ದಕ್ಷಿಣ ಭಾರತದ ಗ್ರಾಹಕ ಹಕ್ಕುಗಳ ಸಮನ್ವಯ ಸಮಿತಿ (ಸಿ.ಸಿ.ಸಿ) ಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಧನರಾಜ ಈ. ಆಯ್ಕೆ.

ಗಂಗಾವತಿ: ಕಂಜ್ಯೂಮರ್ ಕಾನ್‌ಫೆಡರೇಷನ್ ಆಫ್ ಇಂಡಿಯಾ (ಸಿ.ಸಿ.ಐ) ದ ಅಂಗಸಂಸ್ಥೆಯಾದ ಗ್ರಾಹಕರ ಸಮನ್ವಯ ಸಮಿತಿ (ಸಿ.ಸಿ.ಸಿ), ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ.

ಇದು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಗೋವಾ ರಾಜ್ಯಗಳ ೫೬ ಗ್ರಾಹಕರ ಸಮಿತಿಗಳನ್ನು ಒಳಗೊಂಡಿದೆ.

ಈ ಸಮಿತಿಯ ಕರ್ನಾಟಕ ರಾಜ್ಯ ಘಟಕದ ಚೇರ್ಮನ್ ಆಗಿ ಶಿಕ್ಷಣ ತಜ್ಞ, ಸಾಮಾಜಿಕ ಹೋರಾಟಗಾರ ೩೭೧(ಜೆ) ಸಮಿತಿಯ ಸಂಚಾಲಕ ಧನರಾಜ್ ಈ ರವರು ನಾಮನಿರ್ದೇಶನ ಗೊಂಡಿದ್ದಾರೆ.

ಈ ತೀರ್ಮಾನವನ್ನು ಜುಲೈ -೩೦ ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಭೆಯನ್ನು ಸಿ.ಸಿ.ಐ ಅಧ್ಯಕ್ಷರಾದ ಡಾ. ಅನಂತ ಶರ್ಮಾರವರ ನೇತೃತ್ವದಲ್ಲಿ ನಡೆಸಲಾಯಿತು ಹಾಗೂ ಸಿ.ಸಿ.ಸಿ ಯ ಚೇರ್ಮನ್ ಎಸ್. ಚಕ್ರಪಾಣಿಯವರು ಘೋಷಣೆ ಮಾಡಿದ್ದಾರೆ.

ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಯ ರಚನೆ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕದ ಹೊಣೆಯನ್ನು ನೂತನ ಚೇರ್ಮನ್‌ರಾದ ಧನರಾಜ್ ಈ ರವರಿಗೆ ವಹಿಸಲಾಯಿತು.

ಸಿ.ಸಿ.ಸಿ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಗ್ರಾಹಕರ ಹಕ್ಕುಗಳ ಜಾಗೃತಿ, ಆಹಾರ ಕಲಬೆರಕೆ, ವಿರುದ್ಧ ಕಾನೂನಾತ್ಮಕ ಹೋರಾಟ ಹಾಗೂ ನೆರವು ಒದಗಿಸುತ್ತಿದೆ.

ಇದರಡಿಯಲ್ಲಿ ೫೬ ಪ್ರಮುಖ ಗ್ರಾಹಕ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. “ಸಂಕೀರ್ಣವಾದ ಇಂದಿನ ಕಾರ್ಪೋರೇಟ್ ಯುಗದಲ್ಲಿ ಗ್ರಾಹಕರು ಎದುರಿಸುತ್ತಿರುವ ವಂಚನೆಗಳು ಇನ್ನೂ ಸಂಕೀರ್ಣವಾಗಿದ್ದು, ಇಷ್ಟೊಂದು ಅಗಾಧವಾದ ಕ್ಷೇತ್ರದ ನಿರ್ವಹಣೆಗೆ ನಾನು ಯೋಗ್ಯನೆಂದು ಭಾವಿಸಿ, ನನಗೆ ಈ ಜವಾಬ್ದಾರಿಯನ್ನು ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಈ ಹೊಣೆಗಾರಿಕೆಗೆ ಪೂರ್ಣನ್ಯಾಯ ಒದಗಿಸುವ ದೃಢನಂಬಿಕೆಯಿದ್ದು, ಈಗಾಗಲೇ ೨೭೦೦ ಜನ ನ್ಯಾಯ ಹಾಗೂ ಆರೋಗ್ಯ ಕ್ಷೇತ್ರದ ತಜ್ಞ ಸದಸ್ಯರನ್ನು ಒಳಗೊಂಡ ಸಿ.ಸಿ.ಸಿ ಯ ಸಹಕಾರ ಈ ನಿಟ್ಟಿನಲ್ಲಿ ಪಡೆಯುವೆ” ಎಂದು ರಾಜ್ಯಾಧ್ಯಕ್ಷ ಧನರಾಜ್ ಈ. ಈ ಮೂಲಕ ತಿಳಿಸಿದರು.

ಪತ್ರಿಕಾ ಮಾದ್ಯಮ ಪ್ರಜಾಪ್ರಭುತ್ವದ ಪ್ರಾಣವಾಯು: ಕೆ.ವಿ ಪ್ರಭಾಕರ್

ಬೆಂಗಳೂರು: ಮಾಧ್ಯಮಗಳು ಪ್ರಜಾಪ್ರಭುತ್ವದ ಪ್ರಾಣವಾಯು ಎನ್ನುವ ಅಂಬೇಡ್ಕರ್ ಅವರ ಮಾತು ಗಟ್ಟಿಯಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅಭಿಪ್ರಾಯಪಟ್ಟರು.

