ಅದರ ದಡದಲ್ಲಿ ನೆಲೆಸಿರುವ ಜನರ ಬದುಕಿನ
ಜೀವಸೆಲೆ ಎಂಬುದು ಇವರ ಈ ಕೆಳಗಿನ ಕವಿತೆಯಲ್ಲಿ ವ್ಯಕ್ತವಾಗಿದೆ.

ಕಾವೇರಿ ನೀ ಹರಿಯುತಾ
ಈ ಬುವಿಯ ತಣಿಸಿದೆ
ಬಹುಮಂದಿಗೆ ನೆಲೆ ನೀಡಿ
ಇಲ್ಲಿ ಪಾವನ ಎನಿಸಿದೆ

ಭಗವಾನ್ ಶ್ರೀ ರಾಮಕೃಷ್ಣರು ಅಮೃತಪುತ್ರ ಶ್ರೀ ಸ್ವಾಮಿ ವಿವೇಕಾನಂದ ಈ ಮಹನೀಯರ ವ್ಯಕ್ತಿ ಚಿತ್ರಣ, ಅವರ ಜೀವನ ಗಾಥೆಯು ಈ ಕೆಳಗಿನ ಸರಳ ಪದ್ಯಗಳ ರಚನೆಯಲ್ಲಿ ಇಷ್ಟವಾಗುತ್ತದೆ.

ಭಾರತ ಜನನಿಯ ಅಮೃತ ಪುತ್ರ
ನೀನೇ ಈ ದೇಶದ ಉಜ್ವಲ ನೇತ್ರ
( ಸ್ವಾಮಿ ವಿವೇಕಾನಂದ)

ದಕ್ಷಿಣೇಶ್ವರ ತಟಾಕದಲ್ಲಿ ಸಿದ್ಧಿ ಪಡೆದು
ಧೀರ ಶಿಷ್ಯ ವಿವೇಕರ ಪರಿಚಯಿಸಿದೆ
(ರಾಮಕೃಷ್ಣರು)

ಈ ಪದ್ಯಗಳು ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ. ಗೂಢಾರ್ಥ ಅಥವಾ ಭಾವಾರ್ಥ ಬೇರೆ ಹೇಳಬೇಕಾಗಿಲ್ಲ.

ಇದನ್ನು ಸ್ವತಃ ಕವಿಗಳೇ ದೂರವಾಣಿಯಲ್ಲಿ ತಿಳಿಸಿ ಪುಸ್ತಕವನ್ನು ಕಳಿಸಿದರು..ನನ್ನ ಕಾವ್ಯ ಪದ್ಯ ಸರಳ ಭಾಷೆಯಲ್ಲಿದ್ದು ಜನಸಾಮಾನ್ಯರಿಗೆ ತಲುಪಬೇಕೆಂಬುದೇ ತನ್ನ ಆಶಯವೆಂದರು.

ನಿನ್ನೊಳಗೆ ಹರಿಯುವ
ರಸದಾರಿಗೆ ರೂಪು ಕೊಡು
ಅದನ್ನು ರಾಡಿ ಮಾಡದೆ
ನಿರ್ಮಲವಾಗಿರಿಸಲು ಮನವ ಮಾಡು

ಕೃತಿಯ ಪ್ರಕಾಶಕರಾದ ಹನ್ಯಾಳು ಗೋವಿಂದಗೌಡರ ಮೂಲಕ ಪರಿಚಯವಾದ ಲೇಖಕರು ಮುನ್ನುಡಿ ಬಯಸಿ ಈ ಮೊದಲು ಹಸ್ತಪ್ರತಿ ಕಳಿಸಿದ್ದರು. ಈಗ ಕೃತಿ ಹೊರಬಂದಿದೆ. ಕೃತಿಯ ನೂರನೇ ಕವನ ವಂದನೆ. ಅದು ಹೀಗಿದೆ.

ದೇವಾಧಿದೇವ ನಿನ್ನಂತರಂಗದ
ಒಳಿತೆಲ್ಲವೂ ನಿನ್ನದೇ ಕೃಪೆ
ಈ ಕೃಪೆಗಾಗಿ ನಿನಗೆನ್ನ ವಂದನೆ

ಗೊರೂರು ಅನಂತರಾಜು, ಹಾಸನ.
9449462879
29ನೇ ವಾರ್ಡ್, 3ನೇ ಕ್ರಾಸ್,
ಶ್ರೀ ಶನಿಶ್ವರ ದೇವಸ್ಥಾನ ರಸ್ತೆ,
ಹಾಸನ.

