VISHWAROOPA NEWS BLOG

ಯುವ ಜನತೆ ಕಾನೂನು ಪಾಲನೆಯ ಮೂಲಕ ಆದರ್ಶ ಪ್ರಜೆಗಳಾಗಲು ಕರೆ: ಸದಾನಂದ ನಾಯಕ

ಯುವ ಜನತೆ ಕಾನೂನು ಪಾಲನೆಯ ಮೂಲಕ ಆದರ್ಶ ಪ್ರಜೆಗಳಾಗಲು ಕರೆ: ಸದಾನಂದ ನಾಯಕ

ಗಂಗಾವತಿ: ೨೦೨೪-೨೫ನೇ ಸಾಲಿನ ಸಂಕಲ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್.ಎನ್.ಎಸ್ ವಿಶೇಷ ಶಿಬಿರದ ೬ನೇ ದಿನದ ಉಪನ್ಯಾಸ ಮಾಲಿಕೆ ಉದ್ಘಾಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಮಾತನಾಡಿ ಇಂದಿನ ಯುವ ಜನತೆ ಇಂತಹ ಶಿಬಿರಗಳ ಮೂಲಕ ಜವಾಬ್ದಾರಿಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆದರ್ಶ ಸಮಾಜ ನಿರ್ಮಾಣದಲ್ಲಿ ತೊಡಗಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ್‌ರವರು ಮಾತನಾಡಿ, ಮಹಿಳಾ ಕಾನೂನಿಗೆ ಸಂಬಂಧಿಸಿದ ವಿಷಯಗಳ ಅಗತ್ಯ…

Read More
ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ  ನೂತನ ಗಂಗಾವತಿ ತಾಲೂಕು ಸಮಿತಿ ರಚನೆ

ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ನೂತನ ಗಂಗಾವತಿ ತಾಲೂಕು ಸಮಿತಿ ರಚನೆ

ಗಂಗಾವತಿ: ಏಪ್ರಿಲ್-೧೭ ಗುರುವಾರ ಗಂಗಾವತಿ ನಗರದ ಬಸ್‌ ಸ್ಟ್ಯಾಂಡ್‌ ಹತ್ತಿರ ಇರುವ ತುಳಸಪ್ಪ ಛತ್ರದ ಬಯಲಲ್ಲಿ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘಟನೆಯ ಸಭೆ ಸೇರಿ ನೂತನ ಗಂಗಾವತಿ ತಾಲೂಕು ಸಮಿತಿಯನ್ನು ರಚಿಸಲಾಯಿತು ಎಂದು ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷರಾದ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘದ ನೂತನ ತಾಲೂಕ ಗೌರವ ಅಧ್ಯಕ್ಷರಾಗಿ ಡಬ್‌ಡಬ್ ಹನುಮಂತಪ್ಪ, ಅಧ್ಯಕ್ಷರಾಗಿ ಮಾಯಮ್ಮ, ಉಪಾಧ್ಯಕ್ಷರಾಗಿ ಪಾರ್ವತಮ್ಮ, ಕಾರ್ಯದರ್ಶಿಯಾಗಿ ರಮೇಶ ಕೆ., ಖಜಾಂಚಿಯಾಗಿ ಗಾಲಿ ಹುಲಿಗೆಮ್ಮ, ಸಹ ಖಜಾಂಚಿಯಾಗಿ ಬಂಕದ ಹುಲಿಗೆಮ್ಮ, ಅದೇರೀತಿ ತಾಲ್ಲೂಕು ಸಮಿತಿ…

Read More
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿಯವರಿಗೆ ಕನ್ನಡಪ್ರೇಮಿ ಜಿ.ರಾಮಕೃಷ್ಣ ಅವರಿಂದ ಆತ್ಮೀಯ ಸನ್ಮಾನ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿಯವರಿಗೆ ಕನ್ನಡಪ್ರೇಮಿ ಜಿ.ರಾಮಕೃಷ್ಣ ಅವರಿಂದ ಆತ್ಮೀಯ ಸನ್ಮಾನ.

ಗಂಗಾವತಿ: ಕಳೆದ ೨೦೨೩ ರಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶ್ರೀ ಶಿವರಾಜ ತಂಗಡಗಿಯವರು ಕೊಪ್ಪಳ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಶ್ರಮವಹಿಸುತ್ತಿದ್ದಾರೆ. ಇವರಿಗೆ ಶ್ರೀರಾಮನಗರದಲ್ಲಿ ಏಪ್ರಿಲ್-೧೫ ಮಂಗಳವಾರ ಶೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷರಾದ ಕನ್ನಡಪ್ರೇಮಿ ಜಿ. ರಾಮಕೃಷ್ಣ ಅವರು ಆತ್ಮೀಯವಾಗಿ ಸನ್ಮಾನಿಸಿದರು.