ಅವರು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ “ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ”ದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹಿರಿಯ ಪತ್ರಕರ್ತರಿಗೆ ಮಾಧ್ಯಮಶ್ರೀ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು. ಸ್ವಾತಂತ್ರ‍್ಯಹೋರಾಟವನ್ನು ಮುನ್ನಡೆಸಿದ್ದ ಭಾರತೀಯ ಪತ್ರಿಕೋದ್ಯಮ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಾತಂತ್ರ್ಯದ ನಂತರ ಅಭಿವೃದ್ಧಿಯಾದ ಪತ್ರಿಕೋದ್ಯಮ, ತನಿಖಾ ಪತ್ರಿಕೋದ್ಯಮದ ಮೂಲಕ ಸಮಾಜವನ್ನು ಎಚ್ಚರಿಸುವ ಹೊಣೆಗಾರಿಕೆ ನಿರ್ವಹಿಸಿದೆ. ಆದರೆ ಇಂದು ಅರೆಸತ್ಯ ಮತ್ತು ಸುಳ್ಳು ಸುದ್ದಿಗಳು ಭಾರತೀಯ ಪತ್ರಿಕೋದ್ಯಮದ ಈ ಮಹೋನ್ನತ ಘನತೆಯನ್ನು ಹಾಳುಗೆಡಹುವ ರೀತಿಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರೂ, ಸಂಪಾದಕರೂ ಆಗಿದ್ದ ಅಂಬೇಡ್ಕರ್ ಅವರು ಸಂಘಟನೆ ಮತ್ತು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಸಂಘಟಕ ಧ್ವನಿ ಸರ್ಕಾರದ ಮತ್ತು ಸಮಾಜದ ಕಣ್ಣು ತೆರೆಸುತ್ತವೆ ಎಂದಿದ್ದರು. ಪತ್ರಿಕಾ ಸಂಘಟನೆಗಳು, ಪತ್ರಕರ್ತರ ಸಂಘಗಳು ಮಾಧ್ಯಮವನ್ನು ಜನಪರವಾಗಿ, ಭಯಮುಕ್ತವಾಗಿಡಲು ಪತ್ರಕರ್ತರು ಯಾವುದೇ ಹಿಂಜರಿಕೆಯಿಲ್ಲದೆ ವರದಿ ಮಾಡಲು ಇದು ಸಹಾಯ ಮಾಡುವ ರೀತಿಯಲ್ಲಿ ಶ್ರಮಿಸಬೇಕು. ಪತ್ರಕರ್ತರಿಗೆ ನೈತಿಕ ಮಾರ್ಗಸೂಚಿಗಳನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತ ಹೊಕ್ಕೇರಿ ಮಲ್ಲಿಕಾರ್ಜುನ ಸೇರಿ ಸಾಧಕರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯ ವಿನಯ್ ಗುರೂಜಿ, ಅರಣ್ಯ ಸಚಿವ ಈಶ್ವರಖಂಡ್ರೆ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಸಂಘದ ಪದಾಧಿಕಾರಿಗಳಿದ್ದರು.

ಮನಸೆಳೆದ ರಾಜ್ಯಮಟ್ಟದ ಗಾಯನ ಸ್ಫರ್ಧೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಾರ್ಯಕ್ರಮಕ್ಕೆ ಪ್ರಶಂಸೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಘಟಕ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಲಾಯಿತು.

ಈ ಕಾರ್ಯಕ್ರಮ ಭಾನುವಾರ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆಯಿತು, ಮತ್ತು ನೆರೆದ ಪ್ರೇಕ್ಷಕರ ಮನಸೆಳೆದು ಪ್ರಶಂಸೆಗೆ ಪಾತ್ರವಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ ಲಂಬಾಣಿ, ಸಂಘದ ಉದ್ದೇಶಗಳನ್ನು ವಿವರಿಸಿದರು.

ಸಂಘವು ಪ್ರತೀ ಭಾನುವಾರ ಆನ್‌ಲೈನ್‌ನಲ್ಲಿ ವಿವಿಧ ಹಾಡುಗಳ ಸ್ಪರ್ಧೆಗಳನ್ನು ನಡೆಸಿ ಪ್ರತಿಭಾನ್ವಿತರಿಗೆ ವೇದಿಕೆ ಒದಗಿಸುತ್ತಿದೆ.

ಈ ಸ್ಪರ್ಧೆಗಳ ಪ್ರಥಮ ಹಂತದಲ್ಲಿ ೩೪ ಮಂದಿ ಗಾಯಕರನ್ನು ಆಯ್ಕೆ ಮಾಡಿ ಚಿಕ್ಕಮಗಳೂರಿಗೆ ಆಹ್ವಾನಿಸಲಾಗಿತ್ತು.

ಅವರು ವೇದಿಕೆಯಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿದ್ದು, ಪ್ರತಿಯೊಬ್ಬರಿಗೂ ಪ್ರಶಸ್ತಿ ನೀಡಲಾಯಿತು ಎಂದು ಅವರು ಹೇಳಿದರು.

ಇದಲ್ಲದೆ ದಾಂಡೆಲಿಯಲ್ಲಿ ೨ನೇ ಹಂತದ ಸ್ಪರ್ಧೆ ನಡೆಯಲಿದ್ದು, ಆಯ್ಕೆಯಾದ ಶ್ರೇಷ್ಠ ಗಾಯಕರಿಗೆ ಮುಂದಿನ ವರ್ಷ ಸನ್ಮಾನವಿದೆ.

ಜನವರಿಯಲ್ಲಿ ಬೆಳಗಾವಿಯಲ್ಲಿ ನಡೆಯುವ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ನೀಡಲಾಗುವುದು ಎಂದು ತಿಳಿಸಿದರು.

ಸಂಘವು 2020ರಲ್ಲಿ ಸ್ಥಾಪನೆಯಾಗಿ ಸಾಹಿತ್ಯ, ಸಂಸ್ಕೃತಿಕ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ.

ಕೊರೋನಾ ಸಮಯದಲ್ಲಿ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ವೈದ್ಯಕೀಯ ಸಲಹೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘದ ಘಟಕಗಳು ಸ್ಥಾಪನೆಯಾಗಿವೆ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿವೆ.

ತೀರ್ಪುಗಾರರಾಗಿ ಭಾಗವಹಿಸಿದ ಸಾಹಿತಿ ಗೊರೂರು ಅನಂತರಾಜು, ಗಾಯಕರು ಕವಿಗಳು ಮತ್ತು ಶ್ರೋತೃಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ ಎಂದರು.

ಹಾಡು ಮತ್ತು ಸಂಗೀತವು ಸಮಾಜದ ಆರೋಗ್ಯಕರ ಮನೋಭಾವನೆಗೆ ಸಹಾಯಮಾಡುವ ದಿವ್ಯ ಔಷಧಿಯಂತೆ ಕೆಲಸಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಘಟಕದ ಅಧ್ಯಕ್ಷ ಡಾ. ವಿದ್ಯಾ ಕೆ. ಅಧ್ಯಕ್ಷತೆ ವಹಿಸಿದ್ದರು ಮತ್ತು ಉತ್ತಮ ಆಯ್ಕೆ ಪ್ರಕ್ರಿಯೆಗೆ ಪ್ರಶಂಸೆ ವ್ಯಕ್ತವಾಯಿತು. ಘಟಕದ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. ತಾಳ್ಮೆಯಿಂದ ಗಾಯಕರ ಆಯ್ಕೆ ಮಾಡಿ ಶ್ಲಾಘನೀಯ ಕೆಲಸ ಮಾಡಿದ್ದಾರೆ.