ದಕ್ಷಿಣ ಭಾರತದ ಗ್ರಾಹಕ ಹಕ್ಕುಗಳ ಸಮನ್ವಯ ಸಮಿತಿ (ಸಿ.ಸಿ.ಸಿ) ಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಧನರಾಜ ಈ. ಆಯ್ಕೆ.

ಗಂಗಾವತಿ: ಕಂಜ್ಯೂಮರ್ ಕಾನ್‌ಫೆಡರೇಷನ್ ಆಫ್ ಇಂಡಿಯಾ (ಸಿ.ಸಿ.ಐ) ದ ಅಂಗಸಂಸ್ಥೆಯಾದ ಗ್ರಾಹಕರ ಸಮನ್ವಯ ಸಮಿತಿ (ಸಿ.ಸಿ.ಸಿ), ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ.

ಇದು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಗೋವಾ ರಾಜ್ಯಗಳ ೫೬ ಗ್ರಾಹಕರ ಸಮಿತಿಗಳನ್ನು ಒಳಗೊಂಡಿದೆ.

ಈ ಸಮಿತಿಯ ಕರ್ನಾಟಕ ರಾಜ್ಯ ಘಟಕದ ಚೇರ್ಮನ್ ಆಗಿ ಶಿಕ್ಷಣ ತಜ್ಞ, ಸಾಮಾಜಿಕ ಹೋರಾಟಗಾರ ೩೭೧(ಜೆ) ಸಮಿತಿಯ ಸಂಚಾಲಕ ಧನರಾಜ್ ಈ ರವರು ನಾಮನಿರ್ದೇಶನ ಗೊಂಡಿದ್ದಾರೆ.

ಈ ತೀರ್ಮಾನವನ್ನು ಜುಲೈ -೩೦ ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಭೆಯನ್ನು ಸಿ.ಸಿ.ಐ ಅಧ್ಯಕ್ಷರಾದ ಡಾ. ಅನಂತ ಶರ್ಮಾರವರ ನೇತೃತ್ವದಲ್ಲಿ ನಡೆಸಲಾಯಿತು ಹಾಗೂ ಸಿ.ಸಿ.ಸಿ ಯ ಚೇರ್ಮನ್ ಎಸ್. ಚಕ್ರಪಾಣಿಯವರು ಘೋಷಣೆ ಮಾಡಿದ್ದಾರೆ.

ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಯ ರಚನೆ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕದ ಹೊಣೆಯನ್ನು ನೂತನ ಚೇರ್ಮನ್‌ರಾದ ಧನರಾಜ್ ಈ ರವರಿಗೆ ವಹಿಸಲಾಯಿತು.

ಸಿ.ಸಿ.ಸಿ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಗ್ರಾಹಕರ ಹಕ್ಕುಗಳ ಜಾಗೃತಿ, ಆಹಾರ ಕಲಬೆರಕೆ, ವಿರುದ್ಧ ಕಾನೂನಾತ್ಮಕ ಹೋರಾಟ ಹಾಗೂ ನೆರವು ಒದಗಿಸುತ್ತಿದೆ.

ಇದರಡಿಯಲ್ಲಿ ೫೬ ಪ್ರಮುಖ ಗ್ರಾಹಕ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. “ಸಂಕೀರ್ಣವಾದ ಇಂದಿನ ಕಾರ್ಪೋರೇಟ್ ಯುಗದಲ್ಲಿ ಗ್ರಾಹಕರು ಎದುರಿಸುತ್ತಿರುವ ವಂಚನೆಗಳು ಇನ್ನೂ ಸಂಕೀರ್ಣವಾಗಿದ್ದು, ಇಷ್ಟೊಂದು ಅಗಾಧವಾದ ಕ್ಷೇತ್ರದ ನಿರ್ವಹಣೆಗೆ ನಾನು ಯೋಗ್ಯನೆಂದು ಭಾವಿಸಿ, ನನಗೆ ಈ ಜವಾಬ್ದಾರಿಯನ್ನು ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಈ ಹೊಣೆಗಾರಿಕೆಗೆ ಪೂರ್ಣನ್ಯಾಯ ಒದಗಿಸುವ ದೃಢನಂಬಿಕೆಯಿದ್ದು, ಈಗಾಗಲೇ ೨೭೦೦ ಜನ ನ್ಯಾಯ ಹಾಗೂ ಆರೋಗ್ಯ ಕ್ಷೇತ್ರದ ತಜ್ಞ ಸದಸ್ಯರನ್ನು ಒಳಗೊಂಡ ಸಿ.ಸಿ.ಸಿ ಯ ಸಹಕಾರ ಈ ನಿಟ್ಟಿನಲ್ಲಿ ಪಡೆಯುವೆ” ಎಂದು ರಾಜ್ಯಾಧ್ಯಕ್ಷ ಧನರಾಜ್ ಈ. ಈ ಮೂಲಕ ತಿಳಿಸಿದರು.