Read More
ರಾಂಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಹಾಗೂ  ಡಾ. ಬಾಬು ಜಗಜೀವನರಾಮ್‌ರವರ ೧೧೮ನೇ ಜನ್ಮದಿನಾಚರಣೆ ಸಮಾರಂಭ ಅದ್ಧೂರಿ ಆಚರಣೆ.

ರಾಂಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಹಾಗೂ ಡಾ. ಬಾಬು ಜಗಜೀವನರಾಮ್‌ರವರ ೧೧೮ನೇ ಜನ್ಮದಿನಾಚರಣೆ ಸಮಾರಂಭ ಅದ್ಧೂರಿ ಆಚರಣೆ.

ಗಂಗಾವತಿ: ತಾಲೂಕಿನ ರಾಂಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನರಾಮ್ ರವರ ೧೧೮ನೇ ಜನ್ಮ ದಿನಾಚರಣೆ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾ.ಪಂ ಸದಸ್ಯರಾದ ಗೋವಿಂದಪ್ಪ ವಹಿಸಿದ್ದರು. ಗೌರವಾಧ್ಯಕ್ಷರಾಗಿ ರಾಂಪುರ ಗ್ರಾಮದ ಹನುಮಂತಪ್ಪ ಪಂಚಾಯಿತಿ ಆಗಮಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಇರಕಲ್‌ಗಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಡಾ. ಶಿವರಾಜ್ ನೆರವೇರಿಸಿ ಮುಖ್ಯ ಭಾಷಣಕಾರರಾಗಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ…

Read More
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಚುನಾವಣೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಚುನಾವಣೆ.

ಕೊಪ್ಪಳ: ನಗರದ ಕಿನ್ನಾಳ ರಸ್ತೆಯಲ್ಲಿರುವ ನಮ್ಮ ಸದಾಚಾರ ಸದನ ಭವನದಲ್ಲಿ ಏಪ್ರಿಲ್-13‌ ರವಿವಾರದಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಆಯ್ಕೆಗಾಗಿ ಚುನಾವಣೆ ಜರುಗಿತು. ಕರ್ನಾಟಕ ರಾಜ್ಯದ್ಯಂತ ಏಕಕಾಲಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಚುನಾವಣೆಗೆ ಮಹಾಸಭಾ ಸದಸ್ಯತ್ವ ಪಡೆದ ಜಿಲ್ಲೆಯ 1,600 ಮತದಾರರು ತಮ್ಮ ಮತದಾರರ ಹಕ್ಕನ್ನು ಚಲಾಯಿಸಿದರು. ಈ ಸಂದರ್ಭದಲ್ಲಿ ವಿಪ್ರ ಸಮಾಜದ ಮುಖಂಡರಾದ ಪ್ರಶಾಂತ್ ಕಿನ್ನಾಳ ಮಾತನಾಡಿ, ಸಮಾಜದ ಸಂಘಟನೆಗಾಗಿ ಮತದಾರರು ತಮ್ಮ ಮತವನ್ನು ಅತ್ಯಂತ ಉತ್ಸಾಹದಿಂದ ಚಲಾಯಿಸಲು ಕೊಪ್ಪಳ…

Read More
ಯಾಜ್ಞವಲ್ಕ ಮಂದಿರದಲ್ಲಿ ಸಂಭ್ರಮದ ಹನುಮ ಜಯಂತಿ ಸುಂದರಕಾಂಡ ಪ್ರವಚನ ಸಂಪನ್ನ.

ಯಾಜ್ಞವಲ್ಕ ಮಂದಿರದಲ್ಲಿ ಸಂಭ್ರಮದ ಹನುಮ ಜಯಂತಿ ಸುಂದರಕಾಂಡ ಪ್ರವಚನ ಸಂಪನ್ನ.

ಗಂಗಾವತಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ಮಂದಿರದಲ್ಲಿ ಹನುಮ ಜಯಂತಿ ಆಚರಣೆ ಶನಿವಾರದಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಎರಡು ದಿನಗಳಿಂದ ವೇದಮೂರ್ತಿ ಕಾರ್ತಿಕ ಜೋಶಿ ಅವರಿಂದ ನಡೆಸಲಾದ ಸುಂದರಕಾಂಡ ಪ್ರವಚನ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರಳಿದರ ಕುಲಕರ್ಣಿ ಮಾತನಾಡಿ ವಾಯುಪುತ್ರ ಹನುಮ ಹುಟ್ಟಿದ ಈ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಪುಣ್ಯವಂತರು. ಸಮಾಜ ಬಾಂಧವರ ಸರ್ವರ ಸಹಕಾರದ…

Read More
ಪಿಯು ಫಲಿತಾಂಶ: ಕಿಷ್ಕಿಂದ ಪಿಯು ಕಾಲೇಜಿನ ೭೬% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ

ಪಿಯು ಫಲಿತಾಂಶ: ಕಿಷ್ಕಿಂದ ಪಿಯು ಕಾಲೇಜಿನ ೭೬% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ

ಗಂಗಾವತಿ : ಕಿಷ್ಕಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ. 2024 – 25 ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ವಿಭಾಗ ಹಾಗೂ ಕಾಮರ್ಸ್ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇ 100% ಫಲಿತಾಂಶ ಬಂದಿದ್ದು, 198 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು  198 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಡಿಸ್ಟಿಂಕ್ಷನ್ 151 ವಿದ್ಯಾರ್ಥಿಗಳು, ಪ್ರಥಮ ಸ್ಥಾನ 01, ದ್ವಿತೀಯ ಸ್ಥಾನ 1 ಸ್ಥಾನಗಳನ್ನು ಪಡೆದು ಕಾಲೇಜಿನ…

Read More
ಪಿಯು ಫಲಿತಾಂಶ ರೆಡ್ಡಿ ವೀರಣ್ಣ ಸಂಜೀವಪ್ಪ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ

ಪಿಯು ಫಲಿತಾಂಶ ರೆಡ್ಡಿ ವೀರಣ್ಣ ಸಂಜೀವಪ್ಪ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ

ಕಾರಟಿಗಿ ರವಿನಗರ್ :  ಕಮ್ಮವಾರಿ  ಶಿಕ್ಷಣ ಸಂಸ್ಥೆ ( ರಿ ) ರೆಡ್ಡಿ ವೀರಣ್ಣ ಸಂಜೀವಪ್ಪ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ. 2024 – 25 ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಹೆಚ್ಚಿನ ಅಂಕಗಳನ್ನು ಗಳಿಸುವ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100% ಫಲಿತಾಂಶ ಬಂದಿದ್ದು, ವೈಷ್ಣವಿ 95% ಪ್ರಥಮ ಸ್ಥಾನ, ಗಂಗಮ್ಮ 94% ದ್ವಿತೀಯ ಸ್ಥಾನ, ಹಾಗೂ…

Read More
ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ಎಂ.ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ಎಂ.ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಗಂಗಾವತಿ: ತಾಲೂಕಿನ ಗ್ರಾಮೀಣ ಪ್ರದೇಶವಾದ ಮರಳಿ ಗ್ರಾಮದಲ್ಲಿ ಎಂ.ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ಒಟ್ಟು ವಿದ್ಯಾರ್ಥಿಗಳ ಪೈಕಿ ೭ ಡಿಸ್ಟಿಂಕ್ಷನ್, ೧೦ ಫಸ್ಟ್ ಕ್ಲಾಸ್, ೫ ದ್ವಿತೀಯ, ಉಳಿದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಒಟ್ಟಾರೆ ಕಾಲೇಜಿನ ೮೫% ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ವಿದ್ಯಾರ್ಥಿಗಳು ಬಂದಿದ್ದರು, ಜೊತೆಗೆ ಎಂ.ಎಸ್.ಎಂ.ಎಸ್. ಸಂಸ್ಥೆಯಲ್ಲಿ ಓದಿರುವ ಹಲವಾರು ವಿದ್ಯಾರ್ಥಿಗಳು ಈಗಾಗಲೇ ಸರ್ಕಾರಿ ಇಲಾಖೆಗೆ ಸೇರಿಕೊಂಡು ತಮ್ಮ ಸೇವೆಯನ್ನು ನೀಡುತ್ತಿರುವುದು ನಮಗೆ ಸಂತಸ…

Read More
ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಗಂಗಾವತಿಯ ಸಂಕಲ್ಪ ಪಿಯು ಕಾಲೇಜಿನ ಶೇ. 76ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಗಂಗಾವತಿಯ ಸಂಕಲ್ಪ ಪಿಯು ಕಾಲೇಜಿನ ಶೇ. 76ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಗಂಗಾವತಿ: ಏಪ್ರಿಲ್‌-08 ಮಂಗಳವಾರ ಪ್ರಕಟವಾದ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ನಗರದ ಸಂಕಲ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇ.76ರಷ್ಟು ಫಲಿತಾಂಶ ಬಂದಿದ್ದು, ಕಲಾ ವಿಭಾಗದಲ್ಲಿ ಜಂಬಣ್ಣ ಎಂಬ ವಿದ್ಯಾರ್ಥಿ, ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ಎಂಬ ವಿದ್ಯಾರ್ಥಿನಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಜಂಬಣ್ಣ ಮಾರೆಪ್ಪ ವಿಭೂತಿ ಶೇ.94.66ರಷ್ಟು (568ಅಂಕ), ದುರುಗೇಶ ಜಂಬಣ್ಣ ವಿಭೂತಿ ಶೇ.93.33 ರಷ್ಟು (560ಅಂಕ) ಹಾಗೂ ಹುಲಿಗೆಮ್ಮ ಕುರಿ ವೆಂಕಟೇಶ ಶೇ. 93. ರಷ್ಟು (558) ಅಂಕ ಪಡೆದುಕೊಂಡಿರುತ್ತಾರೆ. ಅದೇರೀತಿ ವಾಣಿಜ್ಯ…

Read More