ಕುರುವಂಜಿ ಕೆ.ಪಿ. ವೆಂಕಟೇಶ್ ಅವರು ಮಾಜಿ ರಾಜ್ಯಾಧ್ಯಕ್ಷರಾಗಿದ್ದು, ಸಫಾಯಿ ಕರ್ಮಚಾರಿ ನಿಗಮ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಬಿ.ಎಲ್. ಪ್ರವೀಣ್ ಬೆಟ್ಟಗೇರಿ, ಜಯಣ್ಣ ಹಾಗೂ ಎಂ.ಎಸ್. ನಾಗರಾಜ್ ಅವರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಪಾಲ್ಗೊಂಡಿದ್ದರು. ಎಚ್.ಎಂ. ಜಗದೀಶ್ ಉಪಾಧ್ಯಕ್ಷರಾಗಿ, ಹಸೈನಾರ್ ಬೆಳಗೊಳ ಜಿಲ್ಲಾ ಕೋಶಾಧ್ಯಕ್ಷರಾಗಿ ತಮ್ಮ ಶ್ರದ್ಧಾಭಕ್ತಿಯ ಸೇವೆ ಸಲ್ಲಿಸಿದರು.

ರಾಕೇಶ್ ಸಿಂಗ್ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷರು ವಿಜಯಕುಮಾರ್ ಎಚ್.ಸಿ. ಆಗಿದ್ದರು.

ಮೂಡಿಗೆರೆ ತಾಲ್ಲೂಕಿನ ಘಟಕ ಅಧ್ಯಕ್ಷರು ಮಂಜುನಾಥ ಬೆಟ್ಟಗೆರೆ, ಸಲಹೆಗಾರರಾಗಿದ್ದು ವಿನೋದ್ ಗೌರವ ನೀಡಿದರು.

ಇಂಪಾ ನಾಗರಾಜ್ ಅವರು ಗೌರವ ಕಾರ್ಯದರ್ಶಿಯಾಗಿ, ನವೀನ್ ಬಿ.ಆರ್. ಹಾಗೂ ರವಿ ಕುನ್ನಳ್ಳಿ ಅವರು ಗೌರವ ಸಲಹೆಗಾರರಾಗಿದ್ದರು.

ಮಧುಚಂದ್ರ ಹಾಗೂ ಮಜಾಭಾರತ ಕಲಾವಿದರು ತಮ್ಮ ಕಲಾ ಪ್ರದರ್ಶನದಿಂದ ಪ್ರೇಕ್ಷಕರನ್ನು ಮನಮೆಚ್ಚಿಸಿದರು.

ರಮೇಶ ಯಾದವ್ ಅವರು ಕಾಮಿಡಿ ಕಿಲಾಡಿಗಳ ತಂಡದ ಕಲಾವಿದರಾಗಿದ್ದು, ಮನರಂಜನೆ ಮೂಲಕ ಸಭಿಕರನ್ನು ಆಕರ್ಷಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕದ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಜಿಲ್ಲೆಗಳ ಪ್ರಮುಖರು, ಕಲಾವಿದರು, ಹಾಗೂ ಮಾಧ್ಯಮದ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಆಯ್ಕೆಯಾದ ಗಾಯಕ-ಗಾಯಕಿಯರಿಗೆ “ಕರುನಾಡು ಕೋಗಿಲೆ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಮೂಲಕ ಸಾಹಿತ್ಯ-ಸಂಸ್ಕೃತಿಯ ಬೆಳವಣಿಗೆಗೆ ಸಂಘವು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಯಿತು.

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-07-2025 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ 34 ಮಂದಿ ಗಾಯಕ-ಗಾಯಕಿಯರು ಆಯ್ಕೆಯಾಗಿದ್ದು, ತಮ್ಮ ಕಲೆ ಪ್ರದರ್ಶನ ಮಾಡಲು ಅವಕಾಶ ಪಡೆಯಿದ್ದಾರೆ.

ಆಯ್ಕೆಯಾದ ಕಲಾವಿದರು ಇಂತಿವೆ:

  1. ಶ್ರೀಮತಿ ಸುಮಂಗಲಾ ದೇಸಾಯಿ (ಜೋಯಿಡಾ)

  2. ವಿಜಯಕುಮಾರ್ (ಹೊಸಪೇಟೆ)

  3. ಶ್ರೀಮತಿ ಜಿ.ನೀಲಗಂಗಮ್ಮ (ಹೊಸಪೇಟೆ)

  4. ಶ್ರೀಮತಿ ವಾಸವಿ ಸತೀಶ್ (ತುರುವೇಕೆರೆ)

  5. ವಾಲ್ಯಾನಾಯ್ಕ್ ಎಲ್ (ವಿಜಯನಗರ)

  6. ರಾಕೇಶ್ ಸಿಂಗ್ (ಚಿಕ್ಕಮಗಳೂರು)

  7. ಪಿ.ಮಲ್ಲಿಕಾರ್ಜುನ (ದಾವಣಗೆರೆ)

  8. ರಾಮನಾಥ ಜೆ. ನಾಯ್ಕ (ಅಂಕೋಲಾ)

  9. ಶ್ರೀಮತಿ ರೀನಾ ನಂದನ್ (ಹೊಸಪೇಟೆ)

  10. ಹನುಮಂತ ನಾಯ್ಕ್ ಸಿ (ನಾಗರಕಟ್ಟೆ ತಾಂಡ)

  11. ಬಿ.ಎನ್. ನಾಗೇಶ್ (ದಾವಣಗೆರೆ)

  12. ಗೌರಿ ಅರಸು (ಮಂಡ್ಯ)

  13. ವೀಣಾ ನಟರಾಜ್ (ಅಜ್ಜಂಪುರ)

  14. ಸ್ನೇಹ (ತೀರ್ಥಹಳ್ಳಿ)

  15. ಎಲ್. ಗಣೇಶ್ (ತುಂಬಿನಕೇರಿ ದೊಡ್ಡತಾಂಡ)

  16. ಆರ್. ಪ್ರಿಯಾಂಕ (ಹೊಸಪೇಟೆ)

  17. ಟಿ. ದೀಪಾ (ವಿಜಯನಗರ)

  18. ವಿದ್ಯಾ ಕೆ (ಚಿಕ್ಕಮಗಳೂರು)

  19. ಪ್ರಶಾಂತ್ ಕುಲಕರ್ಣಿ (ದಾಂಡೇಲಿ)

  20. ಶಶಿಧರ್ ಹಿರೇಮಠ (ಸೊಂಡೂರು)

  21. ಲಕ್ಷ್ಮೀ ಎಚ್ (ಹೊಸಪೇಟೆ)

  22. ಜೂಟೂರು ರಾಘವೇಂದ್ರ (ಹೊಸಪೇಟೆ)