ದಕ್ಷಿಣ ಭಾರತದ ಗ್ರಾಹಕ ಹಕ್ಕುಗಳ ಸಮನ್ವಯ ಸಮಿತಿ (ಸಿ.ಸಿ.ಸಿ) ಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಧನರಾಜ.ಈ ಆಯ್ಕೆ.
ಗಂಗಾವತಿ: ಕಂಜ್ಯೂಮರ್ ಕಾನ್‌ಫೆಡರೇಷನ್ ಆಫ್ ಇಂಡಿಯಾ (ಸಿ.ಸಿ.ಐ) ದ ಅಂಗಸಂಸ್ಥೆಯಾದ ಗ್ರಾಹಕರ ಸಮನ್ವಯ ಸಮಿತಿ (ಸಿ.ಸಿ.ಸಿ), ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ.
ಇದು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಗೋವಾ ರಾಜ್ಯಗಳ ೫೬ ಗ್ರಾಹಕರ ಸಮಿತಿಗಳನ್ನು ಒಳಗೊಂಡಿದೆ.
ಈ  ಸಮಿತಿಯ ಕರ್ನಾಟಕ ರಾಜ್ಯ ಘಟಕದ ಚೇರ್ಮನ್ ಆಗಿ ಶಿಕ್ಷಣ ತಜ್ಞ, ಸಾಮಾಜಿಕ ಹೋರಾಟಗಾರ ೩೭೧(ಜೆ) ಸಮಿತಿಯ ಸಂಚಾಲಕ ಧನರಾಜ್ ಈ ರವರು ನಾಮನಿರ್ದೇಶನ ಗೊಂಡಿದ್ದಾರೆ.
ಈ ತೀರ್ಮಾನವನ್ನು ಜುಲೈ -೩೦ ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯನ್ನು ಸಿ.ಸಿ.ಐ ಅಧ್ಯಕ್ಷರಾದ ಡಾ. ಅನಂತ ಶರ್ಮಾರವರ ನೇತೃತ್ವದಲ್ಲಿ ನಡೆಸಲಾಯಿತು ಹಾಗೂ ಸಿ.ಸಿ.ಸಿ ಯ ಚೇರ್ಮನ್ ಎಸ್. ಚಕ್ರಪಾಣಿಯವರು ಘೋಷಣೆ ಮಾಡಿದ್ದಾರೆ.
ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಯ ರಚನೆ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕದ ಹೊಣೆಯನ್ನು ನೂತನ ಚೇರ್ಮನ್‌ರಾದ ಧನರಾಜ್ ಈ ರವರಿಗೆ ವಹಿಸಲಾಯಿತು.
ಸಿ.ಸಿ.ಸಿ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಗ್ರಾಹಕರ ಹಕ್ಕುಗಳ ಜಾಗೃತಿ ಮತ್ತು ರಕ್ಷಣೆ, ಆಹಾರ ಕಲಬೆರಕೆ, ದಾರಿತಪ್ಪಿಸುವ ಜಾಹೀರಾತುಗಳ ಕುರಿತ ಜಾಗೃತಿ, ಕಾನೂನು ಹೋರಾಟ ನೆರವು, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತ ಜಾಗೃತಿಯಂತಹ ಕಾನೂನಾತ್ಮಕ ಹೋರಾಟ ಹಾಗೂ ನೆರವು ಒದಗಿಸುತ್ತಿದೆ.
ಇದರಡಿಯಲ್ಲಿ ೫೬ ಪ್ರಮುಖ ಗ್ರಾಹಕ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. “ಸಂಕೀರ್ಣವಾದ ಇಂದಿನ ಕಾರ್ಪೋರೇಟ್ ಯುಗದಲ್ಲಿ ಗ್ರಾಹಕರು ಎದುರಿಸುತ್ತಿರುವ ವಂಚನೆಗಳು ಇನ್ನೂ ಸಂಕೀರ್ಣವಾಗಿದ್ದು, ಇಷ್ಟೊಂದು ಅಗಾಧವಾದ ಕ್ಷೇತ್ರದ ನಿರ್ವಹಣೆಗೆ ನಾನು ಯೋಗ್ಯನೆಂದು ಭಾವಿಸಿ, ನನಗೆ ಈ ಜವಾಬ್ದಾರಿಯನ್ನು ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಈ ಹೊಣೆಗಾರಿಕೆಗೆ ಪೂರ್ಣನ್ಯಾಯ ಒದಗಿಸುವ ದೃಢನಂಬಿಕೆಯಿದ್ದು, ಈಗಾಗಲೇ ೨೭೦೦ ಜನ ನ್ಯಾಯ ಹಾಗೂ ಆರೋಗ್ಯ ಕ್ಷೇತ್ರದ ತಜ್ಞ ಸದಸ್ಯರನ್ನು ಒಳಗೊಂಡ ಸಿ.ಸಿ.ಸಿ ಯ ಸಹಕಾರ ಈ ನಿಟ್ಟಿನಲ್ಲಿ ಪಡೆಯುವೆ” ಎಂದು ರಾಜ್ಯಾಧ್ಯಕ್ಷ ಧನರಾಜ್ ಈ. ಈ ಮೂಲಕ ತಿಳಿಸಿದರು.
ಸರ್, ನನ್ನ ಕ್ಸಾನ್ಸರ್ ನೋವಲ್ಲಿ ಸ್ವಾಂತನ ನೀಡಿದ್ದು ನನ್ನ ಹಾಡು. ನಾನು ಸ್ನೇಹ ತೀರ್ಥಹಳ್ಳಿ