  23. ಶ್ರೀದೇವಿ ತೇರದಾಳ (ಮಹಾಲಿಂಗಪುರ)

  24. ಉಮೇಶ್ ಕುಮಾರ್ ಎಚ್.ಎನ್ (ದಾವಣಗೆರೆ)

  25. ವಿಜಯಶಾಂತಿ ಕೆ (ಕಮಲಾಪುರ)

  26. ಡಾ. ಅಶೋಕ್ ಬಾಬು ಎ.ಆರ್ (ಚಿಕ್ಕಬಳ್ಳಾಪುರ)

  27. ಎಚ್. ಶ್ರೀನಿವಾಸ್

  28. ತಿಮ್ಮನಾಯ್ಕ್ ಸಿ (ಮುದ್ಲಾಪುರ)

  29. ರಮೇಶ್ ಎಸ್. ಲಮಾಣಿ (ಚಿತ್ರದುರ್ಗ)

  30. ಭಾಗ್ಯ ಎಸ್ (ಶಿವಮೊಗ್ಗ)

  31. ಕವಿತಾಬಾಯಿ ವೈ (ಭದ್ರಾವತಿ)

  32. ವಿಜಯ್ ಕುಮಾರ್ ಸಿ.ಆರ್ (ಚಿಕ್ಕಮಗಳೂರು)

  33. ಸುರೇಶ್ ರಾವ್ (ತುಮಕೂರು)

  34. ಮಹಾನಂದ ಮಠಪತಿ (ಕಲ್ಲೂರ್ ರೋಡ್)

ಈ ಗಾಯನ ಕಾರ್ಯಕ್ರಮದ ವೇಳೆ “ಕನ್ನಡ ಕೋಗಿಲೆ” ಎಂಬ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭ ಕೂಡ ನಡೆಯಲಿದೆ ಎಂದು ತಿಳಿಸಲಾಗಿದೆ.

ಈ ಎಲ್ಲ ಗಾಯಕ ಗಾಯಕಿಯರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಂತೆಯೇ, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಕೋರಿದ್ದಾರೆ.

ಚಿತ್ರ ಸಂತೆ ಪತ್ರಿಕೆಯಿಂದ ಗಂಗಾವತಿಯ ಚನ್ನಬಸವ ಕೊಟಗಿ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ

ಗಂಗಾವತಿ: ಜುಲೈ-೧೫ ಮಂಗಳವಾರ, ಬೆಂಗಳೂರಿನ ಸದಾಶಿವನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭ ಜರುಗಿತು.

ಈ ಸಮಾರಂಭದಲ್ಲಿ ಗಂಗಾವತಿಯ ಕಲಾವಿದ ಹಾಗೂ ಪತ್ರಕರ್ತ ಚನ್ನಬಸವ ಕೊಟಗಿಗೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಪ್ರಶಸ್ತಿಯನ್ನು ಚಿತ್ರ ಸಂತೆ ಪತ್ರಿಕೆಯ ಸಂಪಾದಕರಾದ ಗಿರೀಶ್ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ವರ್ಷದಿಂದ ವರ್ಷಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಬಾರಿ ೫೦ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯದ ಟೆಲಿಕಾಂ ನೌಕರರ ಸಂಘದ ಟ್ರಸ್ಟ್ ಅಧ್ಯಕ್ಷ ಡಾ. ಎನ್. ನರಸಿಂಹಮೂರ್ತಿಯವರು ವಹಿಸಿದ್ದರು.

ಚಲನಚಿತ್ರ ನಟ ವಿಜಯ್ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ ಕಲಾಭಿಮಾನಿಗಳಿಗೆ ಮತ್ತು ಸಾಧಕರಿಗೆ ಗೌರವ ವ್ಯಕ್ತಪಡಿಸುವ ವೇದಿಕೆಯಾಗಿತ್ತು.

ಚನ್ನಬಸವ ಕೊಟಗಿ, ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದ, ಪತ್ರಕರ್ತ ಮತ್ತು ಪ್ರವಾಸ ಮಾರ್ಗದರ್ಶಕರಾಗಿ ಹಲವಾರು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸಂಘಟಕ, ಸಂಘ-ಸಂಸ್ಥೆಗಳ ಪ್ರತಿನಿಧಿ ಹಾಗೂ ಖಾಸಗಿ ಟಿ.ವಿ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿ ಹೆಸರು ಪಡೆದಿದ್ದಾರೆ.

ಪ್ರಸ್ತುತ ಅವರು ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಬಹುಮುಖ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಸ್ವೀಕರಿಸುವಾಗ ಅವರು ತಮ್ಮ ಪತ್ನಿ ಲಕ್ಷ್ಮೀ ಕೊಟಗಿ ಹಾಗೂ ಪುತ್ರ ಸ್ಕಂದ ಕೊಟಗಿ ಉಪಸ್ಥಿತರಿದ್ದರು. ಚಿತ್ರ ಸಂತೆ ಪತ್ರಿಕೆಯ ಸಂಪಾದಕರಿಗೆ ಹಾಗೂ ಸಿಬ್ಬಂದಿಗಳಿಗೆ ಕುಟುಂಬದ ಪರವಾಗಿ ಚನ್ನಬಸವ ಕೊಟಗಿಯವರು ಕೃತಜ್ಞತೆ ಸಲ್ಲಿಸಿದರು.

ಮಾಹಿತಿಗಾಗಿ:
ಚನ್ನಬಸವ ಕೊಟಗಿ
ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರು.
ಹಂಪಿ, ಸಾ|| ಗಂಗಾವತಿ
ಮೊ.ನಂ: ೯೪೮೧೦೮೭೦೦೯

ಚಿತ್ರ ಸಂತೆ ಪತ್ರಿಕೆಯಿಂದ ನೀಡಲಾಗುವ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಆಯ್ಕೆ.

ಗಂಗಾವತಿ: ರಾಜ್ಯದ ಚಿತ್ರರಂಗ ವಿಭಾಗದ ಪ್ರತಿಷ್ಠಿತ ಪತ್ರಿಕೆಯಾದ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಉತ್ತಮ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.

ಅದರಂತೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಅವರು ಆಯ್ಕೆಯಾಗಿದ್ದಾರೆ.

ಅವರಿಗೆ ಜುಲೈ-೧೫ ಮಂಗಳವಾರ ಬೆಂಗಳೂರಿನ ಸದಾಶಿವ ನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನ ಸಭಾಂಗಣದಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಚನ್ನಬಸವ ಕೊಟಗಿಯವರು ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸಿದ್ದಾರೆ. ಮತ್ತು ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಸೇವೆಯನ್ನು ಗುರುತಿಸಿದ ಚಿತ್ರ ಸಂತೆ ಪತ್ರಿಕೆಯ ಮುಖ್ಯ ಸಂಪಾದಕರಾದ ಗಿರೀಶ್ ವಿ. ಗೌಡ ರವರು ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಇವರಿಗೆ ಗಂಗಾವತಿಯ ಸಮಸ್ತ ನಾಗರಿಕರು, ಕಲಾವಿದರು, ಪತ್ರಕರ್ತರು, ಸಾಹಿತಿಗಳು, ಸಂಘ-ಸಂಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿವೆ.

ಮಾಹಿತಿಗಾಗಿ:
ಚನ್ನಬಸವ ಕೊಟಗಿ
ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರು.
ಹಂಪಿ, ಸಾ|| ಗಂಗಾವತಿ
ಮೊ.ನಂ: ೯೪೮೧೦೮೭೦೦೯

ಕಲೆಯು ಮಾನವನ ಹುಟ್ಟಿನೊಂದಿಗೆ ಬೆಳೆದು ಬಂದ ಚಮತ್ಕಾರ

ಒಂದು ಕಾಲದ ಸಂಸ್ಕೃತಿಯೊಂದಿಗೆ ಸಂಬಂಧ ಜೋಡಿಸುವ ಸಂಪರ್ಕ ಸಾಧನೆಯಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮ. ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರ ಎಂದು ಸಾಹಿತಿ ಗೊರೂರು ಅನಂತರಾಜು ತಿಳಿಸಿದರು.

ಹಾಸನದ ಒಡನಾಡಿ ಚಿತ್ರಕಲಾ ಬಳಗ ಹಾಸನಾಂಬ ಕಲಾಕ್ಷೇತ್ರದ ಹೊರಂಗಣದಲ್ಲಿ ಭಾನುವಾರ ಹಾಗೂ ಸೋಮವಾರದಂದು ಏರ್ಪಡಿಸಿದ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ ವಸಂತಕುಮಾರ್ ಡ್ರಾಯಿಂಗ್ ಶೀಟ್ ಪೆನ್ಸಿಲ್ ವರ್ಕ್ಸನಲ್ಲಿ ರಚಿಸಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಕತೆಗಾರ್ತಿ ಶ್ರೀಮತಿ ಭಾನು ಮುಷ್ತಾಕ್, ಚಾರ್ಕೋಲ್ ಪೆನ್ಸಿಲ್ ವರ್ಕ್ಸ್ನನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು, ಅಂತರಾಷ್ಟ್ರೀ ಯ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್, ಇಸ್ರೋ ಮಾಜಿ ಅಧ್ಯಕ್ಷರು ಕಿರಣ್‌ಕುಮಾರ್ ಇವರೆಲ್ಲರೂ ಜಿಲ್ಲೆಯ ಕೀರ್ತಿಯನ್ನು ಬೆಳಗಿದ ಮಹನೀಯರು. ಕಲಾವಿದರು ಪ್ರಕೃತಿಯ ನಡುವೆ ಕುಳಿತು ಬರೆದ ಪ್ರಕೃತಿ ಚಿತ್ರಗಳು ಕಲಾತ್ಮಕವಾಗಿವೆ ಎಂದರು.