ಸಾರ್, ನಮಸ್ಕಾರ. ನನ್ನ ಹೆಸರು ಸ್ನೇಹ, ಊರು ತೀರ್ಥಹಳ್ಳಿ. ನನಗೆ ಸಂಗೀತವೇ ಉಸಿರು, ಕನಸು, ಜೀವನದ ಭಾಗವಾಗಿದೆ. ನಾಲ್ಕನೇ ತರಗತಿಯಿಂದಲೇ ವೇದಿಕೆ ಮೇಲೆ ಹಾಡುತ್ತಿದ್ದೆ.

ಪಿಯುಸಿವರೆಗೂ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಗಳಿಸುತ್ತಿದ್ದೆ. ಮದುವೆಯ ನಂತರ ಬೇರೆ ಊರಿಗೆ ಹೋಗಬೇಕಾಯಿತು. ಅಲ್ಲಿ ನನ್ನನ್ನು ಗುರುತಿಸುವವರಿಗೆ ಸ್ವಲ್ಪ ಸಮಯ ಬೇಕಾಯಿತು.

ಒಮ್ಮೆ ಮನಸ್ಸು ಮಾಡಿ ಒಂದು ಸ್ಪರ್ಧೆಗೆ ಹೋದೆ. ಅಲ್ಲಿ ಭಾವಗೀತೆ ಹಾಗೂ ಜನಪದ ಗೀತೆ ಸ್ಪರ್ಧೆ ಇತ್ತು. 125 ಜನ ಸ್ಪರ್ಧಿಗಳು ಇದ್ದರು. ಎಲ್ಲರೂ ಚೆನ್ನಾಗಿ ಹಾಡಿದರು. ನಾನು “ಈ ಆಗಸ ಇದ್ದಾರೆ…” ಎಂಬ ಭಾವಗೀತೆ ಹಾಡಿದೆ.

ಅದಕ್ಕೆ ನನಗೆ ಪ್ರಥಮ ಸ್ಥಾನ ಲಭಿಸಿತು. ಅದಾಗಿನಿಂದ ಸ್ಥಳೀಯವಾಗಿ ನಾನು ಹಾಡುವ ಅವಕಾಶಗಳು ಹೆಚ್ಚಾದವು.

ಭಜನೆ ಕಾರ್ಯಕ್ರಮಗಳು, ಪ್ರಾರ್ಥನೆ ಹಾಡುಗಳು ಎಲ್ಲ ಕಡೆ ಕರೆ ಬರುತ್ತಿತ್ತು. ಅದರೊಡನೆ ನನ್ನ ಪ್ರಯಾಣ ಮುಂದುವರಿದಿತು.

ಸ್ನೇಹಿತರು ಕರೋಕೆ ಬಗ್ಗೆ ತಿಳಿಸಿದರು. ಮ್ಯೂಸಿಕ್ ಗೊತ್ತಿದ್ದರಿಂದ ಕರೋಕೆ ಹಾಸುಹೊಕ್ಕಾಗಲಿಲ್ಲ. ಮೊದಲಿಗೆ “ಈ ಹಸಿರು ಸಿರಿಯಲಿ ನವಿಲೆ…” ಹಾಡನ್ನು ಗೈದಿದ್ದೆ. ಈ ಹಾಡು ಜನಪ್ರಿಯವಾಯಿತು, ಇಂದಿಗೂ ನಾನು ಅದನ್ನು ಹಾಡುತ್ತೇನೆ.