ವಿಶ್ವ ಪರಿಸರ ದಿನ ಏರ್ಪಡಿಸಿದ್ದ ಚಿತ್ರಕಲಾ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಖ್ಯಾತ ಕಲಾವಿದರು ಕೆ.ಟಿ.ಶಿವಪ್ರಸಾದ್ ಮಾತನಾಡಿ ಮನುಷ್ಯ ಚಿತ್ರ ಬಿಡಿಸಬೇಕಾದರೆ ಎಷ್ಟು ಕಷ್ಟಪಟ್ಟಿದ್ದಾರೆ? ಚಿತ್ರ ಹೇಗೆ ಶುರುವಾಯ್ತು? ಚಿತ್ರ ಹೇಗೆ ಮಾಡಿದ್ರಿ? ಬಣ್ಣ ಹೇಗೆ ಹಾಕಿದ್ರಿ? ಎಂಬುದನ್ನೆಲ್ಲಾ ಚಿತ್ರಕಾರರನ್ನು ಮಕ್ಕಳು ಕೇಳಿ ತಿಳಿದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಆಲೂರಿನ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಭಾಗ್ಯ, “ಕಲೆ ದೇವರು ಕೊಟ್ಟ ವರವಾಗಿದೆ. ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾದಂಬರಿಗಾರ್ತಿ ಶ್ರೀಮತಿ ಸುವರ್ಣ ಕೆ.ಟಿ.ಶಿವಪ್ರಸಾದ್, “ಮಕ್ಕಳು ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ,” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗೋಡೆ ಬರಹಗಾರ ಕಲಾವಿದ ಯಾಕೂಬ್, ಕಲಾವಿದ ಚಂದ್ರಕಾಂತ್ ನಾಯರ್ ಉಪಸ್ಥಿತರಿದ್ದರು. ಗಾಯಕಿ ಶ್ರೀಮತಿ ಸುನಂದ ಕೃಷ್ಣ ಭಾವಗೀತೆ ಮತ್ತು ಜನಪದ ಗೀತೆಗಳಿಂದ ರಂಜಿಸಿದರು. ಕಲಾವಿದ ವಸಂತಕುಮಾರ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಮೈಸೂರು ಶೋಭಾರಾಣಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಹಾಸನ: ಹಾಸನದ ಚಿತ್ಕಲಾ ಪೌ೦ಡೇಶನ್ ವತಿಯಿಂದ ಏರ್ಪಡಿಸಿರುವ ಏಕ ವ್ಯಕ್ತಿಚಿತ್ರ ಕಲಾ ಪ್ರದರ್ಶನಕ್ಕೆ ಕದಂಬ ಸೈನ್ಯ ಕನ್ನಡ ಪರ ಸಂಘಟನೆಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್, ಸಾಹಿತಿ ಗೊರೂರು ಅನಂತರಾಜು, ಚಿತ್ರ ಕಲಾವಿದ ಯಾಕೂಬ್, ಉಪನ್ಯಾಸಕರು ಎ.ರಾಮಮೂರ್ತಿ ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್ ಏಪ್ರಿಲ್-25‌ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಬಿ.ಎಸ್ ದೇಸಾಯಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಚಿತ್ಕಲಾ ಫೌಂಡೇಶನ್ ವತಿಯಿಂದ ಹಾಸದ ಜನತೆಗೆ ಶೋಭಾ ರಾಣಿ ಅವರ ಕಲಾಕೃತಿಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಲಾಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟನೆಯಲ್ಲಿ ಕಾರ್ಯಕ್ರಮದಲ್ಲಿ ಗಣಪತಿ ಅಗ್ನಿಹೋತ್ರಿ ಅವರು “ಕಲೆ ಮತ್ತು ಕಲಾಕೃತಿ” ಎಂಬ ವಿಷಯದ ಕುರಿತು ಮಾತನಾಡುತ್ತಾ ಕಲೆ ಮತ್ತು ಕಲಾಕೃತಿ ಎರಡೂ ಕೂಡ ಅಗಾಧವಾದ ಅರ್ಥವ್ಯಾಪ್ತಿಯನ್ನು ಹೊಂದಿರುತ್ತದೆ. ಇದನ್ನು ಸೀಮಿತವಾಗಿ ನೋಡಲು ಸಾಧ್ಯವಿಲ್ಲ. ವಿಜ್ಞಾನ ದೃಷ್ಟಿಯಿಂದ ಇದಕ್ಕೆ ವ್ಯಾಪಾಕವಾದ ವಿಸ್ತಾರಗಳಿವೆ. ಐತಿಹಾಸಿಕವಾಗಿ ನೋಡುತ್ತಾ ಹೋದರು ಇದಕ್ಕೆ ಸ್ಪಷ್ಟವಾದ ಚಿತ್ರಣ ಸಿಗುವುದಿಲ್ಲ. ಕಲಾಕೃತಿಯ ಬಗ್ಗೆ ಹೇಳುವುದಾದರೆ ಇದು ನಮ್ಮ ಅಭಿವ್ಯಕ್ತಿಯ ನಂತರದ ಭಾಗವಾಗಿದೆ. ಕಲಾಕೃತಿಯಲ್ಲಿ ರೂಪಕಗಳ ಬಳಕೆಯಾದಾಗ ಮೂರ್ತ ಹಾಗೂ ಅಮೂರ್ತ ರೂಪಕ್ಕೂ ಕೊಂಡೊಯ್ಯುತ್ತದೆ. ಶೋಭಾರಾಣಿ ಇವರ ಕಲಾಕೃತಿಗಳಲ್ಲಿ ರೂಪಕ ಬಳಕೆಯು ತುಂಬಾ ಅದ್ಭುತವಾಗಿ ಮೂಡಿಬಂದಿರುತ್ತದೆ. ಈ ಚಿತ್ರಗಳಲ್ಲಿ ಒಂದರ ಮೇಲೊಂದು ಮೀನುಗಳು ಇದ್ದರೂ ಸಹ ಹಿಂದಿರುವ ಮೀನಿನ ಭಾವಗಳು ಗೋಚರವಾಗುತ್ತದೆ. ಈ ಬಗೆಯ ರೂಪಕಗಳು ಚಿತ್ರಗಳಲ್ಲಿ ಕಂಡುಬಂದಾಗ ಕಲಾಕೃತಿಯ ಮೌಲ್ಯಗಳು ಹೆಚ್ಚುತ್ತವೆ ಹಾಗೂ ಕಲಾಕೃತಿಯನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಇವರ ಕಲಾಕೃತಿಗಳನ್ನು ಗಮನಿಸಿದಾಗ ಇದರಲ್ಲಿರುವ ರೇಖೆಗಳು, ಬಣ್ಣ, ತಂತ್ರಗಾರಿಕೆ, ರೂಪಕಗಳನ್ನು ಗಮನಿಸಿದಾಗ ಇವು ಶ್ರೇಷ್ಟ ಮಟ್ಟಕ್ಕೆ ತಲುಪುವ ಚಿಗುರುಗಳು ಕಾಣುತ್ತವೆ. ಮುಂದಿನ ದಿನಗಳಲ್ಲಿ ಇವು ಒಳ್ಳೆಯ ಕಲಾಕೃತಿಗಳಾಗುವ ಸಾಧ್ಯತೆಗಳಿವೆ, ಏಕೆಂದರೆ ಈ ಕಲಾಕೃತಿಗಳಲ್ಲಿರುವ ರೂಪಕ ಹಾಗೂ ರೇಖೆಗಳ ವೇಗ ಅದನ್ನು ಸೂಚಿಸುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಶ್ರೀಮತಿ ರೂಪ ಹಾಸನ ರವರು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಬಿ.ಎಸ್. ದೇಸಾಯಿಯವರ ಕುಟುಂಬ ಕಲಾಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದರು. ದೇಸಾಯಿಯವರ ಕಲಾಸೇವೆಯ ಮುಂದುವರೆದ ಭಾಗವಾಗಿ ಮೈಸೂರಿನ ಕಲಾವಿದೆ ಶ್ರೀಮತಿ ಶೋಭರಾಣಿ ಜಿ. ರವರ ಕಲಾ ಪ್ರದರ್ಶನ ಏರ್ಪಡಿಸಿದ್ದಕ್ಕೆ ಹಾಸನದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದರು. ಶೋಭರಾಣಿ ಜಿ. ರವರ ಕಲಾಕೃತಿಗಳನ್ನು ಮೊದಲ ಬಾರಿಗೆ ವೀಕ್ಷಿಸಿದಾಗ ರೋಮಾಂಚನವಾಗುತ್ತದೆ. ಕಲಾಪ್ರದರ್ಶನದ ಶೀರ್ಷಿಕೆ ‘ಮತ್ಸ್ಯ ಹೆಜ್ಜೆ’ ಮೀನಿಗೆ ಕಾಲು ಇಲ್ಲ ಕೈಗಳು ಇಲ್ಲ. ಆದರೆ ಮೀನಿಗೆ ಚಲನೆ ಇದೆ. ಇದನ್ನು ರೂಪಕಾತ್ಮಕವಾಗಿ ನೋಡಿದಾಗ, ಜೀವನ ಕ್ರಮದ ವೈಭವೀಕರಣ. ಅದರ ಪ್ರತಿಯೊಂದು ಜೀವನ ಕ್ರಮದ ದಾಖಲೀಕರಣ ಕಾಣುತ್ತದೆ. ಯಾವುದೇ ಕಲೆಗಳಿಗೆ ಹಾಗೂ ಕವಿತೆಗಳಿಗೆ ಮೂರ್ತರೂಪವಿರುವುದಿಲ್ಲ. ಅಮೂರ್ತ ರೂಪ ಇದ್ದಷ್ಟು ನೋಡುಗನು ಅದರ ಆಳಕ್ಕೆ ಇಳಿಯುತ್ತಾನೆ ಮತ್ತು ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಶೋಭರಾಣಿ ಅವರ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಆಳಕ್ಕಿಳಿದು ನೋಡುವಂತೆ ಮಾಡುತ್ತವೆ. ಕಾಡುತ್ತವೆ. ಆಕ್ವೆರಿಯಂ ಒಳಗಿನ ಮೀನಿನಿಂದ ಪ್ರೇರಣೆ ಪಡೆದು ಚಿತ್ರಿಸಿದರೂ ಸಹ ಎಲ್ಲಿಯೂ ಕೂಡ ಆಕ್ವೆರಿಯಂ ಪರಿಕಲ್ಪನೆ ಬಾರದ ಹಾಗೆ ಚಿತ್ರಿಸಿದ್ದಾರೆ. ಇದು ಮೆಚ್ಚುವಂತದ್ದು. ತುಂಬಾ ಮುಕ್ತವಾಗಿ, ಸ್ವತಂತ್ರವಾಗಿ, ಸ್ವೇಚ್ಚೆಯಿಂದ, ಓಡಾಡುತ್ತಿರುವ ಮೀನುಗಳು ಕಾಣುತ್ತವೆ. ಇದನ್ನು ಒಂದು ಹೆಣ್ಣಿಗೆ ಹೋಲಿಸಿ ನೋಡುವುದಾದರೆ, ಯಾವುದೇ ಕವಿ, ಕಲಾವಿದ ಮುಕ್ತತೆಯನ್ನು ಹಾಗೂ ಸ್ವಾತಂತ್ರ್ಯವನ್ನು ಬಯಸುತ್ತಿರುತ್ತಾರೆ. ಸಮಾಜವು ಮಹಿಳೆಯ ಮೇಲೆ ಕಟ್ಟುಪಾಡುಗಳನ್ನು ಹೇರುತ್ತಿದ್ದು ಮಹಿಳೆ ಇದರಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಇದು ಗೋಚರವಾಗಿಯೇ ಇರಬೇಕೆಂದಿಲ್ಲ. ಸೃಜನಶೀಲ ಅಭಿವ್ಯಕ್ತಿಯಲ್ಲಿ ಅವು ಗೋಚರವಾಗುತ್ತವೆ. ಕವಿತೆ ಹಾಗೂ ಚಿತ್ರಗಳು ತುಂಬಾ ಹತ್ತಿರದ ಸಂಬಂಧ ಹೊಂದಿರುತ್ತವೆ. ಇವರ ಚಿತ್ರಗಳ ಪರಿದಿಯಲ್ಲಿ ಬೇರೆ ಬೇರೆ ಆಯಾಮಗಳನ್ನು ಕಾಣಬಹುದು. ಇದನ್ನು ಮೀರಿ ನೋಡುವುದಾದರೆ ಮೀನುಗಳು ಸ್ವತಂತ್ರವಾಗಿ ಬದುಕಲು ಹಾತೊರೆಯುತ್ತಿರುವುದು ಗೋಚರಿಸುತ್ತದೆ. ಇವರ ಕೃತಿಗಳಲ್ಲಿ ಒಗ್ಗೂಡಿಕೆ , ಸಾಮರಸ್ಯ , ಸೌಮ್ಯತೆ , ಸಮಾನತೆ , ಕೂಡಿ ಬಾಳುವಿಕೆ ಸೂಚಿಸುತ್ತದೆ ಎಂದರು.