ಇದು ನನ್ನ ಸಂಗೀತ ಪಯಣದ ಮತ್ತೊಂದು ಅಧ್ಯಾಯವಾಯಿತು. ಗಂಡ, ಎರಡು ಮಕ್ಕಳು ಸೇರಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ಒಂದು ದಿನ ಹಠಾತ್‌ ನನ್ನ ಜೀವನದಲ್ಲಿ ಬದಲಾವಣೆವಾಯಿತು.

ನನಗೆ ಕ್ಯಾನ್ಸರ್ ಎಂದು ಪತ್ತೆಯಾಯಿತು. 38 ವರ್ಷದ ವಯಸ್ಸು, ಚಿಕ್ಕ ಮಕ್ಕಳ ಜೊತೆ ಈ ಸುದ್ದಿ ಕೇಳಿ ಭಯವೂ, ತಲೆಕೆಡಿಸಿಕೊಳ್ಲುವಂತ ಪರಿಸ್ಥಿತಿಯೂ ಉಂಟಾಯಿತು. ಜ್ಯೋತಿಷ್ಯ ನಂಬುವುದಕ್ಕಿಂತ ಚಿಕಿತ್ಸೆಯ ಕಡೆ ನಿರ್ಧಾರ ಮಾಡಿದೆ. ಆದರೆ ಆಸ್ಪತ್ರೆಗೆ ಹೋಗಿದಂತೆ ಅನುಭವಿಸಿದ ನೋವು ಮರೆತೇ ಆಗಲ್ಲ.

ಟ್ರೀಟ್ಮೆಂಟ್ ಸುಲಭವಾಗಿರಲಿಲ್ಲ. ನರಕ ಅನುಭವಿಸಿದ್ದೆ. ಮನಸ್ಸಿಗೆ ತಾನೇ ಧೈರ್ಯ ಹೇಳಿಕೊಂಡು ಮುಂದುವರಿಯಬೇಕಾಯಿತು. ಅವರು ಕೇಳಿದಂತೆ ನನ್ನ ಹಾಡುಗಳು ನನ್ನಿಗೆ ಶಕ್ತಿ ಕೊಟ್ಟವು. ಪುನಃ ಹಾಡಲು ಪ್ರಾರಂಭ ಮಾಡಿದೆ.

ಭಾವಗೀತೆ, ಜನಪದ ಗೀತೆಗಳ ಮೂಲಕ ನನ್ನ ನೋವನ್ನು ಮರೆತುಬಿಡುತ್ತಿದ್ದೆ. ಕರೋಕೆ ಮೂಲಕ ಅಭ್ಯಾಸ ಮುಂದುವರಿಸಿದೆ. ಅಂತೆಯೇ ಟ್ರೀಟ್ಮೆಂಟ್ ಮುಗಿಯಿತು. ನಾನು ‘ನಾರ್ಮಲ್’ ಎಂಬ ವರದಿ ಪಡೆದೆ.

ಆದರೆ ಮಾತ್ರೆಗಳನ್ನು ನಿಲ್ಲಿಸಲಿಲ್ಲ. ಅದರ ಜೊತೆಗೆ ಇನ್ನೂ ಹಲವು ಕಾಯಿಲೆಗಳು ನನ್ನ ಜೀವನದಲ್ಲಿ ಸೇರಿಕೊಂಡವು. ಸಂಗೀತವೇ ಆ ಸಂಕಷ್ಟದಿಂದ ದಾರಿ ತೋರಿಸಿತು. ಕ್ಯಾನ್ಸರ್ ಬಂದವನು ಸತ್ತೇ ಹೋಗ್ತಾನೆ ಎಂಬ ಜನರ ನಂಬಿಕೆಗೆ ಬದಲಾಗಿಸಲು ನಾನು ಮುಂದಾದೆ. ದೇವರು ನನ್ನಲ್ಲಿ ಆತ್ಮಬಲ ತುಂಬಿದನು.

ನಾನು ಮ್ಯೂಸಿಕ್‌ ಮೂಲಕ ಬದುಕನ್ನು ಪುನರಾಯಿಸಿಕೊಂಡೆ. ಗುಂಪಿನಲ್ಲಿ ಹಾಡುತ್ತಿದ್ದಾಗ ನನ್ನ ಪ್ರತಿಭೆ ಮಸುಕಾಗಿ ಹೋಗುತ್ತಿತ್ತು. ಆದ್ದರಿಂದ ಸಿಂಗಲ್ ಹಾಡುಗಳನ್ನು ಮಾಡಲು ನಿರ್ಧರಿಸಿದೆ.

ಸ್ನೇಹಿತರು ನನ್ನ ಮೇಲೆ ನಂಬಿಕೆ ಇಟ್ಟು, ವೇದಿಕೆಯಲ್ಲಿ ಐದು ಹಾಡುಗಳಿಗೆ ಅವಕಾಶ ಕೊಟ್ಟರು. ಆಗಿನಿಂದ ನನ್ನ ಪ್ರಯಾಣ ಮುಂದುವರಿಯಿತು. ಎಲ್ಲೆಡೆ ನಾನು ಪ್ರೀತಿಯಿಂದ ಕರೆಯಲ್ಪಡುತ್ತಾ ಹಾಡುತ್ತಿದ್ದೇನೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಆನ್‌ಲೈನ್ ವೇದಿಕೆ ನನಗೆ ಹೊಸ ಅಂಗಳವಾಯಿತು. ಅಲ್ಲಿ ಹಾಡಿದ ಹಾಡು ಆಯ್ಕೆ ಆಯ್ತು. ಮಧು ನಾಯ್ಕ್ ಲಂಬಾಣಿ ಅವರು ನನ್ನಲ್ಲಿ ಆಸಕ್ತಿಯಿಂದ ಮಾತನಾಡಿದರು. ಅವರು ಉತ್ತಮ ಸಂಘಟಕರಾಗಿದ್ದು ನಮ್ಮಂತಹ ಕಲಾವಿದರಿಗೆ ಮುಖ್ಯ ವಾಹಿನಿಗೆ ತಲುಪಲು ಸಹಾಯ ಮಾಡಿದ್ದಾರೆ.

ಇಂದಿನವರೆಗೆ 300ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಮದುವೆ, ಹಬ್ಬ, ಶುಭಸಮಾರಂಭ ಎಲ್ಲೆಡೆ ಗಾಯನ ಮಾಡಿದ್ದೇನೆ. ನಾನು ಒಬ್ಬಳಾಗಿ ಹೋಗುವುದು ಸರಿಯೆಂದು ಅನಿಸದ ಕಾರಣ ನನ್ನ ಮಗಳಿಗೂ ಹಾಡು ಕಲಿಸಿದ್ದೇನೆ.
ಅವಳು ನನ್ನ ಜೊತೆಗೆ 6ನೇ ವರ್ಷದಿಂದಲೇ ಹಾಡುತ್ತಿದ್ದಾಳೆ. ಇಡೀ ಕುಟುಂಬ ನನ್ನ ಹಿಂದೆ ನಿಂತಿದೆ.

“ನಂದೇ ಸ್ನೇಹ ತೀರ್ಥಹಳ್ಳಿ” ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದೇನೆ. ಜನ ನನ್ನ ಹಾಡುಗಳನ್ನು ಕೇಳುತ್ತಾರೆ. ಇದರಿಂದ ಮತ್ತಷ್ಟು ಕಲಿಕೆಗೆ ಸಹಾಯವಾಗುತ್ತಿದೆ. ಎಲ್ಲೆಡೆ “ಯೂಟ್ಯೂಬ್ ಸಿಂಗರ್ ಸ್ನೇಹ ಅಲ್ವಾ?” ಎನ್ನುತ್ತಾರೆ. ಇದು ನನಗೆ ಸಂತೋಷ, ಧೈರ್ಯ ಮತ್ತು ಬಲವನ್ನು ನೀಡುತ್ತದೆ.

27 ರಂದು ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ಸಿಕ್ಕಿತು. ಅದು ನನ್ನ ಜೀವನದ ಮರೆಯಲಾರದ ಕ್ಷಣ. ಗುರುರಾದ ಗೊರೂರು ಅನಂತರಾಜು ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

ನನ್ನ ಕಷ್ಟ ಧೈರ್ಯದಿಂದ ಕೇಳಿದ ನಿಮಗೆ ಅನಂತ ಧನ್ಯವಾದಗಳು.
ನಿಮ್ಮ ಸ್ನೇಹ, ತೀರ್ಥಹಳ್ಳಿ.

ಶನಿವಾರ ಸಂಜೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಕಾರ್ಯಕ್ರಮ

ಶನಿವಾರದಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹಾಸನದ ಉತ್ತರ ಬಡಾವಣೆಯಲ್ಲಿ ಸ್ಥಾಪಿತ ನಾಟ್ಯ ಕಲಾ ನಿವಾಸ್ ಸಂಸ್ಥೆಯು ಆಗಸ್ಟ್ 2 ರಂದು 18ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.