ಉಮೇಶ್ ನಾಯ್ಕ್ ಗೆ ವಾರ್ಷಿಕ ರಾಜ್ಯ ಪ್ರಶಸ್ತಿ ಪ್ರಧಾನ

ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕರ್ನಾಟಕ ಸರ್ಕಾರ ಬೆಂಗಳೂರು ವತಿಯಿಂದ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನುಮಾರ್ಚ್‌ 27 ಗುರುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರು ಶ್ರೀ ಎ. ಆರ್. ಗೋವಿಂದಸ್ವಾಮಿರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪನವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸುಮಾರು 25 ವರ್ಷಗಳಿಂದ ಜಾನಪದ ಕ್ಷೇತ್ರ ಮತ್ತು ಬಂಜಾರ ಗಾಯನ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ದಾವಣಗೆರೆ ತಾಲೂಕು ಚಿನ್ನಸಮುದ್ರ ಗ್ರಾಮದ ಹೆಮ್ಲ ನಾಯ್ಕ್ ಮತ್ತು ಲಕ್ಷ್ಮಿ ಬಾಯಿ ದಂಪತಿಗಳ ಸುಪುತ್ರರು ಸಿ.ಹೆಚ್.ಉಮೇಶ ನಾಯ್ಕ್ ಇವರಿಗೆ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಇವರ ಜಾನಪದ ಕ್ಷೇತ್ರದ ಸಾಧನೆಗೆ ಸಂದ ರಾಜ್ಯ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರಾದ ಮಧು ನಾಯ್ಕ್ ಲಂಬಾಣಿ, ಗೌರವ ಅಧ್ಯಕ್ಷರು ಸಾಹಿತಿ ಗೊರೂರು ಅನಂತರಾಜು ಅಭಿನ೦ದಿಸಿ ಇವರಿಂದ ಇನ್ನೂ ಹೆಚ್ಚಿನ ಜಾನಪದ ಗಾಯನ ಸಾಧನೆ ಹೊರ ಹೊಮ್ಮಲಿ ಎಂದು ಶುಭ ಹಾರೈಸಿದ್ದಾರೆ.

ಬೆಂಗಳೂರು ಗೆಜ್ಜೆ ಹೆಜ್ಜೆ ತಂಡದಿಂದ ರಂಗೋತ್ಸವ

ಬೆಂಗಳೂರು: ರಂಗ ಕಾಯಕದಲ್ಲಿ 46 ವರ್ಷಗಳ ಅನುಭವ ಇರುವ ಬೆಂಗಳೂರಿನ ಗೆಜ್ಜೆ ಹೆಜ್ಜೆ ರಂಗ ತಂಡ ಮೂರು ದಿನ ಯುಗಾದಿ ನಾಟಕೋತ್ಸವವಾಗಿ ಅಪ್ಪ-ಮಗ ಹ್ಯಾಗ್ ಸತ್ತಾ – ನಿಂತ್ಕೋಳಿ ಅಲ್ಲಲ್ಲ ಕುಂತ್ಕೊಳಿ – ಎಂಡ್ ಇಲ್ಲದ ಬಂಡ ಅವತಾರ – ಕುಡಿತಾಯಣ ನಾಟಕಗಳೊಂದಿಗೆ ರಂಗಗೀತೆಗಳು, ರಂಗ ಉಪನ್ಯಾಸ. ಏಕಪಾತ್ರ ಅಭಿನಯವು ಕೇಶವ ಕಲ್ಪ ಲಿಂಕ್ ರೋಡ್ 2ನೇ ಕ್ರಾಸ್ ನ ಮಲ್ಲೇಶ್ವರಂ ಬಡಾವಣೆಯ ಆಪ್ತ ರಂಗಮಂದಿರದಲ್ಲಿ ನಡೆಯಿತು.