ಈ ವಿಶೇಷ ದಿನದ ಪ್ರಯುಕ್ತ ಸಂಜೆ ನಾಲ್ಕು ಗಂಟೆಗೆ ‘ಹರಿಹರ ಸುತ’ ಎಂಬ ಅಯ್ಯಪ್ಪನ ಚರಿತ್ರೆ ಆಧಾರಿತ ನೃತ್ಯ ನಾಟಕದ ಪ್ರದರ್ಶನವಿದೆ.

ನಂತರ, ಸಂಜೆ ಆರು ಗಂಟೆಯಿಂದ ಕರ್ನಾಟಕದ ಖ್ಯಾತ ನೃತ್ಯ ಕಲಾವಿದರು ‘ನಾಟ್ಯ ದಾಸೋಹಂ’ ಕಾರ್ಯಕ್ರಮದಲ್ಲಿ ಹರಿದಾಸರ ರಚನೆಗಳನ್ನು ಹಾಡಿ ನೃತ್ಯಿಸುತ್ತಾರೆ.

ಸಂಸ್ಥೆಯ ಪ್ರಾಂಶುಪಾಲ ಉನ್ನತ್ ಜೈನ್ ಅವರು ಈ ಕಾರ್ಯಕ್ರಮದ ಮಾಹಿತಿ ನೀಡಿದ್ದು, ಸಾರ್ವಜನಿಕರನ್ನು ಭಾಗವಹಿಸಲು ಆಹ್ವಾನಿಸಿದ್ದಾರೆ.

ಸಂಗೀತವೇ ನನ್ನ ಉಸಿರು – ನಾಗರಕಟ್ಟೆಯ ಗಾನಕೋಗಿಲೆ ಸಿ. ಹನುಮಂತನಾಯ್ಕ

ಕಳೆದ 12 ವರ್ಷಗಳಿಂದ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದೇನೆ.

ಜಾನಪದ ಗೀತೆ ವೈಯಕ್ತಿಕ ಮತ್ತು ಸಮೂಹ ಗಾಯನ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಹಿಂದೂಸ್ತಾನಿ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ.

ಕರ್ನಾಟಕ ಶಾಸ್ತ್ರೀಯ ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಲಾ ಪ್ರೀತಿಗೆ ಮತ್ತಷ್ಟು ಬೆಳಕು ಹರಿಸಿದ್ದೇನೆ.

ಇಂತಹ ವೈವಿಧ್ಯಮಯ ಪ್ರತಿಭೆ ಹೊಂದಿರುವ ವ್ಯಕ್ತಿ ನಾಗರಕಟ್ಟೆಯ ಸಿ. ಹನುಮಂತನಾಯ್ಕ, ಪ್ರಸ್ತುತ ದಾವಣಗೆರೆಯ ದುಗ್ಗಮ್ಮಪೇಟೆಯ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿದ್ದಾರೆ.

ಇವರು ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವುದರ ಜೊತೆಗೆ ಅಂಗವಿಕಲರ ರಾಜ್ಯ ಮಟ್ಟದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.

ಹುಟ್ಟಿದ 14 ತಿಂಗಳ ನಂತರ ಪೋಲಿಯೋ ರೋಗದಿಂದ ವಿಕಲಚೇತನರಾದ ಇವರು ತಂದೆ ಚಂದ್ರನಾಯ್ಕ ಅವರಿಂದ ಪ್ರೇರಣೆಯುಂಟಾಯಿತು ಎಂದು ಕೃತಜ್ಞತಾಪೂರ್ವಕವಾಗಿ ನೆನಪಿಸುತ್ತಾರೆ.

ತಾಯಿ ಪುಟ್ಟಿಬಾಯಿ, ಪತ್ನಿ ಪವಿತ್ರಾ, ಮಗ ವಿಕ್ರಮ್ ನಾಯ್ಕ ಹಾಗೂ ಮಗಳು ದ್ರುವೀಕ ಅವರ ಪ್ರೀತಿಯ ಕುಟುಂಬವಾಗಿದೆ.

ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನಾಗರಕಟ್ಟೆಯಲ್ಲಿಯೇ ಮುಗಿಸಿ, ದಾವಣಗೆರೆಯ ಮೋತಿಯಪ್ಪ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.

ಡಿ.ಎಡ್ ತರಬೇತಿಯನ್ನು ತುಮಕೂರಿನ ಚಿಕ್ಕನಹಳ್ಳಿ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪಡೆದು, ಧಾರವಾಡದಿಂದ ಬಿಎ, ಇಗ್ನೋದಿಂದ ಬಿ.ಎಡ್ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಪಡೆದಿರುವ ಇವರು, 2010ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಶಿಕ್ಷಕರ ಹುದ್ದೆಗೆ ಆಯ್ಕೆಯಾದರು.

ಬಾಲ್ಯದಲ್ಲಿಯೇ ತಂದೆ ಹಾಡುತ್ತಿದ್ದ ಲಾವಣಿ, ಕೋಲಾಟ, ಭಜನೆ ಪದಗಳು ಇವರಿಗೆ ಸಂಗೀತದ ಪ್ರೇರಣೆಯಾಗಿದ್ದು, 4ನೇ ತರಗತಿಯಿಂದ ಹಾಡುಗಳನ್ನು ಹಾಡತೊಡಗಿದರು.

ಇವರೆಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ 130ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಗಾನಕೋಗಿಲೆ. ಅವರಿಗೆ ‘ಕಲಾ ವಿಭೂಷಣ’, ‘ಶಿಕ್ಷಣ ಸೌರಭ’ ಪ್ರಶಸ್ತಿಗಳು ಲಭಿಸಿವೆ.

ಇವರ ಮತ್ತೊಂದು ವಿಶೇಷತೆ ಎಂದರೆ ಗಂಡು ಹಾಗೂ ಹೆಣ್ಣು ಧ್ವನಿಯಲ್ಲಿ ಹಾಡಬಹುದಾದ ಅಪರೂಪದ ಪ್ರತಿಭೆ. ಮಕ್ಕಳಿಗೂ ಈ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ತ್ರಿಚಕ್ರ ವಾಹನದಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುವ ಮೂಲಕ ಇವರು ಸಾಮಾಜಿಕ ಕಳಕಳಿಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಇವರು ಕರ್ನಾಟಕ ರಾಜ್ಯ ಬರಹಗಾರರ ಸಂಘದ (ರಿ.) ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ್ ಲಂಬಾಣಿ ಅವರು ಆಯೋಜಿಸಿದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹಾಡಿ “ಕರ್ನಾಟಕ ಕರುನಾಡ ಕೋಗಿಲೆ” ಪ್ರಶಸ್ತಿಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಅವರು ಹಾಡಿದ ಕರೋಕೆ ಗೀತೆಯನ್ನು ತೀರ್ಪುಗಾರನಾಗಿ ನಾನು ಆಲಿಸಿದ್ದು, ಅವರ ಸಾಮೂಹಿಕ ನಾಡಗೀತೆ ವಿಶೇಷವಾಗಿ ಗಮನಸೆಳೆದಿತು.

“ಹತ್ತನೇ ವಯಸ್ಸಿನಿಂದಲೇ ನಾನು ಜಾನಪದ, ಭಾವಗೀತೆ, ಲಾವಣಿ, ಚಿತ್ರಗೀತೆಗಳನ್ನೇ ಹಾಡುತ್ತಾ ಕಲಿಸುತ್ತಾ ಬಂದಿದ್ದೇನೆ ಸಾರ್,” ಎನ್ನುತ್ತಾರೆ ಅವರು.

“ನಮ್ಮ ಶಾಲೆಯ ಎರಡನೇ ತರಗತಿಯ ಮಕ್ಕಳು ನಾಡಗೀತೆಗಳನ್ನು ಕರೋಕೆಯೊಂದಿಗೆ ತುಂಬಾ ಸೊಗಸಾಗಿ ಹಾಡುತ್ತಾರೆ ಸಾರ್,” ಎಂದು ಸಂತೋಷದಿಂದ ಹೇಳುತ್ತಾರೆ.

“ವಿಕಲಚೇತನ ಎಂದು ಕೆಲವೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆಗ ಎರಡು ಹಾಡುಗಳನ್ನು ಹಾಡಿ ತೃಪ್ತಿಪಟ್ಟುಕೊಳ್ಳುತ್ತೇನೆ,” ಎನ್ನುತ್ತಾರೆ ಅವರು ಭಾವೋದ್ರೇಕದಿಂದ.

“ನನ್ನ ಮನಸ್ಸು, ಹೃದಯ ಹರ್ಷಗೊಳ್ಳುತ್ತದೆ. ನೋವು ಮರೆತುಹೋಗುತ್ತದೆ. ನಿಜಕ್ಕೂ ಸಂಗೀತವೇ ನನ್ನ ಉಸಿರು,” ಎಂದು ಕಣ್ಣೀರಿನಿಂದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ :ಹುಣಸಿನಕೆರೆ ಬಡಾವಣೆ,
29ನೇ ವಾಡ್೬, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201