ರಂಗ ಉಪನ್ಯಾಸದಲ್ಲಿ ಪ್ರಸ್ತುತ ಕನ್ನಡ ರಂಗಭೂಮಿ ಕುರಿತು ನಾಟಕಕಾರ ಚಿತ್ರ ನಟ ಮೈಸೂರು ರಮಾನಂದ್ ಮಾತನಾಡಿದರು. 

ಶುದ್ಧ ಗುಣಮಟ್ಟದ -ಸದಭಿರುಚಿಯ ಹಾಸ್ಯವನ್ನು ಅಪ್ಪ-ಮಗ ಹ್ಯಾಗ್ ಸತ್ತಾ ಎಂಬ -ಹಾಸ್ಯ ನಾಟಕದ ಸಾಪಲ್ಯ ಸ್ವಪ್ರತಿಷ್ಠೆಯ ಅಪ್ಪನನ್ನು ಗೋಳುಯ್ದು ಅಪ್ಪನನ್ನೇ ಪೆದ್ದುನನ್ನಾಗಿ ಮಾಡುವ ಮಗನ ಪಾತ್ರ ಉತ್ತಮವಾಗಿ ಮೂಡಿ ಬಂತು. ಗೆಳೆಯನ ಮೇಲೆ ಸೋಲನ್ನು ಒಪ್ಪಿಕೊಳ್ಳದೆ ಹವಣಿಸದೆ ಅದೇ ಅಪ್ಪ ನಂತರದ ಕುತೂಹಲದ ಘಟನೆ ಸನ್ನಿವೇಶಗಳನ್ನು ಸೂರ್ಯನಾರಾಯಣರಾವ್ ಉತ್ತಮವಾಗಿ ಅಭಿನಯಿಸಿದರು. ಮೈಸೂರು ರಮಾನಂದರವರು ಅಪ್ಪನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದರು.

ಎರಡನೆಯ ನಾಟಕ ನಿಂತ್ಕೊಳ್ಳಿ ಅಲ್ಲಲ್ಲ ಕುಂತ್ಕೊಳ್ಳಿ, ಉಂಡಾಡಿ ಗುಂಡ ಅಳಿಯ ಸೋಮಾರಿ ಆತನಿಗೆ ಬುದ್ಧಿಯನ್ನು ಕಲಿಸುವ -ವಧುವಿನ ಪಾತ್ರದಲ್ಲಿ ಗೀತಾ ಉತ್ತಮವಾಗಿ ಅಭಿನಯಿಸಿದರು. ಮಾವನಾಗಿ ರಮಾನಂದರ ಅಭಿನಯ ಮನೋಜ್ಞವಾಗಿತ್ತು. ಅಳಿಯ ಯೋಧನಾಗಿ ಹಿಂತಿರುಗಿ ಬಂದು ಆಕೆಯನ್ನೇ ಮದುವೆ ಮಾಡಿಕೊಳ್ಳುತ್ತಾನೆ. ಇಲ್ಲೂ ಹಾಸ್ಯವೇ ಪ್ರಧಾನ. ನಗಿಸುವ ಕೆಲಸ ಸುಲಭವಾದದ್ದಲ್ಲ. ದಿನನಿತ್ಯ ನಮ್ಮ ಸುತ್ತಲೂ ಸಂಭವಿಸುವ ಪ್ರಸಂಗಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹಾಸ್ಯವನ್ನು ಬೆರೆಸಿ ಹಾಸ್ಯದ ರಸದೌತಣವನ್ನು ನೀಡಿ ಈ ನಾಟಕಗಳೆರಡು ಪ್ರೇಕ್ಷಕರ ಮೆಚ್ಚುಗೆ -ಪಡೆಯುವಲ್ಲಿ ಯಶಸ್ಸು ಕಂಡಿತು. ಹಾಸ್ಯರಸ ಭೋಜನದೊಂದಿಗೆ ಅಶ್ಲೀಲದ ಸೋಂಕಿಲ್ಲದೆ ನಗಿಸುವ ಈ ಹಾಸ್ಯ ನಾಟಕಗಳು ಶಾಲಾ ಕಾಲೇಜುಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಬಹುದು.

2ನೇ ದಿನ ಎಂಡ್ ಇಲ್ಲದ ಬಂಡಾವತಾರ ಈ ರಂಗಕೃತಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳನ್ನು ವಿಡಂಬನೆ ಮಾಡುತ್ತಾ ಪ್ರೇಕ್ಷಕರಿಗೆ ಕಚಗುಳಿ -ಇಡುತ್ತವೆ. 3ನೇ ದಿನ ವಿಶ್ವ ರಂಗಭೂಮಿ ದಿನಾಚರಣೆ ಸಂದೇಶವನ್ನು ಗಣೇಶಯ್ಯ ವಾಚನ ಮಾಡಿದರು. ನಂತರ ತಂಡದ ಟ್ರಂಪ್ ಕಾರ್ಡ್ ನಾಟಕ ಕುಡಿತಾಯಣ ಪ್ರದರ್ಶನವಾಯಿತು. ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂದೇಶ ನೀಡುವ ನಾಟಕ ಪ್ರೇಕ್ಷಕರಿಗೆ ರಸದೌತಣ ನೀಡಿತು.

ಕೃಷಿ ಅಧಿಕಾರಿ ನಾಗರಾಜ್-ಮಧುಸೂದನ್ -ಚಂದ್ರಶೇಖರ್ ಭೋವಿ, ಹಿರಿಯ ರಂಗಕರ್ಮಿ ಶೇಖರ್ -ಸರಸ್ವತಮ್ಮ-ಗೀತಾ, ಸಂಜನಾ -ಗಾಯಕರಾಗಿ ಚಂದ್ರು ಮೈಸೂರ್ -ಗಣೇಶ ಚಿತ್ರದುರ್ಗ ಬೈಲಹೊಂಗಲದ ದಾನೇಶ ರಮಾನಂದ್ ರಂಗಗೀತೆಗಳನ್ನು ಹಾಡಿದರು.

ಇದೆ ಸಂದರ್ಭ ರಂಗ ಮಾಸಪತ್ರಿಕೆ -ರಂಗ ವಿನೋದ -ಲೋಕಾರ್ಪಣೆಯಾಯಿತು.